ಬೆಳ್ಳೂರು: ಬಸ್ತಿ ಭೂತಕೊಟ್ಯ ನಿವಾಸಿ ನಾರಾಯಣ ಗೌಡ (60) ನಿಧನ ಹೊಂದಿದರು. ಇವರು ಬೆಳ್ಳೂರು ಗ್ರಾಮ ದೈವದ ಪಾತ್ರಿಯಾಗಿ ಸೇವೆ ಸಲ್ಲಿಸುತ್ತಿದ್ದರು. ಮೃತರು ಪತ್ನಿ ಇಂದಿರ, ಮಕ್ಕಳಾದ ಭರತ್ , ಅಜಿತ್, ಕವಿತ, ಅಳಿಯ ರಂಜಿತ್ ಉರಿಕ್ಯಾಡಿ, ಸಹೋದರಿ ಕಮಲ ಹಾಗೂ ಅಪಾರ ಬಂಧು ಮಿತ್ರರನ್ನು ಆಗಲಿದ್ದಾರೆ. ಸಹೋದರರಾದ ಐತಪ್ಪ, ರಾಮಣ್ಣ, ಸಹೋದರಿ ಪುಟ್ಟಕ್ಕ ಈ ಹಿಂದೆ ನಿಧನರಾಗಿದ್ದಾರೆ.






