ಕಡಲ್ಕೊರೆತ ತೀವ್ರಗೊಂಡ ಮಂಗಲ್ಪಾಡಿ ಪಂ. ವ್ಯಾಪ್ತಿಯ ಪ್ರದೇಶಗಳಿಗೆ ಜಿಲ್ಲಾಧಿಕಾರಿ ತುರ್ತು ಭೇಟಿಗೆ ಒಬಿಸಿ ಮೋರ್ಚಾ ಆಗ್ರಹ

ಉಪ್ಪಳ: ಮಂಗಲ್ಪಾಡಿ ಪಂಚಾಯತ್ ವ್ಯಾಪ್ತಿಯ ಶಿವಾಜಿ ನಗರ, ಶಾರದಾ ನಗರ ಮತ್ತು ಮೂಸೋಡಿ ಮುಂತಾದ ಸ್ಥಳಗಳಲ್ಲಿ ಸಮುದ್ರ ಕೊರೆತ ತೀವ್ರಗೊಂಡಿದೆ. ಜಿಲ್ಲಾಧಿಕಾರಿ ಈ ಸ್ಥಳಗಳಿಗೆ ತಕ್ಷಣ ಭೇಟಿ ನೀಡಿ ತುರ್ತು ನೆರವು ನೀಡಬೇಕು ಎಂದು ಒಬಿಸಿ ಮೋರ್ಚಾ ಕಾಸರಗೋಡು ಜಿಲ್ಲಾಧ್ಯಕ್ಷ ಕೆ.ಪಿ. ವಲ್ಸರಾಜ್ ಒತ್ತಾಯಿಸಿದರು. ಐಲ ಶಿವಾಜಿ ನಗರ ಕಡಲತೀರದಲ್ಲಿ ಮೀನುಗಾರರ ಬಲೆ ದುರಸ್ತಿ ಶೆಡ್ ಸಂಪೂರ್ಣವಾಗಿ ನಾಶವಾಗಿದ್ದು, ಕಡಲತೀರದಲ್ಲಿರುವ ಸಾರ್ವಜನಿಕ ಸ್ಮಶಾನವೂ ವಿನಾಶದ ಅಂಚಿನಲ್ಲಿದೆ. ಈ ಸ್ಥಳಗಳಲ್ಲಿನ ಮೀನುಗಾರರು ಭಯದಿಂದ ಬದುಕುತ್ತಿದ್ದಾರೆ. ರಾಜ್ಯ ಸರಕಾರ ಮತ್ತು …

ಮಂಜೇಶ್ವರದಲ್ಲಿ ಹಲಸುಹಣ್ಣಿನ ಮೇಳ ಇಂದಿನಿಂದ

ಮಂಜೇಶ್ವರ: ಸಪ್ತ ಭಾಷಾ ಸಂಗಮ ಭೂಮಿಯಾದ ಮಂಜೇಶ್ವರದಲ್ಲಿ ಪ್ರಥಮ ಬಾರಿಗೆ ಹಲಸು ಹಣ್ಣಿನ ಮೇಳ ಇಂದಿನಿಂದ ಜುಲೈ 12 ರ ತನಕ ಮಂಜೇಶ್ವರ ಮೆಜೆಸ್ಟಿಕ್ ಮ್ಯಾನರ್ (ಕಲಾ ಸ್ಪರ್ಶಂ) ಸಭಾಂಗಣದಲ್ಲಿ ಜರಗಲಿದೆ. ಬೆನಕ ಇವೆಂಟ್ಸ್ ಕುಂದಾಪುರ ನೇತೃತ್ವದಲ್ಲಿ ರಾಯರ ಭಕ್ತರು ಮಂಜೇಶ್ವರ, ಜಾನ್ಸಿ ಫ್ರೆಂಡ್ಸ್ ಜಾನ್ಸಿ ನಗರ ಮಂಜೇಶ್ವರ, ಟೀಮ್ ಮಂಜೇಶ್ವರ, ಕಟ್ಟೆ ಫ್ರೆಂಡ್ಸ್ ಮಾಡ, ತಿಲಕ್ ಗೆಳೆಯರ ಬಳಗ, ಚಾಣಕ್ಯ ನಗರ ಮಂಜೇಶ್ವರ, ನೇತಾಜಿ ಫ್ರೆಂಡ್ಸ್ ಕ್ಲಬ್ ಗಾಂಧಿನಗರ, ಮಂಜೇಶ್ವರ. ಟೀಮ್ ಕಲ್ಕಿ ಮಂಜೇಶ್ವರ, ಪ್ರತಾಪ್ …

ಕಾಲ್ನಡೆ ದಾರಿಗೆ ಮುರಿದು ಬಿದ್ದ ಮರ: ಸಂಚಾರ ಸಮಸ್ಯೆ:ತೆರವುಗೊಳಿಸಲು ಸಾರ್ವಜನಿಕರ ಒತ್ತಾಯ

ಮಂಜೇಶ್ವರ: ಮಂಜೇಶ್ವರ ರೈಲ್ವೇ ನಿಲ್ದಾಣ ಸಹಿತ ಮಂಜೇಶ್ವರ ಪೇಟೆ, ಶಾಲಾ-ಕಾಲೇಜುಗಳು, ಸ್ಥಳೀಯಾ ಡಳಿತ ಕಚೇರಿ, ಮೃಗಾಸ್ಪತ್ರೆಗಳಿಗೆ ತಲುಪಲು ಹತ್ತಿರದ ಕಾಲ್ನಡಿಗೆ ರಸ್ತೆಯಲ್ಲಿ ಸಂಪೂರ್ಣವಾಗಿ ಸಂಚಾರ ಮೊಟಕುಗೊಂಡಿದೆ. ರಸ್ತೆಗೆ ಅಡ್ಡವಾಗಿ ಬಿದ್ದಿರುವ ಬೃಹತ್ ಮರವನ್ನು ತೆರವುಗೊಳಿಸಲು ತಿಂಗಳು ಕಳೆದರೂ ಸಂಬAಧಪಟ್ಟವರು ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ವಿದ್ಯಾರ್ಥಿ ಗಳು, ಸರಕಾರಿ ಕಚೇರಿ ಸಿಬ್ಬಂದಿಗಳು ಹಾಗೂ ರೈಲ್ವೇ ಪ್ರಯಾಣಿಕರು ಸೇರಿ ದಂತೆ ನೂರಾರು ಮಂದಿ ಪ್ರತಿದಿನ ಬಳಸುವ ಕಿರುದಾರಿ ಇದಾಗಿದ್ದು, ಬಿದ್ದಿರುವ ಮರದಿಂದಾಗಿ ಸಂಚಾರಕ್ಕೆ ತೊಂದರೆಯಾಗುತ್ತಿದೆ. …

ಅನಾರೋಗ್ಯ: ಗೃಹಿಣಿ ನಿಧನ

ಬದಿಯಡ್ಕ: ಅನಾರೋಗ್ಯ ತಗಲಿ ಚಿಕಿತ್ಸೆಯಲ್ಲಿದ್ದ ಗೃಹಿಣಿ ನಿಧನ ಹೊಂದಿದರು. ಕುಂಬ್ಡಾಜೆ ಕೊಳಂಬೆ ನಿವಾಸಿ, ಹೋಟೆಲ್ ಮಾಲಕ ವಿಠಲ ರೈ ಯವರ ಪತ್ನಿ ಬೇಬಿ (52) ನಿಧನ ಹೊಂದಿದರು. ಕಳೆದ ಕೆಲವು ಸಮಯದಿಂದ ರೋಗ ತಗಲಿ ಚಿಕಿತ್ಸೆಯಲ್ಲಿದ್ದರು. ಮೃತರು ಪತಿ, ಮಕ್ಕಳಾದ ವಿಜಿತ್, ಸುಜಿತ್ ಹಾಗೂ ಅಪಾರ ಬಂಧು ಮಿತ್ರರನ್ನು ಅಗಲಿದ್ದಾರೆ.

ವೃದ್ಧ ನೇಣುಬಿಗಿದು ಸಾವಿಗೀಡಾದ ಸ್ಥಿತಿಯಲ್ಲಿ ಪತ್ತೆ

ಕಾಸರಗೋಡು:?ಮುಳಿಯಾರು ಪಂಚಾಯತ್‌ನ ಕಾನತ್ತೂರಿನಲ್ಲಿ ವೃದ್ಧ  ನೇಣು ಬಿಗಿದು ಸಾವಿಗೀಡಾದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಮೂಡೇಂವೀಡ್ ಕುಂಞಿರಾಮನ್  (ತರಯಿಲಚ್ಚನ್-84) ಎಂಬವರು  ಮೃತಪಟ್ಟ ವ್ಯಕ್ತಿ. ನಿನ್ನೆ ರಾತ್ರಿ ಆಹಾರ ಸೇವಿಸಿದ ಬಳಿಕ ನಿದ್ರಿಸಿದ್ದರು. ಇಂದು ಬೆಳಿಗ್ಗೆ ಮನೆಯೊಳಗೆ ಇವರು ಕಾಣದ ಹಿನ್ನೆಲೆಯಲ್ಲಿ ಹುಡುಕಿದಾಗ ಮನೆಯ ಹಿಂಭಾಗದಲ್ಲಿ  ನೇಣುಬಿಗಿದು ಸಾವಿಗೀಡಾದ ಸ್ಥಿತಿಯಲ್ಲಿ ಪತ್ತೆಯಾಗಿ ದ್ದಾರೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಕಾಸರಗೋಡು ಜನರಲ್ ಆಸ್ಪತ್ರೆಗೆ ತಲುಪಿಸಲಾಗಿದೆ. ಆತ್ಮಹತ್ಯೆಗೆ ಕಾರಣ ತಿಳಿದುಬಂದಿಲ್ಲ. ಆದೂರು ಪೊಲೀಸರು ಅಸಹಜ ಸಾವು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಮೃತರು ಪತ್ನಿ ಕಮಲಾಕ್ಷಿ, ಮಕ್ಕಳಾದ …

ಕಾರಿನಲ್ಲಿ ಮಾದಕವಸ್ತು ಸಹಿತ  ಸಂಚರಿಸುತ್ತಿದ್ದ ಮೂವರ ಬಂಧನ

ಕಾಸರಗೋಡು: ಕಾರಿನಲ್ಲಿ ಸಾಗಿಸುತ್ತಿದ್ದ ಎಂಡಿಎಂಎ ಸಹಿತ ಮೂವರನ್ನು  ಬಂಧಿಸಲಾಗಿದೆ. ಪಟ್ಲ ನಿವಾಸಿ  ಅಬ್ದುಲ್ ರೌಫ್, ಕರ್ನಾಟಕದ  ಸುಳ್ಯ ಕೋಣಡ್ಕಪದವು ನಿವಾಸಿ ಕೌಶಿಕ್, ಅಡೂರು ಪೇರಾಮರವ ನಿವಾಸಿ ಮುಹಮ್ಮದ್ ಜಸೀರ್ ಯು.ಕೆ ಎಂಬಿವರನ್ನು ಕಾಸರಗೋಡು ಎಕ್ಸೈಸ್ ರೇಂಜ್ ಆಫೀಸರ್ ಅಶ್ವಿನ್ ಟಿ.ಕೆ ನೇತೃತ್ವದ ತಂಡ ಬಂಧಿಸಿದೆ. ಆರೋಪಿಗಳ ಕೈಯಿಂದ  1.899 ಗ್ರಾಂ ಎಂಡಿಎಂಎ ವಶಪಡಿಸಲಾಗಿದೆ.  ಈ ಸಂಬಂಧ  ಎನ್‌ಡಿಪಿಎಸ್ ಪ್ರಕರಣ ದಾಖಲಿಸಲಾಗಿದೆ. ನಿನ್ನೆ ರಾತ್ರಿ 7.10ರ ವೇಳೆ ಚೆಂಗಳ ಸಂತೋಷ್‌ನಗರದಲ್ಲಿ ಆರೋಪಿಗಳು ಸಂಚರಿಸುತ್ತಿದ್ದ ಮಾರುತಿ ಆಲ್ಟೋ ಕಾರನ್ನು  ತಡೆದು …

ಸ್ಕೂಟರ್ ಅಪಘಾತದಲ್ಲಿ ಗಾಯಗೊಂಡ ಲಾಟರಿ ಏಜೆಂಟ್ ಮೃತ್ಯು

ಕಾಸರಗೋಡು:ಸ್ಕೂಟರ್ ಅಪಘಾತದಲ್ಲಿ ಗಂಭೀರ ಗಾಯ ಗೊಂಡು ಚಿಕಿತ್ಸೆಯಲ್ಲಿದ್ದ ಲಾಟರಿ ಮಾರಾಟಗಾರ ಮೃತಪಟ್ಟರು.  ಚೌಕಿ ಕಾವುಗೋಳಿ ಶ್ವೇತ ನಿವಾಸ್‌ನ ದಿ| ಆನಂದ ಎಂಬವರ ಪುತ್ರ ಲೋಕೇಶ್ (42) ಮೃತಪಟ್ಟ ದುರ್ದೈವಿ. ಇವರು ವಿದ್ಯಾನಗರ ಜಿಲ್ಲಾ ಕೈಗಾರಿಕಾ ಕೇಂದ್ರ ಸಮೀಪ ಲಾಟರಿ ಸ್ಟಾಲ್ ನಡೆಸುತ್ತಿದ್ದರು. ಒಂದು ತಿಂಗಳ ಹಿಂದೆ  ಇವರು ಸಂಚರಿಸುತ್ತಿದ್ದ ಸ್ಕೂಟರ್ ಮಂಗಲ್ಪಾಡಿ ಶಾಲೆ ಸಮೀಪ ರಸ್ತೆಯಲ್ಲಿ ಮಗುಚಿಬಿದ್ದು ಇವರು ಗಂಭೀರ ಗಾಯಗೊಂ ಡಿದ್ದರು. ಇದರಿಂದ ಎರಡು ವಾರ   ಮಂಗಳೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆಯಲ್ಲಿ ದ್ದರು. ಅನಂತರ ನುಳ್ಳಿಪ್ಪಾಡಿಯ ಖಾಸಗಿ …

ಕೆಲಸಕ್ಕೆಂದು ಯುವಕನನ್ನು ಕರೆದೊಯ್ದು ಮೊಬೈಲ್ ಫೋನ್ ಲಪಟಾವಣೆ: ಮೂವರ ವಿರುದ್ಧ ಕೇಸು

ಕಾಸರಗೋಡು: ಕೆಲಸ ಇದೆಯೆಂದು ತಿಳಿಸಿ  ಯುವಕನನ್ನು ಕರೆದೊಯ್ದು ಹಲ್ಲೆಗೈದ ಬಳಿಕ ಮೊಬೈಲ್ ಫೋನ್ ಲಪಟಾಯಿಸಿರು ವುದಾಗಿ ದೂರಲಾಗಿದೆ. ಚೆಂಗಳ ಇಂದಿರಾನಗರದ ಕ್ವಾರ್ಟರ್ಸ್‌ನಲ್ಲಿ ವಾಸಿಸುವ ಪಶ್ಚಿಮ ಬಂಗಾಲ ನಿವಾಸಿ ರಾಮನ್ ಬರ್ಮನ್ (33) ಎಂಬಾತನಿಗೆ ಹಲ್ಲೆಗೈಯ್ಯಲಾಗಿದೆ.  ಇವರು ನೀಡಿದ ದೂರಿನಂತೆ ಮೂರು ಮಂದಿ ವಿರುದ್ಧ ಮೇಲ್ಪರಂಬ ಪೊಲೀಸರು ಕೇಸು ದಾಖಲಿಸಿಕೊಂಡಿ ದ್ದಾರೆ. ಮೊನ್ನೆ ರಾತ್ರಿ 8.30ರ ವೇಳೆ ಇಂದಿರಾನಗರದ ಕ್ವಾರ್ಟರ್ಸ್‌ಗೆ ತಲುಪಿದ ಮೂರು ಮಂದಿ ಕೆಲಸವಿದೆಯೆಂದು ತಿಳಿಸಿ ರಾಮನ್ ಬರ್ಮನ್‌ರನ್ನು  ಕರೆದೊಯ್ದಿದ್ದರು. ಚಟ್ಟಂಚಾಲ್ ರಾಷ್ಟ್ರೀಯ ಹೆದ್ದಾರಿಯ ಫ್ಲೈಓವರ್  ಕೊನೆಗೊಳ್ಳುವ …

ಕುಂಬಳೆ ಶಾಲೆ  ವಿದ್ಯಾರ್ಥಿಗೆ  ವಿದ್ಯಾರ್ಥಿಗಳಿಂದ ರ‍್ಯಾಗಿಂಗ್: ಗಾಯಾಳು ಆಸ್ಪತ್ರೆಯಲ್ಲಿ

ಕುಂಬಳೆ: ಕುಂಬಳೆ ಸರಕಾರಿ ಹೈಯರ್ ಸೆಕೆಂಡರಿ ಶಾಲೆಯ 9ನೇ ತರಗತಿ ವಿದ್ಯಾರ್ಥಿಯನ್ನು ಪೇಟೆಯಲ್ಲಿ  ರ‍್ಯಾಗಿಂಗ್ ನಡೆಸಲು ಹಾಗೂ ಹಲ್ಲೆಗೈಯ್ಯಲು ಯತ್ನಿಸಿದ ಬಗ್ಗೆ ದೂರಲಾಗಿದೆ. ಗಾಯಗೊಂಡ ಒಳಯಂ ನಿವಾಸಿಯಾದ 9ನೇ ತರಗತಿ ವಿದ್ಯಾರ್ಥಿಯನ್ನು ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ. ನಿನ್ನೆ ಸಂಜೆ  ಶಾಲೆ ಬಿಟ್ಟು ಮನೆಗೆ ಮರಳುತ್ತಿದ್ದ ೯ನೇ ತರಗತಿ ವಿದ್ಯಾರ್ಥಿಯನ್ನು 10ನೇ ತರಗತಿಯ 10 ಮಂದಿ ವಿದ್ಯಾರ್ಥಿಗಳು ಸೇರಿ ಹಲ್ಲೆಗೈದಿರುವು ದಾಗಿ ದೂರಲಾಗಿದೆ. ವಾಹನದ ಕೀಲಿ ಕೈಯಿಂದ ವಿದ್ಯಾರ್ಥಿಗೆ ಇರಿದಿರುವುದಾಗಿಯೂ ದೂರಿನಲ್ಲಿ ತಿಳಿಸಲಾಗಿದೆ. ಇದೇ ವಿದ್ಯಾರ್ಥಿಗಳ ತಂಡ ಶಾಲೆಯಲ್ಲಿ  ವಿದ್ಯಾರ್ಥಿಗೆ …

ಎಟಿಎಂ ಕೌಂಟರ್‌ನ ಗಾಜು ದೇಹದ ಮೇಲೆ ಬಿದ್ದು ಮೃತಪಟ್ಟ ಬ್ಯಾಂಕ್ ನೌಕರನ ಮೃತದೇಹ  ಅಂತ್ಯಸಂಸ್ಕಾರ

ಕಾಸರಗೋಡು:  ಎಟಿಎಂ ಕೌಂಟರ್‌ನ ಗಾಜು ದೇಹದ ಮೇಲೆ ಬಿದ್ದು ಮೃತಪಟ್ಟ ಬ್ಯಾಂಕ್ ನೌಕರನ ಮೃತದೇಹವನ್ನು ಕಾಞಂಗಾಡ್‌ನ ಮನೆಗೆ ತಲುಪಿಸಿ ಅಂತ್ಯಸಂಸ್ಕಾರ ನಡೆಸಲಾಯಿತು. ಕಾಞಂಗಾಡ್ ಶ್ರೀ ನಿತ್ಯಾನಂದ ಆಶ್ರಮ ಸಮೀಪದ  ಬಾಲಕೃಷ್ಣನ್ (56) ಮೃತಪಟ್ಟ ದುರ್ದೈವಿಯಾಗಿದ್ದಾರೆ. ಕರ್ನಾಟಕದ ಕೋ-ಆಪರೇಟಿವ್  ಬ್ಯಾಂಕ್‌ನ ಮಂಗಳೂರು ಶಾಖೆಯಲ್ಲಿ ಇವರು ಅಟೆಂಡರ್ ಆಗಿದ್ದರು. ವಾರದಲ್ಲಿ ಒಂದು ದಿನ ಮಾತ್ರವೇ  ಕಾಞಂಗಾಡ್‌ನ ಮನೆಗೆ ಬರುತ್ತಿದ್ದ ಇವರು ಇತರ ದಿನಗಳಲ್ಲಿ ಮಂಗಳೂರಿನಲ್ಲಿ ವಾಸಿಸುತ್ತಿದ್ದರು. ಮೊನ್ನೆ ಕೆಲಸ ಮುಗಿದ ಬಳಿಕ ಬ್ಯಾಂಕ್‌ನ ಸಮೀಪದ ಎಟಿಎಂ ಕೌಂಟರ್‌ಗೆ ಬಾಲಕೃಷ್ಣನ್ ತೆರಳಿದ್ದರೆನ್ನಲಾಗಿದೆ. …