ಕುಂಬಳೆ ಭಾಸ್ಕರನಗರದಲ್ಲಿ ಕಾರು ಅಪಘಾತ: ಪ್ರಯಾಣಿಕರು ಅಪಾಯದಿಂದ ಪಾರು

ಕುಂಬಳೆ: ಕುಂಬಳೆ-ಮುಳ್ಳೇರಿಯ ಕೆಎಸ್‌ಟಿಪಿ ರಸ್ತೆಯ ಭಾಸ್ಕರ ನಗರದಲ್ಲಿ ಮತ್ತೆ ವಾಹನ ಅಪಘಾತ ಸಂಭವಿಸಿದೆ.   ನಿಯಂತ್ರಣ ತಪ್ಪಿದ ಕಾರು ರಸ್ತೆ ಬದಿಯ ಜಲಪ್ರಾಧಿಕಾರದ ಪೈಪಿಗೆ ಢಿಕ್ಕಿ ಹೊಡೆ ದಿದೆ. ಇದರಿಂದ  ಕಾರಿನ ಮುಂಭಾಗ ಪೂರ್ಣವಾಗಿ ಹಾನಿಗೀಡಾಗಿದೆ. ಕಾರಿ ನಲ್ಲಿದ್ದ  ಮುಳ್ಳೇರಿಯ ನಿವಾಸಿಗಳಾದ ಪ್ರಯಾಣಿಕರು ಅದೃಷ್ಟವಶಾತ್ ಅಪಾಯದಿಂದ ಪಾರಾಗಿದ್ದಾರೆ. ನಿನ್ನೆ ಮಧ್ಯಾಹ್ನ ವೇಳೆ ಅಪ ಘಾತವುಂಟಾಗಿದೆ. ಮುಳ್ಳೇರಿಯದಿಂದ  ಕುಂಬಳೆ ಭಾಗಕ್ಕೆ ತೆರಳುತ್ತಿದ್ದ ಕಾರು ಭಾಸ್ಕರ ನಗರಕ್ಕೆ ತಲುಪುತ್ತಿದ್ದಂತೆ ನಿಯಂತ್ರಣ ಕಳೆದುಕೊಂಡು ಅಪ ಘಾತಕ್ಕೀಡಾಗಿದೆ.  ಈ ಹಿಂದೆಯೂ ಇದೇ ಸ್ಥಳದಲ್ಲಿ ಹಲವು …

ಲಾರಿಯಲ್ಲಿ ಸಾಗಿಸುತ್ತಿದ್ದ 7 ಸಾವಿರ ಲೀಟರ್ ಸ್ಪಿರಿಟ್ ವಶ

ಕಣ್ಣೂರು: ಲಾರಿಯಲ್ಲಿ ಸಾಗಿಸುತ್ತಿದ್ದ 7 ಸಾವಿರ ಲೀಟರ್ ಸ್ಪಿರಿಟ್ ಅಬಕಾರಿ ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ. ಈ ಸಂಬಂಧ   ಓರ್ವನನ್ನು ಸೆರೆಹಿಡಿ ಯ ಲಾಗಿದೆ. ಅಡೂರ್ ನಿವಾಸಿ ಅಖಿಲ್ ಎಂಬಾತ  ಸೆರೆಗೀಡಾದ ವ್ಯಕ್ತಿಯಾಗಿದ್ದಾನೆ. ಪೆರುಂಬ ರಾಷ್ಟ್ರೀಯ ಹೆದ್ದಾರಿಯಲ್ಲಿ ಪಯ್ಯನ್ನೂರು ಅಬಕಾರಿ ರೇಂಜ್ ಇನ್‌ಸ್ಪೆಕ್ಟರ್  ವೈಶಾಖ್‌ರ ನೇತೃತ್ವದ ತಂಡ ನಡೆಸಿದ ಕಾರ್ಯಾ ಚರಣೆ ವೇಳೆ ಸ್ಪಿರಿಟ್ ಹೇರಿದ ಲಾರಿ ಆಗಮಿಸಿತ್ತು.  ಮಂಗಳೂರಿನಿಂದ ಅಡೂರ್‌ನತ್ತ ತೆರಳುತ್ತಿದ್ದ   ಲಾರಿಯನ್ನು ಅಬಕಾರಿ ಅಧಿಕಾರಿಗಳು ತಪಾಸಣೆ ನಡೆಸಿದಾಗ ೨೦೦ ಕ್ಯಾನ್‌ಗಳಲ್ಲಾಗಿ ಸ್ಪಿರಿಟ್ ತುಂಬಿಸಿಟ್ಟಿ ರುವುದು ಪತ್ತೆಯಾಗಿದೆ.  ಓಣಂ …

ಕಾಸರಗೋಡು ಎಸ್‌ಎಂಎಸ್ ಡಿವೈಎಸ್‌ಪಿಯಾಗಿ ಉತ್ತಮ್‌ದಾಸ್ ಅಧಿಕಾರ ಸ್ವೀಕಾರ

ಕಾಸರಗೋಡು: ಜಿಲ್ಲಾ ಸ್ಪೆಷಲ್ ಮೊಬೈಲ್ ಸ್ಕ್ವಾಡ್ ಡಿವೈಎಸ್‌ಪಿ ಆಗಿ ಟಿ. ಉತ್ತಮ್‌ದಾಸ್ ಅಧಿಕಾರ ಸ್ವೀಕರಿಸಿದರು. ಕಲ್ಲಿಕೋಟೆ ರೂರಲ್ ನಾರ್ಕೋಟಿಕ್ ಸೆಲ್ ಆಂಡ್ ಜೆಂಟರ್ ಜಸ್ಟೀಸ್ ವಿಭಾಗ ಡಿವೈಎಸ್‌ಪಿಯಾಗಿರು ವಾಗ ಅವರಿಗೆ ಕಾಸರಗೋಡಿಗೆ ವರ್ಗಾವಣೆ ಲಭಿಸಿದೆ. ಬೇಕಲ, ವಿದ್ಯಾನಗರ, ಕಾಸರಗೋಡು ನಗರ ಪೊಲೀಸ್ ಠಾಣೆಗಳಲ್ಲಿ ಪ್ರಿನ್ಸಿಪಲ್ ಎಸ್‌ಐ ಆಗಿಯೂ, ಬೇಡಡ್ಕ, ಮೇ ಲ್ಪರಂಬ ಠಾಣೆಗಳಲ್ಲಿ ಇನ್ಸ್‌ಪೆಕ್ಟರ್ ಆಗಿಯೂ, ಜಿಲ್ಲಾ ಕ್ರೈಮ್ ಬ್ರಾಂಚ್ ಡಿವೈಎಸ್‌ಪಿ ಆಗಿಯೂ ಕರ್ತವ್ಯ ನಿರ್ವಹಿಸಿದ್ದರು. 2025ರಲ್ಲಿ ಮುಖ್ಯ ಮಂತ್ರಿಯ ಪೊಲೀಸ್ ಮೆಡಲ್, ಡಿಜಿಪಿಯ ಬ್ಯಾಡ್ಜ್ ಆರ್ಡರ್ …

ಸಾರಿಗೆ ಪರಿಷ್ಕರಣೆ: ಪೊಲೀಸ್, ಎಂವಿಡಿ ವಿರುದ್ಧ ಕುಂಬಳೆ ಪಂ. ಅಧ್ಯಕ್ಷರಿಂದ ಗೃಹ ಸಚಿವರಿಗೆ ದೂರು; ಕುಂಬಳೆಯಲ್ಲಿ ವಿವಾದ

ಕುಂಬಳೆ: ಕುಂಬಳೆ ಪೇಟೆಯಲ್ಲಿ ಪಂಚಾಯತ್ ಆಡಳಿತ ಸಮಿತಿಯ ಸಾರಿಗೆ ಪರಿಷ್ಕಾರವನ್ನು ಪೊಲೀಸ್ ಹಾಗೂ ಮೋಟಾರು ವಾಹನ ಇಲಾಖೆ ಸೇರಿ ಬುಡಮೇಲುಗೊಳಿಸು ತ್ತಿದೆಯೆಂದು ತಿಳಿಸಿ ಪಂಚಾಯತ್ ಅಧ್ಯಕ್ಷ ವಿ.ಪಿ. ಅಬ್ದುಲ್ ಖಾದರ್ ಹಾಜಿ ಹಾಗೂ ಆಡಳಿತ ಸಮಿತಿ ಗೃಹಖಾತೆ ಸಚಿವ ರಮೇಶ್ ಚೆನ್ನಿತ್ತಲರಿಗೆ ದೂರು ನೀಡಿರುವುದು ಕುಂಬಳೆಯಲ್ಲಿ ಹೊಸ ವಿವಾದವನ್ನು ಹುಟ್ಟುಹಾಕಿದೆ. ದೂರು ಸ್ವೀಕರಿಸಿದ ತಕ್ಷಣ ಸಚಿವ ರಮೇಶ್ ಚೆನ್ನಿತ್ತಲ ಎಸ್‌ಪಿಗೆ ಕರೆ ಮಾಡಿ ಸಮಸ್ಯೆಯಲ್ಲಿ ಮಧ್ಯಸ್ಥಿಕೆ ವಹಿಸುವಂತೆ ನಿರ್ದೇಶಿಸಿ ರುವುದಾಗಿ ಹೇಳಲಾಗುತ್ತಿದೆ. ಆದರೂ ಕ್ರಮ ಉಂಟಾಗಿಲ್ಲವೆನ್ನಲಾಗುತ್ತಿದೆ.   ಖಾಸಗಿ …

ಚಾಲಕ ಬಸ್‌ನೊಳಗೆ ನೇಣು ಬಿಗಿದು ಮೃತ್ಯು

ಕಲ್ಲಿಕೋಟೆ: ಖಾಸಗಿ ಬಸ್ ಚಾಲಕ ಬಸ್‌ನ ಒಳಗೆ ನೇಣು ಬಿಗಿದು ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದೆ. ಪೇರಾಂಬ್ರದಲ್ಲಿ ನಿಲುಗಡೆಗೊಳಿಸಿದ್ದ ಪೇರಾಂಬ್ರ- ವಡಗರ ರೂಟ್‌ನಲ್ಲಿ ಸಂಚರಿಸುವ ಬಸ್‌ನಲ್ಲಿ ಚಾಲಕ ಹರೀಶ್ (4೦) ನೇಣು ಬಿಗಿದ ಸ್ಥಿತಿಯಲ್ಲಿ ಕಂಡು ಬಂದಿದ್ದಾರೆ. ಕೆಲಸ ಮುಗಿಸಿ ನಿನ್ನೆ ರಾತ್ರಿ ಮನೆಗೆ ತಲುಪಲು ವಿಳಂಬವಾದ ಹಿನ್ನೆಲೆಯಲ್ಲಿ ಪತ್ನಿ ಆದಿರ ಫೋನ್ ಕರೆ ಮಾಡಿದ್ದರು. ಕೂಡಲೇ ತಲುಪುವುದಾಗಿಯೂ ಹರೀಶ್ ತಿಳಿಸಿದ್ದರು. ಆದರೆ ಬಳಿಕವೂ ಬಾರದ ಹಿನ್ನೆಲೆಯಲ್ಲಿ ಮತ್ತೆ ಫೋನ್ ಕರೆ ಮಾಡಿದಾಗ ಸ್ವೀಕರಿಸಿರಲಿಲ್ಲ. ಮುಂಜಾನೆ ಹರೀಶ್‌ರ ಸಹೋದರ …

ಸ್ಟ್ರೀಟ್ ವೆಂಡರ್ ಸೆಂಟ್ರಲೈಸ್ಡ್ ರಿಹಾಬಿಲಿಟೇಶನ್ ಯೋಜನೆ: ಭ್ರಷ್ಟಾಚಾರ ತನಿಖೆ ನಡೆಸಲು ಬಿಜೆಪಿ ಆಗ್ರಹ

ಕಾಸರಗೋಡು: ಕೇಂದ್ರ ಸರಕಾರದ ಯೋಜನೆಯಾದ ಸ್ಟ್ರೀಟ್ ವೆಂಡರ್ ಸೆಂಟ್ರಲೈಸ್‌ಡ್ ರಿಹಾಬಿಲಿಟೇಶನ್‌ನಂಗವಾಗಿ ಹೊಸ ಬಸ್ ನಿಲ್ದಾಣದಲ್ಲಿ ನಿರ್ಮಿಸಿದ ಅಂಗಡಿ ಸಮುಚ್ಚಯದ ದುರುಪಯೋಗ ನಡೆಯುತ್ತಿರುವ ಬಗ್ಗೆ ಸಮಗ್ರ ತನಿಖೆ ನಡೆಸಬೇಕು, ಅರ್ಹರಾದವರಿಗೆ ಮಾತ್ರವೇ ಅಂಗಡಿ ಲಭ್ಯಗೊಳಿಸಬೇಕು, ಅನರ್ಹವಾಗಿ ಸ್ವಾಧೀನಪಡಿಸಿರುವುದನ್ನು ಹೊರತುಪಡಿಸಿ ಕ್ರಮ ಕೈಗೊಳ್ಳಬೇಕು ಮೊದಲಾದ ಬೇಡಿಕೆಗಳನ್ನು ಮುಂದಿಟ್ಟು ಬಿಜೆಪಿ ನಗರಸಭಾ, ವೆಸ್ಟ್ ಮತ್ತು ಈಸ್ಟ್ ಕಮಿಟಿಗಳ ಸಂಯುಕ್ತ ತಂಡ ನಗರಸಭಾ ಕಾರ್ಯದರ್ಶಿ, ಉಪಾಧ್ಯಕ್ಷರನ್ನು ಭೇಟಿಯಾಗಿ ಮಾತುಕತೆ ನಡೆಸಿದೆ. ಈ ಯೋಜನೆಯಲ್ಲಿ ಭ್ರಷ್ಟಾಚಾರದ ಆರೋಪ ಕೇಳಿಬಂದಿದ್ದು, ಈ ಬಗ್ಗೆ ತನಿಖೆ ನಡೆಸಬೇಕೆಂದು …

ಬಾವಿಗೆ ಬಿದ್ದು ಯುವತಿ ಮೃತಪಟ್ಟ ಸ್ಥಿತಿಯಲ್ಲಿ ಪತ್ತೆ

ಕಾಸರಗೋಡು: ಕಾರಡ್ಕ ನಿವಾಸಿ ಯುವತಿ ಆವರಣಗೋಡೆಯಿಲ್ಲದ ಬಾವಿಗೆ ಬಿದ್ದು ಮೃತಪಟ್ಟ ಸ್ಥಿತಿಯಲ್ಲಿ ಪತ್ತೆ ಯಾಗಿದ್ದಾರೆ. ಮಡಿಕೈ ಚಾಳಕಡವ್ ಆಯುರ್ವೇದ ಆಸ್ಪತ್ರೆ ಸಮೀಪದ ನಿವಾಸಿ ಆಟೋ ಚಾಲಕ ಸುರೇಂದ್ರರ ಪತ್ನಿ ಸರಳ (46) ಮೃತಪಟ್ಟ ಯುವತಿ. ನಿನ್ನೆ ಸಂಜೆ ಘಟನೆ ನಡೆದಿದೆ. ಬಾವಿಯ ಒಂದು ಭಾಗ ಕುಸಿದ ಸ್ಥಿತಿಯಲ್ಲಿದೆ. ತೋಟದ ಬಳಿ ಇರುವ ಬಾವಿಯ ಪರಿಸರ ದಲ್ಲಿ ಚಪ್ಪಲಿ ಕಂಡ ಹಿನ್ನೆಲೆಯಲ್ಲಿ ನಡೆಸಿದ ತನಿಖೆಯಲ್ಲಿ ಯುವತಿ ಬಾವಿಯಲ್ಲಿ ಬಿದ್ದಿರುವುದು ಕಂಡು ಬಂದಿದೆ. ಆಯ ತಪ್ಪಿ ಬಿದ್ದಿರಬೇ ಕೆಂದು ಶಂಕಿಸಲಾಗಿದೆ. …

ಪ್ರಕೃತಿ ವಿಕೋಪ ವೇಳೆ ಸಹಾಯಹಸ್ತ ನೀಡಲು ಕಾಂಗ್ರೆಸ್ ಕಾರ್ಯಕರ್ತರಿಗೆ ಸೋಮಶೇಖರ ಕರೆ

ಪೈವಳಿಕೆ: ವಿಪರೀತ ಮಳೆಯಿಂ ದಾಗಿ ಪ್ರಾಕೃತಿಕ ವಿಕೋಪಗಳು ಸಂs ವಿಸಿದ್ದು, ಇಂತಹ ಸಂದರ್ಭಗಳಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಜಾಗರೂ ಕತೆಯಿಂದ ಜನರಿಗೆ ಅಗತ್ಯಗಳಿಗೆ ಸ್ಪಂದಿಸಲು ಸಿದ್ಧರಾಗಿರಬೇಕೆಂದು ಜಿಲ್ಲಾ ಪಂಚಾಯತ್ ಸದಸ್ಯ, ಜಿಲ್ಲಾ ಕಾಂಗ್ರೆಸ್ ಕಾರ್ಯದರ್ಶಿ ಸೋಮಶೇಖರ ಜೆ.ಎಸ್. ಕರೆ ನೀಡಿದ್ದಾರೆ. ಬಾಯಾರಿನ ಯುವಕ ಕಾಂಗ್ರೆಸ್ ಕಾರ್ಯಕರ್ತರ ನೇತೃತ್ವದಲ್ಲಿ  ಬಾಯಾರುಪದವಿನಲ್ಲಿ ಸ್ಥಾಪಿಸಿದ ಪಕ್ಷದ ನೂತನ ಧ್ವಜಸ್ತಂಭದಲ್ಲಿ ಧ್ವಜಾರೋಹಣ ನಡೆಸಿ ಅವರು ಮಾತನಾಡಿದರು. ಮಂಡಲ ಕಾಂಗ್ರೆಸ್ ಸಮಿತಿ ಅಧ್ಯಕ್ಷ ವಸಂತ ಕುಮಾರ್  ಅಧ್ಯಕ್ಷತೆ ವಹಿಸಿದರು. ಬ್ಲೋಕ್ ಪಂಚಾಯತ್ ಸ್ಥಾಯಿ ಸಮಿತಿ ಅಧ್ಯಕ್ಷ …

ಕಡಲ್ಕೊರೆತ ತೀವ್ರ: ಸಂತ್ರಸ್ತರಿಗೆ ಸಹಾಯ ಲಭ್ಯಗೊಳಿಸಲು ಶಾರದಾನಗರ ಉಳಿಸಿ ಕ್ರಿಯಾ ಸಮಿತಿ ರೂಪೀಕರಣ

ಉಪ್ಪಳ: ಕಡಲ್ಕೊರೆತದಿಂದ ಮನೆ, ಬೆಳೆ ಕಳೆದುಕೊಂಡ ಜನರಿಗೆ ಸಹಾಯ ಒದಗಿಸುವ ನಿಟ್ಟಿನಲ್ಲಿ ಬಿಜೆಪಿ ನೇತೃತ್ವದಲ್ಲಿ 11 ಸದಸ್ಯರ ಶಾರದಾನಗರ ಉಳಿಸಿ ಕ್ರಿಯಾ ಸಮಿತಿಯನ್ನು ರೂಪೀಕರಿಸಲಾಯಿತು. ಶಾರದಾನಗರ ಭಜನಾಮಂದಿರದಲ್ಲಿ ನಡೆದ ಸಭೆಯಲ್ಲಿ ಮಂಗಲ್ಪಾಡಿ ಪಂಚಾಯತ್‌ನ ಶಾರದಾ ನಗರದಲ್ಲಿ ಮೀನು ಕಾರ್ಮಿಕರು ಸಹಿತದ ತೀರ ನಿವಾಸಿಗಳು ಮನೆ, ಭೂಮಿ ಕಳೆದುಕೊಂಡಿದ್ದು, ಇವರಿಗೆ ಮನೆ ನಿರ್ಮಿಸಲು ೪೦ ಲಕ್ಷ ರೂ., ಮನೆ ಕಳೆದುಕೊಂಡವರಿಗೆ 25ಲಕ್ಷ ರೂ. ಸರಕಾರ ಒದಗಿಸಬೇಕೆಂದು ಕ್ರಿಯಾ ಸಮಿತಿ ರೂಪೀಕರಣ ಸಭೆಯಲ್ಲಿ ಬಿಜೆಪಿ ರಾಜ್ಯ ಸಮಿತಿ ಸದಸ್ಯ ವಿ. …

ಬಿರುಸಿನ ಮಳೆ: ವಿವಿಧ ಹೊಳೆಗಳಲ್ಲಿ ಉಕ್ಕಿ ಹರಿಯುತ್ತಿರುವ ನೀರು

ಉಪ್ಪಳ: ಕಳೆದ ಕೆಲವು ದಿನಗಳಿಂದ ನಿರಂತರವಾಗಿ ಸುರಿದ ಮಳೆಗೆ ಉಪ್ಪಳ ಸಹಿತ ವಿವಿಧ ಹೊಳೆಗಳಲ್ಲಿ ನೀರು ಉಕ್ಕಿ ಹರಿಯುತ್ತಿದೆ. ಉಪ್ಪಳ, ಶಿರಿಯ, ಕುಬಣೂರು, ಸುವರ್ಣಗಿರಿ ಹೊಳೆಯಲ್ಲಿ ಭಾರೀ ಪ್ರಮಾಣದಲ್ಲಿ ನೀರು ಹರಿಯುತ್ತಿದ್ದು, ಸಮೀಪದ ತೋಟಗಳಿಗೆ ನುಗ್ಗಿದೆ. ಕುಬಣೂರು ಶ್ರೀ ಶಾಸ್ತಾವು ಕ್ಷೇತ್ರದ ಒಳಗಡೆ ನೀರು ತುಂಬಿ ಜಲಾವೃತಗೊಂಡಿದೆ. ಶಾಂತಿಗುರಿ- ಕುಬಣೂರು ರಸ್ತೆಯಲ್ಲಿ ನೀರು ತುಂಬಿ ವಾಹನ ಸಂಚಾರ ಮೊಟಕಾಗುವ ಭೀತಿ ಕಂಡು ಬಂದಿದೆ. ಕುಬಣೂರು ಹೊಳೆಯ ದೇರ್ಜಾಲ್ ಸೇತುವೆ ಬಳಿ ಭಾರೀ ಪ್ರಮಾಣದಲ್ಲಿ ಮರದ ದಿಮ್ಮಿಗಳು, ತ್ಯಾಜ್ಯಗಳು …