ಪ್ರೀತಿ ನಿರಾಕರಣೆ: 16ರ ಬಾಲಕಿಗೆ ಇರಿದು ಕೊಲೆಗೆತ್ನ

ತಿರುವನಂತಪುರ: ಪ್ರೀತಿ ನಿರಾಕರಿಸಿದ ದ್ವೇಷದಿಂದ 16ರ ಬಾಲಕಿಯನ್ನು ಇರಿದು ಗಾಯಗೊಳಿಸಿದ ಘಟನೆ ನಡೆದಿದೆ. ತಿರುವನಂತಪುರ ಕನ್ಯಾಕುಳಂಗರ ನಿವಾಸಿಯಾದ 16ರ ಬಾಲಕಿ ಆಕ್ರಮಣಕ್ಕೆ ತುತ್ತಾಗಿದ್ದಾಳೆ. ಪನವೂರ್ ನಿವಾಸಿಯಾದ ಫಹದ್ ಇರಿದಿದ್ದಾನೆ. ಕಾರಿನಲ್ಲಿ ತಲುಪಿದ ಆರೋಪಿ ಬಾಲಕಿಗೆ ಇರಿದು ಕೊಲೆಗೈಯ್ಯಲೆತ್ನಿಸಿದ್ದನು. ಕುತ್ತಿಗೆಗೆ ಗಾಯಗೊಂಡ ಬಾಲಕಿಯನ್ನು ಕೂಡಲೇ ಮೆಡಿಕಲ್ ಕಾಲೇಜು ಆಸ್ಪತ್ರೆಗೆ ದಾಖಲಿಸಲಾಯಿತು. ನೆಡುವೇಲಿ ಹೈಯರ್ ಸೆಕೆಂಡರಿ ಶಾಲೆಯ ದ್ವಿತೀಯ ವರ್ಷದ ಪ್ಲಸ್ ಟು ವಿದ್ಯಾರ್ಥಿನಿಯಾಗಿದ್ದಾಳೆ ಬಾಲಕಿ. ಆರೋಪಿ ಪರಾರಿಯಾಗಿದ್ದಾನೆ. ವಟ್ಟಪ್ಪಾರ ಪೊಲೀಸರು ಕೇಸು ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ.

ಭಕ್ತರ ಅಸಹನೀಯ ವರ್ತನೆ: ಕೊಟ್ಟಿಯೂರಿನಲ್ಲಿ ಆನೆಗಳ ಕಾದಾಟ

ಕೊಟ್ಟಿಯೂರ್: ಭಕ್ತಜನರ ಅಸಹನೀಯ ವರ್ತನೆ ಹಿನ್ನೆಲೆಯಲ್ಲಿ ಕೊಟ್ಟಿಯೂರಿನಲ್ಲಿ ಆನೆಗಳು ಪರಸ್ಪರ ಕಚ್ಚಾಟ ನಡೆಸಿರುವುದು ಆತಂಕಕ್ಕೆ ಕಾರಣವಾಯಿತು. ಕೊಟ್ಟಿಯೂರಿನ ಪಾರ್ವತಿ ದೇವಿಯ ವಿಗ್ರಹವನ್ನು ಹೊತ್ತೊಯ್ಯುವ ತಕ್ಕಾವಿಳ ವಿಷ್ಣುನಾರಾಯಣನ್ ಎಂಬ ಹೆಸರಿನ ಆನೆ ಹಾಗೂ ಪೆರುಮಾಳ್‌ರ ವಿಗ್ರಹವನ್ನು ಕೊಂಡೊಯ್ಯುವ ಕೊಡುಮನ್ ಶಿವ ಎಂಬ ಹೆಸರಿನ ಆನೆಗಳು ಪರಸ್ಪರ ಕಾದಾಡಿ ಗಾಯವುಂಟುಮಾಡಿಕೊಂಡಿವೆ. ಎರಡು ಆನೆಗಳನ್ನು ಕೊಟ್ಟಿಯೂರು ದೇವಸ್ಥಾನದ ಸಮೀಪ ನಿಲ್ಲಿಸಲಾಗಿತ್ತು. ನಿನ್ನೆ ಬೆಳಿಗ್ಗೆ 9 ಗಂಟೆ ವೇಳೆ ಇಲ್ಲಿ ಆನೆಗಳು ಪರಸ್ಪರ ಕಾದಾಡಿಕೊಂಡಿವೆ. ಬಳಿಕ ಮಾವುತರು ತಲುಪಿ ಆನೆಗಳನ್ನು ಶಾಂತಗೊಳಿಸಿದ್ದಾರೆ. ಇಲ್ಲಿಗೆ …

ಕ್ಷಿಪ್ರ ರೈಲು ಯೋಜನೆಯಲ್ಲಿ ಕಾಸರಗೋಡಿಗೆ ಕೂಡಾ ಪರಿಗಣನೆ- ಸಚಿವ ಕೆ.ಎಂ. ಶಾಜಿ

ಕಾಸರಗೋಡು: ಅಧಿಕಾರ ಸ್ವೀಕರಿ ಸಿದ ಬಳಿಕ ಪ್ರಥಮ ಬಾರಿಗೆ ಕಾಸರ ಗೋಡಿಗೆ ತಲುಪಿದ ಸ್ಥಳೀಯಾಡಳಿತ ಇಲಾಖೆ ಸಚಿವ ಕೆ.ಎಂ. ಶಾಜಿಯ ವರನ್ನು ಕಾಸರಗೋಡು ಅತಿಥಿ ಮಂದಿರದಲ್ಲಿ ಕಾಸರಗೋಡು ಚೇಂಬರ್ ಆಫ್ ಕಾಮರ್ಸ್‌ನ ಆಶ್ರಯದಲ್ಲಿ ಅಭಿನಂದಿಸಲಾಯಿತು. ಈ ವೇಳೆ ಮಾತನಾಡಿದ ಅವರು ಕ್ಷಿಪ್ರ ರೈಲು ಸಾಕಾರಗೊಳ್ಳುವಾಗ ಅದರಲ್ಲಿ ಕಾಸರ ಗೋಡು ಕೂಡಾ ಸೇರಿಕೊಂಡಿರುತ್ತದೆ ಎಂಬುದರಲ್ಲಿ ಯಾವುದೇ ಸಂಶಯ ಬೇಡವೆಂದು  ನುಡಿದರು. ಜಿಲ್ಲೆಯ ಅಭಿವೃದ್ಧಿಗಾಗಿ ಎಲ್ಲಾ ಸ್ತರಗಳಲ್ಲಿರುವ ವ್ಯಕ್ತಿಗಳ ಅಭಿ ಪ್ರಾಯವನ್ನು ಸಂಯೋಜಿಸಿಕೊಂಡು ಯೋಜನೆ ಸಿದ್ಧಪಡಿಸಲಾಗುವು ದೆಂದು ಅವರು ನುಡಿದರು. …

ಬಿಲ್ಲವ ಸೇವಾಸಂಘದಿಂದ ಮಕ್ಕಳಿಗೆ ಪುಸ್ತಕ ವಿತರಣೆ

ಕಾಸರಗೋಡು: ಬಿಲ್ಲವ ಸೇವಾ ಸಂಘ ಕರಂದಕ್ಕಾಡ್ ಕಾಸರಗೋಡು ಇದರ ಆಶ್ರಯದಲ್ಲಿ ಉÅ್ವಔ್ರಜಿ ಯಿಂದ ಲ್ಣÇ್ಚ್ವ ಟ್ನ ವರೆಗಿನ ಮಕ್ಕಳಿಗೆ ಉಚಿತ ಪುಸ್ತಕ ವಿತರಣೆ ನಡೆಯಿತು. ಕರಂದಕ್ಕಾಡ್ ಶ್ರೀ ನಾರಾಯಣ ಗುರು ಸಭಾಂಗಣದಲ್ಲಿ ವ್ಣಿs್ರ¥್ಣ ಕಾರ್ಯಕ್ರಮ್ಣೃವ್ಣ್ನಿ­ ಮಾಜಿ ಡೆಪ್ಯೂಟಿ ತಹಸೀಲ್ದಾರ್ ಚಂದ್ರಕಲಾ ಸಸಿಹಿತ್ಲು ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿದರು. ಮೊದಲಿಗೆ ಉÅ್ವಔ್ರಜಿ ಮಕ್ಕಳಿಗೆ ಪುಸ್ತಕ ೆ}್ಣÂ್ಚ್ಣ್ನÈ್ಣ ಮೂಲಕ ಪುಸ್ತಕ ವಿತರಣೆಗೆ ಚಾಲನೆ ನೀಡಿದರು. ಬಿಲ್ಲವ ಸಂಘದ ಅಧ್ಯಕ್ಷ ರಘು ಕೆ. ಮೀಪುಗುರಿ ಅಧ್ಯಕ್ಷತೆ È್ಣ್ಞ್ಛ¥್ಣÁ್ಣ್ನ.ನಗರ ಸಭಾ ಸದಸ್ಯ ಹರೀಶ್ ಕೆ.ಆರ್ …

ಜಿಲ್ಲಾ ಯೋಗ ಚಾಂಪ್ಯನ್‌ಶಿಪ್‌ನಲ್ಲಿ ಅಷ್ಟಾಂಗ ಯೋಗ ಕೇಂದ್ರ ಚಾಂಪ್ಯನ್

ಕಾಸರಗೋಡು: ಉದುಮ ಗ್ರೀನ್‌ವುಡ್ ಪಬ್ಲಿಕ್ ಸ್ಕೂಲ್‌ನಲ್ಲಿ ನಡೆದ 11ನೇ ಜಿಲ್ಲಾ ಯೋಗ ಚಾಂಪ್ಯನ್‌ಶಿಪ್‌ನಲ್ಲಿ ಕಾಸರಗೋಡಿನ ಅಷ್ಟಾಂಗ ಯೋಗ ಕೇಂದ್ರ ಸಮಗ್ರ ಚಾಂಪ್ಯನ್ ಪಡೆದಿದೆ. ಇಲ್ಲಿನ ವಿದ್ಯಾರ್ಥಿಗಳಾದ ಅಮನ್ ಎಂ. 1೦ರಿಂದ 12ರ ಮಧ್ಯ ಪ್ರಾಯದ ಹುಡುಗರ ವಿಭಾಗದಲ್ಲಿ ದ್ವಿತೀಯ, ಹುಡುಗಿಯರ ವಿಭಾಗದಲ್ಲಿ ದಿಲ್ಮಾ ಜಿ. ದ್ವಿತೀಯ, 12ರಿಂದ 14 ರ ಮಧ್ಯೆಗಿನ ಹುಡುಗರ ವಿಭಾಗದಲ್ಲಿ ಧ್ಯಾನ್ ಜಿ. ಪ್ರಥಮ, ಧನ್ವಿತ್ ಶೆಟ್ಟಿ ದ್ವಿತೀಯ, ಹುಡುಗಿಯರ ವಿಭಾಗದಲ್ಲಿ ಅಪರ್ಣ ಪಿ. ದ್ವಿತೀಯ, 14ರಿಂದ 16ರ ಮಧ್ಯೆಗಿನ ಹುಡುಗರ ವಿಭಾಗದಲ್ಲಿ …

ಬೀಡಿ ವಲಯದ ಕಾರ್ಮಿಕರನ್ನು ಸಂರಕ್ಷಿಸಬೇಕು- ಬೀಡಿ ಮಜ್ದೂರ್ ಸಂಘ್

ಕಾಸರಗೋಡು: ಬೀಡಿ ವಲಯದಲ್ಲಿ ದುಡಿಯುತ್ತಿರುವ ಬೀಡಿ ಕಾರ್ಮಿಕರನ್ನು ಸಂರಕ್ಷಿಸಬೇಕೆಂದು ಜಿಲ್ಲಾ ಬೀಡಿ ಮಜ್ದೂರ್ ಸಂಘ್‌ನ  ವಾರ್ಷಿಕ ಪ್ರತಿನಿಧಿ ಸಮ್ಮೇಳನ ಆಗ್ರಹಿಸಿದೆ. ಒಂದು ಕಾಲದಲ್ಲಿ ಕಾಸರಗೋಡು, ಕಣ್ಣೂರು ಜಿಲ್ಲೆಯಲ್ಲಿ ಲಕ್ಷಾಂತರ ಕಾರ್ಮಿಕರು ದುಡಿಯುತ್ತಿದ್ದ ವಲಯವಾಗಿತ್ತು ಇದು. ಆದರೆ ಈಗ ವಿವಿಧ ಅಸೌಖ್ಯ ತಗಲಿ ಸಂಕಷ್ಟದಲ್ಲಿರುವ ಕಾರ್ಮಿಕರಿಗೆ ಪಿಎಫ್ ಪಿಂಚಣಿ ಎಂಬುದು ನಾಮ ಮಾತ್ರವಾಗಿದ್ದು, ಡಿಎ ಮೊದಲಾದ ಸೌಲಭ್ಯಗಳು ಲಭಿಸುತ್ತಿಲ್ಲ. ಈ ಹಿನ್ನೆಲೆಯಲ್ಲಿ ಈ ವಲಯವನ್ನು ಸಂರಕ್ಷಿಸಬೇಕೆಂದು ಸಮ್ಮೇಳನ ಆಗ್ರಹಿಸಿದೆ. ಭಾರತೀಯ ಮಜ್ದೂರ್ ಸಂಘ್ ರಾಜ್ಯ ಸಮಿತಿ ಅಧ್ಯಕ್ಷ ವಿ.ವಿ. …

ಅಬೂಬಕರ್ ನಿಧನ

ಕುಂಬಳೆ: ಸುಬ್ಬಯಕಟ್ಟೆ ಕುಡಾಲುಮೇರ್ಕಳದ ಅಬೂಬಕರ್ (7೦) ನಿಧನಹೊಂದಿದರು. ಇವರು ಈ ಹಿಂದೆ ಅಬುದಾಬಿಯಲ್ಲಿ  ಗಲ್ಪ್ ನ್ಯೂಸ್‌ನ ನೌಕರನಾಗಿದ್ದರು. ಸಾಮಾಜಿಕ ಕಾರ್ಯಕರ್ತನೂ ಆಗಿದ್ದ ಇವರು ಚಪ್ಪಾಳೆತಟ್ಟಿ ಹಾಡುಗಾರನೂ ಆಗಿದ್ದರು. ಮೃತರು ಪತ್ನಿ ಆಯಿಶಾಬಿ, ಮಕ್ಕಳಾದ ಫಾರಿಸ್, ಖಲೀಲ್, ಸುಹರ, ರುಖಿಯ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ. ಅಬೂಬಕರ್‌ರ ಪತ್ನಿ ಆಯಿಶಾಬಿ ಹಜ್‌ಗೆ ತೆರಳಿದ್ದು ಇಂದು ಮರಳಿ ಮನೆಗೆ ತಲುಪಲಿದ್ದಾರೆ. ಅನಂತರ ಸುಬ್ಬಯಕಟ್ಟೆ ಜುಮಾ ಮಸೀದಿ ಬಳಿ ಅಂತ್ಯಸಂಸ್ಕಾರ ನಡೆಯಲಿದೆಯೆಂದು ಸಂಬಂಧಿಕರು ತಿಳಿಸಿದ್ದಾರೆ.

ಶಂಕರ ಭಟ್ ನಿಧನ

ಪೆರ್ಲ: ಎಣ್ಮಕಜೆ ಗ್ರಾಮದ ಮಂಜಳಗಿರಿ ನಿವಾಸಿ ಶಂಕರ ಭಟ್ (96) ನಿಧನ ಹೊಂದಿದರು. ಮೃತರು  ಮಕ್ಕಳಾದ ಶ್ರೀಕೃಷ್ಣ ಭಟ್, ಲೀಲಾವತಿ, ಪ್ರೇಮಕುಮಾರಿ, ನಳಿನಿ, ಅನ್ನಪೂರ್ಣ, ಗೀತ ಹಾಗೂ ಅಪಾರ ಬಂಧು ಮಿತ್ರರನ್ನು ಅಗಲಿದ್ದಾರೆ. ಪತ್ನಿ ಪಾರ್ವತಿ, ಪುತ್ರ ಸತ್ಯಶಂಕರ, ಪುತ್ರಿ ಸುಮಂಗಳ, ಸಹೋದರ ಕೇಶವ ಭಟ್, ಸಹೋದರಿ ತೆಕ್ಕೇಕರೆ ಶಂಕರಿ ಅಮ್ಮ ಈ ಹಿಂದೆ ನಿಧನ ಹೊಂದಿದ್ದಾರೆ.

ಕೆಲಸದಿಂದ ಹೊರಹಾಕಿದ ದ್ವೇಷ : ಹೋಟೆಲ್‌ನಿಂದ ಕಳವು ನಡೆಸಿದ ಯುವಕ ಸೆರೆ

ಕುಂಬಳೆ: ಕೆಲಸದಿಂದ ಹೊರ ಹಾಕಿದ ದ್ವೇಷದಿಂದ ಹೋಟೆಲ್‌ಗೆ ನುಗ್ಗಿ ಕಳವುಗೈದ ಯುವಕನನ್ನು ಪೊಲೀಸರು ಬಂಧಿಸಿದ್ದಾರೆ. ಮಂಗಲ್ಪಾಡಿ ಬೇಕೂರಿನ ಅಶ್ರಫ್ ಅಲಿ (40) ಎಂಬಾತನನ್ನು ಕುಂಬಳೆ ಎಸ್‌ಐ ಗಣೇಶ್ ನೇತೃತ್ವದ ತಂಡ ಬಂಧಿಸಿದೆ. ಉದ್ಯಾವರದ ಅಬ್ಬಾಸ್‌ರ ಮಾಲಕತ್ವದಲ್ಲಿ ಬಂದ್ಯೋ ಡಿನಲ್ಲಿರುವ ಇರಾನಿ ಅಬ್ಬಾಸಿ ಕಬಾಬ್ ಎಂಬ ಹೋಟೆಲ್‌ನಲ್ಲಿ ಅಶ್ರಫ್ ಅಲಿ ಈ ಹಿಂದೆ ಕೆಲಸ ನಿರ್ವಹಿಸುತ್ತಿದ್ದನು.  ಇತ್ತೀಚೆಗೆ ಈತನನ್ನು ಕೆಲಸದಿಂದ ಹೊರತುಪಡಿಸಲಾಗಿತ್ತು. ಇದರ ದ್ವೇಷದಿಂದ ಈ ತಿಂಗಳ ೧೩ರಂದು ರಾತ್ರಿ ಹೋಟೆಲ್‌ನ ಬೀಗ ಮುರಿದು  ಒಳಗೆ ನುಗ್ಗಿದ ಆರೋಪಿ …

ಯುವತಿಯನ್ನು ವಸತಿಗೃಹದಲ್ಲಿ ಕಟ್ಟಿಹಾಕಿ ಲೈಂಗಿಕ ಕಿರುಕುಳ ನೀಡಿದ ಆರೋಪಿ ಸೆರೆ

ಕಾಸರಗೋಡು: ವಸತಿಗೃಹ ದಲ್ಲಿ ಕಟ್ಟಿಹಾಕಿ ಲೈಂಗಿಕ ಕಿರುಕುಳ ನೀಡಿದ ಪ್ರಕರಣದ ಆರೋಪಿ ಯನ್ನು ಕಾಸರಗೋಡು ಪೊಲೀ ಸರು ಬಂಧಿಸಿದ್ದಾರೆ. ಕಾಸರ ಗೋಡು ನೆಲ್ಕಳ ನಿವಾಸಿ ವಿಷ್ಣು ಪ್ರಸಾದ್ ಅಲಿಯಾಸ್ ವಿಷ್ಣು (26) ಬಂಧಿತ ಆರೋಪಿ. ಜೂನ್ 13ರಂದು ಕಾಸರಗೋಡು ನಗರಕ್ಕೆ ಬಂದಿದ್ದ 19ರ ಹರೆಯದ ಯುವತಿಯಲ್ಲಿ ಕುಟುಂಬ ವಿಷಯದ ಬಗ್ಗೆ ಮಾತನಾಡಲೆಂದು ತಿಳಿಸಿ ಆರೋಪಿ ಆಕೆಯನ್ನು ಆಟೋ ರಿಕ್ಷಾಕ್ಕೇರಿಸಿ ನಗರದ ವಸತಿಗೃಹಕ್ಕೆ ಸಾಗಿಸಿ ಅಲ್ಲಿನ ಕೊಠಡಿಯಲ್ಲಿ ಆಕೆಯ ಮೊಬೈಲ್ ಫೋನ್ ಪಡೆದ ಬಳಿಕ ಲೈಂಗಿಕ ಕಿರುಕುಳ ನೀಡಲೆತ್ನಿಸಿದ್ದನೆಂದೂ …