ಮಂಗಳೂರು: ದಕ್ಷಿಣಕನ್ನಡ- ಮಂಗಳೂರು ಜಂಟಿ ಖಾಝಿಯಾಗಿ ಪಾಣಕ್ಕಾಡ್ ನಾಸರ್ ಹಯ್ ಶಿಹಾಬುದ್ದೀನ್ ತಂಙಳ್ ಇಂದು ಅಧಿಕಾರ ಸ್ವೀಕರಿಸುವರು. ಮಂಗಳೂರಿನ ಸೀನತ್ ಬಕ್ಷ್ ಯತೀಂಖಾನ ಸಭಾಂಗಣದಲ್ಲಿ ಪದಗ್ರಹಣ ಕಾರ್ಯಕ್ರಮ ನಡೆಯಲಿದೆ.
ತ್ವಾಕ ಅಹಮ್ಮದ್ ಮುಸ್ಲಿ ಯಾರ್ ಅಲ್ ಅಸ್ಹರಿಯವರ ನಿಧನದ ಹಿನ್ನೆಲೆಯಲ್ಲಿ ನೂತನ ಖಾಝಿಯವರ ಆಯ್ಕೆ ನಡೆದಿದೆ. ಸುನ್ನಿ ಮಹಲ್ ಫೆಡರೇಶನ್ ಮಲಪ್ಪುರಂ ಜಿಲ್ಲಾ ಅಧ್ಯಕ್ಷ ರಾಗಿದ್ದಾರೆ.







