ಅಸೌಖ್ಯ: ಮಹಿಳೆ ನಿಧನ
ಉಪ್ಪಳ: ಚೆರುಗೋಳಿ ತೋಟ ನಿವಾಸಿ ದಿ| ಬಾಬು ಚೆಟ್ಟಿಯಾರ್ ರವರ ಪತ್ನಿ ನಾರಾಯಣಿ (83) ಸ್ವ-ಗೃಹದಲ್ಲಿ ನಿಧನ ಹೊಂದಿದರು. ಮೃತರು ಮಕ್ಕಳಾದ ಭವಾನಿ, ಕೃಪಾಕರ, ದಾಕ್ಷಾಯಿಣಿ, ಅಳಿಯಂದಿರಾದ ರವಿಚಂದ್ರನ್, ಪ್ರಭಾಕರನ್, ಸೊಸೆ ಸಂಧ್ಯಾ ಹಾಗೂ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.
ಉಪ್ಪಳ: ಚೆರುಗೋಳಿ ತೋಟ ನಿವಾಸಿ ದಿ| ಬಾಬು ಚೆಟ್ಟಿಯಾರ್ ರವರ ಪತ್ನಿ ನಾರಾಯಣಿ (83) ಸ್ವ-ಗೃಹದಲ್ಲಿ ನಿಧನ ಹೊಂದಿದರು. ಮೃತರು ಮಕ್ಕಳಾದ ಭವಾನಿ, ಕೃಪಾಕರ, ದಾಕ್ಷಾಯಿಣಿ, ಅಳಿಯಂದಿರಾದ ರವಿಚಂದ್ರನ್, ಪ್ರಭಾಕರನ್, ಸೊಸೆ ಸಂಧ್ಯಾ ಹಾಗೂ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.
ಕಾಸರಗೋಡು: ಸ್ವಾತಂತ್ರ್ಯ ಚಳವಳಿ ಬಗ್ಗೆ ಚಾಡಿ ಹೇಳಿದವರಿಗೆ ಪ್ರಜಾಪ್ರಭುತ್ವದ ಬೆಲೆ ತಿಳಿಯದೆಂದು, ಬ್ರಿಟಿಷ್ನವರಿಗೆ ಕ್ಷಮೆ ಬರೆದು ಕೊಟ್ಟು ಜೈಲಿನಿಂದ ಬಿಡುಗಡೆಗೊಂಡವರು ಈಗ ಸಂವಿಧಾನವನ್ನು ಬುಡಮೇಲು ಗೊಳಿಸಲು ಯತ್ನಿಸುತ್ತಿರುವುದಾಗಿ ಇದರ ವಿರುದ್ಧ ದ್ವಿತೀಯ ಸ್ವಾತಂತ್ರ್ಯ ಹೋರಾಟಕ್ಕೆ ಚಾಲನೆ ನೀಡುವುದಾಗಿ ಕೆಪಿಸಿಸಿ ರಾಷ್ಟ್ರೀಯ ಕಾರ್ಯಸಮಿತಿ ಸದಸ್ಯ ಟಿ.ಎನ್. ಪ್ರತಾಪನ್ ನುಡಿದರು. ಆರ್ಎಸ್ಎಸ್, ನರೇಂದ್ರ ಮೋದಿ ಸಂಘ ಪರಿವಾರ ಸಂಸ್ಥೆಗಳು ಸೇರಿ ಮತ ಕಳವು ನಡೆಸಿರುವುದಾಗಿಯೂ, ಇವರನ್ನು ಆಡಳಿತದಿಂದ ಕೆಳಗಿಳಿಸುವವರೆಗೆ ಕಾಂಗ್ರೆಸ್ ಹೋರಾಟ ಮುಂದುವರಿಸಲಿದೆ ಎಂದು ಅವರು ನುಡಿದರು. ಬಿಜೆಪಿಯ ಪೋಷಕ …
Read more “ದ್ವಿತೀಯ ಸ್ವಾತಂತ್ರ್ಯ ಮುಷ್ಕರಕ್ಕೆ ಚಾಲನೆ – ಟಿ.ಎನ್. ಪ್ರತಾಪನ್”
ಕಾಸರಗೋಡು: ಕಾಸರಗೋಡು ನಗರಸಭಾ ಕಾರ್ಯಾಲಯದಲ್ಲಿ ನಡೆದ ಸ್ವಾತಂತ್ರ್ಯ ದಿನಾಚರಣೆಯಲ್ಲಿ ಅಧ್ಯಕ್ಷ ಅಬ್ಬಾಸ್ ಬೀಗಂ ಧ್ವಜಾರೋ ಹಣಗೈದರು. ಒಗ್ಗಟ್ಟಿನಲ್ಲಿ ಬಿರುಕು ಮೂಡಿಸಿ ವಿಭಾಗೀಯತೆ ಸೃಷ್ಟಿಸಲು ಯತ್ನಿಸುವವರನ್ನು ದೂರ ಮಾಡಬೇಕೆಂದು ಯಾವುದೇ ಬೆಲೆ ತೆತ್ತಾದರೂ ದೇಶದ ಜನರ ಐಕ್ಯವನ್ನು ಸಂರಕ್ಷಿಸಬೇಕೆಂದು ಈ ವೇಳೆ ಅವರು ಕರೆ ನೀಡಿದರು. ಉಪಾಧ್ಯಕ್ಷೆ ಶಂಸೀದಾ ಫಿರೋಸ್, ಸ್ಥಾಯಿ ಸಮಿತಿ ಅಧ್ಯಕ್ಷರಾದ ಸಹೀರ್ ಆಸಿಫ್, ರೀತಾ ಆರ್, ಖಾಲಿದ್ ಪಚ್ಚಕ್ಕಾಡ್, ರಜನಿ ಕೆ, ಕೌನ್ಸಿಲರ್ಗಳು, ನಾರಾಯಣ ನಾಯ್ಕ್, ಸಿಬ್ಬಂದಿಗಳು, ನಗರಸಭಾ ಬಡ್ಸ್ ಶಾಲೆ ವಿದ್ಯಾರ್ಥಿಗಳು ಭಾಗವಹಿಸಿದರು.
ಉಪ್ಪಳ: ವಿಶ್ವಹಿಂದೂ ಪರಿಷತ್ ಭಜರಂಗದಳ ಮಂಗಲ್ಪಾಡಿ ಖಂಡಸಮಿತಿ ವತಿಯಿಂದ ಅಖಂಡ ಭಾರತ ಸಂಕಲ್ಪ ದಿನದ ಪ್ರಯುಕ್ತ ಪಂಜಿನ ಮೆರವಣಿಗೆ ನಿನ್ನೆ ಸಂಜೆ ಜರಗಿತು. ಉಪ್ಪಳ ಶ್ರೀ ಅಯ್ಯಪ್ಪ ಭಜನಾ ಮಂದಿರ ಪರಿಸರದಿಂದ ಹೊರಟ ಮೆರವಣಿಗೆ ಪೇಟೆಯಲ್ಲಿ ಸಮಾಪ್ತಿಗೊಂಡಿತು. ವಿಶ್ವಹಿಂದೂ ಪರಿಷತ್ ಜಿಲ್ಲಾ ಕಾರ್ಯಾಧ್ಯಕ್ಷ ಡಾ. ಶಿವರಾಯ ಭಟ್ ಮುಳ್ಳೇರಿಯ ಮಾತನಾಡಿದರು. ಮುಖಂಡರಾದ ಹರಿನಾಥ ಭಂಡಾರಿ ಮುಳಿಂಜ, ಸಂಕಪ್ಪ ಭಂಡಾರಿ ಬಳ್ಳಂಬೆಟ್ಟು, ನಿರಂಜನ ಚೆರುಗೋಳಿ ಉಪಸ್ಥಿತರಿದ್ದರು. ಸತ್ಯ ವೀರನಗರ ಸ್ವಾಗತಿಸಿ, ರವಿ ಪರಂಕಿಲ ವಂದಿಸಿದರು.
ಕಾಸರಗೋಡು: ಕಾಸರಗೋಡು ಸಾರ್ವಜನಿಕ ಶ್ರೀ ಗಣೇಶೋತ್ಸವದ ಸಪ್ತತಿ (70ನೇ ವಾರ್ಷಿಕ) ಮಹೋತ್ಸವ ದಂಗವಾಗಿ ಅಗೋಸ್ತ್ ೨೮ರಿಂದ ಸೆಪ್ಟಂಬರ್ 9ರ ತನಕ ನಡೆಯಲಿರುವ ವೈವಿಧ್ಯಮಯ ಕಾರ್ಯಕ್ರಮಗಳನ್ನು ಯಶಸ್ವಿಗೊಳಿಸುವ ನಿಟ್ಟಿನಲ್ಲಿ ಕಾಸರಗೋಡು ಕರಂದಕ್ಕಾಡ್ ಶಿವಾಜಿನಗರದ ಶ್ರೀ ವೀರ ಹನುಮಾನ್ ಪ್ರಾದೇಶಿಕಸಮಿತಿಗೆ ರೂಪು ನೀಡಲಾಯಿತು. ಸಪ್ತತಿ ಮಹೋತ್ಸವದಂಗವಾಗಿ ಕರಂದಕ್ಕಾಡ್ ಶಿವಾಜಿ ನಗರವನ್ನು ಕೇಸರಿ ಧ್ವಜಗಳ ಸಹಿತ ತಳಿರು ತೋರಣಗಳು ಮತ್ತು ವಿದ್ಯುದ್ದೀಪಾಲಂಕೃತ ವ್ಯವಸ್ಥೆ ಮಾಡುವುದು, ಅನ್ನದಾನಕ್ಕೆ ಅಗತ್ಯವಿರುವ ಎಲ್ಲಾ ಸಾಮಗ್ರಿಗಳನ್ನು ಮನೆಗಳಿಂದ ಸಂಗ್ರಹಿಸಿ ಹಸಿರುವಾಣಿ ಸಮರ್ಪಿಸುವುದು, ಕೊನೆಯ ದಿನದಂದು ಶ್ರೀ ಗಣೇಶ …
Read more “ಸಾರ್ವಜನಿಕ ಶ್ರೀ ಗಣೇಶೋತ್ಸವ ಸಪ್ತತಿ ಮಹೋತ್ಸವ ಪ್ರಾದೇಶಿಕ ಸಮಿತಿಗೆ ರೂಪು”
ಕಣ್ಣೂರು: ಮುಸ್ಲಿಂ ಲೀಗ್ ಕಾರ್ಯಕರ್ತರ ಆಕ್ರಮಣದಲ್ಲಿ ಗಂಭೀರ ಗಾಯಗೊಂಡು 13 ವರ್ಷದಿಂದ ಶಯ್ಯಾವಲಂಭಿಯಾಗಿದ್ದ ಸಿಪಿಎಂ ಕಾರ್ಯಕರ್ತ ನಿಧನ ಹೊಂದಿದರು. ತಳಿಪರಂಬ್ ಅರಿಯಿಲ್ ವಳ್ಳೇರಿ ಮೋಹನನ್ (60) ಮೃತಪಟ್ಟವರು. 2012 ಫೆಬ್ರವರಿ 12ರಂದು ಮೋಹನ್ರಿಗೆ ಆಕ್ರಮಣ ನಡೆಸಲಾಗಿತ್ತು. ಅಂದು ಬೆಳಿಗ್ಗೆ ಮೋಹನನ್ರನ್ನು ಮನೆಯಿಂದ ಎಳೆದುಕೊಂಡು ಹೋಗಿ ಕಡಿದು ಗಾಯಗೊಳಿಸಲಾಗಿತ್ತು. ಮೃತಪಟ್ಟರೆಂದು ತಿಳಿದು ಪೊದೆಗಳೆಡೆಯಲ್ಲಿ ಉಪೇಕ್ಷಿಸಿ ಅಕ್ರಮಿ ತಂಡ ಪರಾರಿಯಾಗಿತ್ತು. ಆಕ್ರಮಣವನ್ನು ತಡೆಯಲೆತ್ನಿಸಿದ ವಿದ್ಯಾರ್ಥಿಯಾದ ಪುತ್ರ ಮಿಥುನ್ಗೂ ಗಾಯವುಂಟಾಗಿತ್ತು. ಆ ಬಳಿಕ 13 ವರ್ಷದಿಂದ ಚಿಕಿತ್ಸೆಯಲ್ಲಿದ್ದ ಮೋಹನನ್ ನಿನ್ನೆ ಬೆಳಿಗ್ಗೆ …
Read more “ಮುಸ್ಲಿಂ ಲೀಗ್ ಕಾರ್ಯಕರ್ತರ ಆಕ್ರಮಣದಿಂದ ಗಾಯಗೊಂಡಿದ್ದ ಸಿಪಿಎಂ ಕಾರ್ಯಕರ್ತ ನಿಧನ”
ಕುಂಬಳೆ: ಭಾಸ್ಕರನಗರದಲ್ಲಿ ನವೋದಯ ಫ್ರೆಂಡ್ಸ್ ಕ್ಲಬ್ ಆರಂಭಿಸಿದ ನವೋದಯ ಗ್ರಂಥಾಲಯ ಹಾಗೂ ವಾಚನಾಲಯದ ಉದ್ಘಾಟನೆಯನ್ನು ನಿನ್ನೆ ಸ್ವಾತಂತ್ರ್ಯೋತ್ಸವ ಸಂದರ್ಭದಲ್ಲಿ ಉದ್ಘಾಟಿಸಲಾಯಿತು. ಪಂಚಾಯತ್ ಅಧ್ಯಕ್ಷೆ ಯು.ಪಿ. ತಾಹಿರ ಉದ್ಘಾಟನೆ ನಿರ್ವಹಿಸಿ ಶುಭಾಶಂಸನೆಗೈದರು. ನಿವೃತ್ತ ಎಎಸ್ಪಿ ಟಿ.ಪಿ. ರಂಜಿತ್ ಧ್ವಜಾರೋಹಣ ನಡೆಸಿದರು. ನಿವೃತ್ತ ಅಡಿಶನಲ್ ಎಸ್.ಐ. ಬಾಬು, ನಿವೃತ್ತ ಎಎಸ್ಐ ಗೋಪಾಲಕೃಷ್ಣ, ಬ್ಲಾಕ್ ಪಂಚಾಯತ್ ಸ್ಥಾಯಿ ಸಮಿತಿ ಅಧ್ಯಕ್ಷ ಅಶ್ರಫ್ ಕಾರ್ಳೆ, ಪಂ. ಸದಸ್ಯೆ ಶೋಭಾ, ವಿವಿಧ ರಾಜಕೀಯ ಪಕ್ಷಗಳ ಪ್ರತಿನಿ ಧಿಗಳು ಹಾಗೂ ನಾಗರಿಕರು ಭಾಗವಹಿಸಿದರು.
ಬೆಂಗಳೂರು: ಚಿತ್ರದುರ್ಗದ ರೇಣುಕಾಸ್ವಾಮಿ ಹತ್ಯೆ ಪ್ರಕರಣದ ಆರೋಪಿಗಳಾದ ಚಿತ್ರನಟ ದರ್ಶನ್, ಪವಿತ್ರಾ ಗೌಡ ಸೇರಿದಂತೆ ಏಳು ಮಂದಿಗೆ ನೀಡಲಾದ ಜಾಮೀನನ್ನು ಸುಪ್ರೀಂಕೋರ್ಟ್ ಇಂದು ಬೆಳಿಗ್ಗೆ ರದ್ದುಪಡಿಸಿದೆ. ಈ ಏಳು ಮಂದಿ ಆರೋಪಿಗಳಿಗೆ ಈ ಹಿಂದೆ ಕರ್ನಾಟಕ ಹೈಕೋರ್ಟ್ ಜಾಮೀನು ಮಂಜೂರು ಮಾಡಿತ್ತು. ಅದರ ವಿರುದ್ಧ ಸಲ್ಲಿಸಲಾದ ಮೇಲ್ಮನವಿಯನ್ನು ಪರಿಶೀಲಿಸಿದ ಸುಪ್ರೀಂಕೋರ್ಟ್ ಆರೋಪಿಗಳಿಗೆ ಮಂಜೂರು ಮಾಡಲಾದ ಜಾಮೀನನ್ನು ರದ್ದುಪಡಿಸಲು ತೀರ್ಪು ನೀಡಿದೆ.
ಬದಿಯಡ್ಕ: ರಸ್ತೆ ಬದಿ ಲಾರಿ ನಿಲ್ಲಿಸಿ ಮೂತ್ರ ವಿಸರ್ಜನೆ ಮಾಡುತ್ತಿದ್ದ ಲಾರಿ ಚಾಲಕನ ತಲೆ ಮೇಲೆ ಮರದ ರೆಂಬೆ ಮುರಿದು ಬಿದ್ದು ಅವರು ಮೃತಪಟ್ಟ ದಾರುಣ ಘಟನೆ ಸಂಭವಿಸಿದೆ. ದ.ಕ ಜಿಲ್ಲೆಯ ಬಂಟ್ವಾಳ ಪೆರಾಜೆ ಕೂಡೋಲು ಎಂಬಲ್ಲಿನ ಕೆ. ಜಗದೀಶ ಗೌಡ (5೦) ಎಂಬವರು ಮೃತಪಟ್ಟ ದುರ್ದೈವಿಯಾಗಿದ್ದಾರೆ. ನಿನ್ನೆ ಬೆಳಿಗ್ಗೆ 6.15ರ ವೇಳೆ ಪೆರ್ಲ-ಸೀತಾಂಗೋಳಿ ರಸ್ತೆಯ ಬೆದ್ರಂಪಳ್ಳದಲ್ಲಿ ಘಟನೆ ಸಂಭವಿಸಿದೆ. ಜಗದೀಶ್ ಗೌಡ ಮೂಡುಬಿದ್ರೆಯಿಂದ ಕಾಸರಗೋಡು ಭಾಗಕ್ಕೆ ಲಾರಿಯಲ್ಲಿ ಕೋಳಿ ಆಹಾರ ಸಾಗಿಸುತ್ತಿದ್ದರು. ಜತೆಗೆ ಕ್ಲೀನರ್ ಕೂಡಾ …
Read more “ಮೂತ್ರ ವಿಸರ್ಜನೆ ವೇಳೆ ರಸ್ತೆ ಬದಿಯ ಮರದ ರೆಂಬೆ ತಲೆಗೆ ಬಿದ್ದು ಲಾರಿ ಚಾಲಕ ದಾರುಣ ಮೃತ್ಯು”
ಸೀತಾಂಗೋಳಿ: ಕೆಂಪುಕಲ್ಲು ಸಾಗಾಟದ ಲಾರಿ ಹಾಗೂ ಬೈಕ್ ಢಿಕ್ಕಿ ಹೊಡೆದು ವ್ಯಾಪಾರಿ ಸಹಿತ ಇಬ್ಬರು ಗಂಭೀರ ಗಾಯಗೊಂಡ ಘಟನೆ ಸಂಭವಿಸಿದೆ. ಮಾನ್ಯ ನಿವಾಸಿಯೂ ನೀರ್ಚಾಲು ಮೇಲಿನ ಪೇಟೆಯಲ್ಲಿ ಫ್ಯಾನ್ಸಿ ಅಂಗಡಿ ನಡೆಸುವ ಪಚ್ಚು ಯಾನೆ ಪ್ರಕಾಶ್ (36), ಚೆಡೇಕಲ್ ನಿವಾಸಿಯೂ ನೀರ್ಚಾಲಿನಲ್ಲಿ ಬಾಡಿಗೆ ಕ್ವಾರ್ಟರ್ಸ್ನಲ್ಲಿ ವಾಸಿಸುವ ರತೀಶ್ (32) ಎಂಬವರು ಗಾಯಗೊಂಡಿದ್ದಾರೆ. ಇವರನ್ನು ದೇರಳಕಟ್ಟೆಯ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ. ನಿನ್ನೆ ಸಂಜೆ 5 ಗಂಟೆ ವೇಳೆ ಸೀತಾಂಗೋಳಿ ಪೆಟ್ರೋಲ್ ಬಂಕ್ ಸಮೀಪದ ರಸ್ತೆಯಲ್ಲಿ ಅಪಘಾತ ಸಂಭವಿಸಿದೆ. ಪ್ರಕಾಶ್ ಹಾಗೂ …
Read more “ಕೆಂಪುಕಲ್ಲು ಸಾಗಾಟ ಲಾರಿ-ಬೈಕ್ ಢಿಕ್ಕಿ: ವ್ಯಾಪಾರಿ ಸಹಿತ ಇಬ್ಬರಿಗೆ ಗಂಭೀರ ಗಾಯ”
You cannot copy contents of this page