ಮಂಜೇಶ್ವರ: ವಾಮಂಜೂರು ಶ್ರೀ ಶಾಸ್ತಾವೇಶ್ವರ ದೇವಸ್ಥಾನದ ಜೀರ್ಣೋದ್ದಾರ ಕಾರ್ಯದ ಪ್ರಥಮ ಹಂತದ ಕಾಮಗಾರಿಗಳ ಪ್ರಯುಕ್ತ ಗುದ್ದಲಿಪೂಜೆಯನ್ನು ನಿನ್ನೆ ಬೆಳಗ್ಗೆ ಐಲ ಕ್ಷೇತ್ರದ ಆಡಳಿತ ಮೊಕ್ತೇಸರ, ಪುನರ್ ನಿರ್ಮಾಣ ಸಮಿತಿ ಸಲಹೆಗಾರ ಕೋಡಿಬೈಲು ನಾರಾಯಣ ಹೆಗ್ಡೆ ನೆರವೇರಿಸಿದರು.
ಗುರುನರಸಿಂಹ ದತ್ತಿ ಮಂಡಳಿಯ ಸದಸ್ಯರು, ಸೇವಾ ಸಮಿತಿ ಸದಸ್ಯರು, ಪುನರ್ ನಿರ್ಮಾಣ ಮಂಡಳಿಯ ಸದಸ್ಯರು ಹಾಗೂ ಊರ ಭಕ್ತರು ಭಾಗವಹಿಸಿದರು.







