ಜಿಲ್ಲೆಯ ರೈಲು ಪ್ರಯಾಣಿಕರಿಗೆ ವಿಷು ಕೊಡುಗೆ 6 ಸ್ಪೆಷಲ್ ರೈಲುಗಾಡಿಗಳ ಘೋಷಣೆ

ಕಾಸರಗೋಡು: ಕೇರಳೀಯರಿಗೆ ರೈಲ್ವೇಯ ವಿಷು ಕೊಡುಗೆ. 6 ಸ್ಪೆಷಲ್ ರೈಲುಗಾಡಿಗಳನ್ನು ವಿಷು ಹಬ್ಬದಂಗವಾಗಿ ರೈಲ್ವೇ ಘೋಷಿಸಿದೆ. ಚೆನ್ನೈಯಿಂದ ನಿನ್ನೆ ಮಂಗಳೂರಿಗೆ ಸ್ಪೆಷಲ್ ರೈಲುಗಾಡಿ ಸಂಚಾರ ಆರಂಭಿಸಿದೆ. ನಿನ್ನೆ ರಾತ್ರಿ 11.55ಕ್ಕೆ ಚೆನ್ನೈ ಸೆಂಟ್ರಲ್‌ನಿಂದ ಹೊರಟ ರೈಲುಗಾಡಿ ಇಂದು ಸಂಜೆ ೪ ಗಂಟೆಗೆ ಮಂಗಳೂರು ಜಂಕ್ಷನ್ ರೈಲು ನಿಲ್ದಾಣಕ್ಕೆ ತಲುಪುವ ರೀತಿಯಲ್ಲಿ 06127 ನಂಬ್ರ ಸ್ಪೆಷಲ್ ಗಾಡಿ ಸಂಚಾರ ನಡೆಸುತ್ತಿದೆ. ಇಂದು ಮಂಗಳೂರು ಜಂಕ್ಷನ್- ಚೆನ್ನೈ ಎಗ್ಮೋರ್ 06128 ನಂಬ್ರ ಸ್ಪೆಷಲ್ ರೈಲು ಸಂಚಾರ ನಡೆಸಲಿದೆ. ಇಂದು ರಾತ್ರಿ …

ಕಾಳ್ಯಂಗಾಡು ಶ್ರೀ ಮೂಕಾಂಬಿಕಾ ಕ್ಷೇತ್ರ ಬ್ರಹ್ಮಕಲಶೋತ್ಸವಕ್ಕೆ ಚಪ್ಪರ ಮುಹೂರ್ತ

ಕಾಸರಗೋಡು: ಕಾಳ್ಯಂಗಾಡು ಶ್ರೀ ಮೂಕಾಂಬಿಕಾ ಕ್ಷೇತ್ರದಲ್ಲಿ ಎ.26ರಿಂದ ಮೇ 2ರ ತನಕ ಜರಗಲಿರುವ ಪುನರ್ ಪ್ರತಿಷ್ಠಾ ಬ್ರಹ್ಮಕಲಶೋತ್ಸವದ ಚಪ್ಪರ ಮುಹೂರ್ತ ಕ್ಷೇತ್ರ ಧರ್ಮದರ್ಶಿ ನಾರಾಯಣ ಕಾಳ್ಯಂಗಾಡು, ಅರ್ಚಕ ಯೋಗೀಶ್, ಚಪ್ಪರ ಸಮಿತಿಯ ಲವ ಮೀಪುಗುರಿ, ಸುರೇಶ್ ಅಭಿನಂದನ್‌ರ ನೇತೃತ್ವದಲ್ಲಿ ಜರಗಿತು. ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ಕೆ.ಎನ್. ವೆಂಕಟ್ರಮಣ ಹೊಳ್ಳ, ಕ್ಷೇತ್ರ ಮೊಕ್ತೇಸರ ಅಚ್ಯುತ ಕಾಳ್ಯಂಗಾಡ್, ಪ್ರಧಾನ ಕಾರ್ಯದರ್ಶಿ ದಯಾನಂದ ಕೊಳ್ಕೆಬೈಲು, ಉಪಾಧ್ಯಕ್ಷ ಮಿಥುನ್ ಕಾಳ್ಯಂಗಾಡ್, ಕಾರ್ಯದರ್ಶಿ ರಂಜಿತ್ ಮನ್ನಿಪ್ಪಾಡಿ, ಪುಷ್ಪಮ್ಮ ಕಾಳ್ಯಂಗಾಡ್, ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಮೋಹನ್‌ರಾಜು …

ಯುವಕನಿಗೆ ಮಾರಕಾಯುಧಗಳೊಂದಿಗೆ ಹಲ್ಲೆ: ಓರ್ವ ಆರೋಪಿ ಠಾಣೆಯಲ್ಲಿ ಶರಣು

ಕುಂಬಳೆ: ಒಬ್ಬನ ಪ್ರಿಯತಮೆ ಯನ್ನು ಬೇರೊಬ್ಬ ಪ್ರೀತಿಸುತ್ತಿದ್ದಾನೆ ಎಂಬ ಕಾರಣದಿಂದ  ಯುವಕರ ಮೇಲೆ ಮಾರಕಾಯುಧಗಳಿಂದ ಆಕ್ರಮಿಸಿದ ಪ್ರಕರಣದಲ್ಲಿ ಓರ್ವ ಆರೋಪಿ ಪೊಲೀಸ್ ಠಾಣೆಯಲ್ಲಿ ಶರಣಾಗಿದ್ದಾನೆ.  ಕುಂಟಂಗೇರಡ್ಕ ನಿವಾಸಿ ಮೊಹಮ್ಮದ್ ಅನಸ್ (22) ಎಂಬಾತ ಶರಣಾಗಿದ್ದು, ಈತನಿಗೆ ನ್ಯಾಯಾಲಯ ರಿಮಾಂಡ್ ವಿಧಿಸಿದೆ.  ಮಾರ್ಚ್ ೩೦ರಂದು ಕುಂಬಳೆ ಮಾಟೆಂಗುಳಿಯ ಮೊಹಮ್ಮದ್ ಅಫ್ನಾನ್ ಫಹದ್ (19)ನ ಮೇಲೆ ಹಲ್ಲೆಗೈದು ಗಂಭೀರ ಗಾಯಗೊಳಿಸ ಲಾಗಿತ್ತು. ಈ ಪ್ರಕರಣದಲ್ಲಿ  ಮೊಹ ಮ್ಮದ್ ಅನಸ್ ಆರೋಪಿಯಾಗಿ ದ್ದಾನೆಂದು ಪೊಲೀಸರು ತಿಳಿಸಿದ್ದಾರೆ.   ಮೊಹಮ್ಮದ್ ಅಫ್ನಾನ್ ಫಹದ್ ಹಾಗೂ …

ಯುವಕನಿಗೆ ಹಲ್ಲೆ: ಆರೋಪಿ ಬಂಧನ

ಮಂಜೇಶ್ವರ: ಕೊಡ್ಲಮೊಗರು ಸುಂಕದಕಟ್ಟೆ ಓರ್ಕಳ ನಿವಾಸಿ ಹರಿಪ್ರಕಾಶ್ ಡಿ’ಸೋಜಾ (37) ಎಂಬವರಿಗೆ ಹಲ್ಲೆಗೈದ ಪ್ರಕರಣದಲ್ಲಿ ಆರೋಪಿಯಾದ  ಬೋರ್ಕಳದ  ಆರಿಫ್ ಬಿ (38) ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ. ಈತನಿಗೆ ನ್ಯಾಯಾಲಯ ರಿಮಾಂಡ್ ವಿಧಿ ಸಿದೆ.  ಈ ತಿಂಗಳ ೬ರಂದು ಸಂಜೆ ಬೋರ್ಕಳದ ಅಂಗಡಿಯೊಂದರ ಮುಂಭಾಗದಲ್ಲಿ ಹರಿಪ್ರಕಾಶ್ ಡಿ’ಸೋಜಾರನ್ನು ತಡೆದು ನಿಲ್ಲಿಸಿ ಹಲ್ಲೆಗೈದಿರುವುದಾಗಿ ದೂರಲಾಗಿದೆ.  ಈ ಸಂಬಂಧ ಆರಿಫ್ ವಿರುದ್ಧ ಮಂಜೇಶ್ವರ ಪೊಲೀಸರು ಕೊಲೆ ಯತ್ನ ಪ್ರಕರಣ ದಾಖಲಿಸಿಕೊಂ ಡಿದ್ದರು. ಹೊಯ್ಗೆ ಸಾಗಾಟ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿರುವು ದಾಗಿ …

ಅಪ್ರಾಪ್ತ ಬಾಲಕಿಯರಿಗೆ ಲೈಂಗಿಕ ಕಿರುಕುಳ: ಆರೋಪಿ ಬಂಧನ

ಕೊಚ್ಚಿ: ಪ್ರಾಯಪೂರ್ತಿ ಯಾಗದ ಇಬ್ಬರು ಸಹೋದರಿಯರಿಗೆ ಲೈಂಗಿಕ ಕಿರುಕುಳ ನೀಡಿದ ಯುವಕ ಸೆರೆಗೀಡಾಗಿದ್ದಾನೆ. ಕಾಸರಗೋಡು ನಿವಾಸಿಯೆನ್ನಲಾದ  ಅಬ್ದುಲ್ ರಜಾಕ್ (38) ಎಂಬಾತ ಸೆರೆಗೀಡಾದ ವ್ಯಕ್ತಿಯೆಂದು ಹೇಳಲಾ ಗುತ್ತಿದೆ. ಈತ  ಪೆರುಂಬಾವೂರಿನ ಬಾಡಿಗೆ ಮನೆಯಲ್ಲಿ ವಾಸಿಸಿ ಡ್ರೈವಿಂಗ್  ಸಹಿತ ವಿವಿಧ ಕೆಲಸ ನಿರ್ವಹಿಸುತ್ತಿದ್ದನು. ಈ ಮಧ್ಯೆ ಅನ್ಯ ರಾಜ್ಯ ಕಾರ್ಮಿಕರ ಕುಟುಂಬ ವೊಂದರ 12 ಹಾಗೂ 9 ವರ್ಷ ಪ್ರಾಯದ ಇಬ್ಬರು  ಬಾಲಕಿಯರಿಗೆ ಈತ ಲೈಂಗಿಕ ಕಿರುಕುಳ ನೀಡಿರುವುದಾಗಿ ದೂರಲಾಗಿದೆ. ಅಬ್ದುಲ್ ರಜಾಕ್ ವಾಸಿಸುತ್ತಿದ್ದ ಬಾಡಿಗೆ ಮನೆ ಸಮೀಪದ …

ವಾಹನದಿಂದ ಸರಳು ಇಳಿಸುತ್ತಿದ್ದ ವೇಳೆ ದೇಹದ ಮೇಲೆ ಬಿದ್ದು ಚಾಲಕ ಮೃತ್ಯು

ಕಾಸರಗೋಡು: ವಾಹನದಿಂದ ಸರಳುಗಳನ್ನು ಇಳಿಸುತ್ತಿದ್ದ ವೇಳೆ ಮೈ ಮೇಲೆ ಬಿದ್ದು ಚಾಲಕ ಸಾವನ್ನಪ್ಪಿದ ದಾರುಣ ಘಟನೆ ನಡೆದಿದೆ. ಕಾಸರಗೋಡು ಅಣಂಗೂರು ಕೊಲ್ಲಂಪಾಡಿ ನಿವಾಸಿ ಅಶ್ರಫ್ (56) ಸಾವನ್ನಪ್ಪಿದ ದುರ್ದೈವಿ. ನುಳ್ಳಿಪ್ಪಾಡಿ ಯಲ್ಲಿರುವ ಕಟ್ಟಡ ನಿರ್ಮಾಣ ಸಾಮಗ್ರಿ ಮಾರಾಟದಂಗಡಿಯ ವಾಹನ ಚಾಲಕನಾಗಿರುವ ಅಶ್ರಫ್ ನಿನ್ನೆ ಮಧ್ಯಾಹ್ನ ವಾಹನದಲ್ಲಿ ಸರಳು ಸಹಿತ ಕಟ್ಟಡ ನಿರ್ಮಾಣ ಸಾಮಗ್ರಿಗಳನ್ನು ಹೇರಿ ಚೆಂಗಳ ಸಂತೋಷ್‌ನಗರಕ್ಕೆ ತಲುಪಿ  ಅದನ್ನು ಅಲ್ಲಿ ಇಳಿಸಲೆಂದು ವಾಹನದ ಮೇಲೇರಿ ಹಗ್ಗವನ್ನು ಬಿಡಿಸುವ ವೇಳೆ ಲಾರಿ ಒಂದು ಭಾಗಕ್ಕೆ ವಾಲಿ ಸರಳು …

ವಾಹನ ಅಪಘಾತ: ಚಿಕಿತ್ಸೆಯಲ್ಲಿದ್ದ ಯುವಕ ಮೃತ್ಯು

ಉಪ್ಪಳ: ಸೋಂಕಾಲಿನಲ್ಲಿ ಮೊನ್ನೆ ಸಂಜೆ ಸಂಭವಿಸಿದ ವಾಹನ ಅಪಘಾತದಲ್ಲಿ ಗಂಭೀರ ಗಾಯಗೊಂಡು ಮಂಗಳೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆಯಲ್ಲಿದ್ದ ಯುವಕ  ಮೃತಪಟ್ಟರ. ಪಾಲಕ್ಕಾಡ್ ನಿವಾಸಿಯೂ ಉಪ್ಪಳ ಸೋಂಕಾಲಿನಲ್ಲಿ ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದ  ಅನ್ಸಲ್ (37) ಮೃತಪಟ್ಟ ದುರ್ದೈವಿಯಾಗಿದ್ದಾರೆ. ಇವರು ಅಲ್ಯುಮಿನಿಯಂ ಫ್ಯಾಬ್ರಿಕೇ ಶನ್ ಕೆಲಸ ನಿರ್ವಹಿಸುತ್ತಿದ್ದರು. ಮೊನ್ನೆ ಮಧ್ಯಾಹ್ನ ವಾಸಸ್ಥಳದಿಂದ ಆಹಾರ ಸೇವಿಸಿ ಸೋಂಕಾ ಲ್‌ನ ಕೆಲಸದ ಸ್ಥಳಕ್ಕೆ ತೆರಳುತ್ತಿದ್ದ ವೇಳೆ  ಅನ್ಸಲ್ ಚಲಾಯಿಸುತ್ತಿದ್ದ  ಬೈಕ್‌ಗೆ ಕಾರು ಢಿಕ್ಕಿ ಹೊಡೆದಿತ್ತು. ಈ ಅಪಘಾತದಲ್ಲಿ ಗಂಭೀರ ಗಾಯ ಗೊಂಡ ಅನ್ಸಲ್‌ರನ್ನು ನಾಗರಿಕರು …

ಇಬ್ಬರು ಬಾಲಕರಿಗೆ ಸಲಿಂಗರತಿ ಕಿರುಕುಳ: ಸಂಬಂಧಿಕನಾದ ಮಧ್ಯವಯಸ್ಕನ ವಿರುದ್ಧ ಪೋಕ್ಸೋ ಕೇಸು

ಕಾಸರಗೋಡು: ಹತ್ತು ಹಾಗೂ 15 ವರ್ಷ ಪ್ರಾಯದ ಇಬ್ಬರು ಬಾಲಕರಿಗೆ ಸಲಿಂಗರತಿ ಕಿರುಕುಳ ನೀಡಿದ ಆರೋಪದಂತೆ 55ರ ಹರೆಯದ ವ್ಯಕ್ತಿ ವಿರುದ್ಧ ಮೇಲ್ಪರಂಬ ಪೊಲೀಸರು ಪೋಕ್ಸೋ ಪ್ರಕಾರ ಕೇಸು ದಾಖಲಿಸಿಕೊಂಡಿದ್ದಾರೆ.  ಕಿರುಕುಳ ಕ್ಕೊಳಗಾದ ಬಾಲಕರು ಕಾಸರಗೋಡು ನಗರ ಪೊಲೀಸ್ ಠಾಣೆ  ವ್ಯಾಪ್ತಿಯ ನಿವಾಸಿಗಳಾ ಗಿದ್ದಾರೆ.  ಈ ಇಬ್ಬರು ಹತ್ತಿರದ ಸಂಬಂಧಿಕನಾದ 55ರ ಹರೆಯದ ವ್ಯಕ್ತಿಯ ಮನೆಗೆ ಹೋದ ಸಂದರ್ಭದಲ್ಲಿ ಹಲವು ಬಾರಿ ಕಿರುಕುಳ ನೀಡಿರುವು ದಾಗಿ ದೂರಲಾಗಿದೆ. ಆದರೆ ಭಯದಿಂದ ಕಿರುಕುಳ ಘಟನೆ ಬಗ್ಗೆ ಮಕ್ಕಳು ಯಾರಲ್ಲೂ …

ಪರಿಯಾರಂ  ಆಸ್ಪತ್ರೆಯಲ್ಲಿ ಚಿಕಿತ್ಸೆಯಲ್ಲಿದ್ದ ಯುವಕ ನೇಣು ಬಿಗಿದು ಸಾವಿಗೀಡಾದ ಸ್ಥಿತಿಯಲ್ಲಿ ಪತ್ತೆ

ಕಾಸರಗೋಡು: ಪರಿಯಾರಂ ಮೆಡಿಕಲ್ ಕಾಲೇಜು ಆಸ್ಪತ್ರೆಯಲ್ಲಿ ಚಿಕಿತ್ಸೆಯಲ್ಲಿದ್ದ ಯುವಕ ಶೌಚಾಲ ಯದಲ್ಲಿ ನೇಣುಬಿಗಿದು ಸಾವಿಗೀ ಡಾದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರ. ಬೇಡಗಂ ಪೊಲೀಸ್ ಠಾಣೆ ವ್ಯಾಪ್ತಿಯ ಬಂದಡ್ಕ  ಲೋಕೋಪಯೋಗಿ ಬಂಗಲೆ ಸಮೀಪದ ತುಡಿಯಿಲ್ ವಿನೋದ್ (46) ಮೃತಪಟ್ಟ ವ್ಯಕ್ತಿ. ಇಂದು ಮುಂಜಾನೆ ಮೆಡಿಕಲ್ ಕಾಲೇಜು ಆಸ್ಪತ್ರೆಯ 803ನೇ ವಾರ್ಡ್‌ನ ಶೌಚಾಲಯದಲ್ಲಿ ನೇಣುಬಿಗಿದ ಸ್ಥಿತಿಯಲ್ಲಿ ಇವರು ಪತ್ತೆಯಾಗಿದ್ದರು. ಕೂಡಲೇ ಇವರನ್ನು ತುರ್ತು ನಿಗಾ ವಿಭಾಗಕ್ಕೆ ತಲುಪಿಸಿದರೂ ಜೀವ ರಕ್ಷಿಸಲಾಗಲಿಲ್ಲ. ಕಿಡ್ನಿ ಸಂಬಂಧ ಅಸೌಖ್ಯದ ಚಿಕಿತ್ಸೆಗಾಗಿ ಎರಡು ದಿನಗಳ ಹಿಂದೆ ವಿನೋದ್‌ರನ್ನು …

ಪೆರ್ಲ ಪೇಟೆಯಲ್ಲಿ ಉತ್ಸಾಹ ಸೃಷ್ಟಿಸಿ ಬಿಜೆಪಿ ರೋಡ್‌ಶೋ

ಪೆರ್ಲ: ಚುನಾವಣೆಯ ಬಹಿರಂಗ ಪ್ರಚಾರ ಅಂತಿಮಗೊಂಡ ನಿನ್ನೆ ಪೆರ್ಲ ಪೇಟೆಯಲ್ಲಿ ನಡೆದ ಕೆ. ಸುರೇಂದ್ರನ್, ಕೆ. ಅಣ್ಣಾಮಲೈ ಅವರ ರೋಡ್‌ಶೋ ಕಾರ್ಯಕರ್ತರಲ್ಲಿ ಹೊಸ ಹುಮ್ಮಸ್ಸು ಮೂಡಿಸಿದೆ. ವಾದ್ಯ ಘೋಷಗಳೊಂದಿಗೆ ನೂರಾರು ಕಾರ್ಯಕರ್ತರು ಮೆರವಣಿಗೆಯಲ್ಲಿ ಭಾಗವಹಿಸಿದರು. ಪೆರ್ಲ ಚೆಕ್‌ಪೋ ಸ್ಟ್‌ನಿಂದ ಆರಂಭವಾದ ರೋಡ್ ಶೋ ಪೆರ್ಲದಲ್ಲಿ ಸಮಾಪ್ತಿಗೊಂಡಿತು. ತಮಿಳುನಾಡು ಬಿಜೆಪಿ ಮಾಜಿ ಅಧ್ಯಕ್ಷ ಅಣ್ಮಾಮಲೈ ಮಾತನಾಡಿ, ಅಭಿವೃದ್ಧಿಮಂತ್ರ ಬಿಜೆಪಿಯ ಏಕೈಕ ದ್ಯೇಯವಾಗಿದೆ ಎಂದರು. ಕೆ. ಸುರೇಂದ್ರನ್ ಮಾತನಾಡಿ, ಈ ಬಾರಿ ಸ್ಪರ್ಧಿಸಿರುವುದು ಮಂಜೇಶ್ವರದಲ್ಲಿ ಗೆಲುವು ಸಾಧಿಸಲೆಂದಾಗಿದೆ. ಗೆದ್ದರೆ ಸರ್ವತೋಮುಖ …