ಚೆರುವತ್ತೂರು ಮಟ್ಟಲಾಯಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಬಿರುಕು: ತನಿಖೆಗೆ ಜಿಲ್ಲಾಧಿಕಾರಿ ಆದೇಶ

ಕಾಸರಗೋಡು: ಚೆರುವತ್ತೂರು ಮಟ್ಟಲಾಯಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಬಿರುಕು ಸಂಬಂಧ ತುರ್ತು ತಪಾಸಣೆ ನಡೆಸಿ ವರದಿ ನೀಡಲು ಜಿಲ್ಲಾಧಿಕಾರಿ ಅರ್ಜುನ್ ಪಾಂಡ್ಯನ್ ಆದೇಶಿಸಿದರು. ಸ್ಥಳ ಪರಿಶೀಲನೆ ನಡೆಸಿ ತುರ್ತಾಗಿ ವರದಿ ನೀಡುವುದಕ್ಕೆ ತನಿಖಾ ತಂಡವನ್ನು ಜಿಲ್ಲಾಧಿಕಾರಿ ನೇಮಕಗೊಳಿಸಿದ್ದಾರೆ. ಕಾಞಂಗಾಡ್ ಆರ್‌ಡಿಒರ ನೇತೃತ್ವದಲ್ಲಿರುವ ತಂಡ ತಪಾಸಣೆ ನಡೆಸಲಿದೆ. ರೆವೆನ್ಯೂ ಡಿವಿಶನಲ್ ಆಫೀಸರ್ ಸಂಚಾಲಕರಾಗಿ, ತಹಶೀಲ್ದಾರ್, ಲೋಕೋಪಯೋಗಿ ರಸ್ತೆ ವಿಭಾಗ ಎಕ್ಸಿಕ್ಯೂಟಿವ್ ಇಂಜಿನಿಯರ್, ಆರ್‌ಟಿಒ, ಚೆರುವತ್ತೂರು ಪಂ. ಕಾರ್ಯದರ್ಶಿ, ಸೋಯಿಲ್ ಕನ್ಸರ್ವೇಟರ್, ಜಿಯೋಲಜಿಸ್ಟ್, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಪ್ರೊಜೆಕ್ಟ್ ಡೈರೆಕ್ಟರ್, ಜಿಲ್ಲಾ …

ಕುಂಬಳೆ ಅಂಚೆ ಕಚೇರಿ ನಿರ್ಮಾಣ: ಶಾಲಾ ಮೈದಾನಕ್ಕಿರುವ  ದಾರಿ ಮುಚ್ಚಲು ಯತ್ನ; ಸ್ಥಳೀಯರಿಂದ ಪ್ರತಿಭಟನೆ

ಕುಂಬಳೆ: ಅಂಚೆ ಕಚೇರಿಗಾಗಿ ಕಟ್ಟಡ ನಿರ್ಮಿಸುವಾಗ ಸ್ಥಳೀಯರ ಸಂಚಾರ ಸ್ವಾತಂತ್ರ್ಯಕ್ಕೆ ಧಕ್ಕೆ ಉಂಟಾಗುತ್ತಿದೆ ಎಂದು ದೂರಲಾಗಿದೆ. ಅಂಚೆ ಇಲಾಖೆಯ ಅಧೀನದಲ್ಲಿರುವ ಕುಂಬಳೆ ಮೀನು ಮಾರುಕಟ್ಟೆ ಸಮೀಪದ ಸ್ಥಳದಲ್ಲಿ ಅಂಚೆ ಕಚೇರಿ ನಿರ್ಮಿಸುವುದ ರಂಗವಾಗಿ ಹಲವು ಕಾಲಗಳಿಂದ ಸ್ಥಳೀಯರು ಉಪಯೋಗಿಸುತ್ತಿದ್ದ ದಾರಿಯನ್ನು ಮುಚ್ಚಲಾಗಿದೆ ಎಂದು ದೂರಲಾಗಿದೆ. ಅಂಚೆ ಕಚೇರಿಗೆ ಆವರಣಗೋಡೆ ನಿರ್ಮಿಸುವ ಹೆಸರಲ್ಲಿ ಸ್ಥಳೀಯರ ದಾರಿಯನ್ನು ಮುಚ್ಚಲಾಗಿದೆ. ಕುಂಬಳೆಯ ಬಾಡಿಗೆ ಕಟ್ಟಡದಲ್ಲಿ ಕಾರ್ಯಾಚರಿಸುವ ಅಂಚೆ ಕಚೇರಿಗೆ ಸ್ವಂತವಾಗಿ ಕಟ್ಟಡ ನಿರ್ಮಿಸಲು ಅಂಚೆ ಇಲಾಖೆ ಯೋಜನೆ ಹಾಕಿತ್ತು. ಕಟ್ಟಡದ ಹೆಚ್ಚಿನ …

ಮದುವೆ ನಿಶ್ಚಿತಾರ್ಥ ನಡೆದ ಯುವಕ ಬೈಕ್ ಅಪಘಾತದಲ್ಲಿ ಮೃತ್ಯು: ಯುವತಿ ಮನೆಯೊಳಗೆ ನೇಣುಬಿಗಿದು ಸಾವಿಗೀಡಾದ ಸ್ಥಿತಿಯಲ್ಲಿ ಪತ್ತೆ

ಕಾಸರಗೋಡು: ಮದುವೆ ನಿಶ್ಚಿತಾರ್ಥ ನಡೆದ ಯುವಕ ಬೈಕ್ ಅಪಘಾತದಲ್ಲಿ ಮೃತಪಟ್ಟ ಘಟನೆಯಿಂದ ಮನನೊಂದಿದ್ದ ಯುವತಿ ಮನೆಯೊಳಗೆ ಫ್ಯಾನ್‌ಗೆ ನೇಣು ಬಿಗಿದು ಸಾವಿಗೀಡಾದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾಳೆ. ಕಿದೂರು ಕುಂಟಂಗೇರಡ್ಕದ ಬಿ. ಜಯಾನಂದರ ಪುತ್ರಿ ಪ್ರಪುಲ್ಲ (26) ಸಾವಿಗೀಡಾದ ಯುವತಿ ಯಾಗಿದ್ದಾಳೆ. ನಿನ್ನೆ ಸಂಜೆ ವೇಳೆ ಈಕೆಯ ಮೃತದೇಹ  ಮನೆ ಯೊಳಗೆ ಫ್ಯಾನ್‌ಗೆ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ. ಈ ವೇಳೆ ಮನೆಯಲ್ಲಿ ಬೇರೆ ಯಾರೂ ಇರಲಿಲ್ಲ. ಮನೆಯವರು ಜಯ ನಂದರ ಸಹೋದರಿಯ ಮಗಳ ಮದುವೆ ಕಾರ್ಯಕ್ರಮದಲ್ಲಿ ಭಾಗವಹಿಸಲು ತೆರಳಿದ್ದರು. …

ಫಲಿತಾಂಶ ಬಂದು ಒಂದು ವಾರವಾದರೂ ಮುಖ್ಯಮಂತ್ರಿ ಆಯ್ಕೆ ಇನ್ನೂ ಕಗ್ಗಂಟು

ತಿರುವನಂತಪುರ: ಕೇರಳ ವಿಧಾನ ಸಭೆಗೆ ನಡೆದ ಚುನಾವಣೆಯ ಫಲಿತಾಂಶ ಪ್ರಕಟಗೊಂಡು ಇಂದಿಗೆ ಒಂದು ವಾರವಾದರೂ ನೂತನ ಮುಖ್ಯಮಂತ್ರಿ ಯಾರು ಎಂಬುದು  ಪ್ರಶ್ನೆಯಾಗಿಯೇ ಮುಂದುವರಿ ಯುತ್ತಿದೆ. ಚುನಾವಣೆಯಲ್ಲಿ ಯುಡಿಎಫ್‌ಗೆ 102 ಸ್ಥಾನಗಳೊಂದಿಗೆ ಪ್ರಚಂಡ ಬಹುಮತ ಲಭಿಸಿದ್ದರೂ ನೂತನ ಮುಖ್ಯಮಂತ್ರಿಯನ್ನು ನಿರ್ಧರಿಸುವಲ್ಲಿ ಸಂದಿಗ್ಧತೆ ಮುಂದುವರಿಯುತ್ತಿದೆ. ಮುಖ್ಯಮಂತ್ರಿ ಸ್ಥಾನಕ್ಕೆ ವಿ.ಡಿ. ಸತೀಶನ್, ರಮೇಶ್ ಚೆನ್ನಿತ್ತಲ ಹಾಗೂ ಕೆ.ಸಿ. ವೇಣುಗೋಪಾಲ್ ಎಂಬಿವರ ಮಧ್ಯೆ   ಪೈಪೋಟಿ ಮುಂದುವರಿಯುತ್ತಿದೆ. ಇದೇ ವೇಳೆ ಈ ಮೂವರು ನೇತಾರರನ್ನು ದಿಲ್ಲಿಗೆ ಕರೆಸಿ ಕಾಂಗ್ರೆಸ್ ಹೈಕಮಾಂಡ್ ಈಗಾಗಲೇ ಪ್ರತ್ಯೇಕ ಪ್ರತ್ಯೇಕವಾಗಿ  …

ಮಾಡ ಕ್ಷೇತ್ರದ ನಿವೃತ್ತ ಮೈಕ್ ಆಪರೇಟರ್ ನಿಧನ

ಮಂಜೇಶ್ವರ: ಉದ್ಯಾವರ ಮಾಡ ಶ್ರೀ ಅರಸು ಮಂಜೀಷ್ಣಾರ್ ದೈವಕ್ಷೇತ್ರದ ನಿವೃತ್ತ ಮೈಕ್ ಆಪರೇಟರ್ ಜನಾರ್ದನ ಯು. (70) ನಿಧನ ಹೊಂದಿದರು. ಮಂಜಪ್ಪ- ಪೂವಮ್ಮ ದಂಪತಿ ಪುತ್ರನಾಗಿದ್ದಾರೆ. ಎಸ್‌ಎನ್‌ಡಿಪಿ, ಮಾಡ ತೀಯಾ ಸಮಾಜದ ಮುಖಂ ಡರಾಗಿದ್ದರು. ಮಾಡ ಕ್ಷೇತ್ರದಲ್ಲಿ ಕಳೆದ ೩೫ ವರ್ಷಗಳಿಂದ ಸೇವೆ ಸಲ್ಲಿಸುತ್ತಿದ್ದರು. ಇಂದು ಮುಂಜಾನೆ ೩ ಗಂಟೆಗೆ ನಿಧನ ಸಂಭವಿಸಿದೆ. ಮೃತರು ಪತ್ನಿ ಕಮಲಾಕ್ಷಿ, ಮಕ್ಕಳಾದ ನಿತಿನ್, ದೀಪಿಕ, ಅಳಿಯ ಶಿವಪ್ರಸಾದ್ ಕೊಲ್ಯ, ಸೊಸೆ ಶ್ರದ್ಧಾ, ಸಹೋದರಿಯರಾದ ಸೇಸಮ್ಮ, ಕೃಷ್ಣಮ್ಮ, ಯಮುನ ಹಾಗೂ ಅಪಾರ …

ಹೊಳೆಯಿಂದ ಅನಧಿಕೃತ ಮರಳು ಸಾಗಾಟ: ಲಾರಿ ಸಹಿತ ಚಾಲಕ ಸೆರೆ

ಮಂಜೇಶ್ವರ : ಹೊಳೆಯಿಂದ ಅನಧಿಕೃತವಾಗಿ ಮರಳು ಸಾಗಾಟ ನಡೆಸುತ್ತಿದ್ದ ಲಾರಿಯನ್ನು ಮಂಜೇಶ್ವರ ಪೊಲೀಸರು  ವಶಪಡಿಸಿ ಚಾಲಕನನ್ನು ಸೆರೆ ಹಿಡಿದಿದ್ದಾರೆ. ಲಾರಿ ಚಾಲಕ ಮಂಗಳೂರು ಪನೆಲ್  ಪಜೀರ್   ವಂಟೆ ಮಜಲ್ ನಿವಾಸಿ ರಸಾದ್ (18)  ಸೆರೆಗೀಡಾದ ವ್ಯಕ್ತಿ ಎಂದು ಪೊಲೀಸರು ತಿಳಿಸಿದ್ದಾರೆ. ನಿನ್ನೆ ಬೆಳಿಗ್ಗೆ ವರ್ಕಾಡಿ ಗ್ರಾಮದ ಕೋಣಿಬಯಲು ಎಂಬಲ್ಲಿ ಮಂಜೇಶ್ವರ ಠಾಣೆಯ ಎಸ್.ಐ  ರತೀಶ್ ಹಾಗೂ ಉಪ್ಪಳ ಕಂಟ್ರೋಲ್ ರೂಮ್ ನ ಪೊಲೀಸರು ವಾಹನ ತಪಾಸಣೆ ನಡೆಸುತ್ತಿದ್ದಾಗ ಈ ದಾರಿಯಾಗಿ  ಮರಳು ಹೇರಿದ  ಲಾರಿ ಆಗಮಿಸಿದೆ. ತಪಾಸಣೆ  …

ಅವಯವ ವ್ಯಾಪಾರಕ್ಕಾಗಿ ನಕಲಿ ದಾಖಲುಪತ್ರ ಸೃಷ್ಟಿ: ಪ್ರಧಾನ ಆರೋಪಿ ಕಾಸರಗೋಡು ನಿವಾಸಿ ಉತ್ತರಪ್ರದೇಶದಲ್ಲಿ ಸೆರೆ

ಕಾಸರಗೋಡು: ನಕಲಿ ದಾಖಲು ಪತ್ರಗಳನ್ನು ಸೃಷ್ಟಿಸಿ ಅವಯವ ದಾನ ನಡೆಸುತ್ತಿದ್ದ ಪ್ರಕರಣದ ಪ್ರಧಾನ ಆರೋಪಿಯನ್ನು ಸೆರೆಹಿಡಿಯುವಲ್ಲಿ ಪೊಲೀಸರು ಕೊನೆಗೂ ಸಫಲರಾಗಿದ್ದಾರೆ. ಕಳನಾಡು ಆಲ್ ನಿಹಾಮತ್ ಮಂಜಿಲ್ ನಿವಾಸಿ ಮುಹಮ್ಮದ್ ನಜೀಬ್ ಕಲ್ಲಟ್ರ (53) ಬಂಧಿತ ಪ್ರಧಾನ ಆರೋಪಿ. ಎರ್ನಾಕುಳಂ ಗ್ರಾಮೀಣ ಜಿಲ್ಲಾ ವರಿಷ್ಠ ಪೊಲೀಸ್ ಅಧಿಕಾರಿ ಕೆ.ಎಸ್. ಸುದರ್ಶನ್ ನೇತೃತ್ವದ ವಿಶೇಷ ಪೊಲೀಸರ ತಂಡ ಉತ್ತರಪ್ರದೇಶದ ಗಾಸಿಯಾಬಾದ್ ನಿಂದ ಈತನನ್ನು ಸೆರೆಹಿಡಿದಿದೆ. ತನ್ನನ್ನು ಪೊಲೀಸರು ಹುಡುಕಾಡುತ್ತಿ ರುವುದು  ಮನಗಂಡ ಆರೋಪಿ ತನ್ನ ಮೊಬೈಲ್ ಫೋನ್ ಸ್ವಿಚ್ ಆಫ್‌ಮಾಡಿ …

ಪಂಚಾಯತ್ ನಿವೃತ್ತ ಕಾರ್ಯದರ್ಶಿ ನಿಧನ

ಮಂಜೇಶ್ವರ: ಹೊಸಂಗಡಿ ಬಳಿಯ ಅಂಗಡಿಪದವು ನಿವಾಸಿ, ಮಂಜೇಶ್ವರ ಪಂಚಾಯತ್ ನಿವೃತ್ತ ಕಾರ್ಯದರ್ಶಿ ಮಹಾಬಲ ಭಟ್ (85) ಶನಿವಾರ ಮಧ್ಯಾಹ್ನ ಸ್ವ-ಗೃಹದಲ್ಲಿ ನಿಧನ ಹೊಂದಿದರು. ಇವರು ಬದಿಯಡ್ಕ, ಪುತ್ತಿಗೆ ಸಹಿತ ವಿವಿಧ ಪಂಚಾಯತ್‌ಗಳಲ್ಲಿ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿ ಮಂಜೇಶ್ವರ ಪಂಚಾಯತ್‌ನಲ್ಲಿ ನಿವೃತ್ತಿ ಹೊಂದಿದ್ದಾರೆ. ಕೆ.ಎಸ್.ಎಸ್.ಪಿ.ಯು ಮಂಜೇಶ್ವರ ಘಟಕದ ಸದಸ್ಯರಾಗಿದ್ದರು. ಮೃತರು ಪತ್ನಿ ರೇವತಿ, ಮಕ್ಕಳಾದ ಗಣೇಶ, ಪಾರ್ವತಿ, ಅಳಿಯ ನ್ಯಾಯವಾದಿ ಕೃಷ್ಣಮೂರ್ತಿ, ಸಹೋದರ ಸಹೋದರಿಯರಾದ ಸದಾಶಿವ ಭಟ್, ಲಕ್ಷಿ÷್ಮÃ, ಶಂಕರಿ, ಶಾರದಾ ಹಾಗೂ ಅಪಾರ ಬಂಧು ಬಳಗ ವನ್ನು …

ಕೂಲಿ ಕಾರ್ಮಿಕ ಅಸೌಖ್ಯದಿಂದ ನಿಧನ

ನೀರ್ಚಾಲು: ಕುಂಟಿಕ್ಕಾನ ಉರುಳಿತ್ತಡ್ಕ ನಿವಾಸಿ ದಿ| ಸುಂದರ ಎಂಬವರ ಪುತ್ರ ರಾಮ ಕೆ. (56) ನಿಧನ ಹೊಂದಿದರು. ಕೂಲಿ ಕಾರ್ಮಿಕ ನಾಗಿದ್ದ ಇವರು 3 ವರ್ಷಗಳಿಂದ ಅಸೌಖ್ಯ ಬಾಧಿಸಿ ಚಿಕಿತ್ಸೆಯಲ್ಲಿದ್ದರು. ಮೃತರು ತಾಯಿ ದೇವಕಿ, ಪತ್ನಿ ಗೀತ, ಮಕ್ಕಳಾದ ಚಂದ್ರಶೇಖರ, ವನಜ ಕುಮಾರಿ, ಸುರೇಶ್ ಕುಮಾರ್, ಅಳಿಯ ಗಂಗಾಧರ, ಸೊಸೆ ಶೀಬಾ ಮೋಳ್, ಸಹೋದರ ಸಹೋದರಿಯರಾದ ಸುಕುಮಾರ, ವೇಣುಗೋಪಾಲ, ಶೋಭಾ, ಜಾನಕಿ, ಶಾಂತಿ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.

ಬಾಡಿಗೆ ಮನೆಯಲ್ಲಿ ನಿಗೂಢ ರೀತಿಯಲ್ಲಿ ಯುವತಿಯ ಮೃತದೇಹ: ಪತಿ ಕಸ್ಟಡಿಗೆ

ಪಾಲಕ್ಕಾಡ್: 25ರ ಹರೆಯದ ಸೇಲಂ ನಿವಾಸಿ ಬಾಡಿಗೆ ಮನೆಯಲ್ಲಿ  ನಿಗೂಢ ರೀತಿಯಲ್ಲಿ ಮೃತಪಟ್ಟ ಘಟನೆ ನಡೆದಿದೆ. ಆತೂರು ಪೋತನಾಯಕನ್ ಪಾಳಯಂ ಪುದುಕೋತ್ತಂಪಡಿ ನಿವಾಸಿ ಕೃಷ್ಣವೇಣಿಯ ಮೃತದೇಹ ಈ ರೀತಿಯಲ್ಲಿ ಪತ್ತೆಯಾಗಿದೆ. ತೆನ್ನಾಡಿ ಬಜಾರ್ ವಿವೇಕಾನಂದ ರಸ್ತೆಯ ಬಾಡಿಗೆ ಮನೆಯಲ್ಲಿ ನಿನ್ನೆ ರಾತ್ರಿ ಕೃಷ್ಣವೇಣಿ ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. 10 ವರ್ಷಗಳಿಂದ ಒಟ್ಟೆಪ್ಪಾಲಂ ಹಾಗೂ ಪರಿಸರದಲ್ಲಿ ಇವರು ಬಾಡಿಗೆಗೆ ವಾಸಮಾಡುತ್ತಿದ್ದರು. ಪತಿ ಆತೂರು ನಿವಾಸಿ ಮಣಿಕಂಠನ್ ನಿರಂತರ ಮದ್ಯಪಾನ ಗೈದು ಮನೆಯಲ್ಲಿ ಗಲಾಟೆ ನಡೆಸುತ್ತಿದ್ದುದು ಸಾಮಾನ್ಯವಾಗಿತ್ತೆಂದು ನೆರೆಮನೆ ನಿವಾಸಿಗಳು …