ತೆಂಗಿನಕಾಯಿ ತೆಗೆಯಲೆಂದು ಬಾವಿಗಿಳಿದು ಸಿಲುಕಿಕೊಂಡ ವ್ಯಕ್ತಿಗೆ ಅಗ್ನಿಶಾಮಕ ದಳದಿಂದ ರಕ್ಷಣೆ
ಕಾಸರಗೋಡು: ಬಾವಿಗೆ ಬಿದ್ದ ತೆಂಗಿನಕಾಯಿಗಳನ್ನು ತೆಗೆಯಲೆಂದು ಬಾವಿಗಿಳಿದು ಸಿಲುಕಿಕೊಂಡ ವ್ಯಕ್ತಿಯನ್ನು ಕಾಸರಗೋಡು ಅಗ್ನಿಶಾಮಕದಳ ರಕ್ಷಿಸಿದೆ. ತೆಂಗಿನಕಾಯಿಗಳನ್ನು ಸಂಗ್ರಹಿಸಿದ ಬಳಿಕ ಮೇಲೆ ಹತ್ತಲು ಯತ್ನಿಸುತ್ತಿದ್ದ ಮಧ್ಯೆ ಪ್ಲಾಸ್ಟಿಕ್ ಹಗ್ಗ ಜಾರಿ ಕೈತಪ್ಪಿ ಬಾವಿಗೆ ಬಿದ್ದ ಕಲ್ಲಿಕೋಟೆ ನರಿಕೂನಿ ನಿವಾಸಿ ಹಾಗೂ ಕುಂಬಳೆಯಲ್ಲಿ ವಾಸವಾಗಿರುವ ಶಬೀರ್ (39)ನನ್ನು ಅಗ್ನಿಶಾಮಕದಳ ಮೇಲೆತ್ತಿ ಪಾರು ಮಾಡಿದೆ. ನುಳ್ಳಿಪ್ಪಾಡಿಯ ರಾಜೇಂದ್ರ ಎಂಬವರ ಮನೆ ಹಿತ್ತಿಲಿನ ವಾಲಿಕೊಂಡಿದ್ದ ತೆಂಗನ್ನು ತಂತಿ ಉಪಯೋಗಿಸಿ ಎಳೆದು ಕಟ್ಟಲು ಇವರು ತಲುಪಿದ್ದರು. ಕೆಲಸದ ಮಧ್ಯೆ ಬಾವಿಗೆ ಬಿದ್ದ ತೆಂಗಿನಕಾಯಿಗಳನ್ನು ತೆಗೆಯಲೆಂದು …
Read more “ತೆಂಗಿನಕಾಯಿ ತೆಗೆಯಲೆಂದು ಬಾವಿಗಿಳಿದು ಸಿಲುಕಿಕೊಂಡ ವ್ಯಕ್ತಿಗೆ ಅಗ್ನಿಶಾಮಕ ದಳದಿಂದ ರಕ್ಷಣೆ”