ಕುಂಬಳೆ: ಟೋಲ್ ಸಂಗ್ರಹ ವಿರುದ್ಧ ಚಳವಳಿ ಎರಡನೇ ದಿನಕ್ಕೆ: ಇನ್ನಷ್ಟು ಮಂದಿಯ ಬೆಂಬಲ

ಕುಂಬಳೆ: ಕಾಸರಗೋಡು-ಮಂಗಳೂರು ರಾಷ್ಟ್ರೀಯ ಹೆದ್ದಾರಿಯ ಕುಂಬಳೆಯಲ್ಲಿ ವಾಹನಗಳಿಂದ ಟೋಲ್  ವಸೂಲು ಮಾಡುವುದರ ವಿರುದ್ಧ ಕ್ರಿಯಾ ಸಮಿತಿ  ಆರಂಭಿಸಿದ ಅನಿರ್ದಿಷ್ಟಾವಧಿ ಚಳವಳಿ ಇಂದು ಎರಡನೇ ದಿನ ಮುಂದುವರಿಯುತ್ತಿದೆ. ಮಂಜೇಶ್ವರ ಶಾಸಕ ಎಕೆಎಂ ಅಶ್ರಫ್ ಚಳವಳಿಯಲ್ಲಿ ಸಕ್ರಿಯನಾಗಿ ಪಾಲ್ಗೊಳ್ಳುತ್ತಿದ್ದು ಸಮಸ್ಯೆಗೆ ಪರಿಹಾರ ಕಾಣದೆ ಇದರಿಂದ ಹಿಂಜರಿಯುವು ದಿಲ್ಲವೆಂದು ತಿಳಿಸಿದ್ದಾರೆ.  ಇದೇ ವೇಳೆ ಚಳವಳಿಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಜನರು ಭಾಗವಹಿಸುತ್ತಿದ್ದು ಇದ ಅಧಿಕಾರಿಗಳನ್ನು ಆತಂಕಕ್ಕೆ ಸಿಲುಕಿಸಿದೆ. ಇದರಿಂದ ನಿನ್ನೆ ಶುಲ್ಕ ಸಂಗ್ರಹವನ್ನು ನಾಲ್ಕು ಗಂಟೆ ನಿಲ್ಲಿಸಲಾಗಿತ್ತು. ನಿನ್ನೆ ಬೆಳಿಗ್ಗೆ 10ರಿಂದ ಮಧ್ಯಾಹ್ನ …

ರಾಜ್ಯ ಶಾಲಾ ಕಲೋತ್ಸವಕ್ಕೆ ದೀಪ ಪ್ರಜ್ವಲನೆ: 15,000ಕ್ಕೂ ಅಧಿಕ ವಿದ್ಯಾರ್ಥಿಗಳಿಂದ ವಿವಿಧ ವಿಭಾಗಗಳಲ್ಲಿ ಸ್ಪರ್ಧೆ

ತೃಶೂರು: 64ನೇ ರಾಜ್ಯ ಶಾಲಾ ಕಲೋತ್ಸವಕ್ಕೆ ಇಂದು ಬೆಳಿಗ್ಗೆ ಚಾಲನೆ ನೀಡಲಾಯಿತು. ತೇಕಿನ್‌ಕ್ಕಾಡ್ ಮೈದಾನದಲ್ಲಿರುವ ಪ್ರಧಾನ ವೇದಿಕೆ ಯಲ್ಲಿ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಕಲೋತ್ಸವವನ್ನು ಉದ್ಘಾಟಿ ಸಿದರು. ಶಿಕ್ಷಣ ಇಲಾಖೆ ಸಚಿವ ವಿ.ಎಸ್. ಶಿವನ್ ಕುಟ್ಟಿ ಅಧ್ಯಕ್ಷತೆ ವಹಿಸಿದರು. ಇಂದಿನಿಂದ ಈ ತಿಂಗಳ 18ರವರೆಗೆ ಶಾಲಾ ಕಲೋತ್ಸವ ಮುಂದು ವರಿಯಲಿದೆ. 25 ವೇದಿಕೆಗಳಲ್ಲಿಗಾಗಿ 249 ವಿಭಾಗಗಳಲ್ಲಿ ಸ್ಪರ್ಧೆ ನಡೆಯಲಿದೆ. 15,000 ಕ್ಕೂ ಮಿಕ್ಕು ಕಲಾ ಪ್ರತಿಭೆಗಳು ಸ್ಪರ್ಧಿಸುವರು. ಬೆಳಿಗ್ಗೆ ಶಿಕ್ಷಣ ಇಲಾಖೆ ನಿರ್ದೇಶಕ ಎನ್.ಎಸ್.ಕೆ. ಉಮೇಶ್ ಧ್ವಜಾರೋಹಣಗೈದರು. …

ಗೃಹಿಣಿಗೆ ಲೈಂಗಿಕ ಕಿರುಕುಳ ಆರೋಪ: ಸಿಪಿಎಂ ನೇತಾರ ಸುಧಾಕರ ವಿರುದ್ಧ ಕೇಸು ದಾಖಲು

ಕಾಸರಗೋಡು: 48ರ ಹರೆಯದ ಗೃಹಿಣಿಗೆ ಲೈಂಗಿಕ ಕಿರುಕುಳ ನೀಡಲಾಯಿತೆಂಬ ಆರೋಪದ ಹಿನ್ನೆಲೆಯಲ್ಲಿ ಕೊನೆಗೂ ಪೊಲೀಸರು ಕೇಸು ದಾಖಲಿಸಿಕೊಂಡಿದ್ದಾರೆ. ಸಿಪಿಎಂ ಮಾಜಿ ಕುಂಬಳೆ ಏರಿಯಾ ಕಾರ್ಯದರ್ಶಿ, ಪ್ರಸ್ತುತ ಎಣ್ಮಕಜೆ ಪಂಚಾಯತ್ ಸದಸ್ಯನಾದ ಇಚ್ಲಂಪಾಡಿ ಶಾಲೆ ಅಧ್ಯಾಪಕ ಎಸ್. ಸುಧಾಕರನ ವಿರುದ್ಧ ಕಾಸರಗೋಡು ಮಹಿಳಾ ಪೊಲೀಸರು ಅತ್ಯಾಚಾರ ಕೇಸು ದಾಖಲಿಸಿಕೊಂಡಿದ್ದಾರೆ. ಡಿಜಿಪಿಯವರ ನಿರ್ದೇಶ ಪ್ರಕಾರ ಕೇಸು ದಾಖಲಿಸಿ ಕೊಂಡಿರುವುದಾಗಿ ಸೂಚನೆಯಿದೆ. ಕಿರುಕುಳಕ್ಕೆ ಸಂಬಂಧಿಸಿ ಗೃಹಿಣಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗೆ ಹಾಗೂ ಡಿಜಿಪಿಗೆ ದೂರು ನೀಡಿದ್ದರು. ಆರೋಪದ ಹಿನ್ನೆಲೆಯಲ್ಲಿ ಸುಧಾಕರನನ್ನು ಪಕ್ಷದಿಂದ …

ಕುಂಬಳೆ ರಾಷ್ಟ್ರೀಯ ಹೆದ್ದಾರಿಯಲ್ಲಿ ಟೋಲ್ ಶುಲ್ಕ ಸಂಗ್ರಹ ವಿರುದ್ಧ ಅನಿರ್ಧಿಷ್ಟಾವಧಿ ಚಳವಳಿ ಆರಂಭ

ಕುಂಬಳೆ: ಕುಂಬಳೆ ರಾಷ್ಟ್ರೀಯ ಹೆದ್ದಾರಿಯಲ್ಲಿ ವಾಹನಗಳಿಂದ ಟೋಲ್ ಶುಲ್ಕ ಸಂಗ್ರಹಿಸುವುದರ ವಿರುದ್ಧ  ಕ್ರಿಯಾ ಸಮಿತಿ ನೇತೃತ್ವದಲ್ಲಿ ಅನಿರ್ಧಿಷ್ಟಾವಧಿ ಚಳವಳಿ ಇಂದು ಬೆಳಿಗ್ಗೆ ಆರಂಭಗೊಂಡಿದೆ. ಟೋಲ್ ಸಂಗ್ರಹ ಕೇಂದ್ರದ ಸಮೀಪ ಹೆದ್ದಾರಿ ಬದಿ ಚಪ್ಪರ ನಿರ್ಮಿಸಿ ಚಳವಳಿ ನಡೆಸಲಾಗುತ್ತಿದೆ.  ಇಂದು ಬೆಳಿಗ್ಗೆ  ವಾಹನಗಳಿಂದ ಟೋಲ್ ಸಂಗ್ರಹಿಸುತ್ತಿರುವುದನ್ನು ಕ್ರಿಯಾ ಸಮಿತಿ ಪದಾಧಿಕಾರಿಗಳು ಅಧಿಕಾರಿಗಳೊಂದಿಗೆ ಪ್ರಶ್ನಿಸಿದ್ದು, ಈ ವೇಳೆ ವಾಗ್ವಾದ ಉಂಟಾಯಿತೆನ್ನಲಾಗಿದೆ. ಸ್ಥಳದಲ್ಲಿ ಪೊಲೀಸರು ಬಿಗು ಬಂದೋಬಸ್ತ್ ಏರ್ಪಡಿಸಿದ್ದಾರೆ. ಚಳವಳಿಗೆ ಶಾಸಕರಾದ ಎಕೆಎಂ ಅಶ್ರಫ್, ಎನ್.ಎ. ನೆಲ್ಲಿಕುನ್ನು, ಜಿಲ್ಲಾ ಪಂಚಾಯತ್ ಸದಸ್ಯರಾದ …

ಹೃದಯಾಘಾತ: ಚಾಲಕ ನಿಧನ

ಮಾನ್ಯ: ಕಾರ್ಮಾರು ಬಳಿಯ ಚೆಡೇಕಲ್ಲು ನಿವಾಸಿ ವಿನ್ಸೆಂಟ್ ಡಿಸೋಜಾ (63) ಇಂದು ಮುಂ ಜಾನೆ ಹೃದಯಾಘಾತದಿಂದ ನಿಧನ ಹೊಂದಿದರು. ಇವರು ವಾಹನ ಚಾಲಕನಾಗಿ ಕೆಲಸ ನಿರ್ವಹಿಸುತ್ತಿ ದ್ದರು. ಮೃತರು ಪತ್ನಿ ಅಲಿಸ್ ಡಿಸೋಜಾ, ಮಕ್ಕಳಾದ ಪ್ರವೀಣ್ ಡಿಸೋಜಾ, ಪವಿತಾ ಡಿಸೋಜಾ, ಪ್ರಮಿತಾ ಡಿಸೋಜಾ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿ ದ್ದಾರೆ. ಮೃತರ ಅಂತ್ಯ ಸಂಸ್ಕಾರ ನಾಳೆ ಕೊಲ್ಲಂಗಾನ ಸಂತ ಥೋಮಸ್‌ರ ದೇವಾಲಯದಲ್ಲಿ ನಡೆಯಲಿದೆ.

ಮನೆಯಿಂದ ವಿದೇಶಿ ಕರೆನ್ಸಿ ಸೇರಿ 4೦೦೦ ರೂ.ಕಳವು

ಬದಿಯಡ್ಕ: ಕಳ್ಳರು ಮನೆಗೆ ನುಗ್ಗಿ ವಿದೇಶಿ ಕರೆನ್ಸಿ ಹಾಗೂ 4೦೦೦ ರೂ. ಕಳವು ಗೈದ ಬಗ್ಗೆ ಬದಿಯಡ್ಕ ಪೊಲೀಸರಿಗೆ ದೂರು ನೀಡಲಾಗಿದೆ. ಶೇಣಿ ಮಣಿಯಂಪಾರ ಹೌಸ್‌ನ ಮುಹಮ್ಮೂದ್ ಮೂಸಾನ್ ಎಂಬವರ ಮನೆಯಲ್ಲಿ ಈ ಕಳವು ನಡೆದಿದೆ. ಆ ಬಗ್ಗೆ ಅವರು ನೀಡಿದ ದೂರಿನಂತೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಆರಂಭಿಸಿದ್ದಾರೆ. ಜನವರಿ 12ರಂದು ಸಂಜೆ 6 ಗಂಟೆ ಮತ್ತು 7.30 ರ ನಡುವೆ ತಮ್ಮ ಮನೆಯ ಬಾಗಿಲ ಬೀಗ ಒಡೆದು ಒಳ ನುಗ್ಗಿದ ಕಳ್ಳರು ಮನೆಯೊಳಗಿನ ಕಪಾಟ್‌ನಲ್ಲಿ …

ಸಂಚರಿಸುತ್ತಿದ್ದ ರೈಲಿನಿಂದ ಬಿದ್ದು ನಾರಂಪಾಡಿ ನಿವಾಸಿ ಮೃತ್ಯು

ಬದಿಯಡ್ಕ: ಸಂಚರಿಸುತ್ತಿದ್ದ ರೈಲಿನಿಂದ ಬಿದ್ದು ಯುವಕ ಮೃತಪಟ್ಟ ದಾರುಣ ಘಟನೆ ಸಂಭವಿಸಿದೆ.  ನಾರಂಪಾಡಿ ನಿವಾಸಿ ಇಬ್ರಾಹಿಂ ಅಲ್ತಾಫ್ (18) ಮೃತಪಟ್ಟ ಯುವಕ. ನಿನ್ನೆ ಬೆಳಿಗ್ಗೆ ೬.೪೫ರ ವೇಳೆ ಕಣ್ಣೂರು ತಾಳೆಚೊವ್ವ ಎಂಬಲ್ಲಿ ದುರ್ಘಟನೆ ಸಂಭವಿಸಿದೆ. ಇಬ್ರಾಹಿಂ ಅಲ್ತಾಫ್ ಕಲ್ಲಿಕೋಟೆಯಿಂದ ಸ್ನೇಹಿತರೊಂದಿಗೆ ಮಲಬಾರ್ ಎಕ್ಸ್‌ಪ್ರೆಸ್‌ನಲ್ಲಿ ಕಾಸರಗೋಡಿಗೆ  ಬರುತ್ತಿದ್ದಾಗ ಈ ಘಟನೆ ನಡೆದಿದೆ. ನಾಲ್ವರು ವಿದ್ಯಾರ್ಥಿಗಳೊಂದಿಗೆ ಇತ್ತೀಚೆಗೆ ಈತ ಪ್ರವಾಸಕ್ಕೆಂದು ತೆರಳಿದ್ದನು.  ಇಬ್ರಾಹಿಂ ಅಲ್ತಾಫ್ ರೈಲಿನಿಂದ ಬೀಳುವುದನ್ನು ಕಂಡ ಸ್ನೇಹಿತರು ಹಾಗೂ ಇತರ ಪ್ರಯಾಣಿಕರು ಕೂಡಲೇ ಪೊಲೀಸರಿಗೆ ತಿಳಿಸಿದ್ದರು. ಬಳಿಕ …

ಆಹಾರ ಅನ್ನನಾಳದಲ್ಲಿ ಸಿಲುಕಿ ಚಿಕಿತ್ಸೆಯಲ್ಲಿದ್ದ ಯುವತಿ ಮೃತ್ಯು

ಕಾಸರಗೋಡು: ಆಹಾರ ಅನ್ನನಾಳದಲ್ಲಿ ಸಿಲುಕಿ ಆಸ್ಪತ್ರೆಯಲ್ಲಿ ಚಿಕಿತ್ಸೆಯಲ್ಲಿದ್ದ ಯುವತಿ ಮೃತಪಟ್ಟಳು. ಭೀಮನಡಿ ಒರಿತ್ತಾಯಿಲ್‌ನ ಜೈಮೋನ್ ಜೋಸ್ ಎಂಬವರ ಪುತ್ರಿ ಆಗ್ನಸ್ ಜೈಮೋನ್ (21) ಮೃತಪಟ್ಟ ಯುವತಿ. ಈ ತಿಂಗಳ ೬ರಂದು ರಾತ್ರಿ ಆಹಾರ ಸೇವಿಸುತ್ತಿದ್ದಾಗ ಅನ್ನನಾಳದಲ್ಲಿ ಸಿಲುಕಿತ್ತೆನ್ನಲಾಗಿದೆ. ಇದರಿಂದ ಕಣ್ಣೂರಿನ ಖಾಸಗಿ ಆಸ್ಪತ್ರೆಯಲ್ಲಿ ದಾಖಲಾಗಿದ್ದ ಯುವತಿ ನಿನ್ನೆ ಮೃತಪಟ್ಟಳು.

ಅನಂತಪುರ ಸುಡುಮದ್ದು ಕಾರ್ಖಾನೆಯಲ್ಲಿ ಸ್ಫೋಟ: ಇಬ್ಬರಿಗೆ ಗಾಯ; ಮಾಲಕಿ ವಿರುದ್ಧ ಕೇಸು ದಾಖಲು

ಕುಂಬಳೆ: ಅನಂತಪುರ ಉದ್ದಿಮೆ ಎಸ್ಟೇಟ್‌ನಲ್ಲಿ ಕಾರ್ಯವೆಸಗುತ್ತಿರುವ ರೆಡ್‌ಫೋರ್ಟ್ ಫಯರ್ ವರ್ಕ್ಸ್ ಎಂಬ ಸುಡುಮದ್ದು ನಿರ್ಮಾಣ ಕಾರ್ಖಾನೆಯಲ್ಲಿ ನಿನ್ನೆ ಸ್ಫೋಟ ಉಂಟಾಗಿ ಅದರ ಮಿಕ್ಸಿಂಗ್ ಘಟಕ ಪೂರ್ಣವಾಗಿ ಕುಸಿದು ಬಿದ್ದಿದೆ. ಅಲ್ಲೇ ಪಕ್ಕ ರಾಶಿ ಹಾಕಲಾಗಿದ್ದ ಕಸದ ರಾಶಿಗೆ ಹಾಕಿದ್ದ ಬೆಂಕಿಯಿಂದ ಕಾರ್ಖಾನೆಗೆ ಬೆಂಕಿ ತಗಲಿಕೊಂಡಿರುವುದಾಗಿ ಸಂಶಯಿಸಲಾಗುತ್ತಿದೆ. ಅನಾಹುತ ಸಂಭವಿಸಿದ ವೇಳೆ ಅಲ್ಲಿಂದ ಪ್ರಾಣ ರಕ್ಷಣೆಗಾಗಿ ಓಟಕಿತ್ತ ಇಬ್ಬರು ಕಾರ್ಮಿಕರಾದ ತಮಿಳುನಾಡು ಶಿವಕಾಶಿ ನಿವಾಸಿಗಳಾದ ಶಂಕರ ಮತ್ತು ಕುರುಪ್ಪ ಸ್ವಾಮಿ ಎಂಬವರು ಬಿದ್ದು ಸಣ್ಣ ಪುಟ್ಟ ಗಾಯಗೊಂಡಿದ್ದಾರೆ. ನಿನ್ನೆ …

ವ್ಯಕ್ತಿಯಿಂದ ಸಾರ್ವಜನಿಕ ಸ್ಥಳದಲ್ಲಿ ಅನಧಿಕೃತ ಕೊಳವೆ ಬಾವಿ ನಿರ್ಮಾಣ: ಪಂ. ಸದಸ್ಯನ ನೇತೃತ್ವದಲ್ಲಿ ತಡೆ

ಉಪ್ಪಳ: ಸಾರ್ವಜನಿಕ ಸ್ಥಳದಲ್ಲಿ ರಾತ್ರಿ ಹೊತ್ತಲ್ಲಿ ವ್ಯಕ್ತಿಯೋರ್ವರು ಕೊಳವೆ ಬಾವಿ ಯನ್ನು ನಿರ್ಮಿಸಲು ಮುಂದಾಗಿದ್ದು ಈ ವೇಳೆ ವಾರ್ಡ್ ಸದಸ್ಯರ ನೇತೃತ್ವದಲ್ಲಿ ಊರವರು ತಡೆದ ಘಟನೆ ಸೋಂಕಾಲಿನಲ್ಲಿ ನಡೆದಿದೆ. ಮಂಗಲ್ಪಾಡಿ ಪಂಚಾಯತ್‌ನ ಸೋಂಕಾಲಿನಲ್ಲಿ ನೂತನವಾಗಿ ನಿರ್ಮಾಣ ಗೊಂಡ ಫ್ಲಾಟ್‌ನ ಮುಂಭಾಗದಲ್ಲಿ ಅನಧಿಕೃತ ವಾಗಿ ನಿನ್ನೆ ರಾತ್ರಿ ಸುಮಾರು 9.30ರ ವೇಳೆ ಕೊಳವೆ ಬಾವಿಯನ್ನು ನಿರ್ಮಿಸಲು ಪ್ರಾರಂಭಿ ಸಲಾಗಿದೆ. ಮಾಹಿತಿ ತಿಳಿದು 7ನೇ ವಾರ್ಡ್ ಸದಸ್ಯ ವಸಂತ ಕುಮಾರ್ ಮಯ್ಯರ ನೇತೃತ್ವ ದಲ್ಲಿ ಊರವರು ತಲುಪಿ ಕಾಮಗಾರಿಯನ್ನು ಮುಂದುವರಿಸದAತೆ …