ವ್ಯಾಪಾರಿ ನಿಧನ

ಮಾನ್ಯ:ಮಾನ್ಯದಲ್ಲಿ ವ್ಯಾಪಾರಿಯಾಗಿರುವ ಮಾನ್ಯ ನಿವಾಸಿ ನಾರಾಯಣ ಮಣಿಯಾಣಿ ಕಲ್ಲುಗುಂಡಿ (67) ಎಂಬವರು  ನಿಧನ ಹೊಂದಿ ದರು. ಅಲ್ಪ ಕಾಲದಿಂದ  ಅಸೌಖ್ಯ ಬಾಧಿಸಿದ್ದ ಇವರನ್ನು ಕುಂಬಳೆ ಆಸ್ಪತ್ರೆಯಲ್ಲಿ ದಾಖಲಿಸಲಾಗಿತ್ತು. ಮೃತರು ಪತ್ನಿ ಮೀನಾಕ್ಷಿ, ಮಕ್ಕಳಾದ ಕಿರಣ್‌ರಾಜ್, ಪವನ್ ರಾಜ್,  ಸೊಸೆ ಕವಿತಾ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.

ಫಾಂಗೆ ನುಗ್ಗಿ 542 ಕೋಳಿಗಳನ್ನು ಕೊಂದು ಹಾಕಿದ ಬೀದಿ ನಾಯಿಗಳು

ಕಾಸರಗೋಡು: ಕೋಳಿ ಸಾಕಣಾ ಫಾಂಗೆ ರಾತ್ರಿ ವೇಳೆ ಬೀದಿ ನಾಯಿಗಳು ನುಗ್ಗಿ 542 ಕೋಳಿಗಳನ್ನು ಕೊಂದು ಹಾಕಿದ ಘಟನೆ ನಡೆದಿದೆ. ಭೀಮನಡಿ ಮಾಂಕೋಡು ವಿಲಂಗಿಲೆ ಮಟ್ಟತ್ತಿಲ್ ಜೋನಿ ಎಂಬವರ ಕೋಳಿಗಳನ್ನು ಬೀದಿನಾಯಿಗಳು ಈ ರೀತಿ ಕೊಂದುಹಾಕಿವೆ. ರಾತ್ರಿ ಧಾರಾಕಾರ ಮಳೆ ಸುರಿಯುತ್ತಿದ್ದ ವೇಳೆ ಬೀದಿ ನಾಯಿಗಳು ಫಾಂನೊಳಗೆ ನುಗ್ಗಿ ಕೋಳಿಗಳನ್ನು ಕೊಂದು ಹಾಕಿದ್ದು, ಅದು ಬೆಳಗ್ಗಿನ ವೇಳೆಯಷ್ಟೇ  ಮನೆಯವರ ಗಮನಕ್ಕೆ ಬಂದಿದೆ.

ರಾಷ್ಟ್ರೀಯ ಹೆದ್ದಾರಿ ಸರ್ವಿಸ್ ರಸ್ತೆ ಬದಿ ಮತ್ತೆ ಹೊಂಡ ತೋಡುತ್ತಿರುವ ಟೆಲಿಕಾಂ ಕಂಪೆನಿ: ಪಾದಚಾರಿಗಳಿಗೆ ಆತಂಕ

ಕಾಸರಗೋಡು: ಜಿಲ್ಲಾಧಿಕಾರಿಯ ನಿರ್ದೇಶವನ್ನು ಅವಗಣಿಸಿ ಟೆಲಿಕಾಂ ಕಂಪೆನಿ ಅಧಿಕಾರಿಗಳು ರಾಷ್ಟ್ರೀಯ ಹೆದ್ದಾರಿಯ ಸರ್ವಿಸ್ ರಸ್ತೆ ಬದಿ ಕಾಲುದಾರಿಯಲ್ಲಿ ಹೊಂಡ ತೋಡುತ್ತಿರುವುದಾಗಿ ದೂರಲಾಗಿದೆ. ತೋಡಿದ ಹೊಂಡವನ್ನು ಸರಿಯಾಗಿ ಮುಚ್ಚದೆ ಹಾಗೆಯೇ ಬಿಡುತ್ತಿರುವುದು ಪಾದಚಾರಿಗಳಿಗೆ ಅಪಾಯಭೀತಿ ಸೃಷ್ಟಿಸುತ್ತಿದೆ. ಮೊಗ್ರಾಲ್ ಟೌನ್ ಜಂಕ್ಷನ್ ಲೀಗ್ ಕಚೇರಿ ಸಮೀಪ ಕಾಲುದಾರಿಯಲ್ಲಿ ಅಳವಡಿಸಿದ ಇಂಟರ್‌ಲಾಕ್ ತೆಗೆದು ಹೊಂಡ ತೋಡಲಾಗಿದೆ. ಹೊಂಡ ತೋಡಿ ವಯರ್, ಪೈಪ್‌ಗಳನ್ನು ಸ್ಥಾಪಿಸುವುದಾದಲ್ಲಿ ಕೆಲಸ ಮುಗಿದೊಡನೆ ಅದನ್ನು ಮುಚ್ಚ ಬೇಕೆಂದು ಜಿಲ್ಲಾಧಿಕಾರಿ ಈ ಹಿಂದೆಯೇ ಟೆಲಿಕಾಂ ಕಂಪೆನಿಗೆ ನಿರ್ದೇಶಿಸಿದ್ದರು. ಆದರೆ ಅದನ್ನು …

ಬೈಕ್ ಅಪಘಾತ: ಇಬ್ಬರ ಸಾವು

ಕಣ್ಣೂರು: ಕಣ್ಣೂರು ಮಾತಮಂಗಲಂ ಪೆರುಂದಟ್ಟದಲ್ಲಿ ಉಂಟಾದ ಬೈಕ್ ಅಪಘಾತದಲ್ಲಿ ಇಬ್ಬರು ಪಾದಚಾರಿಗಳು ಸಾವನ್ನಪ್ಪಿದ್ದಾರೆ. ಎಳಮರಂ ನಿವಾಸಿ ವಿಜಯನ್ (50), ರತೀಶ್ (40) ಎಂಬವರು ಸಾವನ್ನಪ್ಪಿದ ದುರ್ದೈವಿಗಳು. ನಿನ್ನೆ ರಾತ್ರಿ 11 ಗಂಟೆ ವೇಳೆಗೆ ಈ ಅಪಘಾತ ಸಂಭವಿಸಿದೆ. ಬೈಕ್ ಸವಾರ ಶ್ರೀತುಲ್ ಎಂಬವರು ಈ ಅಪಘಾತದಲ್ಲಿ ಗಾಯಗೊಂಡಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಗಂಭೀರ ಗಾಯಗೊಂಡ ವಿಜಯನ್ ಮತ್ತು ರತೀಶ್‌ರನ್ನು ಪರಿಯಾರಂ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ  ದಾಖಲಿಸಿ ಚಿಕಿತ್ಸೆ ನೀಡಲಾಯಿತಾದರೂ ಫಲಕಾರಿಯಾಗದೆ ಅವರು ಸಾವನ್ನಪ್ಪಿದ್ದಾರೆ.

ಮನೆ ಶೋಚನೀಯ ಸ್ಥಿತಿಯಲ್ಲಿ: ಸಂಕಷ್ಟ ಪರಿಹಾರಕ್ಕೆ ಸಹಾಯದ ನಿರೀಕ್ಷೆಯಲ್ಲಿ ಬಡ ಕುಟುಂಬ

ಪುತ್ತಿಗೆ: ಯಾವುದೇ ಕ್ಷಣದಲ್ಲಿ ಕುಸಿದು ಬೀಳಬಹುದಾದ ಮನೆಯಲ್ಲಿ ಬಡಕುಟುಂಬವೊಂದು ವಾಸಿಸುತ್ತಿದ್ದು, ಆತಂಕ ನೆಲೆಗೊಂ ಡಿದೆ. ಪುತ್ತಿಗೆ ಪಂಚಾಯತ್ ೬ನೇ ವಾರ್ಡ್ ಪಾಡ್ಲಡ್ಕದಲ್ಲಿ ಬಡ ಕುಟುಂಬದ ಮೈಮೂನ ಎಂಬವರು ವಾಸಿಸುವ ಮನೆ ಅಪಾಯ ಭೀತಿಯೊಡ್ಡುತ್ತಿದೆ. ೧೪ ವರ್ಷಗಳ ಹಿಂದೆ ಹಳೆಯ ಹೆಂಚಿನ ಮನೆ ಹಾಗೂ ಆರು ಸೆಂಟ್ ಸ್ಥಳವನ್ನು ಮೈಮೂನ ಖರೀದಿಸಿದ್ದರು. ಹೆಂಚಿನ ಮೇಲ್ಛಾವಣಿಯಿಂದ ಮಳೆ ನೀರು ಮನೆಯೊಳಗೆ ಸೋರುತ್ತಿದೆ. ಇದರಿಂದ ಛಾವಣಿ ಮೇಲೆ ಪ್ಲಾಸ್ಟಿಕ್ ಹೊದಿಸಿ ನೀರು ಒಳಗೆ ಬೀಳುವುದನ್ನು ತಡೆಯಲಾಗಿದೆ. ಆದರೂ ಜೋರಾಗಿ ಗಾಳಿ ಬೀಸಿದರೆ …

ಜಾತಿ ಚಿಂತನೆ ತೊರೆದು ಸಮಸ್ತ ಹಿಂದೂ ಸಮಾಜ ಒಂದಾಗಬೇಕು-ಚಕ್ರವರ್ತಿ ಸೂಲಿಬೆಲೆ

ಕಾಸರಗೋಡು: ಜಾತಿ ಚಿಂತನೆ ತೊರೆದು ಸಮಸ್ತ ಹಿಂದೂ ಸಮಾಜ ಒಂದಾಗಬೇಕೆಂದು ಶ್ರೇಷ್ಠ ಚಿಂತಕ, ವಾಗ್ಮಿ ಚಕ್ರವರ್ತಿ ಸೂಲಿಬೆಲೆ ಹೇಳಿದ್ದಾರೆ. ಹಿಂದೂ ಸಮಾಜವನ್ನು ನಿರಂತರ ವಾಗಿ ಜಾತಿ  ಹೆಸರಲ್ಲಿ ವಿಭಜಿಸಲಾಗಿದೆ. ಇದರ ಹಿಂದೆ ವ್ಯವಸ್ಥಿತವಾದ ರೀತಿಯ ಷಡ್ಯಂತ್ರ ಅಡಗಿದೆ. ಆದ್ದರಿಂದ ಹಿಂದೂ ಗಳೆಲ್ಲರೂ ಜಾತಿ ಚಿಂತನೆಗೆ ಪ್ರಾಮುಖ್ಯತೆ ನೀಡದೆ ಎಲ್ಲರೂ ಸಂಘಟಿತರಾಗಬೇ ಕಾಗಿದೆಯೆಂದು ಅವರು ಹೇಳಿದ್ದಾರೆ. ಕಾಸರಗೋಡು ಸಾರ್ವಜನಿಕ ಶ್ರೀ ಗಣೇಶೋತ್ಸವದ ಸಪ್ತತಿ ಮಹೋತ್ಸವ ದಂಗವಾಗಿ ನಿನ್ನೆ ಸಂಜೆ ನಡೆದ ಮಹಿಳಾ ಧಾರ್ಮಿಕ ಸಭೆಯಲ್ಲಿ ಭಾಗವಹಿಸಿ ಅವರು ಮಾತನಾಡು …

ಕುಂಬಳೆ ಹೆದ್ದಾರಿಯಲ್ಲಿ ಟೋಲ್ ಬೂತ್: ಬಿಜೆಪಿ ವಿರುದ್ಧ ಎಸ್‌ಡಿಪಿಐ ಹೇಳಿಕೆ ಸುಳ್ಳು-ಬಿಜೆಪಿ

ಕುಂಬಳೆ: ರಾಷ್ಟ್ರೀಯ ಹೆದ್ದಾರಿಯಲ್ಲಿ ತಾತ್ಕಾಲಿಕ ಟೋಲ್ ಬೂತ್ ನಿರ್ಮಾಣ ವಿಷಯದಲ್ಲಿ ಬಿಜೆಪಿ ಹಸ್ತಕ್ಷೇಪ ಮಾಡುತ್ತಿಲ್ಲವೆಂಬ ಎಸ್‌ಡಿಪಿಐಯ ಹೇಳಿಕೆ ಸುಳ್ಳು ಎಂದು ಬಿಜೆಪಿ ಕುಂಬಳೆ ಮಂಡಲ ಸಮಿತಿ ಆರೋಪಿಸಿದೆ. ರಾಷ್ಟ್ರೀಯ ಹೆದ್ದಾರಿ ನಿರ್ಮಾಣ ಆರಂಭವಾದಾಗಿನಿಂದ ಜನರಿಗೆ ಅಗತ್ಯವಿರುವ ಕಡೆಗಳಲ್ಲಿ ಬಿಜೆಪಿ ಮಧ್ಯಪ್ರವೇಶಿಸಿದೆ.  ಕಾಸರಗೋಡು  ಜಿಲ್ಲೆಯಲ್ಲಿ ಸಂಸದ ಹಾಗೂ ಶಾಸಕರಿಗಿಂತ  ಬಿಜೆಪಿ ಜಿಲ್ಲಾಧ್ಯಕ್ಷರು ಹೆಚ್ಚು ಮಧ್ಯಪ್ರವೇಶಿಸಿದ್ದಾರೆಂಬುದಕ್ಕೆ ಪುರಾವೆಗಳಿವೆ.  ಟೋಲ್ ಸಮಸ್ಯೆಯ ಕುರಿತು ಕೇಂದ್ರ ಸಾರಿಗೆ ಸಚಿವರಿಗೆ ವರದಿ ಸಲ್ಲಿಕೆ ಸೇರಿದಂತೆ ವಿವಿಧ ಚಟುವಟಿಕೆಗಳೊಂದಿಗೆ ಬಿಜೆಪಿ ಕುಂಬಳೆ ಮಂಡಲ ಸಮಿತಿ ಮುಂದುವರಿಯುತ್ತಿದೆ. …

ತಲೆಹೊರೆ ಕಾರ್ಮಿಕ ನಿಧನ

ಉಪ್ಪಳ: ಪಚ್ಲಂಪಾರೆ ಎಸ್.ಸಿ ಕಾಲನಿ ನಿವಾಸಿ ರಾಮ ಯು.ಟಿ [65] ನಿಧನರಾದರು. ಸೋಮವಾರ ರಾತ್ರಿ ಇವರಿಗೆ ಎದೆನೋವು ಉಂಟಾಗಿದ್ದು ಕೂಡಲೇ ಉಪ್ಪಳದ ಖಾಸಗಿ ಆಸ್ಪತ್ರೆಗೆ ಸಾಗಿಸಿ ಪ್ರಥಮ ಚಿಕಿತ್ಸೆ ನೀಡಿದ ಬಳಿಕ ದೇರಳಕಟ್ಟೆ ಆಸ್ಪತ್ರೆಯಲ್ಲಿ ದಾಖಲಿಸಲಾಗಿತ್ತು. ನಿನ್ನೆ ಬೆಳಿಗ್ಗೆ ನಿಧನ ಹೊಂದಿದರು. ಇವರು ಹಲವು ವರ್ಷಗಳಿಂದ ಉಪ್ಪಳ ಪೇಟೆಯಲ್ಲಿ ತಲೆಹೊರೆ ಕಾರ್ಮಿಕನಾಗಿ ಕೆಲಸ ನಿರ್ವಹಿಸುತ್ತಿದ್ದರು. ಮೃತರು ಪತ್ನಿ ಸಾವಿತ್ರಿ, ಮಕ್ಕಳಾದ ಸುಜಾತ, ಸುನಿಲ್, ಸುಜಿತ್, ಸುಧೀರ್, ಅಳಿಯ ಅಯ್ಯಪ್ಪ, ಸೊಸೆಯಂದಿರಾದ ಜಯಶ್ರೀ, ಜಯಶ್ರೀ, ಸಹೋದರಿ ಸುಂದರಿ ಹಾಗೂ …

ಉಪ್ಪಳದಲ್ಲಿ ಅಪಾರ್ಟ್‌ಮೆಂಟ್‌ನಿಂದ ಮಲಿನ ಜಲ ಸಾರ್ವಜನಿಕ ಸ್ಥಳಕ್ಕೆ ಹರಿದುಬಿಡುವುದರ ವಿರುದ್ಧ  ಕ್ರಿಯಾ ಸಮಿತಿಯಿಂದ ಮಾರ್ಚ್

ಉಪ್ಪಳ: ಮಂಗಲ್ಪಾಡಿ ಪಂಚಾಯತ್ ವ್ಯಾಪ್ತಿಯ ಕಟ್ಟಡ ನಿರ್ಮಾಣಗಳು ಅಧಿಕಾರಿಗಳ ನಿರ್ಲಕ್ಷ್ಯ ಕ್ರಮದಿಂದಾಗಿ ಅವೈಜ್ಞಾನಿಕವಾಗಿವೆ. ಪಂಚಾಯತ್ ಹಾಗೂ ಆರೋಗ್ಯ ಇಲಾಖೆ ಇವುಗಳನ್ನು ನೋಡಿ ನಿಂತಿರುವುದರ ಫಲವಾಗಿ ಇದೀಗ ಸಮಸ್ಯೆಯನ್ನು ಎದುರಿಸಬೇಕಾಗಿ ಬಂದಿದೆಯೆಂದು ಮಾನವ ಹಕ್ಕು ಕಾರ್ಯಕರ್ತ ಕೂಕಲ್ ಬಾಲಕೃಷ್ಣನ್ ಆರೋಪಿಸಿದ್ದಾರೆ. ಉಪ್ಪಳ ಕೈಕಂಬದ ಅಪಾರ್ಟ್‌ಮೆಂಟ್‌ವೊಂದರಿಂದ ರಾಷ್ಟ್ರೀಯ ಹೆದ್ದಾರಿ ಹಾಗೂ ಪರಿಸರ ಪ್ರದೇಶಕ್ಕೆ  ಮಲಿನ ಜಲ ಹರಿದುಬಿಡುವುದರ  ವಿರುದ್ಧ ನಿನ್ನೆ ನಡೆಸಿದ ಮಾರ್ಚ್ ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು. ಫ್ಲಾಟ್‌ನ ಮುಂಭಾಗದಲ್ಲಿ ಪೊಲೀಸರು ಮಾರ್ಚ್‌ಗೆ ತಡೆಯೊಡ್ಡಿದ್ದಾರೆ. ಬಹುಜನ ಮುನ್ನಡೆ ಕ್ರಿಯಾ ಸಮಿತಿ …

ಶ್ರೀ ನಾರಾಯಣಗುರು ಜಯಂತಿ 7ರಂದು

ಕಾಸರಗೋಡು: ಶ್ರೀ ನಾರಾಯಣ ಗುರು ಜಯಂತಿ ಆಚರಣೆಗೆ ಎಲ್ಲೆಡೆ ಸಿದ್ಧತೆ ಆರಂಭಗೊಂಡಿದೆ. ಗುರುಪೂಜೆ, ಪ್ರಾರ್ಥನೆ, ಸಂಸ್ಮರಣೆ, ಪಾಯಸ ವಿತರಣೆ ಮೊದಲಾದ ಕಾರ್ಯಕ್ರಮಗಳೊಂದಿಗೆ ಸೆ. 7ರಂದು ನಾರಾಯಣಗುರು ಜಯಂತಿ ಆಚರಿಸಲಾಗುವುದು. ಗುರುಮಂದಿರಗಳು, ಗುರುಗಳು ಸ್ಥಾಪಿಸಿದ ಕ್ಷೇತ್ರಗಳು, ಗುರುವಿಗೆ ಸಂಬಂ ಧಪಟ್ಟ ಸ್ಥಳಗಳಲ್ಲಿ ಕಾರ್ಯಕ್ರಮಗಳಿ ರುವುದು. ಅಡ್ಕತ್ತಬೈಲು ಶ್ರೀ ಸುಬ್ರಹ್ಮಣ್ಯ ಭಜನಾ ಮಂದಿರದಲ್ಲಿ ಶ್ರೀ ನಾರಾಯಣಗುರು ಜಯಂತಿ ಆಚರಣೆಗೆ ಮಂದಿರದ ಮುಖ್ಯ ಅರ್ಚಕ ಬಾಬುರಾಜ್ ನೇತೃತ್ವ ನೀಡು ವರು. 7ರಂದು ಮುಂಜಾನೆ 5.30ಕ್ಕೆ ಬಾಗಿಲು ತೆರೆಯುವುದು, 6.30ಕ್ಕೆ ಗುರು ಅರ್ಚನೆ, …