ಉಪ್ಪಳ: ಕೊಂಡೆವೂರು ಮಠ ಶ್ರೀ ನಿತ್ಯಾನಂದ ಯೋಗಾಶ್ರಮದಲ್ಲಿ ಶ್ರೀ ಯೋಗಾನಂದ ಸರಸ್ವತೀ ಸ್ವಾಮೀಜಿಯವರು ಗುರುಪೂರ್ಣಿಮೆಯಂದು 23ನೇ ವರ್ಷದ ಚಾತುರ್ಮಾಸ್ಯ ವ್ರತ ಸಂಕಲ್ಪವನ್ನು ವಿವಿಧ ವೈದಿಕ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ಕೈಗೊಂಡರು. ಶ್ರೀ ಮಠದಲ್ಲಿ ಗಣಹೋಮ, ಭಗವಾನ್ ಶ್ರೀ ನಿತ್ಯಾನಂದ ಗುರುದೇವರಿಗೆ ಪಂಚಾಮೃತ ಸಹಿತ 108 ಸೀಯಾಳಾಭಿಷೇಕ, ವ್ಯಾಸ ಪೂಜೆ, ಕ್ಷೇತ್ರದಲ್ಲಿ ಮಹಾಪೂಜೆ, ಅನ್ನಸಂತರ್ಪಣೆ ನಡೆಯಿತು. ಸಾಯಂಕಾಲ 6.30ಕ್ಕೆ ಕ್ಷೇತ್ರದಲ್ಲಿ ಮಹಾಪೂಜೆಯಾದ ನಂತರ ಶ್ರೀ ಗಾಯತ್ರಿ ಮಂಟಪದಲ್ಲಿ ಶ್ರೀ ಗುರುಪಾದುಕಾ ಪೂಜೆ ನಡೆಯಿತು.






