ಬೆಳ್ಳೂರು: ವಿದ್ಯುತ್ ನಿಯಂತ್ರಣವನ್ನು ಪ್ರತಿಭಟಿಸಿ ಸಿಪಿಎಂ ಬೆಳ್ಳೂರು ಲೋಕಲ್ ಕಮಿಟಿ ನೇತೃತ್ವದಲ್ಲಿ ನಿನ್ನೆ ರಾತ್ರಿ ದೊಂದಿ ಮೆರವಣಿಗೆ ನಡೆಸಲಾಯಿತು. ನಾಟೆಕಲ್ಲು ಪೇಟೆಯಲ್ಲಿ ನಡೆದ ಪ್ರತಿಭಟನೆಗೆ ಸಿಪಿಎಂ ಬೆಳ್ಳೂರು ಸೆಕ್ರೆಟರಿ ಸೂಫಿ ಕೆ.ಎಚ್. ನೇತೃತ್ವ ನೀಡಿದರು. ಕಾರಡ್ಕ ಬ್ಲಾಕ್ ಪಂ. ಉಪಾಧ್ಯಕ್ಷೆ ಉಷಾ, ನೇತಾರರಾದ ಶಶಿಧರ ಗೋಳಿಕಟ್ಟೆ, ಸುನಿತಾ, ಎ.ಕೆ. ಕುಶಲ ಮೊದಲಾದವರು ಭಾಗವಹಿಸಿದರು.







