ಬಾಯಾರು- ಕನಿಯಾಲ ರಸ್ತೆ ಬದಿ ತುಂಬಿಕೊಂಡ ಪೊದೆ: ವಾಹನ ಸಂಚಾರಕ್ಕೆ ಸಮಸ್ಯೆ

ಪೈವಳಿಕೆ: ಪಂಚಾಯತ್ ವ್ಯಾಪ್ತಿಯ ಬಾಯಾರು ಸರ್ಕುತ್ತಿ- ಕನಿಯಾಲ ರಸ್ತೆಯ ಇಕ್ಕಡೆಗಳಲ್ಲಿ ಕಾಡು ಪೊದೆ ಆವರಿಸಿಕೊಂಡು ವಾಹನ ಸಂಚಾರಕ್ಕೆ ಸಮಸ್ಯೆಯಾ ಗುತ್ತಿರುವುದಾಗಿ ದೂರಲಾಗಿದೆ. ಬದಿಯಲ್ಲಿನ ಪೊದೆಗಳು ರಸ್ತೆಗೆ ಬಾಗಿಕೊಂಡಿದ್ದು, ಇದರಿಂದಾಗಿ ಮುಂದಿನಿಂದ ಆಗಮಿಸುವ ವಾಹನಗಳು ಕಣ್ಣಿಗೆ ಮರೆಯಾಗುತ್ತಿವೆ.  ವಾಹನಗಳಿಗೆ ಸೈಡ್ ನೀಡಲು ಕೂಡಾ ಇಲ್ಲಿ ಸಾಧ್ಯವಾಗುತ್ತಿಲ್ಲ ಎಂದು ಚಾಲಕರು ದೂರಿದ್ದು, ಇದು ಅಪಘಾತ ಭೀತಿ ಹೆಚ್ಚಿಸಿದೆ. ರಸ್ತೆಯುದ್ದಕ್ಕೂ ಚಾಚಿಕೊಂಡಿರುವ ಕಾಡುಪೊದೆಗಳನ್ನು ಕಡಿದು ಶುಚಿಗೊಳಿಸಿ ಸುಗಮ ಸಂಚಾರಕ್ಕೆ ವ್ಯವಸ್ಥೆ ಕಲ್ಪಿಸಲು ಸಂಬಂಧಪಟ್ಟವರು ಮುಂದಾಗಬೇಕೆಂದು ಸ್ಥಳೀಯರು ಆಗ್ರಹಿಸಿದ್ದಾರೆ.

ಗೃಹಿಣಿಯನ್ನು ದೂಡಿ ಹಾಕಿ ಉಪಟಳ: ದೂರು ದಾಖಲು

ನೀಲೇಶ್ವರ: ಮನೆ ಹಿತ್ತಿಲಲ್ಲಿ ನಡೆದುಕೊಂಡು ಹೋಗುತ್ತಿರುವಾಗ ತಡೆದ ದ್ವೇಷದ ಹಿನ್ನೆಲೆಯಲ್ಲಿ   ಅವಾಚ್ಯವಾಗಿ ಬೈದು ದೂಡಿರುವು ದಾಗಿ ದೂರಲಾಗಿದೆ. ಘಟನೆಯಲ್ಲಿ ನೀಲೇಶ್ವರ ಪೊಲೀಸರು ಕೇಸು ದಾಖಲಿಸಿದ್ದಾರೆ. ಕಾಟಿಪೊಯಿಲ್ ಕಕ್ಕೋಡ್ ಕೆ. ರಾಘವನ್‌ರ ಪತ್ನಿ ಎಂ. ಕೌಸಲ್ಯ (57) ನೀಡಿದ ದೂರಿನಂತೆ ಕಿನಾನೂರು ಕಕ್ಕೋಟ್‌ನ ವಿನೋದ್‌ನ ವಿರುದ್ಧ ಕೇಸು ದಾಖಲಿಸಲಾಗಿದೆ. ಮಂಗಳವಾರ ಸಂಜೆ ೫ ಗಂಟೆ ವೇಳೆ ಕೇಸಿಗೆ ಆಸ್ಪದವಾದ ಘಟನೆ ನಡೆದಿದೆ. ದೂರುದಾತೆಯ ಮನೆ ಹಿತ್ತಿಲಿನ ಮೂಲಕ ವಿನೋದ್ ನಡೆದುಕೊಂಡು ಹೋಗುತ್ತಿದ್ದಾಗ ತಡೆದಿದ್ದರೆನ್ನಲಾಗಿದೆ. ಈ ದೇವೇಷದಿಂದ ದೂರುದಾತೆಯನ್ನು ತಡೆದು …

ವ್ಯಾಪಾರಿ ನಿಧನ

ಬಾಯಾರು: ಬಾಯಾರು ಪೆರ್ವೋಡಿ ಕುದ್ರಡ್ಕ ನಿವಾಸಿ ಹಿರಿಯ ವ್ಯಾಪಾರಿ ನಾರಾಯಣ ಪೂಜಾರಿ (68) ನಿಧನ ಹೊಂದಿದರು. ಅಸೌಖ್ಯ ಹಿನ್ನೆಲೆ ಯಲ್ಲಿ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ದಾಖಲಾಗಿದ್ದರು. ಮನೆ ಪರಿಸರದಲ್ಲಿ ಹಲವು ವರ್ಷಗಳಿಂದ ವ್ಯಾಪಾರ ನಡೆಸುತ್ತಿದ್ದರು. ಮೃತರು ಪತ್ನಿ ಇಂದಿರ, ಮಕ್ಕಳಾದ ಅಶೋಕ್ ಪೂಜಾರಿ, ಅಜಿತ್ ಪೂಜಾರಿ, ಅನಿಲ್ ಪೂಜಾರಿ, ಸೊಸೆಯಂದಿ ರಾದ ಯಶ್ಚಿತ, ದೀಕ್ಷಿತ, ವಿದ್ಯಾಶ್ರೀ, ಸಹೋದರರಾದ ಐತ್ತಪ್ಪ ಪೂಜಾರಿ, ಕುಂಞಣ್ಣ ಪೂಜಾರಿ, ಸಹೋದರಿಯ ರಾದ ರಾಮಕ್ಕೆ, ಲಕ್ಷ್ಮಿ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ. ಮೃತರ ಮನೆಗೆ …

ಯತೀಶ್ ಕುಮಾರ್ ರೈಗೆ ಡಾಕ್ಟರೇಟ್

ಮುಳ್ಳೇರಿಯ: ಕುಂಬಳೆ ಉಪಜಿಲ್ಲಾ ವಿದ್ಯಾಧಿಕಾರಿಯಾಗಿ ನಿವೃತ್ತರಾದ ಯತೀಶ್ ಕುಮಾರ್ ರೈ ಮುಳ್ಳೇರಿಯ  ಹಂಪಿ ಕನ್ನಡ ವಿವಿಯಲ್ಲಿ ಮಂಡಿಸಿದ ಮಹಾ ಪ್ರಬಂಧಕ್ಕೆ ಡಾಕ್ಟರೇಟ್ ಲಭಿಸಿದೆ. ಕರ್ನಾಟಕ ಮತ್ತು ಕೇರಳ ಕನ್ನಡ ಭಾಷಾ ಪಠ್ಯ ಪುಸ್ತಕಗಳ ತೌಲನಿಕ ಅಧ್ಯಯನ ವಿಷಯದ ಕುರಿತು ಇವರು ಪ್ರಬಂಧ ಮಂಡಿಸಿದ್ದರು. ಡಾ. ಹಾಮಾನ ಸಂಶೋಧನಾ ಕೇಂದ್ರ ಉಜಿರೆಯ ವಿದ್ಯಾರ್ಥಿಯಾಗಿ ಬೆಟ್ಟಂಪಾಡಿ ಸರಕಾರಿ ಪ್ರಥಮ ದರ್ಜೆ ಕಾಲೇಜು ಪ್ರಾಧ್ಯಾಪಕ ಡಾ. ಸುಬ್ರಹ್ಮಣ್ಯ ಕೆ. ಇವರ ಮಾರ್ಗದರ್ಶನದಲ್ಲಿ ಇವರು ಅಧ್ಯಯನ ಕೈಗೊಂಡಿದ್ದರು. ಯತೀಶ್ ಕುಮಾರ್ ರೈ ಎಸ್‌ಎಸ್‌ಎ …

ಹಿಂದೂ ಸಮಾಜೋತ್ಸವ ಪ್ರತಾಪನಗರದಲ್ಲಿ ಮಾತೃಸಂಗಮ

ಉಪ್ಪಳ: ಮಂಗಲ್ಪಾಡಿ ಪಂಚಾಯತ್ ಮಟ್ಟದ ಹಿಂದೂ ಸಮಾಜೋತ್ಸವ ಮಾರ್ಚ್ ೧ರಂದು ಪ್ರತಾಪನಗರ ಶಿವಶಕ್ತಿ ಮೈದಾನದಲ್ಲಿ ನಡೆಯಲಿದ್ದು, ಇದರ ಪೂರ್ವಭಾವಿಯಾಗಿ ಮಾತೃಸಂಗಮ ನಿನ್ನೆ ಸಂಜೆ ಗಣೇಶಮಂದಿರದಲ್ಲಿ ಜರಗಿತು. ಪಂಚಾಯತ್ ಸಮಿತಿಯ ಮಾತೃಮಂಡಳಿ ಅಧ್ಯಕ್ಷೆ ಪದ್ಮ ಮೋಹನ್‌ದಾಸ್ ಐಲ, ಆರ್‌ಎಸ್‌ಎಸ್ ತಾಲೂಕು ಸಹ ಕಾರ್ಯವಾಹ್ ಪವನ್ ಮುಟ್ಟಮ್ ಮಾತನಾಡಿದರು. ಸ್ಥಾನೀಯ ಸಮಿತಿ ಅಧ್ಯಕ್ಷ ರಮೇಶ್ ಆಳ್ವ ತಿಂಬರ, ವಾರ್ಡ್ ಪ್ರತಿನಿಧಿ ವಸಂತ ಕುಮಾರ್ ಮಯ್ಯ, ಗಣೇಶಮಂದಿರ ಸಮಿತಿ ಅಧ್ಯಕ್ಷ ನಾರಾಯಣ ಮಣಿಯಾಣಿ ಉಪಸ್ಥಿತರಿದ್ದರು. ವೀಣಾ ಹರಿಶ್ಚಂದ್ರ ಬಲ್ಲಾಳ್ ಸ್ವಾಗತಿಸಿ, ವ್ಯವಸ್ಥಾ …

ಬ್ರಹ್ಮಕುಮಾರಿ ಈಶ್ವರೀಯ ವಿ.ವಿಯಲ್ಲಿ ತ್ರಿಮೂರ್ತಿ ಶಿವಜಯಂತಿ

ಕಾಸರಗೋಡು: ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯ ಕಾಸರಗೋಡು ಇದರ ವತಿಯಿಂದ ೯೦ನೇ ತ್ರಿಮೂರ್ತಿ ಶಿವಜಯಂತಿ ಕಾರ್ಯಕ್ರಮ ಶಿವರಾತ್ರಿಯಂದು ನಡೆಯಿತು. ನಿವೃತ್ತ ಎಎಸ್‌ಐ ಸಿ.ಎಚ್. ಬಾಬು ಅಧ್ಯಕ್ಷತೆ ವಹಿಸಿದ್ದರು. ನ್ಯಾಯವಾದಿ ಅನಂತರಾಮ ಪಿ. ಮುಖ್ಯ ಅತಿಥಿಯಾಗಿದ್ದರು. ಶಿವಧ್ವಜಾರೋಹಣದೊಂದಿಗೆ ಕಾರ್ಯಕ್ರಮ ಆರಂಭಗೊಂಡಿತು. ಈಶ್ವರೀಯ ವಿಶ್ವವಿದ್ಯಾಲಯ ಕಾಸರಗೋಡು ಇದರ ಮುಖ್ಯ ಸಂಚಾಲಕಿ ರಾಜಯೋಗಿನಿ ಬಿ.ಕೆ. ವಿಜಯಲಕ್ಷ್ಮಿ ಶಿವರಾತ್ರಿ ಸಂದೇಶ ನೀಡಿದರು. ಸರಕಾರಿ ಕಾಲೇಜಿನ ಸಹಾಯಕ ಪ್ರೊಫೆಸರ್ ರೋಹಿಣಿ, ಉಪನ್ಯಾಸಕ ಸತೀಶ್ ಡಿ. ಕರಿವೇಲಿ, ಎಸ್‌ಬಿಐ ಮೆನೇಜರ್ ರವಿಶಂಕರ್ ನಾಯರ್ ಶುಭ ಕೋರಿದರು. ಅತಿಥಿಗಳಾಗಿದ್ದ …

ಬಂದ್ಯೋಡಿನಲ್ಲಿ ಸರಣಿ ವಾಹನ ಅಪಘಾತ: ಓರ್ವ ಮೃತ್ಯು; ಇನ್ನೋರ್ವನಿಗೆ ಗಂಭೀರ

ಕುಂಬಳೆ: ರಾಷ್ಟ್ರೀಯ ಹೆದ್ದಾರಿಯ ಬಂದ್ಯೋಡು ಸಮೀಪ ಸರ್ವೀಸ್ ರಸ್ತೆಯಲ್ಲಿ ಸಂಭವಿಸಿದ ಸರಣಿ ವಾಹನ ಅಪಘಾತದಲ್ಲಿ ಗಂಭೀರ ಗಾಯಗೊಂ ಡಿದ್ದ ಓರ್ವ ಮೃತಪಟ್ಟ ಬಗ್ಗೆ ವರದಿಯಾಗಿದೆ. ಇನ್ನೋರ್ವನನ್ನು ಮಂಗಳೂರಿನ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ.  ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ಬಳಿಯ ಪಡ್ನಡ್ಕ ಏನೆಕಲ್ಲು ನಿವಾಸಿ ಸುರೇಶ್ ರೈ ಎಂಬವರ ಪುತ್ರ ನಿರಂಜನ್ ಕೆ. (24) ಮೃತಪಟ್ಟ ದುರ್ದೈವಿಯಾಗಿದ್ದಾರೆ. ಮಂಗಳೂರು ಶಕ್ತಿನಗರ ನೀತಿನಗರದ ಬೆನ್ನಿ ಎಂ.ಜೆ. ಎಂಬವರ ಪುತ್ರ ಕೃತಿಕ್ ಬೆನ್ನಿ (23) ಗಂಭೀರ ಗಾಯಗೊಂಡಿದ್ದು, ಇವರನ್ನು ಮಂಗಳೂರಿನ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ.  …

ನಿವೃತ್ತ ಯೋಧ ನೇಣು ಬಿಗಿದು ಸಾವಿಗೀಡಾದ ಸ್ಥಿತಿಯಲ್ಲಿ ಪತ್ತೆ

ಬದಿಯಡ್ಕ: ಆಹಾರ ಸೇವಿಸಿ ನಿದ್ರಿಸಿದ್ದ ನಿವೃತ್ತ ಯೋಧ  ಇಂದು ಬೆಳಿಗ್ಗೆ ಮರದಲ್ಲಿ ನೇಣು ಬಿಗಿದು ಸಾವಿಗೀಡಾದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಬದಿಯಡ್ಕ ಪೊಲೀಸ್ ಠಾಣೆ ವ್ಯಾಪ್ತಿಯ ನೆಕ್ರಾಜೆ, ಪುಂಡೂರು ರಾಮ್‌ನಿವಾಸ್‌ನ ದಿ|  ರಾಮನ್- ಚಿಟ್ಟೇಯಿ ದಂಪತಿಯ ಪುತ್ರ ಗೋಪಾಲನ್ (64) ಮೃತ ಪಟ್ಟ ವ್ಯಕ್ತಿಯಾಗಿದ್ದಾರೆ. ನಿನ್ನೆ ರಾತ್ರಿ ಆಹಾರ ಸೇವಿಸಿದ ಬಳಿಕ ಇವರು ನಿದ್ರಿಸಿದ್ದರು. ಇಂದು ಬೆಳಿಗ್ಗೆ ಇವರು ನಾಪತ್ತೆಯಾದುದರಿಂದ ಶೋಧ ನಡೆಸುತ್ತಿದ್ದಂತೆ ಬಾವಿ ಸಮೀಪದ ಮರದಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆಂದು ಸಂಬಂಧಿಕರು ತಿಳಿಸಿದ್ದಾರೆ. ಮೃತದೇಹವನ್ನು ಮರಣೋತ್ತರ …

ನವಕೇರಳ ಸರ್ವೇ ರದ್ದು: ತಗಲಿದ ಖರ್ಚನ್ನು ಸರಕಾರವೇ ಮರುಪಾವತಿಸಬೇಕಾಗಿದೆ

ತಿರುವನಂತಪುರ: ರಾಜ್ಯ ಸರಕಾರ ಆರಂಭಿಸಿದ ನವಕೇರಳ ಸರ್ವೇಯನ್ನು ಕೇರಳ ಹೈಕೋರ್ಟ್ ರದ್ದುಪಡಿಸಿರುವ ಹಿನ್ನೆಲೆಯಲ್ಲಿ    ಸರ್ವೇಗಾಗಿ ಈತನಕ ವ್ಯಯಿಸಲಾಗಿರುವ 20 ಕೋಟಿ ರೂ.ವನ್ನು ಸರಕಾರವೇ ರಾಜ್ಯ ಖಜಾನೆಗೆ ಮರುಪಾವತಿಸಬೇಕಾಗಿ ಬರಲಿದೆ. ಹಣಕಾಸು ಇಲಾಖೆಯ ಅನುಮತಿ ಇಲ್ಲದೆ ನವಕೇರಳ ಸರ್ವೇ ಆರಂಭಿಸಲಾಗಿದೆ ಎಂಬುವುದನ್ನು ಎತ್ತಿ ತೋರಿಸಿ ಮುಖ್ಯ ನ್ಯಾಯಮೂರ್ತಿ ಗಳಾದ  ಸೌಮನ್ ಸೇನ್ ಮತ್ತು   ಶ್ಯಾಮ್ ಕುಮಾರ್‌ರನ್ನೊಳಗೊಂಡ ಹೈಕೋರ್ಟ್‌ನ ವಿಭಾಗೀಯ ಪೀಠ ನವಕೇರಳ ಸರ್ವೇಯನ್ನು ರದ್ದುಪಡಿಸಿ ನಿನ್ನೆ ತೀರ್ಪು ನೀಡಿತ್ತು. ಈ ತೀರ್ಪು ಸರಕಾರಕ್ಕೆ ಚುನಾವಣೆ ಸಂದರ್ಭದಲ್ಲಿ ತೀವ್ರ ತಿರುಗೇಟು …

ವಾಹನಗಳಲ್ಲಿ ಸಾಗಿಸತ್ತಿದ್ದ 345.6 ಲೀಟರ್ ಗೋವಾ ಮದ್ಯ ವಶ: ಮೂವರ ವಿರುದ್ಧ ಪ್ರಕರಣ ದಾಖಲು

ಬೇಳ: ಎರಡು ವಾಹನಗಳಲ್ಲಾಗಿ ಅಕ್ರಮವಾಗಿ ಸಾಗಿಸುತ್ತಿದ್ದ 345.6 ಲೀಟರ್ ಗೋವಾ ನಿರ್ಮಿತ ಮದ್ಯವನ್ನು ಕಾಸರಗೋಡು ಎಕ್ಸೈಸ್ ಎನ್‌ಫೋರ್ಸ್‌ಮೆಂಟ್ ಆಂಡ್ ಆಂಟಿ ನರ್ಕೋಟಿಕ್ಸ್ ಸ್ಪೆಷಲ್ ಸ್ಕ್ವಾಡ್ ವಶಪಡಿಸಿಕೊಂಡಿದೆ. ಫೆ.೧೭ರಂದು ತಡರಾತ್ರಿ ಬೇಳದ ದೊಡ್ಯಡ್ಕದಲ್ಲಿ ಈ ಅಬಕಾರಿ ಕಾರ್ಯಾ ಚರಣೆ ನಡೆದಿದೆ. ಮಾಲು ಸಾಗಿಸಲು ಉಪಯೋಗಿಸಲಾದ ಎರಡು ವಾಹನ ಗಳನ್ನು ಅಬಕಾರಿ ತಂಡ ವಶಕ್ಕೆ ತೆಗೆದುಕೊಂಡಿದೆ. ಇದಕ್ಕೆ ಸಂಬಂಧಿಸಿ ದಿಲೀಪ್ ಡಿಸೋಜಾ ಕೆ, ರಾಜೇಶ್ ಕೆ, ಮತ್ತು ನಿತೇಷ್ ಕೆ. ಎಂಬವರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಆದರೆ ಇವರು ತಪ್ಪಿಸಿಕೊಂಡಿರುವ …