13 ವರ್ಷದ ಬಾಲಕಿ 23 ವರ್ಷದೊಳಗಿನ ಮಹಿಳಾ ತಂಡದ ನಾಯಕಿ

ಕಾಸರಗೋಡು: ವಿದ್ಯಾನಗರ ಪನ್ನಿಪ್ಪಾರೆ ಎಂ.ಜಿ ಕಾಲನಿ ಬಳಿಯ ಬಾಲಕಿ ಹರಿಪ್ರಿಯಾ ಔಕ್ 15,18,19 ಬಾಲಕಿಯರ ಕ್ರಿಕೆಟ್ ತಂಡ ದಲ್ಲಿ ಆಡಿ ಈಗ 23 ವರ್ಷದ ಕೆಳಗಿನ ಮಹಿಳೆಯರ ಜಿಲ್ಲಾ ಕ್ರಿಕೆಟ್ ತಂಡದ ನಾಯಕಿಯಾಗಿ ಆಯ್ಕೆ ಯಾಗಿದ್ದಾಳೆ. ಕಾಸರಗೋಡು ಸರಕಾರಿ ಕಾಲೇಜಿನ ಪ್ರಾಧ್ಯಾಪಿಕೆ ಲಕ್ಷ್ಮಿ-ಮಹೇಶ್‌ರಾಜು ದಂಪತಿ ಪುತ್ರಿಯಾದ ಹರಿಪ್ರಿಯಾ ಈಗ 13ನೇ ಹರೆಯದ ಲ್ಲಿದ್ದು ವಿದ್ಯಾನಗರ ಕೇಂದ್ರೀಯ ವಿದ್ಯಾಲಯದಲ್ಲಿ ಮುಂದಿನ ಶೈಕ್ಷಣಿಕ ವರ್ಷದ ೮ನೇ ತರಗತಿಗೆ ಪಾದಾರ್ಪಣೆಗೈದಿದ್ದಾಳೆ. ಫಾಸ್ಟ್ ಬೌಲರ್, ಬಲಗೈ ಬ್ಯಾಟ್ಸ್‌ಮ್ಯಾನ್ ಆದ ಈಕೆ ಆಲ್‌ರೌಂಡರ್ ಆಗಿದ್ದಾಳೆ.  …

ಕಾಳ್ಯಂಗಾಡು ಬ್ರಹ್ಮಕಲಶೋತ್ಸವ: ಉಗ್ರಾಣ ಮುಹೂರ್ತ

ಕೂಡ್ಲು: ಕಾಳ್ಯಂಗಾಡು ಶ್ರೀ ಮೂಕಾಂಬಿಕಾ ಕ್ಷೇತ್ರದ ಪುನರ್ ಪ್ರತಿಷ್ಠಾ ಬ್ರಹ್ಮಕಲಶೋತ್ಸವ ಕಾರ್ಯ ಕ್ರಮಗಳು ನಿನ್ನೆ ಆರಂಭಗೊAಡಿದೆ. ಈ ಸಂಬAಧ ನಡೆದ ಉಗ್ರಾಣ ಮುಹೂರ್ತವನ್ನು ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ಕೆ.ಎನ್.ವೆಂಕಟ್ರಮಣ ಹೊಳ್ಳ ಉದ್ಘಾಟಿಸಿದರು. ಕೆ.ಎನ್. ರಾಮಕೃಷ್ಣ ಹೊಳ್ಳ, ಪ್ರಧಾನ ಅರ್ಚಕ ಯೋಗೀಶ, ಕ್ಷೇತ್ರ ಮೊಕ್ತೇಸರ ಅಚ್ಚುತ್ತ ಕಾಳ್ಯಂಗಾಡು,  ಪ್ರಧಾನ ಕಾರ್ಯದರ್ಶಿ ದಯಾನಂದ ಕೊಳ್ಕೆಬೈಲ್, ಕಾರ್ಯದರ್ಶಿ ಗಳಾದ ರಂಜಿತ್ ಮನ್ನಿಪ್ಪಾಡಿ, ಗೋವಿಂದ ಕಾಳ್ಯಂಗಾಡ್, ಕೋಶಾಧಿಕಾರಿ ಶಾಂತ ಕುಮಾರ್ ಮುಂಡ್ಯತ್ತಡ್ಕ, ರಘು ಮೀಪುಗುರಿ, ಮೋಹನ್ ರಾಜ್, ಪುಷ್ಪಾವತಿ ಮಹಾಲಿಂಗ ಉಪಸ್ಥಿತರಿದ್ದರು.

ಕುಂಬಳೆಯಲ್ಲಿ ಕೆ.ಜಿ. ಮಾರಾರ್ ಸಂಸ್ಮರಣೆ

ಕುಂಬಳೆ:  ಬಿಜೆಪಿ ಪಂಚಾ ಯತ್ ಸಮಿತಿ ವತಿಯಿಂದ ಬಿಜೆಪಿಯ ಹಿರಿಯ ನೇತಾರರಾಗಿದ್ದ ಕೆ.ಜಿ. ಮಾರಾರ್ ರವರ ೩೧ನೇ ಸಂಸ್ಮರಣೆ ಕುಂಬಳೆ ಪಕ್ಷದ ಕಚೇರಿಯಲ್ಲಿ ನಡೆಯಿತು. ಭಾವಚಿತ್ರಕ್ಕೆ ಪುಷ್ಪಾರ್ಚನೆ ನಡೆಸಲಾಯಿತು. ಬಿಜೆಪಿ ಕುಂಬಳೆ ದಕ್ಷಿಣ ವಲಯ ಸಮಿತಿ ಅಧ್ಯಕ್ಷ ಕೆ. ಸುಜಿತ್ ರೈ ಅಧ್ಯಕ್ಷತೆ ವಹಿಸಿದರು. ರಾಜ್ಯ ಸಮಿತಿ ಸದಸ್ಯ ವಿ. ರವೀಂದ್ರನ್ ಉದ್ಘಾಟಿಸಿದರು. ಮುಖಂಡರಾದ ಶಿವಪ್ರಸಾದ್ ರೈ, ಕೆ. ರಮೇಶ್ ಭಟ್, ಕೆ. ಸುಧಾಕರ ಕಾಮತ್, ಶಶಿ ಕುಂಬಳೆ ಐತಪ್ಪ ಎನ್, ವರುಣ ಕುಮಾರ್, ವಿನೋದನ್ ಕಡಪ್ಪುರ, …

ಕೆ.ಜಿ. ಮಾರಾರ್ ಸ್ಮೃತಿ ದಿನಾಚರಣೆ

ಕಾಸರಗೋಡು: ಬಿಜೆಪಿ ಕಾಸರಗೋಡು ಜಿಲ್ಲಾ ಕೇಂದ್ರವಾದ ಡಾ. ಶ್ಯಾಮಪ್ರಸಾದ್ ಮುಖರ್ಜಿ ಮಂದಿರದಲ್ಲಿ ದಿ| ಕೆ.ಜಿ. ಮಾರಾರ್ ಸ್ಮೃತಿ ದಿನ ಆಚರಿಸಲಾಯಿತು. ಬಿಜೆಪಿ ರಾಜ್ಯ ಸಮಿತಿ ಸದಸ್ಯ ವಿ. ರವೀಂದ್ರನ್, ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ  ಪಿ.ಆರ್. ಸುನಿಲ್, ಎನ್. ಬಾಬುರಾಜ್, ಜಿಲ್ಲಾ ಉಪಾಧ್ಯಕ್ಷ ಪಿ. ರಮೇಶ್, ಜಿಲ್ಲಾ ಕಾರ್ಯದರ್ಶಿ ಪ್ರಮೀಳಾ ಮಜಲ್, ಜಿಲ್ಲಾ ಕೋಶಾಧಿಕಾರಿ  ವೀಣಾ ಅರುಣ್ ಶೆಟ್ಟಿ, ಕಾಸರಗೋಡು ಮಂಡಲ ಅಧ್ಯಕ್ಷ ಗುರುಪ್ರಸಾದ್ ಪ್ರಭು, ಶೈನಿ, ಮಹಿಳಾ ಮೋರ್ಛಾ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಅನಿತಾ ನಾಯಕ್  ಸಹಿತ …

ಕಯ್ಯಾರು ಪೊನ್ನೆತ್ತೋಡು ಮಹಿಳಾ ಯಕ್ಷಕೂಟ,ಬಾಲಕಲಾವಿದರ ಯಕ್ಷಕಲಾ ಕೇಂದ್ರದ ವಾರ್ಷಿಕೋತ್ಸವ

ಉಪ್ಪಳ: ಮಹಿಳಾ ಯಕ್ಷಕೂಟ ಹಾಗೂ ಬಾಲಕಲಾವಿದರ ಯಕ್ಷ ಕಲಾ ಕೇಂದ್ರ ಪೊನ್ನೆತ್ತೋಡು ಕಯ್ಯಾರು, ಈ ಎರಡೂ ತರಬೇತಿ ಕೇಂದ್ರದ 11ನೇ ವಾರ್ಷಿಕೋತ್ಸವ ಮೇ 2 ಹಾಗೂ 3ರಂದು ಶ್ರೀ ಭಗವತಿ ಕೃಪಾ ವೀರಾಂಜನೇಯ ವ್ಯಾಯಾಮ ಶಾಲೆ, ಭಗವತೀ ನಗರ ಅಡ್ಕದಲ್ಲಿ ಜರಗಲಿದೆ. ೨ರಂದು ಬೆಳಿಗ್ಗೆ 10 ಗಂಟೆಗೆ ವಾರ್ಷಿಕೋತ್ಸವದ ಉದ್ಘಾಟನೆ,11 ರಿಂದ ಮಹಿಳಾ ಯಕ್ಷಕೂಟದ ಸದಸ್ಯರಿಂದ ಇಂದ್ರಜಿತು ಕಾಳಗ ಯಕ್ಷಗಾನ ತಾಳಮದ್ದಳ, 3ಕ್ಕೆ ಪೂರ್ವರಂಗ ವೈಭವ ಹಾಗೂ 5 ಗಂಟೆಯಿದ ಬಾಲ ಕಲಾವಿದರ ಕೇಂದ್ರದ ವಿದ್ಯಾರ್ಥಿಗಳಿಂದ ಕೃಷ್ಣ …

ಪೆರಡಾಲ ಶ್ರೀ ಉದನೇಶ್ವರನ ಮೂಲಕ ಭಕ್ತರು ಒಂದಾಗಿದ್ದಾರೆ-ಶ್ರೀ ರಾಘವೇಶ್ವರ ಭಾರತೀ ಸ್ವಾಮೀಜಿ

ಬದಿಯಡ್ಕ: ಜೀರ್ಣೋದ್ಧಾರಗೊಂಡ ಪೆರಡಾಲ ಶ್ರೀ ಉದನೇಶ್ವರ ದೇವಸ್ಥಾನವು ಇಂದು ದೇವಸ್ಥಾನ ಹೇಗಿರಬೇಕೋ ಹಾಗೇ ಬದಲಾಗಿದೆ. ಬಹಳಷ್ಟು ಮಂದಿ ಊರು ಬಿಟ್ಟು ಹೊರಹೋಗಿದ್ದರೂ, ಉದನೇಶ್ವರನ ಮೂಲಕ ಭಕ್ತರು ಒಂದಾಗಿದ್ದಾರೆ. ಉದನೇಶ್ವರನ ಬಿಟ್ಟು ದೂರಹೋಗಿಲ್ಲ. ಜೀವನಕ್ಕೋಸ್ಕರ ಹೊರರಾಜ್ಯದಲ್ಲಿದ್ದರೂ ಅವರೆಲ್ಲರೂ ಉದನೇಶ್ವರನ ಭಕ್ತರಾಗಿಯೇ ಇದ್ದಾರೆ. ತುಂಬ ಚಂದದ ದೇವಸ್ಥಾನವಾಗಿ ಪೆರಡಾಲ ಬದಲಾಗಿದೆ. ಪೆರಡಾಲದ ಬ್ರಹ್ಮಕಲಶೋತ್ಸವದ ಬಗ್ಗೆ ಎಲ್ಲರ ಬಾಯಲ್ಲೂ ಅದ್ಭುತ ಅದ್ಭುತ ಎಂಬ ಮಾತು ಕೇಳಿಬರುತ್ತದೆ ಎಂದು ಶ್ರೀ ರಾಮಚಂದ್ರಾಪುರ ಮಠದ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳು ನುಡಿದರು.ಪೆರಡಾಲ ಶ್ರೀ ಉದನೇಶ್ವರ …

ಮೊಗ್ರಾಲ್ ಹೊಳೆಯಲ್ಲಿ ಮುಳುಗಿಸಿಟ್ಟ ಆರು ದೋಣಿಗಳನ್ನು ನಾಶಗೊಳಿಸಿದ ಪೊಲೀಸ್: ಟಿಪ್ಪರ್ ಲಾರಿವಶ

ಕುಂಬಳೆ: ಹೊಳೆಯಿಂದ ಅನಧಿಕೃತವಾಗಿ ಹೊಯ್ಗೆ ಸಂಗ್ರಹಿಸಿ ಸಾಗಿಸುವ ದಂಧೆ ವಿರುದ್ಧ ಕುಂಬಳೆ ಪೊಲೀಸರು ಕಾರ್ಯಾಚರಣೆ ಇನ್ನಷ್ಟು ತೀವ್ರಗೊಳಿಸಿದ್ದಾರೆ. ನಿನ್ನೆ ರಾತ್ರಿ ಎಸ್ ಐಗಳಾದ  ಸಿ.ಸನಿತ್, ಅನಂತಕೃಷ್ಣನ್ ಆರ್ ಮೆನೋನ್ ನೇತೃತ್ವದಲ್ಲಿ ನಡೆಸಿದ ಕಾರ್ಯಾಚರಣೆಯಲ್ಲಿ  ಹೊಯ್ಗೆ ಸಂಗ್ರಹಿಸಲು ಬಳಸುವ ಆರು ದೋಣಿಗಳನ್ನು ವಶಕ್ಕೆ ತೆಗೆಯಲಾ ಗಿದೆ.  ಮೊಗ್ರಾಲ್ ಹೊಳೆಯಲ್ಲಿ ನೀರಿನಲ್ಲಿ ಮುಳುಗಿಸಿಟ್ಟ ಸ್ಥಿತಿಯಲ್ಲಿ ದೋಣಿಗಳು ಪತ್ತೆಯಾಗಿದ್ದು, ಅವುಗಳನ್ನು ಬಳಿಕ ಜೆಸಿಬಿ ಬಳಸಿ ನಾಶಗೊಳಿಸಲಾಗಿದೆ.  ಅದೇ ರೀತಿ ಆರಿಕ್ಕಾಡಿ ಕೆಪಿ ರೆಸೋ ರ್ಟ್ ಬಳಿಯ  ಹೊಳೆಯಿಂದ ಹೊಯ್ಗೆ ಸಾಗಿಸುತ್ತಿದ್ದ ಟಿಪ್ಪರ್ …

ಮಳ್ಳಂಗೈ ನಿವಾಸಿ ಸೌದಿ ಅರೇಬಿಯಾದಲ್ಲಿ ಕುಸಿದುಬಿದ್ದು ಮೃತ್ಯು

ಕುಂಬಳೆ: ಬಂದ್ಯೋಡು ಮಳ್ಳಂಗೈ ನಿವಾಸಿ ಸೌದಿ ಅರೇಬಿ ಯಾದಲ್ಲಿ ಕುಸಿದುಬಿದ್ದು ಮೃತಪಟ್ಟ ಘಟನೆ ನಡೆದಿದೆ. ಕಳೆದ 22 ವರ್ಷಗಳಿಂದ ಸೌದಿ ಅರೇಬಿಯಾದ ಅಬಹದಲ್ಲಿ ಕಫ್ತೀರಿಯ ನಡೆಸುತ್ತಿದ್ದ  ಮುಹಮ್ಮದ್ ಫಾರೂಕ್ (48) ಎಂಬವರು ಮೃತಪಟ್ಟ ವ್ಯಕ್ತಿಯಾಗಿ ದ್ದಾರೆ. ನಿನ್ನೆ ಸಂಜೆ ಕಫ್ತೀರಿಯದಲ್ಲಿ ಕುಸಿದುಬಿದ್ದು ಮೃತಪಟ್ಟಿರುವುದಾಗಿ ಮನೆಯವರಿಗೆ ಮಾಹಿತಿ ಲಭಿಸಿದೆ. ಮೃತದೇಹವನ್ನು  ಊರಿಗೆ ತರಲು ಸಿದ್ದತೆ ನಡೆಯುತ್ತಿದೆ.  ಇತ್ತೀಚೆಗೆ   ಊರಿಗೆ ಬಂದಿದ್ದ ಮುಹಮ್ಮದ್ ಫಾರೂಕ್ ಈದುಲ್ ಫಿತೃ ಹಬ್ಬದ ಬಳಿಕ ಮರಳಿದ್ದರು.  ದಿ|  ಮುಹಮ್ಮದ್ ಹಾಜಿ-ಆಯಿಷ ಹಜ್ಜುಮ್ಮ ದಂಪತಿಯ ಪುತ್ರನಾದ …

ಕಾಂಗ್ರೆಸ್ ಮುಖಂಡ ನಿಧನ

ಪೆರ್ಲ: ಹಿರಿಯ ಕಾಂಗ್ರೆಸ್ ಮುಖಂಡ, ನಲ್ಕ ವಾಗ್ದೇವಿ ಅನುದಾನಿತ ಪ್ರಾಥಮಿಕ ಶಾಲೆಯ ನಿಕಟಪೂರ್ವ ವ್ಯವಸ್ಥಾಪಕ ಶ್ರೀಕೃಷ್ಣ ಭಟ್ ವರ್ಮುಡಿ (78) ನಿಧನ ಹೊಂದಿದರು. ಎಣ್ಮಕಜೆ ಮಂಡಲ ಕಾಂಗ್ರೆಸ್ ಸಮಿತಿ ಕೋಶಾಧಿಕಾರಿ, ಯುಡಿಎಫ್ ಚುನಾವಣಾ ಸಮಿತಿ ಪದಾಧಿಕಾರಿಯಾಗಿ ಹಲವಾರು ದಶಕಗಳ ಕಾಲ ಸೇವೆ ಸಲ್ಲಿಸಿದ್ದರು.  ಎಣ್ಮಕಜೆ ಪಂಚಾಯತ್ ವ್ಯಾಪ್ತಿ ಯಲ್ಲಿ ಕಾಂಗ್ರೆಸ್ ಪಕ್ಷವನ್ನು ಕಟ್ಟಿ ಬೆಳೆಸಲು ಇವರು ನೀಡಿದ ಕೊಡುಗೆ ಅನನ್ಯ ಎಂದು ಪಕ್ಷದ ಮುಖಂಡರು ತಿಳಿಸುತ್ತಿದ್ದು, ಇವರ ಅಗಲಿಕೆ ಪಕ್ಷಕ್ಕೆ ನಷ್ಟವುಂಟುಮಾಡಿರುವುದಾಗಿ ಜಿಲ್ಲಾ ಪಂಚಾಯತ್ ಸದಸ್ಯ ಸೋಮ …

ಕೋಟ್ಯಂತರ ರೂ.ಗಳ ವಂಚನೆ: ತಲೆಮರೆಸಿಕೊಂಡಿದ್ದ ಇಬ್ಬರ ಬಂಧನ

ಕಾಸರಗೋಡು:  ಕೋಟ್ಯಂತರ ರೂಪಾಯಿ ವಂಚನೆ ನಡೆಸಿದ  ಸಂಬಂಧ ಹಲವು ಪ್ರಕರಣಗಳಲ್ಲಿ ಆರೋಪಿಗಳಾಗಿ ತಲೆಮರೆಸಿಕೊಂಡಿದ್ದ ಇಬ್ಬರನ್ನು  ಬೇಡಗಂ ಪೊಲೀಸರು ಬಂಧಿಸಿದ್ದಾರೆ. ಬೇಡಗಂ ಪೊಲೀಸ್ ಠಾಣೆ,   ಕೇರಳ ಹಾಗೂ ಹೊರ ರಾಜ್ಯಗಳ  ಹಲವು ಪೊಲೀಸ್ ಠಾಣೆಗಳಲ್ಲಿ ಕೇಸು ದಾಖಲಾದ ಕುಳತ್ತುಪುಳ ನೆಲ್ಲಿಮೂಡ್ ಕಾಲಿಲ್ ವೀಟಿಲ್‌ನ ಶೀಬಾ ಎಸ್ (46) ಎಂಬಾಕೆಯನ್ನು ಕೊಲ್ಲಂ ಜಿಲ್ಲೆಯ ಪುನಲೂರು ವಿಲ್ಲೇಜ್‌ನ ಪತ್ತಡಿ ಎಂಬಲ್ಲಿಂದ, ವಿಸಾ ವಂಚನೆ ಸಹಿತ ಹಲವು ಪ್ರಕರಣಗಳಲ್ಲಿ ಆರೋಪಿಯಾಗಿ ತಲೆಮರೆಸಿಕೊಂಡಿದ್ದ ಕುರಿಯನ್ ಮ್ಯಾಥ್ಯೂ ಯಾನೆ ವಿಪಿ (37) ಎಂಬಾತನನ್ನು ಕೋಟ್ಟಯಂ ಜಿಲ್ಲೆಯ …