ಕಾಸರಗೋಡು: ಮಹಿಳೆಯರನ್ನು ಗೌರವಿಸುವುದು, ಅಂಗೀಕರಿಸುವ ಸಂಸ್ಕಾರ ಭಾರತೀಯ ಸಂಸ್ಕಾರವಾಗಿದೆ ಎಂದು ಚಿನ್ಮಯ ಮಿಷನ್ನ ಬ್ರಹ್ಮಚಾರಿಣಿ ದಿಶಾ ಚೈತನ್ಯ ನುಡಿದರು. ಭಾರತೀಯ ಅಭಿಭಾಷಕ ಪರಿಷತ್ನ ಆಶ್ರಯದಲ್ಲಿ ನಡೆಸಿದ ರಾಷ್ಟ್ರೀಯ ಮಹಿಳಾ ದಿನಾಚರಣೆ ಉದ್ಘಾಟಿಸಿ ಅವರು ಮಾತನಾಡಿದರು. ನ್ಯಾಯವಾದಿ ಬೀನ ಕೆ.ಎಂ. ಅಧ್ಯಕ್ಷತೆ ವಹಿಸಿದರು. ಅಭಿಭಾಷಕ ಪರಿಷತ್ ಜಿಲ್ಲಾಧ್ಯಕ್ಷ ನ್ಯಾಯವಾದಿ ಎ.ಸಿ. ಅಶೋಕ್ ಕುಮಾರ್, ನ್ಯಾಯವಾದಿಗಳಾದ ಬಿ. ರವೀಂದ್ರನ್, ಹರ್ಷಿತ, ಜಾಹ್ನವಿ ಮಾತನಾಡಿದರು.






