ಎದೆಹಾಲು ಗಂಟಲಲ್ಲಿ ಸಿಲುಕಿ 50 ದಿನ ಪ್ರಾಯದ ಮಗು ಮೃತ್ಯು

ಕುಂಬಳೆ: ಎದೆಹಾಲು ಗಂಟಲಲ್ಲಿ ಸಿಲುಕಿದ ಹಿನ್ನೆಲೆಯಲ್ಲಿ 50ದಿವಸ ಪ್ರಾಯದ ಮಗು ಮೃತಪಟ್ಟ ಘಟನೆ ನಡೆದಿದೆ. ಕುಂಬಳೆ ಪೊಲೀಸ್ ಠಾಣೆ ವ್ಯಾಪ್ತಿಯ ಮೊಗ್ರಾಲ್, ಪೇರಾಲು ಮಡಿಮೊಗರು ನಿವಾಸಿ ಮುಹಮ್ಮದ್ ರಾಹಿದ್- ಮರಿಯಮ್ಮತ್ ಸಾಬಿರ ದಂಪತಿ ಪುತ್ರ ಲಸಿನ್ ಇಮಾತ್ ಮೃತಪಟ್ಟ ಮಗು. ನಿನ್ನೆ ರಾತ್ರಿ ಘಟನೆ ನಡೆದಿದೆ. ಅಸ್ವಸ್ಥ ಸ್ಥಿತಿಯಲ್ಲಿ ಮಗುವನ್ನು ಜನರಲ್ ಆಸ್ಪತ್ರೆಗೆ ತಲುಪಿಸಲಾಯಿತಾದರೂ ಜೀವ ರಕ್ಷಿಸಲು ಸಾಧ್ಯವಾಗಲಿಲ್ಲ. ಮೃತದೇಹವನ್ನು ಜನರಲ್ ಆಸ್ಪತ್ರೆಯ ಶವಾಗಾರದಲ್ಲಿರಿಸಲಾಗಿದೆ. ಮೃತ ಮಗು ಸಹೋದರ ಸಯಾನ್ ಹಾಗೂ ತಂದೆ, ತಾಯಿಯನ್ನು ಅಗಲಿದೆ. ಇತ್ತೀಚೆಗೆ …

75.11 ಗ್ರಾಂ ಎಂಡಿಎಂಎ ಪತ್ತೆ: ಓರ್ವ ಸೆರೆ

ಕಾಸರಗೋಡು: ಕಾಸರಗೋಡು  ಎಕ್ಸೈಸ್ ಎನ್‌ಫೋರ್ಸ್‌ಮೆಂಟ್  ಆಂಡ್ ಆಂಟಿ ನಾರ್ಕೋಟಿಕ್ಸ್ ಸ್ಪೆಷಲ್ ಸ್ಕ್ವಾಡ್‌ನ ಸರ್ಕಲ್ ಇನ್‌ಸ್ಪೆಕ್ಟರ್ ಸಂತೋಷ್ ನೇತೃತ್ವದ ಅಬಕಾರಿ ತಂಡ ಪೆರಿಯ ತಾನ್ನೋಟ್ ಕಲಾಂನಗರದ ವಸತಿಗೃಹವೊಂದಕ್ಕೆ ನಡೆಸಿದ ದಾಳಿಯಲ್ಲಿ  ಮಾದಕದ್ರವ್ಯ ವಾದ 75.11 ಗ್ರಾಂ ಎಂಡಿಎಂಎ ಪತ್ತೆಹಚ್ಚಿ ವಶಪಡಿಸಿಕೊಂಡಿದೆ. ಇದಕ್ಕೆ ಸಂಬಂಧಿಸಿ  ಕೊಳತ್ತೂರು ಗ್ರಾಮದ ಮಂಜನಡ್ಕ ನಿವಾಸಿ ಅಬ್ದುಲ್ ಶರೀಫ್ ಕೆ ನನ್ನು ಬಂಧಿಸಿ ಪ್ರಕರಣ ದಾಖಲಿಸಲಾಗಿದೆ. ಈ ಕಾರ್ಯಾಚರಣೆ ನಡೆಸಿದ ತಂಡದಲ್ಲಿ ಎಕ್ಸೈಸ್ ಇನ್‌ಸ್ಪೆಕ್ಟರ್ ವಿಷ್ಣುಪ್ರಕಾಶ್, ಅಸಿ. ಎಕ್ಸೈಸ್ ಇನ್‌ಸ್ಪೆಕ್ಟರ್  ಸಿಕೆವಿ ಸುರೇಶ್ ಮತ್ತು ಇತರ …

ದುರಸ್ತಿಗಾಗಿ ತಂದು ಹಾಸಿದ ಜಲ್ಲಿಕಲ್ಲುಗಳು: ಕೋಟೆಕಣಿ ರಸ್ತೆಯಲ್ಲಿ ಸಂಚಾರಕ್ಕೆ ಸಮಸ್ಯೆ

ಕಾಸರಗೋಡು: ರಸ್ತೆ ದುರಸ್ತಿಗೆ ಚಾಲನೆ ನೀಡಿದಾಗ ಅದು ಸ್ಥಳೀಯರ ಸಂಚಾರಕ್ಕೇ ಸಮಸ್ಯೆ ತಂದಿತ್ತ ಘಟನೆ ಕೋಟೆಕಣಿಯಲ್ಲಿ ಸಂಭವಿಸಿದೆ. ಇಲ್ಲಿನ ಕ್ರಾಸ್‌ರೋಡ್ ದುರಸ್ತಿಗಾಗಿ ಕಾಮಗಾರಿ ಆರಂಭಿಸಲಾಗಿದ್ದು, ಆದರೆ ಅರ್ಧದಲ್ಲೇ ಮೊಟಕುಗೊಳಿಸಿದ ಹಿನ್ನೆಲೆಯಲ್ಲಿ ಈಗ ಸಂಚಾರ ಸಮಸ್ಯೆ ಸೃಷ್ಟಿಯಾಗಿದೆ. ಕಳೆದ ಹಲವು ದಿನಗಳಿಂದ ರಸ್ತೆಗೆ ದೊಡ್ಡಗಾತ್ರದ ಜಲ್ಲಿಗಳನ್ನು ತಂದು ಹಾಕಲಾಗಿದ್ದು, ಅದಕ್ಕೆ ಕಲ್ಲಿನ ಹುಡಿಯನ್ನು ಕೂಡಾ ಬೆರೆಸಲಾಗಿದೆ. ಇದು ಸಂಚಾರ ಸಮಸ್ಯೆಯನ್ನು ಸೃಷ್ಟಿಸಿದ ಜೊತೆಯಲ್ಲೇ ಸ್ಥಳೀಯರಿಗೆ ಧೂಳಿನ ಸಮಸ್ಯೆಯನ್ನೂ ಉಂಟುಮಾಡಿದೆ. ಈ ಪರಿಸರದ ಮನೆಗಳ ಗೋಡೆಗಳಲ್ಲಿ ಈಗ ಧೂಳು ತುಂಬಿಕೊಂಡಿದ್ದು, …

ಮಂಗಳೂರು-ತಿರುವನಂತಪುರ ತೃತೀಯ ರೈಲುಹಳಿ ಯೋಜನೆ ಸಾಕಾರದತ್ತ

ಕಾಸರಗೋಡು: ಮಂಗಳೂರಿನಿಂದ ಕಾಸರಗೋಡು ಮೂಲಕ ತಿರುವನಂತಪುರದ ತನಕ ತೃತೀಯ ರೈಲು ಹಳಿ ಯೋಜನೆ ಶೀಘ್ರ ಸಾಕಾರಗೊಳ್ಳಲಿದೆ ಎಂದು ದಕ್ಷಿಣ ರೈಲ್ವೇಯ ಹೆಚ್ಚುವರಿ ಜನರಲ್ ಮೆನೇಜರ್ ವಿಪಿನ್ ಕುಮಾರ್ ಹೇಳಿದ್ದಾರೆ. ಇದಕ್ಕಿರುವ ಸಮಗ್ರ ಯೋಜನಾ ವರದಿ (ಡಿಪಿಆರ್)ಯನ್ನು ಈಗ ತಯಾರಿಸಲಾಗುತ್ತಿದ್ದು, ಅದು ಪೂರ್ಣಗೊಂಡ ಬಳಿಕ ಹಳಿ ನಿರ್ಮಾಣ ಕೆಲಸ ಆರಂಭಗೊಳ್ಳಲಿದೆ ಎಂದೂ ಅವರು ತಿಳಿಸಿದ್ದಾರೆ. ತೃತೀಯ ರೈಲ್ವೇ ಹಳಿ ನಿರ್ಮಾಣ ಕೇರಳಕ್ಕೆ ಅತೀ ಅಗತ್ಯವಾಗಿದೆ. ಈ ಯೋಜನೆಯ ನಿರ್ಮಾಣ ಕೆಲಸ ಪೂರ್ಣಗೊಂಡಲ್ಲಿ ಕೇರಳದ ರೈಲು ಯಾತ್ರಾ ಕ್ಲೇಶಕ್ಕೆ ಗರಿಷ್ಠ …

ವಿಪಕ್ಷ ಮುಖಂಡ ವಿ.ಡಿ. ಸತೀಶನ್‌ರ ಯಾತ್ರೆ ಯಶಸ್ವಿಗೆ ಕಾಂಗ್ರೆಸ್ ನಾಯಕತ್ವ ನಿರ್ಧಾರ

ಕಾಸರಗೋಡು: ವಿಪಕ್ಷ ಮುಖಂಡ ವಿ.ಡಿ. ಸತೀಶನ್ ನೇತೃತ್ವ ನೀಡುವ ಯಾತ್ರೆಯನ್ನು ಯಶಸ್ವಿಗೊಳಿಯಲು ಜರಗಿದ ಸಭೆಯನ್ನು ಸಂಸದ ರಾಜ್‌ಮೋಹನ್ ಉಣ್ಣಿತ್ತಾನ್ ಉದ್ಘಾಟಿಸಿದರು. ಡಿಸಿಸಿ ಕಚೇರಿಯಲ್ಲಿ ಜರಗಿದ ಸಭೆಯಲ್ಲಿ ಅಧ್ಯಕ್ಷ ಪಿ.ಕೆ. ಫೈಸಲ್ ಅಧ್ಯಕ್ಷತೆ ವಹಿಸಿದರು. ಪ್ರಧಾನ ಕಾರ್ಯದರ್ಶಿ ಎಂ.ಸಿ. ಪ್ರಭಾಕರನ್ ಸ್ವಾಗತಿಸಿದರು. ಕೆಪಿಸಿಸಿ ಪ್ರಧಾನ ಕಾರ್ಯದರ್ಶಿಗಳಾದ ಕೆ. ನೀಲಕಂಠನ್, ಹಕೀಂ ಕುನ್ನಿಲ್, ಐಕ್ಯರಂಗ ಜಿಲ್ಲಾ ಸಂಚಾಲಕ ಎ. ಗೋವಿಂದನ್ ನಾಯರ್, ಸೋಮಶೇಖರ ಶೇಣಿ ಸಹಿತ ಹಲವಾರು ಮುಖಂಡರು ಮಾತನಾಡಿದರು. ಕುಂಬಳೆಯಲ್ಲಿ ನಡೆಯುವ ಉದ್ಘಾಟನಾ ಕಾರ್ಯಕ್ರಮ, ಕಾಸರಗೋಡು, ಉದುಮ, ಕಾಞಂಗಾಡ್, …

ಕೆಎಸ್‌ಆರ್‌ಟಿಸಿ ಬಸ್‌ಗೆ ಸಂಚಾರ ತಡೆ ಸೃಷ್ಟಿಸಿ ಕಾರು ಚಾಲಕನ ಅಪಾಯಕರ ಸಂಚಾರ

ಕಾಸರಗೋಡು: ಕೆಎಸ್‌ಆರ್‌ಟಿಸಿ ಬಸ್‌ಗೆ ಮಾರ್ಗತಡೆ ಸೃಷ್ಟಿಸಿ ಗಂಟೆಗಳ ಕಾಲ ಕಾರು ಚಾಲಕ ಅಪಾಯಕರವಾದ ರೀತಿಯಲ್ಲಿ ಪ್ರಯಾಣಿಸಿದ ಬಗ್ಗೆ ದೂರಲಾಗಿದೆ. ಕಾಸರಗೋಡಿನಿಂದ ಕೋಟಯಂಗೆ ಹೊರಟ ಸ್ವಿಪ್ಟ್ ಬಸ್‌ಗೆ ಓವರ್‌ಟೇಕ್ ಮಾಡಲು ಸಾಧ್ಯವಾಗದ ಸ್ಥಿತಿಯಲ್ಲಿ ಕಾರನ್ನು ಚಲಾಯಿಸಿ ಈತ ಮಾರ್ಗತಡೆ ಸೃಷ್ಟಿಸಿದ್ದಾನೆನ್ನಲಾಗಿದೆ. ಇದರ ದೃಶ್ಯಗಳು ಬಹಿರಂಗಗೊಂಡಿರುವುದರೊಂದಿಗೆ ಟೀಕೆಗಳು ವ್ಯಕ್ತವಾಗಿವೆ. ಬಸ್ ಕಾರನ್ನು ಓವರ್‌ಟೇಕ್ ಮಾಡಲು ಯತ್ನಿಸಿರುವುದೇ ಕಾರುಚಾಲಕನಿಗೆ ದ್ವೇಷ ಉಂಟಾಗಲು ಕಾರಣವೆನ್ನಲಾಗಿದೆ. ಉದುಮದಿಂದ 7 ಕಿಲೋ ಮೀಟರ್‌ವರೆಗೆ ಬಸ್‌ಗೆ ಮುಂದಕ್ಕೆ ಚಲಿಸಲು ಈತ ಅವಕಾಶ ನೀಡಲಿಲ್ಲ.  ನಿರಂತರ ಹಾರ್ನ್ ಮೊಳಗಿಸಿದರೂ …

ತಂದೆಯ ಇರಿತದಿಂದ ಮುದ್ದಿನ ಮಗಳು ಬಲಿ; ಗಾಯಗೊಂಡಿದ್ದ ಸಂಬಂಧಿಕನೂ ಮೃತ್ಯು, ಅವಳಿ ಕೊಲೆಯಿಂದ ಶೋಕ ಸಾಗರವಾದ ತೂಮಿನಾಡು

ಉಪ್ಪಳ: ತಂದೆಯ ಇರಿತದಿಂದ ಮುದ್ದಿನ ಮಗಳು ಸಾವಿಗೀಡಾದ ಘಟನೆಯಿಂದ ನಾಡು ಶೋಕಸಾಗರದಲ್ಲಿ ಮುಳುಗಿರುವಂತೆಯೇ   ಇರಿತದಿಂದ ಗಾಯಗೊಂಡು ಮಂಗಳೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆಯಲ್ಲಿದ್ದ ಸಂಬಂಧಿಕನೂ ಮೃತಪಟ್ಟ ಘಟನೆ ನಡೆದಿದೆ. ಒಟ್ಟಾರೆಯಾಗಿ ಅವಳಿ ಕೊಲೆ ನಡೆದ ತೂಮಿನಾಡು ಹಾಗೂ ಪರಿಸರ ಪ್ರದೇಶಗಳಲ್ಲಿ ಶೋಕಸಾಗರ  ಸೃಷ್ಟಿಯಾಗಿದೆ.  ಘಟನೆ ಸ್ಥಳಕ್ಕೆ ಸಂಬಂಧಿಕರು, ನಾಗರಿಕರು ಸಹಿತ ಭಾರೀ ಸಂಖ್ಯೆಯಲ್ಲಿ ಜನರು ತಲುಪುತ್ತಿದ್ದು ಇಡೀ ನಾಡೇ ದುಃಖದಲ್ಲಿ ಮುಳುಗಿದೆ. ಮಂಜೇಶ್ವರ ತೂಮಿನಾಡು ಹಿಲ್‌ಟಾಪ್ ನಗರದಲ್ಲಿ ನಿನ್ನೆ ಸಂಜೆ ಈ ಭೀಕರ  ಘಟನೆ ನಡೆದಿದೆ. ಈ ಸಂಬಂಧ ಮೂಲತಃ …

ಕುಂಬ್ಡಾಜೆ ಪಂಚಾಯತ್‌ನಲ್ಲಿ ಮಿಷನ್-2026ಕ್ಕೆ ಚಾಲನೆ

ಕುಂಬ್ಡಾಜೆ?:ಪಂಚಾಯತ್ ಮತ್ತು ಕುಟುಂಬ ಆರೋಗ್ಯ ಕೇಂದ್ರದಲ್ಲಿ ಆರು ಗುರಿಗಳನ್ನು ಸಾಧಿಸುವ ಮಿಷನ್ ೨೦೨೬ಕ್ಕೆ ಚಾಲನೆ ನೀಡಲಾಯಿತು. ಕುಂಬ್ಡಾಜೆ ಪಂಚಾಯತ್ ವ್ಯಾಪ್ತಿ ಯಲ್ಲಿರುವ ಏಳು ಶಾಲಾ ಆವರಣಗಳನ್ನು ತಂಬಾಕುಮುಕ್ತಗೊಳಿಸಲಾಗುವುದು, ಪಾಲಿಯೇಟಿವ್ ಕೇರ್ ಪಡೆಯುವ ರೋಗಿಗಳು ಮತ್ತು ನಿರ್ಗತಿಕ ರೋಗಿಗಳಿಗೆ ಸಾಂತ್ವನ ನೀಡಲು ಜನರ ಸಹಾಯ ಸಮಿತಿ ರಚಿಸಲಾಗುವುದು, ಮಲೇರಿಯ ತಡೆಗಟ್ಟುವ ಚಟುವಟಿಕೆಗಳಿಗಾಗಿ 14 ವಾರ್ಡ್‌ಗಳಲ್ಲಿ ಆರೋಗ್ಯ ಸ್ವಯಂ ಸೇವಕರನ್ನು ಆಯ್ಕೆ ಮಾಡಲಾಗುವುದು.  ಕುಂಬ್ಡಾಜೆ ಪಂಚಾಯತ್‌ನ್ನು ಕ್ಷಯಮುಕ್ತ ಪಂಚಾಯತ್ ಮಾಡಲಾಗುವುದು,  ಮೊದಲಾದ ಕಾರ್ಯಗಳಿಗೆ ಗುರಿ ಇರಿಸಲಾಗಿದೆ. ಈ ಕುರಿತು ಕುಂಬ್ಡಾಜೆ …

ಬೀದಿನಾಯಿಗಳ ಉಪಟಳಕ್ಕೆ ಕಠಿಣ ಕ್ರಮ- ಬದಿಯಡ್ಕ ಪಂ. ಅಧ್ಯಕ್ಷ

ಬದಿಯಡ್ಕ: ಬೀದಿನಾಯಿಗಳ ಕಾಟವನ್ನು ತಡೆಯುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಲಾಗುವುದು ಎಂದು ಬದಿಯಡ್ಕ ಪಂಚಾಯತ್ ಅಧ್ಯಕ್ಷ ಶಂಕರ ಡಿ. ತಿಳಿಸಿದ್ದಾರೆ. ವಿವಿಧ ವಾರ್ಡ್‌ಗಳ ಸದಸ್ಯರಿಂದ ಮಾಹಿತಿ ಪಡೆದುಕೊಂಡು ಅವರು ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ಮಾತುಕತೆ ನಡೆಸಿ ಸೂಕ್ತ ತೀರ್ಮಾನ ಕೈಗೊಳ್ಳು ವುದಕ್ಕೆ ಸೂಚಿಸಿದರು. ಕುಂಟಿಕಾನ ಚೆನ್ನೆಗುಳಿಯಲ್ಲಿ ಬೀದಿನಾಯಿಗಳ ಆಕ್ರಮಣದಿಂದ, ಶಾಲಾ ಮಕ್ಕಳು, ಜನರು ಭಯಭೀತರಾಗಿದ್ದರು. ಈ ಹಿನ್ನೆಲೆಯಲ್ಲಿ ಚೆನ್ನೆಗುಳಿಯಲ್ಲಿ ನಡೆದ ಸಭೆಯಲ್ಲಿ ಅವರು ಮಾತನಾಡಿ, ಸಾಕುನಾಯಿಗಳನ್ನು ಕಟ್ಟಿಹಾಕುವಂತೆ ಜನರಲ್ಲಿ ಮನವಿ ಮಾಡಿದರು. ವಾರ್ಡ್ ಪ್ರತಿನಿಧಿ ಅನ್ನತ್ ಬೀವಿ, ಪೊಲೀಸ್ ಅಧಿಕಾರಿಗಳು, …

ಜಿಲ್ಲೆಯಲ್ಲಿ ಪೊಲೀಸ್, ಅಬಕಾರಿ ತಂಡದಿಂದ ಕಾರ್ಯಾಚರಣೆ: ಭಾರೀ ಪ್ರಮಾಣದ ಮಾದಕದ್ರವ್ಯ, ಗಾಂಜಾ ವಶ; ಮೂವರ ಸೆರೆ

ಕಾಸರಗೋಡು: ಜಿಲ್ಲೆಯಲ್ಲಿ ಪೊಲೀಸರು ಮತ್ತು ಅಬಕಾರಿ ತಂಡ ಪ್ರತ್ಯೇಕವಾಗಿ ನಡೆಸಿದ ಮೂರು ಕಾರ್ಯಾಚರಣೆಗಳಲ್ಲಾಗಿ ಭಾರೀ ಪ್ರಮಾಣದ ಮಾದಕದ್ರವ್ಯ ಹಾಗೂ ಗಾಂಜಾ ವಶಪಡಿಸಿಕೊಳ್ಳಲಾಗಿದೆ. ಜಿಲ್ಲಾ ವರಿಷ್ಠ ಪೊಲೀಸ್ ಅಧಿಕಾರಿಯವರ ನಿರ್ದೇಶ ಪ್ರಕಾರ ಜಿಲ್ಲೆಯ ಮಾದಕದ್ರವ್ಯ ಪತ್ತೆ ಸ್ಕ್ವಾಡ್ ಮತ್ತು ಕುಂಬಳೆ ಪೊಲೀಸರು ಮಂಗಲ್ಪಾಡಿ ಸೋಂಕಾಲ್‌ನಲ್ಲಿ ನಡೆಸಿದ ಕಾರ್ಯಾಚರಣೆಯಲ್ಲಿ ವಾಹನವೊಂದರಲ್ಲಿ ಸಾಗಿಸುತ್ತಿದ್ದ 54 ಗ್ರಾಂ ಎಂಡಿಎಂಎ ಪತ್ತೆಹಚ್ಚಲಾಗಿದೆ. ಇದಕ್ಕೆ ಸಂಬಂಧಿಸಿ ಮಂಗಲ್ಪಾಡಿ ಅಂಬಾರ್‌ಪಳ್ಳಂ ನಿವಾಸಿ ಇದ್ದೀನ್ ಕುಂಞಿ ಯಾನೆ ಇರ್ಷಾದ್ (34) ಎಂಬಾತನನ್ನು ವಾಹನ ಸಹಿತ ಬಂಧಿಸಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. …