ಏಕಾಂಗಿಯಾಗಿ ವಾಸಿಸುತ್ತಿದ್ದ ವ್ಯಕ್ತಿಯ ಮನೆ ಬೆಂಕಿಗಾಹುತಿ

ಬೋವಿಕಾನ: ಏಕಾಂಗಿಯಾಗಿ ವಾಸಿಸುತ್ತಿದ್ದ ವ್ಯಕ್ತಿಯ ಮನೆಗೆ ಬೆಂಕಿ ತಗಲಿ ಅದು ಹೆಚ್ಚುಕಡಿಮೆ ಪೂರ್ಣವಾಗಿ ಭಸ್ಮಗೊಂಡ ಘಟನೆ ನಿನ್ನೆ ರಾತ್ರಿ ನಡೆದಿದೆ. ಮುಳಿಯಾರು ಪಂಚಾಯತ್‌ನ ಅಲೂರು ಮೈಕುಳಿ ನಿವಾಸಿ ಹನೀಫಾ (47) ಎಂಬವರ ಮನೆಗೆ  ಈ ರೀತಿ ಬೆಂಕಿ ತಗಲಿದೆ. ಘಟನೆ ವೇಳೆ ಹನೀಫ ಮನೆಯಲ್ಲಿರಲಿಲ್ಲ. ಮನೆಗೆ ಬೆಂಕಿ ತಗಲಿರುವುದನ್ನು ಗಮನಿಸಿದ ನೆರೆಮನೆಯವರು ನೀಡಿದ ಮಾಹಿತಿಯಂತೆ ಗ್ರೇಡ್ ಸೀನಿಯರ್ ಫಯರ್ ಆಂಡ್ ರೆಸ್ಕ್ಯೂ ಆಫೀಸರ್ ಉಮೇಶನ್, ಗ್ರೇಡ್ ಅಸಿಸ್ಟೆಂಟ್ ಸ್ಟೇಷನ್ ಆಫೀಸರ್ ರಮೇಶರ ನೇತೃತ್ವದಲ್ಲಿ ಇತರ ಸಿಬ್ಬಂದಿಗಳಾದ ಗೋಪಾಲ್, …

ದಲಿತ ಸಂಘಟನೆಗಳ ಹರತಾಳ : ಕಾಸರಗೋಡಿನಲ್ಲಿ ಅಬಾಧಿತ

ಕಾಸರಗೋಡು: ಅಂಜರಕಂಡಿ ನಿವಾಸಿ ದಂತ ವೈದ್ಯಕೀಯ ಕಾಲೇಜಿನ ವಿದ್ಯಾರ್ಥಿ ನಿತಿನ್‌ರಾಜ್‌ನ ಆತ್ಮಹತ್ಯೆಗೆ ಕಾರಣರಾದವರನ್ನೆಲ್ಲಾ ಬಂಧಿಸಿ ಅವರ ವಿರುದ್ಧ ಕಾನೂನುಪರ ಕಠಿಣ ಕ್ರಮ ಕೈಗೊಳ್ಳಬೇಕೆಂಬ ಬೇಡಿಕೆ ಮುಂದಿರಿಸಿ ಜಸ್ಟೀಸ್ ಫಾರ್ ನಿತಿನ್‌ರಾಜ್ ಆಕ್ಷನ್ ಕೌನ್ಸಿಲ್ ಮತ್ತು ದಲಿತ್ ಆದಿವಾಸಿ (ಬುಡಕಟ್ಟು) ಸಂಘಟನೆಗಳ ನೇತೃತ್ವದಲ್ಲಿ ರಾಜ್ಯದಲ್ಲಿ  ಇಂದು ಹರತಾಳ ಆಚರಿಸಲಾಗುತ್ತಿದೆ. ರಾಜ್ಯದ ಒಟ್ಟು ೫೨ ದಲಿತ ಸಂಘಟನೆಗಳ ಸಹಕಾರದೊಂದಿಗೆ ಇಂದು ಬೆಳಗ್ಗಿನಿಂದ ಹರತಾಳ ಆರಂಭಗೊಂಡಿದ್ದು ಸಂಜೆ ತನಕ ಮುಂದುವರಿಯಲಿದೆ. ಹರತಾಳ ವೇಳೆ ವಾಹನಗಳನ್ನು ತಡೆಯ ಲಾಗುವುದಿಲ್ಲವೆಂದು ಹರತಾಳಕ್ಕೆ ಕರೆ ನೀಡಿದ …

ಮಂಗಲ್ಪಾಡಿ ಏಕಾಹ ಭಜನಾ ಮಂದಿರದ ಎರಡನೇ ಹಂತದ ಕಾಮಗಾರಿಗೆ ಚಾಲನೆ, ನೂತನ ಪದಾಧಿಕಾರಿಗಳ ಆಯ್ಕೆ

ಉಪ್ಪಳ: ಮಂಗಲ್ಪಾಡಿ ಪರಂಕಿಲ ಏಕಾಹ ಭಜನಾ ಮಂದಿರದ ಎರಡನೇ ಹಂತದ ಕಾಮಗಾರಿ ಚಾಲನೆಯ ಪೂರ್ವಭಾವಿ ವಿಶೇಷ ಸಭೆ ಹಾಗೂ ನೂತನ ಪದಾಧಿಕಾರಿಗಳ ಆಯ್ಕೆ ಮಂದಿರದಲ್ಲಿ ನಡೆಯಿತು. ಸಭೆಯಲ್ಲಿ ವಿಶ್ವಸ್ಥ ಮಂಡಳಿಯ ಅಧ್ಯಕ್ಷ ಡಾ ಶ್ರೀಧರ ಭಟ್ ಕಾಮಗಾರಿಗೆ ಚಾಲನೆ ನೀಡಿ ಯೋಜನೆಯ ಬಗ್ಗೆ ಮಾರ್ಗದರ್ಶನ ನೀಡಿದರು. ರಾಷ್ಟ್ರೀಯ ಸ್ವಯಂಸೇವಕ ಸಂಘದ ವಿಭಾಗ ಕಾರ್ಯವಾಹ ಲೋಕೇಶ್ ಜೋಡುಕಲ್ಲು, ಮಾಜಿ ವಿಧಾನ ಪರಿಸದ್ ಸದಸ್ಯರಾದ ಮೋನಪ್ಪ ಭಂಡಾರಿ, ವಿಶ್ವಸ್ಥ ಮಂಡಳಿಯ ಸದಸ್ಯರಾದ ಕೃಷ್ಣ. ಪಿ.ಬಂದ್ಯೋಡು, ಲಿಂಗಪ್ಪ ಶೆಟ್ಟಿಗಾರ್, ಪ್ರಭಾಕರ ಶೆಣೈ, …

ವಿಶೇಷ ಚೇತನ ಮಕ್ಕಳ ಕಲಾಮೇಳ ಸಮಾಪ್ತಿ

ಮಂಜೇಶ್ವರ: ಹಾಸಿಗೆಯಲ್ಲೇ ಇರುವ ವಿಶೇಷಚೇತನ ಮಕ್ಕಳ ಸಾಮಾಜಿಕ ಒಳಗೊಳ್ಳುವಿಕೆಯನ್ನು ಉತ್ತೇಜಿಸುವ ಉದ್ದೇಶದಿಂದ ಸಮಗ್ರ ಶಿಕ್ಷಣ ಕಾಸರಗೋಡು ಮತ್ತು ಕಾಸರಗೋಡು ಜಿಲ್ಲಾ ಪಂಚಾಯತ್ ಸಂಯುಕ್ತವಾಗಿ ಸ್ಪರ್ಶಂ ವಿಶೇಷ ಚೇತನ ಮಕ್ಕಳ ಕಲಾಮೇಳವನ್ನು ಆಯೋಜಿಸಲಾಯಿತು.ಕಾರ್ಯಕ್ರಮವನ್ನು ಸಮಗ್ರ ಶಿಕ್ಷಣ ಕಾಸರಗೋಡು ಡಿ.ಪಿ.ಓ.ಪ್ರಕಾಶನ್ ಟಿ ಕ್ಯಾಂಪ್ ಉದ್ಘಾಟಿಸಿದರು. ಮಂಜೇಶ್ವರ ಎ.ಇ.ಒ ಜಾರ್ಜ್ ಕ್ರಾಸ್ಟ್ ಅಧ್ಯಕ್ಷತೆ ವಹಿಸಿದರು. ಈ ಸಂದರ್ಭದಲ್ಲಿ ಜಿಲ್ಲೆಯ ಶಿಕ್ಷಣಾಧಿಕಾರಿಗಳಾದ ಡಿ.ಡಿ.ಇ ಇಬ್ರಾಹಿಂ ಬಿ, ಎ.ಎಸ್. ಎಸ್.ಕೆ ಯ ಡಿ.ಪಿ.ಓ. ಅಗಸ್ಟಿನ್ ಬರ್ನಾರ್ಡ್ ಮೊಂತೆರೋ ಹಾಗೂ ಮಂಜೇಶ್ವರ ಎ.ಇ.ಒ ಜಾರ್ಜ್ ಕ್ರಾಸ್ತ …

ಹೊಳೆಯ ಹೊಯ್ಗೆ ಕಳವುಗೈದು ಸಾಗಾಟ ಲಾರಿ ಮಾಲಕ ಸೆರೆ

ಕುಂಬಳೆ: ಆರಿಕ್ಕಾಡಿ ಹೊಳೆ ಯಿಂದ ಅನಧಿಕೃತವಾಗಿ ಹೊಯ್ಗೆ  ಸಾಗಿಸುತ್ತಿದ್ದ ವೇಳೆ ಪೊಲೀಸರು ವಶಪಡಿಸಿಕೊಂಡ ಟಿಪ್ಪರ್ ಲಾರಿಯ ಆರ್‌ಸಿ ಮಾಲಕನನ್ನು ಬಂಧಿಸಲಾ ಗಿದೆ. ಆರಿಕ್ಕಾಡಿ ಕಾರ್ಳೆ ನಿವಾಸಿಯಾದ ರಶೀದ್ ಮುಹಮ್ಮದ್ ಯಾನೆ ಕಾರ್ಳೆ ರಶೀದ್ (51)ನನ್ನು ಕುಂಬಳೆ ಎಸ್‌ಐಗಳಾದ ಸಿ. ಸನಿತ್, ಅನಂತಕೃಷ್ಣನ್ ಆರ್ ಮೆನೋನ್ ಸೇರಿ ಬಂಧಿಸಿದ್ದಾರೆ. ಈತನಿಗೆ ನ್ಯಾಯಾಲಯ ಎರಡು ವಾರಗಳ ರಿಮಾಂಡ್ ವಿಧಿಸಿದೆ. ಎಪ್ರಿಲ್ 25ರಂದು ಮುಂಜಾನೆ ೫.೪೫ಕ್ಕೆ ಶಿರಿಯಾ ಹೊಳೆಯಿಂದ  ಕಳವುಗೈದು ಸಾಗಿಸುತ್ತಿದ್ದ ಹೊಯ್ಗೆ ಸಹಿತ ಟಿಪ್ಪರ್ ಲಾರಿಯನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. 

ಕಾಸರಗೋಡು ನಿವಾಸಿ ಬೆಂಗಳೂರಿನಲ್ಲಿ ನಿಧನ

ಕಾಸರಗೋಡು: ಕಾಸರಗೋಡು ಅಮೈ ರಸ್ತೆಯ  ದಿ|  ಎನ್.ಪಿ. ಕಾಮತ್‌ರ ಪುತ್ರ ಬೆಂಗಳೂರಿನಲ್ಲಿ ಉದ್ಯೋಗಿಯಾಗಿದ್ದ  ರಾಜೇಶ್ ಕಾಮತ್ (52) ನಿಧನಹೊಂದಿದರು. ಬೆಂಗಳೂರು ಕನಕಪುರ ರೋಡ್ ಆಕ್ಸಿಸ್ ತತ್ವಂ ವೇದಾನಂದ ನಾಲ್ಕು  ಎಂಬಲ್ಲಿ ವಾಸಿಸುತ್ತಿದ್ದರು. ಮೃತರು ತಾಯಿ ಪುಷ್ಪಲತಾ ಕಾಮತ್, ಪತ್ನಿ ಅನಿತಾ ಕಾಮತ್(ಬೆಂಗಳೂರಿನಲ್ಲಿ ಉದ್ಯೋಗಿ), ಪುತ್ರ ರಜತ್ ಕಾಮತ್ (ವಿದ್ಯಾರ್ಥಿ), ಸಹೋದರ -ಸಹೋದರಿಯರಾದ ನಿತ್ಯಾನಂದ ಕಾಮತ್ (ಕಾಸರ ಗೋಡು), ಸುರೇಶ್ ಕಾಮತ್ (ಬೆಂಗಳೂರು), ರಾಧಾ ಕಿಣಿ (ಪೂಕೋಡ್ ತಲಶ್ಶೇರಿ) ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.

ಮಹಿಳಾ ಮೀಸಲಾತಿ ಮಸೂದೆಯನ್ನು ವಿರೋಧಿಸಿದ ಕಾಂಗ್ರೆಸ್ ಸಹಿತ ವಿಪಕ್ಷಗಳಿಗೆ ಮಹಿಳಾ ಸಮಾಜದಿಂದ ತಿರುಗೇಟು-ಸವಿತಾ ಟೀಚರ್

ಕಾಸರಗೋಡು: ಮಹಿಳಾ ಮೀಸಲಾತಿ ಮಸೂದೆಯನ್ನು ವಿರೋಧಿಸುವ ಮೂಲಕ ಕಾಂಗ್ರೆಸ್, ಸಿಪಿಎಂ ಸಹಿತ ವಿಪಕ್ಷಗಳು  ಪರಾಭವಗೊಳಿಸಲು ಯತ್ನಿಸಿರುವುದು ದೇಶದ 70 ಕೋಟಿಯಷ್ಟಿರುವ ಮಹಿಳಾ ಸಮಾಜವನ್ನಾಗಿದೆ.  ಈ ಮೂಲಕ  ಈ ಪಕ್ಷಗಳ ಮಹಿಳಾ ವಿರುದ್ಧ ನೀತಿ ಬೆಳಕಿಗೆ ಬಂದಿದೆಯೆಂದು ಬಿಜೆಪಿ ರಾಜ್ಯ ಸಮಿತಿ ಸದಸ್ಯೆ ಸವಿತಾ ಟೀಚರ್ ಆರೋಪಿಸಿದ್ದಾರೆ. ಮಹಿಳಾ ಮೋರ್ಛಾ ಕಾಸರಗೋಡು ಮಂಡಲ ಸಮಿತಿ ಆಶ್ರಯದಲ್ಲಿ ನಡೆಸಿದ ಪ್ರತಿಭಟನಾ ಸಭೆಯನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು. ಎಲ್ಲಾ ವಲಯದಲ್ಲೂ ಮಹಿಳೆಯರು ಇಂದು ಸಾಧನೆ ಮೆರೆಯುತ್ತಿದ್ದರೂ ಕಾನೂನು ನಿರ್ಮಾಣ ಸಭೆಗಳಲ್ಲಿ ಅರ್ಹವಾದ   …

ಕುಂಬಳೆ ಜಿಲ್ಲಾ ಸಹಕಾರಿ ಆಸ್ಪತ್ರೆಯಲ್ಲಿ ಯಶಸ್ವಿ ಕಾಲಿನ ಮಂಡಿ ಬದಲಾವಣೆ ಶಸ್ತ್ರಚಿಕಿತ್ಸೆ

ಕುಂಬಳೆ: ಕಾಲಿನ ಮಂಡಿ ಬದಲಾವಣೆ ಶಸ್ತ್ರಕ್ರಿಯೆ ಹಾಗೂ ಲಿಗಮೆಂಟ್ ಪುನರ್ ನಿರ್ಮಾಣ ಶಸ್ತ್ರಕ್ರಿಯೆಯನ್ನು ಯಶಸ್ವಿಯಾಗಿ ಪೂರ್ತಿಗೊಳಿಸುವ ಮೂಲಕ ಕುಂಬಳೆ ಜಿಲ್ಲಾ ಸಹಕಾರಿ ಆಸ್ಪತ್ರೆ ಮತ್ತೊಂದು ಹೆಮ್ಮೆಯ ಸಾಧನೆಗೈದಿದೆ. ನಾಲ್ಕು ಗಂಟೆಗಳಲ್ಲಿ ತಜ್ಞ ವೈದ್ಯರನ್ನೊಳ ಗೊಂಡ ತಂಡ ಈ ಸಾಧನೆಯನ್ನು ನಡೆಸಿದೆ. ಜಿಲ್ಲೆಯಲ್ಲಿ ಇದೇ ಮೊಟ್ಟಮೊದಲಾಗಿ ಬಯೋ ಸಿಂಥೆಟಿಕ್ ಗ್ರಾಫ್ಟ್ ಉಪಯೋಗಿಸಿ ಮಂಡಿಯ ಲಿಗಮೆಂಟ್ ಪುನರ್‌ನಿರ್ಮಾಣ ಶಸ್ತ್ರಕ್ರಿಯೆ ಹಾಗೂ ಮಂಡಿ ಬದಲಾವಣೆ ಶಸ್ತ್ರಕ್ರಿಯೆಯನ್ನು ಏಕಕಾಲದಲ್ಲಿ ಪೂರ್ತಿಗೊಳಿಸಿರುವು ದಾಗಿ ಆಸ್ಪತ್ರೆ ಅಧಿಕಾರಿಗಳು ತಿಳಿಸಿದ್ದಾರೆ.ಆಧುನಿಕ ತಾಂತ್ರಿಕ ವಿದ್ಯೆಯ ಸಹಾಯದೊಂದಿಗೆ ನಡೆಸಿದ ಶಸ್ತ್ರಕ್ರಿಯೆಯಿಂದ …

ಕುಟುಕುಟು ಜುಗಾರಿ: ಐದು ಮಂದಿ ಬಂಧನ

ಕಾಸರಗೋಡು: ಕುತ್ತಿಕ್ಕೋಲು ಶ್ರೀ ತಂಬುರಾಟಿ ಕ್ಷೇತ್ರ ಸಮೀಪದ  ಗುಡ್ಡೆ ಪ್ರದೇಶದಲ್ಲಿ ನಡೆಯುತ್ತಿದ್ದ ಕುಟುಕುಟು ಜುಗಾರಿ ಕೇಂದ್ರಕ್ಕೆ ಬೇಡಗಂ ಪೊಲೀಸರು ದಾಳಿ ನಡೆಸಿ ಮತ್ತಿಬ್ಬರನ್ನು ಬಂಧಿಸಿದ್ದಾರೆ. ಅಡೂರು ಪಳ್ಳಂಜಿ ಪುದಿಯಕಂಡಂ ಹೌಸ್ ನಿವಾಸಿ  ಗಂಗಾಧರನ್(41), ಬಂದಡ್ಕ ಕುನ್ನುಮ್ಮಲ್ ನಿವಾಸಿ ಅಬೂಬಕ್ಕರ್ (24) ಎಂಬಿವರು ಬಂಧಿತ ವ್ಯಕ್ತಿಗಳಾಗಿದ್ದಾರೆ. ಇವರ ಕೈಯಿಂದ 3880 ರೂಪಾಯಿ ಗಳನ್ನು ವಶಪಡಿಸಲಾಗಿದೆ. ಇಂದು ಮುಂಜಾನೆ 1.30ರ ವೇಳೆ   ಜುಗಾರಿ ಕೇಂದ್ರಕ್ಕೆ ಪೊಲೀಸರು ದಾಳಿ ನಡೆಸಿದ್ದಾರೆ. ಮೊನ್ನೆ ರಾತ್ರಿಯೂ ಇದೇ ಸ್ಥಳದಲ್ಲಿ ಕುಟುಕುಟು ಜುಗಾರಿ ದಂಧೆ ನಡೆಯುತ್ತಿದ್ದ …

ಹಿರಿಯ ಟೈಲರ್ ಬಾಲಕೃಷ್ಣ ಶೆಟ್ಟಿ ಕರಿಪ್ಪಾರ ನಿಧನ

ಕುಂಬಳೆ: ಕುಂಬಳೆಯ ಹಿರಿಯ ಟೈಲರ್  ಮೀಂಜ ಕುಳೂರು ಕರಿಪ್ಪಾರ ನಿವಾಸಿ ಬಾಲಕೃಷ್ಣ ಶೆಟ್ಟಿ  (62) ನಿಧನಹೊಂದಿದರು. ಇವರು ಕುಂಬಳೆಯ ಮೋಹನ್ ಟೈಲರ್ಸ್ ಎಂಬ ಟೈಲರಿಂಗ್ ಸಂಸ್ಥೆಯಲ್ಲಿ ಕಟ್ಟಿಂಗ್ ಮಾಸ್ತರ್ ಆಗಿದ್ದರು. ಕಿಡ್ನಿ ಸಂಬಂಧ ಸೌಖ್ಯ ಬಾಧಿಸಿದ್ದ ಇವರನ್ನು ಪರಿಯಾರಂನ ಮೆಡಿಕಲ್ ಕಾಲೇಜು ಆಸ್ಪತ್ರೆಯಲ್ಲಿ ದಾಖಲಿಸ ಲಾಗಿತ್ತು.  ನಿನ್ನೆ ಸಂಜೆ ಹೃದಯಾ ಘಾತದಿಂದ ನಿಧನ ಸಂಭವಿಸಿದೆ. ಕೇರಳ ಸ್ಟೇಟ್ ಟೈಲರ್ಸ್  ಅಸೋಸಿಯೇಶನ್‌ನ ಮಾಜಿ ರಾಜ್ಯ ಸಮಿತಿ ಸದಸ್ಯರಾಗಿದ್ದ ಬಾಲಕೃಷ್ಣ ಶೆಟ್ಟಿಯವರು ಪ್ರಸ್ತುತ ಜಿಲ್ಲಾ ಸಮಿತಿ ಸದಸ್ಯನಾಗಿದ್ದರು. ಮೃತರು ಪತ್ನಿ …