ಕ್ಷೇಮ ಪಿಂಚಣಿ ನಾಳೆಯಿಂದ

ತಿರುವನಂತಪುರ: ಈ ತಿಂಗಳ ಸಾಮಾಜಿಕ ಭದ್ರತೆ, ಕ್ಷೇಮನಿಧಿ ಪಿಂಚಣಿಗಳನ್ನು ನಾಳೆಯಿಂದ ವಿತರಿಸಲಾಗುವುದು. ಇದಕ್ಕಾಗಿ 841 ಕೋಟಿ ರೂ. ಮಂಜೂರು ಮಾಡಿರುವುದಾಗಿ ವಿತ್ತ ಸಚಿವ ಕೆ.ಎನ್. ಬಾಲಗೋಪಾಲನ್ ತಿಳಿಸಿದ್ದಾರೆ. 62 ಲಕ್ಷ ಮಂದಿಗೆ 1600 ರೂ.ನಂತೆ ಲಭಿಸಲಿದೆ. 26.62  ಲಕ್ಷ ಮಂದಿಗೆ ಬ್ಯಾಂಕ್ ಖಾತೆಯ ಮೂಲಕ ಮೊತ್ತ ತಲುಪುವುದು. ಇತರರಿಗೆ ಸಹಕಾರಿ ಬ್ಯಾಂಕ್‌ಗಳ ಮೂಲಕ ಮನೆಗೆ ತಲುಪಿ ಪಿಂಚಣಿ ನೀಡಲಾಗುವುದು. 8.46 ಲಕ್ಷ ಮಂದಿಗೆ ರಾಷ್ಟ್ರೀಯ ಪಿಂಚಣಿ ಯೋಜನೆಯ ಕೇಂದ್ರದ ಪಾಲು ಲಭಿಸಲು ಬಾಕಿ ಇದೆ. ಇದಕ್ಕೆ ಅಗತ್ಯವಾದ …

ರಾಹುಲ್ ಗಾಂಧಿ ಹೋರಾಟಕ್ಕೆ ಮಂಜೇಶ್ವರ ಕಾಂಗ್ರೆಸ್ ಬೆಂಬಲ

ಮಂಜೇಶ್ವರ: ಲೋಕಸಭೆಯ ವಿಪಕ್ಷ ನಾಯಕ ರಾಹುಲ್ ಗಾಂಧಿ ರಾಷ್ಟ್ರವ್ಯಾಪಿ ನಡೆಸುತ್ತಿರುವ ಮತಕಳ್ಳತನ ಆರೋಪ ಹೋರಾಟಕ್ಕೆ ಬೆಂಬಲ ಸೂಚಕವಾಗಿ  ನಡೆಸಲಾಗುವ ಸಹಿ ಸಂಗ್ರಹ ಅಭಿಯಾನದ ಮಂಜೇಶರ ಬ್ಲಾಕ್ ಮಟ್ಟದ ಉದ್ಘಾಟನೆ ಕಾಂಗ್ರೆಸ್ ಜಿಲ್ಲಾ ಸಮಿತಿ ಅಧ್ಯಕ್ಷ ಪಿ.ಕೆ. ಫೈಸಲ್ ಉದ್ಘಾಟಿಸಿದರು.  ಹೊಸಂಗಡಿ ಜಂಕ್ಷನ್‌ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಂಜೇಶ್ವರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮುಹಮ್ಮದ್ ಡಿಎಂಕೆ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಕಾಂಗ್ರೆಸ್ ನಾಯಕರಾದ ಹಕೀಂ ಕುನ್ನಿಲ್, ರಮೇಶನ್ ಕರುವಾಚ್ಚೇರಿ, ಎಂ.ಸಿ. ಪ್ರಭಾಕರನ್, ಶಾಹುಲ್ ಹಮೀದ್ ಪೆರ್ಲ ಮಾತನಾಡಿದರು. ನೇತಾರರಾದ ಉಮ್ಮರ್ …

ಆಲ್ ಕೇರಳ ಕಾಲೇಜು ಗೆಸ್ಟ್ ಟೀಚರ್ಸ್ ಅಸೋಸಿಯೇಶನ್‌ಗೆ ರೂಪು

ಕಾಸರಗೋಡು: ರಾಜ್ಯದ ವಿವಿಧ ಕಾಲೇಜುಗಳಲ್ಲಿ ಸೇವೆ ಸಲ್ಲಿಸುತ್ತಿರುವ ಗೆಸ್ಟ್ ಅಧ್ಯಾಪಕರು ಒಂದುಗೂಡಿ ತಮ್ಮದೇ ಆಲ್ ಕೇರಳ ಕಾಲೇಜ್ ಗೆಸ್ಟ್ ಟೀಚರ್ಸ್ ಅಸೋಸಿಯೇಶನ್ ಎಂಬ ಸಂಘಟನೆಗೆ   ರೂಪು ನೀಡಿದ್ದಾರೆ. ಈ ಸಂಘಟನೆ ರೂಪೀಕರಣ ಸಭೆಯಲ್ಲಿ ರಾಜ್ಯದ ಎಲ್ಲಾ ಜಿಲ್ಲೆಗಳ ಪ್ರತಿನಿಧಿಗಳು ಭಾಗವಹಿಸಿದರು.  ಈ ಸಂಘಟನೆಯ ಮೊದಲ ರಾಜ್ಯ ಸಮಿತಿಯ ಪದಾಧಿಕಾರಿಗಳನ್ನಾಗಿ ಡಾ. ಎಂ. ಹರಿನಾಗರಾಜ್ (ಅಧ್ಯಕ್ಷರು), ಡಾ ಆರ‍್ಯಾ ಪಿ ಮಣಿ, ಎಸ್, ಸನಲ್, ಆದಿರಾ, ಡಾ. ಸತ್ಯಪ್ರಕಾಶ್ (ಉಪಾಧ್ಯಕ್ಷರು), ಪಿ.  ಸೋಶೀನಾ (ಪ್ರಧಾನ ಕಾರ್ಯದರ್ಶಿ), ಕೆ. ಅಜು …

ಎಕೆಪಿಎ ಬದಿಯಡ್ಕ ಘಟಕ ವಾರ್ಷಿಕ ಮಹಾಸಭೆ; ಸನ್ಮಾನ

ಬದಿಯಡ್ಕ: ಆಲ್ ಕೇರಳ ಫೊಟೋಗ್ರಾರ‍್ಸ್ ಅಸೋಸಿಯೇಶನ್ ಬದಿಯಡ್ಕ ಘಟಕದ ವಾರ್ಷಿಕ ಮಹಾಸಭೆ ಸೀತಾಂಗೋಳಿ ಶ್ರೀದೇವಿ ಭಜನಾ ಮಂದಿರದ ಸಭಾಭವನದಲ್ಲಿ ನಿನ್ನೆ ಜರಗಿತು. ಘಟಕದ ಅಧ್ಯಕ್ಷ ಬಾಲಕೃಷ್ಣ ಎನ್. ಧ್ವಜಾರೋಹಣಗೈದು ಅಧ್ಯಕ್ಷತೆ ವಹಿಸಿದ್ದರು. ಎಕೆಪಿಎ ಕುಂಬಳೆ ವಲಯ ಅಧ್ಯಕ್ಷ ಅಪ್ಪಣ್ಣ ಸೀತಾಂಗೋಳಿ ದೀಪಬೆಳಗಿಸಿ ಉದ್ಘಾಟಿಸಿ ಮಾತನಾಡಿದರು. ಜಿಲ್ಲಾ ಉಪಾಧ್ಯಕ್ಷ ವೇಣು ವಿ.ವಿ., ಜಿಲ್ಲಾ ಕ್ರೀಡಾ ಸಂಚಾಲಕ ನಿತ್ಯಪ್ರಸಾದ್, ಕುಂಬಳೆ ವಲಯ ಕಾರ್ಯದರ್ಶಿ, ಬದಿಯಡ್ಕ ಘಟಕ ಉಸ್ತುವಾರಿ ಸುರೇಶ್ ಆಚಾರ್ಯ, ಕುಂಬಳೆ ವಲಯ ಕೋಶಾದಿsಕಾರಿ ವೇಣುಗೋಪಾಲ ನೀರ್ಚಾಲು ಮಾತನಾಡಿದರು. ಇದೇ …

ಕುಂಬಳೆ ಕೇರಳೋತ್ಸವ: ಫುಟ್‌ಬಾಲ್‌ನಲ್ಲಿ ಮೊಗ್ರಾಲ್ ನೆಕ್ಸ್ಟ್‌ಜೆನ್ ಪ್ರಥಮ

ಕುಂಬಳೆ: ಮೊಗ್ರಾಲ್ ಸರಕಾರಿ ಶಾಲೆಯ ಮೈದಾನದಲ್ಲಿ ನಡೆದ ಕುಂಬಳೆ ಪಂ. ಕೇರಳೋತ್ಸವದ ಫುಟ್‌ಬಾಲ್ ಸ್ಪರ್ಧೆಯಲ್ಲಿ ಮೊಗ್ರಾಲ್ ನೆಕ್ಸ್ಟ್‌ಜೆನ್ ಜಯಗಳಿಸಿದೆ. ಜಿಎಸ್‌ಕೆ ಆರಿಕ್ಕಾಡಿ ಕಡವತ್ತ್ ದ್ವಿತೀಯ ಸ್ಥಾನ ಪಡೆದಿದೆ. ಪಂ. ಉಪಾಧ್ಯಕ್ಷ ನಾಸರ್ ಮೊಗ್ರಾಲ್ ಪಂದ್ಯಾಟ ಉದ್ಘಾಟಿಸಿದರು. ವಾರ್ಡ್ ಪ್ರತಿನಿಧಿ ರಿಯಾಸ್ ಮೊಗ್ರಾಲ್ ಅಧ್ಯಕ್ಷತೆ ವಹಿಸಿದರು. ಎಚ್.ಎ. ಖಾಲಿದ್, ಎಂ.ಎಲ್. ಅಬ್ಬಾಸ್, ಇಬ್ರಾಹಿಂ, ಮಖ್‌ದೂಂ ಸ್ಪರ್ಧೆ ನಿಯಂತ್ರಿಸಿದರು. ಮೊಗ್ರಾಲ್ ಸ್ಪೋರ್ಟ್ಸ್ ಕ್ಲಬ್ ಸದಸ್ಯರು, ವಿವಿಧ ಕ್ಲಬ್ ಪ್ರತಿನಿಧಿಗಳು ಭಾಗವಹಿಸಿದರು.

ಮಜೀರ್ಪಳ್ಳ -ಗೋಳಿಪಡ್ಪು ಕಾಂಕ್ರೀಟ್ ರಸ್ತೆ ಉದ್ಘಾಟನೆ

ಮಂಜೇಶ್ವರ: ಮೀಂಜ ಪಂಚಾ ಯತ್‌ನ 1ನೇ ವಾರ್ಡ್ ಮಜೀರ್ಪಳ್ಳ-ಗೋಳಿಪಡ್ಪು ಕಾಂಕ್ರೀಟ್ ರಸ್ತೆ ಉದ್ಘಾಟನೆ ನಿನ್ನೆ ನಡೆಯಿತು. ಉದ್ಯೋಗ ಖಾತರಿ ವಾರ್ಡ್ ಸದಸ್ಯ, ಕ್ಷೇಮ ಕಾರ್ಯ ಸ್ಥಾಯೀ ಸಮಿತಿ ಅಧ್ಯಕ್ಷ  ಬಾಬು ಕುಳೂರು ಅಧ್ಯಕ್ಷತೆ ವಹಿಸಿದ್ದರು. ಪಂಚಾಯತ್ ಅಧ್ಯಕ್ಷೆ ಸುಂದರಿ ಆರ್ ಶೆಟ್ಟಿ ಉದ್ಘಾಟಿಸಿದರು. ಉಪಾಧ್ಯಕ್ಷ ಜಯರಾಮ ಬಲ್ಲಂಗು ಡೇಲು, ಆರೋಗ್ಯ ಸ್ಥಾಯೀ ಸಮಿತಿ ಅಧ್ಯಕ್ಷೆ ಸರಸ್ವತಿ ಬಾಳ್ಯೂರು, ವಾರ್ಡ್ ಪ್ರತಿನಿಧಿ ಮಿಸ್ರಿಯಾ, ಪಂಚಾಯತ್ ಕಾರ್ಯದರ್ಶಿ ಸಜೀನ, ಮೊಹಮ್ಮದ್, ಸಲೀಂ ಮಜೀರ್ಪಳ್ಳ, ಉದ್ಯೋಗ ಖಾತರಿ ಅಧಿಕಾರಿಗಳಾದ ಅಜಿತ್, ರೇವತಿ, …

ನಗರದ ಕ್ಲಿನಿಕ್‌ನಲ್ಲಿ ಭಾರೀ ಬೆಂಕಿ ಅನಾಹುತ: ಲಕ್ಷಾಂತರ ರೂ. ನಷ್ಟ

ಕಾಸರಗೋಡು: ನಗರದ ಅಶ್ವಿನಿ ನಗರದ ಮಿಲಾ ಶಾಪಿಂಗ್ ಸೆಂಟರ್‌ನಲ್ಲಿ ಕಾರ್ಯವೆಸಗುತ್ತಿರುವ ಸ್ಪರ್ಶ ಸ್ಕಿನ್ ಆಂಡ್ ಕಿಡ್ಸ್ ಕೇರ್ ಕ್ಲಿನಿಕ್‌ನಲ್ಲಿ ನಿನ್ನೆ ರಾತ್ರಿ  ಭಾರೀ ಅಗ್ನಿ ಅನಾಹುತ ಸಂಭವಿಸಿದ್ದು, ಇದರಿಂದ ಲಕ್ಷಾಂತರ ರೂ.ಗಳ ನಷ್ಟ ಉಂಟಾಗಿದೆ. ನಿನ್ನೆ ರಾತ್ರಿ ಸುಮಾರು 11.20ರ ವೇಳೆ ಕ್ಲಿನಿಕ್‌ನಿಂದ ಭಾರೀ ಹೊಗೆ ಹೊರಸೂಸುವುದನ್ನು ಗಮನಿಸಿದ ಪರಿಸರ ನಿವಾಸಿಗಳು ತಕ್ಷಣ ನೀಡಿದ ಮಾಹಿತಿಯಂತೆ  ಸೀನಿಯರ್ ಫಯರ್ ಆಂಡ್ ರೆಸ್ಕ್ಯೂ ಆಫೀಸರ್ ವಿ.ಎನ್. ವೇಣುಗೋಪಾಲ್ ನೇತೃತ್ವದಲ್ಲಿ ಅಗ್ನಿಶಾಮಕದಳದ ಎರಡು ಯೂನಿಟ್ ವಾಹನ ತಕ್ಷಣ ಸ್ಥಳಕ್ಕೆ ತಲುಪಿ …

ರೈಲ್ವೇ ನೌಕರ ರೈಲು ಢಿಕ್ಕಿ ಹೊಡೆದು ಮೃತಪಟ್ಟ ಸ್ಥಿತಿಯಲ್ಲಿ ಪತ್ತೆ

ಕಾಸರಗೋಡು: ಚೌಕಿ ಸಿಪಿಸಿಆರ್‌ಐ ಸಮೀಪ ರೈಲ್ವೇ ನೌಕರನೋರ್ವ ರೈಲು ಢಿಕ್ಕಿ ಹೊಡೆದು ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಬಿಹಾರದ ಬೋಜ್‌ಪುರ್ ಗೋರ್‌ಪೋಕಾರ್ ನಿವಾಸಿ ಅರವಿಂದ್ ಕುಮಾರ್ (44) ಮೃತಪಟ್ಟ ವ್ಯಕ್ತಿಯಾಗಿ ದ್ದಾರೆ. ರೈಲ್ವೇ ಹಳಿ ಮೈಂಟೆನೆನ್ಸ್ ಕೆಲಸ ನಿರ್ವಹಿಸುತ್ತಿದ್ದರು. ಇಂದು ಬೆಳಿಗ್ಗೆ 10 ಗಂಟೆ ವೇಳೆ ಘಟನೆ ನಡೆದಿದೆ. ಕಣ್ಣೂರು- ಮಂಗಳೂರು ಪ್ಯಾಸೆಂಜರ್ ರೈಲು ಗಾಡಿ ಇವರಿಗೆ ಢಿಕ್ಕಿ ಹೊಡೆದಿ ರುವುದಾಗಿ ಅಂದಾಜಿಸಲಾಗಿದೆ. ವಿಷಯ ತಿಳಿದು ಕಾಸರಗೋಡು ನಗರ ಠಾಣೆ ಪೊಲೀಸರು ಸ್ಥಳಕ್ಕೆ ತಲುಪಿದ್ದಾರೆ. ಮೃತ ದೇಹವನ್ನು ಕಾಸರಗೋಡು …

ಶಾಲಾ ವಿದ್ಯಾರ್ಥಿ ಸಹಿತ ಜಿಲ್ಲೆಯಲ್ಲಿ ಮೂವರು ನಾಪತ್ತೆ

ಕಾಸರಗೋಡು: ಜಿಲ್ಲೆಯಲ್ಲಿ ಮೂರು ಪೊಲೀಸ್ ಠಾಣೆ ವ್ಯಾಪ್ತಿಯಿಂದ ಶಾಲಾ ವಿದ್ಯಾರ್ಥಿ ಸಹಿತ  ಮೂವರು ನಾಪತ್ತೆಯಾದ ಬಗ್ಗೆ ವರದಿಯಾಗಿದೆ. ಈ ಬಗ್ಗೆ ಪೊಲೀಸರು ಕೇಸು ದಾಖಲಿಸಿ ತನಿಖೆ ಆರಂಭಿಸಿದ್ದಾರೆ. ಉಪ್ಪಳ ಸರಕಾರಿ ಪ್ರೌಢಶಾಲೆಯ ೮ನೆ ತರಗತಿ ವಿದ್ಯಾರ್ಥಿಯೂ ಉಪ್ಪಳ ಪಾರಕಟ್ಟೆ ನಿವಾಸಿಯಾದ 12ರ ಹರೆಯದ ಬಾಲಕ ನಿನ್ನೆ ಬೆಳಿಗ್ಗೆ ನಾಪತ್ತೆಯಾಗಿದ್ದಾನೆ. ಬಾಲಕ ಸಂಜೆ ಮನೆಗೆ ಮರಳಿ ತಲುಪದಿರುವುದರಿಂದ ನಡೆಸಿದ ತನಿಖೆ ವೇಳೆ ಈತ ಶಾಲೆಗೂ ತಲುಪಿಲ್ಲವೆಂದು ತಿಳಿದುಬಂದಿದೆ. ಈ ಬಗ್ಗೆ ತಾಯಿ ನೀಡಿದ ದೂರಿನಂತೆ ಮಂಜೇಶ್ವರ ಪೊಲೀಸರು ಕೇಸು …

ವ್ಯಕ್ತಿ ನೇಣು ಬಿಗಿದು ಸಾವಿಗೀಡಾದ ಸ್ಥಿತಿಯಲ್ಲಿ ಪತ್ತೆ

ಅಡೂರು: ವ್ಯಕ್ತಿಯೊಬ್ಬರು ನೇಣು ಬಿಗಿದು ಸಾವಿಗೀಡಾದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಅಡೂರು ಬಳಿಯ ಮಾಟೆ ನಿವಾಸಿ ನಾರಾಯಣ ಯಾನೆ ನಾಣು (55) ಎಂಬವರು ಮೃತಪಟ್ಟ ವ್ಯಕ್ತಿಯಾಗಿ ದ್ದಾರೆ. ನಿನ್ನೆ ಮಧ್ಯಾಹ್ನ ಮನೆ ಸಮೀಪದ ಕೊಟ್ಟಿಗೆಯಲ್ಲಿ ಇವರು ನೇಣು ಹಾಕಿದ ಸ್ಥಿತಿಯಲ್ಲಿ ಕಂಡು ಬಂದಿದ್ದಾರೆ. ಕೂಡಲೇ ಅವರನ್ನು ಕೆಳಗಿಳಿಸಿ ಆಸ್ಪತ್ರೆಗೆ ತಲುಪಿಸಿದರೂ ಜೀವ ರಕ್ಷಿಸಲಾಗಲಿಲ್ಲ.  ಕಾಸರ ಗೋಡು ಜನರಲ್ ಆಸ್ಪತ್ರೆಯಲ್ಲಿ  ಮೃತದೇಹದ  ಮರಣೋತ್ತರ ಪರೀಕ್ಷೆ ನಡೆಸಿದ ಬಳಿಕ ಅಂತ್ಯ ಸಂಸ್ಕಾರ ನಡೆಯಿತು. ದಿವಂಗತರಾದ ಅಪ್ಪೆ ಬೆಳ್ಚಪ್ಪಾಡ-ತೇಯಮ್ಮ ದಂಪತಿ ಪುತ್ರನಾದ ಮೃತರು …