ಜಿಲ್ಲಾ ಕುಲಾಲ ಸಂಘದಿಂದ ಸಹಾಯಧನ ಹಸ್ತಾಂತರ

ಮಂಜೇಶ್ವರ: ಜಿಲ್ಲಾ ಕುಲಾಲ ಸಂಘ ಮಂಜೇಶ್ವರ ಇದರ ಆಶ್ರಯದಲ್ಲಿ ಕುಲಾಲ ಬಂಧುಗಳ ಸಹಕಾರದಿಂದ ರೂಪುಗೊಂಡ ಕುಲಾಲ ಸಮಾಜದ ‘ನೊಂದ ಜೀವಕ್ಕೊಂದು ಆಸರೆ’ ಕಾರ್ಯಕ್ರಮದಂತೆ ಅಶಕ್ತ ಕುಟುಂಬ ಸದಸ್ಯರ ಚಿಕಿತ್ಸೆಗಾಗಿ ಸಹಾಯಧನದ ಮೊತ್ತವನ್ನು ಹಸ್ತಾಂತರಿಸಲಾಯಿತು. ಕುಲಾಲ ಸಂಘ ಮೀಂಜ ಶಾಖೆಗೊಳ ಪಟ್ಟ ಕೋಳ್ಯೂರು ಚಕ್ರಕೋಡಿ ನಿವಾಸಿ ಶ್ರೀನಾಥ್‌ರಿಗೆ ತೂಮಿನಾಡು ಕುಲಾಲ ಸಮುದಾಯ ಭವನದಲ್ಲಿ ಜರಗಿದ ಆರೋಗ್ಯ ತಪಾಸಣಾ ಶಿಬಿರದಲ್ಲಿ ಈ ಮೊತ್ತವನ್ನು ಹಸ್ತಾಂತರಿಸಲಾಯಿತು. ಗಣ್ಯರು ಉಪಸ್ಥಿತರಿದ್ದರು.

ಪತ್ನಿ ಸಹಿತ 4 ಮಂದಿಯನ್ನು ಕೊಲೆಗೈದ ಆರೋಪಿಗೆ ವಿರಾಜಪೇಟೆ ನ್ಯಾಯಾಲಯ ಗಲ್ಲು ಶಿಕ್ಷೆ ಘೋಷಣೆ

ಮಡಿಕೇರಿ: ಅಕ್ರಮ ಸಂಬಂಧ ಶಂಕಿಸಿ ದ್ವೇಷದಿಂದ ಪತ್ನಿ, ಮಗಳು, ಅಜ್ಜ, ಅಜ್ಜಿಯನ್ನು ಕೊಲೆಗೈದ ಪ್ರಕರಣಕ್ಕೆ ಸಂಬಂಧಿಸಿ ಆರೋಪಿಗೆ ವಿರಾಜಪೇಟೆ ಜಿಲ್ಲಾ ಮತ್ತು ಸೆಶನ್ಸ್ ನ್ಯಾಯಾಲಯ ಮರಣದಂಡನೆ ಶಿಕ್ಷೆ ಘೋಷಿಸಿದೆ. ಕೇರಳದ ವಯನಾಡು ಜಿಲ್ಲೆ ತಿರುನಲ್ಲಿ ಅಪ್ಪಪ್ಪಾರೆ ನಿವಾಸಿ ಗಿರೀಶ್ (38) ಗಲ್ಲುಶಿಕ್ಷೆಗೊಳಗಾದ ಆರೋಪಿ. ಜೇನು ಕುರುಬರ ಕರಿಯ (75), ಇವರ ಪತ್ನಿ ಗೌರಿ (70), ಗಿರೀಶ್‌ನ ಪತ್ನಿ ನಾಗಿ (), ಮಲಮಗಳು ಕಾವೇರಿ (6), ಈ ನಾಲ್ವರನ್ನು ಆರೋಪಿ ಗಿರೀಶ್ ಕಡಿದು ಕೊಲೆಗೈಯ್ಯಲಾಗಿದೆ. ಪೊನ್ನಂಪೇಟೆ ತಾಲೂಕು ಬೇಗೂರು …

ಕುಂಬ್ಡಾಜೆಯಲ್ಲಿ ಅಭ್ಯರ್ಥಿಯ ಮನೆ ಸಮೀಪ ನಾಡಬಾಂಬ್ ಸ್ಫೋಟ: ಸಾಕು ನಾಯಿ ಸಾವು; ಮೂರು ಬಾಂಬ್‌ಗಳು ಪತ್ತೆ

ಬದಿಯಡ್ಕ: ಬದಿಯಡ್ಕ ಪೊಲೀಸ್ ಠಾಣೆ ವ್ಯಾಪ್ತಿಯ ಕುಂಬ್ಡಾ ಜೆಯಲ್ಲಿ ಅಭ್ಯರ್ಥಿಯ ಮನೆಯ ಮುಂದೆ  ನಡೆದ  ನಾಡಬಾಂಬ್ ಸ್ಫೋಟದಲ್ಲಿ ಸಾಕುನಾಯಿ ಸಾವಿಗೀಡಾದ ಘಟನೆ ನಡೆದಿದೆ.  ವಿಷಯ ತಿಳಿದು ತಲುಪಿದ ಬದಿಯಡ್ಕ ಪೊಲೀಸರು ಸ್ಫೋಟಗೊಳ್ಳದೆ ಉಳಿದ ಮೂರು ನಾಡಬಾಂಬ್‌ಗಳನ್ನು ಕಸ್ಟಡಿಗೆ ತೆಗೆದುಕೊಂಡಿದ್ದಾರೆ. ಜಿಲ್ಲಾ ಪಂಚಾ ಯತ್ ಬದಿಯಡ್ಕ ಡಿವಿಶನ್‌ನ ಎಡರಂಗ ಅಭ್ಯರ್ಥಿಯಾದ ಕಾಡ್ರಬೆಳ್ಳಿಗೆಯ ಪ್ರಕಾಶರ ಮನೆ ಸಮೀಪದ ತೋಟದಲ್ಲಿ ಇಂದು ಬೆಳಿಗ್ಗೆ 7 ಗಂಟೆ ವೇಳೆ ಭಾರೀ ಶಬ್ದದೊಂದಿಗೆ ಸ್ಫೋಟ ನಡೆದಿದೆ.  ಶಬ್ದ ಕೇಳಿ ಜನರು ಅಲ್ಲಿಗೆ ತಲುಪಿದಾಗ ಪ್ರಕಾಶರ …

ಕಾಸರಗೋಡು ಸಹಿತ ಏಳು ಜಿಲ್ಲೆಗಳಲ್ಲಿ ಬಿರುಸಿನ ಮತದಾನ

ಕಾಸರಗೋಡು: ಕಾಸರಗೋಡು ಸೇರಿದಂತೆ ಏಳು ಜಿಲ್ಲೆಗಳ ಸ್ಥಳೀಯಾ ಡಳಿತ ಸಂಸ್ಥೆಗಳ ಚುನಾವಣೆ  ಇಂದು ಬೆಳಿಗ್ಗೆ  ಆರಂಭಗೊಂಡಿದೆ. ಹೆಚ್ಚಿನ ಎಲ್ಲೆಡೆಗಳಲ್ಲಿ ಇಂದು ಬೆಳಿಗ್ಗಿನಿಂದಲೇ ಬಿರುಸಿನ ಮತದಾನ ನಡೆಯುತ್ತಿದೆ. ಕಾಸರಗೋಡಿನ ಹೊರತಾಗಿ ಕಣ್ಣೂರು, ಕಲ್ಲಿಕೋಟೆ, ವಯನಾಡು, ಮಲಪ್ಪುರಂ, ಪಾಲಕ್ಕಾಡ್ ಮತ್ತು ತೃಶೂರು ಎಂಬೀ ಏಳು ಜಿಲ್ಲೆಗಳ  ಒಟ್ಟು 604 ಸ್ಥಳೀಯಾಡಳಿತ ಸಂಸ್ಥೆಗಳಿಗೆ ದ್ವಿತೀಯ ಹಂತದಲ್ಲಿ ಇಂದು ಮತದಾನ ನಡೆಯುತ್ತಿದೆ. ಪ್ರಥಮ ಹಂತದಲ್ಲಿ ಉಳಿದ ಏಳು ಜಿಲ್ಲೆಗಳಿಗೆ  ಡಿ. 9ರಂದು ಚುನಾವಣೆ ನಡೆದಿತ್ತು. ಕಾಸರಗೋಡು  ಜಿಲ್ಲೆಯಲ್ಲಿ ಒಟ್ಟು 2855 ಅಭ್ಯರ್ಥಿಗಳು ನಗರಸಭೆ …

ಚುನಾವಣಾ ಕರ್ತವ್ಯಕ್ಕೆ ಮದ್ಯದಮಲಿನಲ್ಲಿ  ತಲುಪಿದ ಪೊಲೀಸ್ ಮಹಿಳಾ ಪ್ರಿಸೈಡಿಂಗ್ ಆಫೀಸರ್‌ರೊಂದಿಗೆ ಅನುಚಿತ ವರ್ತನೆ

ಕಾಸರಗೋಡು: ಮದ್ಯದಮಲಿನಲ್ಲಿ ಚುನಾವಣಾ ಕರ್ತವ್ಯಕ್ಕೆ ತಲುಪಿ ಮಹಿಳಾ ಪ್ರಿಸೈಂಡಿಂಗ್ ಆಫೀಸರ್‌ರೊಂ ದಿಗೆ ಅನುಚಿತವಾಗಿ ವರ್ತಿಸಿದ ಕಾಞಂಗಾಡ್ ಬೀಟಾ ಕಂಟ್ರೋಲ್ ರೂಂನ ಪೊಲೀಸ್‌ನ ವಿರುದ್ಧ ಆದೂರು ಪೊಲೀಸರು ಕೇಸು ದಾಖಲಿಸಿಕೊಂಡಿದ್ದಾರೆ. ಆದೂರು ಪೊಲೀಸ್ ಇನ್‌ಸ್ಪೆಕ್ಟರ್ ಎಂ.ವಿ. ವಿಷ್ಣುಪ್ರಸಾದ್‌ರ ದೂರಿ ನಂತೆ ಸಿಪಿಒ ಆಗಿರುವ ಸನೂಪ್ ಜೋನ್  ವಿರುದ್ಧ ಕೇಸು ದಾಖಲಿಸಲಾಗಿದೆ. ಮುಳಿಯಾರು ಪಂಚಾಯತ್‌ನ ಬೆಂಚ್ ಕೋರ್ಟ್ ವಾರ್ಡ್‌ನ ಮತಗಟ್ಟೆಯಾದ ಬೋವಿಕ್ಕಾನ ಎಯುಪಿ ಶಾಲೆಯಲ್ಲಿ  ನಿನ್ನೆ ಸಂಜೆ 4.30ರ ವೇಳೆ ಪ್ರಕರಣಕ್ಕೆ ಕಾರಣವಾದ ಘಟನೆ ನಡೆದಿದೆ. ಈ ಕುರಿತು ಆದೂರು …

ಮಾದಕದ್ರವ್ಯ ಸಹಿತ ಇಂಜಿನಿಯರ್ ಸೇರಿ ಮೂವರ ಬಂಧನ: ತಪ್ಪಿಸಿಕೊಳ್ಳಲು ಮಾದಕದ್ರವ್ಯ ನೀರಲ್ಲಿ ಮಿಶ್ರಣಗೊಳಿಸಿದ ಆರೋಪಿಗಳು

ಕಾಸರಗೋಡು: ಕಾಸರಗೋಡು ಅಬಕಾರಿ ತಂಡ ಪಳ್ಳಿಕ್ಕರೆ ಕಲ್ಲಿಂಗಾಲ್ ನಲ್ಲಿ ನಡೆಸಿದ ಕಾರ್ಯಾಚರ ಣೆಯಲ್ಲಿ ಮಾದಕದ್ರವ್ಯವಾದ 4.813 ಗ್ರಾಂ ಮೆಥಾಫಿಟಾಮಿನ್ ಹಾಗೂ ಮಾದಕ ದ್ರವ್ಯ ಮಿಶ್ರಣಗೊಳಿಸಿದ 618 ಗ್ರಾಂ ನೀರನ್ನು  ಪತ್ತೆಹಚ್ಚಿ ವಶಪಡಿಸಿಕೊಂ ಡಿದ್ದಾರೆ. ಇದಕ್ಕೆ ಸಂಬಂಧಿಸಿ ಚಟ್ಟಂಚಾಲ್ ಕುನ್ನಾರದ ಕೆ. ಅಬ್ಬಾಸ್ ಅರಾಫತ್ (26), ಮುಟ್ಟತ್ತೋಡಿ  ಸಂತೋಷ್‌ನಗರದ ಮೊಹಮ್ಮದ್  ಅಮೀನ್ (21) ಮತ್ತು ಪಳ್ಳಿಕ್ಕೆರೆ  ತೊಟ್ಟಿ ನಿವಾಸಿ ಟಿ.ಎಂ. ಫೈಸಲ್ (38) ಎಂಬ ವರನ್ನು ಬಂಧಿಸಿ ಪ್ರಕರಣ ದಾಖಲಿಸಲಾಗಿದೆ. ಇವರು ಬಳಸುತ್ತಿದ್ದ ಕಾರನ್ನು ಅಬಕಾರಿ ತಂಡ ವಶಕ್ಕೆ …

ವಿದ್ಯಾರ್ಥಿ ನಾಪತ್ತೆ

ಕಾಸರಗೋಡು: ಮಧೂರು ಪಟ್ಲ ನಿವಾಸಿ 17ರ ಹರೆ ಯದ ಯುವಕ ನಾಪತ್ತೆಯಾಗಿ ರುವುದಾಗಿ ದೂರಲಾ ಗಿದೆ. ಕುಂಬಳೆ ನಿವಾಸಿ ಮೊಹಮ್ಮದ್ ಅರಾಫತ್ ನಾಪತ್ತೆಯಾದ ಯುವಕ. ತ್ವಾಹಿರಿಯ ಅಕಾಡೆಮಿಯ ಪ್ಲಸ್ ವನ್ ವಿದ್ಯಾರ್ಥಿಯಾಗಿದ್ದಾನೆ. ಈತ ಶಾಲೆಯಿಂದ ಹೊರ ಹೋಗುವ ಸಿಸಿಟಿವಿ ದೃಶ್ಯಗಳು ಪೊಲೀಸರಿಗೆ ಲಭಿಸಿದೆ. ಕೆಂಪು ಟೀಶರ್ಟ್ ಧರಿಸಿರುವ ದೃಶ್ಯ ಲಭಿಸಿದೆ. ಪೊಲೀಸರು ತನಿಖೆ ಆರಂಭಿಸಿದ್ದಾರೆ.

ಎರಡನೇ ಲೈಂಗಿಕ ಪ್ರಕರಣದಲ್ಲೂ ರಾಹುಲ್‌ಗೆ ಶರತ್ತುಬದ್ದ ನಿರೀಕ್ಷಣಾ ಜಾಮೀನು ಮಂಜೂರು: ಸರಕಾರ ಮೇಲ್ಮನವಿಯತ್ತ

ತಿರುವನಂತಪುರ: ತಿರುವನಂತಪು ರದ ಯುವತಿಯೋರ್ವಳಿಗೆ ಲೈಂಗಿಕ ಕಿರುಕುಳ ನೀಡಿ ಬಲವಂತವಾಗಿ ಆಕೆಯ ಗರ್ಭಪಾತ ನಡೆಸಿರುವುದಾಗಿ ಆರೋಪಿಸಿ ನೀಡಲಾದ ದೂರಿನಂತೆ ದಾಖಲಿಸಲಾದ ಪ್ರಕರಣದಲ್ಲಿ ಆರೋಪಿಯಾಗಿರುವ ಪಾಲಕ್ಕಾಡ್ ಶಾಸಕ ರಾಹುಲ್ ಮಾಂಕೂಟತ್ತಿಲ್‌ಗೆ ಕೇರಳ ಹೈಕೋರ್ಟ್ ತಾತ್ಕಾಲಿಕ ನಿರೀಕ್ಷಣಾ ಜಾಮೀನು ಮಂಜೂರು ಮಾಡಿದ ಬೆನ್ನಲ್ಲೇ ಬೆಂಗಳೂರಿನ ನಿವಾಸಿಯಾಗಿರುವ ೨೪ರ ಹರೆಯದ ಯುವತಿಗೆ ಲೈಂಗಿಕ ಕಿರುಕುಳ ನೀಡಿದ ಪ್ರಕರಣದಲ್ಲೂ ರಾಹುಲ್‌ಗೆ ತಿರುವನಂತಪುರ ಜಿಲ್ಲಾ ಸೆಶನ್ಸ್ ನ್ಯಾಯಾಲಯ ಶರತ್ತುಬದ್ದ ನಿರೀಕ್ಷಣಾ ಜಾಮೀನು ಮಂಜೂರು ಮಾಡಿದೆ. ಮುಂದಿನ ಮೂರು ತಿಂಗಳಲ್ಲಿ ಎರಡು ದಿನಗಳಿಗೊಮ್ಮೆ ತನಿಖಾ ತಂಡದ …

ಸ್ಥಳೀಯಾಡಳಿತ ಚುನಾವಣೆಯಲ್ಲಿ ಐಕ್ಯರಂಗ ಭಾರೀ ಗೆಲುವು ಸಾಧಿಸಲಿದೆ- ಎಕೆಎಂ ಅಶ್ರಫ್

ಉಪ್ಪಳ: ಸ್ಥಳೀಯಾಡಳಿತ ಚುನಾವಣೆಯಲ್ಲಿ ಕಾಸರಗೋಡು ಜಿಲ್ಲೆಯಾದ್ಯಂತ, ಪ್ರತ್ಯೇಕವಾಗಿ ಮಂಜೇಶ್ವರ ವಿಧಾನಸಭಾ ಮಂಡಲದಲ್ಲಿ ಐಕ್ಯರಂಗ ಭಾರೀ ಬಹುಮತ ಗಳಿಸಲಿದೆ ಎಂದು ಶಾಸಕ ಎಕೆಎಂ ಅಶ್ರಫ್ ನುಡಿದರು. ಕೇಂದ್ರ, ರಾಜ್ಯ ಸರಕಾರಗಳ ಆಡಳಿತದಿಂದ ಜನರು ಬಡತನದತ್ತ ತಳ್ಳಲ್ಪಟ್ಟಿದ್ದು, ಶ್ರೀಮಂತರು ಹಾಗೂ ಬಡವರ ಮಧ್ಯೆಗಿನ ಅಂತರ ಹೆಚ್ಚಾಗಿದೆ ಎಂದು ಅವರು ದೂರಿದರು. ಬೆಲೆಯೇರಿಕೆಯಿಂದಾಗಿ ಜನರು ಸಂಕಷ್ಟಪಡುತ್ತಿದ್ದು ಈ ಚುನಾವಣೆಯಲ್ಲಿ ಐಕ್ಯರಂಗಕ್ಕೆ ಮತ ನೀಡುವರು ಎಂದು ಅವರು ಅಭಿಪ್ರಾಯಪಟ್ಟರು. ಮಂಗಲ್ಪಾಡಿ ಪಂಚಾಯತ್ ಸಹಿತ ಐಕ್ಯರಂಗವನ್ನು ಸೋಲಿಸಲು ಜನಪರ ಅಭ್ಯರ್ಥಿ ಎಂಬ ಹೆಸರಲ್ಲಿ ಒಕ್ಕೂಟ …

ಮಹಿಳೆಯ ವಿಷಯದಲ್ಲಿ ಉಂಟಾದ ವಿವಾದ: 20ರ ಯುವಕನನ್ನು ಕೊಲೆಗೈದು ತುಂಡುಮಾಡಿ ಕೊಳವೆಬಾವಿಗೆ ಹಾಕಿದ ಗೆಳೆಯ

ಮುಂಬಯಿ: ಮಹಿಳೆಯ ವಿಷಯದಲ್ಲಿ ಉಂಟಾದ ವಿವಾದದ ಬೆನ್ನಲ್ಲೇ 20 ವರ್ಷದ ಯುವಕನನ್ನು ಕೊಲೆಗೈದ ಬಳಿಕ ಮೃತದೇಹವನ್ನು ತುಂಡು ತುಂಡಾಗಿ ಮಾಡಿ ಗೆಳೆಯ ಕೊಳವೆ ಬಾವಿಯಲ್ಲಿ ಹಾಕಿದ ಘಟನೆ ನಡೆದಿದೆ. ಗುಜರಾತ್‌ನ ನಕತ್ರಾಣದಲ್ಲಿ ದಾರುಣ ಘಟನೆ ಸಂಭವಿಸಿದೆ. ಆರು ದಿನಗಳಿಂದ ನಾಪತ್ತೆಯಾಗಿದ್ದ 20ರ ಹರೆಯದ ಯುವಕನನ್ನು ಪೊಲೀಸರು ನಡೆಸಿದ ತನಿಖೆಯಲ್ಲಿ ಕೊಲೆಗೈದಿ ರುವುದು ಪತ್ತೆಹಚ್ಚಲಾಗಿದೆ. ಓರ್ವೆ ಮಹಿಳೆಗೆ ಸಂಬಂಧಿಸಿದ ವಿವಾದದ ಹಿನ್ನೆಲೆಯಲ್ಲಿ ಗೆಳೆಯ ಕೊಲೆಗೈದಿರುವು ದಾಗಿ ಪೊಲೀಸರು ತಿಳಿಸಿದ್ದಾರೆ. ಈ ತಿಂಗಳ 2ರಂದು ನಕತ್ರಾಣದ ನುರು ಗ್ರಾಮದಲ್ಲಿ ನಾಪತ್ತೆಯಾಗಿದ್ದ …