ಪತ್ನಿಯನ್ನು ಶಾಲೆಗೆ ಕಳುಹಿಸಿಕೊಟ್ಟ ಬಳಿಕ ಹಿಂತಿರುಗಿದ ಪತಿ ಮನೆಯೊಳಗೆ ನೇಣು

ಹೊಸದುರ್ಗ: ಪತ್ನಿಯನ್ನು ಶಾಲೆಗೆ ಬಸ್‌ನಲ್ಲಿ ಕಳುಹಿಸಿಕೊಟ್ಟ ಬಳಿಕ ಹಿಂತಿರುಗಿ ಮನೆಗೆ ತಲುಪಿದ ಪತಿ ಮನೆಯೊಳಗೆ ನೇಣುಬಿಗಿದು ಆತ್ಮಹತ್ಯೆಗೈದ ಘಟನೆ ನಡೆದಿದೆ. ಪನತ್ತಡಿ ತಚ್ಚಾರಕ್ಕಡ ನಿವಾಸಿ ಶಂಕರ್ ಬೇಕರಿ ಆಂಡ್ ಕೂಲ್ ಬಾರ್ ಮಾಲಕ ಹಾಗೂ ಸಮಾಜಸೇವಕನಾಗಿದ್ದ ಕೆ.ಎನ್. ವೇಣು (52) ನಿನ್ನೆ ಬೆಳಿಗ್ಗೆ ಮನೆಯೊಳಗೆ ನೇಣು ಬಿಗಿದು ಆತ್ಮಹತ್ಯೆಗೈದಿದ್ದಾರೆ. ಮನೆಯ ಒಂದನೇ ಮಹಡಿಗೆ ಹತ್ತಿದ್ದ ತಂದೆ ಬಳಿಕ ಕಂಡುಬಾರದ ಹಿನ್ನೆಲೆಯಲ್ಲಿ ಪುತ್ರ ನಡೆಸಿದ ತಪಾಸಣೆಯಲ್ಲಿ ತಂದೆ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದರು. ಕೂಡಲೇ ಆಸ್ಪತ್ರೆಗೆ ಕೊಂಡೊಯ್ಯಲಾಯಿತಾದರೂ ಜೀವ …

ಶಾಲೆಯನ್ನು ಉನ್ನತಿಗೇರಿಸಿದ ಮುಖ್ಯೋಪಾಧ್ಯಾಯನಿಗೆ ನಿವೃತ್ತಿ ವೇಳೆ ಸ್ಥಳೀಯರಿಂದ ಕಾರು ಉಡುಗೊರೆ

ಕಾಸರಗೋಡು: ಸರಕಾರಿ ಯುಪಿ ಶಾಲೆ ಹಾಗೂ ವಿದ್ಯಾರ್ಥಿಗಳ ಅಧ್ಯಯನ ಗುಣಮಟ್ಟವನ್ನು ಹೆಚ್ಚಿಸಿದ ಮುಖ್ಯೋಪಾಧ್ಯಾಯ ಸೇವೆಯಿಂದ ನಿವೃತ್ತನಾದಾಗ ಶಾಲಾ ಪಿಟಿಎ ಸ್ನೇಹದ ಸಂಕೇತವಾಗಿ  13 ಲಕ್ಷ ರೂ. ಮೌಲ್ಯದ ಕಾರು ಉಡುಗೊರೆಯಾಗಿ ನೀಡಿದೆ. ಚೆಮ್ಮನಾಡು ವೆಸ್ಟ್ ಸರಕಾರಿ ಯುಪಿ ಶಾಲೆಯಿಂದ ಮೊನ್ನೆ ನಿವೃತ್ತ ರಾದ ಮುಖ್ಯೋಪಾಧ್ಯಾಯ ಪಿ.ಟಿ. ಬೆನ್ನಿಯವರಿಗೆ ಸ್ಥಳೀಯ ನಾಗರಿಕರ ಉಪಸ್ಥಿತಿಯಲ್ಲಿ ಈ ಉಡುಗೊರೆಯನ್ನು ನೀಡಿ ಬೀಳ್ಕೊಡಲಾಗಿದೆ. ಎಪ್ರಿಲ್ 18ರಂದು ಶಾಲೆಯ ವಾರ್ಷಿಕೋತ್ಸವ ಕಾರ್ಯಕ್ರಮದಲ್ಲಿ ಉತ್ಸವ ಸಮಿತಿ ನೀಡಿದ ಬೀಳ್ಕೊಡುಗೆಯಲ್ಲಿ ಈ ಕಾರನ್ನು ಉಡುಗೊರೆಯಾಗಿ ನೀಡುವ ಬಗ್ಗೆ …

ರಾಷ್ಟ್ರೀಯ ಹೆದ್ದಾರಿ ಕಾಲು ದಾರಿ ನಿರ್ಮಾಣ  ಅಪಾಯಕರ ಸ್ಥಿತಿಯಲ್ಲಿ: ಕಳಪೆ ಕಾಮಗಾರಿ ಆರೋಪ

ಕಾಸರಗೋಡು: ರಾಷ್ಟ್ರೀಯ ಹೆದ್ದಾರಿ ತಲಪಾಡಿ- ಚೆಂಗಳ ರೀಚ್ ಉದ್ಘಾಟಿಸಲ್ಪಟ್ಟಿತಾದರೂ ಕಾಲ್ನಡೆ ಪ್ರಯಾಣಿಕರ ಸಂಕಷ್ಟ ಅಪಾಯಕರವಾದ ರೀತಿಯಲ್ಲಿ ಮುಂದುವರಿಯುತ್ತಿದೆ ಎಂದು ಆರೋಪಿಸಲಾಗಿದೆ. ಜಿಲ್ಲೆಯ ಹೆಚ್ಚಿನ ಸ್ಥಳಗಳಲ್ಲಿ ಕಾಲ್ನಡೆ ದಾರಿ ಹಾನಿಗೊಂಡ ಸ್ಥಿತಿಯಲ್ಲಿದೆ. ಮಳೆಯ ಆಗಮನದೊಂದಿಗೆ ಇಲ್ಲಿ ಇನ್ನಷ್ಟು ಸಮಸ್ಯೆ ತಲೆದೋರಲಿದೆ. ಕಾಲ್ನಡೆ ಪ್ರಯಾಣಿಕರ ವಿಷಯದಲ್ಲಿ ಸುಪ್ರೀಂಕೋರ್ಟ್ ಕಠಿಣ ನಿಲುವು ತಳೆದ ಹಿನ್ನೆಲೆಯಲ್ಲಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಕಣ್ಣು ತೆರೆದಿತ್ತು. ಈ ಹಿನ್ನೆಲೆಯಲ್ಲಿ ಕಾಲ್ನಡೆ ದಾರಿಯನ್ನು ನಿರ್ಮಿಸಲಾಗಿದೆ. ಆದರೆ ಇದನ್ನು ಕಳಪೆ ರೀತಿಯಲ್ಲಿ ನಿರ್ಮಿಸಲಾಗಿದ್ದು, ಮಣ್ಣಿನ ಮೇಲೆ ಇಂಟರ್‌ಲಾಕ್ ಹಾಕಲಾಗಿದೆ. …

ಕೂಲಿ ಕಾರ್ಮಿಕ ಕುಸಿದು ಬಿದ್ದು ನಿಧನ

ಬದಿಯಡ್ಕ: ಕನ್ಯಪ್ಪಾಡಿ ಹರಿಕೃಪ ನಿವಾಸಿ ಐತ್ತಪ್ಪ (54) ಕುಸಿದು ಬಿದ್ದು  ನಿಧನ ಹೊಂದಿದರು. ಕೂಲಿ ಕಾರ್ಮಿಕನಾಗಿದ್ದರು. ನಿನ್ನೆ ಬೆಳಿಗ್ಗೆ ಮನೆಯಂಗಳದ ತುಳಸಿಗಿಡ ಬಳಿ ಪ್ರಾರ್ಥಿಸಿ ಹಿಂತಿರುಗುತ್ತಿದ್ದಾಗ ಕುಸಿದು ಬಿದ್ದಿದ್ದಾರೆ. ಕೂಡಲೇ ಆಸ್ಪತ್ರೆಗೆ ಕೊಂಡೊಯ್ಯಲಾಯಿತಾ ದರೂ ನಿಧನ ಹೊಂದಿದರು. ದಿ| ಕೊಗ್ಗು- ದಿ| ಅಂಗಾರೆ ದಂಪತಿ ಪುತ್ರನಾಗಿದ್ದಾರೆ. ಮೃತರು ಪತ್ನಿ ವಸಂತಿ, ಮಕ್ಕಳಾದ ಜಯಲಕ್ಷ್ಮಿ, ರಮ್ಯ, ಶ್ರೀಹರಿ, ಅನುಶ್ರೀ, ದೀಪಶ್ರೀ, ಅಳಿಯ ವಸಂತ, ಸಹೋದರರಾದ ಬಾಲಕೃಷ್ಣ, ಉದಯ, ಮಹಾಲಿಂಗೇಶ್ವರ, ಸಹೋದರಿ ವಸಂತಿ ಹಾಗೂ ಅಪಾರ ಬಂಧು-ಬಳಗವನ್ನು ಅಗಲಿದ್ದಾರೆ. ಓರ್ವ …

ಕಟ್ಟಿ ಹಾಕಿದ ಸಾಕುನಾಯಿ ಅಜ್ಞಾತ ಪ್ರಾಣಿ ದಾಳಿಗೆ ಬಲಿ : ಚಿರತೆ ಕೊಂದಿರಬಹುದೆಂಬ ಶಂಕೆ; ಬೆಳ್ಳೂರಿನಲ್ಲಿ ಭೀತಿ ಸೃಷ್ಟಿ

ಬೆಳ್ಳೂರು: ಮನೆ ಅಂಗಳದಲ್ಲಿ ಕಟ್ಟಿ ಹಾಕಿದ್ದ ಸಾಕು ನಾಯಿಯನ್ನು ಅಜ್ಞಾತ ಪ್ರಾಣಿ ಕಚ್ಚಿ ಕೊಂದು ಹಾಕಿದ ಘಟನೆ ನಡೆದಿದೆ. ನಾಟೆಕಲ್ಲು ಬಳಿಯ ಜಾಲಮೂಲೆ ಎಂಬಲ್ಲಿನ ಲೀಲಾ ಎಂಬವರ ಸಾಕು ನಾಯಿ ಸಾವಿಗೀಡಾಗಿದೆ. ನಾಯಿಯನ್ನು ಕೊಂದು ಅರೆಬರೆ ಮಾಂಸವನ್ನು ತಿಂದ ಸ್ಥಿತಿಯಲ್ಲಿ ಕಂಡು ಬಂದಿದೆ. ಇಂದು ಬೆಳಿಗ್ಗೆ ಮನೆಯವರು ಎದ್ದು ನೋಡಿದಾಗ ನಾಯಿ ಸಾವಿಗೀಡಾಗಿರುವುದು ಕಂಡು ಬಂದಿದೆ. ನಾಯಿಯ ದೇಹದಲ್ಲಿ ಅಜ್ಞಾತ ಪ್ರಾಣಿಯ ಕಡಿತದಿಂದ ಉಂಟಾದ ಗಾಯ ಕಂಡು ಬಂದಿದೆ. ಈ ಬಗ್ಗೆ ಮನೆಯವರು ನೀಡಿದ ಮಾಹಿತಿಯಂತೆ ಅರಣ್ಯಾಧಿಕಾರಿಗಳು …

ಯುವಕನೊಂದಿಗೆ ನಿಂತಿರುವ ಫೋಟೋ ಪತಿಗೆ ರವಾನೆ, ಸೋಶ್ಯಲ್ ಮೀಡಿಯಾ ಮೂಲಕ ಪ್ರಚಾರ ಆರೋಪ: ಯುವತಿ ದೂರಿನಂತೆ ಯುವಕನ ವಿರುದ್ಧ ಕೇಸು

ಮಂಜೇಶ್ವರ: ಯುವಕನೊಂದಿಗೆ ನಿಂತಿರುವ ಫೋಟೋವನ್ನು ಪತಿಯ ಫೇಸ್ ಬುಕ್ ಖಾತೆ ಹಾಗೂ ಇನ್‌ಸ್ಟಾಗ್ರಾಂಗೆ ಕಳುಹಿಸಿಕೊಟ್ಟು, ಪತಿ ಹಾಗೂ ಮಗುವನ್ನು ಕೊಲ್ಲುವುದಾಗಿ ಫೋನ್ ಮೂಲಕ ಬೆದರಿಕೆಯೊಡ್ಡಿದ ಬಗ್ಗೆ ದೂರಲಾಗಿದೆ.  ಮಂಜೇಶ್ವರ ಪಾವೂರಿನ 37ರ ಹರೆಯದ ಯುವತಿ ನೀಡಿದ ದೂರಿನಂತೆ ಕುಂಜತ್ತೂರಿನ ಇಬ್ರಾಹಿಂ ಖಲೀಲ್ (32) ಎಂಬಾತನ ವಿರುದ್ಧ ಮಂಜೇಶ್ವರ ಪೊಲೀಸರು ಕೇಸು ದಾಖಲಿಸಿದ್ದಾರೆ. ಮೇ 29ರಂದು ಮಧ್ಯಾಹ್ನ 12 ಗಂಟೆ ಹಾಗೂ 30ರಂದು ಬೆಳಿಗ್ಗೆ 10.44ರ ಮಧ್ಯೆ ಪ್ರಕರಣಕ್ಕೆ ಕಾರಣವಾದ ಘಟನೆ ನಡೆದಿದೆ. ದೂರುಗಾರ್ತಿ ಹಾಗೂ ಇಬ್ರಾಹಿಂ ಖಲೀಲ್ …

ಬೆಳ್ಳಿಪ್ಪಾಡಿಯಲ್ಲಿ ಕಾಡಾನೆ ದಾಳಿಯಿಂದ ಕೃಷಿ ನಾಶ: ಅಧಿಕಾರಿಗಳಿಂದ ಮೌನವೆಂದು ಆರೋಪ

ದೇಲಂಪಾಡಿ: ಪಂಜಿಕಲ್ ಬೆಳ್ಳಿಪ್ಪಾಡಿ ಪರಿಸರದಲ್ಲಿ ಆನೆಗಳ ಹಾವಳಿಯಿಂದ ಕೃಷಿಕರು ಕಂಗಾಲಾಗಿರುವುದಾಗಿ ಸ್ಥಳೀಯರು ದೂರಿದ್ದಾರೆ. ಕಳೆದ ಹಲವು ತಿಂಗಳಿಂದ ಈ ಪ್ರದೇಶದಲ್ಲಿ ರಾತ್ರಿ ವೇಳೆ ಆನೆಗಳು ದಾಳಿ ನಡೆಸುತ್ತಿದ್ದು ಕಂಗು, ತೆಂಗು, ಬಾಳೆ ಕೃಷಿಗಳನ್ನು ನಾಶಪಡಿಸುತ್ತಿರುವುದಾಗಿ ದೂರಿದ್ದಾರೆ. ಮೊನ್ನೆ ರಾತ್ರಿ ಬೆಳ್ಳಿಪ್ಪಾಡಿ ವಿ.ಬಿ. ಶ್ರೀನಿಲಯ ಭಟ್‌ರ ತೋಟಕ್ಕೆ ಆನೆಗಳು ದಾಳಿಯಿಟ್ಟು ಕೃಷಿನಾಶಗೈದಿವೆ. ಈ ಪರಿಸರಕ್ಕೆ ಅರಣ್ಯಾಧಿಕಾರಿಗಳು ಗಮನ ಹರಿಸುತ್ತಿಲ್ಲವೆಂದು ಸ್ಥಳೀಯರು ದೂರಿದ್ದಾರೆ. ನಿನ್ನೆ ಹಗಲು ಹೊತ್ತಲ್ಲಿ ಪರಪ್ಪ ಫಾರೆಸ್ಟ್ ಅಧಿಕಾರಿಗಳು ಬಂದು ನೋಡಿ ಹೋಗಿದ್ದು, ಆದರೆ ರಾತ್ರಿ ವೇಳೆಯಲ್ಲಿ …

ಸಾರಣೆ ಮೇಸ್ತ್ರಿ ಗ್ಯಾರೇಜ್‌ನೊಳಗೆ ನೇಣುಬಿಗಿದು ಸಾವಿಗೀಡಾದ ಸ್ಥಿತಿಯಲ್ಲಿ ಪತ್ತೆ

ಕುಂಬಳೆ: ಸಾರಣೆ ಮೇಸ್ತ್ರಿಯಾದ ಯುವಕ ನೇಣುಬಿಗಿದು ಸಾವಿಗೀಡಾದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾನೆ. ಪೆರುವಾಡ್ ಭಜನಾ ಮಂದಿರ ಸಮೀಪದ ಸತೀಶ್ (35) ಎಂಬವರು ಮೃತಪಟ್ಟ ವ್ಯಕ್ತಿ.  ನಿನ್ನೆ ಮುಂಜಾನೆ 1 ಗಂಟೆ ವೇಳೆ ಪೆರುವಾಡ್‌ನ ಮುಚ್ಚುಗಡೆಗೊಳಿಸಿದ  ಗ್ಯಾರೇಜ್‌ನೊಳಗೆ ಇವರು ನೇಣುಬಿಗಿದು ಸಾವಿಗೀಡಾದ ಸ್ಥಿತಿಯಲ್ಲಿ ಪತ್ತೆಯಾಗಿದ್ದರು.  ಮೊನ್ನೆ ರಾತ್ರಿ 8 ಗಂಟೆ ವೇಳೆ ಸತೀಶ್ ತಾಯಿಗೆ ಫೋನ್ ಕರೆ ಮಾಡಿ ಮಾತನಾಡಿದ್ದ ರೆನ್ನಲಾಗಿದೆ. ಅನಂತರ ಸತೀಶ್ ನಾಪತ್ತೆಯಾಗಿದ್ದು, ಇದರಿಂದ ಮನೆಯವರು ಅವರಿಗೆ ಫೋನ್ ಕರೆ ಮಾಡಿದರೂ ಕರೆಯನ್ನು ಸ್ವೀಕರಿಸಲಿಲ್ಲ. ಈ ಹಿನ್ನೆಲೆಯಲ್ಲಿ …

ಗೃಹಿಣಿ ಬಾವಿಯಲ್ಲಿ ಸಾವನ್ನಪ್ಪಿದ ಸ್ಥಿತಿಯಲ್ಲಿ ಪತ್ತೆ

ಕಾಸರಗೋಡು: ಗೃಹಿಣಿ ಬಾವಿಯಲ್ಲಿ ಸಾವನ್ನಪ್ಪಿದ ಸ್ಥಿತಿಯಲ್ಲಿ ಪತ್ತೆಯಾದ ಘಟನೆ ನಡೆದಿದೆ. ಕಾಸರಗೋಡು ತಾಳಿಪಡ್ಪು ಕೊಳ್ಕೆಬೈಲಿನ ಶ್ರುತಿ ನಿವಾಸದ ಕಾಸರಗೋಡು ನಗರಸಭೆಯ ಮಾಜಿ ಕೌನ್ಸಿಲರ್ ಎ. ದುಗ್ಗಪ್ಪ ಪೂಜಾರಿಯವರ ಪತ್ನಿ ವಿಶಾಲಾಕ್ಷಿ ಕೋಟ್ಯಾನ್ (62) ಸಾವನ್ನಪ್ಪಿದ ಮಹಿಳೆ. ಇವರು ನಿನ್ನೆ ಬೆಳಿಗ್ಗೆ ಮನೆ ಪಕ್ಕದ ಬಾವಿಯಲ್ಲಿ ಸಾವನ್ನಪ್ಪಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದರು. ಆ ಬಗ್ಗೆ ನೀಡಲಾದ ಮಾಹಿತಿ ಯಂತೆ  ಕಾಸರಗೋಡು ಅಗ್ನಿಶಾಮಕದಳದವರು ಸ್ಥಳಕ್ಕೆ ಆಗಮಿಸಿ ಮೃತದೇಹವನ್ನು  ಬಾವಿಯಿಂದ ಮೇಲಕ್ಕೆತ್ತಿ ಕಾಸರಗೋಡು ಜನರಲ್ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಲಾಯಿತು.  ಕಾಸರಗೋಡು ಪೊಲೀಸರು …

ರಾಜ್ಯದಲ್ಲಿ ಶಾಲಾ ಪ್ರವೇಶೋತ್ಸವ ಆರಂಭ: ಶಾಲೆಗಳಲ್ಲಿ ಮತ್ತೆ ಮಕ್ಕಳ ಕಲರವ

ಕಾಸರಗೋಡು: 2026-27ನೇ ಶೈಕ್ಷಣಿಕ ವರ್ಷ ಇಂದು ಆರಂಭಗೊಂ ಡಿದ್ದು, ಇದರಂತೆ ಒಂದನೇ ತರಗತಿಗಳಿಗಿ ರುವ ಚಿಣ್ಣರ ಪ್ರವೇಶೋತ್ಸವ ರಾಜ್ಯದಾದ್ಯಂತ ಎಲ್ಲಾ ಜಿಲ್ಲೆಗಳಲ್ಲೂ ಇಂದು ಬೆಳಿಗ್ಗೆ ಅದ್ದೂರಿ ಹಾಗೂ ವರ್ಣರಂಜಿತ ಕಾರ್ಯಕ್ರಮಗಳೊಂದಿಗೆ ನಡೆಯಿತು. ಇದರ ರಾಜ್ಯಮಟ್ಟದ ಉದ್ಘಾಟನೆಯಲ್ಲಿ ತಿರುವನಂತಪುರ ಪಟ್ಟ ಸರಕಾರಿ ಗೇಲ್ಸ್ ಎಚ್‌ಎಸ್‌ಎಸ್‌ನಲ್ಲಿ ಇಂದು ಬೆಳಿಗ್ಗೆ ನಡೆದ ವರ್ಣರಂಜಿತ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ವಿ.ಡಿ. ಸತೀಶನ್ ಉದ್ಘಾಟನೆ ನೆರವೇರಿಸಿದರು. ಶಿಕ್ಷಣ ಸಚಿವ ಎನ್. ಶಂಸುದ್ದೀನ್ ಅಧ್ಯಕ್ಷತೆ ವಹಿಸಿದರು. ಒಂದನೇ ವರ್ಷಕ್ಕೆ ಸೇರ್ಪಡೆಗೊಳ್ಳುವ ಚಿಣ್ಣರಿಗೆ ವರ್ಣರಂಜಿತ ಟೋಪಿಗಳನ್ನು ತೊಡಿಸಿ ಹಾಗೂ …