ಬೈಕ್ ಟ್ಯಾಂಕರ್ ಲಾರಿಗೆ ಢಿಕ್ಕಿ: ಇಬ್ಬರಿಗೆ ಗಂಭೀರ

ಮಂಜೇಶ್ವರ: ವಾಮಂಜೂರು ಅಬಕಾರಿ ಚೆಕ್‌ಪೋಸ್ಟ್ ಸಮೀಪ ನಿನ್ನೆ ಸಂಜೆ ಸಂಭವಿಸಿದ ವಾಹನ ಅಪಘಾತದಲ್ಲಿ ಇಬ್ಬರು ಗಂಭೀರ ಗಾಯಗೊಂಡಿದ್ದಾರೆ. ಬೈಕ್‌ನಲ್ಲಿ ಸಂಚರಿಸುತ್ತಿದ್ದ ಕೋಡಿಬೈಲು  ಬಳಂಕುಡೆ ನಿವಾಸಿ ಹರೀಶ್ (40), ಚಿಪ್ಪಾರು ಕಡೆಂಕೋಡಿಯ ಕಿರಣ್ (34) ಎಂಬಿವರು ಗಾಯಗೊಂಡಿದ್ದು ಇವರನ್ನು ಮಂಗಳೂರಿನ ವೆನ್ಲಾಕ್ ಆಸತ್ರೆಯಲ್ಲಿ  ದಾಖಲಿಸಲಾಗಿದೆ. ಹರೀಶ್ ಹಾಗೂ ಕಿರಣ್ ಸಂಚರಿಸುತ್ತಿದ್ದ ಬೈಕ್ ಟ್ಯಾಂಕರ್ ಲಾರಿಗೆ ಢಿಕ್ಕಿ ಹೊಡೆದು ಮಗುಚಿ ಬಿದ್ದಿದೆ. ಈ ವೇಳೆ ಹಿಂಬದಿಯಿಂದ ಬಂದ ಕಾರು ಅವರಿಗೆ ಢಿಕ್ಕಿ ಹೊಡೆದಿದೆ. ಹರೀಶ್ ಹಾಗೂ ಕಿರಣ್ ತಲಪ್ಪಾಡಿ ಭಾಗದಿಂದ …

ಮೂನಾಂಕಡವ್‌ನಲ್ಲಿ ಮತ್ತೆ ಅಪಘಾತ : ತರಕಾರಿ ಹೇರಿ ಬರುತ್ತಿದ್ದ ಪಿಕಪ್ ಚರಂಡಿಗೆ

ಕಾಸರಗೋಡು: ಪೆರಿಯ ಮೂನಾಂಕಡವ್‌ನಲ್ಲಿ ಮತ್ತೆ ವಾಹನ ಅಪಘಾತ ಸಂಭವಿಸಿದೆ. ಸುಳ್ಯದಿಂದ ತರಕಾರಿಯೊಂದಿಗೆ ಕಾಞಂಗಾಡ್‌ಗೆ ಆಗಮಿಸುತ್ತಿದ್ದ ಪಿಕಪ್ ಅಪಘಾತಕ್ಕೀ ಡಾಗಿದೆ. ಮೂನಾಂಕಡವ್ ಸೇತುವೆ ದಾಟಿ ಏರು ರಸ್ತೆಯಲ್ಲಿ ಹತ್ತುತ್ತಿದ್ದ ವೇಳೆ ಪಿಕಪ್ ಹಿಂದಕ್ಕೆ ಚಲಿಸಿ ಚರಂಡಿಗೆ ಬಿದ್ದಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ. ಪಿಕಪ್‌ನ ಚಕ್ರ ಚರಂಡಿಗೆ ತಾಗಿ ನಿಲ್ಲದಿರುತ್ತಿದ್ದರೆ ಭಾರೀ ದೊಡ್ಡ ಅಪಾಯ ಉಂಟಾಗುತ್ತಿತ್ತೆಂದು ಸ್ಥಳೀಯರು ತಿಳಿಸಿದ್ದಾರೆ. ಮೂನಾಂಕಡವ್ ಏರು ರಸ್ತೆ ಖಾಯಂ ಅಪಘಾತ ಕೇಂದ್ರವಾಗಿ ಬದಲಾಗಿದೆ ಎಂದು ದೂರಲಾಗಿದೆ. ಇದುವರೆಗೆ ಇಲ್ಲಿ ಸಂಭವಿಸಿದ ಅಪಘಾತಗಳಲ್ಲಿ ೭ ಮಂದಿಗೆ …

ಯುವಕ ಕಾಡಿನಲ್ಲಿ ನೇಣುಬಿಗಿದು ಸಾವಿಗೀಡಾದ ಸ್ಥಿತಿಯಲ್ಲಿ ಪತ್ತೆ

ಪೆರ್ಲ: ಯುವಕನೋರ್ವ ಕಾಡಿನಲ್ಲಿ ನೇಣುಬಿಗಿದು ಸಾವಿಗೀಡಾದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾನೆ. ಪೆರ್ಲ ಬಳಿಯ ಪಳ್ಳಕಾನದ ಮುರಳಿಮೋಹನ್ (36) ಸಾವಿಗೀಡಾದ ಯುವಕ. ಇವರು ಕೂಲಿ ಕಾರ್ಮಿಕನಾಗಿದ್ದರು. ನೀರ್ಚಾಲು ಬಳಿಯ ಕಾನತ್ತಿಲದಲ್ಲಿರುವ  ಪತ್ನಿ ಮನೆಯ ಸಮೀಪ ಕಾಡಿನಲ್ಲಿ ಇವರು ನೇಣುಬಿಗಿದು ಸಾವಿಗೀಡಾದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ರಾಮನಾಯ್ಕ-ಜಯಶ್ರೀ  ದಂಪತಿಯ ಪುತ್ರನಾದ ಮತರು ಪತ್ನಿ ರಮ್ಯ ಮಕ್ಕಳಾದ ಅಶ್ವಿನ್, ಕಾರ್ತಿಕ್ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ. ಘಟನೆ ಬಗ್ಗೆ ಬದಿಯಡ್ಕ ಪೊಲೀಸರು ಕೇಸು ದಾಖಲಿಸಿಕೊಂಡಿದ್ದಾರೆ.

ಹೊಸಂಗಡಿ ಬಳಿ ಯುವಕನ ಕೊಲೆ ಪ್ರಕರಣ: ಬಂಧಿತ ಆರೋಪಿಗೆ ರಿಮಾಂಡ್; ಘಟನೆಯ 24 ಗಂಟೆಯೊಳಗೆ ಆರೋಪಿಯನ್ನು ಬಂಧಿಸಿದ ಪೊಲೀಸ್

ಉಪ್ಪಳ: ಹೊಸಂಗಡಿ ಬಳಿಯ ಅಂಗಡಿಪದವಿನಲ್ಲಿ ಯುವಕನನ್ನು ಇರಿದು ಕೊಲೆಗೈದ ಪ್ರಕರಣದಲ್ಲಿ ಸೆರೆಗೀಡಾದ ಆರೋಪಿಗೆ ಕಾಸರಗೋಡು ನ್ಯಾಯಾಲಯ ರಿಮಾಂಡ್ ವಿಧಿಸಿದೆ. ಕರ್ನಾಟಕದ ದಾವಣಗೆರೆ ಹಾರಪ್ಪನ ಹಳ್ಳಿಯ ರಾಮ್ ನಾಯ್ಕ್ ಯಾನೆ ರಮೇಶ್ (31) ಎಂಬಾತನನ್ನು ಮಂಜೇಶ್ವರ ಪೊಲೀಸ್ ಇನ್‌ಸ್ಪೆಕ್ಟರ್ ಎಂ.ವಿ. ವಿಷ್ಣು ಪ್ರಸಾದ್ ನೇತೃತ್ವದಲ್ಲಿ  ಪೊಲೀಸ್ ತಂಡ ಬಂಧಿಸಿದೆ. ಕರ್ನಾಟಕದ ಹೊಸಪೇಟೆ  ಲಿಂಗನಾಯಕನ ಹಳ್ಳಿ ನಿವಾಸಿ ದಿ|  ಪಿರಾ  ನಾಯ್ಕರ ಪುತ್ರ ರಮೇಶ್ (38) ಎಂಬವರನ್ನು  ಕೊಲೆಗೈದ ಪ್ರಕರಣದಲ್ಲಿ ರಾಮ್ ನಾಯ್ಕನನ್ನು ಬಂಧಿಸಲಾಗಿದೆ. ಕೊಲೆ ಕೃತ್ಯದ ಬಳಿಕ ಹೊಸಂಗಡಿ …

ಬ್ಲಡ್ ಕ್ಯಾನ್ಸರ್ ವಿದ್ಯಾರ್ಥಿನಿ ಮೃತ್ಯು

ಉಪ್ಪಳ: ಪುಳಿಕುತ್ತಿ ಸಮೀಪದ ಅಗರ್ತಿಮೂಲೆ ನಿವಾಸಿ ಪೌಲೋಸ್ ಕೆ.ಪಿ-ಶಾಂತಿ ಡಿಸೋಜಾರ ಪುತ್ರಿ, ವಿದ್ಯಾರ್ಥಿನಿ ನಿಶ್ಮಿತಾ ಕೆ.ಪಿ (18) ನಿಧನ ಹೊಂದಿದರು. ಕಳೆದ ಎಂಟು ತಿಂಗಳಿAದ ಬ್ಲಡ್ ಕ್ಯಾನ್ಸರ್‌ಗೆ ತುತ್ತಾಗಿ ಹಲವಾರು ಕಡೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಈಕೆಗಾಗಿ ಊರವರು ಹಾಗೂ ಇತರರು ಸೇರಿ ಕೊಂಡು ಸುಮಾರು 140 ಬಾಟ್ಲಿ ರಕ್ತವನ್ನು ನೀಣರುವುದಾಗಿ ಮನೆಯವರು ತಿಳಿಸಿದ್ದಾರೆ. ಆದರೆ ಶುಕ್ರವಾರ ಸಂಜೆ ಆಸ್ಪತ್ರೆಯಲ್ಲಿ ನಿಧನ ಹೊಂದಿದರು. ಈಕೆ ಮಂಗಳೂರಿನ ಬಲ್ಮಠ ಸರಕಾರಿ ಕಾಲೇಜಿನ ವಿದ್ಯಾರ್ಥಿನಿಯಾಗಿದ್ದಾರೆ. ಕಯ್ಯಾರು ಚರ್ಚ್ನಲ್ಲಿ ಶನಿವಾರ ಮಧ್ಯಾಹ್ನ ಅಂತ್ಯಸAಸ್ಕಾರ …

ಯುವ ಪಂಡಿತ ಶಾಂತಿಪಳ್ಳದ ಶಾಹುಲ್ ಹಮೀದ್ ಹಿಮಮಿ ನಿಧನ

ಕುಂಬಳೆ: ಶಾಂತಿಪಳ್ಳ ನಿವಾಸಿ ಶಾಹುಲ್ ಹಮೀದ್ ಹಿಮಮಿ (29) ನಿಧನಹೊಂದಿದರು. ಎಸ್‌ಎಸ್‌ಎಫ್ ಕುಂಬಳೆ ಡಿವಿಶನ್ ಕಾರ್ಯದರ್ಶಿ ಯಾಗಿದ್ದರು. ಅಲ್ಲದೆ ಮುಹಿಮ್ಮಾತ್ ಕುಲ್ಲಿಯ್ಯ 2019 ಬ್ಯಾಚ್‌ನ ಹಿಮಮಿ ಪಂಡಿತನೂ, ಶಾಂತಿಪಳ್ಳದಲ್ಲಿ  ಮುಹಿಮ್ಮಾತ್‌ನ ಅಧೀನದಲ್ಲಿರುವ ಸೆಕೆಂಡರಿ ಮದ್ರಸದ ಮುಅಲ್ಲಿಮ್ ಆಗಿದ್ದರು.  ಮೃತರು ತಂದೆ ಅಬ್ಬಾಸ್, ತಾಯಿ ಖದೀಜ, ಸಹೋದರ-ಸಹೋ ದರಿಯರಾದ ಆಮಿನ, ಖೈರುನ್ನೀಸ, ಅಸ್ಮೀನ, ಶಹನಾ, ಶಂನ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ. ಮೃತದೇಹದ ಅಂತ್ಯಸಂಸ್ಕಾರ ಶಾಂತಿಪಳ್ಳ ತಖ್‌ವ ಜುಮಾ ಮಸೀದಿ ಪರಿಸರದಲ್ಲಿ ನಡೆಸಲಾಯಿತು.

ಸಿಪಿಐ ಸ್ಥಳೀಯನೇತಾರ ನೇಣುಬಿಗಿದು ಸಾವಿಗೀಡಾದ ಸ್ಥಿತಿಯಲ್ಲಿ ಪತ್ತೆ

ಕಾಸರಗೋಡು: ಸಿಪಿಐ ಕುತ್ತಿಕ್ಕೋಲು ಲೋಕಲ್ ಕಮಿಟಿ ಸದಸ್ಯ ಞೆರು ಚೆರಿಯಕಯ ಎಂಬಲ್ಲಿನ ಅಶೋಕನ್ (49) ಇಂದು ಬೆಳಿಗ್ಗೆ ಹೋಟೆಲ್‌ನ ಅಡುಗೆ ಕೋಣೆಯಲ್ಲಿ ನೇಣುಬಿಗಿದು ಸಾವಿಗೀಡಾದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಹೋಟೆಲ್‌ಗೆ ಚಹಾ ಕುಡಿಯಲು ತಲುಪಿದ ವ್ಯಕ್ತಿ ತಿಳಿಸಿದ ಮಾಹಿತಿಯಂತೆ ನಾಗರಿಕರು ಕೂಡಲೇ ತಲುಪಿ ಅವರನ್ನು ಆಸ್ಪತ್ರೆಗೆ ತಲುಪಿಸಿದರೂ ಜೀವ ರಕ್ಷಿಸಲಾಗಲಿಲ್ಲ. ಅಶೋಕನ್ ಹಲವು ವರ್ಷಗಳಿಂದ ಕುತ್ತಿಕೋಲ್‌ನಲ್ಲಿ ಹೋಟೆಲ್ ನಡೆಸುತ್ತಿದ್ದರು.

ಕನಿಷ್ಠ ಪ್ರಯಾಣದರ 15 ರೂ.ಗೇರಿಸುವಂತೆ ಒತ್ತಾಯಿಸಿ ಖಾಸಗಿ ಬಸ್‌ಗಳ  ಚಳವಳಿ: ಘೋಷಣೆ ನಾಳೆ

ಕಾಸರಗೋಡು: ಕನಿಷ್ಠ ಪ್ರಯಾಣ ದರವನ್ನು 15 ರೂಪಾಯಿಗೇರಿಸ ಬೇಕೆಂಬ ಬೇಡಿಕೆಯನ್ನು ಮುಂದಿರಿಸಿ ಕೊಂಡು ರಾಜ್ಯದ ಖಾಸಗಿ ಬಸ್‌ಗಳು ಅನಿರ್ಧಿಷ್ಟಾವಧಿ ಚಳವಳಿ ನಡೆಸಲು ಮಾಲಕರು ನಿರ್ಧರಿಸಿದ್ದಾರೆ. ಚಳವಳಿ ಬಗ್ಗೆ ನಾಳೆ ಘೋಷಿಸಲಾಗುವುದು.  ಕೆಎಸ್‌ಆರ್‌ಟಿಸಿಯ  ಪ್ರಿಯದರ್ಶಿನಿ ಉಚಿತ ಪ್ರಯಾಣ ಯೋಜನೆ ಯಿಂದಾಗಿ ಖಾಸಗಿ ಸ್ ವಲಯಕ್ಕೆ ಉಂಟಾಗುವ ನಷ್ಟಕ್ಕೆ ಸಂಬಂಧಿಸಿ ಅಧ್ಯಯನ ನಡೆಸಲು ನೇಮಿಸಿದ ತಜ್ಞ ಸಮಿತಿ ಸಲ್ಲಿಸಿದ ವರದಿಯ ಶಿಫಾರಸ್ಸುಗಳು ಸಂಪೂರ್ಣವಲ್ಲವೆಂದು ಖಾಸಗಿ ಬಸ್ ಮಾಲಕರು ತಿಳಿಸಿದ್ದಾರೆ. ಕನಿಷ್ಠ ಪ್ರಯಾಣದರವನ್ನು 15ರೂ.ಗೇರಿಸಬೇಕೆಂಬುವುದಾಗಿದೆ ಬಸ್ ಮಾಲಕರ ಪ್ರಧಾನ ಬೇಡಿಕೆ. ಪ್ರಿಯದರ್ಶಿನಿ …

ಮನೆಯ ಸನ್‌ಶೇಡ್ ಕುಸಿತ: ಹುಲ್ಲು ಹೆರೆಯುತ್ತಿದ್ದ ಯುವಕನಿಗೆ ಗಂಭೀರ ಗಾಯ

ಕುಂಬಳೆ: ನಿರ್ಮಾಣ ಹಂತದ ಮನೆಯ ಸನ್‌ಶೇಡ್ ಕುಸಿದು ಬಿದ್ದು ಯುವಕ ಗಂಭೀರ ಗಾಯಗೊಂಡ ಘಟನೆ ನಡೆದಿದೆ. ಮೇಲಿನ ಕಳತ್ತೂ ರಿನ ಹಾರಿಸ್ (28) ಗಾಯಗೊಂಡಿದ್ದು, ಇವರನ್ನು ಮಂಗಳೂರಿನ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ. ಮೊನ್ನೆ ಸಂಜೆ ಘಟನೆ ನಡೆದಿದೆ. ಶ್ರೀನಗರ ರಸ್ತೆಯ ಶ್ರೀ ಧೂಮಾವತಿ ಭದ್ರಕಾಳಿ ಕ್ಷೇತ್ರ ಸಮೀಪ ಮಂಗಲ್ಪಾಡಿ ಪಂಚಾಯ ತ್‌ನ ಸಹಾಯದೊಂದಿಗೆ  ಲೈಫ್ ಮಿಶನ್ ಯೋಜನೆ ಪ್ರಕಾರ  ನಿರ್ಮಿಸುವ ಮನೆಯ ಸನ್‌ಶೇಡ್ ಕುಸಿದುಬಿದ್ದಿದೆ. ಹಾರಿಸ್  ಮನೆ ಸಮೀಪ  ಹುಲ್ಲು ಹೆರೆಯುತ್ತಿದ್ದರು. ಈ ಹೊತ್ತಿನಲ್ಲಿ ಮನೆಯ ಸನ್ ಶೇಡ್ …

ಮುಸ್ಲಿಂ ಯೂತ್‌ಲೀಗ್‌ನಿಂದ ವಿಷನ್ ಕಾಸರಗೋಡು ಆಶಯ ದಾಖಲೆ ಹಸ್ತಾಂತರ

ಕಾಸರಗೋಡು: ಕಾಸರಗೋಡಿನ ಸಮಗ್ರ ಅಭಿವೃದ್ಧಿ ಗುರಿಯಿರಿಸಿ ನಗರದ ಅಭಿವೃದ್ಧಿಗೆ ಪ್ರಾಮುಖ್ಯತೆ ನೀಡುವ ವಿವಿಧ ಅಭಿವೃದ್ಧಿ ವಿಷಯಗಳನ್ನು ಅಳವಡಿಸಿ ಕಾಸರಗೋಡು ನಗರಸಭಾ ಮುಸ್ಲಿಂ ಯೂತ್‌ಲೀಗ್ ಸಮಿತಿ ಸಿದ್ಧಪಡಿಸಿದ ವಿಷನ್ ಕಾಸರಗೋಡು ಎಂಬ ಆಶಯ ದಾಖಲೆಯನ್ನು ಶಾಸಕ ಕಲ್ಲಟ್ರ ಮಾಹಿನ್ ರಿಗೆ ಹಸ್ತಾಂತರಿಸಲಾಗಿದೆ.  ನಗರದ ಮೂಲಭೂತ ಸೌಕರ್ಯ ಅಭಿವೃದ್ಧಿ, ಸಾರಿಗೆ ವ್ಯವಸ್ಥೆ, ರಸ್ತೆಗಳು, ಪ್ರವಾಸೋ ಧ್ಯಮ, ಪಾರ್ಕ್‌ಗಳು, ವ್ಯಾಪಾರ ವಾಣಿಜ್ಯ ಅಭಿವೃದ್ಧಿ, ಶಿಕ್ಷಣ ಮೊದಲಾದ ವಿವಿಧ ವಲಯಗಳನ್ನು ಪರಿಗಣಿಸುವ ನಿರ್ದೇ ಶಗಳನ್ನು ಇದರಲ್ಲಿ ಒಳಪಡಿಸಲಾಗಿದೆ.