ಅಪ್ರಾಪ್ತರ ವಾಹನ ಚಾಲನೆ: ಮಂಜೇಶ್ವರ ಪೊಲೀಸರಿಂದ ಬಿಗು ತಪಾಸಣೆ; 2 ಸ್ಕೂಟರ್ ವಶ
ಮಂಜೇಶ್ವರ: ದ್ವಿಚಕ್ರ ವಾಹನಗಳನ್ನು ಅಪ್ರಾಪ್ತರು ಚಲಾಯಿಸುತ್ತಿರುವ ಪ್ರಕರಣಗಳು ಹೆಚ್ಚುತ್ತಿದ್ದು, ಪೊಲೀಸರು ವಿವಿಧೆಡೆ ವಾಹನ ತಪಾಸಣೆಯನ್ನು ಬಿಗು ಗೊಳಿಸಿದ್ದಾರೆ. ಇದರಂತೆ ಠಾಣೆಯ ಸಿಐ ಜಿಜೀಶ್ ನಿರ್ದೇಶನದಲ್ಲಿ ಎಸ್ಐ ರತೀಶ್, ವೈಷ್ಣವ್ ರಾಮ ಕಾದ್ರನ್, ಉಮೇಶ್ ಕೆ.ಆರ್. ಸಹಿತ ವಿವಿಧ ಅಧಿಕಾರಿಗಳು ಠಾಣಾ ವ್ಯಾಪ್ತಿಯ ವಿವಿಧೆಡೆ ತಪಾಸಣೆ ನಡೆಸುತ್ತಿದ್ದಾರೆ. ಶನಿವಾರ ಸಂಜೆ ಬೇಕೂರು ಮಸೀದಿ ಬಳಿಯ ರಸ್ತೆಯಲ್ಲಿ, ಭಾನುವಾರ ಮುಂಜಾನೆ ತಲಪಾಡಿಯಲ್ಲಿ ವಾಹನ ತಪಾಸಣೆ ವೇಳೆ ಅಪ್ರಾಪ್ತರು ಚಲಾಯಿಸುತ್ತಿದ್ದ ಎರಡು ಸ್ಕೂಟರ್ಗಳನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ. ಈ ಸಂಬಂಧ ಬಾಲಕರ ಪೋಷಕರ …
Read more “ಅಪ್ರಾಪ್ತರ ವಾಹನ ಚಾಲನೆ: ಮಂಜೇಶ್ವರ ಪೊಲೀಸರಿಂದ ಬಿಗು ತಪಾಸಣೆ; 2 ಸ್ಕೂಟರ್ ವಶ”