ಬದಿಯಡ್ಕ: ಅಯೋಧ್ಯೆ ಕ್ಷೇತ್ರ ದರ್ಶನಕ್ಕೆ ತೆರಳಿದ ಯುವಕ ಮನೆಗೆ ತಲುಪದೆ ನಾಪತ್ತೆಯಾದ ಬಗ್ಗೆ ದೂರಲಾಗಿದೆ. ಪೆರಡಾಲ ಪಂಜಿನಡ್ಕ ನಿವಾಸಿ ಕುಂಞಿರಾಮನ್ ಎಂಬವರ ಪುತ್ರ ರಾಜೇಶ್ (42) ನಾಪತ್ತೆಯಾದ ವ್ಯಕ್ತಿ. ಈ ಬಗ್ಗೆ ಅವರ ಸಹೋದರ ಅನಿಲ್ ಕುಮಾರ್ ನೀಡಿದ ದೂರಿನಂತೆ ಬದಿಯಡ್ಕ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಆರಂಭಿಸಿದ್ದಾರೆ. ರಾಜೇಶ್ ಅಯೋಧ್ಯೆಗೆ ಹೋಗಿದ್ದು ಅಲ್ಲಿಂದ ಅವರು ಊರಿಗೆ ಮರಳಿದ್ದರು. ಈ ಮಧ್ಯೆ ಜುಲೈ ೨೨ರಂದು ಸಂಜೆ ಮಧ್ಯಪ್ರದೇಶದ ಇಚ್ಚಾರ್ಸಿ ಎಂಬಲ್ಲಿ ಇಳಿದು ಅಲ್ಲಿಂದ ಬೇರೆ ಯಾವುದೋ ರೈಲಿಗೆ ಹತ್ತಿದ್ದಾರೆಂದೂ ಆದರೆ ಅವರು ಮನೆಗೆ ಮರಳಿ ತಲುಪಿಲ್ಲವೆಂದು ದೂರಿನಲ್ಲಿ ತಿಳಿಸಲಾಗಿದೆ.







