ಮಂಜೇಶ್ವರ: ಆಪರೇಶನ್ ತೂಫಾನ್ನಂಗವಾಗಿ ಮಂಜೇಶ್ವರ ಪೊಲೀಸರು ಜೋಡುಕಲ್ಲಿನಿಂದ೧ 12 ಗ್ರಾಂ ಎಂಡಿಎಂಎ ವಶಪಡಿಸಿಕೊಂಡ ಪ್ರಕರಣದಲ್ಲಿ ಇನ್ನೋರ್ವ ಸೆರೆಗೀಡಾಗಿ ದ್ದಾನೆ. ಕಯ್ಯಾರು ನಿವಾಸಿ ಅಬ್ದುಲ್ ಸಮದ್ (31) ಎಂಬಾನನ್ನು ಇನ್ ಸ್ಪೆಕ್ಟರ್ ಪಿ.ಕೆ. ಜಿಜೀಶ್ ಬಂಧಿಸಿದ್ದಾರೆ. ಈತ ಸೋಂಕಾಲಿನಲ್ಲಿದ್ದಾನೆಂಬ ಮಾಹಿತಿ ಲಭಿಸಿದ ಹಿನ್ನೆಲೆಯಲ್ಲಿ ಪೊಲೀಸರು ಅಲ್ಲಿಗೆ ತೆರಳಿ ಬಂಧಿಸಿದ್ದಾರೆ. ಎಂಡಿಎಂಎ ತರಲು ಹಣ ನೀಡಿರುವುದು ಅಬ್ದುಲ್ ಸಮದ್ ಆಗಿದ್ದಾನೆನ್ನಲಾಗಿದೆ. ಕಳೆದ ಗುರುವಾರ ಬೆಳಿಗ್ಗೆ ಪೊಲೀಸರು ಮಾದಕವಸ್ತು ವಶಪಡಿಸಿಕೊಂಡಿದ್ದರು. ಜೋಡುಕಲ್ಲು ಆದರ್ಶ್ನಗರದ ಮೈದಾನದಲ್ಲಿ ನಿಲ್ಲಿಸಿದ್ದ ಕಾರನ್ನು ಕೇಂದ್ರೀಕರಿಸಿ ನಡೆಸಿದ ಕಾರ್ಯಾಚರಣೆಯಲ್ಲಿ 112 ಗ್ರಾಂ ಎಂಡಿಎಂಎ ವಶಪಡಿಸಲಾಗಿತ್ತು. ಪೊಲೀಸರನ್ನು ಕಂಡೊಡನೆ ಮಾದಕವಸ್ತುವನ್ನು ಆರೋಪಿಗಳು ಪೊದೆಗಳೆಡೆಗೆ ಎಸೆದು ಪರಾರಿಯಾಗಲು ಯತ್ನಿಸಿದ್ದರು. ಈ ವೇಳೆ ಪೊಲೀಸರು ಜೋಡುಕಲ್ಲು ನಿವಾಸಿ ಫಾರೂಕ್ ಮುಹಮ್ಮದ್ (44), ಮಂಗಲ್ಪಾಡಿ ಪಚ್ಚಂಬಳ ದೀನಾರ್ನಗರ ನಿವಾಸಿ ಮೊಯ್ದೀನ್ ಕುಂಞಿ (41) ಎಂಬಿವರನ್ನು ತಕ್ಷಣ ಸೆರೆಹಿಡಿದಿದ್ದರು. ಇವರನ್ನು ತನಿಖೆಗೊಳಪಡಿಸಿದಾಗ ಅಬ್ದುಲ್ ಸಮದ್ನ ಕುರಿತು ಮಾಹಿತಿ ಲಭಿಸಿತ್ತು.






