ಡಾ. ಕೆ. ಗಣಪತಿ ಭಟ್‌ರಿಗೆ ಕ.ಸಾ.ಪ.ದಿಂದ ಗೌರವಾರ್ಪಣೆ

ಕಾಸರಗೋಡು: ಕನ್ನಡ ಸಾಹಿತ್ಯ ಪರಿಷತ್ ಕೇರಳ ಗಡಿನಾಡ ಘಟಕದ ಪರಿಷತ್‌ನ ನಡಿಗೆ ಹಿರಿಯ ಸಾಧಕರ ಕಡೆಗೆ ಎಂಬ ಕಾರ್ಯಕ್ರಮದಂಗವಾಗಿ ಪ್ರಸಿದ್ಧ ದಂತವೈದ್ಯ ಡಾ. ಕುಳಮರ್ವ ಗಣಪತಿ ಭಟ್‌ರನ್ನು ಅವರ ನಿವಾಸದಲ್ಲಿ ಅಭಿನಂದಿಸಲಾಯಿತು. ಕ.ಸಾ.ಪ. ಗಡಿನಾಡ ಘಟಕದ ಅಧ್ಯಕ್ಷ ಡಾ. ಜಯಪ್ರಕಾಶ್ ನಾರಾಯಣ ತೊಟ್ಟೆತ್ತೋಡಿ, ಡಾ. ಕೆ. ಗಣಪತಿ ಭಟ್- ದೇವಕಿ ಭಟ್ ದಂಪತಿಯನ್ನು ಗೌರವಿಸಿದರು. ಈ ವೇಳೆ ವೈ.ಕೆ. ಗೋವಿಂದ ಭಟ್ ಅಭಿನಂದನಾ ಭಾಷಣ ಮಾಡಿದರು. ‘ಬಿಚ್ಚಿಟ್ಟ ನನ್ನ ಬದುಕು’ ಕೃತಿಯ ಮೂಲಕ ಓರ್ವ ಉತ್ತಮ ಬರಹಗಾರ …

ಶಾಹಿನಾ ಸಲೀಂ ಕಾಸರಗೋಡು ನಗರಸಭಾ ಅಧ್ಯಕ್ಷೆ, ಕೆ.ಎಂ. ಹನೀಫ ಉಪಾಧ್ಯಕ್ಷ

ಕಾಸರಗೋಡು: ಕಾಸರಗೋಡು ನಗರಸಭೆಯ ನೂತನ ಅಧ್ಯಕ್ಷೆಯಾಗಿ ಮುಸ್ಲಿಂ ಲೀಗ್ ನ ಶಾಹಿನಾ ಸಲೀಂ ಆಯ್ಕೆಗೊಂಡಿದ್ದಾರೆ. ೪೦ರ ಹರೆಯದ ಶಾಹಿನಾ ಎಂಬಿಎ ಪದವೀಧರೆಯಾಗಿದ್ದು ೨೦೧೫ರಲ್ಲಿ ಚೆಂಗಳ ಪಂಚಾಯತ್ ಅಧ್ಯಕ್ಷೆಯಾಗಿ ಸೇವೆ ಸಲ್ಲಿಸಿದ ಅನುಭವವನ್ನು ಹೊಂದಿದ್ದಾರೆ. ಹತ್ತು ವರ್ಷಗಳ ಹಿಂದೆ ಇವರು ಚೆಂಗಳ ಪಂಚಾಯತ್‌ನ ಅಧ್ಯಕ್ಷೆಯಾಗಿ ಸೇವೆ ಸಲ್ಲಿಸುತ್ತಿದ್ದ ವೇಳೆ  ಇವರ ತಂದೆ ಕಲ್ಲೆಟ್ರಾ ಅಬ್ದುಲ್ ಖಾದರ್ ನೆರೆಯ ಚೆಮ್ನಾಡ್ ಪಂಚಾಯತ್ ಅಧ್ಯಕ್ಷರಾಗಿದ್ದರು. ಕಾಸರಗೋಡು ನಗರಸಭೆಯ ಅಧ್ಯಕ್ಷ ಸ್ಥಾನ ವಹಿಸುತ್ತಿರುವ ಎರಡನೇ ಮಹಿಳೆಯಾಗಿದ್ದಾರೆ.  2005-10 ಮತ್ತು 2015-20ರ ಅವಧಿಯಲ್ಲಿ ಬೀಫಾತಿಮ್ಮ …

ತಾಯಿಯೊಂದಿಗೆ ಮುನಿಸು: ಆತ್ಮಹತ್ಯೆಗೆ ಯತ್ನಿಸಿದ ಯುವತಿಯನ್ನು ರಕ್ಷಿಸಿದ ಪೊಲೀಸರು

ಕಾಸರಗೋಡು: ತಾಯಿಯೊಂದಿಗೆ ಮುನಿಸುಗೊಂಡು ರೈಲಿನಡಿಗೆ ಹಾರಿ ಆತ್ಮಹತ್ಯೆಗೆತ್ನಿಸಿದ 27ರ ಹರೆಯದ ಯುವತಿಯನ್ನು ಮೇಲ್ಪರಂಬ ಪೊಲೀಸರು ನಡೆಸಿದ ಸಕಾಲಿ  ಕಾರ್ಯಾಚರಣೆಯಲ್ಲಿ  ರಕ್ಷಿಸಿದ ಘಟನೆ ನಡೆದಿದೆ. ಕಳನಾಡು ಗ್ರಾಮ ನಿವಾಸಿ ಹಾಗೂ ಇಬ್ಬರು ಪುಟ್ಟ ಮಕ್ಕಳ ತಾಯಿಯಾಗಿರುವ ಯುವತಿ ನಿನ್ನೆ ತಾಯಿಯೊಂದಿಗೆ ಮುನಿಸುಗೊಂಡು ಆತ್ಮಹತ್ಯೆಗೈಯ್ಯಲು ಮನೆ ಬಿಟ್ಟಿದ್ದಳು.  ಆ ಕೂಡಲೇ ಆಕೆಯ ತಾಯಿ ಮೇಲ್ಪರಂಬ  ಪೊಲೀಸರಿಗೆ  ಮಾಹಿತಿ ನೀಡಿದ್ದರು. ಅದರಂತೆ ಇನ್‌ಸ್ಪೆಕ್ಟರ್ ಎಸ್.ಪಿ ರಾಘವನ್ ನೀಡಿದ ನಿರ್ದೇಶ ಪ್ರಕಾರ ಎಸ್‌ಐ ಪಿ.ಕೆ. ಅನೀಶ್‌ರನ್ನೊಳಗೊಂಡ ಪೊಲೀಸರ ತಂಡ   ಯುವತಿಯನ್ನು ಆಕೆಯ ಮೊಬೈಲ್ …

ಶಬರಿಮಲೆ ಮಂಡಲಪೂಜೆ ಸಂಪನ್ನ

ಶಬರಿಮಲೆ: ಮಂಡಲ ಪೂಜೆ ಮಹೋತ್ಸವ ಇಂದು ಬೆಳಿಗ್ಗೆ ನಡೆದಿದ್ದು, ಶಬರಿಮಲೆ ಹಾಗೂ ಪರಿಸರ ಭಕ್ತರಿಂದ ತುಂಬಿ ತುಳುಕುತ್ತಿದೆ. ತಂಗಅಂಗಿ ಸಮರ್ಪಿಸಿ ಧರ್ಮಶಾಸ್ತನಿಗೆ ಇಂದು ದೀಪಾರಾಧನೆವರೆಗೆ ಭಕ್ತರಿಗೆ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ. 11 ಗಂಟೆಗೆ ನಡೆ ಬಾಗಿಲು ಮುಚ್ಚಿದರೆ ಮತ್ತೆ ಮಕರಜ್ಯೋತಿ ಮಹೋತ್ಸವಕ್ಕೆ 30ರಂದು ತೆರೆಯಲಾಗುವುದು. ನಿನ್ನೆ ಚಿನ್ನಾಭರಣ ಶೋಭಾಯಾತ್ರೆ ಶಬರಿಮಲೆಗೆ ತಲುಪಿತ್ತು.

ರೈಲಿನಿಂದಿಳಿದು ಹಳಿ ದಾಟುತ್ತಿದ್ದ ವ್ಯಕ್ತಿ ರೈಲು ಢಿಕ್ಕಿ ಹೊಡೆದು ಮೃತ್ಯು

ಕಾಸರಗೋಡು: ರೈಲಿನಿಂದಿಳಿದು ಸುಲಭದಲ್ಲಿ ಫ್ಲಾಟ್ ಫಾಂಗೆ ಹತ್ತಲು ಹಳಿ ದಾಟುತ್ತಿದ್ದಾಗ ಬಂದ ಗೂಡ್ಸ್ ರೈಲು ಢಿಕ್ಕಿ ಹೊಡೆದು ಯುವಕ ಮೃತಪಟ್ಟ ಘಟನೆ ಸಂಭವಿಸಿದೆ. ನಿನ್ನೆ ಮಧ್ಯಾಹ್ನ ಕಾಸರಗೋಡು  ರೈಲ್ವೇ ನಿಲ್ದಾಣದಲ್ಲಿ ಈ ದುರ್ಘಟನೆ ಉಂಟಾಗಿದೆ. ಮೃತಪಟ್ಟ ವ್ಯಕ್ತಿ ಕರ್ನಾಟಕದ ಕೊಡಗು ನಿವಾಸಿ  ರಾಜೇಶ್ (35) ಎಂಬವರೆಂದು ಗುರುತಿಸಲಾಗಿದೆ.  ಮೃತ ವ್ಯಕ್ತಿ ಧರಿಸಿದ್ದ ಅಂಗಿಯ ಜೇಬಿನಲ್ಲಿ ಲಭಿ ಸಿದ ಆಧಾರ್ ಕಾರ್ಡ್‌ನ ವಿಳಾಸ ದಿಂದ ವ್ಯಕ್ತಿಯ ಗುರುತು ಹಚ್ಚಲಾ ಗಿದೆ.  ಆಧಾರ್ ಕಾರ್ಡ್‌ನಲ್ಲಿ ವ್ಯಕ್ತಿ ಯ ತಂದೆ ಕರ್ನಾಟಕದ …

ಬೈಕ್‌ಗೆ ಜೆಸಿಬಿ ಢಿಕ್ಕಿ ಹೊಡೆದು ಯುವಕ ಮೃತ್ಯು: ಕೋಳ್ಯೂರು ಪರಿಸರದಲ್ಲಿ ಶೋಕಸಾಗರ

ಉಪ್ಪಳ: ಬೈಕ್‌ಗೆ ಜೆಸಿಬಿ ಢಿಕ್ಕಿ ಹೊಡೆದು ಉಂಟಾದ ಅಪಘಾತದಲ್ಲಿ ಬೈಕ್ ಸವಾರನಾದ ಯುವಕ ಮೃತಪಟ್ಟ ದಾರುಣ ಘಟನೆ ಸಂಭವಿಸಿದೆ. ಕೋಳ್ಯೂರು ಇರ್ನಡ್ಕ ಎಂಬಲ್ಲಿನ ರಮೇಶ್ ಹೇರಳ-ಮಲ್ಲಿಕಾ ದಂಪತಿಯ ಏಕ ಪುತ್ರ ಓಂಕಾರ್ ಹೇರಳ (24) ಮೃತಪಟ್ಟ ದುರ್ದೈವಿ ಯಾಗಿದ್ದಾರೆ. ನಿನ್ನೆ ರಾತ್ರಿ 7.30ರ ವೇಳೆ ಮೊರತ್ತಣೆ ಯಲ್ಲಿ ಅಪಘಾತ ವುಂಟಾಗಿದೆ. ಓಂಕಾರ್ ಕಡಂಬಾರ್ ಭಾಗದಿಂದ ಮನೆಗೆ ಬೈಕ್‌ನಲ್ಲಿ ತೆರಳುತ್ತಿದ್ದಾಗ ಎದುರಿನಿಂದ ಬಂದ ಜೆಸಿಬಿ ಢಿಕ್ಕಿ ಹೊಡೆದಿದೆ. ಇದರಿಂದ ಗಂಭೀರ ಗಾಯಗೊಂಡ ಓಂಕಾರ್‌ರನ್ನು ಕೂಡಲೇ ಹೊಸಂಗಡಿಯ ಆಸ್ಪತ್ರೆಗೆ  ಕೊಂಡೊಯ್ದಿದ್ದು …

ಬಟ್ಟೆ ಒಗೆಯುತ್ತಿದ್ದ ಯುವತಿಯ ಮಾನಭಂಗಕ್ಕೆ ಯತ್ನಿಸಿದ ಪ್ರಕರಣ: ಆರೋಪಿ ಸೆರೆ

ಕುಂಬಳೆ: ಮನೆಯ ಹಿಂದೆ ಬಟ್ಟೆ ಒಗೆಯುತ್ತಿದ್ದ ಯುವತಿಯ ಮಾನಭಂಗಕ್ಕೆತ್ನಿಸಿದ ದೂರಿನಂತೆ  ಕುಂಬಳೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಆರೋಪಿಯನ್ನು ಬಂಧಿಸಿದ್ದಾರೆ. ಕೊಯಿಪ್ಪಾಡಿ ಪೆರುವಾಡ್ ನಿವಾಸಿ ಜಿತೇಶ್(32) ಬಂಧಿತ ಆರೋಪಿ. ಕುಂಬಳೆ ಪೊಲೀಸ್ ಠಾಣೆ ಎಸ್‌ಐ ಶೃಜೇಶ್ ನೇತೃತ್ವದ ಪೊಲೀಸರು ಈತನನ್ನು ಬಂಧಿಸಿದ್ದಾರೆ. ಆರೋಪಿಯನ್ನು ನಂತರ ನ್ಯಾಯಾ ಲಯದ ನಿರ್ದೇಶ ಪ್ರಕಾರ ನ್ಯಾಯಾಂಗ ಬಂಧನದಲ್ಲಿರಿಸಲಾಗಿದೆ. ೩೪ರ ಹರೆಯದ ಯುವತಿ ಈ ನಿನ್ನೆ  ಬೆಳಿಗ್ಗೆ ಮನೆಯ ಹಿಂದುಗಡೆ ಬಟ್ಟೆ ಒಗೆಯುತ್ತಿದ್ದ ವೇಳೆ ಹಿಂದಿ ನಿಂದ ಬಂದು ಆಕೆಯನ್ನು ಅಪ್ಪಿ ಹಿಡಿದಿದ್ದು ಆಕೆ …

ಅಧ್ಯಾಪಕ ನಿಧನ

ಮಂಜೇಶ್ವರ: ಕಳೆದ 17 ವರ್ಷಗಳಿಂದ ಶಿಕ್ಷಕರಾಗಿ ಸೇವೆ ಸಲ್ಲಿಸಿ ಜನಾನುರಾಗಿಯಾಗಿದ್ದ ಆನೆಕಲ್ಲು ನಿವಾಸಿ ಗೋಪಾಲ ನಾಯ್ಕ (47) ಹೃದಯಾಘಾತದಿಂದ ನಿಧನ ಹೊಂದಿದರು. ನಿನ್ನೆ ಮಧ್ಯಾಹ್ನ ಕುಸಿದು ಬಿದ್ದ ಇವರನ್ನು ಆಸ್ಪತ್ರೆಗೆ ಸಾಗಿಸಿದರೂ ಜೀವ ಉಳಿಸಲು ಸಾಧ್ಯವಾಗಲಿಲ್ಲ. ವರ್ಕಾಡಿ ಧರ್ಮನಗರ ಮಣವಾಟಿ ಬೀವಿ ಆಂಗ್ಲಮಾಧ್ಯಮ ಶಾಲೆಯ ಅಧ್ಯಾಪಕರಾಗಿದ್ದರು. ಇವರ ತಂದೆ ಪೊಡಿಯ ನಾಯ್ಕ ಈ ಹಿಂದೆ ನಿಧನ ಹೊಂದಿದ್ದಾರೆ. ಮೃತರು ತಾಯಿ ಸುಂದರಿ, ಪತ್ನಿ ಮಮತ, ಮಕ್ಕಳಾದ ರಕ್ಷಿತ್, ಯಕ್ಷಿತ್, ಸಹೋದರರಾದ ನಾರಾಯಣ ನಾಯ್ಕ್, ಕೃಷ್ಣ (ಅಧ್ಯಾಪಕ), ಸಹೋದರಿಯರಾದ …

ಬದಿಯಡ್ಕದಲ್ಲಿ ಬಿಜೆಪಿ ಆಡಳಿತ

ಕಾಸರಗೋಡು: ಗ್ರಾಮ ಪಂಚಾಯತ್‌ಗಳಲ್ಲಿ ನೂತನ ಅಧ್ಯಕ್ಷರ  ಆಯ್ಕೆ ಪ್ರಕ್ರಿಯೆ ಇಂದು ಬೆಳಿಗ್ಗೆ ಆರಂಭಗೊಂಡಿದೆ. ಉಪಾಧ್ಯಕ್ಷರ ಆಯ್ಕೆ ಅಪರಾಹ್ನ ನಡೆಯಲಿರುವುದು. ಬದಿಯಡ್ಕ ಗ್ರಾಮ ಪಂಚಾಯತ್‌ನಲ್ಲಿ ಆಡಳಿತ ಬಿಜೆಪಿಗೆ ಲಭಿಸಿದೆ. ಇಂದು ಬೆಳಿಗ್ಗೆ ನಡೆದ ಚೀಟಿ ಎತ್ತುವಿಕೆಯಲ್ಲಿ ಅದೃಷ್ಟ ಬಿಜೆಪಿಯ ಪಾಲಾಗಿದೆ. ಇದರಿಂದ ಬಿಜೆಪಿಯ ಡಿ. ಶಂಕರ ಅವರು ಅಧ್ಯಕ್ಷರಾಗಿ ಆಯ್ಕೆಗೊಂಡಿದ್ದಾರೆ. ಪ್ರಸ್ತುತ ಪಂಚಾಯತ್‌ನಲ್ಲಿ ಒಟ್ಟು ೨೧ ವಾರ್ಡ್‌ಗಳಿದ್ದು, ಈ ಪೈಕಿ ಯುಡಿಎಫ್ ಹಾಗೂ ಬಿಜೆಪಿ ತಲಾ 10 ವಾರ್ಡ್‌ಗಳಲ್ಲಿ ಗೆಲುವು ಸಾಧಿಸಿ ಸಮಾನ ಬಲ ಹೊಂದಿದೆ. ಒಂದು ವಾರ್ಡ್‌ನಲ್ಲಿ …

20ರ ಹರೆಯದ ಯುವಕ ನೇಣು: ಮನನೊಂದ ಅಜ್ಜಿ, ಸಹೋದರಿ ಆತ್ಮಹತ್ಯೆ

ಕಣ್ಣೂರು: ಕುಟುಂಬವೊಂದರ ಮೂರು ಮಂದಿ ಆತ್ಮಹತ್ಯೆಗೈದ ಸ್ಥಿತಿ ಯಲ್ಲಿ ಪತ್ತೆಹಚ್ಚಲಾಗಿದೆ. ಕೂತು ಪರಂಬ್ ನೀರ್ವೇಲಿ ಎಂಬಲ್ಲಿನ ನಿಮಿಷ ನಿವಾಸದ ಇ. ಕಿಶನ್ (20), ವಿ.ಕೆ. ರೆಜಿ, ಸಹೋದರಿ ರೋಜ ಎಂಬಿವರು ಆತ್ಮಹತ್ಯೆಗೈದವರು. ಮೂರಿಯಾಡ್ ಚೆಮ್ಮಾಲ್ ರಸ್ತೆಯ ಅಜ್ಜಿಯ ಮನೆಯಲ್ಲಿ ಈ ಮೂವರು ಆತ್ಮಹತ್ಯೆಗೈದ ಸ್ಥಿತಿಯಲ್ಲಿ ಪತ್ತೆಹಚ್ಚ ಲಾಗಿದೆ. ಕಿಶನ್‌ನನ್ನು ನಿನ್ನೆ ಸಂಜೆ ಅಜ್ಜಿಯ ಮನೆಯಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಹಚ್ಚಲಾಗಿತ್ತು. ಕೂಡಲೇ ಆಸ್ಪತ್ರೆಗೆ ತಲುಪಿಸಲಾಯಿ ತಾದರೂ ಜೀವ ಉಳಿಸಲು ಸಾಧ್ಯವಾಗಲಿಲ್ಲ. ಈ ಸಂದರ್ಭದಲ್ಲಿ ಅಜ್ಜಿ ಹಾಗೂ ಸಹೋದರಿ …