ಐತಿಹಾಸಿಕ ಗೆಲುವಿನ ಬೆನ್ನಲ್ಲೇ ಮುಖ್ಯಮಂತ್ರಿ ಗಾದಿಗೆ ಕಸರತ್ತು ಆರಂಭ: ಚರ್ಚೆಗೆ ಎಐಸಿಸಿ ವೀಕ್ಷಕರ ತಂಡ ಇಂದು ಆಗಮನ; ಮುಖ್ಯಮಂತ್ರಿ ರೇಸ್‌ನಲ್ಲಿ ಮೂವರು ಗಣ್ಯರು

ತಿರುವನಂತಪುರ: ವಿಧಾನಸಭಾ ಚುನಾವಣೆಯಲ್ಲಿ ಯುಡಿಎಫ್ 102 ಸ್ಥಾನಗಳನ್ನು ಪಡೆದು ಐತಿಹಾಸಿಕ ಗೆಲುವು ಸಾಧಿಸಿದ ಬೆನ್ನಲ್ಲೇ  ಕಾಂಗ್ರೆಸ್‌ನಲ್ಲಿ ಮುಖ್ಯಮಂತ್ರಿ ಗಾದಿಗಾಗಿ ಕಸರತ್ತು ಆರಂಭಗೊಂಡಿದೆ. ಮುಖ್ಯಮಂತ್ರಿ ರೇಸ್‌ನಲ್ಲಿ ವಿರೋಧಪಕ್ಷ ನಾಯಕ ವಿ.ಡಿ. ಸತೀಶನ್, ಕಾಂಗ್ರೆಸ್‌ನ ಹಿರಿಯ  ನೇತಾರ ರಮೇಶ್ ಚೆನ್ನಿತ್ತಲ ಮೊದಲ ಸ್ಥಾನದಲ್ಲಿದ್ದಾರೆ. ಇವರ ಹೊರತಾಗಿ ಕಾಂಗ್ರೆಸ್‌ನ ಕೇಂದ್ರ ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್ ಕೂಡಾ ಇದರಲ್ಲಿ ಒಳಗೊಂಡಿದ್ದಾರೆ. ಮುಖ್ಯಮಂತ್ರಿ ಆಯ್ಕೆ ಕುರಿತಾದ ಕ್ರಮದಲ್ಲಿ ಪಕ್ಷ ಈಗಾಗಲೇ ತೊಡಗಿದೆಯೆಂದೂ ಈ  ವಿಷಯದಲ್ಲಿ ಕೆಲವೇ ದಿನಗಳೊಳಗೆ ತೀರ್ಮಾನ ಉಂಟಾಗಲಿದೆಯೆಂದು ಇಂದು ಬೆಳಿಗ್ಗೆ …

ಗೆದ್ದ ಅಭ್ಯರ್ಥಿಗಳು: ಗರಿಷ್ಠ ಬಹುಮತ ಪಿ.ಕೆ.ಕುಂಞಾಲಿಕುಟ್ಟಿಗೆ, ಕನಿಷ್ಠ ಸಿ. ರವೀಂದ್ರನ್‌ರಿಗೆ

ತಿರುವನಂತಪುರ: ರಾಜ್ಯ ವಿಧಾನಸಭೆಗೆ ನಡೆದ ಚುನಾವಣೆಯಲ್ಲಿ ಮುಸ್ಲಿಂ ಲೀಗ್‌ನ ಹಿರಿಯ ನೇತಾರ ಹಾಗೂ ಮಲಪ್ಪುರಂ ವಿಧಾನಸಭಾ ಕ್ಷೇತ್ರದಲ್ಲಿ ಸ್ಪರ್ಧಿಸಿದ್ದ ಪಿ.ಕೆ. ಕುಂಞಾಲಿಕು ಟ್ಟಿಯವರು 85,074 ಮತಗಳ ಭಾರೀ ಅಂತರದಲ್ಲಿ ಗೆಲುವು ಸಾಧಿಸಿದ್ದಾರೆ. ಇದು ಈ ಚುನಾವಣೆಯಲ್ಲಿ ಸ್ಪರ್ಧಿಸಿ ಗೆದ್ದ ಅಭ್ಯರ್ಥಿಗಳ ಪೈಕಿ ಅತೀ ಹೆಚ್ಚು ಮತಗಳ ಅಂತರದಲ್ಲಿ ಗೆದ್ದ ಅಭ್ಯರ್ಥಿ ಎಂಬ ಹೆಗ್ಗಳಿಕೆಗೆ ಕುಂಞಾಲಿಕುಟ್ಟಿ ಪಾತ್ರರಾಗಿದ್ದಾರೆ. ಅತೀ ಕಡಿಮೆ ಮತಗಳ ಅಂತರದಲ್ಲಿ ಗೆಲುವು ಸಾಧಿಸಿದ ಅಭ್ಯರ್ಥಿಯೆಂದರೆ ಮಾಜಿ ಶಿಕ್ಷಣ ಸಚಿವ ಮಣಲೂರಿನ ಸಿಪಿಎಂ (ಎಡರಂಗ) ಸಿ. ರವೀಂದ್ರನ್ …

ಮಂಗಲ್ಪಾಡಿ ಪಂಚಾಯತ್ ವ್ಯಾಪ್ತಿಯಲ್ಲಿ ಮಳೆಗಾಲಪೂರ್ವ ಶುಚೀಕರಣಕ್ಕೆ ಚಾಲನೆ

ಉಪ್ಪಳ: ಮಳೆಗಾಲಪೂರ್ವ ಶುಚೀಕರಣ ಕಾರ್ಯಗಳಿಗೆ ಮಂಗಲ್ಪಾಡಿ ಪಂಚಾಯತ್ ಆಡಳಿತ ಸಮಿತಿ ನೇತೃತ್ವದಲ್ಲಿ ಚಾಲನೆ ನೀಡಲಾಯಿತು. ಉಪ್ಪಳಗೇಟ್ ಪರಿಸರದಲ್ಲಿ ಶುಚೀಕರಣ ಆರಂಭಿಸಲಾಗಿದೆ. ಪಂಚಾಯತ್ ಅಧ್ಯಕ್ಷ ಗೋಲ್ಡನ್ ಅಬ್ದುಲ್ ರಹಿಮಾನ್ ಉದ್ಘಾಟಿಸಿದರು. ಆರೋಗ್ಯ ಇಲಾಖೆ ಅಧಿಕಾರಿಗಳು, ಜನಪ್ರತಿನಿಧಿಗಳು, ಪಂಚಾಯತ್ ಅಧಿಕಾರಿಗಳು, ಆಶಾ ಕಾರ್ಯಕರ್ತೆಯರು, ಹಸಿರು ಕ್ರಿಯಾಸೇನೆ ಸದಸ್ಯೆಯರು ಸಹಕಾರ ನೀಡಿದರು. ಇದೇ ರೀತಿ ೨೪ ವಾರ್ಡ್‌ಗಳಲ್ಲೂ ಶುಚೀಕರಣ ನಡೆಯಲಿದೆ. ಸಾರ್ವಜನಿಕ ಸ್ಥಳಗಳಲ್ಲಿ ತ್ಯಾಜ್ಯ ಉಪೇಕ್ಷಿಸುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿ ಪಂಚಾಯತ್ ಅಧ್ಯಕ್ಷ ಗೋಲ್ಡನ್ ಅಬ್ದುಲ್ ರಹಿಮಾನ್ ತಿಳಿಸಿದ್ದಾರೆ.

ಮಂಜೇಶ್ವರದಲ್ಲಿ ಯುಡಿಎಫ್ ಪರ ಸಿಪಿಎಂ ಮತ ಸೋರಿಕೆ-ಕೆ.ಸುರೇಂದ್ರನ್

ಕಾಸರಗೋಡು: ಮಂಜೇಶ್ವರ ವಿಧಾನಸಭಾ ಕ್ಷೇತ್ರದಲ್ಲಿ ಈಬಾರಿ ಎಲ್‌ಡಿಎಫ್‌ನ ಮತಗಳು ಭಾರೀ ಪ್ರಮಾಣದಲ್ಲಿ ಯುಡಿಎಫ್ ಪರ ಸೋರಿಕೆಯುಂಟಾಗಿದೆಯೆಂದು ಮಂಜೇಶ್ವರ ವಿಧಾನಸಭಾ ಕ್ಷೇತ್ರದ ಎನ್‌ಡಿಎ ಅಭ್ಯರ್ಥಿ ಕೆ. ಸುರೇಂದ್ರನ್ ಆರೋಪಿಸಿದ್ದಾರೆ. ಈ ಚುನಾವಣೆಯಲ್ಲಿ ಎಲ್‌ಡಿಎಫ್‌ಗೆ 20,000ದಷ್ಟು ಮತಗಳು ನಷ್ಟಗೊಂಡಿವೆ. ಜಿಲ್ಲೆಯ ಎಲ್ಲಾ ವಿಧಾನಸಭಾ ಕ್ಷೇತ್ರಗಳಲ್ಲೂ ಮತೀಯ ಧ್ರುವೀಕರಣ ನಡೆದಿದೆ. ಮುಸ್ಲಿಂ ಲೀಗ್ ಮತ್ತು ಮತೀಯ ಮೂಲಭೂತವಾದಿ ಸಂಘಟನೆಗಳು ಮತೀಯ ಧ್ರುವೀಕರಣಕ್ಕೆ ಯತ್ನಿಸಿವೆ.ಮತೀಯ ಚಿಂತನೆ ಹೊಂದಿರುವ ಎಲ್ಲಾ ಮತೀಯ ಸಂಘಟನೆಗಳು ಆರಂಭದಿಂದಲೇ ಬಿಜೆಪಿಯನ್ನು ಪರಾಜಯಗೊಳಿಸಲು ಯತ್ನಿಸಿದ್ದವು. ಆದಾಗ್ಯೂ ಬಿಜೆಪಿಯ ಅಡಿಪಾಯ ಜಿಲ್ಲೆಯ …

ಮಂಜೇಶ್ವರದಲ್ಲಿ ಯುಡಿಎಫ್‌ಗೆ ಗೆಲುವು: ಉಪ್ಪಳದಲ್ಲಿ ವಿಜಯೋತ್ಸವ ಮೆರವಣಿಗೆ

ಉಪ್ಪಳ: ವಿಧಾನಸಭಾ ಕ್ಷೇತ್ರಕ್ಕೆ ನಡೆದ ಚುನಾವಣೆಯಲ್ಲಿ ಮಂಜೇಶ್ವರ ಮಂಡಲದಿಂದ ಸ್ಪರ್ಧಿಸಿದ ಐಕ್ಯರಂಗದ ಅಭ್ಯರ್ಥಿ ಎಕೆಎಂ ಅಶ್ರಫ್‌ರ ಭರ್ಜರಿ ಗೆಲುವು ಹಿನ್ನೆಲೆಯಲ್ಲಿ ಯುಡಿಎಫ್‌ನಿಂದ ಉಪ್ಪಳ ಸಹಿತ ವಿವಿಧ ಕಡೆಗಳಲ್ಲಿ ನಿನ್ನೆ ಸಂಜೆ ವಿಜಯೋತ್ಸವ ಆಚರಿಸಲಾಯಿತು. ಮೊಗ್ರಾಲ್ ಪುತ್ತೂರು, ಕುಂಬಳೆ ಭಾಗಗಳಿಂದ ವಾಹನಗಳ ಮೂಲಕ ಅಭ್ಯರ್ಥಿಯನ್ನು ತೆರೆದ ವಾಹನದಲ್ಲಿ ಮೆರವಣಿಗೆ ನಡೆಸಲಾಯಿತು. ಭಾರೀ ಸಂಖ್ಯೆಯಲ್ಲಿ ಕಾರ್ಯಕರ್ತರು ಭಾಗವಹಿಸಿದರು.

ಜಿಲ್ಲೆಯ 5 ವಿಧಾನಸಭಾ ಮಂಡಲಗಳ ಅಭ್ಯರ್ಥಿಗಳಿಗೆ ಲಭಿಸಿದ ಮತಗಳ ವಿವರ

ಕಾಸರಗೋಡು: ಜಿಲ್ಲೆಯ ಐದು ವಿಧಾನಸಭಾ ಮಂಡಲಗಳ ವಿಜೇತ ಅಭ್ಯರ್ಥಿಗಳು ಹಾಗೂ ವಿವಿಧ ಅಭ್ಯರ್ಥಿಗಳಿಗೆ ಲಭಿಸಿದ ಮತಗಳ ವಿವರ. ಮಂಜೇಶ್ವರದಲ್ಲಿ ಮುಸ್ಲಿಂ ಲೀಗ್‌ನ ಶಾಸಕ ಎಕೆಎಂ ಅಶ್ರಫ್ ಜಯ ಗಳಿಸಿದ್ದು 96,948 ಮತ ಇವರಿಗೆ ಲಭಿಸಿದೆ. 29,252 ಮತಗಳ ಅಂತರದಿAದ ಜಯ ಗಳಿಸಿದ್ದಾರೆ. ಬಿಜೆಪಿ ಅಭ್ಯರ್ಥಿ ಕೆ. ಸುರೇಂದ್ರನ್- 67,696, ಸಿಪಿಎಂನ ಕೆ.ಆರ್. ಜಯಾನಂದ -21,212,  ಬಹುಜನ ಸಮಾಜ್ ಪಾರ್ಟಿ ಅಭ್ಯರ್ಥಿ ಸಂಜೀವ- 212, ಸ್ವತಂತ್ರ ಅಭ್ಯರ್ಥಿಗಳಾದ ಜೀನ್ ಲವೀನಾ ಮೊಂತೇರೊ- 523, ಕಣ್ಣೂರು ಅಬ್ದುಲ್ಲ ಮಾಸ್ತರ್ – …

ಕೇರಳದಲ್ಲಿ ಯುಡಿಎಫ್ ತರಂಗ

ತಿರುವನಂತಪುರ: ದೇಶದ ಪಂಚರಾಜ್ಯಗಳ ವಿಧಾನಸಭೆಗಳಿಗೆ ನಡೆದ ಚುನಾವಣೆಯ ಮತ ಎಣಿಕೆ ಇಂದು ಬೆಳಿಗ್ಗೆ ಆರಂಭಗೊಂಡಿ ರುವಂತೆಯೇ  ಕೇರಳದ ಒಟ್ಟು 140 ವಿಧಾನಸಭಾ ಕ್ಷೇತ್ರಗಳ ಪೈಕಿ ಯುಡಿಎಫ್ ಪ್ರಚಂಡ ಗೆಲುವಿನತ್ತ ಸಾಗತೊಡಗಿದೆ. ಇದು ಕಳದ ಹತ್ತು ವರ್ಷಗಳ ಬಳಿಕ ಕೇರಳದ ಆಡಳಿತ ಯಂತ್ರ ಯುಡಿಎಫ್ ಕೈಗೆ ಮತ್ತೆ ಲಭಿಸುವದಾರಿ ಸುಗಮಗೊಳಿಸಿದೆ. ಕಳೆದ ಎರಡು ಚುನಾವಣೆಯಲ್ಲಿ ಸತತವಾಗಿ ಗೆದ್ದು ಹತ್ತು ವರ್ಷಗಳಿಂದ ಆಡಳಿತ ನಡೆಸುತ್ತಾ ಬಂದಿದ್ದ ಎಡರಂಗಕ್ಕೆ ಈ ಚುನಾವಣೆಯಲ್ಲಿ ಭಾರೀ ಹಿನ್ನಡೆ ಉಂಟಾಗಿದೆ. ಈತನಕ ನಡೆದ ಮತ ಎಣಿಕೆಯಲ್ಲಿ …

ರಾಷ್ಟ್ರೀಯ ಹೆದ್ದಾರಿಯ ಮೋರಿ ಸಂಕದೊಳಗೆ ಯುವಕನ ಮೃತದೇಹ ಪತ್ತೆ

ಕುಂಬಳೆ: ರಾಷ್ಟ್ರೀಯ ಹೆದ್ದಾರಿಯ ಮೋರಿ ಸಂಕದೊಳಗೆ ಯುವಕನೋರ್ವ ನಿಗೂಢ ರೀತಿ ಯಲ್ಲಿ ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಬಂದ್ಯೋಡು ಮಳ್ಳಂಗೈಯಲ್ಲಿರುವ ಮೋರಿ ಸಂಕದೊಳಗೆ ನಿನ್ನೆ ಸಂಜೆ ವೇಳೆ ಮೃತದೇಹ ಕಂಡುಬಂದಿದೆ. ಒಡಿಸ್ಸಾದ ಜೈಪುರ ಪತರಾಜಪುರ್ ಬಲಿಚಂದ್ರಪುರದ ಶಹಜುದ್ದೀನ್ ಸಹ (43) ಮೃತಪಟ್ಟ ವ್ಯಕ್ತಿಯೆಂದು ಗುರುತಿಸಲಾಗಿದೆ.  ಮೃತವ್ಯಕ್ತಿಯ ಅಂಗಿ ಜೇಬಿನಲ್ಲಿ ಆಧಾರ್ ಕಾರ್ಡ್ ಪತ್ತೆಯಾಗಿತ್ತು. ಅದರಲ್ಲಿರುವ ವಿಳಾಸದ ಆಧಾರದಲ್ಲಿ ಮೃತ ವ್ಯಕ್ತಿಯ ಗುರುತು ಹಚ್ಚಲಾಗಿದೆ. ಶಹಜುದ್ದೀನ್ ಸಹ ಒಡಿಸ್ಸಾದಿಂದ ಇಲ್ಲಿಗೆ ಕೆಲಸಕ್ಕೆ ಬಂದಿರಬಹುದೆಂದು ಅಂದಾಜಿ ಲಾಗಿದೆ. ಇದೇ ವೇಳೆ ಇವರು …

ಎರಡು ಮಕ್ಕಳ ತಾಯಿ ನಾಪತ್ತೆ

ಕಾಸರಗೋಡು: ಇಬ್ಬರು ಮಕ್ಕಳ ತಾಯಿಯಾಗಿರುವ ಯುವತಿ ನಾಪತ್ತೆಯಾದ ಬಗ್ಗೆ ವಿದ್ಯಾನಗರ ಪೊಲೀಸರಿಗೆ ದೂರು ನೀಡಲಾಗಿದೆ. ಕರ್ನಾಟಕದ ಹಾವೇರಿ ಜಿಲ್ಲೆಯ ಸವಣೂರು ತಾಲೂಕಿನ ಹೆಸರೂರು ನಿವಾಸಿ ರತ್ನ (30) ನಾಪತ್ತೆಯಾದ ಯುವತಿ. ಈಬಗ್ಗೆ ಆಕೆಯ ಪತಿ ದೇವಪ್ಪ ನೀಡಿದ ದೂರಿನಂತೆ ಪೊಲೀಸರು ಮಿಸ್ಸಿಂಗ್ ಪ್ರಕರಣ ದಾಖಲಿಸಿ ತನಿಖೆ ಆರಂಭಿಸಿದ್ದಾರೆ.  ವಲಸೆ ಕಾರ್ಮಿಕನಾಗಿರುವ  ಈ ದಂಪತಿ ಚೆರ್ಕಳದ ಕ್ವಾರ್ಟರ್ಸ್ ವೊಂದರಲ್ಲಿ ವಾಸಿಸುತ್ತಿದ್ದರು. ಮೇ 2ರಂದು ರತ್ನ ಕ್ವಾರ್ಟರ್ಸ್‌ನಿಂದ ಹೊರ ಹೋದವರು ನಂತರ ನಾಪತ್ತೆ ಯಾಗಿರುವುದಾಗಿ ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಲಾಗಿದೆ.

ವಾಹನ ಚಲಾಯಿಸುವ ಅಪ್ರಾಪ್ತ ಮಕ್ಕಳು:ಪೊಲೀಸ್ ಕಾರ್ಯಾಚರಣೆ ತೀವ್ರ; ಕುಂಬಳೆಯಲ್ಲಿ ಮೂರು ಮಂದಿ ವಿರುದ್ಧ ಕೇಸು

ಕುಂಬಳೆ: ಪ್ರಾಯಪೂರ್ತಿಯಾ ಗದ ಮಕ್ಕಳು ವಾಹನ ಚಲಾಯಿ ಸುವುದರ ವಿರುದ್ಧ ಕುಂಬಳೆಯಲ್ಲಿ ಪೊಲೀಸರು  ಕಠಿಣ ಕ್ರಮ ಕೈಗೊಳ್ಳ ತೊಡಗಿದ್ದಾರೆ. ಇದರಂತೆ  ಠಾಣಾ ವ್ಯಾಪ್ತಿಯ ವಿವಿಧ ಭಾಗಗಳಲ್ಲಿ ಎಸ್‌ಐ ಅನಂತಕೃಷ್ಣನ್ ಆರ್ ಮೆನೋನ್ ನಡೆಸಿದ ಕಾರ್ಯಾ ಚರಣೆ ವೇಳೆ ಸ್ಕೂಟರ್ ಚಲಾ ಯಿಸುತ್ತಿದ್ದ ಮೂವರು ಮಕ್ಕಳನ್ನು ಪತ್ತೆಹಚ್ಚಿದ್ದಾರೆ. ಅವರ ವಾಹನ ಗಳನ್ನು ಕಸ್ಟಡಿಗೆ ತೆಗೆದು ಆರ್‌ಸಿ ಮಾಲಕರ ವಿರುದ್ಧ ಕೇಸು ದಾಖಲಿಸಲಾಗಿದೆ. ಮೊನ್ನೆ ಮಧ್ಯಾಹ್ನ ಪೆರ್ವಾಡು ಜಂಕ್ಷನ್‌ನಲ್ಲಿ ನಡೆಸಿದ ವಾಹನ ತಪಾಸಣೆ ವೇಳೆ ಅಪರಿಮಿತ ವೇಗದಲ್ಲಿ ಸ್ಕೂಟರ್ ಚಲಾಯಿಸುತ್ತಾ …