ಪೊವ್ವಲ್ ಕ್ವಾರ್ಟರ್ಸ್‌ನಿಂದ ಕಳವು: ಚೆರ್ಕಳ ಬಾಲಡ್ಕ ನಿವಾಸಿ ಸೆರೆ

ಬೋವಿಕ್ಕಾನ: ಪೊವ್ವಲ್‌ನ ಪಿ.ಎ. ಕಾಂಪ್ಲೆಕ್ಸ್ ಕ್ವಾರ್ಟರ್ಸ್‌ನ ಬೀಗ ಮುರಿದು ಲ್ಯಾಪ್‌ಟಾಪ್, ಸಂಬಂಧಪಟ್ಟ ಉಪಕರಣಗಳನ್ನು ಕಳವುಗೈದ ಪ್ರಕರಣದಲ್ಲಿ ಆರೋಪಿ ಸೆರೆಯಾಗಿದ್ದಾನೆ. ಚೆರ್ಕಳ ಬಾಲಡ್ಕ ನಿವಾಸಿ ಹನೀಫ್ (52)ನನ್ನು ಆದೂರು ಪೊಲೀಸರು ಬಂಧಿಸಿದ್ದಾರೆ. ಕಳೆದ ತಿಂಗಳ 25ರಂದು ಬೆಳಿಗ್ಗೆ 11ರಿಂದ ರಾತ್ರಿ 11ರ ಮಧ್ಯೆ ಕಳವು ನಡೆಸಲಾಗಿತ್ತು. ಉತ್ತರ ಪ್ರದೇಶ ನಿವಾಸಿ ಹಾಗೂ ಹೋಟೆಲ್ ನೌಕರ ರಿಹಾನ್ ಅಶ್ರಫ್‌ನ ಕೊಠಡಿಯಲ್ಲಿ ಕಳವು ನಡೆಸಲಾಗಿತ್ತು. ಬೀಗ ಮುರಿದು ಒಳನುಗ್ಗಿದ ಕಳ್ಳ ಮಲಗುವ ಕೊಠಡಿಯಲ್ಲಿ ಬ್ಯಾಗ್‌ನಲ್ಲಿರಿಸಿದ್ದ ಲ್ಯಾಪ್‌ಟಾಪ್, ಚಾರ್ಜರ್, ಮೈಕ್ರೋಫೋನ್ ಎಂಬಿವು ಕಳವುಗೈದಿರುವುದಾಗಿ …

ಬೇಕಲದಲ್ಲಿ ಸೆರೆಗೀಡಾದ ಕಳವು ಆರೋಪಿಗಳು ಕಳತ್ತೂರಿನ ಮನೆಯಿಂದ ನಗ-ನಗದು ದೋಚಿದ ಪ್ರಕರಣದಲ್ಲೂ ಶಾಮೀಲು

ಕುಂಬಳೆ:  ಬೇಕಲ ಪೊಲೀಸರು ಸೆರೆಹಿಡಿದ  ಕುಖ್ಯಾತ ಕಳವು ಪ್ರಕರಣದ ಇಬ್ಬರು ಆರೋಪಿಗಳು ಕುಂಬಳೆ ಪೊಲೀಸ್ ಠಾಣೆ ವ್ಯಾಪ್ತಿಯ ಕಳತ್ತೂರು ಪಂಜಿಕಲ್ಲಿನ ಮನೆಯಿಂದ ನಗನಗದು ದೋಚಿದ ಪ್ರಕರಣದಲ್ಲೂ ಆರೋಪಿಗಳಾಗಿದ್ದಾರೆಂದು ತನಿಖೆಯಲ್ಲಿ ತಿಳಿದುಬಂದಿರುವುದಾಗಿ ಪೊಲೀಸರು ತಿಳಿಸಿದ್ದಾರೆ.  ಪಾಲಕ್ಕಾಡ್ ಚಿಟ್ಟೂರು ಆಯಿರೂರು ಕೊಳಕ್ಕರೆಪರಂಬಿಲ್ ನಿವಾಸಿ ಜಲೀಲ್ ಯಾನೆ ಶಟರ್ ಜಲೀಲ್ (36), ಕಾಸರಗೋಡು  ಆಲಂಪಾಡಿಯ ಅಬ್ದುಲ್ ಲತೀಫ್ (46) ಎಂಬಿವರನ್ನು ಬೇಕಲ ಡಿವೈಎಸ್ಪಿ ಎಂ.ಪಿ. ಆಜಾದ್‌ರ ನೇತೃತ್ವದಲ್ಲಿ ಸೆರೆಹಿಡಿಯಲಾಗಿದೆ. ಇವರನ್ನು ತನಿಖೆಗೊಳಪಡಿಸಿದಾಗ   ಕಳತ್ತೂರು ಪಂಜಿಕಲ್ಲಿನ ಯೂಸಫ್‌ರ ಮನೆಯಿಂದ 9 ಪವನ್ ಚಿನ್ನಾಭರಣ …

ಕೈಯ್ಯಾರ್‌ನಲ್ಲಿ ಕೋಳಿ ಅಂಕ: ಎರಡು ಕೋಳಿಗಳ ಸಹಿತ ಇಬ್ಬರ ಸೆರೆ

ಕುಂಬಳೆ: ಕಯ್ಯಾರಿನ ಕೋಳಿ ಅಂಕ ಕೇಂದ್ರಕ್ಕೆ ಪೊಲೀಸರು ದಾಳಿ ನಡೆಸಿದ್ದಾರೆ. ಎರಡು ಕೋಳಿಗಳ ಸಹಿತ ಇಬ್ಬರನ್ನು ಕುಂಬಳೆ ಪೊಲೀಸರು ಸೆರೆ ಹಿಡಿದಿದ್ದಾರೆ. ಕಯ್ಯಾರು ಕೊಕ್ಕೆಚ್ಚಾಲ್ ನಿವಾಸಿ ಹರೀಶ್ (37), ಕಯ್ಯಾರು ನಿವಾಸಿ ಸೋಮಯ್ಯ (48) ಎಂಬಿವರನ್ನು ಕುಂಬಳೆ ಎಸ್‌ಐ ಕೆ. ಶ್ರೀಜೇಶ್ ಹಾಗೂ ತಂಡ ಸೆರೆ ಹಿಡಿದಿದೆ. ಮುಂಡತ್ತಾಯಿ ದೈವಸ್ಥಾನದ ಸಮೀಪದ ಕೋಳಿ ಅಂಕ ಕೇಂದ್ರದಿಂದ ಪೊಲೀಸರು ಇವರನ್ನು ಸೆರೆ ಹಿಡಿದಿದ್ದು, ರಹಸ್ಯ ಮಾಹಿತಿ ಲಭಿಸಿದ ಹಿನ್ನೆಲೆಯಲ್ಲಿ ತಂಡ ನಿನ್ನೆ ಮಧ್ಯಾಹ್ನ ನಂತರ ದಾಳಿ ನಡೆಸಿತ್ತು.  ಈ …

ಸೇವೆಯಿಂದ ನಿವೃತ್ತನಾಗಿ ಬೆಕ್ಕುಗಳನ್ನು ಸಂರಕ್ಷಿಸಲು ಉಪ್ಪಳದಲ್ಲಿ ಬಾಡಿಗೆಗೆ ಮನೆ ಪಡೆದ ತಿರುವನಂತಪುರ ನಿವಾಸಿ

ಉಪ್ಪಳ: ಉದ್ಯೋಗದಿಂದ ನಿವೃತ್ತರಾದ ಬಳಿಕ ತಿರುವನಂತಪುರ ನಿವಾಸಿ ಸರಕಾರಿ ಕ್ವಾರ್ಟರ್ಸ್ ತೊರೆದು ಉಪ್ಪಳದಲ್ಲಿ ಮನೆಯೊಂ ದನ್ನು ಬಾಡಿಗೆಗೆ ಪಡೆದುಕೊಂಡರು. ಈಗ ಈ ಬಾಡಿಗೆ ಮನೆಯಲ್ಲಿ ಪತ್ನಿ ಹಾಗೂ ಇತರ 18 ಮಂದಿ ಮನಃಶಾಂತಿಯಿಂದ ಜೀವಿಸುತ್ತಿದ್ದಾರೆ. ಮಂಗಲ್ಪಾಡಿ ತಾಲೂಕು ಆಸ್ಪತ್ರೆಯ ಹೆಲ್ತ್ ಇನ್ಸ್‌ಪೆಕ್ಟರ್ ಆಗಿದ್ದ ಚಂದ್ರಶೇಖರನ್ ತಂಬಿ ಕಳೆದ ಫೆಬ್ರವರಿ 28ರಂದು ಸೇವೆಯಿಂದ ನಿವೃತ್ತರಾದರು. ಸೇವೆಯಿಂದ ನಿವೃತ್ತರಾದ ಬಳಿಕ ಹೆಚ್ಚಿನವರು ತಮ್ಮ ಊರಿಗೆ ತೆರಳುವುದು ಸಾಮಾನ್ಯವಾಗಿದ್ದರೂ ಇವರು ಅಂದೇ ಬಾಡಿಗೆಗೆ ಕ್ವಾರ್ಟರ್ಸ್ ಪಡೆದುಕೊಂಡು ಇಲ್ಲಿ ಉಳಿದಿದ್ದಾರೆ.  7 ವರ್ಷದ …

ತಿರುವನಂತಪುರ ಕಾರ್ಪೋರೇಶನ್ ಆಡಳಿತವನ್ನು ಜನರು ಬಿಜೆಪಿಗೆ ನೀಡಿರುವುದು ರಾಜ್ಯದಲ್ಲಿ ಬಿಜೆಪಿ ಆಡಳಿತಕ್ಕೆ ಬರಬೇಕೆಂಬ ಉದ್ದೇಶದಿಂದ-ಸಿ.ಕೆ. ಪದ್ಮನಾಭನ್

ಕಾಸರಗೋಡು: ರಾಜ್ಯದ ರಾಜಧಾನಿಯಾದ ತಿರುವನಂತಪುರ ಕಾರ್ಪೋರೇಶನ್‌ನ ಆಡಳಿತವನ್ನು ಜನರು ಬಿಜೆಪಿಗೆ ದೊರಕಿಸಿಕೊಟ್ಟಿರು ವುದು ಕೇರಳದಲ್ಲಿ ಬಿಜೆಪಿ ಆಡಳಿತ ಬರಬೇಕೆಂಬ ಉದ್ದೇಶದಿಂದಾಗಿದೆ. ರಾಜಧಾನಿ ನಗರದ ಜನರ ಆಗ್ರಹವನ್ನು ಸಾರ್ಥಕಗೊಳಿಸಲು ಕಾಸರಗೋಡು  ಸಹಿತ ಕೇರಳದಾದ್ಯಂತದ ಮತದಾರರಿಗೆ ಸಾಧ್ಯವಾಗಲಿದೆ ಯೆಂದು ಬಿಜೆಪಿ ಮಾಜಿ ರಾಜ್ಯಾಧ್ಯಕ್ಷ ಸಿ.ಕೆ. ಪದ್ಮನಾಭನ್  ತಿಳಿಸಿದರು. ನವೀಕರಿಸಿದ ಕಾಸರಗೋಡು ಬಿಜೆಪಿ ಜಿಲ್ಲಾ ಕಮಿಟಿ ಕಚೇರಿ,ಎನ್‌ಡಿಎ ಕಾಸರಗೋಡು ಜಿಲ್ಲಾ ಸಮಿತಿ ಕಚೇರಿ ಹಾಗೂ ಶಕ್ತಿ ಕೇಂದ್ರ ಇನ್‌ಚಾರ್ಜ್ ರವರುಗಳ ಸಭೆಯನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು. ಸಿಪಿಎಂ ಹಾಗೂ  ಸಚಿವ ಸಂಪು …

ಯುವಸಮಾಜ ದಾರಿ ತಪ್ಪದಂತೆ ಪೋಷಕರು ಎಚ್ಚರವಹಿಸಬೇಕು- ಎಡನೀರುಶ್ರೀ

ಬದಿಯಡ್ಕ: ಧರ್ಮಜೀವನ ಪದ್ಧತಿಯನ್ನು ರೂಢಿಸಿಕೊಂಡು ನಾವು ಮುನ್ನಡೆಯಬೇಕು. ಪ್ರಸ್ತುತ ಬದಲಾವಣೆಯ ಕಾಲಗತಿಯಲ್ಲಿ ಅಸ್ಥಿರತೆ ಸಹಜ ಆದರೆ ಅದನ್ನು ಒಗ್ಗೂಡಿಸುವುದೆ ಸಮಾಜೋತ್ಸವದ ಉದ್ದೇಶ. ಯುವ ಸಮಾಜ ಪಾಶ್ಚಾತ್ಯ ಸಂಸ್ಕೃತಿ ಸಂಸ್ಕಾರಗಳಿAದ ದಾರಿ ತಪ್ಪದಂತೆ ನೋಡಿಕೊಳ್ಳುವುದು ನಮ್ಮೆಲ್ಲರ ಜವಾಬ್ದಾರಿ ಎಂದು ಎಡನೀರು ಮಠದ ಶ್ರೀ ಸಚ್ಚಿದಾನಂದ ಭಾರತೀ ಸ್ವಾಮೀಜಿ ನುಡಿದರು. ಅನ್ಯ ಧರ್ಮೀಯರು ನಮ್ಮ ದೌರ್ಬಲ್ಯ ಗಳನ್ನು ಉಪಯೋಗಿಸಿಕೊಂಡು ಆಕ್ರಮಣವನ್ನು ಮಾಡುತ್ತಿರುವುದು ಖಂಡನೀಯ ಎಂದವರು ನುಡಿದರು.ಬದಿಯಡ್ಕ ಶ್ರೀ ಭಾರತೀ ನಗರ ಬೋಳುಕಟ್ಟೆ ಮೈದಾನದಲ್ಲಿ ಜರಗಿದ ವಿರಾಟ್ ಹಿಂದೂ ಸಮಾ ಜೋತ್ಸವದಲ್ಲಿ …

ನೀರ್ಚಾಲು ಶ್ರೀ ಕುಮಾರಸ್ವಾಮಿ ಭಜನಾ ಮಂದಿರ ಛಾಯಾಚಿತ್ರ ಪ್ರತಿಷ್ಠೆ

ಬದಿಯಡ್ಕ: ನೀರ್ಚಾಲು ಕುಮಾರಸ್ವಾಮಿ ಮಂದಿರ ಧಾರ್ಮಿಕ ಶ್ರದ್ಧೆಗೆ ನೀಡಿದ ಕೈಗನ್ನಡಿ. ಮಂದಿರ, ದೇವಸ್ಥಾನ, ಶಾಲೆಗಳು ಸರಿಯಾಗಿದ್ದರೆ ಪೂರ್ಣ ಜನರು ಸಂಸ್ಕಾರವಂತರಾಗುತ್ತಾರೆ ಎಂದು ಆನೆಗುಂದಿ ಮಹಾಸಂಸ್ಥಾನ ಸರಸ್ವತೀ ಪೀಠದ ಶ್ರೀ ಕಾಳಹಸ್ತೇಂದ್ರ ಸರಸ್ವತೀ ಸ್ವಾಮೀಜಿ ನುಡಿದರು. ಅವರು ನೀರ್ಚಾಲು ಶ್ರೀ ಕುಮಾರಸ್ವಾಮಿ ಭಜನಾ ಮಂದಿರದ ಪುನಃ ಪ್ರತಿಷ್ಠಾ ಮಹೋತ್ಸವದ ಧಾರ್ಮಿಕ ಸಭೆಯಲ್ಲಿ ಆಶೀರ್ವಚನ ನೀಡಿದರು. ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ರಾಧಾಕೃಷ್ಣ ಭಟ್ ಖಂಡಿಗೆ ಅಧ್ಯಕ್ಷತೆ ವಹಿಸಿದ್ದರು. ಬದಿಯಡ್ಕ ಪಂ. ಅಧ್ಯಕ್ಷ ಶಂಕರ ಡಿ., ಉಪಾಧ್ಯಕ್ಷೆ ಅಶ್ವಿನಿ ಕೆ.ಎಂ, ಸದಸ್ಯೆ …

ಉಪ್ಪಳ ಅಗ್ನಿಶಾಮಕದಳ ಕೇಂದ್ರ ನೂತನ ಕಟ್ಟಡ ಉದ್ಘಾಟನೆ 5ರಂದು

ಉಪ್ಪಳ: ಮಂಗಲ್ಪಾಡಿ ಪಂಚಾಯತ್‌ನ 7ನೇ ವಾರ್ಡ್ ಪ್ರತಾಪನಗರದಲ್ಲಿ 1.5 ಕೋಟಿ ರೂಗಳ ವೆಚ್ಚದಲ್ಲಿ ನಿರ್ಮಾಣಗೊಂಡಿರುವ ಉಪ್ಪಳ ಅಗ್ನಿ ಶಾಮಕ ಮತ್ತು ರಕ್ಷಣಾ ಕೇಂದ್ರದ ನೂತನ ಕಟ್ಟಡದ ಉದ್ಘಾಟನಾ ಸಮಾರಂಭ ಮಾ.5ರಂದು ಅಪರಾಹ್ನ 3.30ಕ್ಕೆ ಜರಗಲಿದೆ. ಶಾಸಕ ಎ.ಕೆ.ಎಂ ಅಶ್ರಫ್ ಅಧ್ಯಕ್ಷತೆ ವಹಿಸಲಿದ್ದು, ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಆನ್‌ಲೈನ್‌ನಲ್ಲಿ ಉದ್ಘಾಟಿಸುವರು. ಸಂಸದ ರಾಜ್‌ಮೋಹನ್ ಉಣ್ಣಿತ್ತಾನ್ ಮುಖ್ಯ ಅತಿಥಿಯಾಗಿ, ಅಗ್ನಿ ಶಾಮಕದಳ ಅಧಿಕಾರಿಗಳು, ಜನಪ್ರತಿನಿಧಿಗಳು ಮತ್ತು ಸಾಮಾಜಿಕ, ರಾಜಕೀಯ ಕ್ಷೇತ್ರದ ಪ್ರಮುಖ ವ್ಯಕ್ತಿಗಳು ಭಾಗವಹಿಸುವರು.

ಮುನಿಪುರ ಶ್ರೀ ಗೋಪಾಲಕೃಷ್ಣ ದೇವಸ್ಥಾನ ಬ್ರಹ್ಮಕಲಶೋತ್ಸವ ಆರಂಭ

ಕುಂಬ್ಡಾಜೆ: ಮುನಿಯೂರು ಮುನಿಪುರ ಶ್ರೀ ಗೋಪಾಲಕೃಷ್ಣ ದೇವಸ್ಥಾನದ ನವೀಕರಣ ಪುನರ್ ಪ್ರತಿಷ್ಠಾ ಅಷ್ಟಬಂಧ ಬ್ರಹ್ಮಕಲಶೋತ್ಸವ ಭಾನುವಾರ ಬೆಳಿಗ್ಗೆ ಮಹಾಗಣಪತಿ ಹೋಮದೊಂದಿಗೆ ಆರಂಭಗೊಂಡಿತು. ಉಗ್ರಾಣ ಮುಹೂರ್ತ, ಬೊಳ್ಳೂರು ಶ್ರೀ ಸದಾಶಿವ ದೇವಸ್ಥಾನದಿಂದ ಹಸಿರುವಾಣಿ ಹೊರೆಕಾಣಿಕೆ ಮೆರವಣಿಗೆ ಜರಗಿತು. ಇಂದು ಬೆಳಿಗ್ಗೆ ಗಣಪತಿ ಹೋಮ, ಶಾಂತಿಹೋಮ, ವಿವಿಧ ವೈದಿಕ ಕಾರ್ಯಕ್ರಮಗಳು, ಮಧ್ಯಾಹ್ನ ಮಹಾಪೂಜೆ ಜರಗಿತು. ಸಂಜೆ 7ರಿಂದ ಹೋಮ ಕಲಶಾಭಿಷೇಕ, ಅಂಕುರಪೂಜೆ ಸಹಿತ ವಿವಿಧ ವೈದಿಕ ಕಾರ್ಯಕ್ರಮ ಗಳು, ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಸಂಜೆ 6.30ರಿಂದ ನಂದನ್ ಶರ್ಮ ಪಂಜಿತ್ತಡ್ಕ, ಇಶಾನಿ …

ಮಯ್ಯಳ ವಿ.ಸಿ.ಬಿ. ಕಂ ಬ್ರಿಡ್ಜ್ ಕಾಮಗಾರಿ ಉದ್ಘಾಟನೆ

ದೇಲಂಪಾಡಿ: ದೇಲಂಪಾಡಿ ಪಂಚಾಯತ್‌ನ ಸಾಲತ್ತಡ್ಕ ಮಯ್ಯಳ ವಿ.ಸಿ.ಬಿ. ಕಂ ಬ್ರಿಡ್ಜ್‌ನ ಪುನರ್ ನಿರ್ಮಾಣಕ್ಕೆ ಕಾಸರಗೋಡು ಅಭಿವೃದ್ಧಿ ಪ್ಯಾಕೇಜ್‌ನಿಂದ ಮಂಜೂರು ಮಾಡಿದ ಎರಡೂವರೆ ಕೋಟಿ ರೂ.ಗಳ ಕಾಮಗಾರಿಯ ಉದ್ಘಾಟನೆಯನ್ನು ಶಾಸಕ ಸಿ.ಎಚ್. ಕುಂಞಂಬು ನೆರವೇರಿಸಿದರು. ಪಂಚಾಯತ್ ಅಧ್ಯಕ್ಷ ಎ. ಮುಸ್ತಫ ಹಾಜಿ ಅಧ್ಯಕ್ಷತೆ ವಹಿಸಿದರು. ಮೈನರ್ ಇರಿಗೇಶನ್ ಅಸಿಸ್ಟೆಂಟ್ ಎಕ್ಸಿಕ್ಯೂಟಿವ್ ಇಂಜಿನಿಯರ್ ಅನೂಪ್ ಕುಮಾರ್ ವರದಿ ಮಂಡಿಸಿದರು. ಪಂ. ಉಪಾಧ್ಯಕ್ಷೆ ಬಿ. ಶಾರದ, ಸ್ಥಾಯಿ ಸಮಿತಿ ಅಧ್ಯಕ್ಷರಾದ ರತನ್ ಕುಮಾರ್, ಸೈರಾ ಎ.ಬಿ. ಬಶೀರ್, ಕಾರಡ್ಕ ಬ್ಲೋಕ್ ಪಂ. …