ಅಂಗನವಾಡಿ ವರ್ಕರ್ಸ್, ಹೆಲ್ಪರ್ಸ್ ಸಂಘ ವಲಯ ಸಮ್ಮೇಳನ

ಮಂಜೇಶ್ವರ: ಭಾರತೀಯ ಅಂಗನವಾಡಿ ವರ್ಕರ್ಸ್ ಮತ್ತು ಹೆಲ್ಪರ್ಸ್ ಸಂಘದ ಮಂಜೇಶ್ವರ ವಲಯ ಸಮ್ಮೇಳನ ಹೊಸಂಗಡಿ ಪ್ರೇರಣಾ ಕಾರ್ಯಾಲಯದಲ್ಲಿ ನಡೆ ಯಿತು. ಭಾರತೀಯ ಅಂಗನವಾಡಿ ವರ್ಕರ್ಸ್ ಮತ್ತು ಹೆಲ್ಪರ್ಸ್ ಸಂಘದ ಜಿಲ್ಲಾ ಕಾರ್ಯದರ್ಶಿ ಶೋಭಾ ನಾಯ್ಕಾಪುರ ಅಧ್ಯಕ್ಷತೆಯಲ್ಲಿ ನಡೆದ ಸಮ್ಮೇಳನವನ್ನು ಬಿಎಂಎಸ್ ಜಿಲ್ಲಾ ಜೊತೆ ಕಾರ್ಯದರ್ಶಿ ದಿನೇಶ್ ಬಂಬ್ರಾಣ ಉದ್ಘಾಟಿಸಿದರು.  ಜಿಲ್ಲಾ ಜೊತೆ ಕಾರ್ಯದರ್ಶಿ ಯಶವಂತಿ ಬೆಜ್ಜ ಹಾಗೂ ಜಿಲ್ಲಾ ಸಮಿತಿ ಸದಸ್ಯೆ ಸುಮಂಗಲ ಶುಭಾಶಂಸನೆಗೈದರು. ಸಮ್ಮೇಳನದಲ್ಲಿ ವಲಯದಲ್ಲಿರುವ ಎಲ್ಲಾ ಮಿನಿ ಅಂಗನವಾಡಿಗಳನ್ನು ಪ್ರಧಾನ ಅಂಗನವಾಡಿಯಾಗಿ ಮಾಡಲು,  ಅಂಗ ವಾಡಿ ವರ್ಕರ್ಸ್‌ರವರ ಆಯುಷ್ಮಾನ್ ಯೋಜನೆ ಕೂಡಲೇ ಜ್ಯಾರಿಗೊಳಿಸಲು ಸರಕಾರಕ್ಕೆ ಒತ್ತಡ ಹಾಕಲು ತೀರ್ಮಾನಿಸಲಾಯಿತು. ಆಶಾಲತಾ ಸ್ವಾಗತಿಸಿ, ಸುಚಿತ್ರಾ ವಂದಿಸಿದರು.

Leave a Reply

Your email address will not be published. Required fields are marked *

You cannot copy content of this page