ಆನ್‌ಲೈನ್ ಟ್ರೇಡಿಂಗ್ ಹೆಸರಲ್ಲಿ ಇಚ್ಲಂಗೋಡು ನಿವಾಸಿಯ 34 ಲಕ್ಷ ರೂ. ಲಪಟಾಯಿಸಿ ವಂಚನೆ

ಕುಂಬಳೆ: ಆನ್‌ಲೈನ್ ಟ್ರೇಡಿಂಗ್ ಮೂಲಕ ಭಾರೀ ಲಾಭ ಗಳಿಸಬಹುದೆಂಬ ಭರವಸೆಯೊಡ್ಡಿ ಇಚ್ಲಂಗೋಡು ನಿವಾಸಿ ಸುರೇಶ್ ಶೆಟ್ಟಿ (54) ಎಂಬವರ 34,47,777 ರೂಪಾಯಿಗಳನ್ನು ಲಪಟಾಯಿಸಿರುವುದಾಗಿ ದೂರಲಾಗಿದೆ. ಹಣ ನಷ್ಟಗೊಂಡ ಬಗ್ಗೆ ಲಭಿಸಿದ ದೂರಿನಂತೆ ಕಾಸರಗೋಡು ಸೈಬರ್ ಪೊಲೀಸರು ಕೇಸು ದಾಖಲಿಸಿ ತನಿಖೆ ಆರಂಭಿಸಿದ್ದಾರೆ. 2025 ಸೆಪ್ಟಂಬರ್ 2ರಿಂದ ಡಿಸೆಂಬರ್ 30ರವರೆಗಿನ ದಿನಗಳಲ್ಲಿ ವಂಚನೆ ನಡೆಸಲಾಗಿದೆ. ಫೇಸ್‌ಬುಕ್, ವಾಟ್ಸಪ್, ಟೆಲಿಗ್ರಾಂ ಎಂಬಿವುಗಳ ಮೂಲಕ ಸಂದೇಶಗಳನ್ನು ಕಳುಹಿಸಿ ದೂರುದಾತನನ್ನು ವಂಚನೆಯಲ್ಲಿ ಸಿಲುಕಿಸಿರುವುದಾಗಿ ಸೈಬರ್ ಪೊಲೀಸರು ದಾಖಲಿಸಿಕೊಂಡ ಪ್ರಕರಣದಲ್ಲಿ ತಿಳಿಸಲಾಗಿದೆ. ವಿವಿಧ ಖಾತೆಗಳಿಗೆ …

ಶಬರಿಮಲೆಯಿಂದ ಭಾರೀ ಪ್ರಮಾಣದ ಚಿನ್ನ ಲಪಟಾವಣೆಗೆ ಷಡ್ಯಂತ್ರ : ಇ.ಡಿ. ತನಿಖೆಗೆ ಕೇಂದ್ರ ಅನುಮತಿ

ಕೊಚ್ಚಿ: ಶಬರಿಮಲೆ ದೇಗುಲದ ಚಿನ್ನ ಕಳವು ಪ್ರಕರಣದ ತನಿಖೆಗೆ ಎನ್‌ಪೋ ರ್ಸ್‌ಮೆಂಟ್  ಡೈರೆಕ್ಟರೇಟ್ (ಇಡಿ)   ಕೇಂದ್ರ ಸರಕಾರ ಅನುಮತಿ ನೀಡಿದೆ. ಇದರಿಂದಾಗಿ  ಇ.ಡಿ ಕೇಸ್ ಇನ್ ಫರ್ಮೇಶನ್ ವರದಿ ತಯಾರಿಸಿ ತನಿಖೆ ಆರಂಭಿಸಲಿದೆ. ಶಬರಿಮಲೆ ಚಿನ್ನ ಕಳವು ಪ್ರಕರಣದಲ್ಲಿ ಕಾಳಧನ ವ್ಯವಹಾರ ನಡೆದಿದೆ ಎಂಬ ಸ್ಪಷ್ಟ ಮಾಹಿತಿ ಲಭಿಸಿರುವ ಹಿನ್ನೆಲೆಯಲ್ಲಿ ಆ ಬಗ್ಗೆ ಇ.ಡಿ ಪರೋಕ್ಷವಾಗಿ ಈ ಹಿಂದೆಯೇ ತನಿಖೆ ಆರಂಭಿಸಿತ್ತು. ಶಬರಿಮಲೆ ಪ್ರಕರಣದ ಬಗ್ಗೆ ವಿಶೇಷ ತನಿಖಾ ತಂಡ ಈತನಕ ನಡೆಸಿದ  ತನಿಖಾ ವರದಿಗಳ ಪ್ರತಿಗಳನ್ನು …

ರಾಜ್ಯ ಶಾಲಾ ಕಲೋತ್ಸವ: ಚಿನ್ನದ ಕಪ್ ಮೊಗ್ರಾಲ್‌ನಿಂದ ಪ್ರಯಾಣ ಆರಂಭ

ಕಾಸರಗೋಡು: ರಾಜ್ಯ ಶಾಲಾ ಕಲೋತ್ಸವದ  ಚಿನ್ನದ ಕಪ್ ಪ್ರಯಾಣ ಇಂದು ಬೆಳಿಗ್ಗೆ ಮೊಗ್ರಾಲ್ ಜಿವಿಎಚ್‌ಎಸ್‌ಎಸ್‌ನಿಂದ ಆರಂಭಗೊಂಡಿತು.  ಶಾಸಕ ಎ.ಕೆ.ಎಂ.ಅಶ್ರಫ್ ಪ್ಲಾಗ್ ಆಫ್ ನಡೆಸಿದರು. ಜಿಲ್ಲಾ ಪಂಚಾಯತ್ ಅಧ್ಯಕ್ಷ ಸಾಬು ಅಬ್ರಹಾಂ ಅಧ್ಯಕ್ಷತೆ ವಹಿಸಿದರು. ಕುಂಬಳೆ ಪಂಚಾಯತ್ ಅಧ್ಯಕ್ಷ ವಿ.ಪಿ. ಅಬ್ದುಲ್ ಖಾದರ್, ಉಪಾಧ್ಯಕ್ಷೆ ಬಲ್ಕೀಸ್, ಜಿಲ್ಲಾ ಪಂಚಾಯತ್ ಸದಸ್ಯ ಅಸೀಸ್ ಕಳತ್ತೂರು, ಡಿಡಿಇ ಇನ್‌ಚಾರ್ಜ್ ಸತ್ಯಭಾಮ, ಉದಯ ಕುಮಾರಿ, ಬಿಇಒ ಅನಿತಾ, ಪ್ರಾಂಶುಪಾಲ ಬಿನಿ ವಿ.ಎಸ್, ಮುಖ್ಯೋಪಾಧ್ಯಾಯ ಜಯರಾಂ,ವಾರ್ಡ್ ಪ್ರತಿನಿಧಿ  ಜಮೀಲಾ ಹಸನ್, ಪಿಟಿಎ ಅಧ್ಯಕ್ಷ ಲತೀಫ್ …

ಬಸ್‌ಗೆ ಕಲ್ಲೆಸೆತ: ಆರೋಪಿ ಪೊಲೀಸ್ ಕಸ್ಟಡಿಯಲ್ಲಿ

ಉಪ್ಪಳ: ಸಂಚರಿಸುತ್ತಿದ್ದ ಕೆಎಸ್‌ಆರ್‌ಟಿಸಿ ಬಸ್‌ಗೆ ಕಲ್ಲೆಸೆದು ಹಾನಿಗೈದ ಪ್ರಕರಣಕ್ಕೆ ಸಂಬಂಧಿಸಿ ಓರ್ವನನ್ನು ಮಂಜೇಶ್ವರ ಪೊಲೀಸರು ಕಸ್ಟಡಿಗೆ ತೆಗೆದುಕೊಂಡಿದ್ದಾರೆ. ಉಪ್ಪಳ ಮಣ್ಣಂಗುಳಿ ಪಂಡಿಕುಡಿ ಹೌಸ್‌ನ ಹಮೀದ್ ಅಲಿ (65) ಎಂಬಾತನನ್ನು ಕಸ್ಟಡಿಗೆ ತೆಗೆದುಕೊಂಡಿರುವುದಾಗಿ ಪೊಲೀಸರು ತಿಳಿಸಿದ್ದಾರೆ. ಮೊನ್ನೆ ರಾತ್ರಿ ೯ ಗಂಟೆ ವೇಳೆ ಮಂಗಳೂರಿನಿಂದ ಕಾಸರಗೋಡಿಗೆ ಬರುತ್ತಿದ್ದ ಕೇರಳ ರಾಜ್ಯ ಸಾರಿಗೆ ಬಸ್‌ಗೆ ತಲಪಾಡಿಯಲ್ಲಿ ಕಲ್ಲೆಸೆಯಲಾಗಿತ್ತು. ಇದರಿಂದ ಬಸ್‌ನ ಹಿಂಬದಿ ಗಾಜು ನಾಶಗೊಂಡಿದೆ. ಈ ಬಗ್ಗೆ ಬಸ್‌ನ ನೌಕರರು ಮಂಜೇಶ್ವರ ಪೊಲೀಸರಿಗೆ ದೂರು ನೀಡಿದ್ದರು. ಇದರಂತೆ ಪೊಲೀಸರು ಕೇಸು …

ನಾಪತ್ತೆಯಾದ ಯುವಕನ ಮೃತದೇಹ ಬಾವಿಯಲ್ಲಿ ಪತ್ತೆ

ಕಾಸರಗೋಡು: ಮೊಗ್ರಾಲ್ ಪುತ್ತೂರು ಅರಫನಗರದಿಂದ ನಾಪತ್ತೆಯಾದ ಯುವಕ ಬಾವಿಯಲ್ಲಿ ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಅರಫನಗರದ ಮಾಹಿನ್ (45) ಎಂಬವರು ಮೃತಪಟ್ಟ ವ್ಯಕ್ತಿ. ಇವರು ಆದಿತ್ಯವಾರ ಮನೆಯಿಂದ ನಾಪತ್ತೆಯಾಗಿದ್ದರು. ಬಳಿಕ ಸಂಬಂಧಿಕರು, ನಾಗರಿಕರು, ಪೊಲೀಸರು ಸೇರಿ ಹುಡುಕಾಡುತ್ತಿದ್ದ ವೇಳೆ ಸೋಮವಾರ ಸಂಜೆ ಅರಫನಗರದ ಸಾರ್ವಜನಿಕ ಬಾವಿಯೊಂದರಲ್ಲಿ ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಬಳಿಕ ಮೃತದೇಹವನ್ನು ಕಾಸರಗೋಡು ಜನರಲ್ ಆಸ್ಪತ್ರೆಗೆ ತಲುಪಿಸಿ ಮರ ಣೋತ್ತರ ಪರೀಕ್ಷೆ ನಡೆಸಲಾಯಿತು.  ಅನಂತರ  ಮನೆಗೆ ತಲುಪಿಸಿ ಮೊಗ್ರಾಲ್ ಪುತ್ತೂರು ಜುಮಾ ಮಸೀದಿ ಪರಿಸರದಲ್ಲಿ ಅಂತ್ಯ ಸಂಸ್ಕಾರ …

ಕುಂಬಳೆ ಮೀನು ಮಾರಾಟ ಕೇಂದ್ರ ಬಳಿಯ ಚರಂಡಿಯಲ್ಲಿ ತ್ಯಾಜ್ಯರಾಶಿ: ದುರ್ನಾತದಿಂದ ನಾಗರಿಕರಿಗೆ ಸಮಸ್ಯೆ

ಕುಂಬಳೆ: ಕುಂಬಳೆ ಮೀನು ಮಾರುಕಟ್ಟೆ ಬಳಿಯ ಚರಂಡಿಯಲ್ಲಿ ತ್ಯಾಜ್ಯಗಳು ತುಂಬಿಕೊಂಡ ಪರಿಣಾಮ ಅದರಿಂದ ಹೊರ ಸೂಸುವ ದುರ್ನಾ ತದಿಂದ ನಾಗರಿಕರು ಸಮಸ್ಯೆಗೀಡಾಗಿ ದ್ದಾರೆ. ಹೊಸತಾಗಿ ನಿರ್ಮಿಸಿದ ಮೀನು ಮಾರುಕಟ್ಟೆಯನ್ನು ತೆರೆದು ಕೊಡದಿ ರುವುದರಿಂದ ಮೀನು ಮಾರಾಟ ಕೇಂದ್ರ ಬಳಿಯ ಚರಂಡಿಗಳಿಗೆ ತ್ಯಾಜ್ಯಗಳನ್ನು ಎಸೆಯಲಾಗುತ್ತಿದೆ. ಅವುಗಳು ಜೀರ್ಣಿಸಿ ದುರ್ನಾತ ಬೀರುತ್ತಿದ್ದು, ಇದು ಸ್ಥಳೀಯರಿಗೆ ಹಾಗೂ ವ್ಯಾಪಾರಿಗಳಿಗೆ ಭಾರೀ ಸಮಸ್ಯೆ ಉಂಟುಮಾಡುತ್ತಿದೆ. ತ್ರಿಸ್ತರ ಪಂಚಾಯತ್ ಚುನಾವಣೆ ಘೋಷಣೆಯಾಗಿರುವುದರಿಂದ ನಿರ್ಮಾಣ ಪೂರ್ಣಗೊಂಡ ಮೀನು ಮಾರುಕಟ್ಟೆ ತೆರೆದು ಕೊಡುವಲ್ಲಿ ಅಡಚಣೆ ಎದುರಾಗಿರುವುದಾಗಿ ಹೇಳಲಾಗುತ್ತಿದೆ. …

ಕೇಂದ್ರೀಯ ವಿ.ವಿ: ಸ್ವದೇಶಿ ಸಯನ್ಸ್ ಕಾಂಗ್ರೆಸ್ ರಾಷ್ಟ್ರೀಯ ವಿಚಾರ ಸಂಕಿರಣ ಆರಂಭ

ಕಾಸರಗೋಡು: 32ನೇ ಸ್ವದೇಶಿ ಸಯನ್ಸ್ ಕಾಂಗ್ರೆಸ್ ಪೆರಿಯಾದಲ್ಲಿರುವ ಕೇರಳ ಕೇಂದ್ರೀಯ ವಿಶ್ವವಿದ್ಯಾಲಯದಲ್ಲಿ ಇಂದು ಬೆಳಿಗ್ಗೆ ಆರಂಭಗೊಂಡಿತು. ಇದರ ಅಂಗವಾಗಿ ವಿಕಸಿತ್ ಭಾರತ್‌ಗಾಗಿ ಪರಿವರ್ತಕ ವಿಜ್ಞಾನ ಮತ್ತು ತಂತ್ರಜ್ಞಾನ ಶಿಕ್ಷಣ ಎಂಬ ವಿಷಯದಲ್ಲಿ ಆರಂಭಗೊಂಡ ರಾಷ್ಟ್ರೀಯ ವಿಚಾರಗೋಷ್ಠಿಯನ್ನು ಕೇರಳ ರಾಜ್ಯಪಾಲ ರಾಜೇಂದ್ರ ವಿಶ್ವನಾಥ್ ಅರ್ಲೇಖರ್ ಉದ್ಘಾಟಿಸಿದರು. ವಿಶ್ವವಿದ್ಯಾನಿಲಯದ ಲೈಬ್ರೆರಿ ಸಭಾಂಗಣದಲ್ಲಿ ಆರಂಭಗೊಂಡ ವಿಚಾರಗೋಷ್ಠಿಯಲ್ಲಿ ಕೇಂದ್ರೀಯ ವಿ.ವಿ ಉಪಕುಲಪತಿ ಪ್ರೊ| ಸಿದ್ದು ಪಿ. ಅಲ್ಗೂರ್ ಅಧ್ಯಕ್ಷತೆ ವಹಿಸಿದರು.  ವಿಜ್ಞಾನಭಾರತಿ ಕಾರ್ಯದರ್ಶಿ ಜನರಲ್ ವಿವೇಕಾನಂದ ಪೈ ಮುಖ್ಯ ಅತಿಥಿಯಾಗಿ ದ್ದರು. ವಿಜ್ಞಾನ …

ಜಿಲ್ಲೆಯಲ್ಲಿ ಕಾಡುಹಂದಿಗಳ ಉಪಟಳ ತೀವ್ರ: ಜನರು ಆತಂಕದಲ್ಲಿ; ನಿರ್ಲಕ್ಷ್ಯವಹಿಸುತ್ತಿರುವ ಅಧಿಕಾರಿಗಳು

ಕಾಸರಗೋಡು: ಜಿಲ್ಲೆಯಲ್ಲಿ ಕಾಡುಹಂದಿಗಳ ಉಪಟಳ ತೀವ್ರ ಗೊಂಡಿರುವಾಗ ಅಧಿಕಾರಿಗಳು ನಿಶ್ಚಿಂತೆಯಲ್ಲಿದ್ದಾರೆಂಬ ಆರೋಪ ತೀವ್ರಗೊಂಡಿದೆ. ವನ್ಯಮೃಗಗಳ ಹಾವಳಿಗೆ ತಡೆಯೊಡ್ಡಲು ಕೇಂದ್ರ, ರಾಜ್ಯ ಸರಕಾರಗಳು, ಸುಪ್ರೀಂಕೋರ್ಟ್ ಕಠಿಣ ನಿರ್ದೇಶಗಳನ್ನು ನೀಡಿರುವಾಗಲೂ ಕಾಸರಗೋಡಿನಲ್ಲಿ ವನ್ಯಮೃಗಗಳ ದಾಳಿ ತಡೆಯುವಲ್ಲಿ ಅಧಿಕಾರಿಗಳು ನಿರ್ಲಕ್ಷ್ಯ ನೀತಿಯನ್ನು ಅನುಸರಿಸುತ್ತಿದ್ದಾರೆಂದು ನಾಗರಿಕರು ತಿಳಿಸುತ್ತಿದ್ದಾರೆ. ಕಾಡುಹಂದಿಯ ದಾಳಿಯಿಂದ ಇತ್ತೀಚೆಗೆ ಯುವಕನೋರ್ವ ಗಾಯ ಗೊಂಡು ಆಸ್ಪತ್ರೆಯಲ್ಲಿ ದಾಖಲಾಗಿದ್ದನು.  ಊಜಂಪಾಡಿಯ ಅಖಿಲ್ ಸಿ. ರಾಜು ಎಂಬವರಿಗೆ ಬುಧವಾರ ರಾತ್ರಿ ಕಾಡುಹಂದಿ ದಾಳಿ ನಡೆಸಿದೆ. ಬೈಕ್‌ನಲ್ಲಿ ಸಂಚರಿಸುತ್ತಿದ್ದ ಅಖಿಲ್‌ರ ಮೇಲೆ ಕಾಡುಹಂದಿಗಳ ಹಿಂಡು ದಾಳಿ …

ವಿವಿಧ ಪ್ಲಾಟ್‌ಗಳ ಮಲಿನ ನೀರು ಚರಂಡಿಗೆ: ಉಪ್ಪಳ ರೈಲ್ವೇ ನಿಲ್ದಾಣ ರಸ್ತೆಯಲ್ಲಿ ದುರ್ನಾತ ; ಪರಿಸರ ನಿವಾಸಿಗಳಲ್ಲಿ ಆತಂಕ

ಉಪ್ಪಳ: ಉಪ್ಪಳ ರೈಲ್ವೇ ನಿಲ್ದಾಣ  ರಸ್ತೆ ಬದಿ ಹಲವು ಪ್ಲಾಟ್‌ಗಳಿದ್ದು, ಇದರಲ್ಲಿ ಕೆಲವು ಪ್ಲಾಟ್‌ಗಳ ಮಲಿನ ನೀರನ್ನು ರಸ್ತೆಯ ಚರಂಡಿಗೆ ಹರಿದುಬರುತ್ತಿದೆ. ಇದರಿಂದ ಚರಂಡಿ ತುಂಬಿ ರಸ್ತೆಗೆ ಹರಿದು ಪರಿಸರವಿಡೀ ದುರ್ವಾಸನೆ ತುಂಬಿಕೊಂಡು ಸ್ಥಳೀಯ ಕುಟುಂಬಗಳು ಹಾಗೂ ಪಾದಚಾರಿಗಳಿಗೆ ಸಮಸ್ಯೆ  ಉಂಟಾಗಿದೆ.  ಇದರಿಂದ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಎಂ.ಕೆ. ಬ್ರದರ್ಸ್ ಉಪ್ಪಳ ಇದರ ಸದಸ್ಯರು ಹಾಗೂ ಸ್ಥಳೀಯರು ಸೇರಿ ನಿನ್ನೆ ಬೆಳಿಗ್ಗೆ ರೈಲ್ವೇ ನಿಲ್ದಾಣ ರಸ್ತೆ ಬದಿಯ ಚರಂಡಿಯ ಸ್ಲಾಬ್‌ಗಳನ್ನು ಜೆಸಿಬಿ ಮೂಲಕ ತೆಗೆದು ಪರಿಶೀಲಿಸಿದಾಗ ಪ್ಲಾಟ್‌ಗಳಿಂದ …

ಮಂಜೇಶ್ವರ, ಕಾಸರಗೋಡು, ಕಾರಡ್ಕ ಬ್ಲೋಕ್ ಸ್ಥಾಯೀ ಸಮಿತಿ ಸದಸ್ಯರ, ಜಿ.ಪಂ. ಮಹಿಳಾ ಸ್ಥಾಯೀ ಸಮಿತಿ ಸದಸ್ಯೆಯರ ಆಯ್ಕೆ

ಮಂಜೇಶ್ವರ: ಬ್ಲೋಕ್ ಪಂಚಾ ಯತ್ ಸ್ಥಾಯೀ ಸಮಿತಿ ಸದಸ್ಯರ ಆಯ್ಕೆ ಬ್ಲೋಕ್ ಪಂಚಾಯತ್ ಸಭಾಂಗಣದಲ್ಲಿ ನಡೆಯಿತು.  13 ನಾಮನಿರ್ದೇಶ ಪತ್ರಿಕೆಗಳು ಲಭಿಸಿದ ಹಿನ್ನೆಲೆಯಲ್ಲಿ  ಅವಿರೋಧವಾಗಿ 13 ಮಂದಿಯ ಸಮಿತಿಯನ್ನು ಆಯ್ಕೆ ಮಾಡಲಾಯಿತು. ಕುಂಜತ್ತೂರು, ಬಂದ್ಯೋಡು, ಚೇವಾರು, ಪಾತೂರು ಡಿವಿಶನ್‌ಗಳಿಂದಿರುವ ಜನಪ್ರತಿನಿಧಿಗಳಾದ ಮುಹಮ್ಮದ್ ಹನೀಫ, ಅಬ್ದುಲ್ ಅಸೀಸ್ ಮರಿಕ್ಕೆ, ಚಂದ್ರಾವತಿ, ಎಸ್.ಎ. ಬೀಪಾತು ಎಂಬಿವರು ಸ್ಥಾಯೀ ಸಮಿತಿ ಸದಸ್ಯರಾ ಗಿಯೂ, ಪುತ್ತಿಗೆ, ಮಜೀರ್ಪಳ್ಳ, ಪೆರ್ಲ ಡಿವಿಶನ್‌ನಿಂದಿರುವ ಜನಪ್ರತಿನಿಧಿ ಗಳಾದ ಮೊಹಮ್ಮದ್ ಜುನೈದ್, ಕೆ. ಮೋಹನ್,ನಫೀಸತ್ ಮಿಸ್ರಿಯ ಎಂಬಿವರು ಆರೋಗ್ಯ …