ಕುಂಬಳೆ: ಕೆಲಸದಿಂದ ಹೊರ ಹಾಕಿದ ದ್ವೇಷದಿಂದ ಹೋಟೆಲ್ಗೆ ನುಗ್ಗಿ ಕಳವುಗೈದ ಯುವಕನನ್ನು ಪೊಲೀಸರು ಬಂಧಿಸಿದ್ದಾರೆ.
ಮಂಗಲ್ಪಾಡಿ ಬೇಕೂರಿನ ಅಶ್ರಫ್ ಅಲಿ (40) ಎಂಬಾತನನ್ನು ಕುಂಬಳೆ ಎಸ್ಐ ಗಣೇಶ್ ನೇತೃತ್ವದ ತಂಡ ಬಂಧಿಸಿದೆ.
ಉದ್ಯಾವರದ ಅಬ್ಬಾಸ್ರ ಮಾಲಕತ್ವದಲ್ಲಿ ಬಂದ್ಯೋ ಡಿನಲ್ಲಿರುವ ಇರಾನಿ ಅಬ್ಬಾಸಿ ಕಬಾಬ್ ಎಂಬ ಹೋಟೆಲ್ನಲ್ಲಿ ಅಶ್ರಫ್ ಅಲಿ ಈ ಹಿಂದೆ ಕೆಲಸ ನಿರ್ವಹಿಸುತ್ತಿದ್ದನು. ಇತ್ತೀಚೆಗೆ ಈತನನ್ನು ಕೆಲಸದಿಂದ ಹೊರತುಪಡಿಸಲಾಗಿತ್ತು. ಇದರ ದ್ವೇಷದಿಂದ ಈ ತಿಂಗಳ ೧೩ರಂದು ರಾತ್ರಿ ಹೋಟೆಲ್ನ ಬೀಗ ಮುರಿದು ಒಳಗೆ ನುಗ್ಗಿದ ಆರೋಪಿ ಎರಡು ಮೊಬೈಲ್ ಫೋನ್, ಮಿಕ್ಸಿ, ಕುಕ್ಕರ್, ಐದು ಸ್ಟೀಲ್ ಡ್ರಂ ಮೊದಲಾದವುಗಳನ್ನು ಕಳವು ನಡೆಸಿದ್ದಾನೆಂದೂ ಈ ಮೂಲಕ ೫೩,೦೦೦ ರೂಪಾಯಿಗಳ ನಷ್ಟ ಉಂಟಾಗಿದೆಯೆಂದು ದೂರಿನಲ್ಲಿ ತಿಳಿಸಲಾಗಿತ್ತು.






