ಪಿಣರಾಯಿ ಸರಕಾರದ ಹಾದಿಯಲ್ಲೇ ವಿ.ಡಿ. ಸತೀಶನ್‌ರ ಪೊಲೀಸರೂ ಸಾಗುತ್ತಿದ್ದಾರೆ-ಎಂ.ಎಲ್.ಅಶ್ವಿನಿ

ಕಾಸರಗೋಡು: ಕೇರಳದಲ್ಲಿ ಪ್ರಸ್ತುತ  ವಿ.ಡಿ ಸತೀಶನ್ ಅವರ ಪೊಲೀಸರು ಕೂಡಾ ಈ ಹಿಂದೆ ಪಿಣರಾಯಿ ವಿಜಯನ್ ಸರಕಾರ ಇದ್ದಾಗ ಸಾಗಿದ  ಹಾದಿಯಲ್ಲೇ  ಸಾಗುತ್ತಿದ್ದಾರೆ ಎಂದು  ಬಿಜೆಪಿ ಜಿಲ್ಲಾಧ್ಯಕ್ಷೆ ಎಂ.ಎಲ್.ಅಶ್ವಿನಿ ಆರೋಪಿಸಿದ್ದಾರೆ.  ಉಗ್ರಗಾಮಿಗಳಿಗೆ, ಮಾವೋವಾದಿಗಳಿಗೆ ಕೇರಳವು ಸುರಕ್ಷಿತ ತಾಣವಾಗಿ  ಮಾರ್ಪಟ್ಟಿದೆ.  ದಕ್ಷಿಣ ಕನ್ನಡ ಜಿಲ್ಲೆಯ ಬಿಜೆಪಿ ಯುವಮೋರ್ಛಾ ನಾಯಕ ಪ್ರವೀಣ್ ನೆಟ್ಟಾರು ಕೊಲೆ ಪ್ರಕರಣಕ್ಕೆ ಸಂಬಂಧಿಸಿ ಎನ್.ಐ.ಎ ಕೊಚ್ಚಿಯಿಂದ ಇಬ್ಬರು ಆರೋಪಿಗಳನ್ನು ಬಂಧಿಸಿರುವುದೇ ಇದಕ್ಕೆ ಉದಾಹರಣೆ ಯಾಗಿದೆ.  ಪ್ರವೀಣ್ ನೆಟ್ಟಾರು ಕೊಲೆ ನಡೆದು ನಾಲ್ಕು ವರ್ಷಗಳು ಕಳೆದರೂ ಆರೋಪಿಗಳು …

ದಂಬಯ್ಯ ಮೂಲ್ಯ ನಿಧನ

ಮೀಂಜ: ಮೀಯಪದವು ನಿವಾಸಿ ದಂಬಯ್ಯ ಮೂಲ್ಯ(70) ನಿಧನಹೊಂದಿದರು. ಅಸೌಖ್ಯ ಬಾಧಿಸಿದ್ದ ಇವರನ್ನು ಮಂಗಳೂರಿನ ಆಸ್ಪತ್ರೆಯಲ್ಲಿ ದಾಖಲಿಸಲಾಗಿತ್ತು. ನಿನ್ನೆ ಸಂಜೆ ನಿಧನ ಸಂಭವಿಸಿದೆ. ಇವರು ಈ ಹಿಂದೆ ಬಡಗಿ ವೃತ್ತಿ ನಿರ್ವಹಿಸುತ್ತಿದ್ದರು. ಮೃತರು ಪತ್ನಿ ಸುಲೋಚನ, ಮಕ್ಕಳಾದ ಶಿವಪ್ರಸಾದ್, ಚೇತನ, ಅಳಿಯ ರಮೇಶ್, ಸೊಸೆ ವಿಮಲ, ಸಹೋದರ-ಸಹೋದರಿಯರಾದ ಬಾಬು, ಸುರೇಶ (ಮೀಯಪದವಿನಲ್ಲಿ ‘ಕಾರವಲ್’ ಏಜೆಂಟ್), ವಿಶಾಲಾಕ್ಷಿ, ಮಮತ, ಹರಿಣಿ, ಹರಿಣಾಕ್ಷಿ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ. ಇನ್ನೋರ್ವ ಸಹೋದರ ಕೇಶವ ಎಂಬವರು ಈ ಹಿಂದೆ ನಿಧನರಾಗಿದ್ದಾರೆ.

ಅಸೌಖ್ಯ: ಔಷಧಿ ಅಂಗಡಿ ನೌಕರ ನಿಧನ

ಪೈವಳಿಕೆ: ಚಿಪ್ಪಾರುಗುತ್ತು ಸೊಣಾಜೆ ನಿವಾಸಿ ರವೀಂದ್ರ ರೈ (62) ಮಂಗಳವಾರ ಬೆಳಿಗ್ಗೆ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನ ಹೊಂದಿದರು. ಕೃಷಿಕರಾಗಿದ್ದು, ಬಾಯಾರುಪದವು ವಿಶ್ವ ಮೆಡಿಕಲ್‌ನಲ್ಲಿ ಹಲವಾರು ವರ್ಷಗಳಿಂದ ನೌಕರನಾಗಿದ್ದು ಎಲ್ಲರಿಗೂ ಚಿರಪರಿಚಿತರಾಗಿದ್ದರು. ಮೃತರು ತಾಯಿ ಅಕ್ಕಮ್ಮ, ಪತ್ನಿ ಶಶಿಕಲಾ, ಮಕ್ಕಳಾದ ನಿಶಾನ್, ಶರವಿ, ಸಹೋದರಿಯರಾದ ಮನೋರಮ ಶೆಟ್ಟಿ ಕುರಿಯ, ಪ್ರಭಾವತಿ ರೈ ತೊಟ್ಲ, ಸುಧಾ ರೈ, ಸರಸ್ವತಿ ಹಾಗೂ ಅಪಾರ ಬಂಧು -ಬಳಗವನ್ನು ಅಗಲಿದ್ದಾರೆ. ಮನೆಗೆ ಪೈವಳಿಕೆ ಪಂಚಾಯತ್ ಸದಸ್ಯೆ ಯಶೋದ, ಬ್ಲೋಕ್ ಪಂಚಾಯತ್ ಸದಸ್ಯೆ ಚಂದ್ರಾವತಿ …

ಜಿಲ್ಲೆಯ ಅತ್ಯಂತ ಹಿರಿಯ ಮತದಾರ ಎಂಕಪ್ಪು ನಾಯ್ಕ್ ನಿಧನ

ಕಾಸರಗೋಡು: ಜಿಲ್ಲೆಯ ಅತ್ಯಂತ ಹೆಚ್ಚು ಪ್ರಾಯದ ಮತದಾರರಾದ ಪನತ್ತಡಿಯ ಶತಾಯುಷಿ ಎಂಕಪ್ಪು ನಾಯ್ಕ್ (107) ನಿಧನ ಹೊಂದಿದರು. ಪ್ರಜಾಪ್ರಭುತ್ವ ಪ್ರಕ್ರಿಯೆಯಲ್ಲಿ ಸಕ್ರಿಯರಾಗಿ ಭಾಗವಹಿಸಿ ಇವರು ಗಮನ ಸೆಳೆದಿದ್ದರು. ಚುನಾವಣಾ ಆಯೋಗ ಏರ್ಪಡಿಸಿದ ‘ಮನೆಯಲ್ಲಿ ಮತ’ ವ್ಯವಸ್ಥೆಯನ್ನು ಉಪಯೋಗಿಸಿಕೊಂಡು ತನ್ನ ಮತದಾನ ಹಕ್ಕನ್ನು ವಿನಿಯೋಗಿಸಿದ್ದರು. ಜಿಲ್ಲಾಧಿಕಾರಿ ಇವರನ್ನು ಗೌರವಿಸಿದ್ದರು. ಪನತ್ತಡಿಯ ಉತ್ತಮ ಕೃಷಿಕನಾಗಿಯೂ ಆಯ್ಕೆಯಾಗಿದ್ದರು. ನಿನ್ನೆ ಬೆಳಿಗ್ಗೆ ಮನೆ ಹಿತ್ತಿಲಲ್ಲಿ ಅಂತ್ಯ ಸಂಸ್ಕಾರ ನಡೆದಿದೆ. ಇವರ ಪತ್ನಿ ಅಕ್ಕುಬಾಯಿ ಈ ಹಿಂದೆ ನಿಧನ ಹೊಂದಿದ್ದಾರೆ. ಮೃತರು ಮಕ್ಕಳಾದ ತಿಮ್ಮು …

ಮನೆಯ ಹೊರಗೆ ಇರಿಸಿದ್ದ ಕೀಲಿ ಕೈ ಬಳಸಿ ಬಾಗಿಲು ತೆರೆದು 110 ಗ್ರಾಂ ಚಿನ್ನಾಭರಣ, 20 ಸಾವಿರ ರೂ. ಕಳವು

ಉಪ್ಪಳ:  ದಂಪತಿ ಕ್ಷೇತ್ರ ದರ್ಶನಕ್ಕೆ ಹಾಗೂ ಮಕ್ಕಳು ಶಾಲೆ,ಕಾಲೇಜಿಗೆ ಹೋದ ಸಮಯದಲ್ಲಿ  ಮನೆಯಿಂದ 110 ಗ್ರಾಂ ಚಿನ್ನಾಭರಣ ಮತ್ತು 20 ಸಾವಿರ ರೂಪಾಯಿ ಕಳವಿಗೀಡಾದ ಬಗ್ಗೆ ದೂರಲಾಗಿದೆ. ಪೈವಳಿಕೆ ಕುರುಡಪದ ವಿನ ಸುಬ್ರಾಯ ಸಾಯ ಎಂಬವರ ದೂರಿನಂತೆ ಮಂಜೇಶ್ವರ ಪೊಲೀಸರು ಕೇಸು ದಾಖಲಿಸಿಕೊಂಡಿದ್ದಾರೆ. 2026 ಮಾರ್ಚ್ 9ರಿಂದ 23ರ ಮಧ್ಯೆಗಿನ ದಿನಗಳಲ್ಲಿ ಕಳವು ನಡೆದಿರುವುದಾಗಿ ಸಂಶಯಿಸಲಾ ಗುತ್ತಿದೆ. ಸುಬ್ರಾಯ ಹಾಗೂ ಪತ್ನಿ ಮಾರ್ಚ್ ೯ರಂದು ಕುಕ್ಕೆ ಸುಬ್ರಹ್ಮಣ್ಯ ಕ್ಷೇತ್ರದರ್ಶನಕ್ಕಾಗಿ ತೆರಳಿದ್ದರು.  ಈ ವೇಳೆ ಮನೆಯಲ್ಲಿ ಮಕ್ಕಳು ಮಾತ್ರವೇ …

ಪರೀಕ್ಷಾ ಹಾಲ್‌ನಲ್ಲಿ ಮೊಬೈಲ್ ಫೋನ್ ಉಪಯೋಗಿಸಿ ಉತ್ತರ ಬರೆದ ಪೈವಳಿಕೆ ನಿವಾಸಿ ಬಂಧನ : ಉತ್ತರ ಕಳುಹಿಸಿ ಕೊಟ್ಟಾತನಿಗಾಗಿ ಶೋಧ

ಪೈವಳಿಕೆ:  ಪರೀಕ್ಷಾ ಹಾಲ್ ನಲ್ಲಿ ಮೊಬೈಲ್ ಫೋನ್ ಉಪ ಯೋಗಿಸಿ ಉತ್ತರ ಬರೆದ ಪೈವಳಿಕೆ ನಿವಾಸಿ ಸೆರೆಗೀಡಾಗಿದ್ದಾನೆ. ಪೈವಳಿಕೆ  ಕುರುಡಪದವು ಬಳಿಯ ಸಾದಂU ಯ ನಿವಾಸಿ ಎಸ್. ಜನಾರ್ದನ (36) ಎಂಬಾತನನ್ನು ಕೂತುಪರಂಬ ಎಸಿಪಿ ಸಿಬಿ ಟೋಂ ನೇತೃತ್ವದಲ್ಲಿ ಬಂಧಿಸಲಾಗಿದೆ. ಎಸ್. ಜನಾರ್ದನ ಕೆಎಸ್‌ಇಬಿ ವರ್ಕಾಡಿ ಸೆಕ್ಷನ್‌ನಲ್ಲಿ ತಾತ್ಕಾಲಿಕ ನೌಕರನಾಗಿದ್ದಾನೆ. ಜುಲೈ ೧ರಂದು ಮಟ್ಟನ್ನೂರು ಪಾಲಿಟೆಕ್ನಿಕ್‌ನಲ್ಲಿ ನಡೆದ ಕೇರಳ ಗವ. ಸರ್ಟಿಫಿಕೇಟ್ ಎಕ್ಸಾಮಿನೇಶನ್ (ಕೆಜಿಸಿಇ)ಗೆ ಮೊಬೈಲ್ ಫೋನ್ ಉಪಯೋಗಿಸಿ ಈತ ಪರೀಕ್ಷೆ ಬರೆದಿದ್ದಾನೆ. ತಾತ್ಕಾ ಲಿಕ ನೌಕರನಾದ …

ಆಟೋ ರಿಕ್ಷಾಗಳಿಂದ ಹಣ ಕಳವು ನಡೆಸುತ್ತಿದ್ದಾತ ಸೆರೆ

ಕಾಸರಗೋಡು:  ನಿಲ್ಲಿಸಿದ್ದ ಆಟೋ ರಿಕ್ಷಾಗಳಿಂದ ಕಳವು ನಡೆಸುತ್ತಿದ್ದಾತನನ್ನು ಪೊಲೀಸರು ಕೈಯಾರೆ ಸೆರೆಹಿಡಿದಿದ್ದಾರೆ.  ಚಿಟ್ಟಾರಿಕ್ಕಲ್ ನಿವಾಸಿಯಾದ ಶೈಜು ಜೋಸೆಫ್ (34) ಎಂಬಾತನನ್ನು ತಲಶ್ಶೇರಿ ಪೊಲೀಸರು ಬಂಧಿಸಿದ್ದಾರೆ.  ಆಟೋ ರಿಕ್ಷಾಗಳನ್ನು ಸ್ಟ್ಯಾಂಡ್‌ನಲ್ಲಿ ನಿಲ್ಲಿಸಿ ಚಾಲಕರು ಚಹಾ ಕುಡಿಯಲೋ ಅಥವಾ ಇತರ ಅಗತ್ಯಗಳಿಗೆ ತೆರಳಿದ ಸಂದರ್ಭದಲ್ಲಿ ವಾಹನಗಳಿಂದ ಹಣ ಮೊದಲಾದವು ಗಳನ್ನು ಶೈಜು ಜೋಸೆಫ್   ಕಳವು ನಡೆಸುತ್ತಿದ್ದನೆನ್ನಲಾಗಿದೆ. ಕಳವು ಬಗ್ಗೆ ಹಲವರಿಂದ ದೂರು ಲಭಿಸಿದ ಹಿನ್ನೆಲೆ ಯಲ್ಲಿ ಪೊಲೀಸರು ತನಿಖೆ ತೀವ್ರಗೊಳಿಸಿದ್ದಾರೆ. ಜುಲೈ ೮ರಂದು ತಲಶ್ಶೇರಿ  ಹಳೆ ಬಸ್ ನಿಲ್ದಾಣ ಸಮೀಪ …

ಹೊಟ್ಟೆನೋವು ವ್ಯಕ್ತಿ ಮೃತ್ಯು

ಕಾಸರಗೋಡು: ಹೊಟ್ಟೆನೋವಿನ ಹಿನ್ನೆಲೆಯಲ್ಲಿ ಆಸ್ಪತ್ರೆಗೆ ಕೊಂಡೊಯ್ಯುತ್ತಿದ್ದ ಮಧ್ಯೆ ವ್ಯಕ್ತಿ ಮೃತಪಟ್ಟರು. ಮೇಲ್ಪರಂಬ ಮರವಯಲ್ ನಿವಾಸಿ ರವಿ (55) ಮೃತಪಟ್ಟವರು. ನಿನ್ನೆ ಬೆಳಿಗ್ಗೆ ಘಟನೆ ನಡೆದಿದೆ. ಮಕ್ಕೇರಿ ಗುಳಿಗ ದೈವಸ್ಥಾನದ ಪೂಜಾರಿಯಾಗಿದ್ದರು. ಮೃತರು ಪತ್ನಿ ಪ್ರಿಯ, ಮಕ್ಕಳಾದ ಪ್ರಸೀತ, ಪ್ರವೀಣ, ಪ್ರವೀಣ್, ಪ್ರಣಯ, ಅಳಿಯ ವಿಪಿನ್, ಸಹೋದರ ಸುರೇಶ್ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ. ಸಹೋದರಿ ಬೇಬಿ ಈ ಹಿಂದೆ ನಿಧನ ಹೊಂದಿದ್ದಾರೆ.

ವೃದ್ದೆಯ ಮೃತದೇಹ ಬಾವಿಯಲ್ಲಿ ಪತ್ತೆ

ಬಂದಡ್ಕ: ಬೇಡಡ್ಕ ಚುಳ್ಳಿ ಉನ್ನತಿಯ ನಿವಾಸಿ ವೆಳ್ಳಚ್ಚಿ (90) ಬಾವಿಗೆ ಬಿದ್ದು ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಹಚ್ಚಲಾಗಿದೆ. ಬೇಡಗಂ ಪೊಲೀಸರು ಹಾಗೂ ಅಗ್ನಿಶಾಮಕ ದಳ ತಲುಪಿ ಮೃತದೇಹವನ್ನು ಮೇಲೆತ್ತಿ ಮರಣೋತ್ತರ ಪರೀಕ್ಷೆಗಾಗಿ ಜನರಲ್ ಆಸ್ಪತ್ರೆಯ ಶವಾಗಾರಕ್ಕೆ ಕೊಂಡೊಯ್ದಿದ್ದಾರೆ. ಬೇಡಗಂ ಪೊಲೀಸರು ಅಸಹಜ ಸಾವಿಗೆ ಕೇಸು ದಾಖಲಿಸಿದ್ದಾರೆ. ಮೃತರು ಮಕ್ಕಳಾದ ರಾಜನ್, ಮಾಧವಿ, ತೊಂಡಿಚ್ಚಿ, ಕುಂಞಿರಾಮನ್, ಕುಂಞಿಕ್ಕ, ನಾರಾಯಣಿ, ಅಳಿಯ ಮಾಣಿಕನ್, ಸೊಸೆಯಂದಿರಾದ ರಮಣಿ, ಕಾವೇರಿ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.

2.81 ಗ್ರಾಂ ಎಂಡಿಎಂಎ ಪತ್ತೆ: ಓರ್ವ ಸೆರೆ

ಕುಂಬಳೆ: ಕುಂಬಳೆ ಪೊಲೀಸರು ನಡೆಸಿದ ಕಾರ್ಯಾಚರಣೆಯಲ್ಲಿ ಮಾದಕದ್ರವ್ಯವಾದ 2.81 ಗ್ರಾಂ ಎಂಡಿಎಂಎ ಸಹಿತ ಓರ್ವನನ್ನು ಬಂಧಿಸಿ ಪ್ರಕರಣ ದಾಖಲಿಸಿಕೊಂ ಡಿದ್ದಾರೆ. ಮೂಲತಃ ಪುತ್ತಿಗೆ ಮುಗು ರಸ್ತೆ ಬಳಿಯ ದಾರುಲ್ ಇಸ್ಲಾಂ ಮಂಜಿಲ್  ನಿವಾಸಿ ಹಾಗೂ ಈಗ ಮೊಗ್ರಾಲ್ ಪೇರಾಲ್‌ನಲ್ಲಿ ವಾಸಿಸುತ್ತಿರುವ ಅಬ್ದುಲ್ ಶಹಜಾಸ್ ಎಸ್ (30) ಬಂಧಿತ ಆರೋಪಿ. ಕುಂಬಳೆ ಪೊಲೀಸ್ ಠಾಣೆಯ ಎಸ್‌ಐ ಅನೂಪ್ ಎಂ, ಎಎಸ್‌ಐ ಅತುಲ್‌ರಾಮ್, ಅಜೆಯ್ ಎಸ್.ಪಿಯವರ  ಡಾನ್ಸಾಪ್ ತಂಡದ ಸದಸ್ಯರಾದ ನಿಜಿಲ್ ಕುಮಾರ್, ಅನೀಶ್ ಕುಮಾರ್ ಎಂಬಿವರನ್ನೊಳಗೊಂಡ ಪೊಲೀಸರ ತಂಡ …