ಶಬರಿಮಲೆ, ಮಾಳಿಗಪುರಂ ಅರ್ಚಕ ನೇಮಕಾತಿ  ೨೭ರಂದು ತೀರ್ಪು

ಕೊಚ್ಚಿ: ಶಬರಿಮಲೆ, ಮಾಳಿಗ ಪುರಂ ಅರ್ಚಕರ ನೇಮಕಾತಿಗೆ ಮಲೆ ಯಾಳಿ ಬ್ರಾಹ್ಮಣರು ಮಾತ್ರವೇ ಅರ್ಜಿ ಸಲ್ಲಿಸಿದರೆ ಸಾಕೆಂಬ ವ್ಯವಸ್ಥೆ ಯನ್ನು ಪ್ರಶ್ನಿಸಿ ನೀಡಿದ ಅರ್ಜಿಯಲ್ಲಿ ತೀರ್ಪು ನೀಡುವುದನ್ನು ಹೈಕೋರ್ಟ್ ಈ ತಿಂಗಳ ೨೭ಕ್ಕೆ ಮುಂದೂಡಿದೆ.  ಜಸ್ಟೀಸ್ ಪಿ.ಜಿ. ಅಜಿತ್ ಕುಮಾರ್ ಎಂಬಿವರು ಸೇರಿದ ವಿಭಾಗೀಯ ಪೀಠ ಸಿ.ವಿ. ವಿಷ್ಣು ನಾರಾಯಣನ್,  ಟಿ.ಎಲ್. ಸಿಜಿತ್, ಪಿ.ಆರ್. ವಿಜೀಶ್ ಮೊದಲಾದವರು ನೀಡಿದ ಅರ್ಜಿಯನ್ನು ಪರಿಗಣಿಸಿತ್ತು. ಇದರಲ್ಲಿ ಇನ್ನೂ ಕೂಡಾ ಕೆಲವು ವಿಷಯಗಳಲ್ಲಿ ಸ್ಪಷ್ಟತೆ ಕಂಡುಕೊ ಳ್ಳಬೇಕಾಗಿರುವ ಹಿನ್ನೆಲೆಯಲ್ಲಿ ತೀರ್ಪು ನೀಡುವುದನ್ನು ಮುಂದೂಡಲಾಗಿದೆ.

Leave a Reply

Your email address will not be published. Required fields are marked *

You cannot copy content of this page