ಸಂಬಂಧಿಕರ ಮನೆಗೆ ತೆರಳಿದ ವ್ಯಕ್ತಿ ನಾಪತ್ತೆ

ಉಪ್ಪಳ: ಬಾಯಾರು ಬಳಿಯ ಸಂಬಂಧಿಕರ ಮನೆಗೆ ತೆರಳಿದ ಮುಜುಂಗಾವು ನಿವಾಸಿ ನಾಪತ್ತೆಯಾದ ಬಗ್ಗೆ ದೂರಲಾಗಿದೆ. ಕೊಯಿಪ್ಪಾಡಿ ಗ್ರಾಮದ ಮುಜುಂಗಾವು  ಕಾವಿ ಕನ್ನಿಮೂಲ ನಿವಾಸಿ ನಾರಾಯಣ ಎಂಬವರ ಪುತ್ರ ಈಶ್ವರ ಎಂ (42) ನಾಪತ್ತೆಯಾಗಿ ದ್ದಾರೆ. ಈ ಬಗ್ಗೆ ಇವರ ಪತ್ನಿ ಮೋಹಿನಿ ನೀಡಿದ ದೂರಿನಂತೆ ಮಂಜೇಶ್ವರ ಪೊಲೀಸರು ಕೇಸು ದಾಖಲಿಸಿಕೊಂಡಿದ್ದಾರೆ. ಬಾಯಾರು ಬಳಿಯ ಪೆಲ್ತಡ್ಕದಲ್ಲಿರುವ ಸಂಬಂಧಿಕರ ಮನೆಯಲ್ಲಿ ಕಾರ್ಯಕ್ರಮ ನಿಮಿತ್ತ ಈಶ್ವರ ಈ ತಿಂಗಳ 1ರಂದು ಅಲ್ಲಿಗೆ ತೆರಳಿದ್ದರು. ೫ರಂದು ಸಂಜೆ ಅಲ್ಲಿಂದ ನಾಪತ್ತೆಯಾಗಿದ್ದಾರೆ. ವಿವಿಧೆಡೆ ಹುಡುಕಿದರೂ …

ಚುನಾವಣೆ: 651 ಕೋಟಿ ರೂ. ಮೌಲ್ಯದ ಕಾಳಧನ, ಮದ್ಯ, ಮಾದಕವಸ್ತು, ಚಿನ್ನ ವಶ

ಕಾಸರಗೋಡು: ವಿಧಾನಸಭಾ ಚುನಾವಣೆ ನಡೆಯುವ  ಐದು ರಾಜ್ಯಗಳಲ್ಲಿ  ಅಧಿಕಾರಿಗಳು ನಡೆಸಿದ ಕಾರ್ಯಾಚರಣೆಯಲ್ಲಿ  651.51  ಕೋಟಿ ರೂಪಾಯಿ ಮೌಲ್ಯದ  ಸೊತ್ತುಗಳನ್ನು ವಶಪಡಿಸಿಕೊಳ್ಳ ಲಾಗಿದೆ. ವಿಧಾನಸಭಾ ಚುನಾವಣೆ ನಡೆಯುವ ಕೇರಳ, ತಮಿಳುನಾಡು, ಅಸ್ಸಾಂ, ಪುದುಚ್ಚೇರಿ, ಪಶ್ಚಿಮ ಬಂಗಾಲ ಹಾಗೂ ಆರು ರಾಜ್ಯಗಳ ಉಪಚುನಾವಣೆ ನಡೆಯುವ ಮಂಡಲಗಳಲ್ಲಿ ಕಾನೂನು ವಿರುದ್ಧವಾಗಿ ಸಾಗಿಸುತ್ತಿದ್ದ ಹಣ, ಮದ್ಯ, ಮಾದಕವಸ್ತು, ಚಿನ್ನ ಸಹಿತ ಬೆಲೆಬಾಳುವ ಲೋಹಗಳು, ಇತರ ಸಾಮಗ್ರಿಗಳನ್ನು ವಶಪಡಿಸಲಾಗಿದೆ.  ಕೇರಳದಿಂದ 57 ಕೋಟಿ ರೂಪಾ ಯಿಗಳ ಸೊತ್ತುಗಳನ್ನು  ಡಿಆರ್‌ಐ ವಶಪಡಿಸಿದೆ. ಇದರಲ್ಲಿ 41 ಕೋಟಿ …

ಸಾರ್ವಜನಿಕ ವೇದಿಕೆಯಲ್ಲಿ ನಟಿ ಮಂಜು ವಾರ್ಯರ್‌ಗೆ ಚುಂಬಿಸಿದ ಅಭಿಮಾನಿ

ಪಾಲಕ್ಕಾಡ್: ನಟಿ ಮಂಜುವಾರ್ಯರ್‌ಗೆ ಅಭಿಮಾನಿ ಚುಂಬಿಸಿದ ಘಟನೆಯ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ಪಾಲಕ್ಕಾಡ್‌ನ ಜ್ಯುವೆಲ್ಲರಿ ಶೋರೂಂ ಒಂದರ ಉದ್ಘಾಟನಾ ಕಾರ್ಯಕ್ರಮ ಮಧ್ಯೆ ಘಟನೆ ನಡೆದಿದೆ. ಕಾರ್ಯಕ್ರಮದಲ್ಲಿ ಅಭಿಮಾನಿಗಳೊಂದಿಗೆ ಸಂವಾದ ನಡೆಸುತ್ತಿದ್ದ ವೇಳೆ ಓರ್ವೆ ವೇದಿಕೆಗೆ ತಲುಪಿ ನಟಿಯನ್ನು ಅಪ್ಪಿ ಚುಂಬಿಸಿದ್ದಾಳೆ. ಈ ವೇಳೆ ನಿರೂಪಕಿ ಮೀರಾ ಅನಿಲ್ ವೇದಿಕೆಯಲ್ಲಿದ್ದರು. ಘಟನೆ ನಡೆದ ಕೂಡಲೇ ನಿರೂಪಕಿ ಹಾಗೂ ಭದ್ರತಾ ನೌಕರರು ಮಹಿಳೆಯನ್ನು ವೇದಿಕೆಯಿಂದ ದೂರ ಕರೆದೊಯ್ದರು. ಹೀಗಿದ್ದರೂ ಅನಿರೀಕ್ಷಿತವಾಗಿ ನಡೆದ ಈ ಘಟನೆಯಿಂದ ಮಂಜು ವಾರ್ಯರ್ …

ಕನ್ನೆಪ್ಪಾಡಿ ಆಶ್ರಯ ಆಶ್ರಮಕ್ಕೆ ಧನ ಸಹಾಯ ಹಸ್ತಾಂತರ

ಬದಿಯಡ್ಕ: ಪುತ್ತಿಗೆ ಪಂ ಚಾಯತ್ ವಿರಾಟ್ ಹಿಂದು ಸಂಗಮ ಕಾರ್ಯಕ್ರಮದಲ್ಲಿ ಸಂಗ್ರಹವಾದ ಮೊತ್ತದಲ್ಲಿ ಉಳಿತಾಯವಾಗಿರುವ 9250 ರೂ.ವನ್ನು ಕನ್ನೆಪ್ಪಾಡಿ ಆಶ್ರಯ ಆಶ್ರಮಕ್ಕೆ ಹಸ್ತಾಂತರಿಸಲಾಯಿತು. ಈ ಸಂದರ್ಭದಲ್ಲಿ ವಿರಾಟ್ ಹಿಂದು ಸಂಗಮ ಕಾರ್ಯಕ್ರಮದ ಅಧ್ಯಕ್ಷ ದಾಮೋದರ ಡಿ., ರಕ್ಷಾ ಅಧಿಕಾರಿಗಳಾದ ಅಶೋಕ ಮಾಸ್ತರ್, ವಿಘ್ನೇಶ್ವರ ಮಾಸ್ತರ್, ಆಶ್ರಮದ ಟ್ರಸ್ಟಿಗಳಾದ ರಮೇಶ ಕಳೇರಿ, ಬಾಲಕೃಷ್ಣ ಏಣಿಯರ್ಪ, ಇತರರಾದ ಗಂಗಾಧರ ಪಳ್ಳತ್ತಡ್ಕ, ಪ್ರೋ. ಶ್ರೀನಾಥ್ ಉಪಸ್ಥಿತರಿದ್ದರು.

ಕಾಸರಗೋಡು, ಮಂಜೇಶ್ವರ ಮಂಡಲದ ಮತಗಟ್ಟೆಗಳಿಗೆ ಜಿಲ್ಲಾಧಿಕಾರಿ ಭೇಟಿ: ಸಿದ್ಧತೆ ಪೂರ್ಣ

ಮಂಜೇಶ್ವರ: ಕಾಸರಗೋಡು, ಮಂಜೇಶ್ವರ ವಿಧಾನಸಭಾ ಮಂಡಲಗಳ ಬೂತ್‌ಗಳ ಸಿದ್ಧತೆಗಳನ್ನು ಜಿಲ್ಲಾ ಚುನಾವಣಾ ಅಧಿಕಾರಿಯಾಗಿರುವ ಜಿಲ್ಲಾಧಿಕಾರಿ ಅರ್ಜುನ್ ಪಾಂಡ್ಯನ್ ಭೇಟಿ ನೀಡಿ ಮೌಲೀಕರಣ ನಡೆಸಿದರು. ಕಾಸರಗೋಡು ಸರಕಾರಿ ಕಾಲೇಜಿನ ಇಲೆಕ್ಟ್ರೋನಿಕ್ ಮತಯಂತ್ರಗಳು, ವಿ.ವಿ.ಪ್ಯಾಟ್‌ಗಳನ್ನು ಇರಿಸಿರುವ ಭದ್ರತಾ ಕೊಠಡಿಯನ್ನು ಜಿಲ್ಲಾಧಿಕಾರಿ ಸಂದರ್ಶಿಸಿದರು. ರಾಜ್ಯದ ಒಂದನೇ ನಂಬ್ರ ಬೂತ್ ಆಗಿರುವ ಕುಂಜತ್ತೂರು ಸರಕಾರಿ ವೊಕೇಶನಲ್ ಹೈಯರ್ ಸೆಕೆಂಡರಿ ಶಾಲೆ, ಬೂತ್‌ಗೆ ಜಿಲ್ಲಾಧಿಕಾರಿ ಭೇಟಿ ನೀಡಿದರು. ಮಂಜೇಶ್ವರ ಮಂಡಲದ ಸೂಕ್ಷ್ಮ ಬೂತ್ ಆದ ಕಣ್ವತೀರ್ಥ ಸರಕಾರಿ ಎಲ್‌ಪಿ ಶಾಲೆಯ ಮತಗಟ್ಟೆಯನ್ನು ಕೂಡಾ ಜಿಲ್ಲಾಧಿಕಾರಿ …

ಎನ್‌ಡಿಎ ಜಯಕ್ಕೆ ಅಭಿಭಾಷಕ ಪರಿಷತ್ ರಂಗಕ್ಕೆ

ಕಾಸರಗೋಡು: ಅಭಿಭಾಷಕ ಪರಿಷತ್ ಜಿಲ್ಲಾ ಸಮಿತಿ ಆಶ್ರಯ ದಲ್ಲಿ ಎನ್‌ಡಿಎ ಅಭ್ಯರ್ಥಿಗಳ ಜಯಕ್ಕಾಗಿ ಅಭಿಭಾಷಕ ಒಕ್ಕೂಟ ನಡೆಸಲಾಯಿತು. ಬೆಳ್ತಂಗಡಿ ಶಾಸಕ ಹರೀಶ್ ಪೂಂಜ ಉದ್ಘಾಟಿಸಿದರು. ಅಭಿಭಾಷಕ ಪರಿಷತ್ ಜಿಲ್ಲಾ ಅಧ್ಯಕ್ಷ ನ್ಯಾಯವಾದಿ ಎ.ಸಿ. ಅಶೋಕ್ ಕುಮಾರ್ ಅಧ್ಯಕ್ಷತೆ ವಹಿಸಿದರು. ನ್ಯಾಯವಾದಿ ಬಿ. ರವೀಂದ್ರನ್, ನ್ಯಾಯವಾದಿ ಕರುಣಾಕರನ್ ನಂಬ್ಯಾರ್, ನ್ಯಾಯವಾದಿ ಪಿ. ಮರಳೀಧರನ್ ಮಾತನಾಡಿದರು. ನ್ಯಾಯವಾದಿ ಅನಿಲ್ ಕೆ.ಜಿ. ಸ್ವಾಗತಿಸಿ, ನ್ಯಾಯವಾದಿ ಎ. ಮಣಿಕಂಠನ್ ವಂದಿಸಿದರು.

ಕಾಸರಗೋಡನ್ನು ಮಾದರಿ ನಗರವಾಗಿ ಅಭಿವೃದ್ಧಿ- ಅಶ್ವಿನಿ ಎಂ.ಎಲ್.

ಬಾಲಡ್ಕ: ಕೇಂದ್ರ ಸರ್ಕಾರದ ನಗರಾಭಿವೃದ್ಧಿ ಸಚಿವಾಲಯದ ಸಹಯೋಗದೊಂದಿಗೆ ಸಾರ್ವಜನಿಕ ಸಾರಿಗೆ, ಪ್ರವಾಸೋದ್ಯಮ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಮೂಲ ಸೌಕರ್ಯಗಳನ್ನು ಅಭಿವೃದ್ಧಿಪಡಿಸುವ ಮೂಲಕ ಕಾಸರಗೋಡನ್ನು ದೇಶದಲ್ಲೇ ಮಾದರಿ ನಗರವಾಗಿ ರೂಪಿಸ ಲಾಗುವುದು ಎಂದು ಕಾಸರಗೋಡು ವಿಧಾನಸಭಾ ಕ್ಷೇತ್ರದ ಎನ್‌ಡಿಎ ಅಭ್ಯರ್ಥಿ ಅಶ್ವಿನಿ ಎಂ.ಎಲ್. ಹೇಳಿದರು.ರಾತ್ರಿ ಒಂಬತ್ತೂವರೆ ನಂತರ ಜನಸಂದಣಿ ಇಲ್ಲದ ರಾಜ್ಯದ ಏಕೈಕ ಜಿಲ್ಲಾ ಕೇಂದ್ರವೆAದರೆ ಅದು ಕಾಸರಗೋಡು. ಜಿಲ್ಲೆಯ ಇತರ ಮಧ್ಯಮ ಪಟ್ಟಣಗಳಿಗೆ ಹಾಗೂ ಮಂಗಳೂರು, ಕಾಞಂಗಾಡ್‌ಗಳಿಗೆ ರಾತ್ರಿ ಸಮಯದಲ್ಲಿ ಬಸ್ ಸೌಕರ್ಯವಿಲ್ಲ. ಕೆಎಸ್‌ಆರ್‌ಟಿಸಿ ಕಾಸರಗೋಡು ಜಿಲ್ಲೆಯನ್ನು …

ಬಿಜೆಪಿಯದ್ದು ಕಪಟ ಹಿಂದುತ್ವ -ಶಾಸಕ ಪ್ರದೀಪ್ ಈಶ್ವರ್

ಪೈವಳಿಕೆ: ಸಮಾಜದಲ್ಲಿ ಸ್ಪರ್ಧೆ ಸೃಷ್ಟಿಸಿ ಧರ್ಮಗಳ ಮಧ್ಯೆ ಹೊಡೆದಾಡಿಸಿ ಬಿಜೆಪಿ ರಾಜಕೀಯ ಲಾಭ ಉಂಟು ಮಾಡುವ ಪಕ್ಷವಾಗಿದೆಯೆಂದು ಚಿಕ್ಕಬಳ್ಳಾಪುರ ಶಾಸಕ ಪ್ರದೀಪ್ ಈಶ್ವರ್ ನುಡಿದರು. ಕೊರೋನ ಸಮಯದಲ್ಲಿ ಗಡಿಯಲ್ಲಿ ಕೇರಳದವರಿಗೆ ದ್ರೋಹ ಬಗೆದವರಾಗಿದ್ದಾರೆ ಬಿಜೆಪಿಯವರೆಂದು ಅವರು ಆಪಾದಿಸಿದರು. ಆರಿಕ್ಕಾಡಿ ಟೋಲ್ ಸಮಯದಲ್ಲಿ ಬಿಜೆಪಿ ಅಭ್ಯರ್ಥಿಯಾಗಿರುವ ಕೆ. ಸುರೇಂದ್ರನ್ ಎಲ್ಲಿದ್ದರೆಂದು ಅವರು ಪ್ರಶ್ನಿಸಿದರು. ಐಕ್ಯರಂಗದ ಅಭ್ಯರ್ಥಿ ಎ.ಕೆ.ಎಂ. ಅಶ್ರಫ್‌ರ ಚುನಾವಣಾ ಪ್ರಚಾರ ಸಭೆ ಪೈವಳಿಕೆಯಲ್ಲಿ ಉದ್ಘಾಟಿಸಿ ಅವರು ಮಾತನಾಡಿದರು. ವಸಂತ ಮಾಸ್ತರ್ ಅಧ್ಯಕ್ಷತೆ ವಹಿಸಿದರು. ಝೆಡ್ ಎ ಕಯ್ಯಾರ್ …

ಕಾರಿನಲ್ಲಿ ಸಾಗಿಸುತ್ತಿದ್ದ 1.25 ಲೀಟರ್ ಗೋವಾ ಮದ್ಯ ಪತ್ತೆ: ಇಬ್ಬರ ಸೆರೆ

ಕಾಸರಗೋಡು: ಚುನಾವಣೆಯ ಹಿನ್ನೆಲೆಯಲ್ಲಿ ಕಾಸರಗೋಡು ಎಕ್ಸೈಸ್ ಸ್ಪೆಷಲ್ ಸ್ಕ್ವಾಡ್  ನಡೆಸಿದ ಸ್ಪೆಷಲ್ ಡ್ರೈವ್ ಕಾರ್ಯಾಚರಣೆಯಲ್ಲಿ  ಕರ್ನಾಟಕ ರಾಜ್ಯ ನೋಂದಾವಣೆ ಹೊಂದಿರುವ ಕಾರಿನಲ್ಲಿ ಸಾಗಿಸುತ್ತಿದ್ದ 1.25ಲೀಟರ್ ಗೋವಾ ನಿರ್ಮಿತ ಮದ್ಯ  ಪತ್ತೆಹಚ್ಚಿ ವಶಪಡಿಸಿಕೊಂಡಿದ್ದಾರೆ.ಇದಕ್ಕೆ  ಸಂಬಂಧಿಸಿ ದಕ್ಷಿಣಕನ್ನಡ ಜಿಲ್ಲೆ ನಿವಾಸಿ ಲತೀಶ್ ಪೂಜಾರಿ ಮತ್ತು ಬೆದ್ರಡ್ಕ ನಿವಾಸಿ  ಸುರೇಶ್ ಬಿ.ಪಿ ಎಂಬವರನ್ನು ಸೆರೆಹಿಡಿದು ಅವರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಹೊಸದುರ್ಗ ಸಮುದ ಕಿನಾರೆ ಬಳಿ ಅಬಕಾರಿ ಸ್ಪೆಶಲ್ ಸ್ಕ್ವಾಡ್‌ನ ಪ್ರಿವೆಂಟೀವ್ ಆಫೀಸರ್ ಕೆ.ವಿ. ರಂಜಿತ್ ನೇತೃತ್ವದಲ್ಲಿ ಸಿವಿಲ್ ಎಕ್ಸೈಸ್ ಆಫೀಸರ್ …

ಚುನಾವಣಾ ಪ್ರಚಾರದ ಪರಾಕಾಷ್ಠೆಗೆ: ಇಂದು ಸಂಜೆ 6 ಗಂಟೆಗೆ ಬ್ರೇಕ್

ಕಾಸರಗೋಡು: ವಿಧಾನಸಭಾ ಚುನಾವಣೆಯ ಬಹಿರಂಗ ಪ್ರಚಾರದ ಪರಾಕಾಷ್ಠೆಗೆ ಇಂದು ಸಂಜೆ ಬ್ರೇಕ್ ಬೀಳಲಿದೆ.ಇದರಂತೆ ಅಭ್ಯರ್ಥಿಗಳು ಮತಯಾಚನೆಗಾಗಿ ಆರಂಭಿಸಿರುವ ಅಭಿಯಾನ  ಇಂದು ಸಂಜೆ ಆರು ಗಂಟೆಗೆ ಕೊನೆಗೊಳ್ಳಲಿದೆ.  ಈ ಅವಧಿಯೊಳಗಾಗಿ ತಮ್ಮ ಗರಿಷ್ಠ ಮತಗಳನ್ನು ಸೆಳೆದುಕೊಳ್ಳುವ ಅಂತಿಮ ಪ್ರಯತ್ನದಲ್ಲಿ ಇಂದು  ಬೆಳಿಗ್ಗಿನಿಂದಲೇ ಅಭ್ಯರ್ಥಿಗಳು, ಒಕ್ಕೂಟಗಳ ನೇತಾರರು ತೊಡಗಿದ್ದಾರೆ. ಕಾಸರಗೋಡು ವಿಧಾನಸಭಾ ಕ್ಷೇತ್ರದ ಎನ್‌ಡಿಎ ಅಭ್ಯರ್ಥಿ ಅಶ್ವಿನಿ ಎಂ.ಎಲ್.  ನಿನ್ನೆ ಬದಿಯಡ್ಕ ಪಂಚಾಯತ್‌ನ ಮಾನ್ಯದಿಂದ ಪ್ರಚಾರ ಆರಂಭಿಸಿದ ಬಳಿಕ ವಿವಿಧೆಡೆಗಳಿಗೆ ಪ್ರಚಾರ ಪರ್ಯಟನೆ ನಡೆಸಿದರು. ಹಲವರು ನೇತಾರರು, ಕಾರ್ಯಕರ್ತರು ಭಾಗವಹಿಸಿದರು.ಯುಡಿಎಫ್‌ಅಭ್ಯರ್ಥಿ …