ಕಾಸರಗೋಡು: ಹೊಸದುರ್ಗ ತಾಲೂಕಿನ ಮಡಿಕೈ ಪನ್ನಿಪಳ್ಳದ ಕಡಂಕುಟ್ಟಿಚ್ಚಾಲ್ ರಸ್ತೆ ಬದಿಯ ಪೊದೆಯಲ್ಲಿ ಬಚ್ಚಿಡಲಾಗಿದ್ದ ೨೫ ಲೀಟರ್ ವಾಶ್ (ಹುಳಿರಸ) ಮತ್ತು ೩ ಲೀಟರ್ ಶರಾಬು ಅಬಕಾರಿ ತಂಡ ಪತ್ತೆಹಚ್ಚಿ ವಶಪಡಿಸಿಕೊಂ ಡಿದೆ. ಹೊಸದುರ್ಗ ಅಬಕಾರಿ ಕಚೇರಿಯ ಪ್ರಿವೆಂಟಿವ್ ಆಫೀಸರ್ ರಾಜೀವನ್ ಪಿ. ಇವರ ನೇತೃತ್ವದ ತಂಡ ಈ ಕಾರ್ಯಾಚರಣೆ ನಡೆಸಿದೆ.