ಅನಂತಪುರ ಕಾರ್ಖಾನೆಗಳಿಂದ ಸಮಸ್ಯೆ ಸೃಷ್ಟಿ:  ಅನಂತಪುರ ರಕ್ಷಾ ಸಮಿತಿಯಿಂದ ಸಮಾಲೋಚನಾ ಸಭೆ 31ರಂದು

ಕುಂಬಳೆ: ಅನಂತಪುರ ಶ್ರೀ ಅನಂತಪದ್ಮನಾಭ ಸ್ವಾಮಿ ದೇವಸ್ಥಾನದ ಪರಿಸರ ಸಹಿತ ಸಮೀಪದ ಸುಮಾರು 3 ಕಿಲೋ ಮೀಟರ್ ವ್ಯಾಪ್ತಿಯಲ್ಲಿ ಕಾರ್ಯಾಚರಿಸುವ ಕಾರ್ಖಾನೆಗಳಿಂದ ವ್ಯಾಪಕ ಸಮಸ್ಯೆ ಎದುರಾಗಿದ್ದು, ಈ ಹಿನ್ನೆಲೆಯಲ್ಲಿ  ಈ ಬಗ್ಗೆ ಸಮಾಲೋಚನೆ ನಡೆಸಲು  ಮೇ 31ರಂದು ಅಪರಾಹ್ನ 3 ಗಂಟೆಗೆ ಶ್ರೀ ಅನಂತಪದ್ಮನಾಭ ಸ್ವಾಮಿ ದೇವಸ್ಥಾನ ಪರಿಸರದಲ್ಲಿ ಸಭೆ ನಡೆಸಲು ಅನಂತಪುರ ರಕ್ಷಾಸಮಿತಿ ತೀರ್ಮಾನಿಸಿದೆ. ಕಾರ್ಖಾನೆಗಳಿಂದ ಹೊರ ಸೂಸುವ ದುರ್ನಾತದಿಂದ ಅನಂತಪುರ ಕ್ಷೇತ್ರದ  ಪಾವಿತ್ರ್ಯತೆಗೂ ಧಕ್ಕೆಯಾಗುತ್ತಿದೆ. ಸಮೀಪದ ಜಲಮೂಲಗಳು ಕಲುಷಿತಗೊಂಡಿವೆ. ಮಾತ್ರವಲ್ಲ ಮುಂದಿನ ದಿನಗಳಲ್ಲಿ ಶ್ರೀ …

ನಾಡಿನಾದ್ಯಂತ ಬಕ್ರೀದ್ ಹಬ್ಬಾಚರಣೆ

ಮಂಜೇಶ್ವರ: ಬಕ್ರೀದ್ ಹಬ್ಬವನ್ನು ನಿನ್ನೆ ನಾಡಿನಾದ್ಯಂತ ಭಕ್ತಿ, ಸಂಭ್ರಮ, ಸಡಗರದಿಂದ ಆಚರಿಸಲಾಯಿತು. ಬೆಳಿಗ್ಗಿನಿಂದಲೇ ಮುಸ್ಲಿಂ ಬಾಂಧವರು ಮಸೀದಿಗಳಿಗೆ ತೆರಳಿ ಸಾಮೂಹಿಕ ಪ್ರಾರ್ಥನೆಯಲ್ಲಿ ಪಾಲ್ಗೊಂಡರು. ಪವಿತ್ರ ಈದ್ ನಮಾಜ್ ಸಲ್ಲಿಸಿದ ಬಳಿಕ ಪರಸ್ಪರ ಆಲಂಗಿಸಿಕೊಂಡು ಹಬ್ಬದ ಶುಭಾಶಯಗಳನ್ನು ವಿನಿಮಯ ಮಾಡಿಕೊಂಡರು. ಹಲವು ಮಸೀದಿಗಳಲ್ಲಿ ಮಹಿಳೆಯರಿಗೂ ಪ್ರಾರ್ಥನೆ ಸಲ್ಲಿಸಲು ಪ್ರತ್ಯೇಕ ವ್ಯವಸ್ಥೆಯನ್ನು ಏರ್ಪಡಿಸಲಾಗಿತ್ತು. ಮಂಜೇಶ್ವರ ತಾಲೂಕಿನ ವಿವಿಧ ಮಸೀದಿಗಳಲ್ಲಿ ಧಾರ್ಮಿಕ ವಿಧಿ ವಿಧಾನಗಳು, ವಿಶೇಷ ಪ್ರಾರ್ಥನೆ ನಡೆಯಿತು. ಪ್ರಮುಖವಾಗಿ ಉದ್ಯಾವರ, ಕುಂಜತ್ತೂರು, ಪೊಸೋಟು, ಬಂಗ್ರ ಮಂಜೇಶ್ವರ, ಉಪ್ಪಳ ಜುಮಾ ಮಸೀದಿಗಳಲ್ಲಿ …

ಕಣ್ಣೂರು ಬೇಬಿ ಮೆಮೋರಿಯಲ್ ಹಾಸ್ಪಿಟಲ್‌ನಲ್ಲಿ ಉತ್ತರ ಮಲಬಾರ್‌ನ ಮೊದಲ ಬರ್ತ್ ಸ್ಯೂಟ್‌ನ ಉದ್ಘಾಟನೆ

ಕಣ್ಣೂರು: ಬೇಬಿ ಮೆಮೋರಿ ಯಲ್ ಹಾಸ್ಪಿಟಲ್‌ನಲ್ಲಿ ಆರಂಭಿಸಿದ ನೂತನ ಬರ್ತ್ ಸ್ಯೂಟ್‌ನಲ್ಲಿ ಲೇಬರ್, ಡೆಲಿವರಿ, ರಿಕವರಿ, ಪೋಸ್ಟ್‌ಪಾರ್ಟಂ ಮೊದಲಾದವುಗಳನ್ನು ಒಂದೇ ಕೊಠಡಿಯಲ್ಲೇ ಕುಟುಂಬ ಸೌಹೃದ ಹಾಗೂ ಖಾಸಗಿತನವನ್ನು ಖಚಿತಪಡಿಸಿ ನಡೆಸಬಹುದಾದ ರೀತಿಯಲ್ಲಿ ಸಿದ್ಧಪಡಿ ಸಲಾಗಿದೆ ಎಂದು ಸಂಬಂಧಪಟ್ಟವರು ತಿಳಿಸಿದ್ದಾರೆ. ಹೆರಿಗೆ ಸಂದರ್ಭಗಳಲ್ಲಿ ಸಂಬಂಧಪಟ್ಟವರು ಜತೆಗೆ ಇರಬಹುದು ಎಂಬುದಾಗಿದೆ ಬರ್ತ್ ಸ್ಯೂಟ್‌ರೂಂನ ಪ್ರಧಾನ ವಿಶೇಷತೆಗಳಲ್ಲಿ ಒಂದು 24 ಗಂಟೆಗಳ ಕಾಲ 1:1 ನರ್ಸಿಂಗ್ ಕೆಯರ್, ಕುಟುಂಬಕ್ಕಾಗಿ ಸಿದ್ಧಪಡಿಸಿದ ಪ್ರತ್ಯೇಕ ಆಡಂಬರ ಸೌಕರ್ಯಗಳೊಂ ದಿಗೆ ಸ್ವಾಗತಕೊಠಡಿ ಮೊದಲಾದವುಗಳು ಬರ್ತ್ ಸ್ಯೂಟ್‌ರೂಂನ …

ವಿದ್ಯುತ್ ತಂತಿಗೆ ಬಾಗಿದ ಮರ: ಸ್ಥಳೀಯರಲ್ಲಿ ಭೀತಿ

ಉಪ್ಪಳ: ವಿದ್ಯುತ್ ತಂತಿ ಮೇಲೆ ಅಕೇಶಿಯಾ ಮರ ಬಾಗಿಕೊಂಡಿದ್ದು, ಯಾವುದೇ ಕ್ಷಣದಲ್ಲಿ ಮುರಿದು ಬೀಳುವ ಆತಂಕದಿAದ ಸ್ಥಳೀಯರು ಭಯ ಭೀತರಾಗಿದ್ದಾರೆ. ಮಂಗಲ್ಪಾಡಿ ಪಂಚಾಯತ್‌ನ ೮ನೇ ವಾರ್ಡ್ ಬೇಕೂರು ಹಳೇ ಅಂಚೆ ಕಚೇರಿ ಬಳಿಯ ಉಬರ್ಲೆ ರಸ್ತೆಯಲ್ಲಿ ಈ ಆತಂಕದ ಸ್ಥಿತಿ ಉಂಟಾಗಿದೆ. ಈ ಪರಿಸರದಿಂದ ಹಾದು ಹೋದ ವಿದ್ಯುತ್ ತಂತಿ ಮೇಲ್ಭಾಗದಲ್ಲಿ ಬೃಹತ್ ಮರ ಬಾಗಿಕೊಂಡಿದ್ದು, ರೆಂಬೆಗಳು ಗಾಳಿಗೆ ತಂತಿಗೆ ಸ್ಪರ್ಶಿಸುತ್ತಿದೆ. ಇದರಿಂದ ವಿದ್ಯುತ್ ಮೊಟಕುಗೊಳ್ಳುತ್ತಿದೆ. ದಿನನಿತ್ಯ ಮಕ್ಕಳ ಸಹಿತ ಹಲವು ಮಂದಿ ಸಂಚರಿಸುವ ರಸ್ತೆ ಇದಾಗಿದೆ. …

ಅಕ್ರಮ ಹಣ ವರ್ಗಾವಣೆ ಪ್ರಕರಣ: ಪಿಣರಾಯಿ ವಿಜಯನ್,ಅಳಿಯನ ನಿವಾಸಗಳು ಸಹಿತ 10 ಸ್ಥಳಗಳಲ್ಲಿ ಇ.ಡಿ ಶೋಧ; ರಾಜ್ಯಾದ್ಯಂತ ಪ್ರತಿಭಟನೆಗಳೊಂದಿಗೆ ಬೀದಿಗಿಳಿದ ಸಿಪಿಎಂ

ತಿರುವನಂತಪುರ: ವಿವಾದಿತ ಗಣಿ ಕಂಪೆನಿ  ಕೊಚ್ಚಿನ್ ಮಿನರಲ್ಸ್ ಆಂಡ್ ರೂಟೈಲ್ಸ್ ಲಿಮಿಟೆಡ್  (ಸಿ.ಎಂ.ಆರ್.ಎಲ್) ಹಾಗೂ ಮಾಜಿ ಮುಖ್ಯಮಂತ್ರಿ ಪಿಣರಾಯಿ ವಿಜಯನ್‌ರ ಪುತ್ರಿ ವೀಣಾ  ವಿಜ ಯನ್ ಅವರ ಬೆಂಗಳೂರು  ಮೂಲದ ಐ.ಟಿ ಸಂಸ್ಥೆ ಎಕ್ಸಾಲಾಜಿಕ್ ಸೊಲ್ಯೂಶನ್ ನಡುವೆ ನಡೆದಿದೆ ಎನ್ನಲಾದ 1.72 ಕೋಟಿ ರೂ.ಗಳ  ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿ ಜಾರಿ ನಿರ್ದೇಶನಾಲಯ ಇ.ಡಿ  (ಎನ್‌ಫೋರ್ಸ್‌ಮೆಂಟ್ ಡೈರೆಕ್ಟರೇಟ್) ಮಾಜಿ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಮತ್ತು ಅವರ ಅಳಿಯ ಮಾಜಿ ಸಚಿವ ಮೊಹಮ್ಮದ್ ರಿಯಾಸ್‌ರ ನಿವಾಸಗಳೂ ಸೇರಿದಂತೆ …

ಎಂಡಿಎಂಎ, 50 ಸಾವಿರ ರೂ. ಸಹಿತ ಯುವಕ ಸೆರೆ

ಉಪ್ಪಳ: ಎಂಡಿಎಂಎ ಸಹಿತ ಓರ್ವ ಯುವಕನನ್ನು ಮಂಜೇಶ್ವರ ಪೊಲೀಸರು ಬಂಧಿಸಿದ್ದಾರೆ. ಉಪ್ಪಳ ರೈಲ್ವೇ ನಿಲ್ದಾಣ ರಸ್ತೆ ಬಳಿಯ  ಬಿಸ್ಮಿಲ್ಲಾ ಮಂಜಿಲ್‌ನ ಮೊಹಮ್ಮದ್ ಸಮೀರ್ ಪಿ.ಎ (30) ಎಂಬಾತ ಬಂಧಿತ ವ್ಯಕ್ತಿಯಾಗಿದ್ದಾನೆ. ಈತನ ಕೈಯಿಂದ 5.080 ಗ್ರಾಂ ಎಂಡಿಎಂಎ ಹಾಗೂ 55,860 ರೂಪಾಯಿಗಳನ್ನು ವಶಪಡಿಸಿಕೊಂಡಿರುವುದಾಗಿ ಪೊಲೀಸರು ತಿಳಿಸಿದ್ದಾರೆ. ನಿನ್ನೆ ರಾತ್ರಿ 7.10ರ ವೇಳೆ ಎಸ್.ಐ ವೈಷ್ಣವ್ ನೇತೃತ್ವದ ಪೊಲೀಸರು ನಡೆಸಿದ ಕಾರ್ಯಾಚರಣೆಯಲ್ಲಿ  ಎಂಡಿಎಂಎ ಸಹಿತ ಯುವಕನನ್ನು ಬಂಧಿಸಲಾಗಿದೆ.  ಮಾದಕವಸ್ತು ಸಾಗಾಟ ಬಗ್ಗೆ   ಗುಪ್ತ ಮಾಹಿತಿ ಲಭಿಸಿದ ಹಿನ್ನೆಲೆಯಲ್ಲಿ  ಬಪ್ಪಾಯಿತೊಟ್ಟಿಯಲ್ಲಿದ್ದ …

ಗರ್ಭಿಣಿ ಹಸುವನ್ನು ಕಳವುಗೈದು ಕಾರಿನಲ್ಲಿ ಸಾಗಾಟ

ಮುಳ್ಳೇರಿಯ: ಹಟ್ಟಿಯ ಸಮೀಪ ಕಟ್ಟಿ ಹಾಕಿದ್ದ ಗರ್ಭಿಣಿ ಹಸುವನ್ನು ಕಳವುಗೈದು ಕಾರಿನಲ್ಲಿ ಸಾಗಿಸಿರುವುದಾಗಿ ದೂರಲಾಗಿದೆ. ಮಲ್ಲ ನಿವಾಸಿ ಎಂ. ವಿಜಯಲಕ್ಷ್ಮಿ ಎಂಬವರ ಹಸುವನ್ನು ಕಳವುಗೈಯ್ಯಲಾ ಗಿದೆ. ಮೊನ್ನೆ ಮುಂಜಾನೆ ಕಾರಿನಲ್ಲಿ ತಲುಪಿದ ಇಬ್ಬರು ಹಸುವನ್ನು ಕಳವುಗೈದಿರು ವುದಾಗಿ ಆರೋಪಿಸಲಾಗಿದೆ.  ಕಾರಿನ ದೃಶ್ಯ ಸಮೀಪದ ಸಿಸಿ ಟಿವಿಯಲ್ಲಿ ಸೆರೆಯಾಗಿದೆ. ಆದರೆ ಕಾರಿನ ನಂಬ್ರಪ್ಲೇಟ್ ನಕಲಿಯಾಗಿದ್ದು, ಇದರಿಂದ ಕಳ್ಳರನ್ನು ಪತ್ತೆಹಚ್ಚಲು ಸಾಧ್ಯವಾಗಿಲ್ಲ. ತನಿಖೆ ಮುಂದುವರಿಯುತ್ತಿದೆಯೆಂದು ಆದೂರು ಪೊಲೀಸರು ತಿಳಿಸಿದ್ದಾರೆ.  ವಿಧವೆಯಾದ ವಿಜಯಲಕ್ಷ್ಮಿ ಹಸು ಸಾಕಿ ಲಭಿಸುವ ಅತ್ಯಲ್ಪ ಆದಾಯದಿಂದ  ಪುತ್ರಿ …

ತಿರುವನಂತಪುರ ಶ್ರೀ ಪದ್ಮನಾಭ ಕ್ಷೇತ್ರದಿಂದ ಅಮೂಲ್ಯ ವಸ್ತುಗಳು ನಾಪತ್ತೆ

ತಿರುವನಂತಪುರ: ಇಲ್ಲಿನ ಶ್ರೀ ಪದ್ಮನಾಭ ಸ್ವಾಮಿ ಕ್ಷೇತ್ರದಿಂದ ಅಮೂಲ್ಯ ವಸ್ತುಗಳು ಕಾಣೆಯಾದ ಬಗ್ಗೆ ವರದಿಯಾಗಿದೆ. ಕಾಣಿಕೆಯಾಗಿ ಲಭಿಸಿದ ಸುಮಾರು 78 ಗ್ರಾಂ ಚಿನ್ನದ ನಾಣ್ಯಗಳು ಕಾಣೆಯಾಗಿವೆ. ದುರಸ್ತಿಗೆಂದು ಕೊಂಡೊಯ್ದ ಚಿನ್ನದ ದೀಪವನ್ನು ಮರಳಿ ತಲುಪಿಸಲಿಲ್ಲ. ಇದರ ಬದಲಾಗಿ ಅಧಿಕೃತ ದಾಖಲೆಗಳಲ್ಲಿಲ್ಲದ ಬೆಳ್ಳಿಯ ದೀಪ ಇರಿಸಲಾಗಿದೆ. ‘ವೈರನಮ’ ಎಂಬ ಆಭರಣ ಆರು ತಿಂಗಳಿಂದ ನಾಪತ್ತೆಯಾಗಿರುವುದಾಗಿಯೂ ರಾಜ್ಯ ಪೊಲೀಸ್ ವರಿಷ್ಠಾಧಿಕಾರಿ ಅಡಿಶನಲ್ ಚೀಫ್ ಸೆಕ್ರೆಟರಿಗೆ ನೀಡಿದ ಪತ್ರದಲ್ಲಿ ತಿಳಿಸಲಾಗಿದೆ ಎಂದು ಹೇಳಲಾಗುತ್ತಿದೆ.

ಪಿಣರಾಯಿ ವಿಜಯನ್‌ರ ಗನ್‌ಮ್ಯಾನ್ ಸಹಿತ 5 ಮಂದಿ ಪೊಲೀಸರ ಅಮಾನತು

ತಿರುವನಂತಪುರ: ನವಕೇರಳ ಯಾತ್ರೆ ಮಧ್ಯೆ ಪ್ರತಿಭಟಿಸಿದ ಕೆಎಸ್‌ಯು, ಯೂತ್ ಕಾಂಗ್ರೆಸ್ ಕಾರ್ಯಕರ್ತರಿಗೆ ಹಲ್ಲೆಗೈದ ಪ್ರಕರಣದಲ್ಲಿ ಮಾಜಿ ಮುಖ್ಯಮಂತ್ರಿ ಪಿಣರಾಯಿ ವಿಜಯನ್‌ರ ಗನ್‌ಮ್ಯಾನ್ ಸಹಿತ ಐದು ಪೊಲೀಸರನ್ನು ಅಮಾನತುಗೊಳಿಸಲಾಗಿದೆ. ಈ ಬಗ್ಗೆ ಪೊಲೀಸ್ ಕೇಂದ್ರದಿಂದ ಆದೇಶ ಹೊರಡಿಸಲಾಗಿದೆ. ಗನ್‌ಮ್ಯಾನ್ ಆಗಿದ್ದ ಅನಿಲ್ ಕುಮಾರ್, ಎಸ್ಕೋರ್ಟ್ ಪೊಲೀಸರಾದ ಸಂದೀಪ್, ಅರುಣ್, ವಿಪಿನ್, ಶೈಜು ಎಂಬಿವರನ್ನು ಅಮಾನತುಗೊಳಿಸಲಾಗಿದೆ. ಅನಿಲ್ ಕುಮಾರ್  ೨೫ ವರ್ಷದಿಂದ ಪಿಣರಾಯಿ ವಿಜಯನ್‌ರ ಗನ್‌ಮ್ಯಾನ್ ಆಗಿದ್ದಾನೆ. ಡಿಸೆಂಬರ್ ೫ರಂದು ನವಕೇರಳ ಕಾರ್ಯಕ್ರಮಕ್ಕೆ ತಲುಪಿದ ಮುಖ್ಯಮಂತ್ರಿಯ ಬಸ್‌ನ ಮುಂಭಾಗದಲ್ಲಿ ಆಲಪ್ಪುಳ …

ಬಾಯಾರುಪದವಿನ ಮೊಹಮ್ಮದ್ ಆಸಿಫ್‌ರ ನಿಗೂಢ ಸಾವು:ಸಿಬಿಐ ತನಿಖೆಗೆ ಒತ್ತಾಯಿಸಿ ತಾಯಿಯಿಂದ ಅರ್ಜಿ; ಪೊಲೀಸ್‌ಗೆ ಹೈಕೋರ್ಟ್‌ನಿಂದ ನೋಟೀಸು

ಕುಂಬಳೆ: ಮಂಜೇಶ್ವರ ಪೊಲೀಸ್ ಠಾಣೆ ವ್ಯಾಪ್ತಿಯ ಪೈವಳಿಕೆ  ಬಾಯಾರುಪದವು ಕ್ಯಾಂಪ್ಕೋ ಸಮೀಪದ ಮುಹಮ್ಮದ್ ಆಸಿಫ್ (29) ನಿಗೂಢ ರೀತಿಯಲ್ಲಿ ಸಾವಿಗೀಡಾದ ಸ್ಥಿತಿಯಲ್ಲಿ ಪತ್ತೆಯಾದ  ಪ್ರಕರಣದ ತನಿಖೆಯನ್ನು ಸಿಬಿಐಗೆ ವಹಿಸಿಕೊಡುವ ಸಾಧ್ಯತೆ ಇದೆ. ಪ್ರಕರಣದ ತನಿಖೆಯನ್ನು  ಸಿಬಿಐಗೆ ಹಸ್ತಾಂತರಿಸಬೇಕೆಂಬ ಬೇಡಿಕೆಯನ್ನು ಯಾಕಾಗಿ  ಅಂಗೀಕರಿಸುತ್ತಿಲ್ಲವೆಂಬ ಬಗ್ಗೆ ಸ್ಪಷ್ಟೀಕರಣ ನೀಡಬೇಕೆಂದು ತಿಳಿಸಿ ಪೊಲೀಸರಿಗೆ ಹೈಕೋರ್ಟ್ ನೋಟೀಸು ನೀಡಿದೆ. ಇದರೊಂದಿಗೆ ನಿಗೂಢತೆಗಳು ತುಂಬಿಕೊಂಡ ಪ್ರಕರಣ ಮತ್ತೆ ಚರ್ಚೆಯಾಗಿದೆ. ಮಗನ ಸಾವಿನ ಕುರಿತು ಸಿಬಿಐ ತನಿಖೆಗೆ ಒತ್ತಾಯಿಸಿ ತಾಯಿ ಸಕೀನ ನ್ಯಾಯವಾದಿ ಆಸಿಫಲಿ ಮುಖಾಂತರ …