ಏಕಾಂಗಿಯಾಗಿ ವಾಸಿಸುತ್ತಿದ್ದ ವ್ಯಕ್ತಿಯ ಮೃತದೇಹ ಜೀರ್ಣಗೊಂಡ ಸ್ಥಿತಿಯಲ್ಲಿ ಮನೆಯೊಳಗೆ ಪತ್ತೆ

ಮಂಜೇಶ್ವರ: ಏಕಾಂಗಿಯಾಗಿ ವಾಸಿಸುತ್ತಿದ್ದ ವ್ಯಕ್ತಿಯೋರ್ವ  ಮನೆಯೊಳಗೆ ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಮೀಂಜ ಪಂಚಾಯತ್ ವ್ಯಾಪ್ತಿಯ ಮೀಯಪದವು ಪೊಳ್ಳಕಜೆ ನಿವಾಸಿ ದಿ| ಧೂಮ ಮೂಲ್ಯರ ಪುತ್ರ ವಿಶ್ವನಾಥ (45) ಮೃತಪಟ್ಟ ವ್ಯಕ್ತಿಯಾಗಿದ್ದಾರೆ. ಮೂರು ದಿನಗಳ ಹಿಂದೆ ಮೃತಪಟ್ಟಿರಬೇಕೆಂದು ಶಂಕಿಸಲಾಗಿದೆ. ಅಸೌಖ್ಯದಿಂದ ಬಳಸುತ್ತಿದ್ದ ಇವರು ಹಲವು ವರ್ಷಗಳಿಂದ ಏಕಾಂಗಿಯಾಗಿ ವಾಸಿಸುತ್ತಿದ್ದರೆನ್ನಲಾಗಿದೆ. ಶನಿವಾರ ಮಧ್ಯಾಹ್ನ ಮನೆಯಿಂದ ದುರ್ವಾಸನೆ ಬೀರುತ್ತಿದ್ದ ಹಿನ್ನೆಲೆಯಲ್ಲಿ ಪರಿಸರ ನಿವಾಸಿಗಳು ತೆರಳಿ ನೋಡಿದಾಗ ಜೀರ್ಣಾವಸ್ಥೆಯಲ್ಲಿ ಮೃತದೇಹ ಪತ್ತೆಯಾಗಿದೆ. ಸ್ಥಳೀಯರು ನೀಡಿದ ಮಾಹಿತಿಯಂತೆ ಮಂಜೇಶ್ವರ ಪೊಲೀಸರು ಸ್ಥಳಕ್ಕೆ ತಲುಪಿ ಮೃತದೇಹದ …

ಹಿರಿಯ ಸೀಮೆನ್ ಕುಸಿದುಬಿದ್ದು ಮೃತ್ಯು

ಕುಂಬಳೆ: ಮುಂಜಾನೆ ವೇಳೆ ನಮಾಜು ನಡೆಸಿ ಕುಳಿತಿದ್ದ  ಹಿರಿಯ ಸೀಮೆನ್ ಕುಸಿದುಬಿದ್ದು ಮೃತಪಟ್ಟ ಘಟನೆ ನಡೆದಿದೆ. ಬಂದ್ಯೋಡು ಪಾಚಾಣಿ ಪಾಚಿವಳಪ್ಪ್ ನಿವಾಸಿ ಮೊಯ್ದೀನ್ ಕುಟ್ಟಿ (32) ಮೃತಪಟ್ಟ ವ್ಯಕ್ತಿ. ಮೃತರು ಪತ್ನಿ ನಫೀಸ, ಮಕ್ಕಳಾದ ಆಮಿನ, ಸುಹರಾ, ಸುಬೈದ, ಲತೀಫ್, ಅಬ್ದುಲ್ ರಹ್ಮಾನ್, ಅಶ್ರಫ್, ಮುತ್ತಲೀಬ್, ಅಳಿಯ-ಸೊಸೆಯಂದಿರಾದ ಸತ್ತಾರ್, ಇಬ್ರಾಹಿಂ, ಅಸೀಸ್, ನಿಸ, ಹುಸೈಬ, ಆಶಿಫ, ಅನೀಸ, ಸಹೋದರ-ಸಹೋದರಿಯರಾದ ಮೊಹಮ್ಮದ್ ಅಲಿ, ಖದೀಜ, ಆಯಿಶಾಬಿ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.

ಕುರುಮುಜ್ಜಿಕಟ್ಟೆ ಶ್ರೀ ಧರ್ಮಶಾಸ್ತಾ ಭಜನಾ ಮಂದಿರದಲ್ಲಿ ಶ್ರೀಮದ್ ಭಾಗವತ ಸಪ್ತಾಹ ಆರಂಭ

ಕುಂಬ್ಡಾಜೆ: ಕುರುಮುಜ್ಜಿಕಟ್ಟೆ ಶ್ರೀ ಧರ್ಮಶಾಸ್ತಾ ಭಜನ ಮಂದಿರದಲ್ಲಿ ಜರಗುತ್ತಿರುವ ಶ್ರೀಮದ್ ಭಾಗವತ ಸಪ್ತಾಹದ ಅಂಗವಾಗಿ ದ್ವಿತೀಯ ದಿನ ಯಜ್ಞಾಚಾರ್ಯ ಬ್ರಹ್ಮಶ್ರೀ ಶಂಕರನ್ ನಂಬೂದಿರಿ ಚೇದಮಂಗಲA ಪಯ್ಯ ನ್ನೂರು ಪ್ರವಚನ ನಡೆಸಿಕೊಟ್ಟರು. ಮನಸ್ಸು ವ್ಯಾಕುಲತೆಯಲ್ಲಿರುವಾಗ ಯಾವುದೇ ದಿಟ್ಟ ನಿರ್ಧಾರವನ್ನು ತೆಗೆದುಕೊಳ್ಳಬಾರದು ಎಂದು ಅವರು ತಿಳಿಸಿದರು. ಕಪಿಲಾವತಾರ, ನರನಾರಾಯಣ ಅವತಾರ, ದಕ್ಷಯಾಗ, ಧ್ರುವಚರಿತೆ, ಪುರಂಜನೋಪಖ್ಯಾನ, ಋಷಭಾವತಾರ, ಭಾರತ ಕಥೆ, ಭದ್ರಕಾಳಿ ಆವಿರ್ಭಾವ ಕಥಾಭಾಗವನ್ನು ಆಯ್ದುಕೊಂಡು ಪಾರಾಯಣ ಪ್ರವಚನ ನಡೆಯಿತು. ಪ್ರಾತಃಕಾಲ ಗಣಪತಿ ಹೋಮ ನಡೆಯಿತು. ಗೋಸಾಡ ಮಹಿಷಮರ್ದಿನಿ ಮಾತೃಸಮಿತಿಯ ಅಧ್ಯಕ್ಷೆ …

ಅಗಲಿದ ಗಾನಕೋಗಿಲೆ ಆಶಾ ಭೋಸ್ಲೆಗೆ ಇಂದು ಸಂಜೆ ಸರಕಾರಿ ಗೌರವಗಳೊಂದಿಗೆ ಅಂತ್ಯಕ್ರಿಯೆ: ಪ್ರಧಾನಿ ಸೇರಿ ಹಲವರು ಗಣ್ಯರಿಂದ ಕಂಬನಿ

ಮುಂಬೈ: ಭಾರತೀಯ ಚಲನಚಿತ್ರರಂಗದ ಅಪ್ರತಿಮ ಗಾಯಕಿ, ಸಾವಿರಾರು ಸುಮಧುರ ಗೀತೆಗಳ ಮೂಲಕ ಕೋಟ್ಯಂತರ ಜನರ ಹೃದಯ ಗೆದ್ದಿದ್ದ ಪದ್ಮಭೂಷಣ ಆಶಾ ಭೋಸ್ಲೆ (92) ಅಂತ್ಯಕ್ರಿಯೆ ಇಂದು ಸಂಜೆ  ೪ ಗಂಟೆಗೆ ಮುಂಬೈಯ ಐತಿಹಾಸಿಕ ಶಿವಾಜಿ ಪಾರ್ಕ್ ಸ್ಮಶಾನದಲ್ಲಿ ಸಕಲ ಸರಕಾರಿ ಗೌರವಗಳೊಂದಿಗೆ ಅಂತಿಮ ವಿಧಿವಿಧಾನಗಳ ಸಹಿತ ನೆರವೇರಲಿದೆ.  ಈ ಮಹಾನ್ ಚೇತನದ ಅಗಲಿಕೆಗೆ ಪ್ರಧಾನಮಂತ್ರಿ ನರೇಂದ್ರಮೋದಿ ಸೇರಿದಂತೆ ಹಲವು ಗಣ್ಯಾತೀತರು ಕಂಬನಿ ಮಿಡಿದಿದ್ದಾರೆ. ಆಶಾ ಭೋಸ್ಲೆಯವರ ಪಾರ್ಥೀವ ಶರೀರವನ್ನು ಸಾರ್ವಜನಿಕ ದರ್ಶ ಕ್ಕಾಗಿ ಇಂದು ಬೆಳಿಗ್ಗೆಯಿಂದ ಮುಂಬೈನ …

ಬಾವಿ ಕೆಲಸದ ಮಧ್ಯೆ ಹಗ್ಗ ತುಂಡಾಗಿ ಬಿದ್ದು ಗಾಯಗೊಂಡಿದ್ದ ವ್ಯಕ್ತಿ ನಿಧನ

ಕಾಸರಗೋಡು: ಬಾವಿಯಲ್ಲಿ ಕೆಲಸ ನಿರ್ವಹಿಸುತ್ತಿದ್ದ ಮಧ್ಯೆ ಹಗ್ಗ ತುಂಡಾಗಿ ಬಿದ್ದು ಗಾಯಗೊಂಡ ಕಾರ್ಮಿಕ ಮೃತಪಟ್ಟರು. ಅಂಬಲತ್ತರ ಪೊಲೀಸ್ ಠಾಣೆ ವ್ಯಾಪ್ತಿಯ ಆನಪೆಟ್ಟಿ, ಕಾವಿಲ್ ಮನೆಯ ಚಂದ್ರನ್ ನಾಯರ್‌ರ ಪುತ್ರ ರಾಜನ್ (64) ಮೃತಪಟ್ಟವರು. ನಿನ್ನೆ ವಾಯುನ್ನೋರಡಿ ಮೇನಿಕೋಟ್‌ನಲ್ಲಿ ದುರಂತ ಸಂಭವಿಸಿದೆ. ಕೆಲಸದ ಮಧ್ಯೆ ಬಿದ್ದು ಕಾಲು ತುಂಡಾದ ಸ್ಥಿತಿಯಲ್ಲಿ ಇವರನ್ನು ನೋರ್ತ್ ಕೋಟಚ್ಚೇರಿಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಿದ  ಬಳಿಕ ಮಂಗಳೂರಿನ ಆಸ್ಪತ್ರೆಗೆ ಕೊಂಡೊಯ್ಯುವ ಸಿದ್ಧತೆ ಮಧ್ಯೆ ಸಾವು ಸಂಭವಿಸಿದೆ. ಹೃದಯಾಘಾತ ಮರಣಕ್ಕೆ …

ಬೇಕೂರಿನಲ್ಲಿ ಭಾರೀ ಪ್ರಮಾಣದಲ್ಲಿ ಕುಡಿಯುವ ನೀರು ಪೋಲು: ಅಧಿಕಾರಿಗಳ ನಿರ್ಲಕ್ಷ್ಯ ಸೋರಿಕೆಗೆ ಕಾರಣವೆಂದು ದೂರು

ಉಪ್ಪಳ: ಮಂಗಲ್ಪಾಡಿ ಪಂಚಾಯತ್ ವ್ಯಾಪ್ತಿಯಲ್ಲಿ ಕುಡಿಯುವ ನೀರು ವಿತರಣೆಗೊಳ್ಳುತ್ತಿರುವ ಪ್ರದಾನ ಪೈಪ್‌ನಿಂದ ದಿನನಿತ್ಯ ಸಾವಿರಾರು ಲೀಟರ್ ಕುಡಿಯುವ ನೀರು ಪೋಲಾಗುತ್ತಿದ್ದು, ದುರಸ್ತಿಗೊಳಿಸದಿ ರುವುದು ಸಾರ್ವಜನಿಕರನ್ನು ಆಕ್ರೋಶಕ್ಕೀಡುಮಾಡಿದೆ. ಕೈಕಂಬ-ಬಾಯಾರು ರಸ್ತೆಯ ಬೇಕೂರು ಹಳೇ ಅಂಚೆ ಕಚೇರಿ ಸಮೀಪದಲ್ಲಿ ಪೈಪ್ ಬಿರುಕು ಬಿಟ್ಟು ಭಾರೀ ಪ್ರಮಾಣದ ನೀರು ಪೋಲಾಗುತ್ತಿದೆ. ಕೊಡಂಗೆ ಹೊಳೆಯಲ್ಲಿರುವ ಬಾವಿಯಿಂದ ಬೇಕೂರು ಹಿರಣ್ಯಪದವಿನ ಟ್ಯಾಂಕ್‌ಗೆ ಸರಬರಾಜುಗೊಳ್ಳುತ್ತಿರುವ ಪ್ರಧಾನ ಪೈಪ್‌ನಿಂದ ನೀರು ಸೋರಿಕೆಯಾಗುತ್ತಿದೆ. ಇಲ್ಲಿ ವಾಲ್‌ಗೇಟ್‌ನ್ನು ನಿರ್ಮಿಸಲಾಗಿದೆ. ಇದರಲ್ಲಿ ಸೋರಿಕೆಯಾದ ನೀರು ಪರಿಸರದ ಚರಂಡಿ ಸೇರುತ್ತಿದೆ. ಹಲವು ವರ್ಷಗಳಿಂದ …

24 ಮಹಿಳೆಯರು ಸೇರಿದ ತಂಡದಿಂದ 29.39 ಕಿಲೋ ಚಿನ್ನ ವಶ

ಮುಂಬಯಿ: 24 ಮಹಿಳೆಯರು ಸೇರಿದ ತಂಡ ಸಾಗಿಸುತ್ತಿದ್ದ 29.39 ಕಿಲೋ ಚಿನ್ನಾಭರಣವನ್ನು ರೆವೆನ್ಯೂ ಇಂಟೆಲಿಜೆನ್ಸ್ ಡೈರೆಕ್ಟರೇಟ್ ಮುಂಬಯಿ ವಿಮಾನ ನಿಲ್ದಾಣ ದಿಂದ ವಶಪಡಿಸಿದೆ. ಸೆರೆ ಹಿಡಿದ ಚಿನ್ನಕ್ಕೆ 37.74 ಕೋಟಿ ರೂ. ಮೌಲ್ಯ ಅಂದಾಜಿಸಲಾಗಿದೆ. ಡಿಆರ್‌ಐ ಅಧಿಕಾರಿಗಳು ಈ ಬಗ್ಗೆ ಮಾಹಿತಿ ನೀಡಿದ್ದಾರೆ. ಈ ವರ್ಷ ಮುಂಬಯಿ ವಿಮಾನ ನಿಲ್ದಾಣ ದಲ್ಲಿ ನಡೆಸಿದ ಅತ್ಯಂತ ದೊಡ್ಡ ಚಿನ್ನ ಬೇಟೆಯಾಗಿದೆ ಇದು. ಕೆನಿಯಾದ ನೈರೋ ಬಿಯಿಂದ ಮಹಿಳೆಯರ ತಂಡವೊಂದು ಚಿನ್ನಾಭರಣದೊಂದಿಗೆ ಮುಂ ಬಯಿ ಛತ್ರಪತಿ ಶಿವಜಿ ಮಹಾ ರಾಜ್ …

ಪುತ್ರಿಗೆ ದೌರ್ಜನ್ಯಗೈದ ತಂದೆ ವಿರುದ್ಧ ಪೋಕ್ಸೋ: ಕಸ್ಟಡಿಗೆ

ಮಂಜೇಶ್ವರ: ಪುತ್ರಿಗೆ ದೌರ್ಜನ್ಯಗೈದಿರುವುದಾಗಿ ನೀಡಿದ ದೂರಿನಂತೆ ತಂದೆಯನ್ನು ಮಂಜೇ ಶ್ವರ ಪೊಲೀಸರು ಕಸ್ಟಡಿಗೆ ತೆಗೆದರು. 53ರ ಹರೆಯದ ವ್ಯಕ್ತಿಯನ್ನು ಕಸ್ಟಡಿಗೆ ತೆಗೆಯಲಾಗಿದೆ. ಪ್ಲಸ್ ಟುನಲ್ಲಿ ಕಲಿಯುವ ಸಮಯದಲ್ಲಿಯೇ ತನ್ನನ್ನು ದೌರ್ಜನ್ಯಗೈದಿರುವುದಾಗಿ ಯುವತಿ ಹೇಳಿಕೆ ನೀಡಿದ್ದಾಳೆ. ಈಗ ಈಕೆಗೆ 20 ವರ್ಷವಾಗಿದೆ. ಹೆದರಿಕೆಯಿಂ ದಾಗಿ ಈ ಬಗ್ಗೆ ಈಕೆ ಯಾರಲ್ಲೂ ತಿಳಿಸಿರಲಿಲ್ಲವೆಂದು ಹೇಳಲಾಗುತ್ತಿದೆ. ಇತ್ತೀಚೆಗಿನಿಂದ ಇನ್ನಷ್ಟು ಹೆಚ್ಚು ಉಪಟಳ ಮಾಡಲು ಆರಂಭಿಸಿ ರುವುದರೊಂದಿಗೆ ಈ ಬಗ್ಗೆ ತಾಯಿಗೆ ತಿಳಿಸಿದ್ದಾಳೆ. ಆ ಬಳಿಕ ತಾಯಿ ಮಂಜೇಶ್ವರ ಪೊಲೀಸರಿಗೆ ದೂರು ನೀಡಿದ್ದರು.

ಪಯ್ಯನ್ನೂರಿನಲ್ಲಿ ಮುಂದುವರಿಯುತ್ತಿರುವ ಆಕ್ರಮಣ : ಕಾರಿಗೆ, ಕೃಷಿ ಸ್ಥಳದಲ್ಲಿ ಕಿಚ್ಚಿರಿಸಿ ನಾಶ

ಹೊಸದುರ್ಗ: ವಿಧಾನಸಭಾ ಚುನಾವಣೆ ಪೂರ್ತಿಯಾದ ಬೆನ್ನಲ್ಲೇ ಪಯ್ಯನ್ನೂರು ವಿಧಾನಸಭಾ ಮಂಡಲದ ವಿವಿಧ ಭಾಗಗಳಲ್ಲಿ ಆಕ್ರಮಣಗಳು ಮುಂದುವರಿಯುತ್ತಿದೆ. ಯುಡಿಎಫ್ ಸ್ವತಂತ್ರನಾಗಿ ಸ್ಪರ್ಧಿಸಿದ ವಿ. ಕುಂಞಿ ಕೃಷ್ಣನ್‌ರ ಬೆಂಬಲಿಗನೆಂದು ಹೇಳಲಾ ಗುವ ಎರಮಂ ಪೇರೂಲ್‌ನ ಎಂ.ಕೆ. ನಾರಾಯಣನ್‌ರ ಕಾರಿಗೆ ಬೆಂಕಿ ಹಚ್ಚ ಲಾಗಿದೆ. ಇಂದು ಮುಂಜಾನೆ ಬೆಂಕಿ ಹಚ್ಚಿದ ಘಟನೆ ನಡೆದಿದೆ. ಮನೆಯವರು ಎಚ್ಚರಗೊಂಡ ಹಿನ್ನೆಲೆಯಲ್ಲಿ ಅಕ್ರಮಿ ಗಳು ಪರಾರಿಯಾಗಿದ್ದಾರೆ. ಪಂಚಾ ಯತ್ ನೌಕರನಾದ ನಾರಾಯಣನ್ ಎನ್‌ಜಿಒ ಯೂನಿಯನ್ ಕಾರ್ಯ ಕರ್ತರಾಗಿದ್ದಾರೆ. ಕುಂಞಿಕೃಷ್ಣನ್ ಎತ್ತಿಹಿಡಿದ ಹುತಾತ್ಮ ಫಂಡ್‌ಗೆ ಸಂಬಂಧಿಸಿದ ಆರೋಪವನ್ನು …

ಟೈಲರ್ ನಿಧನ

ಕುಂಬಳೆ: ಭಾಸ್ಕರನಗರ ಸಮೀಪದ ಕಾರಿಪ್ಪಾಡಿ ನಿವಾಸಿ ಚಂದ್ರಶೇಖರ (57) ನಿಧನ ಹೊಂದಿದರು. ಉಪ್ಪಳ ಹಾಗೂ ಕುಂಬಳೆಯಲ್ಲಿ ಟೈಲರ್ ಆಗಿ ದುಡಿದಿದ್ದರು. ಅಸೌಖ್ಯ ಹಿನ್ನೆಲೆಯಲ್ಲಿ ಚಿಕಿತ್ಸೆಯಲ್ಲಿದ್ದರು. ಮೃತರು ಪತ್ನಿ ಪುಷ್ಪಲತ, ಮಕ್ಕಳಾದ ಜೀವನ್, ಸಂಧ್ಯಾ, ಸಹೋದರರಾದ ವಿಶ್ವನಾಥ, ಸಹೋದರಿ ಲೀಲಾವತಿ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.