ಶುಚಿತ್ವ-ಮಹತ್ವ: ಕುಂಬಳೆಯಲ್ಲಿ ಮಿನಿ ಎಂಸಿಎಫ್ ಬಳಿಯಲ್ಲೇ ತ್ಯಾಜ್ಯರಾಶಿಯಿಂದ ದುರ್ನಾತ; ಪಾದಚಾರಿಗಳಿಗೆ ನಾಯಿಗಳ ದಾಳಿ ಭೀತಿ

ಕುಂಬಳೆ: ಸರಕಾರದ ಶುಚಿತ್ವ-ಮಹತ್ವ ಎಂಬ ಗುರಿಯೊಂದಿಗೆ  ಕುಂಬಳೆ ಪಂಚಾಯತ್‌ನ ವಿವಿಧೆಡೆಗ ಳಲ್ಲಿ ಸ್ಥಾಪಿಸಿದ ಮಿನಿ ಎಂಸಿಎಫ್‌ಗ ಳಿಂದಾಗಿ ಸಾರ್ವಜನಿಕರಿಗೆ  ದಾರಿಯ ಲ್ಲಿ ನಡೆದು ಹೋಗಲು ಸಾಧ್ಯವಾಗದ ಸ್ಥಿತಿ ಉಂಟಾಗಿದೆಯೆಂದು ನಾಗರಿಕರು ಆರೋಪಿಸುತ್ತಿದ್ದಾರೆ. ಪ್ಲಾಸ್ಟಿಕ್ ಉತ್ಪನ್ನಗಳನ್ನು ಈ ಭೂಮಿಯಿಂದ ಇಲ್ಲದಾಗಿಸುವ ಗುರಿಯೊಂದಿಗೆ ಪಂಚಾಯತ್‌ಗಳ ಪ್ರಧಾನ ಸ್ಥಳಗಳಲ್ಲಿ ಮಿನಿ ಎಂಸಿಎಫ್‌ಗಳನ್ನು ಸ್ಥಾಪಿಸಲಾಗಿದೆ. ಮನೆಗಳಿಂದ ಸಂಗ್ರಹಿಸಿದ ಪ್ಲಾಸ್ಟಿಕ್ ಉತ್ಪನ್ನಗಳನ್ನು ಗೋಣಿ ಚೀಲಗಳಲ್ಲಿ ತುಂಬಿಸಿ ಈ ಮಿನಿ ಎಂಸಿಎಫ್‌ನೊಳಗೆ ಇರಿಸಲಾಗುತ್ತಿದೆ. ಇದೇ ವೇಳೆ   ಪ್ಲಾಸ್ಟಿಕ್ ಉತ್ಪನ್ನಗಳು ಹಾಗೂ ಮನೆಗಳ ತ್ಯಾಜ್ಯ ವಸ್ತುಗಳನ್ನು ಪ್ಲಾಸ್ಟಿಕ್ …

ಪ್ರೇತಬಾಧೆ ಬಿಡಿಸಲು ತಲುಪಿದ್ದ ಬಾಲಕಿಗೆ ದೌರ್ಜನ್ಯ ಗೈಯ್ಯಲೆತ್ನ: ನಕಲಿ ಮಂತ್ರವಾದಿ ವಿರುದ್ಧ ಪೋಕ್ಸೋ ಕೇಸು

ಕೊಲ್ಲಂ: ದೇಹದಲ್ಲಿ ಸೇರಿದ ಪ್ರೇತಬಾಧೆಯನ್ನು ಬಿಡಿಸಲು ತಾಯಿಯೊಂದಿಗೆ ತಲುಪಿದ 16ರ ಬಾಲಕಿಯನ್ನು ಕಪಟ ಮಂತ್ರವಾದಿ ಕೊಠಡಿಗೆ ಕೊಂಡೊಯ್ದು ದೌರ್ಜನ್ಯಗೈಯ್ಯಲೆತ್ನಿಸಿರುವುದಾಗಿ ದೂರಲಾಗಿದೆ.  ಪೊಲೀಸರು ಪೋಕ್ಸೋ ಕೇಸು ದಾಖಲಿಸಿದ್ದಾರೆ. ಕೊಲ್ಲಂ ಪುತ್ತೂರ್‌ನಲ್ಲಿ ನಿನ್ನೆ ಘಟನೆ ನಡೆದಿದೆ. ವೆಂಡಾರ್ ನಿವಾಸಿಯಾದ ಮಂತ್ರವಾದಿ ಮುರಾರಿ ವಿರುದ್ಧ ಪೊಲೀಸರು ಕೇಸು ದಾಖಲಿಸಿದ್ದಾರೆ. ಪೊಲೀಸರು ಕೇಸು ದಾಖಲಿಸಿದ ಬಗ್ಗೆ ತಿಳಿದು ತಲೆಮರೆಸಿಕೊಂಡ ಮಂತ್ರವಾದಿಯ ಪತ್ತೆಗೆ ತನಿಖೆ ತೀವ್ರಗೊಳಿಸಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

ಎಸ್‌ಎನ್‌ಡಿಪಿ ಯೋಗಂ ಕಾಸರಗೋಡು ಯೂನಿಯನ್ ಕಚೇರಿ ಉದ್ಘಾಟನೆ, ಜನಪ್ರತಿನಿಧಿಗಳಿಗೆ ಗೌರವಾರ್ಪಣೆ

ಕಾಸರಗೋಡು:  ಎಸ್‌ಎನ್‌ಡಿಪಿ ಯೋಗಂ ಕಾಸರಗೋಡು ಯೂನಿ ಯನ್ ಕಚೇರಿಯ ಉದ್ಘಾಟನೆ ಹಾಗೂ ಜನಪ್ರತಿನಿಧಿ ಗಳಿಗೆ ಗೌರವಾರ್ಪಣೆ ಕಾರ್ಯಕ್ರಮ ನಡೆಸಲಾಯಿತು.  ಕೊರಕ್ಕೋಡು ಶ್ರೀ ಆರ್ಯಕಾತ್ಯಾಯಿನಿ ಕ್ಷೇತ್ರ ಸಮೀಪ ಯೂನಿಯನ್ ಕಚೇರಿಯನ್ನು ಯೋಗಂ ಇನ್‌ಸ್ಪೆಕ್ಟಿಂಗ್ ಆಫೀಸರ್ ಪಿ.ಟಿ. ಲಾಲು ಉದ್ಘಾಟಿಸಿ ಮಾತನಾಡಿದರು. ತಳಂಗರೆ ಶ್ರೀ ಚೀರುಂಬಾ ಭಗವತೀ ಕ್ಷೇತ್ರದ ಸ್ಥಾನಿಕ ನಾಗೇಶ್ ಕಾರ್ನವರ್, ಪಿಲಿಕುಂಜೆ ಶ್ರೀ ಐವರ್ ಭಗವತೀ ಕ್ಷೇತ್ರದ ಮಂಜು ಕಾರ್ನವರ್ ದೀಪ ಬೆಳಗಿಸಿದರು. ಎಸ್‌ಎನ್‌ಡಿಪಿ ಯೋಗಂ ಯೂನಿಯನ್ ಅಧ್ಯಕ್ಷ ನಾರಾಯಣ ಮಂಜೇಶ್ವರ ಅಧ್ಯಕ್ಷತೆ ವಹಿಸಿದರು. ಈ ಸಂದರ್ಭದಲ್ಲಿ …

ನಿರ್ಮಾಣ ಕಾರ್ಮಿಕರ ನಿವೃತ್ತಿ ಸವಲತ್ತು, ಪಿಂಚಣಿ ಲಭ್ಯಗೊಳಿಸಲು ಎಐಟಿಯುಸಿ ಒತ್ತಾಯ

ಮಂಜೇಶ್ವರ: ನಿರ್ಮಾಣ ಕಾರ್ಮಿಕರ ಒಕ್ಕೂಟ ಮಂಜೇಶ್ವರ ಮಂಡಲ ಸಮಾವೇಶ ಮಜಿಬೈಲ್ ಸೇವಾ ಸಹಕಾರಿ ಬ್ಯಾಂಕ್ ಸಭಾಂಗ ಣದಲ್ಲಿ ನಡೆಯಿತು. ನಿರ್ಮಾಣ ಕಾರ್ಮಿಕರ ಕ್ಷೇಮನಿಧಿ ಬೋರ್ಡ್ ನಿಂದ 2025 ಎಪ್ರಿಲ್‌ನಿಂದ ಕಾರ್ಮಿ ಕರಿಗೆ ಲಭಿಸದ ಪಿಂಚಣಿ ಮತ್ತು ನಿವೃತ್ತಿ ಸೌಲಭ್ಯಗಳನ್ನು ಕೂಡಲೇ ಪಾವತಿಸಲು ಸರಕಾರ ಮಧ್ಯ ಪ್ರವೇಶಿಸಬೇಕೆಂದು ಒತ್ತಾಯಿಸಲಾ ಯಿತು. ನಿರ್ಮಾಣ ಕಾರ್ಮಿಕರ ಒಕ್ಕೂಟದ ಜಿಲ್ಲಾ ಕಾರ್ಯದರ್ಶಿ ಬಿಜು ಉಣ್ಣಿತ್ತಾನ್ ಉದ್ಘಾಟಿಸಿದರು. ಮಂಡಲ ಅಧ್ಯಕ್ಷ ಚಂದ್ರಶೇಖರ ಸಿಂತಾಜೆ ಅಧ್ಯಕ್ಷತೆ ವಹಿಸಿದರು. ಹಿರಿಯ ನಾಯಕ ಸಂಜೀವ ಶೆಟ್ಟಿಯವರನ್ನು ಒಕ್ಕೂಟದ ಜಿಲ್ಲಾ …

ಕಾಡಿನಲ್ಲಿ ಬೇಟೆ: ಮೂವರ ಸೆರೆ; ಕಾಡುಹಂದಿ, ಬಂದೂಕು, ಗುಂಡು, ವ್ಯಾನ್ ವಶ

ಕಾಸರಗೋಡು: ಸರಕಾರಿ ರಕ್ಷಿತಾ ರಣ್ಯಕ್ಕೆ ನುಗ್ಗಿ ವನ್ಯ ಜೀವಿಗಳನ್ನು ಬೇಟೆಯಾಡುತ್ತಿದ್ದ ಮೂವರನ್ನು ಅರಣ್ಯ ಇಲಾಖೆಯ ತಂಡ ಬಂಧಿಸಿದೆ. ಇದಕ್ಕೆ ಸಂಬಂಧಿಸಿ ಬಳಾಲ್ ಕೊನ್ನಕ್ಕಾಡ್ ಚೆರುಂಬಕ್ಕೋಡ್ ಚಾಪೆಯಿಲ್ ಹೌಸ್‌ನ ಆರ್. ರಾಮಕೃಷ್ಣನ್ (49), ಮೈಕಯಂ ಕಳತ್ತಿಲ್ ಪರಂಬಿಲ್ ಹೌಸ್‌ನ ಕೆ.ಕೆ. ರತೀಶ್ (42) ಮತ್ತು  ಮಾಲೋತ್ತ್ ಪಳಯಂಕಾಲ್‌ನ  ಆರ್ ರಾಜೇಶ್ ಯಾನೆ ಮಧು (42) ಎಂಬವರನ್ನು   ಬಂಧಿಸಲಾಗಿದೆ. ಬಳಾಲ್ ಪಂಚಾಯ ತ್‌ನ ರಕ್ಷಿತಾರಣ್ಯಕ್ಕೆ ಸೇರಿದ ಪ್ರದೇಶವಾದ ಮಂಜುಚ್ಚಾಲ್  ಎಂಬಲ್ಲಿಂದ ಈ ಮೂವರನ್ನು ಬಂಧಿಸಲಾಗಿದೆ. ಬಂಧಿತರ ಕೈವಶವಿದ್ದ ಬಂದೂಕು, ಗುಂಡುಗಳು  …

ವಿಷ ಸೇವಿಸಿ ಚಿಕಿತ್ಸೆಯಲ್ಲಿದ್ದ ಯುವಕ ನಿಧನ

ಮಂಜೇಶ್ವರ: ವಿಷ ಸೇವಿಸಿ ಚಿಕಿತ್ಸೆಯಲ್ಲಿದ್ದ ಯುವಕ ಮೃತಪಟ್ಟರು. ತಲಪಾಡಿ ಮರಿಯಾಶ್ರಮ ಚರ್ಚ್ ಕಂಪೌಂಡ್ ಬಳಿಯ ನಿವಾಸಿ ಅಶೋಕ ಕ್ರಾಸ್ತ (32) ನಿಧನ ಹೊಂದಿದರು. ಮಂಗಳೂರಿನ ಅಂಗಡಿಯೊಂದರಲ್ಲಿ ನೌಕರನಾಗಿದ್ದ, ಅವಿವಾಹಿತರಾದ ಇವರು ಜನವರಿ 31ರಂದು ರಾತ್ರಿ 8 ಗಂಟೆಗೆ ಮನೆಯಲ್ಲಿ ವಿಷ ಸೇವಿಸಿದ ಸ್ಥಿತಿಯಲ್ಲಿ ಕಂಡು ಬಂದಿದ್ದರು. ಕೂಡಲೇ ದೇರಳಕಟ್ಟೆಯ ಆಸ್ಪತ್ರೆಗೆ ಇವರನ್ನು ದಾಖಲಿಸಲಾಗಿದೆ. ಆದರೆ ನಿನ್ನೆ ಬೆಳಿಗ್ಗೆ ನಿಧನ ಸಂಭವಿಸಿದೆ. ಮೃತರು ತಂದೆ ಜೋನ್ ಕ್ರಾಸ್ತಾ, ತಾಯಿ ಫ್ಲೋರಿನಾ ಕ್ರಾಸ್ತಾ, ಸಹೋದರರಾದ  ಸಂತೋಷ್ ಕ್ರಾಸ್ತಾ, ಗೋಡ್‌ವಿನ್ ಕ್ರಾಸ್ತಾ, …

ಯುವತಿ ನಾಪತ್ತೆ

ಮಂಜೇಶ್ವರ: ಮನೆಯಿಂದ ಹೊರ ಹೋದ ಯುವತಿ ವಾಪಸಾಗಲಿಲ್ಲವೆಂದು ದೂರಿ ತಾಯಿ ಮಂಜೇಶ್ವರ ಠಾಣೆಗೆ ದೂರು ನೀಡಿದ್ದಾರೆ.  ತಲಪಾಡಿ ಮರಿಯಾಶ್ರಮ ಚರ್ಚ್ ಬಳಿಯ ನಿವಾಸಿ ಅಂತೋಣಿ ಸಿಲ್ವರ್‌ಸ್ಟಾರ್ ಡಿಸೋಜಾರ ಪುತ್ರಿ ಅನಿಶಾ ಡಿಸಿಲ್ವಾ (24) ನಾಪತ್ತೆಯಾಗಿರುವುದಾಗಿ ತಾಯಿ ಜೆಸಿಂತಾ ಮಂಜೇಶ್ವರ ಪೊಲೀಸರಿಗೆ ದೂರು ನೀಡಿದ್ದಾರೆ. ಈ ತಿಂಗಳ 5ರಂದು ಮಧ್ಯಾಹ್ನ 1 ಗಂಟೆಗೆ ಮನೆಯಿಂದ ಈಕೆ ಹೊರಕ್ಕೆ ಹೋಗಿದ್ದು, ಆದರೆ ವಾಪಸಾಗಲಿಲ್ಲ ವೆಂದು ದೂರಿನಲ್ಲಿ ತಿಳಿಸಲಾಗಿದೆ.

ಅಸೌಖ್ಯ: ಯುವಕ ನಿಧನ

ಬದಿಯಡ್ಕ: ಅಸೌಖ್ಯ ತಗಲಿ ಚಿಕಿತ್ಸೆಗೆ ದಾಖಲಿಸಿದ್ದ  ಚೆನ್ನಾರಕಟ್ಟೆ ನಿವಾಸಿ, ಸಂಘದ ಸಕ್ರಿಯ ಕಾರ್ಯ ಕರ್ತ ರವಿಕುಮಾರ್ ಯಾನೆ ಚಿನ್ನತಂಬಿ (20) ನಿಧನ ಹೊಂದಿದರು. ದಿ| ಗಣೇಶರ ಪುತ್ರನಾಗಿದ್ದಾರೆ. ಅಸೌಖ್ಯ ನಿಮಿತ್ತ ಕಾಸರಗೋಡು ಖಾಸಗಿ ಆಸ್ಪತ್ರೆಯಲ್ಲಿ ದಾಖಲಿಸಲಾಗಿತ್ತು. ಮೃತರು ತಾಯಿ ಮಹೇಶ್ವರಿ, ಸಹೋದರರಾದ ಮಣಿ, ರಂಜಿತ್ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.

ಬಸ್ ಪ್ರಯಾಣ ಮಧ್ಯೆ 14ರ ವಿದ್ಯಾರ್ಥಿನಿಗೆ ಉಪಟಳ: ಮಧ್ಯವಯಸ್ಕನ ವಿರುದ್ಧ ಪೋಕ್ಸೋ ಕೇಸು

ಕಾಸರಗೋಡು: ಬಸ್ ಪ್ರಯಾಣ ಮಧ್ಯೆ 14ರ ಹರೆಯದ ವಿದ್ಯಾರ್ಥಿನಿಗೆ ಉಪಟಳ ನೀಡಿರುವುದಾಗಿ ದೂರಲಾಗಿದೆ. ಶಾಲಾ ಅಧಿಕಾರಿಗಳು ನೀಡಿದ ಮಾಹಿತಿ ಹಿನ್ನೆಲೆಯಲ್ಲಿ ಬೇಡಡ್ಕ ಪೊಲೀಸರು ಪೋಕ್ಸೋ ಪ್ರಕರಣದಂತೆ ಕೇಸು ದಾಖಲಿಸಿದ್ದಾರೆ. ನಿನ್ನೆ ಘಟನೆ ನಡೆದಿದೆ. ಖಾಸಗಿ ಬಸ್‌ನಲ್ಲಿ ಬಾಲಕಿ ಪ್ರಯಾಣಿಸುತ್ತಿದ್ದಾಗ ಮಧ್ಯವಯಸ್ಕನಾದ ಓರ್ವ ಬಾಲಕಿಯ ಸಮೀಪದಲ್ಲಿ ಕುಳಿತುಕೊಂಡು ಉಪಟಳ ನೀಡಿರುವುದಾಗಿ ಹೇಳಲಾ ಗಿದೆ. ಭಯದಿಂದ ಬಾಲಕಿ ಈ ವಿಷವನ್ನು ಯಾರಲ್ಲೂ ಹೇಳಿರಲಿಲ್ಲ. ಈ ಮಧ್ಯೆ ಉಪಟಳ ನೀಡಿದ ವ್ಯಕ್ತಿ ಇಳಿದು ಹೋಗಿದ್ದು, ಬಾಲಕಿ ಶಾಲೆಗೆ ತಲುಪಿದ ಬಳಿಕ ಅಧ್ಯಾಪಿಕೆಯರೊಂದಿಗೆ …

2 ಕಾರುಗಳು ಪಲ್ಟಿ: 4 ಮಂದಿಗೆ ಗಾಯ

ಉಪ್ಪಳ: ಕಾರುಗಳೆರಡು ಪಲ್ಟಿಯಾಗಿ ಸಂಭವಿಸಿದ ಅಪಘಾತದಲ್ಲಿ ನಾಲ್ಕು ಮಂದಿ ಗಾಯಗೊಂಡಿದ್ದಾರೆ. ಮಣ್ಣಂಗುಳಿ ಪರಿಸರ ನಿವಾಸಿಗಳಾದ ಶಾಹಿಲ್ (22), ಮನಾಫ್ (19), ಫಹಾಲ್ (19), ರಾಶಿದ್ (25) ಗಾಯಗೊಂಡವರು. ನಿನ್ನೆ ಸಂಜೆ 4 ಗಂಟೆ ವೇಳೆ ಮಣ್ಣಂಗುಳಿ ಪರಿಸರದಲ್ಲಿ ಅಪಘಾತ ಸಂಭವಿಸಿದೆ. ಈ ನಾಲ್ಕು ಮಂದಿ ಎರಡು ಕಾರುಗಳಲ್ಲಾಗಿ ಬಾಯಾರು ಭಾಗದತ್ತ ತೆರಳುತ್ತಿರುವಾಗ ಮಣ್ಣಂಗುಳಿ ಇಳಿಜಾರಿನಲ್ಲಿ ಕಾರೊಂದನ್ನು ರಸ್ತೆ ಬದಿಗೆ ಚಲಾಯಿಸುತ್ತಿದ್ದಂತೆ ಹಿಂದಿನಿಂದ ಆಗಮಿಸುತ್ತಿದ್ದ ಈ ತಂಡದ ಇನ್ನೊಂದು ಕಾರು ಢಿಕ್ಕಿ ಹೊಡೆದಿದೆ. ಈ ವೇಳೆ ಎರಡೂ ಕಾರುಗಳು …