ಪೂಚಕ್ಕಾಡ್‌ನಲ್ಲಿ ರೈಲಿಗೆ ಕಲ್ಲೆಸೆತ: ಮಹಿಳೆಗೆ ಗಾಯ

ಕಾಸರಗೋಡು: ಬೇಕಲ ಪೊಲೀಸ್ ಠಾಣೆ ವ್ಯಾಪ್ತಿಯ ಪಳ್ಳಿಕೆರೆ ಪೂಚಕ್ಕಾಡ್ ನಲ್ಲಿ ರೈಲಿಗೆ ಕಲ್ಲೆಸೆತ ಉಂಟಾಗಿದೆ. ಜನರಲ್ ಕೋಚ್‌ನಲ್ಲಿ ಪ್ರಯಾಣಿಸುತ್ತಿದ್ದ ಮಹಿಳೆಗೆ ಗಾಯವುಂಟಾಗಿದೆ. ಕಣ್ಣಿಗೆ ಗಾಯಗೊಂಡ ನೀಲೇಶ್ವರ ಆಲಿಂಗೀಳ್ ನಿವಾಸಿ ಪಿ.ವಿ. ಕುಂಞಿಕೃಷ್ಣನ್‌ರ ಪತ್ನಿ ಅನಿತ (58)ರನ್ನು ಕಾಞಂಗಾಡ್ ಖಾಸಗಿ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ. ನಿನ್ನೆ ಮಧ್ಯಾಹ್ನ ಕೊಯಂಬತ್ತೂರ್‌ಗೆ ತೆರಳುತ್ತಿದ್ದ ಇಂಟರ್‌ಸಿಟಿ ಸೂಪರ್ ಫಾಸ್ಟ್ ಎಕ್ಸ್‌ಪ್ರೆಸ್‌ಗೆ ಕಲ್ಲೆಸೆತ ಉಂಟಾಗಿದೆ. ಮಹಿಳೆ ಮಂಗಳೂರಿ ನಿಂದ ನೀಲೇಶ್ವರಕ್ಕೆ ಪ್ರಯಾಣಿಸುತ್ತಿದ್ದರು. ಇವರ ಬಲಕಣ್ಣಿಗೆ ಕಲ್ಲೆಸೆತದಿಂದ ಗಾಯವುಂಟಾಗಿದೆ. ಘಟನೆಯಲ್ಲಿ ಕಾಸರಗೋಡು ರೈಲ್ವೇ ಪೊಲೀಸರು ಕೇಸು ದಾಖಲಿಸಿದ್ದಾರೆ. …

ಮೂನಾರ್‌ಗೆ ಕೆಲಸಕ್ಕೆ ಹೋದ ಯುವಕ ನಾಪತ್ತೆ

ಕಾಸರಗೋಡು: ಮೂನಾರ್‌ಗೆ ಕೆಲಸಕ್ಕೆಂದು ತಿಳಿಸಿ ಮನೆಯಿಂದ ಹೋದ ಯುವಕ ನಾಪತ್ತೆಯಾಗಿ ರುವುದಾಗಿ ದೂರಲಾಗಿದೆ. ಪನಯಾಲ್ ಪೆರಿಯಾಟಡ್ಕದ ರಾಮದಾಸ್‌ರ ಪುತ್ರ ಕೆ.ವಿ. ಉಮೇಶ್ (36) ನಾಪತ್ತೆಯಾದ ಯುವಕನಾಗಿದ್ದಾನೆ. ಈ ಬಗ್ಗೆ ಪತ್ನಿ ನೀಡಿದ ದೂರಿನಂತೆ ಬೇಕಲ ಪೊಲೀ ಸರು ಕೇಸು ದಾಖಲಿಸಿ ತನಿಖೆ ಆರಂಭಿಸಿದ್ದಾರೆ. 2026 ಫೆಬ್ರವರಿ 6ರಂದು ಮೂನಾರ್‌ಗೆ ಕೆಲಸಕ್ಕೆ ಹೋಗುವುದಾಗಿ ತಿಳಿಸಿ ಮನೆಯಿಂದ ಹೋದ ಉಮೇಶ್ ಬಳಿಕ ಮರಳಿ ಬಂದಿಲ್ಲ. ಅಲ್ಲದೆ ಅವರ ಕುರಿತಾಗಿ ಯಾವುದೇ ಮಾಹಿತಿ ಇಲ್ಲವೆಂದು ದೂರಿನಲ್ಲಿ ತಿಳಿಸಲಾಗಿದೆ. ಇದೇ ವೇಳೆ ಉಮೇಶ್‌ರ …

ಪೈವಳಿಕೆಯಲ್ಲಿ ರಾಜೀವ್ ಗಾಂಧಿ ಸಂಸ್ಮರಣೆ

ಪೈವಳಿಕೆ: ಮಾಜಿ ಪ್ರಧಾನಿ, ಇಂಡಿಯನ್ ನೇಶನಲ್ ಕಾಂಗ್ರೆಸ್‌ನ ಮಾಜಿ ಅಧ್ಯಕ್ಷ ದಿವಂಗತ ರಾಜೀವ್ ಗಾಂಧಿಯವರ ೩೬ನೇ ಪುಣ್ಯತಿಥಿಯನ್ನು ಪೈವಳಿಕೆ ಮಂಡಲ ಕಾಂಗ್ರೆಸ್ ಸಮಿತಿ ವತಿಯಿಂದ ಆಚರಿಸಲಾಯಿತು. ಮಂಡಲ ಅಧ್ಯಕ್ಷÀ ವಸಂತ ಕುಮಾರ್ ಉದ್ಘಾಟಿಸಿದರು. ಉಪಾಧ್ಯಕ್ಷ ಚನಿಯಪ್ಪ ಮಾಸ್ತರ್ ಅಧ್ಯಕ್ಷತೆ ವಹಿಸಿದ್ದರು. ಪೈವಳಿಕೆ ನಗರದಲ್ಲಿ ನಡೆದ ಕಾರ್ಯಕ್ರಮದಲ್ಲಿ ರಾಜೀವ ಗಾಂಧಿಯವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ನಡೆಸಲಾಯಿತು. ನಾರಾಯಣ ಏದಾರ್, ಸಚ್ಚಿದಾನಂದ ರೈ, ಗಂಗಾಧರ ನಾಯಕ್, ಎಡ್ವರ್ಡ್ ಡಿ ಸೋಜ, ಅಬ್ದುಲ್ಲ ಶಾ ಉಪಸ್ಥಿತರಿದ್ದರು. ಶಿವರಾಮ ಶೆಟ್ಟಿ ಸ್ವಾಗತಿಸಿ, ರಸಾಕ್ ಪಟ್ಲ …

ಕಾಸರಗೋಡು ಬೀಚ್ ರನ್ ನಾಳೆ : ಪರಿಸರ ಶುಚೀಕರಣ

ಕಾಸರಗೋಡು: ಕಾಸರಗೋಡು ನಗರಸಭೆ, ಜಿಲ್ಲಾಡಳಿತ, ಜಿಲ್ಲಾ ಟೂರಿಸಂ ಪ್ರಮೋಷನ್ ಕೌನ್ಸಿಲ್ ಎಂಬಿವುಗಳ ಜಂಟಿ ಆಶ್ರಯದಲ್ಲಿ ನಾಳೆ ನೆಲ್ಲಿಕುಂಜೆ ಬೀಚ್‌ನಲ್ಲಿ ನಡೆಯಲಿರುವ ಕಾಸರಗೋಡು ಬೀಚ್ ರನ್ ಅಂಗವಾಗಿ ಬೀಚ್‌ನ್ನು ಶುಚೀಕರಿಸಲಾಯಿತು. ನಗರಸಭಾ ಉಪಾಧ್ಯಕ್ಷ ಕೆ.ಎಂ. ಹನೀಫ್, ಸ್ಥಾಯಿ ಸಮಿತಿ ಅಧ್ಯಕ್ಷರಾದ ಹಮೀದ್ ಬೆದಿರ, ಮೆಹರುನ್ನಿಸ ಹಮೀದ್, ಜಾಫರ್ ಕಮಾಲ್, ಕೌನ್ಸಿಲರ್‌ಗಳಾದ ತಶ್ರಿಫ್ ಬಷೀರ್, ಆಯಿಷಾ ಸಲಾಂ, ಅಬ್ದುಲ್ ರಹ್‌ಮಾನ್, ಉಮೇಶನ್, ಹರೀಶ್, ರಾಮಕೃಷ್ಣ ಹೊಳ್ಳ, ರೇಷ್ಮ, ಕಾರ್ಯದರ್ಶಿ ಶಾಜು, ನಗರಸಭಾ ಆರೋಗ್ಯ ವಿಭಾಗ ಅಧಿಕಾರಿಗಳಾದ ಮಧು, ಶೀನಾ, ವಿದ್ಯಾ, …

ಜಿಲ್ಲೆಯ ವಿಕೋಪ ನಿವಾರಣೆಯ ಚಟುವಟಿಕೆಗಳನ್ನು ಶೀಘ್ರವೇ ಪೂರ್ತಿಗೊಳಿಸಲು ಅವಲೋಕನ ಸಭೆಯಲ್ಲಿ ತೀರ್ಮಾನ

ಕಾಸರಗೋಡು: ಮಳೆಗಾಲದ ಪೂರ್ವಭಾವಿಯಾಗಿ ಜಿಲ್ಲೆಯ ದುರಂತ ನಿವಾರಣೆ ಚಟುವಟಿಕೆಗಳ ಸಿದ್ಧತೆ ಕ್ರಮಗಳನ್ನು ಶೀಘ್ರವೇ ನಡೆಸಬೇಕೆಂದು ಜಿಲ್ಲಾ ಪಂಚಾಯತ್ ಅಧ್ಯಕ್ಷ ಸಾಬು ಆಬ್ರಹಾಂ ನುಡಿದರು. ಸ್ಥಳೀಯಾಡಳಿತ ಇಲಾಖೆ ಜೊಯಿಂಟ್ ಡೈರಕ್ಟರ್‌ರ ಕಾರ್ಯಾಲಯದಲ್ಲಿ ಜರಗಿದ ಅವಲೋಕನ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಅವರು ಮಾತನಾಡುತ್ತಿದ್ದರು. ಮಳೆಗಾಲಕ್ಕೆ ಮುಂಚಿತವಾಗಿ ಜಿಲ್ಲೆಯ ಎಲ್ಲಾ ವಿದ್ಯಾಲಯಗಳಲ್ಲೂ ಶುಚೀಕರಣ ಚಟುವಟಿಕೆಗಳು ನಡೆಸಬೇಕು, ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ವಲಯದಲ್ಲಿ ವೆಚ್ಚಮಾಡುವ ಫಂಡ್‌ಗಳ ವಿನಿಯೋಗ ಕಾಲ ವಿಳಂಬವಿಲ್ಲದೆ ದಕ್ಷತೆಯಿಂದ ನಡೆಸಬೇಕೆಂದು ಜಿಲ್ಲಾ ಪಂಚಾಯತ್ ಅಧ್ಯಕ್ಷರು ನುಡಿದರು. ಜಿಲ್ಲೆಯಲ್ಲಿನ ಒಟ್ಟು …

ಮಂಜೇಶ್ವರ ಸಮುದ್ರ ತೀರದಲ್ಲಿ ಒಣಗಿದ ಮರದಿಂದ ಅಪಾಯ ಭೀತಿ

ಮಂಜೇಶ್ವರ: ಮಂಜೇಶ್ವರ ಸಮುದ್ರ ತೀರದಲ್ಲಿರುವ ಓಷನ್ ವಾಟರ್ ಪಾರ್ಕ್ನ ಮುಂಭಾಗದಲ್ಲಿರುವ ಬೃಹತ್ ಮರ ಯಾವುದೇ ಕ್ಷಣದಲ್ಲಿ ಧರೆಗುರುಳುವ ಸ್ಥಿತಿಯಲ್ಲಿದ್ದು, ಸಾರ್ವಜನಿಕರಲ್ಲಿ ಆತಂಕ ಮೂಡಿಸಿದೆ. ಒಣಗಿದ ಈ ಮರ ಭಾರಿ ಅನಾಹುತಕ್ಕೆ ಕಾರಣವಾಗಬಹುದೆಂದು ಸ್ಥಳೀಯರು ಮತ್ತು ಪ್ರವಾಸಿಗರು ಆತಂಕ ವ್ಯಕ್ತಪಡಿಸಿದ್ದಾರೆ. ವಾಟರ್ ಪಾರ್ಕ್ನ ಎದುರಿನ ಸಣ್ಣ ಅಂಗಡಿ ಸಮೀಪವೇ ಈ ಮರವಿದ್ದು, ಪ್ರತಿದಿನ ಸಂಜೆಯ ವೇಳೆ ಕಡಲ ತಂಗಾಳಿಯನ್ನು ಸವಿಯಲು ಮತ್ತು ಸಮಯ ಕಳೆಯಲು ನೂರಾರು ಜನರು ಇಲ್ಲಿಗೆ ಬರುತ್ತಾರೆ. ಜನನಿಬಿಡ ಪ್ರದೇಶವಾಗಿರುವುದರಿಂದ ಈ ಮರ ಯಾವುದೇ ಸಮಯದಲ್ಲಿ …

ಜಲಪಾತ ವೀಕ್ಷಿಸಲು ತಲುಪಿದ ವಿದ್ಯಾರ್ಥಿನಿಯರಿಗೆ ಕಿರುಕುಳ: ಮಂಜೇಶ್ವರದ ಮೂವರು ಯುವಕರು ಬೆಳ್ತಂಗಡಿಯಲ್ಲಿ ಸೆರೆ

ಕಾಸರಗೋಡು: ಕರ್ನಾಟಕದ ಬೆಳ್ತಂಗಡಿ ಸಮೀಪ ದಿಡುಪೆಯಲ್ಲಿ ಜಲ ಪಾತ ವೀಕ್ಷಿಸಲು ತಲುಪಿದ ವಿದ್ಯಾರ್ಥಿ ನಿಯರೊಂದಿಗೆ ಅನುಚಿತವಾಗಿ ವರ್ತಿಸಿ ಅವರಿಗೆ ಕಿರುಕುಳ ನೀಡಿದ ಮೂವರು ಯುವಕರನ್ನು ನಾಗರಿಕರು ಸೆರೆಹಿಡಿದು ಪೊಲೀಸರಿಗೆ ಹಸ್ತಾಂತರಿಸಿದ್ದಾರೆ.  ಮಂಜೇಶ್ವರ ನಿವಾಸಿಗಳೆಂದು ಹೇಳಲಾದ ಅಬ್ದುಲ್ ಖಾದರ್ ಅಲ್ತಾಫ್ (36), ಫೈಸಲ್‌ಆದಿಲ್ (27), ಉಸ್ಮಾನ್ ಸಲೀಂ (18) ಎಂಬಿವರು ಬಂಧಿತ ಆರೋಪಿಗಳಾಗಿದಾರೆಂದು ಬೆಳ್ತಂಗಡಿ ಪೊಲೀಸರು ತಿಳಿಸಿದ್ದಾರೆ.  ಮಂಗಳೂರಿನ ಕಾಲೇಜು ವಿದ್ಯಾರ್ಥಿ ನಿಯರಾದ ಮೂವರು ಯುವತಿಯರು ಮೂವರು ಯುವಕರೊಂದಿಗೆ ಜಲಪಾತ ವೀಕ್ಷಿಸಲು ತೆರಳಿದ್ದರು.  ಈ ಮಧ್ಯೆ ಅಲ್ಲಿಗೆ ತಲುಪಿದ …

ಹಾಡಹಗಲೇ ಮನೆಗೆ ನುಗ್ಗಿ ಗೃಹಿಣಿಗೆ ಅತ್ಯಾಚಾರ ಕುಂಬಳೆ ಜವುಳಿ ಅಂಗಡಿ ನೌಕರನ ವಿರುದ್ಧ ಕೇಸು

ಕುಂಬಳೆ:  ಬಟ್ಟೆಬರೆ ಖರೀದಿಸಲು ತಲುಪಿದ ಸಂದರ್ಭದಲ್ಲಿ ಪರಿಚಯ ಗೊಂಡ 42ರ ಹರೆಯದ ಗೃಹಿಣಿಯನ್ನು ಹಾಡಹಗಲೇ ಮನೆಗೆ ನುಗ್ಗಿ  ಅತ್ಯಾಚಾರ ನಡೆಸಿರುವುದಾಗಿ ದೂರಲಾಗಿದೆ.  ಕುಂ ಬಳೆಯ  ಜವುಳಿ ಅಂಗಡಿಯೊಂದರಲ್ಲಿ ಸೇಲ್ಸ್ ಮ್ಯಾನ್ ಅಗಿರುವ ಕಳತ್ತೂರು ಜುಮಾ ಮಸೀದಿ  ರಸ್ತೆ ನಿವಾಸಿಯಾದ ಸಹದ್ (26) ಎಂಬಾತನ ವಿರುದ್ಧ ಕುಂಬಳೆ ಪೊಲೀಸರು ಅತ್ಯಾಚಾರ ಸಂಬಂಧ ಕೇಸು ದಾಖಲಿಸಿಕೊಂಡಿದ್ದಾರೆ. ಆರೋಪಿಯನ್ನು ಸೆರೆಹಿಡಿಯಲು ಪೊಲೀಸರು ತನಿಖೆ ತೀವ್ರಗೊಳಿಸಿದ್ದಾರೆ. ಬಟ್ಟೆಬರೆಗಳನ್ನು ಖರೀದಿಸಲು ತಲುಪಿದ ಸಂದರ್ಭದಲ್ಲಿ 42ರ ಹರೆಯದ ಗೃಹಿಣಿಯನ್ನು ಸಹದ್ ಪರಿಚಯಗೊಂಡಿದ್ದನು. ಅನಂತರ ಆಕೆಯೊಂದಿಗೆ ಸ್ನೇಹ …

ನಿವೃತ್ತ ಸೇಲ್ ಟ್ಯಾಕ್ಸ್ ಆಫೀಸರ್ ವಿಶ್ವನಾಥ ಎ ನಿಧನ

ಕಾಸರಗೋಡು: ಕಾಸರಗೋಡು ಕರಂದಕ್ಕಾಡ್ ಉಮಾ ನರ್ಸಿಂಗ್ ಹೋಂ ರಸ್ತೆ ಬಳಿಯ ವಿವೇಕ್ ವಿಹಾರದ  ದಿವಂಗತರಾದ ಶಂಕರ ಸುವರ್ಣ-ಯಮುನ ದಂಪತಿ ಪುತ್ರ ನಿವೃತ್ತ ಸೇಲ್ಸ್ ಟ್ಯಾಕ್ಸ್ ಅಧಿಕಾರಿ  ವಿಶ್ವನಾಥ ಎ (73) ನಿನ್ನೆ ನಿಧನ ಹೊಂ ದಿದರು. ಇವರು ಈ ಹಿಂದೆ ಕನ್ನಿ ಹಿತ್ತಿಲು ಮಲರಾಯ ಧೂಮಾವತಿ ದೈವಸ್ಥಾನದ  ಅಧ್ಯಕ್ಷರಾಗಿದ್ದರು. ಮೃತರು  ಪತ್ನಿ ವೇದಾವತಿ, ಮಕ್ಕಳಾದ ವಿವೇಕ್ (ಇಂಜಿನಿಯರ್ ರಷ್ಯಾ), ವಿಜೇತ, ಅಳಿಯ ಸುಬಿತ್ (ಇಬ್ಬರು ಇಂಜಿನಿಯರ್ ಬೆಂಗಳೂರು), ಸಹೋದರ-ಸಹೋದರಿ ಯರಾದ ಲಕ್ಷ್ಮೀಶ, ಅಜಿತ್ ಕುಮಾರ್, ಪ್ರೇಮಾಜಿತ್, ಚಂದ್ರಕಾಂತ, …

ದುಬಾಯಿ ಸೆಕ್ಸ್ ರ‍್ಯಾಕೆಟ್ ದಂಧೆಗೆ ಕೇರಳದಿಂದ ಯುವತಿಯರನ್ನು ತಲುಪಿಸುತ್ತಿದ್ದ ಮುಖ್ಯ ಸೂತ್ರಧಾರ ಬಂಧನ

ಕೊಚ್ಚಿ: ಕೇರಳದಿಂದ ಯುವತಿ ಯರನ್ನು ಫ್ಯಾಶನ್ ಶೋ ಹೆಸರಲ್ಲಿ ದುಬಾಯಿಗೆ ತಲುಪಿಸಿ ಬಳಿಕ ಅವರನ್ನು ವೇಶ್ಯಾಟಿಕೆ ಜಾಲಕ್ಕೆ ಹಸ್ತಾಂತರಿಸುವ ತಂಡದ ಮುಖ್ಯ ಸೂತ್ರಧಾರನನ್ನು ಕೊಚ್ಚಿ ಸಿಟಿ ಪೊಲೀಸರು ಬಂಧಿಸಿದ್ದಾರೆ. ಎರ್ನಾಕುಳಂ ಕೇಂದ್ರೀಕರಿಸಿ  ಯುವತಿಯರನ್ನು  ದುಬಾಯಿಗೆ ಕರೆದೊಯ್ಯಲು ನೇತೃತ್ವ ನೀಡಿರುವ ಆಲಪ್ಪುಳ ಮಾವೇಲಿಕ್ಕರ ಚಾರುಮ್ಮೂಡ್ ನಿವಾಸಿ ಶ್ರೀಕುಮಾ ರ್ ಯಾನೆ ಬಿಲಾಲ್ (42) ಬಂಧಿತ ಆರೋಪಿಯಾಗಿದ್ದಾನೆ. ಎರ್ನಾಕುಳಂ ಅಸಿಸ್ಟೆಂಟ್ ಸಿಟಿ ಪೊಲೀಸ್ ಕಮಿಶನರ್ ಕೆ.ಜಿ. ಸುರೇಶ್ ನೇತೃತ್ವದಲ್ಲಿ ನಿನ್ನೆ ಸಂಜೆ ಈತನನ್ನು ಬಂಧಿಸಲಾಗಿದೆ.  ದುಬಾಯಿಯಲ್ಲಿ ಸೆಕ್ಸ್ ರ‍್ಯಾಕೆಟ್‌ನಿಂದ ಪಾರಾಗಿ   …