ಯುವಕ ನೇಣುಬಿಗಿದು ಸಾವಿಗೀಡಾದ ಸ್ಥಿತಿಯಲ್ಲಿ ಪತ್ತೆ

ಮುಳ್ಳೇರಿಯ: ಯುವಕನೋರ್ವ ನೇಣುಬಿಗಿದು ಸಾವಿಗೀಡಾದ ಸ್ಥಿತಿಯಲ್ಲಿ ಪತ್ತೆಯಾದ ಘಟನೆ ನಡೆದಿದೆ.  ಬೆಳ್ಳೂರು ಪಂಚಾಯತ್ ವ್ಯಾಪ್ತಿಯ ಬೈತ್ಯಡ್ಕ ಉನ್ನತಿಯ ನಿವಾಸಿಯಾದ ಬಾಬು ಎಂಬವರ ಪುತ್ರ ಹರೀಶ್ (22) ಮೃತ ಯುವಕ.  ಇವರು ಕೂಲಿ ಕಾರ್ಮಿಕನಾಗಿದ್ದರು. ಮೊನ್ನೆ ರಾತ್ರಿ ಮನೆ ಸಮೀಪದ ಮರದಲ್ಲಿ ಇವರು ನೇಣುಬಿಗಿದು ಸಾವಿಗೀಡಾದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ.  ಮೃತದೇಹವನ್ನು ಕಾಸರಗೋಡು ಜನರಲ್ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಲಾಯಿತು. ಘಟನೆ ಬಗ್ಗೆ ಆದೂರು ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.  ಹರೀಶ್‌ರ ತಾಯಿ ಸುಶೀಲ ಮೂರು ತಿಂಗಳ ಹಿಂದೆಯಷ್ಟೇ ಅಸೌಖ್ಯ ಬಾಧಿಸಿ …

ಕಲೆಕ್ಟ್ರೇಟ್‌ನ ಸೀನಿಯರ್ ಕ್ಲರ್ಕ್ ಸಾವು: ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ; ವರದಿ ಸಲ್ಲಿಸಲು ಎಡಿಎಂಗೆ ಜಿಲ್ಲಾಧಿಕಾರಿ ನಿರ್ದೇಶ

ಕಾಸರಗೋಡು: ಕಲೆಕ್ಟ್ರೇಟ್‌ನ ಸೀನಿಯರ್ ಕ್ಲರ್ಕ್ ಎ. ಆಶಾಲತಾರ ಸಾವಿನ ಬಗ್ಗೆ ತನಿಖೆ ನಡೆಸಿ ವರದಿ ಸಲ್ಲಿಸಲು ಎಡಿಎಂಗೆ ಜಿಲ್ಲಾಧಿಕಾರಿ ಅರ್ಜುನ್ ಪಾಂಡ್ಯನ್ ನಿರ್ದೇಶ ನೀಡಿದ್ದಾರೆ. ಶುಕ್ರವಾರ ನೌಕರೆ 3 ಪ್ಯಾಕೆಟ್ ಇಲಿವಿಷ ಪೇಸ್ಟ್ ಐಸ್‌ಕ್ರೀಂನಲ್ಲಿ ಮಿಶ್ರಣ ಮಾಡಿ ಸೇವಿಸಿದ್ದರು. ತಾನು ಇಲಿವಿಷ ಸೇವಿಸಿರುವುದು ಮನೆ ಹಾಗೂ ಕಚೇರಿಯಲ್ಲಿ ಏಕಾಂಗಿಯಾಗಿದ್ದೇನೆಂಬ ಚಿಂತನೆಯಿಂದಿರುವ ಮೆಂಟಲ್ ಸ್ಟ್ರೆಸ್ ಕಾರಣದಿಂದಾಗಿ ಕಳೆದ ಕೆಲವು ದಿನಗಳಿಂದ ಮಾನಸಿಕವಾಗಿ ನೊಂದಿರುವುದಾಗಿಯೂ ಇವರು ವಿದ್ಯಾನಗರ ಪೊಲೀಸರಿಗೆ ನೀಡಿದ ಹೇಳಿಕೆಯಲ್ಲಿ ತಿಳಿಸಿದ್ದಾರೆ. ತನಗೆ ಯಾರ ವಿರುದ್ಧವೂ ದೂರಿಲ್ಲವೆಂದು, ನಾನು  …

ಹಸಿರು ಕ್ರಿಯಾ ಸೇನೆ ಕಾರ್ಯಕರ್ತೆಯರು ಸಂಗ್ರಹಿಸಿದ  ತ್ಯಾಜ್ಯದೊಂದಿಗೆ 30 ಸಾವಿರ ರೂ., 2 ಪವನ್ ಚಿನ್ನ ಪತ್ತೆ

 ಕಾಸರಗೋಡು: ಪ್ಲಾಸ್ಟಿಕ್ ತ್ಯಾಜ್ಯಗಳ ಮಧ್ಯೆ ಹಸಿರು ಕ್ರಿಯಾ ಸೇನೆ ಕಾರ್ಯಕರ್ತರಿಗೆ ಎರಡು ಪವನ್ ಚಿನ್ನಾಭರಣ ಹಾಗೂ ೩೦ ಸಾವಿರ   ರೂಪಾಯಿಗಳು ಪತ್ತೆಯಾಗಿದ್ದು   ಅದನ್ನು ಕೂಡಲೇ  ವಾರಸುದಾರರಿಗೆ ಹಸ್ತಾಂತರಿಸಿ ಮಾದರಿಯಾದರು. ಪಳ್ಳಿಕ್ಕರೆ ಪಂಚಾಯತ್‌ನ 10 ಹಾಗೂ 11ನೇ ವಾರ್ಡ್‌ಗಳ ಹಸಿರು ಕ್ರಿಯಾ ಸೇನೆ ಕಾರ್ಯಕರ್ತರಾದ ಕಮಲ ಎನ್ ಹಾಗೂ ಮಮತ ಎಂಬಿವರು ಪ್ರಾಮಾಣಿಕತೆ ಮೆರೆದಿದ್ದಾರೆ. ಪೊಯಿನಾಚಿ ಪರಂಬ್‌ನ ಕೃಷ್ಣ ಎಂಬವರ ಮನೆಯಿಂದ ತ್ಯಾಜ್ಯ ಸಂಗ್ರಹಿಸುತ್ತಿದ್ದಾಗ  ಚಿನ್ನ ಹಾಗೂ ಹಣ ಪತ್ತೆಯಾಗಿದೆ.  ತ್ಯಾಜ್ಯವನ್ನು ಬೇರ್ಪಡಿಸುತ್ತಿದ್ದಾಗ  ಪ್ಲಾಸ್ಟಿಕ್ ಚೀಲವೊಂದರಲ್ಲಿ ಇವು ಕಂಡುಬಂದಿದೆ. …

ಜಿಲ್ಲೆಯ ಸ್ವಾತಂತ್ರ್ಯ ದಿನಾಚರಣೆ: ಸಚಿವ ಕೆ.ಎಂ. ಶಾಜಿ ಧ್ವಜಾರೋಹಣ

ಕಾಸರಗೋಡು: ಆಗಸ್ಟ್ 15ರಂದು ನಡೆಯುವ ಸ್ವಾತಂತ್ರ್ಯ ದಿನಾಚರಣೆ ಕಾರ್ಯಕ್ರಮದಲ್ಲಿ ಕಾಸರಗೋಡು ನಗರಸಭಾ ಮೈದಾನದಲ್ಲಿ ನಡೆಯುವ ಪರೇಡ್‌ನಲ್ಲಿ ಜಿಲ್ಲೆಯ ಉಸ್ತುವಾರಿ ಸಚಿವ ಕೆ.ಎಂ. ಶಾಜಿ  ಧ್ವಜಾರೋಹಣ ಗೈದು ಅಭಿವಂದನೆ ಸ್ವೀಕರಿಸುವರು. ಸ್ವಾತಂತ್ರ್ಯ ದಿನಾಚರಣೆಯ ಪೂರ್ವಸಿದ್ಧತೆಗಳು ನಡೆಸಲಾಗುತ್ತಿದ್ದು, ನಿನ್ನೆ ಅಭ್ಯಾಸ ಪರೇಡ್ ಆರಂಭಗೊಂಡಿದೆ. ಪರೇಡ್‌ನಲ್ಲಿ ಸಶಸ್ತ್ರ ಸೇನೆಗಳು, ಪೊಲೀಸ್, ಅಬಕಾರಿ, ವೊಕೇಶನಲ್ ಹೈಯರ್ ಸೆಕೆಂಡರಿ, ಸ್ಟುಡೆಂಟ್ಸ್ ಪೊಲೀಸ್ ಕೆಡೆಟ್‌ಗಳು, ಎನ್‌ಸಿಸಿ, ಶಾಲಾ ಬ್ಯಾಂಡ್‌ಸೆಟ್‌ಗಳು ಸಹಿತ 16 ತಂಡಗಳು ಭಾಗವಹಿಸಲಿವೆ. ಸ್ವಾತಂತ್ರ್ಯ ಹೋರಾಟಗಾರರು, ವಿವಿಧ ಇಲಾಖೆಗಳ ಜಿಲ್ಲಾ ಮಟ್ಟದ ಅಧಿಕಾರಿಗಳು, ಸಾರ್ವಜನಿಕರು, …

ಕೇರಳ ವ್ಯಾಪಾರಿ ವ್ಯವಸಾಯಿ ಏಕೋಪನ ಸಮಿತಿ ಬದಿಯಡ್ಕ ಘಟಕದಿಂದ ವ್ಯಾಪಾರಿ ದಿನಾಚರಣೆ

ಬದಿಯಡ್ಕ: ಕೇರಳ ವ್ಯಾಪಾರಿ ವ್ಯವಸಾಯಿ ಏಕೋಪನ ಸಮಿತಿ ಬದಿಯಡ್ಕ ಘಟಕದ ನೇತೃತ್ವದಲ್ಲಿ ವ್ಯಾಪಾರಿ ದಿನವನ್ನು ವಿವಿಧ ಕಾರ್ಯಕ್ರಮಗಳೊಂದಿಗೆ ಆಚರಿಸಲಾಯಿತು. ಘಟಕದ ಅಧ್ಯಕ್ಷ ನರೇಂದ್ರನ್ ಧ್ವಜಾರೋಹಣಗೈದರು. ಪೇಟೆಯಲ್ಲಿ ಮೆರವಣಿಗೆ ನಡೆಯಿತು. ವ್ಯಾಪಾರಿ ಸಂಗಮವನ್ನು ನರೇಂದ್ರನ್‌ರ ಅಧ್ಯಕ್ಷತೆಯಲ್ಲಿ ಬದಿಯಡ್ಕ ಸಿ.ಐ ಅನೂಪ್‌ಕೃಷ್ಣ ಉದ್ಘಾಟಿಸಿದರು. ಜಿಲ್ಲಾ ಕಾರ್ಯದರ್ಶಿ ಕುಂಜಾರು ಮೊಹಮ್ಮದ್ ಹಾಜಿ ಪ್ರಧಾನ ಭಾಷಣ ಮಾಡಿದರು. ಇದೇ ವೇಳೆ ಸದಸ್ಯತ್ವ ವಿತರಣೆ ನಡೆಯಿತು. ಮಾಜಿ ಅಧ್ಯಕ್ಷ ಎಸ್.ಎನ್. ಮಯ್ಯ, ಉಪಾಧ್ಯಕ್ಷ ರಾಜು ಸ್ಟೀಫನ್, ಹಮೀದ್, ಕಾರ್ಯದರ್ಶಿಗಳಾದ ಉದಯಶಂಕರ್, ವಿಶ್ವನಾಥನ್, ರತ್ನಾಕರ ಓಡಂಗಲ್ಲು, …

ಚರಿತ್ರೆಯನ್ನು ರಾಜಕೀಯ ಕನ್ನಡಕದ ಮೂಲಕ ನೋಡಬಾರದು- ಎನ್‌ಟಿಯು

ಕಾಸರಗೋಡು: ಚರಿತ್ರೆಯನ್ನು  ರಾಜಕೀಯ ಕನ್ನಡಕದ ಮೂಲಕ ನೋಡಬಾರದೆಂದು ಎನ್‌ಟಿಯು ರಾಜ್ಯ ಪ್ರಧಾನ ಕಾರ್ಯದರ್ಶಿ ಟಿ. ಅನೂಪ್ ಕುಮಾರ್ ನುಡಿದರು. ಕುಂಬಳೆ ಉಪಜಿಲ್ಲೆಯಲ್ಲಿ ನಡೆದ ಶಾಲಾ ಮಟ್ಟದ ಫ್ರೀಡಂ ಕ್ವಿಜ್ ಸ್ಪರ್ಧೆಯ ಒಂದು ಪ್ರಶ್ನೆಯಲ್ಲಿ ವೀರ ಸಾವರ್ಕರ್‌ರ ಹೆಸರು ಉತ್ತರವಾಗಿ ಬಂದಿರುವ ಹೆಸರಲ್ಲಿ ಅಧ್ಯಾಪಕನ ವಿರುದ್ಧ ಕೈಗೊಂಡ ಅಮಾನತು ಸಹಿತವಿರುವ ಶಿಸ್ತು ಕ್ರಮ ಹಿಂತೆಗೆಯಬೇಕೆಂದು ಆಗ್ರಹಿಸಿ ಎನ್‌ಟಿಯು ನಡೆಸಿದ ಕಾಸರಗೋಡು ಡಿಡಿಇ ಕಚೇರಿ ಮಾರ್ಚ್, ಧರಣಿ ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು. ಚರಿತ್ರೆಯ ಒಂದು ಅಂಶ ರಸಪ್ರಶ್ನೆ ಯಲ್ಲಿ ಉಪಯೋಗಿಸಿರುವುದನ್ನು …

ಸಮುದ್ರಕೊರೆತದಿಂದ ಕಷ್ಟ ಅನುಭವಿಸುವವರಿಗೆ ತಕ್ಷಣ ಪರಿಹಾರ ಒದಗಿಸಬೇಕು- ಬಿಜೆಪಿ ಜಿಲ್ಲಾಧ್ಯಕ್ಷೆ

ಕಾಸರಗೋಡು: ತೀವ್ರ ಸಮುದ್ರ ಕೊರೆತದಿಂದಾಗಿ ಕೃಷಿ ಬೆಳೆಗಳು, ಭೂಮಿ ಹಾಗೂ ಮನೆಗಳನ್ನು ಕಳೆದುಕೊಂಡ ಮೀನುಗಾರರಿಗೆ ಮತ್ತು ಇತರ ಕರಾವಳಿ ನಿವಾಸಿಗಳಿಗೆ ತಕ್ಷಣವೇ ಪರಿಹಾರ ಒದಗಿಸಬೇಕೆಂದು ಬಿಜೆಪಿ ಜಿಲ್ಲಾಧ್ಯಕ್ಷೆ ಎಂ.ಎಲ್. ಅಶ್ವಿನಿ ಆಗ್ರಹಿಸಿದ್ದಾರೆ. ಬಿಜೆಪಿ ಕುಂಬಳೆ ಮಂಡಲ ಸಮಿತಿ ಹಾಗೂ ಶಾರದಾ ನಗರ ಸಂರಕ್ಷಣಾ ಕ್ರಿಯÁಸಮಿತಿಯ ಜಂಟಿ ಆಶ್ರಯದಲ್ಲಿ ಕಾಸರಗೋಡು ಕಲೆಕ್ಟರೇಟ್‌ಗೆ ನಡೆಸಿದ ಪ್ರತಿಭಟನಾ ಮೆರವಣಿಗೆಯನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.ಪ್ರತಿ ವರ್ಷ ಶಾಸಕರು, ಜನಪ್ರತಿ ನಿಧಿಗಳು ಮತ್ತು ಕಲೆಕ್ಟರ್ ಸೇರಿದಂತೆ ಅಧಿಕಾರಿಗಳು ಸಂತ್ರಸ್ತ ಪ್ರದೇಶಗಳಿಗೆ ಭೇಟಿ ನೀಡುತ್ತಿದ್ದರೂ, ಪರಿಹಾರ …

ಕುಂಬಳೆ: ಶಿಕ್ಷಣ ಸಚಿವ ಭಾಗವಹಿಸಿದ ಕಾರ್ಯಕ್ರಮಕ್ಕೆ ಬಿಜೆಪಿಯ ಪ್ರತಿಭಟನಾ ಮೆರವಣಿಗೆ: ಇದರ ವಿರುದ್ಧ ವಿರುದ್ಧ ಲೀಗ್‌ನಿಂದಲೂ ಪ್ರತಿಭಟನೆ ; ಸ್ಥಳದಲ್ಲಿ ಸಂಘರ್ಷಾವಸ್ಥೆ

ಕುಂಬಳೆ: ಕುಂಬಳೆ ಜಿಎಸ್‌ಬಿಎಸ್ ಶಾಲೆಯ   ಬಹು ಅಂತಸ್ತಿನ ಕಟ್ಟಡವನ್ನು   ರಾಜ್ಯ ಶಿಕ್ಷಣ ಸಚಿವ ಎನ್. ಶಂಸುದ್ದೀನ್ ಇಂದು  ಬೆಳಿಗ್ಗೆ ಉದ್ಘಾಟಿಸಿದರು.  ಇದೇ ವೇಳೆ  ವಿ.ಡಿ. ಸಾವರ್ಕರ್‌ರನ್ನು ಸಚಿವರು ಅವಮಾನಿಸಿದ್ದಾರೆಂದೂ ಆದ್ದರಿಂದ  ಅವರು ರಾಜೀನಾಮೆ ನೀಡಬೇಕೆಂದು ಒತ್ತಾಯಿಸಿ ಬಿಜೆಪಿ ಸಚಿವರು ಭಾಗವಹಿಸಿದ ಕಾರ್ಯಕ್ರಮಕ್ಕೆ  ಪ್ರತಿಭಟನಾ ಮೆರವಣಿಗೆ ನಡೆಸಿತು. ಇದೇ ವೇಳೆ ಬಿಜೆಪಿ ವಿರುದ್ಧ ಯೂತ್ ಲೀಗ್ ಕಾರ್ಯಕರ್ತರು ರಂಗಕ್ಕಿಳಿದಿದ್ದು ಇದರಿಂದ ಸ್ಥಳದಲ್ಲಿ ಸಂಘರ್ಷಾವಸ್ಥೆ ಸೃಷ್ಟಿಯಾಗಿದೆ. ಸಚಿವರು ಶಾಲಾ ಕಟ್ಟಡವನ್ನು ಉದ್ಘಾಟಿಸಿ  ಮಾತನಾ ಡುತ್ತಿದ್ದಂತೆಯೇ  ಬಿಜೆಪಿ ಜಿಲ್ಲಾಧ್ಯಕ್ಷೆ ಎಂ.ಎಲ್. ಅಶ್ವಿನಿ …

ಕೊರಕೋಡಿನಲ್ಲಿ 15ರ ಹರೆಯದ ಬಾಲಕ ಸೇರಿದಂತೆ ಆರು ಮಂದಿಗೆ ಇರಿದ ಪ್ರಕರಣ: ಕೊಲೆಯತ್ನ ಪ್ರಕರಣ ದಾಖಲು; ನಾಲ್ವರ ಬಂಧನ

ಕಾಸರಗೋಡು: ಒಂದೇ ಕುಟುಂಬಕ್ಕೆ ಸೇರಿದ ೧೫ರ ಹರೆಯದ ಬಾಲಕ ಸೇರಿದಂತೆ ಆರು ಮಂದಿಗೆ ಇರಿದು ಗಾಯಗೊಳಿಸಿದ ಪ್ರಕರಣಕ್ಕೆ ಸಂಬಂಧಿಸಿ ಕಾಸರಗೋಡು ಪೊಲೀಸರು ನಾಲ್ವರನ್ನು  ಬಂಧಿಸಿದ್ದಾರೆ. ಕಾಸರಗೋಡು ಕೊರಕೋಡು ನಿವಾಸಿಗಳಾದ ಇಮ್ರಾನ್, ತಳಂಗರೆ ಬಾಂಗೋಡಿನ ಸನಾಫ್, ಕೊರಕೋಡಿನ ಅಹಮ್ಮದ್ ಮತ್ತು ಬಾಂಗೋಡನ ಬಾಸಿತ್ ಬಂಧಿತ ಆರೋಪಿಗಳು. ಇವರ ವಿರುದ್ಧ ಪೊಲೀಸರು ಕೊಲೆಯತ್ನ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಬಂಧಿತರನ್ನು ನಂತರ ನ್ಯಾಯಾಲಯದ ನಿರ್ದೇಶ ಪ್ರಕಾರ ನ್ಯಾಯಾಂಗ ಬಂಧನದಲ್ಲಿರಿಸಲಾಗಿದೆ. ಕೊರಕೋಡು ಬಿಲಾಲ್ ಮಸೀದಿ ಬಳಿಯ ಜಾಫರ್ ಸಾಧಿಕ್ (23), 15 ವರ್ಷದ ಸಹೋದರ …

ವಿಷ ಸೇವಿಸಿ ಗಂಭೀರ ಸ್ಥಿತಿಯಲ್ಲಿದ್ದ ಕಾಸರಗೋಡು ಕಲೆಕ್ಟರೇಟ್‌ನ ನೌಕರೆ ಚಿಕಿತ್ಸೆ ಮಧ್ಯೆ ಮೃತ್ಯು

ಕಾಸರಗೋಡು: ವಿಷ ಸೇವಿಸಿ  ಆತ್ಮಹತ್ಯೆಗೆ ಪ್ರಯತ್ನಿಸಿದ ಕಾಸರಗೋಡು ಕಲೆಕ್ಟರೇಟ್‌ನ ನೌಕರೆ ಕಲ್ಲಿಕೋಟೆಯ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಮಧ್ಯೆ ನಿನ್ನೆ ಮಧ್ಯಾಹ್ನ ಸಾವಿಗೀಡಾಗಿದ್ದಾರೆ. ಕಲೆಕ್ಟರೇಟ್ ನಲ್ಲಿರುವ ಎಂಡೋಸಲ್ಫಾನ್ ಸೆಲ್‌ನ ಸೀನಿಯರ್ ಕ್ಲಾರ್ಕ್, ಚೆಂಗಳ ಅದ್ರುಕುಳಿ ನಿವಾಸಿಯಾದ ಎ. ಆಶಾಲತ (41) ಎಂಬವರು ಸಾವಿಗೀಡಾದ ದುರ್ದೈವಿ. ಕಳೆದ ಶುಕ್ರವಾರ ಇವರು  ವಿಷ ಸೇವಿಸಿ  ತೀವ್ರ ಅಸ್ವಸ್ಥಗೊಂಡಿದ್ದರು.  ಎಂದಿನಂತೆ ಆಶಾಲತ ಸ್ವಂತ ವಾಹನದಲ್ಲಿ ಕಳೆದ ಶುಕ್ರವಾರ ಕಚೇರಿಗೆ ತಲುಪಿದ್ದರು. ಪ್ರಯಾಣ ಮಧ್ಯೆ ಹಾಗೂ ಕಚೇರಿಗೆ  ತಲುಪಿದ ಬಳಿಕವೂ ಇವರು ಇಲಿವಿಷ ಬೆರೆಸಿದ …