ನೀರ್ಚಾಲು ಶ್ರೀ ಕುಮಾರಸ್ವಾಮಿ ಭಜನಾ ಮಂದಿರ ಛಾಯಾಚಿತ್ರ ಪ್ರತಿಷ್ಠೆ

ಬದಿಯಡ್ಕ: ನೀರ್ಚಾಲು ಕುಮಾರಸ್ವಾಮಿ ಮಂದಿರ ಧಾರ್ಮಿಕ ಶ್ರದ್ಧೆಗೆ ನೀಡಿದ ಕೈಗನ್ನಡಿ. ಮಂದಿರ, ದೇವಸ್ಥಾನ, ಶಾಲೆಗಳು ಸರಿಯಾಗಿದ್ದರೆ ಪೂರ್ಣ ಜನರು ಸಂಸ್ಕಾರವಂತರಾಗುತ್ತಾರೆ ಎಂದು ಆನೆಗುಂದಿ ಮಹಾಸಂಸ್ಥಾನ ಸರಸ್ವತೀ ಪೀಠದ ಶ್ರೀ ಕಾಳಹಸ್ತೇಂದ್ರ ಸರಸ್ವತೀ ಸ್ವಾಮೀಜಿ ನುಡಿದರು. ಅವರು ನೀರ್ಚಾಲು ಶ್ರೀ ಕುಮಾರಸ್ವಾಮಿ ಭಜನಾ ಮಂದಿರದ ಪುನಃ ಪ್ರತಿಷ್ಠಾ ಮಹೋತ್ಸವದ ಧಾರ್ಮಿಕ ಸಭೆಯಲ್ಲಿ ಆಶೀರ್ವಚನ ನೀಡಿದರು. ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ರಾಧಾಕೃಷ್ಣ ಭಟ್ ಖಂಡಿಗೆ ಅಧ್ಯಕ್ಷತೆ ವಹಿಸಿದ್ದರು. ಬದಿಯಡ್ಕ ಪಂ. ಅಧ್ಯಕ್ಷ ಶಂಕರ ಡಿ., ಉಪಾಧ್ಯಕ್ಷೆ ಅಶ್ವಿನಿ ಕೆ.ಎಂ, ಸದಸ್ಯೆ …

ಉಪ್ಪಳ ಅಗ್ನಿಶಾಮಕದಳ ಕೇಂದ್ರ ನೂತನ ಕಟ್ಟಡ ಉದ್ಘಾಟನೆ 5ರಂದು

ಉಪ್ಪಳ: ಮಂಗಲ್ಪಾಡಿ ಪಂಚಾಯತ್‌ನ 7ನೇ ವಾರ್ಡ್ ಪ್ರತಾಪನಗರದಲ್ಲಿ 1.5 ಕೋಟಿ ರೂಗಳ ವೆಚ್ಚದಲ್ಲಿ ನಿರ್ಮಾಣಗೊಂಡಿರುವ ಉಪ್ಪಳ ಅಗ್ನಿ ಶಾಮಕ ಮತ್ತು ರಕ್ಷಣಾ ಕೇಂದ್ರದ ನೂತನ ಕಟ್ಟಡದ ಉದ್ಘಾಟನಾ ಸಮಾರಂಭ ಮಾ.5ರಂದು ಅಪರಾಹ್ನ 3.30ಕ್ಕೆ ಜರಗಲಿದೆ. ಶಾಸಕ ಎ.ಕೆ.ಎಂ ಅಶ್ರಫ್ ಅಧ್ಯಕ್ಷತೆ ವಹಿಸಲಿದ್ದು, ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಆನ್‌ಲೈನ್‌ನಲ್ಲಿ ಉದ್ಘಾಟಿಸುವರು. ಸಂಸದ ರಾಜ್‌ಮೋಹನ್ ಉಣ್ಣಿತ್ತಾನ್ ಮುಖ್ಯ ಅತಿಥಿಯಾಗಿ, ಅಗ್ನಿ ಶಾಮಕದಳ ಅಧಿಕಾರಿಗಳು, ಜನಪ್ರತಿನಿಧಿಗಳು ಮತ್ತು ಸಾಮಾಜಿಕ, ರಾಜಕೀಯ ಕ್ಷೇತ್ರದ ಪ್ರಮುಖ ವ್ಯಕ್ತಿಗಳು ಭಾಗವಹಿಸುವರು.

ಮುನಿಪುರ ಶ್ರೀ ಗೋಪಾಲಕೃಷ್ಣ ದೇವಸ್ಥಾನ ಬ್ರಹ್ಮಕಲಶೋತ್ಸವ ಆರಂಭ

ಕುಂಬ್ಡಾಜೆ: ಮುನಿಯೂರು ಮುನಿಪುರ ಶ್ರೀ ಗೋಪಾಲಕೃಷ್ಣ ದೇವಸ್ಥಾನದ ನವೀಕರಣ ಪುನರ್ ಪ್ರತಿಷ್ಠಾ ಅಷ್ಟಬಂಧ ಬ್ರಹ್ಮಕಲಶೋತ್ಸವ ಭಾನುವಾರ ಬೆಳಿಗ್ಗೆ ಮಹಾಗಣಪತಿ ಹೋಮದೊಂದಿಗೆ ಆರಂಭಗೊಂಡಿತು. ಉಗ್ರಾಣ ಮುಹೂರ್ತ, ಬೊಳ್ಳೂರು ಶ್ರೀ ಸದಾಶಿವ ದೇವಸ್ಥಾನದಿಂದ ಹಸಿರುವಾಣಿ ಹೊರೆಕಾಣಿಕೆ ಮೆರವಣಿಗೆ ಜರಗಿತು. ಇಂದು ಬೆಳಿಗ್ಗೆ ಗಣಪತಿ ಹೋಮ, ಶಾಂತಿಹೋಮ, ವಿವಿಧ ವೈದಿಕ ಕಾರ್ಯಕ್ರಮಗಳು, ಮಧ್ಯಾಹ್ನ ಮಹಾಪೂಜೆ ಜರಗಿತು. ಸಂಜೆ 7ರಿಂದ ಹೋಮ ಕಲಶಾಭಿಷೇಕ, ಅಂಕುರಪೂಜೆ ಸಹಿತ ವಿವಿಧ ವೈದಿಕ ಕಾರ್ಯಕ್ರಮ ಗಳು, ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಸಂಜೆ 6.30ರಿಂದ ನಂದನ್ ಶರ್ಮ ಪಂಜಿತ್ತಡ್ಕ, ಇಶಾನಿ …

ಮಯ್ಯಳ ವಿ.ಸಿ.ಬಿ. ಕಂ ಬ್ರಿಡ್ಜ್ ಕಾಮಗಾರಿ ಉದ್ಘಾಟನೆ

ದೇಲಂಪಾಡಿ: ದೇಲಂಪಾಡಿ ಪಂಚಾಯತ್‌ನ ಸಾಲತ್ತಡ್ಕ ಮಯ್ಯಳ ವಿ.ಸಿ.ಬಿ. ಕಂ ಬ್ರಿಡ್ಜ್‌ನ ಪುನರ್ ನಿರ್ಮಾಣಕ್ಕೆ ಕಾಸರಗೋಡು ಅಭಿವೃದ್ಧಿ ಪ್ಯಾಕೇಜ್‌ನಿಂದ ಮಂಜೂರು ಮಾಡಿದ ಎರಡೂವರೆ ಕೋಟಿ ರೂ.ಗಳ ಕಾಮಗಾರಿಯ ಉದ್ಘಾಟನೆಯನ್ನು ಶಾಸಕ ಸಿ.ಎಚ್. ಕುಂಞಂಬು ನೆರವೇರಿಸಿದರು. ಪಂಚಾಯತ್ ಅಧ್ಯಕ್ಷ ಎ. ಮುಸ್ತಫ ಹಾಜಿ ಅಧ್ಯಕ್ಷತೆ ವಹಿಸಿದರು. ಮೈನರ್ ಇರಿಗೇಶನ್ ಅಸಿಸ್ಟೆಂಟ್ ಎಕ್ಸಿಕ್ಯೂಟಿವ್ ಇಂಜಿನಿಯರ್ ಅನೂಪ್ ಕುಮಾರ್ ವರದಿ ಮಂಡಿಸಿದರು. ಪಂ. ಉಪಾಧ್ಯಕ್ಷೆ ಬಿ. ಶಾರದ, ಸ್ಥಾಯಿ ಸಮಿತಿ ಅಧ್ಯಕ್ಷರಾದ ರತನ್ ಕುಮಾರ್, ಸೈರಾ ಎ.ಬಿ. ಬಶೀರ್, ಕಾರಡ್ಕ ಬ್ಲೋಕ್ ಪಂ. …

ಮಲ್ಲ ಕ್ಷೇತ್ರದ ಅರ್ಚಕ ತೋಡಿನಲ್ಲಿ ಮೃತಪಟ್ಟ ಸ್ಥಿತಿಯಲ್ಲಿ ಪತ್ತೆ

ಕಾಸರಗೋಡು: ಮಲ್ಲ ಶ್ರೀ ದುರ್ಗಾಪರಮೇಶ್ವರಿ ಕ್ಷೇತ್ರದ ಅರ್ಚಕ ತೋಡಿನಲ್ಲಿ ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಕರ್ನಾಟಕದ ವಿಟ್ಲ ನಿವಾಸಿಯೂ, ಕ್ಷೇತ್ರದ ಅಧೀನತೆಯ ಲ್ಲಿರುವ ಕಟ್ಟಡದಲ್ಲಿ ವಾಸಿಸಿ ಕೆಲಸ ನಿರ್ವಹಿಸುತ್ತಿದ್ದ ಬಿ. ಅನಂತಕೃಷ್ಣ ಭಟ್ (49) ಮೃತಪಟ್ಟ ವ್ಯಕ್ತಿ. ೨೭ ವರ್ಷಗಳ ಹಿಂದೆ ಇವರು ಮಲ್ಲ ಕ್ಷೇತ್ರದಲ್ಲಿ ಅರ್ಚಕನಾಗಿ ಕೆಲಸಕ್ಕೆ ಸೇರಿದ್ದರೆಂದು ಸಹೋದರ ತಿಳಿಸಿದ್ದಾರೆ. ನಿನ್ನೆ ಸಂಜೆ ಕ್ಷೇತ್ರದಲ್ಲಿ  ಪೂಜೆ ಕಾರ್ಯಕ್ಕೆ ಇವರು ತಲುಪಬೇಕಾಗಿತ್ತು. ಆದರೆ ನಾಪತ್ತೆಯಾದ ಹಿನ್ನೆಲೆಯಲ್ಲಿ ನೌಕರರು ವಾಸಸ್ಥಳಕ್ಕೆ ತಲುಪಿದರೂ  ಪತ್ತೆಯಾಗಲಿಲ್ಲ. ಬಳಿಕ ಸಿಸಿ ಟಿವಿ ಕ್ಯಾಮರಾಗಳ …

ನಿವೃತ್ತ ಮುಖ್ಯೋಪಾಧ್ಯಾಯ ಐ. ಸದಾಶಿವ ಆಳ್ವ ನಿಧನ

ಉಪ್ಪಳ: ಮೂಲತ: ಉಪ್ಪಳ ರೈಲ್ವೇ ನಿಲ್ದಾಣ ರಸ್ತೆ ನಿವಾಸಿಯೂ ಇದೀಗ ಬೆಂಗಳೂರಿನಲ್ಲಿ ವಾಸವಾಗಿರುವ ನಿವೃತ್ತ ಮುಖ್ಯೋಪಾಧ್ಯಾಯ ಐ. ಸದಾಶಿವ ಆಳ್ವ ಇಚ್ಲಂ ಗೋಡು (95) ಬೆಂಗಳೂರಿ ನಲ್ಲಿರುವ ಪುತ್ರಿಯ ಮನೆಯಲ್ಲಿ ನಿಧನ ಹೊಂದಿದರು. ಇವರು ಉಪ್ಪಳ ಸರಕಾರಿ ಶಾಲೆಯಲ್ಲಿ ಅಧ್ಯಾಪಕರಾಗಿ, ಮುಖ್ಯೋಪಾಧ್ಯಾಯರಾಗಿ ನಿವೃತ್ತಿ ಹೊಂದಿದ್ದರು. ಅಲ್ಲದೆ ಮಂಜೇಶ್ವರ-ಉಪ್ಪಳ ಲಯನ್ಸ್ ಕ್ಲಬ್‌ನಲ್ಲಿ ಹಲವು ವರ್ಷಗಳ ಕಾಲ ಅಧ್ಯಕ್ಷರಾಗಿದ್ದರು. ಮೃತರು ಪತ್ನಿ ರಾಜೀವಿ .ಎಸ್ ಆಳ್ವ, ಮಕ್ಕಳಾದ ಸುಧಿ ರಂಜನ್ , ಗೀತಾ ಅಶೋಕ ಹಾಗೂ ಅಪಾರ ಬಂಧು ಬಳಗವನ್ನು …

ಹೆರಿಗೆ ಬಳಿಕ ರಕ್ತಸ್ರಾವ: ಯುವತಿ ಮೃತ್ಯು

ಬದಿಯಡ್ಕ: ಹೆರಿಗೆ ಬಳಿಕ ಉಂಟಾದ ರಕ್ತಸ್ರಾವದಿಂದಾಗಿ ಯುವತಿ ಮೃತಪಟ್ಟ ಘಟನೆ ನಡೆದಿದೆ. ಸಹಕಾರಿ ಇಲಾಖೆ ಜೂನಿಯರ್ ಅಡಿಟರ್ ಮಾವಿನಕಟ್ಟೆಯ ಟಿ. ನಳಿನಾಕ್ಷಿ (42) ಮೃತಪಟ್ಟ ಯುವತಿ. ಇವರು ಅರವತ್ ಕುದಿರಕ್ಕೋಡ್‌ನ ರಾಘನ್‌ರ ಪತ್ನಿಯಾಗಿದ್ದಾರೆ. ಫೆ. 24ರಂದು  ನಳಿನಾಕ್ಷಿ ಹೆಣ್ಣು ಮಗುವಿಗೆ ಜನ್ಮ ನೀಡಿದ್ದರು. ಹೆರಿಗೆ ಬಳಿಕ ಉಂಟಾದ ರಕ್ತಸ್ರಾವದ ಹಿನ್ನೆಲೆಯಲ್ಲಿ ಅರೆಪ್ರಜ್ಞಾವಸ್ಥೆಯಲ್ಲಿದ್ದ ನಳಿನಾಕ್ಷಿ ಶನಿವಾರ ರಾತ್ರಿ ಮೃತಪಟ್ಟಿದ್ದಾರೆ. ರಕ್ತಸ್ರಾವ ಹಾಗೂ ಬಳಿಕ ಉಂಟಾದ ಹೃದಯಾಘಾ ತವೇ ಸಾವಿಗೆ ಕಾರಣವೆಂದು ಹೇಳಲಾಗುತ್ತಿದೆ. ಇದು ನಳಿನಾಕ್ಷಿಯ ಮೂರನೇ ಹೆರಿಗೆಯಾಗಿದೆ. ಇವರಿಗೆ …

ಕಳವು ಪ್ರಕರಣ: ಇಬ್ಬರು ಆರೋಪಿಗಳ ಸೆರೆ

ಕಾಸರಗೋಡು:  ಕಳವು ಪ್ರಕರಣಕ್ಕೆ ಸಂಬಂಧಿಸಿ ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದೆ. ಪಾಲಕ್ಕಾಡ್‌ನ ಚಿಟ್ಟೂರು ಆಯುರೂರು ಕೊಳಕ್ಕರೆಪರಂಬಿಲ್ ನಿವಾಸಿ ಜಲೀಲ್ ಯಾನೆ ಶಟ್ಟರ್ ಜಲೀಲ್ (36), ಈತನ ಸಹಚರ ಆಲಂಪಾಡಿಯ ಅಬ್ದುಲ್ ಲತೀಫ್ (46) ಎಂಬಿವರನ್ನು ಬೇಕಲ ಡಿವೈಎಸ್ಪಿ ಎಂ.ಪಿ. ಆಜಾದ್, ಎಸ್‌ಐ ಅಖಿಲ್, ಎಎಸ್‌ಐ ಪ್ರಸಾದ್ ನೇತೃತ್ವದ ಪೊಲೀಸರು ಬಂಧಿಸಿದ್ದಾರೆ.  ಆರೋಪಿಗಳ ಪೈಕಿ ಜಲೀಲ್ ಕಾಸರಗೋಡಿನಲ್ಲಿ ವಾಸಿಸಿ ಕರ್ನಾಟಕದಲ್ಲಿ ಕೋಳಿ ಫಾರ್ಮ್ ನಲ್ಲಿ ಕೆಲಸ ನಿರ್ವಹಿಸುತ್ತಿದ್ದನು. ಈಮಧ್ಯೆ  ಬೇಕಲ ಪೊಲೀಸ್ ಠಾಣೆ ವ್ಯಾಪ್ತಿಯ ಮನೆಯೊಂದರಿಂದ   ಬೆಲೆಬಾಳುವ ಸೊತ್ತುಗಳನ್ನು  ಕಳವುಗೈದ …

ಕಬಡ್ಡಿ ಟೂರ್ನಮೆಂಟ್‌ಗೆ ತೋರಣ ಕಟ್ಟುತ್ತಿದ್ದಾಗ ರಾಜ್ಯ ಕಬಡ್ಡಿ ಕ್ರೀಡಾಪಟು ಕುಸಿದುಬಿದ್ದು ಮೃತ್ಯು

ಕಾಸರಗೋಡು: ಕಬಡ್ಡಿ ಟೂರ್ನಮೆಂಟ್‌ಗೆ ತೋರಣಕಟ್ಟುತ್ತಿದ್ದ ವೇಳೆ  ರಾಜ್ಯ ಕಬಡ್ಡಿ ಕ್ರೀಡಾಪಟು ಕುಸಿದುಬಿದ್ದು ಮೃತಪಟ್ಟ ಘಟನೆ ನಡೆದಿದೆ. ಕಾಞಂಗಾಡ್ ಪಡನ್ನ ಕ್ಕಾಡ್ ಅನಂತಂಪಳ್ಳದ ಸತೀಶನ್-ಪುಷ್ಪ ದಂಪತಿಯ ಪುತ್ರನೂ ಪ್ಲಸ್‌ವನ್ ವಿದ್ಯಾರ್ಥಿಯಾದ ನಿತಿನ್‌ಕೃಷ್ಣ (16) ಮೃತಪಟ್ಟ ದುರ್ದೈವಿ. ಅನಂತಂಪಳ್ಳ ಶಬರಿ ಕ್ಲಬ್‌ನ ಸಮೀಪ ಲೆಜೆಂಡ್ ಒಕ್ಕೂಟ ಇಂದು ಹಮ್ಮಿಕೊಂಡ ಕಬಡ್ಡಿ ಟೂರ್ನಮೆಂಟ್‌ಗಾಗಿ ತೋರಣ ಕಟ್ಟುತ್ತಿದ್ದ ವೇಳೆ ನಿತಿನ್‌ಕೃಷ್ಣ ಕುಸಿದುಬಿದ್ದಿದ್ದರು. ಕೂಡಲೇ ಅವರನ್ನು ನೀಲೇಶ್ವರದ ಆಸ್ಪತ್ರೆಗೆ ತಲುಪಿಸಿದರೂ ಜೀವ ರಕ್ಷಿಸಲಾಗಲಿಲ್ಲ. ಕಲ್ಲಿಕೋಟೆ ಮುಕ್ಕಂ ವೊಕೇಶನಲ್ ಹೈಯರ್ ಸೆಕೆಂಡರಿ ಶಾಲೆಯ ಪ್ಲಸ್‌ವನ್ ವಿದ್ಯಾರ್ಥಿ …

ಯುವತಿ ನಾಪತ್ತೆ

ಕುಂಬಳೆ: ಕುಂಬಳೆಯ ಫ್ಯಾನ್ಸಿ ಅಂಗಡಿಯೊಂದರ ಸೇಲ್ಸ್ ಗರ್ಲ್ ಆಗಿರುವ ಯುವತಿ ನಾಪತ್ತೆಯಾದ ಬಗ್ಗೆ ದೂರಲಾಗಿದೆ. ಕೊಯಿಪ್ಪಾಡಿ ರಾಜೀವ್ ಗಾಂಧಿ ಕಾಲನಿಯ ನಾರಾಯಣಮಂಗಲ ಹೌಸ್‌ನ  ಹರ್ಷಿತಾ ಯಾನೆ ರೇಖಾ ಡಿ’ಸೋಜಾ (23) ನಾಪತ್ತೆಯಾದ ಯುವತಿ. ಈ ಬಗ್ಗೆ ಪತಿಯ ಸಹೋದರ ಅಕ್ಷತ್ ನೀಡಿದ ದೂರಿನಂತೆ  ಕುಂಬಳೆ ಪೊಲೀಸರು ಕೇಸು ದಾಖಲಿಸಿಕೊಂಡಿದ್ದಾರೆ. ಕಳೆದ ಶುಕ್ರವಾರ ಬೆಳಿಗ್ಗೆ ಕುಂಬಳೆಯ ಅಂಗಡಿಗೆ ಕೆಲಸಕ್ಕೆಂದು ತಿಳಿಸಿ ಹೋದ ಯುವತಿ ಬಳಿಕ ಮರಳಿ ಬಂದಿಲ್ಲವೆಂದು ದೂರಿನಲ್ಲಿ ತಿಳಿಸಲಾಗಿದೆ.