ತೆಂಗಿನ ಮರವೇರುವ ಕಾರ್ಮಿಕರ ಕ್ಷಾಮ: ಕೃಷಿಕರು ಸಂದಿಗ್ಧತೆಯಲ್ಲಿ

ಕಾಸರಗೋಡು: ತೆಂಗಿನ ಮರವೇರುವ ಕಾರ್ಮಿಕರ ಕ್ಷಾಮದಿಂದಾಗಿ ತೆಂಗು ಕೃಷಿಕರು ಭಾರೀ ಸಂಕಷ್ಟವನ್ನು ಎದುರಿಸಬೇಕಾಗಿ ಬಂದಿದೆ. ಮರದಲ್ಲಿರುವ ತೆಂಗಿನಕಾಯಿ ಕೊಯ್ಯಲು ಕಾರ್ಮಿಕರನ್ನು ಹುಡುಕಿಕೊಂಡು ಕೃಷಿಕರು ಅಲೆದಾಡಬೇಕಾದ ಸ್ಥಿತಿ ಉಂಟಾಗಿದೆ. ಕಾರ್ಮಿಕರು ಸಿಕ್ಕಿದರೂ ಪ್ರತೀಯೊಂದು ಮರದಿಂದ ಲಭಿಸುವ ತೆಂಗಿನಕಾಯಿಯ ಬೆಲೆಗಿಂತ ಹೆಚ್ಚು ಮೊತ್ತವನ್ನು ಹಲವರು ವೇತನವಾಗಿ ಕೇಳುತ್ತಿದ್ದಾರೆ. ಹಸಿ ತೆಂಗಿನಕಾಯಿಗೆ ಉತ್ತಮ ಬೆಲೆ ಲಭಿಸುವ ಸಂದರ್ಭದಲ್ಲಿ ತೆಂಗಿನಮರವೇರಲು ಕಾರ್ಮಿಕರು ಸಿಗದಿರುವುದು ಕೃಷಿಕರನ್ನು ತೀವ್ರ ಸಮಸ್ಯೆಯಲ್ಲಿ ಸಿಲುಕಿಸಿದೆ. ಹಸಿ ತೆಂಗಿನಕಾಯಿ ಕೊಯ್ಯಬೇಕಾದ ಸಮಯದಲ್ಲಿ ಮರವೇರುವ ಕಾರ್ಮಿಕರು ಸಿಗದಿರುವುದರಿಂದ ಮರಗಳಲ್ಲೇ ಕಾಯಿ ಒಣಗಿ …

ತಿರುವೋಣಂ ಬಂಪರ್: ಜಿಲ್ಲೆಯಲ್ಲಿ ಈತನಕ ಮಾರಾಟವಾಗಿದ್ದು 2.59 ಲಕ್ಷ ಟಿಕೆಟ್‌ಗಳು

ಕಾಸರಗೋಡು: ತಿರುವೋಣಂ ಬಂಪರ್ ಲಾಟರಿ ಟಿಕೆಟ್‌ಗಳು ಸೆ. 26ರ ತನಕದ ಲೆಕ್ಕಾಚಾರದಂತೆ ಜಿಲ್ಲೆಯಲ್ಲಿ 2.59 ಲಕ್ಷ ಮಾರಾಟ ವಾಗಿದೆ. ಅಂದರೆ ಕಳೆದ ವರ್ಷಕ್ಕಿಂ ತಲೂ ಹೆಚ್ಚು ಓಣಂ ಬಂಪರ್ ಲಾಟರಿ ಟಿಕೆಟ್‌ಗಳು ಸೇರಿ ಮಾರಾಟ ವಾಗಿದೆ. ಸೆಪ್ಟಂಬರ್ 27ರಂದು ನಡೆಯಬೇಕಾಗಿದ್ದ ತಿರುವೋಣಂ ಬಂಪರ್ ಡ್ರಾವನ್ನು ಈಗ ಅಕ್ಟೋಬರ್ 4ಕ್ಕೆ ಮುಂದೂಡಲಾಗಿದೆ. ಕಳೆದ ವರ್ಷ ಜಿಲ್ಲೆಯಲ್ಲಿ 2.32 ಲಕ್ಷ ತಿರುವೋಣಂ ಬಂಪರ್ ಲಾಟರಿ ಟಿಕೆಟ್‌ಗಳು ಮಾರಾಟವಾಗಿತ್ತು. ಸೆ. 26ರ ತನಕದ ಲೆಕ್ಕಾಚಾರದಂತೆ ಕಳೆದ ವರ್ಷಕ್ಕಿಂತಲೂ ಈ ವರ್ಷ 24,800ರಷ್ಟು …

ಬಾವಿಗೆ ಬಿದ್ದ ಕಾಡು ಹಂದಿ

ಕುಂಬಳೆ: ಆರಿಕ್ಕಾಡಿಯಲ್ಲಿ ಕಾಡು ಹಂದಿಯೊಂದು ಬಾವಿಗೆ ಬಿದ್ದಿದ್ದು ಅರಣ್ಯಾಧಿಕಾರಿಗಳು ಅದನ್ನು ಮೇಲೆತ್ತಿ ಅಪಾಯದಿಂದ ರಕ್ಷಿಸಿದ್ದಾರೆ. ಆರಿಕ್ಕಾಡಿ ಕಾರ್ಳೆಯಲ್ಲಿ ವ್ಯಕ್ತಿಯೊಬ್ಬರ ಹಿತ್ತಿಲಲ್ಲಿರುವ ಆವರಣವಿರದ ಬಾವಿಯಲ್ಲಿ ನಿನ್ನೆ ಬೆಳಿಗ್ಗೆ  ಶಬ್ದ ಕೇಳಿ ಬಂದ ಹಿನ್ನೆಲೆಯಲ್ಲಿ ಮನೆಯವರು ಅಲ್ಲಿಗೆ ತೆರಳಿ ನೋಡಿದಾಗ ಹಂದಿ ನೀರಿನಲ್ಲಿ ಜೀವನ್ಮರಣ ಹೋರಾಟ ನಡೆಸುತ್ತಿರುವುದು ಕಂಡು ಬಂದಿದೆ. ಈ ಬಗ್ಗೆ ಮನೆ ಮಾಲಕ ಅರಣ್ಯಾಧಿಕಾರಿಗಳಿಗೆ ವಿಷಯ ತಿಳಿಸಿದ್ದರು. ಅರಣ್ಯ ಇಲಾಖೆಯ ರಾಪಿಡ್ ರೆಸ್ಕ್ರೂಫೋರ್ಸ್ ಬಾವಿಗೆ ಬಲೆ ಇಳಿಸಿ ಹಂದಿಯನ್ನು ಸುರಕ್ಷಿತವಾಗಿ ಮೇಲಕ್ಕೆತ್ತಿದ್ದಾರೆ. ಬಳಿಕ ಅದನ್ನು ಕೊಂಡೊಯ್ದು ಆರೋಗ್ಯ …

ಕಾಂಗ್ರೆಸ್ ಕಾರ್ಯಕರ್ತ ಪಕ್ಷದ ಕಚೇರಿಯಲ್ಲಿ ನೇಣುಬಿಗಿದು ಸಾವನ್ನಪ್ಪಿದ ಸ್ಥಿತಿಯಲ್ಲಿ ಪತ್ತೆ

ಕಲ್ಲಿಕೋಟೆ: ಕಾಂಗ್ರೆಸ್ ಕಾರ್ಯಕರ್ತನೋರ್ವ ಪಕ್ಷದ ಕಚೇರಿಯೊಳಗೆ ನೇಣು ಬಿಗಿದು ಸಾವನ್ನಪ್ಪಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಕಲ್ಲಿಕೋಟೆ ಮೇಪಯೂರ್ ನಿಡುಂಪೊಯಿಲ್ ಕಾಂಗ್ರೆಸ್ ಘಟಕ ಕಚೇರಿಯಲ್ಲಿ   ಪರಿಸರ ನಿವಾಸಿಯಾಗಿರುವ ರಾಜನ್ (61) ಎಂಬವರು ಇಂದು ಬೆಳಿಗ್ಗೆ ಪಕ್ಷದ ಕಚೇರಿಯೊಳಗೆ ನೇಣುಬಿಗಿದು ಸಾವನ್ನಪ್ಪಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಇವರು ಕಾಂಗ್ರೆಸ್‌ನ ಸಕ್ರಿಯ ಕಾರ್ಯಕರ್ತರು ಹಾಗೂ ಪತ್ರಿಕೆ ವಿತರಣಾ ಏಜೆಂಟರಾಗಿದ್ದಾರೆ. ಆದರೆ ಅವರ ಸಾವಿಗೆ ಮತ್ತು ಪಕ್ಷಕ್ಕೆ ಯಾವುದೇ ಸಂಬಂಧವಿಲ್ಲವೆಂದು  ಪಕ್ಷದ ನೇತಾರರು ತಿಳಿಸಿದ್ದಾರೆ.

ಮಾನ್ಯದಲ್ಲಿ ಆರ್‌ಎಸ್‌ಎಸ್ ವಿಜಯದಶಮಿ ಪಥ ಸಂಚಲನ

ಮಾನ್ಯ: ಆರ್‌ಎಸ್‌ಎಸ್ ಬದಿಯಡ್ಕ ಖಂಡ್ ನೀರ್ಚಾಲು ಮಂಡಲದ ವಿಜಯದಶಮಿ ಕಾರ್ಯಕ್ರಮ ಮಾನ್ಯ ಶಾಲಾ ಮೈದಾನದಲ್ಲಿ ನಿನ್ನೆ ನಡೆಯಿತು. ಕಣ್ಣೂರು ವಿಭಾಗ ಪ್ರೌಢ ಪ್ರಮುಖ್ ಓ.ಎಂ. ಶ್ರೀಜಿತ್ ತಲಶ್ಶೇರಿ ಬೌದ್ಧಿಕ್ ನೀಡಿದರು. ಸಾಮಾಜಿಕ ಕಾರ್ಯಕರ್ತ ರಾಮ ಕಾರ್ಮಾರು ಮುಖ್ಯ ಅತಿಥಿಯಾಗಿ ಭಾಗವಹಿಸಿದರು. ಬದಿಯಡ್ಕ ಖಂಡ್ ಸಂಘ್ ಚಾಲಕ್ ರಮೇಶ್ ಕಳೇರಿ ಉಪಸ್ಥಿತರಿದ್ದರು. ಮುಂಡೋಡಿನಿಂದ ಮಾನ್ಯ ಪೇಟೆಗೆ ಗಣವೇಷಧಾರಿ ಸ್ವಯಂ ಸೇವಕರ ಪಥ ಸಂಚಲನ ನಡೆಯಿತು.

ಮಾನ್ಯ ಶ್ರೀ ಅಯ್ಯಪ್ಪ ಭಜನಾ ಮಂದಿರ ಬೆಳ್ಳಿ ಅಭಿಯಾನ ಉದ್ಘಾಟನೆ

ಬದಿಯಡ್ಕ: ಬದಿಯಡ್ಕ: ಸನಾತನ ವಿಶ್ವಾಸ, ಆಚರಣೆಗಳ ಮೇಲೆ ಈಗೀಗ ನಿರಂತರ ಆಕ್ರಮಣಗಳು ವ್ಯಾಪಕವಾ ಗುತ್ತಿದೆ. ವ್ಯಕ್ತಿಗಳ ಹೆಸರಲ್ಲಿ ನಡೆಸುವ ತೇಜೋವಧೆಗಳ ಮಧ್ಯೆ ದೈವ-ದೇವರುಗಳನ್ನು ಅವಹೇಳ ನಗೈದು ಹಿಂದೂ ಮನಸ್ಸುಗಳಿಗೆ ನೋವ ನ್ನುಂಟುಮಾಡುವ ಕುತ್ಸಿತ ಮನೋ ಭಾವಗಳಿಗೆ ತಕ್ಕ ಉತ್ತರ ನೀಡಬೇಕು. ವ್ಯಕ್ತಿಗಳು ಶಾಶ್ವತರಲ್ಲ. ಆದರೆ ಮೌಲ್ಯ ಗಳನ್ನುಳಿಸಿಕೊಂಡು ನಂಬಿಕೆ, ಆಚರಣೆ, ಸತ್ಕರ್ಮಗಳಿಗೆ ಬೆಂಬಲ ನೀಡಬೇಕು. ಆರಾಧನಾ ಲಯಗಳ ಸಂರಕ್ಷಣೆಯಲ್ಲಿ ಎಲ್ಲರೂ ಒಗ್ಗಟ್ಟಿನಿಂದಿ ರಬೇಕು ಎಂದು ಧಾರ್ಮಿಕ ಮುಂ ದಾಳು, ಉದ್ಯಮಿ ಮಧುಸೂದನ ಅಯರ್ ಮಂಗ ಳೂರು ಅಭಿಪ್ರಾಯ …

ಹೊಸಂಗಡಿಯಲ್ಲಿ ಮಂಜೇಶ್ವರ ಬ್ಲೋಕ್ ಕಾಂಗ್ರೆಸ್ ಸಮಿತಿ ಪ್ರತಿಭಟನಾ ಸಂಗಮ ಇಂದು

 ಮಂಜೇಶ್ವರ: ಲೋಕಸಭೆಯ ವಿಪಕ್ಷ ನಾಯಕ ರಾಹುಲ್ ಗಾಂಧಿಯವರ ವಿರುದ್ಧ ಕೊಲೆ ಬೆದರಿಕೆಯೊಡ್ಡಿದ  ಬಿಜೆಪಿ ವಕ್ತಾರನ ವಿರುದ್ಧ ಕೇರಳ ಪೊಲೀಸರು ಕೇಸು ದಾಖಲಿಸದೆ ಪರೋಕ್ಷ ಬೆಂಬಲ ನೀಡಿದ್ದನ್ನು ಪ್ರತಿಭಟಿಸಿ ಕೆಪಿಸಿಸಿ ನಿರ್ದೇಶ ಪ್ರಕಾರ ಇಂದು ಸಂಜೆ 5 ಗಂಟೆಗೆ ಮಂಜೇಶ್ವರ ಬ್ಲೋಕ್ ಕಾಂಗ್ರೆಸ್ ಸಮಿತಿಯ ಆಶ್ರಯದಲ್ಲಿ ಹೊಸಂಗಡಿ ಜಂಕ್ಷನ್‌ನಲ್ಲಿ ಪ್ರತಿಭಟನಾ ಸಂಗಮ ನಡೆಯಲಿದೆ. ಪಕ್ಷದ ಬ್ಲೋಕ್ , ಮಂಡಲ ಮಟ್ಟದ ಪದಾಧಿಕಾರಿಗಳು, ಬೂತ್, ವಾರ್ಡ್ ಅಧ್ಯಕ್ಷರು, ಪೋಷಕ ಸಂಘಟನೆಗಳ ಕಾರ್ಯಕರ್ತರು, ಜನಪ್ರತಿನಿಧಿಗಳು ಭಾಗವಹಿಸಬೇಕೆಂದು ಬ್ಲಾಕ್ ಕಾಂಗ್ರೆಸ್  ಸಮಿತಿ ಅಧ್ಯಕ್ಷ …

ರಾಷ್ಟ್ರೀಯ ಹೆದ್ದಾರಿಯಲ್ಲಿ ಅಡ್ಡಾದಿಡ್ಡಿಯಾಗಿ ಸಂಚರಿಸುತ್ತಿದ್ದ ಟ್ಯಾಂಕರ್ ಲಾರಿ ಕಸ್ಟಡಿಗೆ: ಮದ್ಯದಮಲಿನಲ್ಲಿದ್ದ ಚಾಲಕನ ಬಂಧನ

ಕುಂಬಳೆ: ಚಾಲಕನಿಗೆ ಮದ್ಯದ ಅಮಲು ನೆತ್ತಿಗೇರಿದುದರಿಂದ ರಾಷ್ಟ್ರೀಯ ಹೆದ್ದಾರಿಯಲ್ಲಿ ಅಡ್ಡಾದಿಡ್ಡಿ ಸಂಚರಿಸುತ್ತಿದ್ದ ಟ್ಯಾಂಕರ್ ಲಾರಿಯನ್ನು ಹೈವೇ ಪಟ್ರೋಲಿಂಗ್ ಅಧಿಕಾರಿಗಳು ವಶಕ್ಕೆ ತೆಗೆದು ಸಂಭಾವ್ಯ ಅಪಾಯವನ್ನು ತಪ್ಪಿಸಿದ್ದಾರೆ. ವಿಷಯ ತಿಳಿದು ತಲುಪಿದ ಕುಂಬಳೆ ಪೊಲೀಸರು ಲಾರಿ ಚಾಲಕನಾದ ತಮಿಳುನಾಡು ತಂಜಾವೂರು ನಿವಾಸಿ  ಬಾಲಸುಬ್ರಹ್ಮಣ್ಯನ್ (48) ಎಂಬಾತನನ್ನು ಕಸ್ಟಡಿಗೆ ತೆಗೆದುಕೊಂಡಿದ್ದಾರೆ. ನಿನ್ನೆ ರಾತ್ರಿ 9 ಗಂಟೆ ವೇಳೆ ಈ ಘಟನೆ ನಡೆದಿದೆ. ಮಂಗಳೂರು ಭಾಗದಿಂದ ಕಣ್ಣೂರಿನತ್ತ ಸಂಚರಿಸುತ್ತಿದ್ದ ರಾಷ್ಟ್ರೀಯ ಹೆದ್ದಾರಿಯಲ್ಲಿ ಅಡ್ಡಾದಿಡ್ಡಿಯಾಗಿ ಸಂಚರಿಸಿದೆ.  ಲಾರಿ  ಅಪಾಯಕರ ರೀತಿಯಲ್ಲಿ ಸಂಚರಿಸುತ್ತಿರುವ ದೃಷ್ಯ …

ಕೊಚ್ಚಿಯಲ್ಲಿ ಮಾದಕದ್ರವ್ಯ ಸಹಿತ ಕಾಸರಗೋಡಿನ ಮೂವರ ಸೆರೆ

ಕಾಸರಗೋಡು: ಕೊಚ್ಚಿಯಲ್ಲಿ ಪೊಲೀಸರು ನಡೆಸಿದ ಕಾರ್ಯಾ ಚರ ಣೆಯಲ್ಲಿ ಮಾದಕದ್ರವ್ಯದ ಸಹಿತ ಕಾಸರಗೋಡಿನ ಮೂವರನ್ನು   ಬಂಧಿಸಿದ್ದಾರೆ. ಕಾಸರಗೋಡು ಚೆಂಗಳ ರಹ್ಮತ್‌ನಗರ ಪಚ್ಚಕ್ಕಾಡ್ ವೀಟಿಲ್ ಮೊಹಮ್ಮದ್ ಅನಸ್ (21), ಪೊಯಿನಾಚಿ ಚೆರುಗರೆ ವೀಟಿಲ್ ಖಲೀಲ್ ಬದರುದ್ದೀನ್ (27) ಮತ್ತು ನುಳ್ಳಿಪ್ಪಾಡಿ ಪಿ.ಎಂ.ಎಸ್ ರಸ್ತೆ ಬಳಿಯ ರಿಫಾಯಿ ಮಂಜಿಲ್‌ನ ಎನ್.ಎಚ್. ರಾಬಿಯತ್ (39) ಬಂಧಿತರಾದ ಆರೋಪಿಗಳು ಕೊಚ್ಚಿಯ ನೋರ್ತ್ ಚಿಟ್ಟೂರು ರಸ್ತೆಯ ಅಯ್ಯಪ್ಪನ್‌ಕಾವು ಪರಿಸರದಿಂದ ಕೊಚ್ಚಿ ಸಿಟಿ ಡಾನ್ಸೆಫ್ ಪೊಲೀಸರ ತಂಡ ಇವರನ್ನು ಬಂಧಿಸಿದೆ. ಮಾತ್ರವಲ್ಲದೆ 15.91 ಗ್ರಾಂ ಅಮಲು …

ಅನಧಿಕೃತ ಮರಳುಗಾರಿಕೆ: ಮೂರು ದೋಣಿ ವಶ

ಬೋವಿಕ್ಕಾನ: ಅನಧಿಕೃತ ಮರಳುಗಾರಿಕೆ ವಿರುದ್ಧ ನಡೆಸಲಾ ಗುತ್ತಿರುವ ಕಾರ್ಯಾಚರಣೆಯನ್ನು ಪೊಲೀಸರು  ಇನ್ನಷ್ಟು ತೀವ್ರಗೊಳಿಸಿದ್ದಾರೆ. ಇದರಂತೆ ಆದೂರು ಪೊಲೀಸ್ ಠಾಣೆ ಇನ್‌ಸ್ಪೆಕ್ಟರ್ ಎ.ಅನಿಲ್ ಕುಮಾರ್ ನೇತೃತ್ವದ ಪೊಲೀಸರು ಪಯಸ್ವಿನಿ ಹೊಳೆಯ ಮುಳಿಯಾರು  ಆಲೂರುಕಡವಿನಲ್ಲಿ ನಿನ್ನೆ ನಡೆಸಿದ ಕಾರ್ಯಾಚರಣೆಯಲ್ಲಿ ಹೊಳೆಯಿಂದ ಹೊಯ್ಗೆ ತೆಗೆಯಲು ಉಪಯೋಗಿ ಸುತ್ತಿದ್ದ ಮೂರು ದೋಣಿಗಳನ್ನು ವಶಕ್ಕೆ ತೆಗೆದುಕೊಂಡಿದ್ದಾರೆ.  ಪೊಲೀಸರು ಸ್ಥಳಕ್ಕೆ ಆಗಮಿಸುವ ವೇಳೆ ಈ ದೋಣಿಗಳನ್ನು ಅಲ್ಲಿ ಹಗ್ಗದಿಂದ ಕಟ್ಟಿ  ನಿಲ್ಲಿಸಲಾಗಿತ್ತು. ಈ ಕಡವಿನಿಂದ ರಾತ್ರಿ ವೇಳ ಟಿಪ್ಪರ್ ಲಾರಿಗಳಲ್ಲಿ ಬಾರೀ ಪ್ರಮಾಣದಲ್ಲಿ ಹೊಯ್ಗೆ ಸಾಗಿಸಲಾಗುತ್ತಿದೆ …