ಮಧ್ಯರಾತ್ರಿ ಹೊಳೆಯಿಂದ ಹೊಯ್ಗೆ ಕಳವುಗೈದು ಸಾಗಾಟ : 2 ಟಿಪ್ಪರ್ ಲಾರಿಗಳ ವಶ

ಕುಂಬಳೆ: ಹೊಳೆಗಳಿಂದ ಹೊಯ್ಗೆ ಕಳವುಗೈದು ಸಾಗಿಸುವ ದಂಧೆ ವಿರುದ್ಧ ಪೊಲೀಸರು ಕಠಿಣ ಕ್ರಮ ಕೈಗೊಳ್ಳುತ್ತಿದ್ದಂತೆ ಮತ್ತೊಂದೆಡೆ ಹೊಯ್ಗೆ ಸಾಗಾಟ ದಂಧೆ ತೀವ್ರಗೊಂಡಿದೆ. ನಿನ್ನೆ ಮಧ್ಯ ರಾತ್ರಿಯೂ ಹೊಯ್ಗೆ ಸಾಗಾಟ ನಡೆಸುತ್ತಿರುವ ಬಗ್ಗೆ ಮಾಹಿತಿ ಲಭಿಸಿದ ಹಿನ್ನೆಲೆಯಲ್ಲಿ ಎಸ್‌ಐ ಶ್ರೀಜೇಶ್ ನೇತೃತ್ವದಲ್ಲಿ ನಡೆಸಿದ ಕಾರ್ಯಾ ಚರಣೆಯಲ್ಲಿ ಹೊಯ್ಗೆ ತುಂಬಿದ ಎರಡು ಟಿಪ್ಪರ್ ಲಾರಿಗಳನ್ನು ವಶ ಡಿಸಲಾಗಿದೆ. ಒಂದು ಲಾರಿಯನ್ನು ಕುಂಬಳೆ ಅಂಡರ್‌ಪಾಸ್‌ನಿಂದ ಹಾಗೂ ಇನ್ನೊಂದು ಲಾರಿಯನ್ನು ಮೊಗ್ರಾಲ್ ಅಂಡರ್‌ಪಾಸ್‌ನಿಂದ ವಶಪಡಿಸಲಾಗಿದೆ. ಎಸ್‌ಐಯನ್ನು ಕಂಡೊಡನೆ ಲಾರಿಗಳನ್ನು ಉಪೇಕ್ಷಿಸಿ ಚಾಲಕರು ಪರಾರಿಯಾಗಿದ್ದಾರೆ. …

ಶಬರಿಮಲೆ ಚಿನ್ನ ಕಳವು : ಸಿಬಿಐ ತನಿಖೆ ಅನಿವಾರ್ಯ-ಐಬಿ; ಅಗತ್ಯವಿಲ್ಲವೆಂದ ಮುಖ್ಯಮಂತ್ರಿ

ತಿರುವನಂತಪುರ: ಶಬರಿಮಲೆ ದೇಗುಲದಲ್ಲಿ ನಡೆದ ಚಿನ್ನ ಕಳವು ಪ್ರಕರಣದ ತನಿಖೆಯನ್ನು ಸಿಬಿಐಗೆ ಹಸ್ತಾಂತರಿಸಬೇಕೆಂದು ಕೇಂದ್ರ ಗುಪ್ತಚರ ವಿಭಾಗವಾದ ಇಂಟೆಲಿಜೆನ್ಸ್ ಬ್ಯೂರೋ (ಐಬಿ) ಹೇಳಿದೆ. ಶಬರಿಮಲೆ ಚಿನ್ನ ಕಳವು ಅಂತಾ ರಾಜ್ಯ ನಂಟು ಹೊಂದಿರುವ ಪ್ರಕರಣ ವಾಗಿದೆ. ಆದ್ದರಿಂದ ಇದರ ವಾಸ್ತವತೆ ಯನ್ನು  ಸಂಪೂರ್ಣವಾಗಿ ಬಯಲಿಗೆ ಯಲು ಪ್ರಸ್ತುತ ಪ್ರಕರಣದ ತನಿಖೆಯನ್ನು ಸಿಬಿಐಗೆ ಹಸ್ತಾಂತರಿಸಬೇಕಾಗಿರುವುದು ಅನಿವಾರ್ಯವಾಗಿದೆಂದು ಐ.ಬಿಯ ಕೇರಳ ಘಟಕವು ಕೇಂದ್ರದ ಡೈರೆಕ್ಟರ್ ಜನರಲ್ ಆಫ್ ಇಂಟೆಲಿಜೆನ್ಸ್‌ಗೆ ಸಲ್ಲಿಸಿದ ವರದಿಯಲ್ಲಿ ಶಿಫಾರಸ್ಸು ಮಾಡಿದೆ.  ಶಬರಿಮಲೆ ದೇಗುಲದಲ್ಲಿ  ನಡೆದ ಚಿನ್ನ …

ತಾಲೂಕು ಕಚೇರಿ ಬಳಿಯ ಲಾಟರಿ ಸ್ಟಾಲ್, ಫೋಟೋಸ್ಟಾಟ್ ಅಂಗಡಿಗೆ ಬೆಂಕಿ

ಕಾಸರಗೋಡು: ಕಾಸರಗೋಡು ತಾಲೂಕು ಕಚೇರಿ ಬಳಿ ಕಾರ್ಯವೆಸಗುತ್ತಿರುವ ಲಾಟರಿ  ಸ್ಟಾಲ್ ಮತ್ತು  ಪೋಟೋಸ್ಟಾಟ್ ಅಂಗಡಿಗೆ ಬೆಂಕಿ ತಗಲಿದೆ.   ನಿನ್ನೆ ರಾತ್ರಿ  ಸುಮಾರು 11.15 ರ ವೇಳೆ  ಘಟನೆ ನಡೆದಿದ್ದು,  ಇದನ್ನು ಗಮನಿಸಿದ ಊರವರು ನೀಡಿದ ಮಾಹಿತಿಯಂತೆ ಸೀನಿಯರ್ ಫಯರ್ ಆಂಡ್ ರೆಸ್ಕ್ಯೂ ಆಫೀಸರ್ ವಿ.ಎಂ. ಸತೀಶನ್ ನೇತೃತ್ವದ ಕಾಸರಗೋಡು ಅಗ್ನಿಶಾಮಕದಳ ತಕ್ಷಣ ಆಗಮಿಸಿ ಬೆಂಕಿ ನಂದಿಸಿದೆ.  ಬೆಂಕಿ ತಗಲಿದ ಕಾರಣ ಇನ್ನೂ ಸ್ಪಷ್ಟಗೊಂಡಿಲ್ಲವೆಂದು ಅಗ್ನಿಶಾಮಕದಳದವರು ತಿಳಿಸಿದ್ದಾರೆ. ಡಿ.ಕೆ.ಪಂಡಿತ್ ಎಂಬವರ ಹೆಸರಲ್ಲಿರುವ ಪ್ರಸ್ತುತ ಫೋಟೋಸ್ಟಾಟ್ ಅಂಗಡಿಯನ್ನು ಈಗ ಬೀರಂತಬೈಲು  …

ಮನೆ ಶೆಡ್‌ಗೆ ಬೆಂಕಿ: ನಾಶ, ನಷ್ಟ

ಕಾಸರಗೋಡು: ಮನೆಗೆ ತಾಗಿಕೊಂಡು ನಿರ್ಮಿಸಲಾಗಿರುವ ಶೆಡ್‌ಗೆ ಬೆಂಕಿ ತಗಲಿ ವ್ಯಾಪಕ ನಾಶನಷ್ಟ ಉಂಟಾಗಿದೆ. ಕೀಯೂರು ಮಠದ ಕೆ.ಎ. ಮುಹಮ್ಮದ್ ಕುಂಞಿ ಎಂಬವರ ಮನೆ ಪಕ್ಕದ ಶೆಡ್‌ಗೆ ನಿನ್ನೆ ರಾತ್ರಿ ಸುಮಾರು 9.15ರ ವೇಳೆಗೆ ಬೆಂಕಿ ತಗಲಿಕೊಂಡಿದೆ. ಅದರೊಳಗೆ ಸಂಗ್ರಹಿಸಿಡಲಾಗಿದ್ದ ಕಟ್ಟಿಗೆಗಳು, ತೆಂಗಿನಕಾಯಿ ಸಿಪ್ಪೆ   ಸೇರಿದಂತೆ ಶೆಡ್ ಪೂರ್ಣವಾಗಿ  ಬೆಂಕಿಗಾಹುತಿಯಾ ಗಿದೆ. ಮನೆಯ ಅಡುಗೆ ಕೊಠಡಿ ಬಳಿಯಿಂದ ಶೆಡ್‌ಗೆ ಬೆಂಕಿ ತಗಲಿಕೊಂಡಿ ರಬಹುದೆಂದು ಶಂಕಿಸಲಾಗುತ್ತಿದೆ.   ಸಂಬಂಧಿಕ ರೋರ್ವರು ನಿನ್ನೆ ನಿಧನಹೊಂದಿದ್ದು ಅದರಿಂದಾಗಿ ಈ ಮನೆಯವರು ಅಲ್ಲಿಗೆ ಹೋಗಿದ್ದರು. ಆ …

ಅಸೌಖ್ಯ: ಚಿಕಿತ್ಸೆಯಲ್ಲಿದ್ದ ಯುವತಿ ನಿಧನ

ಕಾಸರಗೋಡು: ಅಸೌಖ್ಯದ ಹಿನ್ನೆಲೆಯಲ್ಲಿ ಆಸ್ಪತ್ರೆಗೆ ದಾಖಲಿಸಲ್ಪಟ್ಟ ಯುವತಿ ಮೃತಪಟ್ಟರು. ಚಂದೇರಾ ನಿವಾಸಿ ತಲೆಹೊರೆ ಕಾರ್ಮಿಕ ಎಂ. ವಿಜೇಶ್‌ರ ಪತ್ನಿ ಎಂ.ಕೆ. ದಿವ್ಯಾ (27) ಮೃತಪಟ್ಟವರು. ಎರಡು ದಿನ ಹಿಂದೆ ಅಸೌಖ್ಯ ಹಿನ್ನೆಲೆಯಲ್ಲಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಕಣ್ಣೂರು ಪರಿಯಾರಂ ಮೆಡಿಕಲ್ ಕಾಲೇಜ್ ಆಸ್ಪತ್ರೆಯಲ್ಲಿ ಅಂತ್ಯ ಸಂಭವಿಸಿದೆ. ಕೊಡಗು ನಿವಾಸಿ ಕೇಶವ-ಕನಕ ದಂಪತಿ ಪುತ್ರಿಯಾಗಿದ್ದಾರೆ. ಮೃತರು ಪತಿ, ತಂದೆ, ತಾಯಿ, ಪುತ್ರಿ ಆಶಿಕ ಹಾಗೂ ಅಪಾರ ಬಂಧು ಮಿತ್ರರನ್ನು ಅಗಲಿದ್ದಾರೆ.

ಮಾನಭಂಗ: ಯುವಕನ ವಿರುದ್ಧ ಕೇಸು; ಯುವತಿ ಆಸ್ಪತ್ರೆಯಲ್ಲಿ

ಹೊಸದುರ್ಗ: 33ರ ಹರೆಯದ ಯುವತಿಯನ್ನು ಮಾನಭಂಗಗೈದಿರುವುದಾಗಿ ನೀಡಿದ ದೂರಿನಲ್ಲಿ ೩೦ರ ಹರೆಯದ ಯುವಕನ ವಿರುದ್ಧ ಕೇಸು ದಾಖಲಿಸಲಾಗಿದೆ. ಇಡೈಲಕ್ಕಾಡ್ ನಿವಾಸಿಯಾದ ಗೋಕುಲ್ (30)ನ ವಿರುದ್ಧ ಚಂದೇರ ಪೊಲೀಸರು ಕೇಸು ದಾಖಲಿಸಿದ್ದಾರೆ. ವಿವಾಹ ಭರವಸೆ ನೀಡಿ ಮಾನಭಂಗಗೈದಿರುವುದಾಗಿ ದೂರಲಾಗಿತ್ತು. ಆದರೆ ಬಳಿಕ ಇದರಿಂದ ಹಿಂದೆ ಸರಿದಿದ್ದು, ಈ ಹಿನ್ನೆಲೆಯಲ್ಲಿ ಮಾನಸಿಕವಾಗಿ ನೊಂದು ಅಪರಿಮಿತ ನಿದ್ರೆ ಮಾತ್ರೆ ಸೇವಿಸಿದ ಯುವತಿಯನ್ನು ಪರಿಯಾರಂ ಮೆಡಿಕಲ್ ಕಾಲೇಜು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಅಲ್ಲಿ ಚಿಕಿತ್ಸೆಯಲ್ಲಿದ್ದಾರೆ. ಆಸ್ಪತ್ರೆಯ ಅಧಿಕಾರಿಗಳು ಮಾಹಿತಿ ನೀಡಿದ ಹಿನ್ನೆಲೆಯಲ್ಲಿ ಪೊಲೀಸರು ತಲುಪಿ …

ಪ್ರಾಮಾಣಿಕತೆ ಮೆರೆದ ಜಯರಾಮ್‌ರಿಗೆ ಬ್ಯಾಂಕ್‌ನಿಂದ ಅಭಿನಂದನೆ

ಪೆರ್ಮುದೆ: ಕೇರಳ ಗ್ರಾಮೀಣ ಬ್ಯಾಂಕ್ ಪೆರ್ಮುದೆ ಶಾಖೆಯ ಎಟಿಎಂನಲ್ಲಿ ತಾಂತ್ರಿಕ ಅಡಚಣೆಯಿಂದಾಗಿ ನಾಲ್ಕು ಪಟ್ಟು ಹೆಚ್ಚು ಹಣ ಜನರ ಕೈಸೇರುತ್ತಿರುವುದನ್ನು ಪತ್ತೆಹಚ್ಚಿದ ಸ್ಥಳೀಯ ನಿವಾಸಿ ಕೋಳಾರು ಜಯರಾಮ್‌ರನ್ನು ಬ್ಯಾಂಕ್‌ನ ವತಿಯಿಂದ ಅಭಿನಂದಿಸಲಾಗಿದೆ. ಎಟಿಎಂನಿಂದ ಹಣ ತೆಗೆಯುವಾಗ ತಾಂತ್ರಿಕ ದೋಷದಿಂದ ನಾಲ್ಕು ಪಟ್ಟು ಹೆಚ್ಚು ಹಣ ಲಭಿಸುತ್ತಿತ್ತೆನ್ನಲಾಗಿದೆ. ಆದರೆ ಇದನ್ನು ಯಾರೂ ಬ್ಯಾಂಕ್‌ಗೆ ತಿಳಿಸಿರಲಿಲ್ಲ. ಜಯರಾಮ್ ಹಣ ತೆಗೆದಾಗ ಇವರಿಗೂ ಇದೇ ಅನುಭವ ಉಂಟಾಗಿದ್ದು, ಇವರು ಕೂಡಲೇ ಬ್ಯಾಂಕ್‌ನ ಸಿಬ್ಬಂದಿಗೆ ಮಾಹಿತಿ ನೀಡಿದ್ದಾರೆ. ಇವರ ಪ್ರಮಾಣಿಕತೆಯನ್ನು ಮೆಚ್ಚಿದ ಬ್ಯಾಂಕ್ …

ಕೊಳದಲ್ಲಿ ಈಜುತ್ತಿದ್ದ ಮಧ್ಯೆ ತಂದೆ, ಪುತ್ರಿಯನ್ನು ಅಪಾಯದಿಂದ ಪಾರುಮಾಡಿದ ಉದ್ಯೋಗ ಖಾತರಿ ಮೇಲ್ವಿಚಾರಕರು

ಹೊಸದುರ್ಗ: ಉದ್ಯೋಗಖಾತರಿ ಮೇಲ್ವಿಚಾರಕರ ಸಮಯಪ್ರಜ್ಞೆಯ ಹಸ್ತಕ್ಷೇಪದಿಂದಾಗಿ ಕ್ಷೇತ್ರದ ಕೊಳದಲ್ಲಿ ಮುಳುಗುತ್ತಿದ್ದ ತಂದೆ ಹಾಗೂ ಪುತ್ರಿ  ಅಪಾಯದಿಂದ ಪಾರಾಗಿದ್ದಾರೆ. ಮಡಿಕೈ ಕಕ್ಕಾಟ್ ಮಹಾವಿಷ್ಣು ಕ್ಷೇತ್ರ ಕೊಳದಲ್ಲಿ ಈಜುತ್ತಿದ್ದ ವೇಳೆ ಮುಳುಗಿ ಏಳುತ್ತಿದ್ದಿದ್ದ ಕಕ್ಕಾಟ್ ಕುಂಞಿವೀಟಿಲ್ ಮಹೇಶ್ ಹಾಗೂ ಪುತ್ರಿ ದಿಯಾಳಿಗೆ ಪುನರ್ಜನ್ಮ ಲಭಿಸಿದೆ. ಮಡಿಕೈ ಪಂಚಾಯತ್‌ನ 12ನೇ ವಾರ್ಡ್ ಉದ್ಯೋಗ ಖಾತರಿ ಯೋಜನೆಯ ಮೇಲ್ವಿಚಾರಕರಾದ ಪ್ರಸೀತಾ ಮುರಳಿ ಹಾಗೂ ಇಂದಿರಾ ಬಾಬು, ಸ್ಥಳೀಯರಾದ ಮಾರನ್‌ವೀಟಿಲ್ ಚಂದ್ರಶೇಖರನ್ ಇವರನ್ನು ಅಪಾಯದಿಂದ ಪಾರು ಮಾಡಿದ್ದಾರೆ. ಕೆಲಸದ ಸ್ಥಳ ಸಂದರ್ಶಿಸಿ ಮುಂದಿನ ಕೇಂದ್ರಕ್ಕೆ …

ಜಿಲ್ಲಾ ಕಲೋತ್ಸವ: ಯುಪಿ ಜನರಲ್ ವಿಭಾಗದಲ್ಲಿ ಕಯ್ಯಾರು ಡೋನ್‌ಬೋಸ್ಕೊ ಶಾಲೆ ಚಾಂಪ್ಯನ್

ಕಾಸರಗೋಡು: ಮೊಗ್ರಾಲ್ ಸರಕಾರಿ ವೊಕೇಶನಲ್ ಹೈಯರ್ ಸೆಕೆಂಡರಿ ಶಾಲೆಯಲ್ಲಿ ನಡೆದ 64ನೇ ಕಂದಾಯ ಜಿಲ್ಲಾ ಶಾಲಾ ಕಲೋತ್ಸವದ ಯುಪಿ ಜನರಲ್ ವಿಭಾಗದಲ್ಲಿ ಕಯ್ಯಾರು ಡೋನ್ ಬೋಸ್ಕೊ ಎಯುಪಿ ಶಾಲೆಯು 48 ಅಂಕಗಳೊAದಿಗೆ ಸಮಗ್ರ ಪ್ರಶಸ್ತಿ ಪಡೆದುಕೊಂಡಿದೆ. ಯುಪಿ ಸಂಸ್ಕೃತ ವಿಭಾಗದಲ್ಲಿ 35 ಅಂಕಗಳೊAದಿಗೆ ರನ್ನರ್ಸ್ ಅಪ್ ಸ್ಥಾನವನ್ನು ಪಡೆದುಕೊಂಡಿದೆ. ಜಿಲ್ಲಾ ಕಲೋತ್ಸವದಲ್ಲಿ ಯುಪಿ ವಿಭಾಗದಲ್ಲಿ ನಡೆದ ಒಟ್ಟು ಹತ್ತು ಸ್ಪರ್ಧೆಗಳಲ್ಲಿ ಕಯ್ಯಾರು ಡೋನ್ ಬೋಸ್ಕೊ ಶಾಲೆಯ ವಿದ್ಯಾರ್ಥಿಗಳು ಭಾಗವಹಿಸಿದ್ದರು. ಗ್ರೂಪ್ ವಿಭಾಗಗಳಲ್ಲಿ ಯುಪಿ ಸಮೂಹ ನೃತ್ಯ ಎ …

ಜಿಲ್ಲಾ ಶಾಲಾ ಕಲೋತ್ಸವ: ಯು.ಪಿ. ಅರೆಬಿಕ್ ವಿಭಾಗದಲ್ಲಿ ಜಿಎಸ್‌ಬಿಎಸ್ ಕುಂಬಳೆ ಚಾಂಪ್ಯನ್

ಕುಂಬಳೆ: ಮೊಗ್ರಾಲ್ ಶಾಲೆಯಲ್ಲಿ ಮುಕ್ತಾಯಗೊಂಡ 64 ನೇ ಜಿಲ್ಲಾ ಮಟ್ಟದ ಕೇರಳ ಶಾಲಾ ಕಲೋತ್ಸವ ದಲ್ಲಿ ಯು.ಪಿ ಅರೇಬಿಕ್ ವಿಭಾಗ ದಲ್ಲಿ ಜಿ.ಎಸ್.ಬಿ.ಎಸ್ ಕುಂಬಳೆ 30 ಅಂಕಗಳನ್ನು ಗಳಿಸಿ ಚಾಂಪ್ಯನ್ ಪ್ರಶಸ್ತಿ ಗಳಿಸಿತು. ಸಮಾರೋಪ ಸಮಾರಂಭದಲ್ಲಿ ಮಂಜೇಶ್ವರ ಶಾಸಕ ಎ.ಕೆ.ಎಂ ಅಶ್ರಫ್ ಪ್ರಶಸ್ತಿ ಫಲಕವನ್ನು ವಿತರಿಸಿದರು. ಭಾಗವಹಿಸಿದ ಎಲ್ಲ ಸ್ಪರ್ಧೆಗಳಲ್ಲಿ ಎ ಗ್ರೇಡ್ ಪಡೆದು ಈ ಸಾಧನೆ ಮಾಡಿದೆ. ಇಂಗ್ಲಿಷ್ ಸ್ಕಿಟ್ ಕೇವಲ ಶಾಲಾ ಅಧ್ಯಾಪಕರ ತರಬೇತಿಯಿಂದ ಎ ಗ್ರೇಡ್ ನೊಂ ದಿಗೆ ದ್ವಿತೀಯ ಸ್ಥಾನ ಪಡೆದಿರುವುದು …