ಉಪ್ಪಳ: ವಾಮಂಜೂರಿನಲ್ಲಿ ರೈಲ್ವೇ ಇಲಾಖೆಯ ಅಧೀನತೆ ಯಲ್ಲಿರುವ ಸ್ಥಳದಿಂದ ಎರಡು ತೇಗಿನ ಮರಗಳನ್ನು ಕಳವು ನಡೆಸಲಾಗಿದೆ. ವಾಮಂಜೂರು ಚೆಕ್ಪೋಸ್ಟ್ ರೈಲ್ವೇ ಹಳಿ ಸಮೀಪದಲ್ಲಿದ್ದ ಮರಗಳನ್ನು ಕಳವುಗೈದಿರುವುದಾಗಿ ದೂರಲಾಗಿದೆ. ಈ ಮರಗಳು ಹಲವು ವರ್ಷಗಳ ಹಳಮೆಯುಳ್ಳವುಗಳಾಗಿವೆ. ಮರಗಳು ಕಳವಿಗೀಡಾದ ಬಗ್ಗೆ ರೈಲ್ವೇ ಅಧಿಕಾರಿಗಳು ಮಂಜೇಶ್ವರ ಪೊಲೀಸರಿಗೆ ದೂರು ನೀಡಿದ್ದಾರೆ.