ನಾಪತ್ತೆಯಾದ ಯುಡಿಎಫ್ ಅಭ್ಯರ್ಥಿ ಯುವಕನೊಂದಿಗೆ ಪೊಲೀಸ್ ಠಾಣೆಯಲ್ಲಿ ಹಾಜರು

ಕಣ್ಣೂರು:  ಚೋಕ್ಲಿಯಿಂದ ನಾಪತ್ತೆಯಾದ ಯುಡಿಎಫ್ ಅಭ್ಯರ್ಥಿ ಟಿ.ಪಿ. ಅರುವ ಮರಳಿ ಬಂದಿದ್ದಾರೆ. ಚೊಕ್ಲಿ ಪೊಲೀಸ್ ಠಾಣೆಯಲ್ಲಿ ಅರುವ ಹಾಗೂ ಯುವಕ ಹಾಜರಾಗಿದ್ದಾರೆ.  ಚೊಕ್ಲಿ ಗ್ರಾಮ ಪಂಚಾಯತ್‌ನ ೯ನೇ ವಾರ್ಡ್‌ನಲ್ಲಿ ಮುಸ್ಲಿಂ ಲೀಗ್‌ನ  ಯುಡಿಎಫ್ ಅಭ್ಯರ್ಥಿಯಾಗಿ ಅರುವ ಸ್ಪರ್ಧಿಸುತ್ತಿ ದ್ದಾರೆ.  ಶನಿವಾರ ಬೆಳಿಗ್ಗೆ ಮನೆಯಿಂದ ಹೊರಗೆ ಹೋದ ಅರುವ ಬಳಿಕ ನಾಪತ್ತೆಯಾಗಿದ್ದರು. ಮನೆಯವರು ಮೊಬೈಲ್‌ನಲ್ಲಿ ಸಂಪರ್ಕಿಸಲು ಪ್ರಯತ್ನಿಸಿದರೂ  ಸಾಧ್ಯವಾಗಿರಲಿಲ್ಲ. ಈ ಹಿನ್ನೆಲೆಯಲ್ಲಿ ತಾಯಿ ಚೊಕ್ಲಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು.  ಸ್ಥಳೀಯನಾದ ಓರ್ವ ಬಿಜೆಪಿ ಕಾರ್ಯಕರ್ತನೊಂದಿಗೆ  ಟಿ.ಪಿ. ಅರುವ  …

ಬದಿಯಡ್ಕದಲ್ಲಿ ಬಹಿರಂಗ ಪ್ರಚಾರಕ್ಕೆ ತೆರೆ: ಪಕ್ಷಗಳಿಂದ ವಿಜಯಸಂಕಲ್ಪ ಮೆರವಣಿಗೆ

ಬದಿಯಡ್ಕ: ತ್ರಿಸ್ತರ ಪಂಚಾಯತ್ ಚುನಾವಣೆಯ ಬಹಿರಂಗ ಪ್ರಚಾರ ನಿನ್ನೆ ಸಂಜೆ 6 ಗಂಟೆಗೆ ಕೊನೆಗೊಂ ಡಿತು. ನಾಳೆ ಮತದಾನ ನಡೆಯಲಿದೆ. ಬದಿಯಡ್ಕ ಪಂ. ವ್ಯಾಪ್ತಿಯಲ್ಲಿ ಒಟ್ಟು 21 ವಾರ್ಡುಗಳಿಗೆ, ಮೂರು ಬ್ಲೋಕ್ ಪಂಚಾಯತ್ , ಜಿಲ್ಲಾ ಪಂಚಾಯತ್‌ಗೆ ಮತದಾನ ನಡೆಯಲಿದೆ.25 ವರ್ಷಗಳ ಯುಡಿಎಫ್ ಆಡಳಿತಕ್ಕೆ ಕೊನೆಗಾಣಿಸಿ ಬದಿಯಡ್ಕ ಪಂ. ಆಡಳಿತವನ್ನು ಮರಳಿ ಪಡೆಯುವುದಕ್ಕೋಸ್ಕರ ಬಿಜೆಪಿ ಅಭ್ಯರ್ಥಿಗಳು, ನಾಯಕರು ಶತಪ್ರಯತ್ನದಲ್ಲಿದ್ದಾರೆ. ಪಂ.ನ ಅಭಿವೃದ್ಧಿಗಾಗಿ ಮೂಲಭೂತ ಸೌಕರ್ಯಗಳು, ಶೌಚಾಲಯ, ಮನೆ ನಿರ್ಮಾಣ, ಕೃಷಿಗೆ ಅನುದಾನ, ಕ್ರೀಡಾಂಗಣ ನಿರ್ಮಾಣಕ್ಕೆ ಆದ್ಯತೆಯನ್ನು ನೀಡುವುದಾಗಿ …

ನಿವೃತ್ತ ದೈಹಿಕ ಶಿಕ್ಷಕ ನಿಧನ

ಪೈವಳಿಕೆ: ಬಾಯಾರು ಕಲ್ಲಗದ್ದೆ ನಿವಾಸಿ, ನಿವೃತ ದೈಹಿಕ ಶಿಕ್ಷಕ ಶಿವರಾಮ ಶೆಟ್ಟಿ (80) ನಿಧನ ಹೊಂದಿದರು. ಅಲ್ಪ ಕಾಲದ ಅಸೌಖ್ಯದಿಂದ ಮಂಗ ಳೂರಿನ ಖಾಸಗಿ ಆಸ್ಪತ್ರೆಯಲ್ಲಿದ್ದರು. ಕಾಯರ್‌ಕಟ್ಟೆ ಸರಕಾರಿ ಶಾಲೆಯಲ್ಲಿ ದೈಹಿಕ ಶಿಕ್ಷಕರಾಗಿ ನಿವೃತ್ತಿ ಹೊಂದಿದ್ದಾರೆ. ಅಲ್ಲದೆ ಬಾಯಾರು ಶ್ರೀ ಪಂಚಲಿAಗೇಶ್ವರ ದೇವಸ್ಥಾನದ ಮಾಜಿ ಆಡಳಿತ ಮೊಕ್ತೇಸರ, ಬೆರಿಪದವು ಶ್ರೀ ಮೂಕಾಂಬಿಕ ಭಜನಾ ಮಂದಿರದಲ್ಲಿ ಸಕ್ರಿಯರಾಗಿ ಸೇವೆ ಸಲ್ಲಿಸಿದ್ದರು. ಮೃತರು ಪತ್ನಿ ಉಮಾವತಿ, ಮಕ್ಕಳಾದ ಅಜಿತ್, ವಿದ್ಯಾ, ಸೊಸೆ ಶ್ವೇತ, ಅಳಿಯ ಹರೀಶ್ ಶೆಟ್ಟಿ, ಸಹೋದರ ಸಹೋದರಿಯ …

ಕುಂಬಳೆಯಲ್ಲಿ ಆವೇಶಭರಿತ ಪ್ರಚಾರ ಅಂತ್ಯ: ಮಧ್ಯೆ ಕೌತುಕ ಸೃಷ್ಟಿಸಿದ ಸ್ವತಂತ್ರ ಅಭ್ಯರ್ಥಿ

ಕುಂಬಳೆ: ಚುನಾವಣೆಯ ಕಾವು ತುತ್ತತುದಿಗೇರಿದ ಪ್ರಚಾರ ಮುಕ್ತಾಯ ಸಮಯದಲ್ಲಿ ಜನಸಮೂಹದ ಮಧ್ಯೆ ಕಾವಿಯುಟ್ಟು ತಲೆಯಲ್ಲಿ ಮುಟ್ಟಾಳೆ ಧರಿಸಿ ನೋಟೀಸ್‌ಗಳೊಂದಿಗೆ ನಡೆಯುತ್ತಿದ್ದ ವ್ಯಕ್ತಿ ನೋಡುಗರಿಗೆ ಕೌತುಕ ಮೂಡಿಸಿದರು. ಪಕ್ಕನೆ ಹಲವರಿಗೆ ಈ ವ್ಯಕ್ತಿಯ ಗುರುತು ಪತ್ತೆಹಚ್ಚಲಾಗಲಿಲ್ಲ. ಪರೀಕ್ಷಿಸಿ ನೋಡಿದಾಗ ಆ ವ್ಯಕ್ತಿ ನೀಡಿದ ನೋಟೀಸನ್ನು ಪಡೆದು ಓದಿದಾಗ ಮತದಾರರಿಗೆ ಆ ವ್ಯಕ್ತಿಯ ಗುರುತು ಲಭಿಸಿತು. ಈ ವೇಳೆ ಅವರು ಹಾಂ ಇದು ನಮ್ಮ ೨೪ನೇ ವಾರ್ಡ್‌ನ ಸ್ವತಂತ್ರ ಅಭ್ಯರ್ಥಿ ಕೇಶವ ನಾಯಕ್ ಅಲ್ಲವೇ ಎಂದು ಆಶ್ಚರ್ಯ ವ್ಯಕ್ತಪಡಿಸಿದರು. ಮತ್ತೆ …

ಕುಂಬಳೆ ಪಂ.ನಲ್ಲಿ ಭ್ರಷ್ಟಾಚಾರ ನಡೆದಿದ್ದರೆ  ಯಾಕೆ ಕ್ರಮ ಕೈಗೊಳ್ಳಲಿಲ್ಲ-ಎ.ಕೆ. ಹಾರಿಸ್

ಕುಂಬಳೆ: ಕುಂಬಳೆ ಗ್ರಾಮ ಪಂಚಾಯತ್‌ನಲ್ಲಿ  ಐದು ವರ್ಷ ಕಾಲ ಯುಡಿಎಫ್ ಆಡಳಿತದಲ್ಲಿ ಭ್ರಷ್ಟಾಚಾರ ನಡೆದಿದ್ದರೆ ಅದನ್ನು ಪತ್ತೆಹಚ್ಚಿ ಅದಕ್ಕೆ ಕಾರಣರಾದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ಯಾಕೆ ಸಾಧ್ಯವಾಗಿಲ್ಲವೆಂದು  ಮುಸ್ಲಿಂ ಲೀಗ್‌ನ ಮಂಡಲ ಕಾರ್ಯದರ್ಶಿ ಎ.ಕೆ. ಹಾರಿಸ್ ಪ್ರಶ್ನಿಸಿದ್ದಾರೆ. ನಿನ್ನೆ ಸಂಜೆ ಕುಂಬಳೆಯಲ್ಲಿ ಯುಡಿಎಫ್‌ನ ಚುನಾವಣಾ ಪ್ರಚಾರ ಸಮಾಪ್ತಿಯಂ ಗವಾಗಿ ನಡೆದ ಕಾರ್ನರ್ ಸಭೆಯಲ್ಲಿ ಅವರು ಮಾತನಾಡುತ್ತಿದ್ದರು.  ಪಂಚಾಯತ್‌ನಲ್ಲಿ  ಸಿಪಿಎಂನ ಮೂವರು ಹಾಗೂ ಎಸ್‌ಡಿಪಿಐಯ ಓರ್ವ ಸದಸ್ಯರಿದ್ದರು. ೫ ವರ್ಷಗಳ ಯುಡಿಎಫ್ ಆಡಳಿತದಲ್ಲಿ ಭ್ರಷ್ಟಾ ಚಾರ ನಡೆದಿದೆ …

ಚುನಾವಣೆ: ಶಿಕ್ಷಣ ಸಂಸ್ಥೆಗಳಿಗೆ ಜಿಲ್ಲಾಧಿಕಾರಿಯಿಂದ ರಜೆ ಘೋಷಣೆ

ಕಾಸರಗೋಡು: ಸ್ಥಳೀಯಾಡಳಿತ ಸಂಸ್ಥೆ ಚುನಾವಣೆ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿ ಪೋಲಿಂಗ್ ಸ್ಟೇಷನ್‌ಗಳಾಗಿ ಕಾರ್ಯಾಚರಿಸುವ ಶಿಕ್ಷಣ ಸಂಸ್ಥೆಗಳಿಗೆ ಇಂದು, ನಾಳೆ ಮತ್ತು ಮತ ಎಣಿಕೆ ಕೇಂದ್ರಗಳಾಗಿ ಕಾರ್ಯಾಚರಿಸುವ ಶಿಕ್ಷಣ ಸಂಸ್ಥೆಗಳಿಗೆ 13ರಂದು ಜಿಲ್ಲಾ ಚುನಾವಣಾಧಿಕಾರಿಯಾದ ಜಿಲ್ಲಾಧಿಕಾರಿ ಕೆ. ಇಂಭಶೇಖರ್ ರಜೆ ಘೋಷಿಸಿದ್ದಾರೆ. ನಾಳೆ ಜಿಲ್ಲೆಯಲ್ಲಿ ಚುನಾವಣೆ ನಡೆಯುತ್ತಿದೆ. ಪೋಲಿಂಗ್ ಬೂತ್‌ಗಳಾಗಿ ಕಾರ್ಯಾಚರಿಸುವ 158 ಅಂಗನವಾಡಿಗಳಿಗೆ ರಜೆ ಅನ್ವಯವಾಗುತ್ತದೆ ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.

ಮಾಟಂಗುಳಿ ವಾರ್ಡ್‌ನಲ್ಲಿ ಎಡರಂಗ ಸ್ವತಂತ್ರ ಅಭ್ಯರ್ಥಿಗೆ ಜಯ ಸಾಧ್ಯತೆ- ಎಡಪಕ್ಷ ಪದಾಧಿಕಾರಿಗಳು

ಕುಂಬಳೆ: ಪಂಚಾಯತ್‌ನ 22ನೇ ವಾರ್ಡ್ ಮಾಟಂಗುಳಿಯಲ್ಲಿ  ಎಡರಂಗದ ಸ್ವತಂತ್ರ ಅಭ್ಯರ್ಥಿ ಜಯ ಗಳಿಸಲಿದ್ದಾರೆ ಎಂದು ಎಲ್‌ಡಿಎಫ್  ಚುನಾವಣಾ ಪ್ರಚಾರ ಸಮಿತಿ ಕುಂಬಳೆಯಲ್ಲಿ ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದೆ. ೨೦ ವರ್ಷದ ಹಿಂದೆ ಎಡಪಕ್ಷದ ಪಂಚಾಯತ್ ಸದಸ್ಯ ನಡೆಸಿದ ಅಭಿವೃದ್ಧಿ ಕೆಲಸಗಳಲ್ಲದೆ ಆ ಬಳಿಕ ಈ ವಾರ್ಡ್‌ನಲ್ಲಿ ಏನೂ ಸಂಭವಿಸಿಲ್ಲವೆಂದು ಪದಾಧಿಕಾರಿಗಳು ಆರೋಪಿಸಿದ್ದಾರೆ. ಕಳೆದ ಪಂಚಾ ಯತ್ ಚುನಾವಣೆಯಲ್ಲಿ ಬಿಜೆಪಿ ಕೇವಲ ೮೦ ಮತಗಳನ್ನು ಹೆಚ್ಚಾಗಿ ಗಳಿಸಿ ಎಡರಂಗವನ್ನು ಸೋಲಿಸಿದೆ. ಆ ಸನ್ನಿವೇಶ ಈಗ ಇಲ್ಲ. ಅಲ್ಲದೆ ವಾರ್ಡ್ ವಿಭಜನೆಯಿಂದಾಗಿ …

ಮೊಗ್ರಾಲ್ ವಲಿಯ ನಾಂಗಿಯಲ್ಲಿ ಮುಳ್ಳುಹಂದಿ ಕಾಟ: 15 ತೆಂಗಿನ ಗಿಡಗಳು ನಾಶ

ಮೊಗ್ರಾಲ್: ಹಂದಿಯ ಬೆನ್ನಲ್ಲೇ ಮುಳ್ಳುಹಂದಿ ಕೂಡಾ ಕೃಷಿಯನ್ನು ನಾಶಪಡಿಸಲು ಆರಂಭಿಸಿರುವುದರೊಂ ದಿಗೆ ಕೃಷಿಕರು ಮತ್ತಷ್ಟು ಸಂಕಷ್ಟಕ್ಕೀಡಾಗುತ್ತಿದ್ದಾರೆ. ಮೊಗ್ರಾಲ್ ವಲಿಯನಾಂಗಿ ರಸ್ತೆಯ ಕೆ. ಮುಹಮ್ಮದ್ ಕುಂಞಿಯ ವರ ಹಿತ್ತಿಲಲ್ಲಿ ಮೂರು ವರ್ಷದ ಹಿಂದೆ ನೆಟ್ಟಿದ್ದ 15 ತೆಂಗಿನ ಸಸಿಗಳನ್ನು ರಾತ್ರಿ ವೇಳೆ ಮುಳ್ಳುಹಂದಿ ನಾಶಪಡಿಸಿದೆ. ತೆಂಗಿನ ಗಿಡಗಳ ಬುಡವನ್ನು ಅಗೆದು ಸಸಿಗಳನ್ನು ಮಗುಚಿ ಹಾಕಿ ನಾಶಪಡಿಸಿದೆ. ಕಳೆದ ವರ್ಷ ಮೊಗ್ರಾಲ್‌ನ ವಿವಿಧ ಭಾಗಗಳಲ್ಲಿ ಹಂದಿಗಳ ಕಾಟ ವಿಪರೀತ ವಾಗಿತ್ತು. ಮನೆ ಹಿತ್ತಿಲಲ್ಲಿ ನೆಟ್ಟಿದ್ದ ಬಾಳೆಗಳನ್ನು ಅಂದು ವ್ಯಾಪಕವಾಗಿ ನಾಶಪಡಿಸಿತ್ತು. …

ಕುಂಬಳೆ- ಪೇರಾಲ್ ವಾರ್ಡ್‌ನಲ್ಲಿ ಪೈಪೋಟಿ ತೀವ್ರ

ಕುಂಬಳೆ: ಪಂಚಾಯತ್‌ನ 13ನೇ ವಾರ್ಡ್‌ನಲ್ಲಿ ತೀವ್ರ ಸ್ಪರ್ಧೆ ಕಂಡು ಬರುತ್ತಿದೆ. ಐಕ್ಯರಂಗದ ಅಭ್ಯರ್ಥಿಯಾಗಿ ಮುಸ್ಲಿಂ ಲೀಗ್‌ನ ಫಸಲ್, ಎಲ್‌ಡಿಎಫ್‌ನ ಬಿ.ಎ. ಅಶ್ರಫ್ ಮಧ್ಯೆ ಪ್ರಧಾನ ಸ್ಪರ್ಧೆಯಾಗಿದ್ದರೂ ಬಿಜೆಪಿ ಅಭ್ಯರ್ಥಿಯಾಗಿ ಜಗದೀಶ್ ಕೂಡಾ  ರಂಗದಲ್ಲಿದ್ದಾರೆ. ಕಳೆದ ಬಾರಿ ಉತ್ತಮ ಜಯಗಳಿಸಿದ ವಾರ್ಡ್‌ನಲ್ಲಿ ಈ ಬಾರಿಯೂ ಅದನ್ನು ಪುನರಾವರ್ತಿಸಲು ಸಾಧ್ಯವಿದೆ ಎಂದು ಐಕ್ಯರಂಗ ಲೆಕ್ಕಹಾಕಿದೆ. ಆದರೆ ಈ ಬಾರಿ ವಾರ್ಡ್‌ನಲ್ಲಿ ತನಗೆ ಅನುಕೂಲವಾದ ಅಲೆ ಇದೆ ಎಂದು ಎಡಪಕ್ಷದ ಅಭ್ಯರ್ಥಿ ಅಶ್ರಫ್ ನಿರೀಕ್ಷೆ ಹೊಂದಿದ್ದಾರೆ.

ಜಿಲ್ಲೆಯಲ್ಲಿ ಒಟ್ಟು 436 ಸೂಕ್ಷ್ಮ ಸಂವೇದಿ, 97 ಅತೀವ ಸೂಕ್ಷ್ಮ ಸಂವೇದಿ ಮತಗಟ್ಟೆಗಳು

436 sensitive and 97 highly sensitive polling stations in the district ಕಾಸರಗೋಡು: ಕಾಸರಗೋಡು ಸೇರಿದಂತೆ ೭ ಜಿಲ್ಲೆಗಳ ಸ್ಥಳೀಯಾಡಳಿತ ಸಂಸ್ಥೆಗಳಿಗೆ ಡಿಸೆಂಬರ್ 11ರಂದು ಮತದಾನ ನಡೆಯಲಿರುವಂತೆಯೇ ಅದಕ್ಕಿರುವ ಎಲ್ಲಾ ಸಿದ್ಧತೆಗಳನ್ನು ಈಗಾಗಲೇ ಪೂರ್ತೀಕರಿಸಲಾಗಿದೆ. 5,24,022 ಪುರುಷ ಹಾಗೂ 5,88,156 ಮಹಿಳಾ ಮತದಾರರು, 12 ಮಂಗಳಮುಖಿ ಮತದಾರರು ಸೇರಿದಂತೆ ಜಿಲ್ಲೆಯಲ್ಲಿ ಒಟ್ಟು 11,12,190 ಮತದಾರರಿದ್ದಾರೆ. ಇದರಲ್ಲಿ 129 ಅನಿವಾಸಿ ಕೇರಳೀಯ ಮತದಾರರೂ ಒಳಗೊಂಡಿದ್ದಾರೆ. ಮತದಾನಕ್ಕಾಗಿ ಜಿಲ್ಲೆಯಲ್ಲಿ ಒಟ್ಟಾರೆಯಾಗಿ 11,12,190 ಮತಗಟ್ಟೆಗಳನ್ನು ಸಜ್ಜೀಕರಿಸಲಾಗಿದೆ. ಒಟ್ಟು 6584 …