ಉಪ್ಪಳ: ಕೈಕಂಬ-ಬಾಯಾರು ರಸ್ತೆಯ ಜೋಡುಕಲ್ಲು ಎಂಬಲ್ಲಿ ಒಣಗಿದ ಮರಗಳು ಯಾವುದೇ ಕ್ಷಣ ಧರಾಶಾಯಿಯಾಗುವ ಆತಂಕ ಸಾರ್ವಜನಿಕರನ್ನು ಕಾಡುತ್ತಿದೆ. ಈ ರಸ್ತೆ ಅಭಿವೃದ್ದಿಗೊಳಿಸುವ ವೇಳೆ ಗುತ್ತಿಗೆದಾರ ಅಪಾಯದ ಸ್ಥಿತಿಯ ಲ್ಲಿರುವ ಮರಗಳನ್ನು ತೆರೆವುಗೊಳಿಸಿ ದ್ದರು. ಅದರೆ ಒಣಗಿದ ಈ ಮರವನ್ನು ತೆರವುಗೊಳಿಸದ ಹಿನ್ನೆಲೆಯಲ್ಲಿ ಅಪಾಯ ಸಾz್ಯÀsತೆಯಿದೆ. ಈ ಪರಿಸರ ದಲ್ಲಿ ಪ್ರಮುಖ ವಿದ್ಯುತ್ ತಂತಿಹೊA ದಿರುವ ಕಂಬಗಳಿದ್ದು, ಮರ ಮುರಿದು ತಂತಿ ಮೇಲೆ ಬಿದ್ದಲ್ಲಿ ಹಲವಾರು ಕಂಬಗಳು ರಸ್ತೆಗೆ ಮುರಿದು ಬೀಳಬಹುದಾಗಿದೆ. ದಿನನಿತ್ಯ ನೂರಾ ರು ವಾಹನಗಳು ಸಂಚರಿಸುತ್ತಿದೆ. ಅಲ್ಲದೆ ಈ ಪರಿಸರ ವ್ಯಾಪಾರ ಸಂಸ್ಥೆಗಳು, ಜನನಿಬಿಡ ಪ್ರದೇಶವಾಗಿದೆ. ಒಣಗಿದ ಮರ ಗಳನ್ನು ತೆರವುಗೊ ಳಿಸಲು ಊರವರು ಒತ್ತಾಯಿಸುತ್ತಲೇ ಇದ್ದರೂ ತೆರವಿಗೆ ಕ್ರಮವಿಲ್ಲವೆಂದು ಸ್ಥಳೀಯರು ತಿಳಿಸಿದ್ದಾರೆ. ಮಳೆಗಾಲ ಸಮೀಪಿಸುತ್ತಿದ್ದು, ಮರವನ್ನು ತೆರವು ಗೊಳಿಸದಿದ್ದಲ್ಲಿ ಅಪಾಯ ತಪ್ಪಿದ್ದಲ್ಲ.







