ಅಪ್ರಾಪ್ತರ ವಾಹನ ಚಾಲನೆ: ಮಂಜೇಶ್ವರ ಪೊಲೀಸರಿಂದ ಬಿಗು ತಪಾಸಣೆ; 2 ಸ್ಕೂಟರ್ ವಶ

ಮಂಜೇಶ್ವರ: ದ್ವಿಚಕ್ರ ವಾಹನಗಳನ್ನು ಅಪ್ರಾಪ್ತರು ಚಲಾಯಿಸುತ್ತಿರುವ ಪ್ರಕರಣಗಳು ಹೆಚ್ಚುತ್ತಿದ್ದು, ಪೊಲೀಸರು ವಿವಿಧೆಡೆ ವಾಹನ ತಪಾಸಣೆಯನ್ನು ಬಿಗು ಗೊಳಿಸಿದ್ದಾರೆ. ಇದರಂತೆ ಠಾಣೆಯ ಸಿಐ ಜಿಜೀಶ್ ನಿರ್ದೇಶನದಲ್ಲಿ ಎಸ್‌ಐ ರತೀಶ್, ವೈಷ್ಣವ್ ರಾಮ ಕಾದ್ರನ್, ಉಮೇಶ್ ಕೆ.ಆರ್. ಸಹಿತ ವಿವಿಧ ಅಧಿಕಾರಿಗಳು ಠಾಣಾ ವ್ಯಾಪ್ತಿಯ ವಿವಿಧೆಡೆ ತಪಾಸಣೆ ನಡೆಸುತ್ತಿದ್ದಾರೆ. ಶನಿವಾರ ಸಂಜೆ ಬೇಕೂರು ಮಸೀದಿ ಬಳಿಯ ರಸ್ತೆಯಲ್ಲಿ, ಭಾನುವಾರ ಮುಂಜಾನೆ ತಲಪಾಡಿಯಲ್ಲಿ ವಾಹನ ತಪಾಸಣೆ  ವೇಳೆ ಅಪ್ರಾಪ್ತರು ಚಲಾಯಿಸುತ್ತಿದ್ದ ಎರಡು ಸ್ಕೂಟರ್‌ಗಳನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ. ಈ ಸಂಬಂಧ ಬಾಲಕರ ಪೋಷಕರ …

ಮಂಜೇಶ್ವರದಲ್ಲಿ ಪರಶುರಾಂ ಎಕ್ಸ್‌ಪ್ರೆಸ್‌ಗೆ ನಿಲುಗಡೆ: ಕೆ. ಸುರೇಂದ್ರನ್‌ರಿಗೆ ಅಭಿನಂದನೆ

ಮಂಜೇಶ್ವರ: ಪರಶುರಾಂ ಎಕ್ಸ್‌ಪ್ರೆಸ್ ರೈಲಿಗೆ ಮಂಜೇಶ್ವರದಲ್ಲಿ ನಿಲುಗಡೆ ನೀಡಲಾಗಿದ್ದು, ಇಂದು ಬೆಳಿಗ್ಗೆ ನಿಲ್ದಾಣದಲ್ಲಿ ಸ್ವಾಗತ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು. ಬಿಜೆಪಿ ಮಂಡಲ ಅಧ್ಯಕ್ಷ ಆದರ್ಶ್ ಬಿ.ಎಂ, ಹರೀಶ್ಚಂದ್ರ ಮಂಜೇಶ್ವರ, ಪ್ರಶಾಂತ್ ಕುಮಾರ್, ರವಿ ಎಂ.ಕೆ. ಕೋಳ್ಯೂರು, ರಾಮಕೃಷ್ಣ ಭಟ್, ಜಗದೀಶ್, ಭಾಸ್ಕರ ಬಿ.ಎಂ. ಭಾಗವಹಿಸಿದರು. ಕೇಂದ್ರ ರೈಲ್ವೇ ಸಚಿವರಲ್ಲಿ ಕೆ. ಸುರೇಂದ್ರನ್ ಮಾಡಿದ ವಿನಂತಿ ಹಿನ್ನೆಲೆಯಲ್ಲಿ ಮಂಜೇಶ್ವರದಲ್ಲಿ ಪರಶುರಾಂ ಎಕ್ಸ್‌ಪ್ರೆಸ್ ರೈಲಿಗೆ ನಿಲುಗಡೆ ನೀಡಲಾಗಿದೆ. ಈ ಹಿನ್ನೆಲೆಯಲ್ಲಿ ನಿಲು ಗಡೆಗಾಗಿ ಯತ್ನಿಸಿದ ಕೆ. ಸುರೇಂದ್ರನ್ ರನ್ನು ಮಂಜೇಶ್ವರದ ಜನತೆ …

ಮಂಜೇಶ್ವರ ಎಡರಂಗದ ಅಭ್ಯರ್ಥಿ ಕೆ.ಆರ್. ಜಯಾನಂದರಿಂದ ಪರ್ಯಟನೆಗೆ ಚಾಲನೆ

ಮಂಜೇಶ್ವರ: ವಿಧಾನಸಭಾ ಕ್ಷೇತ್ರದ ಎಡರಂಗದ ಅಭ್ಯರ್ಥಿ ಕೆ.ಆರ್. ಜಯಾನಂದ ಚುನಾವಣಾ ಪ್ರಚಾರ ಆರಂಭಿಸಿದರು. ಪೈವಳಿಕೆ ಬೋಳಂಗಳದ ಹುತಾತ್ಮ ಮಂಟಪದಿಂದ ನಿನ್ನೆ ಸಂಜೆ ಇವರು ಪರ್ಯಟನೆಗೆ ಚಾಲನೆ ನೀಡಿ ದರು. ಸಿಪಿಎಂ ಏರಿಯಾ ಸಮಿತಿ ಸದಸ್ಯ ಅಬ್ದುಲ್ ರಜಾಕ್ ಚಿಪ್ಪಾರು, ವಿನಯ ಕುಮಾರ್, ಹಾರೀಸ್ ಪೈವಳಿಕೆ, ಪುರುಷೋತ್ತಮ ಬಳ್ಳೂರು, ಚಂದ್ರ ನಾಯ್ಕ್, ಸಿಪಿಐ ಮುಖಂಡ ಅಜಿತ್ ಎಂ.ಸಿ. ಲಾಲ್ಭಾಗ್ ಭಾಗವಹಿಸಿದರು. ಹಿರಿಯ ನೇತಾರ ನಾರಾಯಣ ಶೆಟ್ಟಿ ಕೆ.ಆರ್. ಜಯಾನಂದರನ್ನು ಸ್ವಾಗತಿಸಿದರು. ಸಿಪಿಐ ಮುಖಂಡನಾಗಿದ್ದ ಸಿ.ಕೆ. ಚಿಪ್ಪಾರ್‌ರ ಸ್ಮಾರಕ, ಭಾಸ್ಕರ …

ಕುಟುಂಬ ಕಲಹ: ಅತ್ತೆ ಸೊಸೆಯನ್ನು ಕಡಿದು ಕೊಲೆ

ಮಲಪ್ಪುರಂ: ಕುಟುಂಬ ಕಲಹ ಮುಂದುವರಿದ ಪ್ರಕರಣದಲ್ಲಿ ಅತ್ತೆ ಸೊಸೆಯನ್ನು ಕಡಿದು ಕೊಲೆಗೈದ ಘಟನೆ ನಡೆದಿದೆ. ನಿಲಂಬೂರು ಕರುಳಾಯಿಯಲ್ಲಿ ಇಂದು ಮುಂಜಾನೆ ಘಟನೆ ನಡೆದಿದೆ. ಕೂಟಂಬಾರ ನಿವಾಸಿ ರಜಿತ (30) ಮೃತಪಟ್ಟ ಸೊಸೆ. ಕಟ್ಟಿಗೆ ಕಡಿಯಲು ಉಪಯೋಗಿಸುವ ಕತ್ತಿಯಿಂದ ಕಡಿದಿರುವುದಾಗಿ ಪೊಲೀಸರು ತಿಳಿಸಿದ್ದಾರೆ. ಈ ವೇಳೆ ರಜಿತರ ಪತಿ ಹೊರ ಹೋಗಿದ್ದರೆನ್ನಲಾಗಿದೆ. ಕೊಲೆ ಕೃತ್ಯದ ಬಳಿಕ ಅತ್ತೆ ಶಾಂತಾಳನ್ನು ಪೊಲೀಸರು ಕಸ್ಟಡಿಗೆ ತೆಗೆದಿದ್ದಾರೆ. ಬೊಬ್ಬೆ ಕೇಳಿ ಸ್ಥಳಕ್ಕೆ ತಲುಪಿದ ಸ್ಥಳೀಯರು ರಕ್ತದ ಮಡುವಿನಲ್ಲಿ ಬಿದ್ದಿದ್ದ ರಜಿತಳನ್ನು ಕಂಡಿದ್ದಾರೆ. ಕೂಡಲೇ …

ನರೇಂದ್ರ ಮೋದಿ ಆಡಳಿತ ಜನಸಾಮಾನ್ಯರ ಜೀವನ ಗುಣಮಟ್ಟ ಹೆಚ್ಚಿಸಿತು- ಎಂ.ಎಲ್. ಅಶ್ವಿನಿ

ಕುಂಬಳೆ: ಎಲ್ಲಾ ಕುಟುಂಬಗಳಿಗೂ ಮೂಲಭೂತ ಸೌಕರ್ಯಗಳ ಜೊತೆಗೆ ಆರ್ಥಿಕ ಸೌಲಭ್ಯಗಳು ಲಭಿಸುತ್ತಿದೆ ಎಂದು ಖಚಿತಪಡಿಸುವ ಮೂಲಕ ಭಾರತದ ಕೋಟ್ಯಂತರ ಜನ ಸಾಮಾನ್ಯರ ಜೀವನ ಮಟ್ಟವನ್ನು ನರೇಂದ್ರ ಮೋದಿ ಸರಕಾರ ಹೆಚ್ಚಿಸಿದೆ ಎಂದು ಬಿಜೆಪಿ ಜಿಲ್ಲಾಧ್ಯಕ್ಷೆ ಎಂ.ಎಲ್. ಅಶ್ವಿನಿ ನುಡಿದರು. ಮಹಿಳಾ ಮೋರ್ಛಾ ಕುಂಬಳೆ ಪಂಚಾಯತ್ ಮಹಿಳಾ ಸಂಗಮ ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.  ಕೇರಳಕ್ಕೆ ಸಹಾಯ ಮಾಡಲು ಕೇಂದ್ರ ಸರಕಾರ ಸಿದ್ಧವಾಗಿದ್ದರೂ ಕೂಡಾ ಅದನ್ನು ಪ್ರಯೋಜನಪಡಿಸುವಲ್ಲಿ, ಕೇಂದ್ರದ ಜನಕ್ಷೇಮ ಯೋಜನೆಗಳನ್ನು ಕೇರಳದಲ್ಲಿ ಜ್ಯಾರಿಗೊಳಿಸುವುದರಲ್ಲಿ ಪಿಣರಾಯಿ ವಿಜಯನ್ ಸರಕಾರಕ್ಕೆ ಸಾಧ್ಯವಾಗಿಲ್ಲವೆಂದು …

ಹೋಟೆಲ್ ಮಾಲಕ ನಿಧನ

ಮಂಜೇಶ್ವರ: ಹಿರಿಯ ಹೋಟೆಲ್ ಉದ್ಯಮಿ, ಹೊಸಂಗಡಿ ಪೆಲಪಾಡಿ ನಿವಾಸಿ ಬಿ.ಎಂ. ಮಾಧವ ಸಂಗಂ (74) ಸ್ವ-ಗೃಹದಲ್ಲಿ ನಿಧನ ಹೊಂದಿದರು. ಈ ಹಿಂದೆ ಹೊಸಂಗಡಿ ಪೇಟೆಯಲ್ಲಿ ಸಂಗಂ ಹೋಟೆಲ್ ನಡೆಸುತ್ತಿದ್ದರು. ಸಿಪಿಎಂ ಮಂಜೇಶ್ವರ ಲೋಕಲ್ ಸಮಿತಿ ಸದಸ್ಯನಾಗಿದ್ದರು. ಕನಿಲ ಶ್ರೀ ಭಗವತೀ ಕ್ಷೇತ್ರದ ಬ್ರಹ್ಮಕಲಶ ಸಮಿತಿ, ಮಂಜೇಶ್ವರ ಕೋಟಗಂ ಬಂಗೇರ ತರ ವಾಡಿನ ಗೌರವ ಸಲಹೆಗಾರ, ರಾಮತ್ತ ಮಜಲ್ ರುದ್ರಭೂಮಿ ಅಭಿವೃದ್ಧಿ ಸಮಿತಿ ಮೊದಲಾದವುಗಳಲ್ಲಿ ಸೇವೆ ಸಲ್ಲಿಸಿದ್ದರು. ಮೃತರು ಪತ್ನಿ ವೇದಾವತಿ, ಮಕ್ಕಳಾದ ವಿನಯ ಕುಮಾರ್, ಸಂತೋಷ್, ಸಂದೀಪ್, …

ಬಿಎಂಎಸ್ ಕೃಷಿ ಕಾರ್ಮಿಕರ ಸಂಘ ಜಿಲ್ಲಾ ಸಮ್ಮೇಳನ

ಮುಳ್ಳೇರಿಯ: ಕೃಷಿ ಕಾರ್ಮಿಕರ ಸಂಘ ಬಿಎಂಎಸ್ ಕಾಸರಗೋಡು ಜಿಲ್ಲಾ ಸಮ್ಮೇಳನ ಮುಳ್ಳೇರಿಯ ಗಣೇಶಮಂದಿರದಲ್ಲಿ ಜರಗಿತು. ಬಿಎಂಎಸ್ ರಾಜ್ಯ ಸಮಿತಿ ಸದಸ್ಯ ಕೃಷ್ಣನ್ ಕೇಳೋತ್ತ್ ಉದ್ಘಾಟಿಸಿದರು. ಆನಂದಿ ಮುಳ್ಳೇರಿಯ ಅಧ್ಯಕ್ಷತೆ ವಹಿಸಿದರು. ಫೆಡರೇಶನ್ ರಾಜ್ಯ ಉಪಾಧ್ಯಕ್ಷ ಭಾಸ್ಕರನ್ ಪೊಯಿನಾಚಿ, ಅನಿಲ್ ಬಿ. ನಾಯರ್, ಮಿನಿ ಶ್ರೀನಿವಾಸನ್, ಜಿಲ್ಲಾ ಪ್ರಧಾನ ಕಾರ್ಯ ದರ್ಶಿ ಸುನಿಲ್ ವಾಳಕ್ಕೋಡ್, ಕೋಶಾಧಿಕಾರಿ ಎನ್. ನಾರಾಯಣನ್ ವಾಳಕ್ಕೋಡ್ ಮಾತನಾಡಿದರು. ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು. ಸುನಿಲ್ ವಾಳಕ್ಕೋಡ್ (ಅಧ್ಯಕ್ಷ), ಪುಷ್ಪರಾಜ್ ಕೊರಕ್ಕೋಡು, ಸುಲೋಚನ ಕೋಟಪ್ಪಾರ, ಸುರೇಶ್ …

ಯುವಕ-ಯುವತಿಯ ಅರೆನಗ್ನ ವೀಡಿಯೋ ಚಿತ್ರೀಕರಿಸಿ ಬೆದರಿಕೆಯೊಡ್ಡಿದ ಪ್ರಕರಣ: ಇನ್ನೋರ್ವ ಆರೋಪಿ ಕಸ್ಟಡಿಗೆ: ಪೊಲೀಸರ ಮೇಲೆ ತಂಡದಿಂದ ಕಲ್ಲೆಸೆತ, ಬೆದರಿಕೆ: 8 ಮಂದಿ ವಿರುದ್ಧ ಕೇಸು

ಉಪ್ಪಳ: ಹೊಸಂಗಡಿಯ  ವಸತಿಗೃಹದ ಕೊಠಡಿಗೆ ನುಗ್ಗಿ ಯುವಕ ಹಾಗೂ ಯುವತಿಯ ಅರೆನಗ್ನ ಫೋಟೋ, ವೀಡಿಯೋ ಚಿತ್ರೀಕರಿಸಿ  ಹಲ್ಲೆಗೈದು ಬೆದರಿಕೆಯೊಡ್ಡಿದ ಪ್ರಕರಣ ದಲ್ಲಿ ಇನ್ನೋರ್ವ ಆರೋಪಿಯನ್ನು ಮಂಜೇಶ್ವರ ಪೊಲೀಸರು ಕಸ್ಟಡಿಗೆ ತೆಗೆದುಕೊಂಡಿದ್ದಾರೆ.  ಇದೇ ವೇಳೆ ಆರೋಪಿಯನ್ನು ಕಸ್ಟಡಿಗೆ ತೆಗೆಯಲು ಹೋದ ಪೊಲೀಸರ ಮೇಲೆ ತಂಡವೊಂದು ಕಲ್ಲೆ ಸೆದು ಬೆದರಿಕೆಯೊಡ್ಡಿರುವುದಾಗಿ ದೂರಲಾಗಿದೆ. ಕಲ್ಲೆಸೆತದಿಂದ ಇಬ್ಬರು ಪೊಲೀಸರು ಗಾಯಗೊಂ ಡಿದ್ದಾರೆ.  ಘಟನೆಗೆ ಸಂಬಂಧಿಸಿ 8 ಮಂದಿ ವಿರುದ್ಧ ಪೊಲೀಸರು ಕೇಸು ದಾಖಲಿಸಿಕೊಂಡಿದ್ದಾರೆ. ಮಚ್ಚಂಪಾಡಿ ನಿವಾಸಿ ಹೈದರಾಲಿ ಎಂಬಾತನನ್ನು ಕಸ್ಟಡಿಗೆ ತೆಗೆದಿರುವುದಾಗಿ ಪೊಲೀ …

ರೈಲು ಪ್ರಯಾಣ ವೇಳೆ ಹೊಳೆಗೆ ಬಿದ್ದು ಮೃತಪಟ್ಟ ಬದಿಯಡ್ಕ ನಿವಾಸಿಯ ಮೃತದೇಹ ಊರಿಗೆ

ಬದಿಯಡ್ಕ: ರೈಲು ಪ್ರಯಾಣ ವೇಳೆ ಹೊಳೆಗೆ ಬಿದ್ದು ಮೃತಪಟ್ಟ ಬದಿಯಡ್ಕ ನಿವಾಸಿಯ ಮೃತದೇಹವನ್ನು ಇಂದು ಮುಂಜಾನೆ ಊರಿಗೆ ತಲುಪಿಸಲಾಯಿತು. ಬದಿಯಡ್ಕ ಪೆಟ್ರೋಲ್ ಬಂಕ್ ಬಳಿಯ ನಿವಾಸಿ ದಿ| ರವೀಂದ್ರ ಶೆಣೈಯವರ ಪುತ್ರ ಅಚ್ಯುತಾನಂದ ಶೆಣೈ (40)ಯವರ ಮೃತದೇಹವನ್ನು ಇಂದು ಮುಂಜಾನೆ 3 ಗಂಟೆಗೆ ಮನೆಗೆ ತಲುಪಿಸಲಾಯಿತು. ಬಳಿಕ ಮಾನ್ಯ ಚುಕ್ಕಿನಡ್ಕದಲ್ಲಿರುವ ಸಾರ್ವಜನಿಕ ಸ್ಮಶಾನದಲ್ಲಿ ಅಂತ್ಯ ಸಂಸ್ಕಾರ ನಡೆಸಲಾಯಿತು. ಅಂಗಮಾಲಿ ಕರೆಯಂಪರಂಬ್‌ನ ಇಂಡ್ಯನ್ ಮಲ್ಟಿಪಲ್ ಕೋ-ಓಪರೇಟಿವ್ ಸೊಸೈಟಿಯ ಬ್ರಾಂಚ್‌ನಲ್ಲಿ ಸೆಕ್ಷನ್ ಆಫೀಸರ್ ಆಗಿದ್ದ ಅಚ್ಯುತಾನಂದ ಶೆಣೈ ಮೊನ್ನೆ ಬೆಳಿಗ್ಗೆ …