ಸುಬ್ರಹ್ಮಣ್ಯ ಭಟ್ ನಿಧನ

ಪೆರ್ಲ: ಕಜಂಪಾಡಿ ನರ್ಸಿಂಗ್ ಹೋಮ್‌ನ ಮಾಲಕ, ಡಾ| ಶ್ರೀಪತಿ ಭಟ್‌ರ ತಂದೆ ಕಜಂಪಾಡಿ ತರವಾಡು ಮನೆಯ ಸುಬ್ರಹ್ಮಣ್ಯ ಭಟ್ (99)ನಿನ್ನೆ ಸ್ವ-ಗೃಹದಲ್ಲಿ ನಿಧನ ಹೊಂದಿದರು. ಇವರ ಪತ್ನಿ ಈ ಹಿಂದೆ ನಿಧನರಾಗಿದ್ದಾರೆ. ಮೃತರು ಇನ್ನೋರ್ವ ಪುತ್ರ ಮುಂಬೈ ಟಾಟಾ ಗ್ರೂಪ್ ನಿವೃತ್ತ ಉದ್ಯೋಗಿ ಬಾಲರಾಜ್ ಸಹಿತ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.

ಮಂಗಲ್ಪಾಡಿ: ತಾಲೂಕು ಆಸ್ಪತ್ರೆಯಲ್ಲಿ ವೈದ್ಯರ ಕೊರತೆ; ಡಿಫಿಯಿಂದ ಪ್ರತಿಭಟನೆ

ಮಂಜೇಶ್ವರ: ಮಂಜೇಶ್ವರ ತಾಲೂಕು ಆಸ್ಪತ್ರೆಯಲ್ಲಿ ವೈದ್ಯರ ಕೊರತೆಯಿಂದ ಒ.ಪಿ ವ್ಯವಸ್ಥೆ ಅಸ್ತವ್ಯಸ್ತಗೊಂಡಿದ್ದು, ಇದನ್ನು ಪ್ರತಿಭಟಿಸಿ ಡಿಫಿ ಮಂಜೇಶ್ವರ ಬ್ಲೋಕ್ ಸಮಿತಿ ನೇತೃತ್ವದಲ್ಲಿ ತಾಲೂಕು ಕಚೇರಿ ಮಾರ್ಚ್ ನಡೆಸಲಾಯಿತು. ಡಿಫಿ ಜಿಲ್ಲಾಧ್ಯಕ್ಷ ಎಂ.ವಿ. ರತೀಶ್ ಉದ್ಘಾಟಿಸಿದರು. ಬ್ಲೋಕ್ ಉಪಾಧ್ಯಕ್ಷ ಮುಹಮ್ಮದ್ ನೌಶಾದ್ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಜೊತೆ ಕಾರ್ಯದರ್ಶಿ ಸಾದಿಕ್ ಚೆರುಗೋಳಿ, ಬ್ಲೋಕ್ ಕೋಶಾಧಿಕಾರಿ ಮುಹಮ್ಮದ್ ಶಬೀರ್, ಉದಯ ಸಿ.ಎಚ್, ದೀಕ್ಷಿತ್ ಉಪ್ಪಳ, ವಿನಯ ಕುಮಾರ್ ಮಾತನಾಡಿದರು.ಕುಂಬಳೆ ಜಿಲ್ಲಾ ಸಹಕಾರಿ ಆಸ್ಪತ್ರೆಯಲ್ಲಿ  ಸೋಲಾರ್ ಇ.ವಿ. ಚಾರ್ಜಿಂಗ್ ಸ್ಟೇಶನ್ ಉದ್ಘಾಟನೆಕುಂಬಳೆ: …

ಕಾಸರಗೋಡು ಬಿಲ್ಲವ ಸೇವಾಸಂಘದಿಂದ ಅಭಿನಂದನೆ

ಕಾಸರಗೋಡು: ಕಾಸರಗೋಡು ಜಿಲ್ಲಾ ಬಿಲ್ಲವ ಸೇವಾ ಸಂಘ ಆಶ್ರಯದಲ್ಲಿ ಅಭಿನಂದನೆ ಹಮ್ಮಿಕೊಳ್ಳಲಾಯಿತು. ಉಪ್ಪಳ ಅಂಬಾರು ಮಲರಾಯ ದೈವಸ್ಥಾನದ ಟ್ರಸ್ಟಿ ವೀರಪ್ಪ ಅಂಬಾರು ಉದ್ಘಾಟಿಸಿದರು. ಬಿಲ್ಲವ ಸೇವಾ ಸಂಘ ಜಿಲ್ಲಾ ಅಧ್ಯಕ್ಷ ಕೆ. ಕಮಲಾಕ್ಷ ಸುವರ್ಣ ಅಧ್ಯಕ್ಷತೆ ವಹಿಸಿದರು. ಕಳೆದ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಉನ್ನತ ಅಂಕ ಗಳಿಸಿದ ವಿದ್ಯಾರ್ಥಿಗಳನ್ನು, ಸಮಾಜದ ಗಣ್ಯ ವ್ಯಕ್ತಿಗಳನ್ನು ಕಾರ್ಯಕ್ರಮದಲ್ಲಿ ಗೌರವಿಸಲಾಯಿತು. ಕಾಸರಗೋಡು ನಗರಸಭಾ ಕೌನ್ಸಿಲರ್ ಕೆ.ಆರ್, ಹರೀಶ್, ಅಶೋಕ್ ಬಾಡೂರು, ಕೆ. ಸರೋಜಿನಿ, ಚಂದ್ರಶೇಖರ ಚಿಪ್ಲಿಕೋಟ, ಕೆ. ಸುರೇಶ್ ಸುವರ್ಣ, ಲವ ಮೀಪುಗುರಿ, …

ಜೀಪು ಚಾಲಕ ನಿಧನ

ಪೆರ್ಲ: ಹಿರಿಯ ಜೀಪು ಚಾಲಕ ರವೀಂದ್ರ ಶೆಟ್ಟಿ (58)ನಿಧನ ಹೊಂದಿದರು. ಮೂಲತಃ ಕರ್ನಾಟಕದ ವರಾಗಿದ್ದ ಇವರು ಎಣ್ಮಕಜೆಯ ಸೇರಾಜೆಯಲ್ಲಿ ವಾಸಿಸುತ್ತಿದ್ದರು. ನಿನ್ನೆ ಬೆಳಿಗ್ಗೆ ಕಿದೂರಿನ ತನ್ನ ಪುತ್ರಿಯ ಮನೆಯಿಂದ ಹೊರಡುತ್ತಿದ್ದ ಮಧ್ಯೆ ಕುಸಿದು ಬಿದ್ದರೆನ್ನಲಾಗಿದೆ. ತಕ್ಷಣವೇ ಆಸ್ಪತ್ರೆಗೆ ಕೊಂಡೊಯ್ದರೂ ಜೀವ ಉಳಿಸಲು ಸಾಧ್ಯವಾಗಿಲ್ಲ. ಮೃತರು ಪತ್ನಿ ಲತ ರೈ, ಮಕ್ಕಳಾದ ಸಿಂಚನ, ಸಂಜನ್, ಅಳಿಯ ಕಿಶೋರ್ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.

ಪೊಸೋಟು ಹೆದ್ದಾರಿಯಲ್ಲಿ ಕರ್ನಾಟಕ ಸಾರಿಗೆ ಬಸ್ ನಿಯಂತ್ರಣ ತಪ್ಪಿ ಡಿವೈಡರ್‌ಗೆ ಢಿಕ್ಕಿ: ಹಲವರಿಗೆ ಗಾಯ

ಮಂಜೇಶ್ವರ: ಕರ್ನಾಟಕ ಸಾರಿಗೆ ಸಂಸ್ಥೆಯ ಬಸ್ ಹೆದ್ದಾರಿಯಲ್ಲಿ ನಿಯಂತ್ರಣ ತಪ್ಪಿ ಡಿವೈಡರ್‌ಗೆ ಡಿಕ್ಕಿ ಹೊಡೆದು ಚಾಲಕ ಸಹಿತ ಹಲವು ಪ್ರಯಾಣಿಕರು ಸಣ್ಣಪುಟ್ಟ ಗಾಯಗೊಂಡು ಅಪಾಯದಿಂದ ಪಾರಾದ ಘಟನೆ ನಡೆದಿದೆ. ನಿನ್ನೆ ಮಧ್ಯಾಹ್ನ ಕಾಸರಗೋಡಿನಿಂದ ಮಂಗಳೂರು ಭಾಗಕ್ಕೆ ತೆರಳುತ್ತಿದ್ದ ಬಸ್ ರಾಷ್ಟಿಯ ಹೆದ್ದಾರಿ ಪೊಸೋಟು ಜಂಕ್ಷನ್‌ನಲ್ಲಿ ನಿಯಂತ್ರಣ ತಪ್ಪಿ ಡಿವೈಡರ್‌ಗೆ ಡಿಕ್ಕಿ ಹೊಡೆದು ಅಲ್ಲಿಂದ ಇನ್ನೊಂದು ಭಾಗದ ಡಿವೈಡರ್‌ಗೆ ಡಿಕ್ಕಿ ಹೊಡೆದು ನಿಂತಿದೆ. ಈ ಅಪಘಾತದಲ್ಲಿ ಚಾಲಕ ಹಾಗೂ ಮಹಿಳೆಯರು ಸೇರಿದಂತೆ ಹಲವು ಪ್ರಯಾಣಿಕರಿಗೆ ಸಣ್ಣಪುಟ್ಟ ಗಾಯಗೊಂ ಡಿದ್ದು, …

ಪಳ್ಳತ್ತಡ್ಕ ಶಾಲೆ ಶಿಕ್ಷಕ ಗುರುಪ್ರಸಾದ್‌ರನ್ನು ಸೇವೆಯಿಂದ ಅಮಾನತುಗೊಳಿಸಿದ ಕ್ರಮ ಖಂಡನೀಯ ಶಿಕ್ಷಕ ನಡೆಸುವ ಹೋರಾಟಕ್ಕೆ ಪೂರ್ಣ ಬೆಂಬಲ-ಕೆ.ಸುರೇಂದ್ರನ್

ಕಾಸರಗೋಡು: ಫ್ರೀಡಂ ಕ್ವಿಜ್ ಹೆಸರಿನಲ್ಲಿ ಪಳ್ಳತ್ತಡ್ಕ ಎಯುಪಿ ಶಾಲೆಯ ಶಿಕ್ಷಕ ಗುರುಪ್ರಸಾದ್‌ರನ್ನು ಸೇವೆಯಿಂದ ಅಮಾನತುಗೊಳಿಸಿದ ಕ್ರಮ ಅತ್ಯಂತ ಖಂಡನೀಯವಾಗಿ ದೆಯೆಂದು ಬಿಜೆಪಿ ನೇತಾರ ಕೆ.ಸುರೇಂದ್ರನ್ ತಿಳಿಸಿದ್ದಾರೆ.  ಸ್ವಾತಂತ್ರ್ಯ ಹೋರಾಟಕ್ಕೆ ಸಂಬಂ ಧಿಸಿ ಸುಧೀರ್ಘಕಾಲ ಜೈಲುಶಿಕ್ಷೆ ಅನುಭ ವಿಸಿದ್ದು, ವಿ.ಡಿ. ಸಾವರ್ಕರ್ ಅವರಾಗಿದ್ದಾ ರೆಂಬುವುದು  ಐತಿಹಾಸಿಕ ಸತ್ಯವಾಗಿದೆ. ವೀರ ಸಾವರ್ಕರ್ ಸ್ವಾತಂತ್ರ್ಯ ಹೋರಾಟಗಾರರಲ್ಲವೆಂದು ಇದುವರೆಗೆ ಯಾರೂ ಹೇಳಿಲ್ಲ. ಅವರು ಸುಧೀರ್ಘ ಕಾಲ ಜೈಲಿನಲ್ಲಿದ್ದರೆಂಬ ವಿಷಯವನ್ನೂ ಯಾರೂ ನಿರಾಕರಿಸುವು ದಿಲ್ಲ. ಅವರ   ವಿರುದ್ಧ ಕಾಂಗ್ರೆಸ್ ಮತ್ತು ಎಡ-ಜಿಹಾದಿ ಪಡೆಗಳು ಹೊರಿಸಿದ …

ಏಳರ ಹರೆಯದ ಬಾಲಕನ ಅಪಹರಣ ಯತ್ನ: ಕಾರಿನಲ್ಲಿ ತಲುಪಿದ ಇಬ್ಬರ ಪತ್ತೆಗಾಗಿ ಶೋಧ

ಕುಂಬಳೆ: ಕುಂಬಳೆ ಪೊಲೀಸ್ ಠಾಣೆ ವ್ಯಾಪ್ತಿಯ ಭಾಸ್ಕರ ನಗರದಲ್ಲಿ ಏಳರ ಹರೆಯದ ಬಾಲಕನನ್ನು ಕಾರಿನಲ್ಲಿ ಅಪಹರಿಸಲೆತ್ನಿಸಿರು ವುದಾಗಿ ದೂರಲಾಗಿದೆ. ಈ ಬಗ್ಗೆ ಬಾಲಕನ ತಂದೆ ನೀಡಿದ ದೂರಿನಂತೆ ಕುಂಬಳೆ ಪೊಲೀಸರು ತನಿಖೆ ಆರಂಭಿಸಿದ್ದಾರೆ. ತನಿಖೆಯಂಗವಾಗಿ ಘಟನೆ ನಡೆದ ಸ್ಥಳದ ಸಿಸಿ ಟಿವಿ ಕ್ಯಾಮರಾಗಳಲ್ಲಿ ಸೆರೆಯಾದ  ದೃಶ್ಯಗಳನ್ನು ಸಂಗ್ರಹಿಸಲಾಗಿದೆ. ಭಾಸ್ಕರನಗರದ ಕ್ವಾರ್ಟರ್ಸ್ ವೊಂದರಲ್ಲಿ ವಾಸಿಸುವ ಉತ್ತರಭಾರತದ ಕುಟುಂಬವೊಂದರ ಬಾಲಕನನ್ನು ಅಪಹರಿಸಲು ಯತ್ನ ನಡೆದಿದೆ. ಘಟನೆ ಬಗ್ಗೆ ಪೊಲೀಸರಿಗೆ ಲಭಿಸಿದ ದೂರಿನಲ್ಲಿ ಈ ರೀತಿ ತಿಳಿಸಲಾಗಿದೆ-“ನಿನ್ನೆ ಮಧ್ಯಾಹ್ನ 12.30ರ ವೇಳೆ …

ಶ್ರೀಗಂಧ ಮರ ಕಡಿದು ಸಾಗಿಸಲೆತ್ನಿಸಿದ ವ್ಯಕ್ತಿ ಸೆರೆ

ಮುಳ್ಳೇರಿಯ: ಕಾರಡ್ಕ ಮೂಡಾಂಗುಳಂನ ಜನವಾಸವಿಲ್ಲದ ಹಿತ್ತಿಲಿನಿಂದ ಶ್ರೀಗಂಧ ಮರವನ್ನು ಕಡಿದು ಮಾರಾಟ ನಡೆಸಲು ಯತ್ನಿಸಿದ ವ್ಯಕ್ತಿಯನ್ನು ಗಂಟೆಗಳೊಳಗೆ ಅರಣ್ಯ ಇಲಾಖೆ ಅಧಿಕಾರಿಗಳು ಸೆರೆ ಹಿಡಿದಿದ್ದಾರೆ. ಮುಳ್ಳೇರಿಯ  ನಿವಾಸಿ ಕೆ.ಎಂ. ಅಶೋಕ್ (56)ನನ್ನು ಕಾರಡ್ಕ ಸೆಕ್ಷನ್ ಆಫೀಸರ್ ಕೆ.ಎ. ಬಾಬು ಹಾಗೂ ತಂಡ ಬಂಧಿಸಿದೆ. ಈತನಿಂದ ಸವರಿ ಸಿದ್ಧಗೊಳಿಸಿದ್ದ ಎರಡು ಕಿಲೋ ಶ್ರೀಗಂಧ ಹಾಗೂ ತುಂಡರಿಸಲು ಉಪಯೋಗಿಸಿದ ಹ್ಯಾಕ್ಸೋ ಬ್ಲೇಡ್, ಕತ್ತಿಯನ್ನು ವಶಪಡಿಸಲಾಗಿದೆ. ಶ್ರೀಗಂಧವನ್ನು ಮಾರಾಟ ಮಾಡಲೆಂದು ಕೊಂಡುಹೋಗಲು ಬಸ್ ನಿಲ್ದಾಣದಲ್ಲಿ ನಿಂತಿರುವಾಗ ಅರಣ್ಯ ಇಲಾಖೆ ಅಧಿಕಾರಿಗಳು ತಲುಪಿ …

ಕಾರಿನಲ್ಲಿ ತ್ಯಾಜ್ಯ ತಂದು ರಸ್ತೆ ಬದಿ ಉಪೇಕ್ಷೆ

ಕುಂಬಳೆ:   ಗೋಣಿ ಚೀಲಗಳಲ್ಲಿ ತುಂಬಿಸಿದ್ದ ತ್ಯಾಜ್ಯವನ್ನು ಕಾರಿನಲ್ಲಿ ತಂದು ರಸ್ತೆಬದಿ ಎಸೆಯುತ್ತಿರುವುದು ಪತ್ತೆಯಾಗಿದೆ. ಈ ಬಗ್ಗೆ ಲಭಿಸಿದ ಮಾಹಿತಿಯಂತೆ ಕುಂಬಳೆ ಪಂಚಾಯತ್ ಅಧಿಕಾರಿಗಳು ಪೊಲೀಸರಿಗೆ ದೂರು ನೀಡಿದ್ದಾರೆ.  ನಿನ್ನೆ ಬೆಳಿಗ್ಗೆ ನಾಯ್ಕಾಪಿನಲ್ಲಿ ತ್ಯಾಜ್ಯ ಎಸೆಯಲಾಗಿದೆ. ಕಾರಿನಲ್ಲಿ ಬಂದ ವ್ಯಕ್ತಿ ರಸ್ತೆ ಬದಿ ಕಾರು ನಿಲ್ಲಿಸಿ  ಮೂರು ಗೋಣಿ ಚೀಲಗಳಲ್ಲಿ ತುಂಬಿಸಿಟ್ಟಿದ್ದ ತ್ಯಾಜ್ಯವನ್ನು ರಸ್ತೆ ಬದಿ ಎಸೆದಿದ್ದಾನೆ. ಈ ದೃಶ್ಯ   ಈ ಪರಿಸರದಲ್ಲಿದ್ದ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಇದನ್ನು ನಾಗರಿಕರು ಸಂಗ್ರಹಿಸಿ ಪಂಚಾಯತ್ ಅಧಿಕಾರಿಗಳಿಗೆ ನೀಡಿದ್ದಾರೆ. ಇದರಂತೆ ಪಂಚಾಯತ್ …

ಓಣಂ ಸ್ಪೆಷಲ್ ಡ್ರೈವ್: ಸ್ಕೂಟರ್‌ನಲ್ಲಿ ಕರ್ನಾಟಕ ಮದ್ಯ ಸಾಗಾಟ; ಓರ್ವ ಸೆರೆ

ಮಂಜೇಶ್ವರ: ಮಂಜೇಶ್ವರ ಮಾರ್ಕೆಟ್ ಜಂಕ್ಷನ್‌ನಲ್ಲಿ ಕರ್ನಾಟಕ ಮದ್ಯ ಮಾರಾಟಗೈಯ್ಯಲು ಸ್ಕೂಟರ್‌ನಲ್ಲಿ ತಲುಪಿದ ಯುವಕ ಸೆರೆಗೀಡಾಗಿದ್ದಾನೆ. ಮಂಜೇಶ್ವರ ಗುಡ್ಡೆಕೇರಿ ನಿವಾಸಿ ನಿತಿನ್ (30) ಸೆರೆಗೀಡಾದ ವ್ಯಕ್ತಿ. ಓಣಂ ಸ್ಪೆಷಲ್ ಡ್ರೈವ್‌ನಂಗವಾಗಿ ನಿನ್ನೆ ಕುಂಬಳೆ ರೇಂಜ್ ಅಸಿಸ್ಟೆಂಟ್ ಎಕ್ಸೈಸ್ ಇನ್‌ಸ್ಪೆಕ್ಟರ್ ಗ್ರೇಡ್ ಎಯ ಬಿ.ಅಬ್ದುಲ್ಲ ನೇತೃತ್ವದ ತಂಡ ನಡೆಸಿದ ಕಾರ್ಯಾಚರಣೆ ವೇಳೆ ಯುವಕ ಸೆರೆಗೀಡಾಗಿದ್ದಾನೆ. ಸ್ಕೂಟರ್ ಕಸ್ಟಡಿಗೆ ತೆಗೆಯಲಾಗಿದೆ. ಸ್ಕೂಟರ್‌ನಿಂದ ೮.೬೪ ಲೀಟರ್  ಕರ್ನಾಟಕ ನಿರ್ಮಿ ತ ಮದ್ಯ ವಶಪಡಿಸಲಾಗಿದೆ. ಆರೋಪಿ,  ಮದ್ಯ ಹಾಗೂ ಸ್ಕೂಟರ್ ಕುಂಬಳೆ  ರೇಂಜ್ ಅಬಕಾರಿ …