ಮದ್ಯಪಾನಿ ಪ್ರಯಾಣಿಕರಿಂದ ರೈಲಿನಲ್ಲಿ ಸಮಸ್ಯೆ: ಬಿವರೇಜಸ್‌ನ ಮದ್ಯದಂಗಡಿಗಳನ್ನು ಮುಚ್ಚುಗಡೆಗೊಳಿಸುವಂತೆ ಬೇಡಿಕೆ ಮುಂದಿರಿಸಿದ ರೈಲ್ವೇ

ತಿರುವನಂತಪುರ: ಪ್ರಯಾಣಿಕರು ಮದ್ಯ ಸೇವಿಸಿ ರೈಲಿನಲ್ಲಿ ಸಮಸ್ಯೆ ಸೃಷ್ಟಿಸುವುದು ನಿತ್ಯ ಘಟನೆಯಾಗುವು ದರೊಂದಿಗೆ ವಿಚಿತ್ರ ಬೇಡಿಕೆಯೊಂದಿಗೆ ರೈಲ್ವೇ ಇಲಾಖೆ ರಂಗಕ್ಕಿಳಿದಿದೆ. ರೈಲು ನಿಲ್ದಾಣ ಸಮೀಪದಲ್ಲಿರುವ ಬಿವರೇಜಸ್ ಕಾರ್ಪೋರೇಶನ್‌ನ ಔಟ್‌ಲೆಟ್ ಗಳನ್ನು ಮುಚ್ಚು ಗಡೆಗೊಳಿ ಸಬೇಕೆಂಬುದಾಗಿದೆ ರೈಲ್ವೇಯ ಬೇಡಿಕೆ. ರೈಲ್ವೇಯ ತಿರುವನಂತಪುರ ಡಿವಿಶನ್‌ನಿಂದ ಈ ಕುರಿತಾಗಿ ಬೆವ್‌ಕೋಗೆ ಮನವಿ ಸಲ್ಲಿಸಲಾಗಿದೆ.  ರೈಲ್ವೇ ನಿಲ್ದಾಣಗಳ ೫೦೦ ಮೀಟರ್ ನೊಳಗಿನ ವ್ಯಾಪ್ತಿಯಿಂದ ಬೆವ್‌ಕೋದ ಔಟ್‌ಲೆಟ್‌ಗಳನ್ನು ತೆರವುಗೊಳಿ ಬೇಕೆಂದು ರೈಲ್ವೇ ಒತ್ತಾಯಿಸಿದೆ. ನವಂಬರ್ ೨ರಂದು ವರ್ಕಲದಲ್ಲಿ ಕೇರಳ ಎಕ್ಸ್‌ಪ್ರೆಸ್‌ನ ಜನರಲ್ ಕಂಪಾರ್ಟ್‌ಮೆಂಟ್‌ನಿಂದ ಯುವತಿಯನ್ನು  …

ಪೆಟ್ರೋಲ್ ಬಂಕ್ ಬಳಿ ಬೆಂಕಿ ಅನಾಹುತ: 20 ಎಕ್ರೆ ಜಮೀನು ಬೆಂಕಿಗಾಹುತಿ

ಸೀತಾಂಗೋಳಿ: ಪೆಟ್ರೋಲ್ ಬಂಕ್ ಬಳಿ ಬೆಂಕಿ ಅನಾಹುತ ಉಂಟಾಗಿ ಅಗ್ನಿ ಶಾಮಕದಳದ ಸಮಯೋಚಿತ ಕಾರ್ಯಾಚರಣೆಯಿಂದಾಗಿ ಸಂಭಾವ್ಯ   ಭಾರೀ ದೊಡ್ಡ ಅನಾಹುತ ತಪ್ಪಿಹೋದ ಘಟನೆ ನಡೆದಿದೆ. ದರ್ಭೆತ್ತಡ್ಕ ಹಿಂದೂಸ್ತಾನ್ ಪೆಟ್ರೋಲ್ ಬಂಕ್ ಸಮೀಪ ನಿನ್ನೆ ಮಧ್ಯಾಹ್ನ ಈ ಬೆಂಕಿ ಅನಾಹುತ ಸಂಭವಿಸಿದೆ. ಕುಂಬಳೆ-ಬದಿಯಡ್ಕ ರಸ್ತೆಯ ಸೀತಾಂಗೋಳಿಯ ಮಾಲಿಕ್ ದೀನಾರ್ ಕಾಲೇಜು ಪರಿಸರದಲ್ಲಿ ಮೊದಲು  ಬೆಂಕಿ ಕಾಣಿಸಿಕೊಂಡಿತು. ನಂತರ ಅದು ಇನ್ನಷ್ಟು ಪ್ರದೇಶಗಳಿಗೆ ಪಸರಿಸಿ  ಅಲ್ಲೇ ಪಕ್ಕದಲ್ಲಿರುವ ಪೆಟ್ರೋಲ್  ಬಂಕ್‌ನತ್ತ ಸಾಗುತ್ತಿರುವುದನ್ನು ಗಮನಿಸಿ ಪೆಟ್ರೋಲ್ ಬಂಕ್ ನವರು ನೀಡಿದ ಮಾಹಿತಿಯಂತೆ …

ಗೆಳೆಯನ ಜೊತೆ ಫ್ಲ್ಯಾಟ್‌ನಲ್ಲಿ ವಾಸಿಸುತ್ತಿದ್ದ ಯುವತಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆ

ಕಲ್ಲಿಕೋಟೆ: ಕೈದಪ್ಪೊಳದಲ್ಲಿ ಬಾಡಿಗೆಗೆ ವಾಸಿಸುವ ಫ್ಲ್ಯಾಟ್‌ನಲ್ಲಿ ಯುವತಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಹಚ್ಚಲಾಗಿದೆ. ಕಾಕೂರು ನಿವಾಸಿ ಹಸ್ನ (34) ಮೃತಪಟ್ಟ ಯುವತಿ. ವಿವಾಹ ವಿಚ್ಛೇಧನಗೈದ ಹಸ್ನ ಕಳೆದ ೮ ತಿಂಗಳಿಂದ ಪುದುಪ್ಪಾಡಿ ನಿವಾಸಿಯಾದ ಆದಿಲ್ ಎಂಬ ಯುವಕನ ಜೊತೆ ವಾಸಿಸುತ್ತಿದ್ದರು. ಕಾನೂನು ಪರವಾಗಿ ಇವರಿಬ್ಬರು ವಿವಾಹ ಮಾಡಿಕೊಂಡಿಲ್ಲ. ಮಂಗಳವಾರ ಬೆಳಿಗ್ಗೆ ಕೊಠಡಿ ತೆರೆಯದ ಹಿನ್ನೆಲೆಯಲ್ಲಿ ಬಾಗಿಲನ್ನು ಮುರಿದು ಒಳ ಪ್ರವೇಶಿಸಿದಾಗ ಹಸ್ನ ಫ್ಯಾನ್‌ಗೆ ನೇಣು ಬಿಗಿದ ಸ್ಥಿತಿಯಲ್ಲಿ ಕಂಡು ಬಂದಿದ್ದಾಳೆ ಎಂದು ಯುವಕ ಹೇಳಿಕೆ ನೀಡಿದ್ದಾನೆ. ಮಹಜರು …

ಜಿದ್ದಾಜಿದ್ದಿನ ಹೋರಾಟ ನೀಡಿ ಶರಣಾದ ಕಾಸರಗೋಡು ಉಪಜಿಲ್ಲೆ ಶಾಲಾ ಕಲೋತ್ಸವದಲ್ಲಿ ಹೊಸದುರ್ಗ ಉಪಜಿಲ್ಲೆಗೆ ಕಿರೀಟ

ಮೊಗ್ರಾಲ್: ಮೂರು ದಿನಗಳಿಂದ ಜರಗುತ್ತಿದ್ದ ಜಿಲ್ಲಾ ಶಾಲಾ ಕಲೋ ತ್ಸವದಲ್ಲಿ ಹೊಸದುರ್ಗ ಉಪಜಿಲ್ಲೆ ಚಾಂಪ್ಯನ್ ಪಟ್ಟ ಗಳಿಸಿದೆ. ಮೊದಲ ದಿನದಿಂದಲೇ ಕಾಸರಗೋಡು ಉಪಜಿಲ್ಲೆ ಹಾಗೂ ಹೊಸದುರ್ಗ ಉಪಜಿಲ್ಲೆ ಜಿದ್ದಾಜಿದ್ದಿನ ಹೋರಾಟದೊಂದಿಗೆ ಮುಂದುವರಿದಿದ್ದು, ನಿನ್ನೆ ರಾತ್ರಿ 7 ಗಂಟೆಯಾಗುವಾಗ ಎರಡು ಉಪ ಜಿಲ್ಲೆಗಳಿಗೂ 935 ಅಂಕ ಲಭಿಸಿತ್ತು. ಉಳಿದಿದ್ದ 4 ಸ್ಪರ್ಧೆಗಳಲ್ಲಿ 2ರ ಫಲಿತಾಂಶ ಬಂದಾಗ ಕಾಸರಗೋಡು ಉಪಜಿಲ್ಲೆಗೆ 945, ಹೊಸದುರ್ಗ ಉಪಜಿಲ್ಲೆಗೆ 943 ಅಂಕ ಲಭಿಸಿತ್ತು. ಕೊನೆಯ ಎರಡು ಸ್ಪರ್ಧೆಗಳಲ್ಲಿ 10 ಅಂಕ ಗಳಿಸಿ ಹೊಸದುಗ ಚಾಂಪ್ಯನ್ …

ಕಲೋತ್ಸವ: ಹೈಯರ್ ಸೆಕೆಂಡರಿ ನಾಟಕ ಸ್ಪರ್ಧೆಯಲ್ಲಿ ಇರಿಯಣ್ಣಿ ಶಾಲೆ ತಂಡ ರಾಜ್ಯಮಟ್ಟಕ್ಕೆ

ಕಾಸರಗೋಡು: ನಾಟಕ ಸ್ಪರ್ಧೆ ಯಲ್ಲಿ ಸತತ ನಾಲ್ಕನೇ ಬಾರಿ ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿ ಇರಿಯಣ್ಣಿ ಸರಕಾರಿ ಹೈಯರ್ ಸೆಕೆಂಡರಿ ಶಾಲೆ ಗಮನ ಸೆಳೆದಿದೆ. ಈ ವರ್ಷದ  ಮ‘ಅರಣ’ ಪಾಚಿಲ್ ಎಂಬ ನಾಟಕ ಪ್ರಥಮ ಸ್ಥಾನ ಪಡೆದು ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿದೆ. ಸಮಾಜದಲ್ಲಿನ ಮೂಢನಂಬಿಕೆ ಹಾಗೂ ತಪ್ಪು ಧೋರಣೆಗಳ ಆಧಾರದಲ್ಲಿ ಸಾಯುಜ್ ರಚಿಸಿದ ನಾಟಕವನ್ನು ಮನುಪ್ರೀತ್, ಸಾಯುಜ್, ಅಭಿನವ್ ಎಂಬಿವರು ಸೇರಿ ನಿರ್ದೇಶಿಸಿದ್ದರು. ಇದು ಪ್ರೇಕ್ಷಕರ ಮೆಚ್ಚುಗೆ ಪಡೆದಿದೆ. ಕಳೆದ ನಾಲ್ಕು ವರ್ಷಗಳಿಂದ ಈ ಶಾಲೆಯ ತಂಡ ರಾಜ್ಯಮಟ್ಟಕ್ಕೆ …

ಮಂಜೇಶ್ವರ ಬ್ಲೋಕ್ ಪಂಚಾಯತ್‌ಗೆ ಸೈಫುಲ್ಲ ತಂಙಳ್ ಅಧ್ಯಕ್ಷ, ಕಮಲಾಕ್ಷಿ ಕೆ. ಉಪಾಧ್ಯಕ್ಷೆ

ಮಂಜೇಶ್ವರ: ಮಂಜೇ ಶ್ವರ ಬ್ಲೋಕ್ ಪಂ.ನಲ್ಲಿ ಯುಡಿಎಫ್‌ನ ಸೈಫುಲ್ಲ ತಂಙಳ್ ಅಧ್ಯಕ್ಷರಾಗಿದ್ದು, ಕಾಂಗ್ರೆಸ್‌ನ ಕಮಲಾಕ್ಷಿ ಕೆ. ಉಪಾಧ್ಯಕ್ಷೆಯಾಗಿ ಆಯ್ಕೆ ಗೊಂಡಿದ್ದಾರೆ. ಬ್ಲೋಕ್ ಪಂಚಾಯತ್‌ನಲ್ಲಿ ಒಟ್ಟು ೧೬ ವಾರ್ಡ್ ಇದ್ದು, ೧೧ರಲ್ಲಿ ಯುಡಿಎಫ್, ೩ರಲ್ಲಿ ಬಿಜೆಪಿ, ೨ರಲ್ಲಿ ಎಡರಂಗ ಜಯಗಳಿಸಿದೆ. ಬಿಜೆಪಿಯಿಂದ ಅಧ್ಯಕ್ಷ ಸ್ಥಾನಕ್ಕೆ ಚಂದ್ರಾವತಿ ಶೆಟ್ಟಿ, ಉಪಾಧ್ಯಕ್ಷ ಸ್ಥಾನಕ್ಕೆ ಜ್ಯೋತಿ ರೈ ಸ್ಪರ್ಧಿಸಿದ್ದರು. ಎಡರಂಗದ ಸದಸ್ಯರ ಮತ ಅಧ್ಯಕ್ಷರ ಚುನಾವಣೆಯಲ್ಲಿ ಅಸಿಂಧುಗೊಂಡಿದ್ದು, ಉಪಾಧ್ಯಕ್ಷ ಚುನಾವಣೆಯಲ್ಲಿ ಇವರು ಹಾಜರಾಗಿರಲಿಲ್ಲ.

ಮನೆ ನಿರ್ಮಾಣಕ್ಕೆ ಅಧಿಕಾರಿಗಳ ಅಡಚಣೆ: ಬದಿಯಡ್ಕ ಪಂ.ಅಧ್ಯಕ್ಷರಿಗೆ ದೂರು

ಬದಿಯಡ್ಕ: ಪಂಚಾಯತ್‌ನಿಂದ ಮಂಜೂರುಗೊಂಡ ಮನೆ ನಿರ್ಮಾಣ ಕಾಮಗಾರಿಗೆ ಪೊಲೀಸ್ ಹಾಗೂ ಕಂದಾಯ ಇಲಾಖೆ ಅಧಿಕಾರಿಗಳು ವಿವಿಧ ಕಾರಣಗಳನ್ನು ತಿಳಿಸಿ  ತಡೆಯೊಡ್ಡಿ ಫಲಾನುಭವಿಗಳನ್ನು ಸಮಸ್ಯೆಗೆ ಸಿಲುಕಿಸುತ್ತಿದ್ದು, ಅಧಿಕಾರಿಗಳ ಇಂತಹ ಕ್ರಮಕ್ಕೆ ಕಡಿವಾಣ  ಹಾಕಬೇಕೆಂದು ನೀರ್ಚಾಲು ಸಿಂಧೂರ ಯುವಕ ವೃಂದ ಒತ್ತಾಯಿಸಿದೆ. ಈ ಬೇಡಿಕೆಯನ್ನು ಮುಂದಿರಿಸಿ ಸಿಂಧೂರ ಯುವಕ ವೃಂದದ ಪದಾಧಿಕಾರಿಗಳು ಬದಿಯಡ್ಕ ಪಂಚಾಯತ್ ಅಧ್ಯಕ್ಷ ಡಿ.ಶಂಕರ ಅವರಿಗೆ ಮನವಿ ಸಲ್ಲಿಸಿದ್ದಾರೆ. ಮನೆ ನಿರ್ಮಾಣ ಕಾಮಗಾರಿ  ವೇಳೆ  ಅಧಿಕಾರಿಗಳು ಅಲ್ಲಿಗೆ ತಲುಪಿ ವಿವಿಧ ಕಾರಣಗಳನ್ನು ತಿಳಿಸಿ ದಂಡ ವಿಧಿಸುತ್ತಿದ್ದು, ಇದರಿಂದ …

ಎಕೆಪಿಎ ಈಸ್ಟ್ ಘಟಕದಿಂದ ಹೊಸ ವರ್ಷಾಚರಣೆ

ಕಾಸರಗೋಡು: ಆಲ್ ಕೇರಳ ಫೊಟೋಗ್ರಾಫರ್ಸ್ ಅಸೋಸಿ ಯೇಶನ್ ಈಸ್ಟ್ ಘಟಕದ ಆಶ್ರಯದಲ್ಲಿ ಕಾಸರಗೋಡು ಹೊಸ ಬಸ್ ನಿಲ್ದಾಣ ಪರಿಸರದಲ್ಲಿ ರಾತ್ರಿ ವೇಳೆ ಕರ್ತವ್ಯದಲ್ಲಿದ್ದ ಪೊಲೀಸರೊಂದಿಗೆ, ಆಟೋ ಚಾಲಕರೊಂದಿಗೆ ಹೊಸ ವರ್ಷವನ್ನು ಆಚರಿಸಲಾಯಿತು.  ಕಾಸರಗೋಡು ನಗರಠಾಣೆಯ ಮಹಿಳಾ ಎಸ್‌ಐ ಅಜಿತ ಕೇಕ್ ಕತ್ತರಿಸಿ ಆಚರಣೆಗೆ ಚಾಲನೆ ನೀಡಿದರು. ಘಟಕ ಕಾರ್ಯದರ್ಶಿ ಅಖಿಲ್ ಸ್ವಾಗತಿಸಿದರು. ಕೋಶಾಧಿಕಾರಿ ಶ್ರೀಕಾಂತ್, ಜಿಲ್ಲಾ ಸಮಿತಿ ಸದಸ್ಯ ದಿನೇಶ್, ವಲಯ ಅಧ್ಯಕ್ಷ ವಾಮನ್ ಕುಮಾರ್, ವಲಯ ಕೋಶಾಧಿಕಾರಿ ಅಜಿತ್ ಕುಮಾರ್, ಮಣಿ, ಸುರೇಶ್ ಬಿ.ಜೆ, ಪಿಆರ್‌ಒ …

ನೀರ್ಚಾಲಿನಲ್ಲಿ ಸ್ಕೂಟರ್-ಕಾರು ಢಿಕ್ಕಿ : ಪೆಟ್ರೋಲ್ ಬಂಕ್ ನೌಕರ ಮೃತ್ಯು

ನೀರ್ಚಾಲು: ನೀರ್ಚಾಲಿನಲ್ಲಿ ಇಂದು ಬೆಳಿಗ್ಗೆ ಉಂಟಾದ ವಾಹನ ಅಪಘಾತದಲ್ಲಿ ಪೆಟ್ರೋಲ್ ಬಂಕ್ ನೌಕರನಾದ ಯುವಕ ಮೃತಪಟ್ಟ ದಾರುಣ ಘಟನೆ ಸಂಭವಿಸಿದೆ. ಸ್ಕೂಟರ್ ಹಾಗೂ ಕಾರು ಢಿಕ್ಕಿ ಹೊಡೆದು ಈ ಅಪಘಾತವುಂಟಾಗಿದೆ. ಕನ್ಯಪ್ಪಾಡಿ ಬಳಿಯ ಮಾಡತ್ತಡ್ಕ ನಿವಾಸಿ ಯೂ ಸೀತಾಂಗೋಳಿ ಪೆಟ್ರೋಲ್ ಬಂಕ್ ನೌಕರನಾದ ಮುಹಮ್ಮದ್ ಸೈನುದ್ದೀನ್ (29) ಮೃತಪಟ್ಟ ದುರ್ದೈವಿ. ಕುಂಬಳೆ-ಮುಳ್ಳೇರಿಯ ಕೆಎಸ್‌ಟಿಪಿ ರಸ್ತೆಯಲ್ಲಿ ಎಸ್‌ಬಿಐ ನೀರ್ಚಾಲು ಶಾಖೆಯ ಮುಂಭಾಗದ ರಸ್ತೆಯಲ್ಲಿ ಇಂದು ಬೆಳಿಗ್ಗೆ ೬.೧೫ರ ವೇಳೆ ಈ ಅಪಘಾತವುಂಟಾಗಿದೆ. ಮುಹಮ್ಮದ್ ಸೈನುದ್ದೀನ್ ಪೆಟ್ರೋಲ್ ಬಂಕ್‌ನ ಕೆಲಸಕ್ಕಾಗಿ …

ಹೊಸ ವರ್ಷಾಚರಣೆ : ಪೊಲೀಸರಿಂದ ಕಠಿಣ ನಿರ್ದೇಶ

ಕಾಸರಗೋಡು: ಹೊಸ ವರ್ಷಾಚರಣೆ ಅತಿರೇಖಕ್ಕೆ ಹೋಗದಿರುವಂತೆ ಕಠಿಣ ಕ್ರಮ ಕೈಗೊಳ್ಳಲು ತೀರ್ಮಾನಿಸಲಾಗಿದೆ. ಆಚರಣೆಗಳು ಯಾವ ವಿಧದಲ್ಲಿರಬೇಕೆಂಬ ಬಗ್ಗೆ ಪೊಲೀಸರು ರಾಜ್ಯಮಟ್ಟದಲ್ಲಿಯೇ ರೂಪುರೇಷೆ ಹೊರಡಿಸಿದ್ದಾರೆ. ಆಚರಣೆಯ ಮರೆಯಲ್ಲಿ ಸಮಾಜದ್ರೋಹ ಚಟುವಟಿಕೆಗಳನ್ನು ನಡೆಸಬಾರದು. ಸಾಕಷ್ಟು ಬೆಳಕು ಸೌಕರ್ಯ ಇರುವ ಸ್ಥಳಗಳಲ್ಲಿ ಮಾತ್ರವೇ ಆಚರಣೆ ನಡೆಸಬೇಕು. ಬಾರ್ ಹೋಟೆಲ್‌ಗಳಲ್ಲಿ, ರೆಸ್ಟೋರೆಂಟ್‌ಗಳಲ್ಲಿ, ರೆಸಾರ್ಟ್‌ಗಳಲ್ಲಿ, ಇತರ ಸಂಬಂಧಿತ ಸಂಸ್ಥೆಗಳಲ್ಲಿ, ಡಿಜೆ ಪಾರ್ಟಿಗಳನ್ನು ನಡೆಸುವಾಗ ಭಾಗವಹಿಸುವವರ ಮಾಹಿತಿಗಳನ್ನು ಮುಂದಾಗಿಯೇ ತಿಳಿಸಬೇಕು, ಕಾರ್ಯಕ್ರಮದಲ್ಲಿ ಮದ್ಯಪಾನದ ವ್ಯವಸ್ಥೆ ಇದ್ದರೆ ಪ್ರತ್ಯೇಕ ಪರವಾನಗಿ ಪಡೆಯಬೇಕು, ಕಾರು, ಬೈಕ್ ರೇಸಿಂಗ್‌ಗೆ ಅವಕಾಶವಿಲ್ಲ, …