ಹಾಜಿ ಚೆರ್ಕಳ ಮೊಹಮ್ಮದ್ ನಿಧನ

ಚೆರ್ಕಳ: ಸುನ್ನಿ ಮುಖಂಡ ಹಾಜಿ ಚೆರ್ಕಳ ಮೊಹಮ್ಮದ್ (66) ನಿಧನ ಹೊಂದಿದರು. ಚೆರ್ಕಳ ಮುಹಿಯಿ ದ್ದೀನ್ ಜಮಾಯತ್ ಮಸೀದಿ ಸಮಿತಿ ಅಧ್ಯಕ್ಷ, ಸುನ್ನಿ ಮಹಲ್ ಫೆಡರೇಶನ್ ಮಂಡಲ ಸಮಿತಿ ಅಧ್ಯಕ್ಷರಾಗಿದ್ದರು. ಮೃತರು ಪತ್ನಿ ಬೀಫಾತಿಮ, ಮಕ್ಕಳಾದ ಅಬ್ದುಲ್ಲ, ಫಾಸಿಲ್ ಫಿರೋಸ್, ಶಾಸಿನ್ ಶಾಹಿದ್, ರಿಸ್ವಾನ ತಸ್ನೀಂ,  ಅಳಿಯಂದಿ ರಾದ ಶೆರೀನ್, ಶೆರೀಫ್, ಸೊಸೆ ಫಸ್ನ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.

ಇಬ್ರಾಹಿಂ ನಿಧನ

ನೀರ್ಚಾಲು: ನೀರ್ಚಾಲು ಮೇಲಿನ ಪೇಟೆಯಲ್ಲಿ ವಾಸಿಸುವ ಇಬ್ರಾಹಿಂ (64) ನಿಧನಹೊಂ ದಿದರು. ಇವರು ಅಡುಗೆ ಕಾರ್ಮಿಕ ನಾಗಿದ್ದರು. ಮೃತರು ಪತ್ನಿ ನಬೀಸ, ಮಕ್ಕಳಾದ ರಂಸೀನ, ಮರಿಯಮ್ಮ, ಸಫೀರ, ರಶೀದ, ನೌಫಲ್, ಅಳಿಯ-ಸೊಸೆಯಂದಿರಾದ ಅಶ್ರಫ್, ಶರೀಫ್, ಸಿದ್ದಿಕ್, ಶಾನಿಬ, ಸಹೋದರ-ಸಹೋದರಿಯರಾದ ಅಬ್ಬಾಸ್ ಕಲ್ಲಕಟ್ಟ, ಅಬ್ದುಲ್ಲ ಆಲಂಪಾಡಿ, ಮುಹಮ್ಮದ್ ಉರ್ಮಿ, ಫಾತಿಮ, ಮೈಮೂನ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.

ಇಂಜಿನಿಯರ್ ಪಾಂಡ್ಯಾಲ ಶರೀಫ್ ನಿಧನ

ಕುಂಬಳೆ: ಶಿರಿಯ ಮುಟ್ಟಂ ನಿವಾಸಿ ಇಂಜಿನಿಯರ್ ಶರೀಫ್ ಯಾನೆ ಪಾಂಡ್ಯಾಲ ಶರೀಫ್ (58) ನಿಧನ ಹೊಂದಿದರು.  ಕರ್ನಾಟಕ ಪೊಲೀಸ್‌ನ ನಿವೃತ್ತ ಡಿವೈಎಸ್ಪಿ ಮುಹಮ್ಮದ್ ಕುಂಞಿಯವರ ಪುತ್ರನಾಗಿದ್ದಾರೆ. ಅಸೌಖ್ಯ ಬಾಧಿಸಿದ ಹಿನ್ನೆಲೆಯಲ್ಲಿ ಮಂಗಳೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆಯಲ್ಲಿದ್ದ ಮಧ್ಯೆ ಇಂದು ಬೆಳಿಗ್ಗೆ ನಿಧನ ಸಂಭವಿಸಿದೆ. ಮೃತರು ಪತ್ನಿ  ಕುಂಬಳೆಯ ಉದ್ಯಮಿ ಮೊಹಮ್ಮದ್ ಅರಬಿಯವರ ಮಗಳಾದ ಶಕೀಲ, ಮಕ್ಕಳಾದ ರುಮ, ರಿಯ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.

ಜಿಲ್ಲೆಯಲ್ಲಿ ಖಾಸಗಿ ಬಸ್ ಮುಷ್ಕರ ಪೂರ್ಣ: ಬಸ್ ಮಾಲಕರು, ಕಾರ್ಮಿಕರು, ಕುಟುಂಬದವರಿಂದ ಕಲೆಕ್ಟರೇಟ್‌ಗೆ ಮಾರ್ಚ್, ಧರಣಿ ಮುಷ್ಕರ 

ಕಾಸರಗೋಡು: ಪ್ರಿಯ ದರ್ಶಿನಿ ಯೋಜನೆಯಂತೆ ಕೆಎಸ್‌ಆರ್‌ಟಿಸಿ ಬಸ್‌ಗಳಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣ ಸೌಕರ್ಯ ಏರ್ಪಡಿಸಿದ ರಾಜ್ಯ ಸರಕಾರದ ಕ್ರಮ ಖಾಸಗಿ ಬಸ್‌ಗಳ ಆದಾಯದ ಮೇಲೆ ತೀವ್ರ ಪರಿಣಾಮ ಬೀರಿರುವುದನ್ನು ಪ್ರತಿಭಟಿಸಿ ಜಿಲ್ಲೆಯಲ್ಲಿ ಇಂದು  ಖಾಸಗಿ ಬಸ್ ಮುಷ್ಕರ ನಡೆಯುತ್ತಿದೆ. ಇಂದು ಬೆಳಿಗ್ಗೆ ಆರಂಭ ಗೊಂಡ ಮುಷ್ಕರ ನಿರೀಕ್ಷೆಗೂ ಮೀರಿ ಯಶಸ್ವಿ ಕಂಡಿದೆ. ಮುಷ್ಕರ ನಿರತ ಬಸ್ ಮಾಲಕರು, ಕಾರ್ಮಿಕರು ಮತ್ತು ಅವರ ಕುಟುಂಬ ಸದಸ್ಯರು ಇಂದು ಬೆಳಿಗ್ಗೆ ಕಾಸರಗೋಡು ಕಲೆಕ್ಟರೇಟ್‌ಗೆ ಮಾರ್ಚ್ ನಡೆಸಿ ಧರಣಿ ಮುಷ್ಕರ ಹೂಡಿದರು. …

ವಿವಿಧ ಬೇಡಿಕೆ ಮುಂದಿರಿಸಿ ಕುಂಬಳೆ ವ್ಯಾಪಾರಿಗಳಿಂದ ಪಂಚಾಯತ್ ಕಚೇರಿಗೆ ಮಾರ್ಚ್, ಹರತಾಳ

ಕುಂಬಳೆ: ವ್ಯಾಪಾರಿ ವ್ಯವಸಾಯಿ ಏಕೋಪನಾ ಸಮಿತಿ ಕುಂಬಳೆ ಘಟಕ, ಮರ್ಚೆಂಟ್ಸ್ ಯೂತ್ ವಿಂಗ್ ನೇತೃತ್ವದಲ್ಲಿ ಕುಂಬಳೆ ವ್ಯಾಪಾರಿಗಳು ಇಂದು ಬೆಳಿಗ್ಗೆ ವಿವಿಧ ಬೇಡಿಕೆಗಳನ್ನು ಮುಂದಿರಿಸಿಕೊಂಡು ಕುಂಬಳೆ ಪಂಚಾಯತ್ ಕಚೇರಿಗೆ ಮಾರ್ಚ್  ನಡೆಸಿದರು. ಕುಂಬಳೆ ವ್ಯಾಪಾರಿ ಭವನದಿಂದ ಆರಂಭಗೊಂಡ  ವ್ಯಾಪಾರಿಗಳ ಮೆರವಣಿಗೆ ಪೇಟೆ ಸುತ್ತಿ ಪೊಲೀಸ್ ಠಾಣೆ ಮುಂದೆ ಸಮಾಪ್ತಿಗೊಂಡಿತು. ಕುಂಬಳೆ ಪೇಟೆಯ ಎಲ್ಲಾ ವ್ಯಾಪಾರಿಗಳು  ಮಾರ್ಚ್‌ನಲ್ಲಿ ಪಾಲ್ಗೊಂಡಿದ್ದಾರೆ.  ಬದಿಯಡ್ಕ ಭಾಗದಿಂದ ಕುಂಬಳೆಗೆ ತಲುಪುವ ಬಸ್ ಪ್ರಯಾಣಿಕರನ್ನು ಅರ್ಧದಲ್ಲೇ ಇಳಿಸುವ  ಕ್ರಮವನ್ನು ನಿಲ್ಲಿಸಬೇಕು, ಹಳೆಯ ಬಸ್ ನಿಲ್ದಾಣವನ್ನು ಪ್ರಯಾ …

ಇಲಿವಿಷ ಸೇವಿಸಿ ಆಸ್ಪತ್ರೆಯಲ್ಲಿ ಚಿಕಿತ್ಸೆಯಲ್ಲಿದ್ದ ಯುವತಿ ಮೃತ್ಯು

ಕಾಸರಗೋಡು: ಇಲಿ ವಿಷ ಸೇವಿಸಿ ಗಂಭೀರಾವಸ್ಥೆಯಲ್ಲಿ ಆಸ್ಪತ್ರೆಯಲ್ಲಿ ದಾಖಲಾಗಿದ್ದ ಯುವತಿ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ ಘಟನೆ ನಡೆದಿದೆ. ಕೂಡ್ಲು ಚೆಟ್ಟುಂಗುಳಿ ಇಝ್ಝತ್‌ನಗರದ ಎಸ್.ಎಂ. ಮಂಜಿಲ್‌ನ ಅಬ್ದುಲ್ ಮನಾಫ್ ಎಂಬವರ ಪುತ್ರಿ ಆಮಿನ ನುಸಾ (18) ಸಾವನ್ನಪ್ಪಿದ ಯುವತಿ. ಜೂನ್ 25ರಂದು ಆಮಿನ ನುಸಾ ವಿಷ ಸೇವಿಸಿ ಗಂಭೀರಾವಸ್ಥೆಯಲ್ಲಿ ಪತ್ತೆಯಾಗಿದ್ದರು. ನಂತರ ಅವರನ್ನು ಚೆಂಗಳ ಇಂದಿರಾನಗರದ ಖಾಸಗಿ ಆಸ್ಪತ್ರೆಯಲ್ಲಿ ದಾಖಲಿಸಲಾಗಿತ್ತು. ಆರೋಗ್ಯ ಸ್ಥಿತಿ ಇನ್ನಷ್ಟು ಬಿಗಡಾಯಿಸಿದಾಗ ಅವರನ್ನು ಕಲ್ಲಿಕೋಟೆಯ ಖಾಸಗಿ ಆಸ್ಪತ್ರೆ ಯೊಂದಕ್ಕೆ ಸಾಗಿಸಿ ಉನ್ನತ ಮಟ್ಟದ ಚಿಕಿತ್ಸೆ …

ಡೆಂಗ್ಯೂ ಜ್ವರ ಬಾಧಿಸಿ ಯುವತಿ ಮೃತ್ಯು: ಕುಂಬಳೆಯಲ್ಲಿ ಆರೋಗ್ಯಾಧಿಕಾರಿಗಳಿಂದ ಮುಂಜಾಗ್ರತೆ ಕ್ರಮ

ಕುಂಬಳೆ: ಡೆಂಗ್ಯೂ ಜ್ವರ ಬಾಧಿಸಿ ಯುವತಿಯೋರ್ವೆ ಮೃತಪಟ್ಟ ಹಿನ್ನೆಲೆಯಲ್ಲಿ ಕುಂಬಳೆಯಲ್ಲಿ ಆರೋ ಗ್ಯಾಧಿಕಾರಿಗಳು ಮುಂಜಾಗ್ರತಾ ಕ್ರಮ ಕೈಗೊಂಡಿದ್ದಾರೆ. ಇದರಂಗವಾಗಿ ಮೃತಪಟ್ಟ ಯುವತಿಯ ಮನೆಗೆ ಭೇಟಿ ನೀಡಿ  ಮಾಹಿತಿ ಸಂಗ್ರಹಿಸಿದ್ದಾರೆ. ಅಲ್ಲದೆ ಮನೆ ಹಾಗೂ ಪರಿಸರ ಪ್ರದೇಶವನ್ನು ಶುಚಿಯಾಗಿಡುವಂತೆ ಆರೋಗ್ಯಾಧಿಕಾರಿಗಳು ಸಾರ್ವಜನಿ ಕರಿಗೆ ಕರೆ ನೀಡಿದ್ದಾರೆ. ಆರಿಕ್ಕಾಡಿ ಜೋಡುಗುಳಿ ಎಂಬಲ್ಲಿನ ಮಾಧವ-ಸಂಧ್ಯಾ ದಂಪತಿಯ ಪುತ್ರಿ ಪಯಸ್ವಿನಿ(22) ಡೆಂಗ್ಯೂಜ್ವರ ಬಾಧಿಸಿ ಮೃತಪಟ್ಟ ದುರ್ದೈವಿಯಾಗಿದ್ದಾರೆ. ಜ್ವರ ಬಾಧಿಸಿದ್ದ ಈಕೆಯನ್ನು ಎರಡು ದಿನಗಳ ಹಿಂದೆ  ಮಂಗಳೂರಿನ ಆಸ್ಪತ್ರೆಯಲ್ಲಿ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೆ ಶನಿವಾರ …

ನಿವೃತ್ತ ಜಿಲ್ಲಾ ವೈದ್ಯಾಧಿಕಾರಿ ಡಾ| ಯು.ಬಿ. ಕುಣಿಕುಳ್ಳಾಯ ನಿಧನ

ಕಾಸರಗೋಡು: ನಿವೃತ್ತ   ಡಿಎಂಒ ಡಾ. ಯು.ಬಿ. ಕುಣಿಕುಳ್ಳಾಯ (89) ನಿಧನ ಹೊಂದಿದರು. ಕಾಞಂಗಾಡ್ ಕುನ್ನುಮ್ಮಲ್‌ನಲ್ಲಿ ವಾಸಿಸುತ್ತಿದ್ದರು.  ಜಿಲ್ಲೆಯ ಹಿರಿಯ ಎಲುಬುರೋಗ ತಜ್ಞನಾಗಿದ್ದರು. ಮುಳ್ಳೇರಿಯ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ, ಕಲ್ಲಿಕೋಟೆ ಇಎಸ್‌ಐ ವೈದ್ಯಾಧಿಕಾರಿ, ಜಿಲ್ಲಾಸ್ಪತ್ರೆಯ ಸಿವಿಲ್ ಸರ್ಜನ್ ಮೊದಲಾದ ಹುದ್ದೆಗಳಲ್ಲಿ ಕರ್ತವ್ಯ ನಿರ್ವಹಿಸಿದ್ದರು. ಕೆಜಿಎಂಒಎ, ಕಾಞಂಗಾಡ್ ಐಎಂಎ, ಜಿಲ್ಲಾ ಆರ್ಥೋ ಕ್ಲಬ್ ಅಧ್ಯಕ್ಷರಾಗಿದ್ದರು. ಬದಿಯಡ್ಕದ ಉಬ್ರಂಗಳ ಇವರ ಜನ್ಮಸ್ಥಳವಾಗಿದ್ದು, ತರವಾಡು ಮನೆಯ ಹಿತ್ತಿಲಲ್ಲಿ ಸಂಸ್ಕಾರ ನಡೆಸಲಾಗಿದೆ. ಮೃತರು ಪತ್ನಿ ಡಾ| ಕೃಷ್ಣ ಕುಮಾರಿ, ಮಕ್ಕಳಾದ ಡಾ| ಸೀಮ …

ರಬ್ಬರ್ ಶೀಟ್ ನಿರ್ಮಾಣ ಘಟಕದಲ್ಲಿ ಬೆಂಕಿ ಅನಾಹುತ: ಭಾರೀ ನಾಶನಷ್ಟ

ನೆಕ್ರಾಜೆ: ಇಲ್ಲಿಗೆ ಸಮೀಪದ ಆಲಂಕೂಡ್ಲುನಲ್ಲಿ ರಬ್ಬರ್ ಶೀಟ್ ನಿರ್ಮಾಣ ಘಟಕಕ್ಕೆ ಇಂದು ಮುಂಜಾನೆ ಬೆಂಕಿ ತಗಲಿ ಭಾರೀ ನಷ್ಟ ಉಂಟಾಗಿದೆ. ಲಕ್ಷ್ಮೀಶ ಬಳ್ಳುಳ್ಳಾಯ ಎಂಬವರ ಮನೆ ಪಕ್ಕದಲ್ಲಿ ಕಾರ್ಯವೆಸಗುತ್ತಿರುವ ಘಟಕದಲ್ಲಿ ಈ ಬೆಂಕಿ ಅನಾಹುತ ಸಂಭವಿಸಿದೆ. ರಬ್ಬರ್ ಶೀಟ್‌ಗಳು, ಬಾಗಿಲುಗಳು ಮತ್ತಿತರ ಸಾಮಗ್ರಿಗಳು ಬೆಂಕಿಗಾಹುತಿಯಾಗಿವೆ. ಇದರಿಂದ ಸುಮಾರು ಎರಡು ಲಕ್ಷ ರೂ. ತನಕ ನಷ್ಟ ಉಂಟಾಗಿದೆ ಎಂದು ಈ ಘಟಕದ ಮಾಲಕರು ತಿಳಿಸಿದ್ದಾರೆ. ಬೆಂಕಿ ತಗಲಿದ ಬಗ್ಗೆ ನೀಡಲಾದ ಮಾಹಿತಿಯಂತೆ ಕಾಸರಗೋಡು ಅಗ್ನಿಶಾಮಕ ದಳ  ಸ್ಥಳಕ್ಕೆ ಆಗಮಿಸಿ …

ಅನಧಿಕೃತವಾಗಿ ಕೆಂಪುಕಲ್ಲು ಗಣಿಗಾರಿಕೆ, ಸಾಗಾಟ: ಪೈವಳಿಕೆ ಪಂ. ಸದಸ್ಯ, ಡಿವೈಎಫ್‌ಐ ನೇತಾರನ ವಿರುದ್ಧ ವಿಟ್ಲದಲ್ಲಿ ಕೇಸು ದಾಖಲು

ಕುಂಬಳೆ: ಅನಧಿಕೃತವಾಗಿ ಕೆಂಪುಕಲ್ಲು ಗಣಿಗಾರಿಕೆ ಹಾಗೂ ಕೆಂಪುಕಲ್ಲು, ಕೆಂಪುಮಣ್ಣು ಸಾಗಾಟ ಪ್ರಕರಣಕ್ಕೆ ಸಂಬಂಧಿಸಿ ಡಿವೈಎಫ್‌ಐ ನೇತಾರನೂ, ಪೈವಳಿಕೆ ಪಂಚಾಯತ್ ಸದಸ್ಯನಾದ ಜೆಕ್ಕಿ ಯಾನೆ ಸಕರಿಯ ವಿರುದ್ಧ ದಕ್ಷಿಣಕನ್ನಡ ಜಿಲ್ಲೆಯ ವಿಟ್ಲ ಪೊಲೀಸರು ಕೇಸು ದಾಖಲಿಸಿಕೊಂಡಿ ದ್ದಾರೆ. ಗಣಿಗಾರಿಕೆಗಾಗಿ ಉಪಯೋಗಿ ಸಿದ ಯಂತ್ರೋಪಕರಣಗಳು, ವಾಹನಗಳು ಮೊದಲಾದವುಗಳನ್ನು ಪೊಲೀಸರು ವಶಕ್ಕೆ ತೆಗೆದುಕೊಂಡಿ ದ್ದಾರೆ. ಬಂಟ್ವಾಳ ತಾಲೂಕಿನ ಕರೋಪಾಡಿ ಗ್ರಾಮದ ಮುಗುಳಿ ಎಂಬಲ್ಲಿ ಭಾರೀ ಪ್ರಮಾಣದಲ್ಲಿ ಅನಧಿಕೃತವಾಗಿ ಗಣಿಗಾರಿಕೆ ನಡೆಯುತ್ತಿದ್ದು ಅಲ್ಲಿಂದ ಕೆಂಪುಕಲ್ಲು ಹಾಗೂ ಕೆಂಪು ಮಣ್ಣು ವ್ಯಾಪಕವಾಗಿ ಸಾಗಾಟ ನಡೆಸುತ್ತಿದೆಯೆಂಬ …