ಗಣೇಶೋತ್ಸವ: ಗಣಪತಿ ವಿಗ್ರಹಗಳಿಗೆ ರೂಪು ನೀಡುತ್ತಿರುವ ಲಕ್ಷ್ಮೀಶ ಆಚಾರ್ಯ

ಕಾಸರಗೋಡು: ಈ ವರ್ಷದ ಗಣೇಶೋತ್ಸವಕ್ಕೆ ನಾಡಿನಾದ್ಯಂತ ಸಿದ್ಧತೆ ಅಂತಿಮ ಹಂತದಲ್ಲಿದೆ. ಇದೇ ವೇಳೆ ಗಣೇಶೋತ್ಸವದಲ್ಲಿ ಪೂಜಿಸ ಲಾಗುವ ಶ್ರೀ ಗಣಪತಿಯ ವಿಗ್ರಹಗಳ ತಯಾರಿ ಕಾಸರಗೋಡು ನೆಲ್ಲಿಕುಂಜೆಯ ಲಕ್ಷ್ಮೀಶ ಆಚಾರ್ಯರ ಮನೆಯಲ್ಲಿ ಈಗಾಗಲೇ  ಪೂರ್ಣಗೊಂಡಿದೆ. ಕಳೆದ 34 ವರ್ಷಗಳಿಂದ ಲಕ್ಷ್ಮೀಶ ಆಚಾರ್ಯರು ಗಣಪತಿಯ ವಿಗ್ರಹ ತಯಾರಿಯಲ್ಲಿ ನಿರತರಾಗಿದ್ದು,  ಇವರ ಕೈಯಿಂದಲೇ ಸಿದ್ಧಗೊಂಡ ವಿಗ್ರಹಗಳು ನಾಡಿನ ವಿವಿಧೆಡೆ ಪೂಜಿಸಲ್ಪಡುತ್ತಿದೆ. ಕಾಸರಗೋಡು ಮಾತ್ರವಲ್ಲದೆ ಕಣ್ಣೂರು ಜಿಲ್ಲೆಯ ವಿವಿಧೆಡೆಗಳಿಗೂ ಇಲ್ಲಿಂದಲೇ  ವಿಗ್ರಹಗಳನ್ನು ಕೊಂಡೊಯ್ಯಲಾಗುತ್ತಿದೆ. ಗಣಪತಿ ವಿಗ್ರಹ  ಹೊರತು ನವರಾತ್ರಿ ಮಹೋತ್ಸವ ವೇಳೆ ಪೂಜಿಸಲ್ಪಡುವ …

ನಗರದ ಸಾರಿಗೆ ತಡೆಯನ್ನು ನಿಯಂತ್ರಿಸಲು ನಗರಸಭಾ ಯೋಜನೆ: ಹೊಸ ಬಸ್ ನಿಲ್ದಾಣದಿಂದ ನಾಯಮ್ಮಾರ್‌ಮೂಲೆ ವರೆಗೆ ಸರ್ವೀಸ್ ರಸ್ತೆಯಲ್ಲಿ ಏಕಮುಖ ಸಂಚಾರ

ಕಾಸರಗೋಡು: ರಾಷ್ಟ್ರೀಯ ಹೆದ್ದಾರಿಯಲ್ಲಿ ಹೊಸ ಬಸ್ ನಿಲ್ದಾಣದಿಂದ ಆರಂಭಿಸಿ ನಾಯಮ್ಮಾರ್ ಮೂಲೆವರೆಗಿ ರುವ ಸರ್ವೀಸ್ ರಸ್ತೆಯಲ್ಲಿ ಪೂರ್ಣವಾಗಿ ಏಕಮುಖ ರಸ್ತೆಯನ್ನಾಗಿ ಮಾಡಲು ಕಾಸರಗೋಡು ನಗರಸಭಾ ಟ್ರಾಫಿಕ್ ರೆಗ್ಯುಲೇಟರಿ ಸಮಿತಿ ಸಭೆಯಲ್ಲಿ ತೀರ್ಮಾ ನಿಸಲಾಗಿದೆ. ನಗರದ ಪ್ರಧಾನ ರಸ್ತೆಗಳಲ್ಲಿ ಕಂಡುಬರುವ ಸಂಚಾರ ತಡೆಯನ್ನು ನಿಯಂತ್ರಿಸಲು ಕೈಗೊಳ್ಳುವ ಕ್ರಮಗಳ ಅಂಗವಾಗಿ ಈ ತೀರ್ಮಾನ ಉಂಟಾಗಿದೆ. ಪ್ರಸ್ತುತ ಈ ರಸ್ತೆಯ ಮೂಲಕ ಇಕ್ಕಡೆಗಳಿಗೂ ವಾಹನಗಳು ಸಂಚರಿಸುತ್ತಿವೆ. ಒಂದೇ ಸಮಯದಲ್ಲಿ ವಾಹನಗಳ ಇಕ್ಕಡೆ ಸಂಚಾರಗಳಿಂದಾಗಿ ತೀವ್ರ ಸಂಚಾರ ತಡೆಗೆ ಕಾರಣವಾಗುತ್ತದೆ ಎಂದು ಸಮಿತಿ …

ಬಿಎಂಎಸ್ ಕಾರ್ಯಕರ್ತ ಜ್ಯೋತಿಷ್ ಕೊಲೆಗೈಯ್ಯಲೆತ್ನಿಸಿದ ಪ್ರಕರಣ: ತಲೆಮರೆಸಿಕೊಂಡಿದ್ದ ಆರೋಪಿ ಕೊಯಂಬತ್ತೂರಿನಿಂದ ಸೆರೆ

ಕಾಸರಗೋಡು:  ಬಿಎಂಎಸ್ ಕಾರ್ಯಕರ್ತನಾದ ಕಾಸರಗೋಡು ನುಳ್ಳಿಪ್ಪಾಡಿ ಜೆ.ಪಿ ನಗರದ ಜ್ಯೋತಿಷ್‌ರನ್ನು 2013ರಂದು ಚೆರ್ಕಳ ಸಮೀಪದ ಸಂತೋಷ್‌ನಗರದಲ್ಲಿ ಕೊಲೆಗೈಯ್ಯಲೆತ್ನಿಸಿದ ಪ್ರಕರಣದಲ್ಲಿ ತಲೆಮರೆಸಿಕೊಂಡಿದ್ದ ಆರೋಪಿ ಯನ್ನು ಕೊಯಂಬತ್ತೂರಿನಿಂದ ವಿದ್ಯಾನಗರ ಪೊಲೀಸರು ಬಂಧಿಸಿದ್ದಾರೆ.  ತಳಂಗರೆ ಪಳ್ಳಿಕ್ಕಾಲ್ ಪಡುಪ್ಪಿಲ್ ಹೌಸ್‌ನ ಅಬ್ದುಲ್ ಶಹೀರ್ ಅನಸ್ (33) ಬಂಧಿತ ಆರೋಪಿ. ಈ ಪ್ರಕರಣಕ್ಕೆ ಸಂಬಂಧಿಸಿ ಪೊಲೀಸರು ಆತನನ್ನು ಈ ಹಿಂದೆ ಬಂಧಿಸಿದ್ದರು. ನಂತರ ಜಾಮೀನಿನಲ್ಲಿ ಬಿಡುಗಡೆಗೊಂಡ ಆತ ಈ ಪ್ರಕರಣದ ವಿಚಾರಣೆ ವೇಳೆ ನ್ಯಾಯಾಲಯದಲ್ಲಿ ಹಾಜರಾಗಿರಲಿಲ್ಲ. ಅದರಿಂದಾಗಿ ಕಾಸರಗೋಡು ಪ್ರಥಮ ದರ್ಜೆ ಮೆಜಿಸ್ಟ್ರೇಟ್ ನ್ಯಾಯಾಲಯ(ಪ್ರಥಮ) …

ಪತ್ನಿ ಆತ್ಮಹತ್ಯೆಗೈದ 28ನೇ ದಿನ ಪತಿ ನೇಣು ಬಿಗಿದು ಸಾವು

ಕಾಸರಗೋಡು: ಪತ್ನಿ ಆತ್ಮಹತ್ಯೆಗೈದ ಘಟನೆಯಿಂದ ತೀವ್ರ ಮನನೊಂದಿದ್ದ ಪತಿ ಕೂಡಾ  ನೇಣು ಬಿಗಿದು ಸಾವಿಗೀಡಾದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ವೆಳ್ಳರಿಕುಂಡ್ ಪೊಲೀಸ್ ಠಾಣೆ ವ್ಯಾಪ್ತಿಯ ಪರಪ್ಪ ಬಿರಿಕುಳಂ  ಕುರುಂಬಾಯಿ ಎಂಬಲ್ಲಿನ ಕೆ. ಪವಿತ್ರನ್ (58) ಆತ್ಮಹತ್ಯೆಗೈದ ವ್ಯಕ್ತಿ. ಇವರು ಕೃಷಿಕನಾಗಿದ್ದರು. ನಿನ್ನೆ ರಾತ್ರಿ 10.30ರ ವೇಳೆ ಬೆಡ್‌ರೂಂನ ಫ್ಯಾನ್‌ನಲ್ಲಿ  ನೇಣುಬಿಗಿದ ಸಾವಿಗೀ ಡಾದ ಸ್ಥಿತಿಯಲ್ಲಿ ಇವರು ಪತ್ತೆಯಾಗಿ ದ್ದರು.  ಘಟನೆ ವೇಳೆ ಮನೆಯಲ್ಲಿ ಬೇರೆ ಯಾರೂ ಇರಲಿಲ್ಲ. ಕೆಲಸಕ್ಕೆ ಹೋಗಿದ್ದ ಪುತ್ರ ಮರಳಿ ಬಂದಾಗ ಪವಿತ್ರನ್ ಸಾವಿಗೀಡಾದ ಸ್ಥಿತಿಯಲ್ಲಿ …

ತೀರ್ಥ ಅಮಾವಾಸ್ಯೆ: ಐಲ ಸಮುದ್ರದಲ್ಲಿ ಸಾವಿರಾರು ಮಂದಿಯಿಂದ ತೀರ್ಥಸ್ನಾನ

ಉಪ್ಪಳ: ತೀರ್ಥ ಅಮಾವಾಸ್ಯೆ ಪ್ರಯುಕ್ತ ಐಲ ಶಿವಾಜಿನಗರದ ಸಿಂಧೂ ಸಮುದ್ರ ಕಿನಾರೆಯಲ್ಲಿ ಇಂದು ತೀರ್ಥ ಸ್ನಾನ ನಡೆಯುತ್ತಿದೆ. ಕರ್ನಾಟಕ ಸಹಿತ ನಾಡಿನ ವಿವಿಧ ಭಾಗಗಳಿಂದ ಸಾವಿರಾರು ಮಂದಿ ಇಂದು ಮುಂಜಾನೆಯಿಂದಲೇ ಇಲ್ಲಿಗೆ ತಲುಪಿ ತೀರ್ಥಸ್ನಾನ ಮಾಡಿ ಪುನೀತರಾದರು. ಐಲ ಶಿವಾಜಿನಗರ ಶ್ರೀ ಗಣೇಶೋತ್ಸವ ಮತ್ತು ಶ್ರೀ ಶಾರದೋತ್ಸವ ವಿಸರ್ಜನಾ ಸ್ವಾಗತ ಸಮಿತಿ ನೇತೃತ್ವದಲ್ಲಿ ಐಲ ರೈಲ್ವೇ ಗೇಟ್ ಬಳಿಯಿಂದ ಸಮುದ್ರ ಕಿನಾರೆವರೆಗೆ ತಳಿರು ತೋರಣ ಸಹಿತ ಶೃಂಗರಿಸಲಾಗಿದೆ. ಅಲ್ಲದೆ ಸಮಿತಿ ವತಿಯಿಂದ ರಕ್ಷಣಾ ಕಾರ್ಯ ಸಹಿತ ವಿವಿಧ …

ಜೂಜಾಟ ನಿರತ ಐವರ ಸೆರೆ

ಕುಂಬಳೆ: ಕುಂಬಳೆ ಬದ್ರಿಯಾ ನಗರದ ಸಾರ್ವಜನಿಕ ಸ್ಥಳದಲ್ಲಿ ಹಣವಿರಿಸಿ  ನಡೆಯುತ್ತಿದ್ದ ಜೂಜಾಟ ಕೇಂದ್ರಕ್ಕೆ  ಪೊಲೀಸರು ನಿನ್ನೆ ದಾಳಿ ನಡೆಸಿ  ಐದು ಮಂದಿಯನ್ನು ಬಂಧಿಸಿ ಕೇಸು ದಾಖಲಿಸಿದ್ದಾರೆ. ಮಂಗಲ್ಪಾಡಿ ಮಣ್ಣಂಗುಳಿಯ ಅಹಮ್ಮದ್ ಸುಲ್ತಾನ್ (49), ಮಂಗಳೂರು ತೆಂಕ ಎಡಪದವಿನ ಇಸ್ಮಾಯಿಲ್ ಮುಹ ಮ್ಮದ್ ಶರೀಫ್ (83), ಉಳಿಯತ್ತಡ್ಕ ನೇಶನಲ್ ನಗರದ ಸಫ್ರಾಸ್ (34), ಬಂಟ್ವಾಳ ಬಿರ್ಮುದೆಯ  ಶಮೀರ್ (46), ಮಂಗಳೂರು ಅತ್ತಾವರದ ಅಬ್ದುಲ್ ಮಜೀದ್ (40)ಎಂಬಿವರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.

ಕಾರಿನಲ್ಲಿ ಸಾಗಿಸುತ್ತಿದ್ದ ಎಂಡಿಎಂಎ ಸಹಿತ ಯುವಕ, ಯುವತಿ ಬಂಧನ

ಕಾಸರಗೋಡು: ಕಾರಿನಲ್ಲಿ ಸಾಗಿಸುತ್ತಿದ್ದ ಎಂಡಿಎಂಎ ಸಹಿತ ಇಬ್ಬರನ್ನು ಬಂಧಿಸಲಾಗಿದೆ. ಚಟ್ಟಂಚಾಲ್ ಎಯ್ಯಳದ ಮುಹಮ್ಮದ್ ಫೈಸಲ್ (34) ಹಾಗೂ ಪೊಯಿನಾಚಿಯ ಕ್ವಾರ್ಟರ್ಸ್‌ವೊಂದರಲ್ಲಿ ವಾಸಿಸುವ ತಸ್ಲಿಂ ಫರ್ಸಾನ (24) ಎಂಬಿವರನ್ನು ವಿದ್ಯಾನಗರ ಎಸ್‌ಐ ವಿಜಯನ್ ಮೇಲತ್ ನೇತೃತ್ವದ ಪೊಲೀಸ್ ತಂಡ ಬಂಧಿಸಿದೆ.  ಆಪರೇಶನ್ ತೂಫಾನ್ ಅಂಗವಾಗಿ ಚೆರ್ಕಳದಲ್ಲಿ  ಪೊಲೀಸರು ನಿನ್ನೆ ವಾಹನ ತಪಾಸಣೆ ನಡೆಸುತ್ತಿದ್ದರು.  ಸಂಜೆ  ೪.೧೫ರ ವೇಳೆ ಚೆರ್ಕಳ ಮೇಲ್ಸೇತುವೆಗೆ ತಲುಪಿದಾಗ ಕಾಸರಗೋಡು ಭಾಗದಿಂದ ಚಟ್ಟಂಚಾಲ್ ಭಾಗಕ್ಕೆ ಕಾರು ಆಗಮಿಸಿದೆ. ಪೊಲೀಸರನ್ನು ಕಂಡೊಡನೆ ಕಾರು ಮರಳಿ ಅಪರಿಮಿತ ವೇಗದಲ್ಲಿ …

ಹಳದಿಕಾಮಾಲೆ ಬಾಧಿಸಿ ಚಿಕಿತ್ಸೆಯಲ್ಲಿದ್ದ ಇಬ್ಬರು ಮೃತ್ಯು

ಕಾಸರಗೋಡು: ಹಳದಿಕಾಮಾಲೆ ಬಾಧಿಸಿ ಚಿಕಿತ್ಸೆಯಲ್ಲಿದ್ದ ಇಬ್ಬರು ಮೃತಪಟ್ಟ ಘಟನೆ ನಡೆದಿದೆ. ಉಪ್ಪಳ ಬಳಿಯ ಮಂಗಲ್ಪಾಡಿ ಕೃಷ್ಣನಗರ ನಿವಾಸಿ ದಿ| ಭೋಜ ಎಂಬವರ ಪುತ್ರ ರಂಜಿತ್ (38) ನಿನ್ನೆ ಮಂಗಳೂರಿನ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ. ಐದು ದಿನಗಳ ಹಿಂದೆ ಇವರಿಗೆ ಜ್ವರ ಬಾಧಿಸಿತ್ತೆನ್ನಲಾಗಿದೆ. ಇದರಿಂದ ಕುಂಬಳೆಯ ಆಸ್ಪತ್ರೆಯಿಂದ ಪಡೆದಿದ್ದರು. ಆದರೂ ಜ್ವರ ಕಡಿಮೆಯಾಗದುದುರಿಂದ ಕಾಸರಗೋಡಿನ ಖಾಸಗಿ ಆಸ್ಪತ್ರೆಯಲ್ಲಿ ತಪಾಸಣೆ ನಡೆಸಿದಾಗ ಇವರಿಗೆ ಹಳದಿ ಕಾಮಾಲೆ ಬಾಧಿಸಿರುವುದು ತಿಳಿದುಬಂದಿತ್ತು. ಇದರಿಂದ ರಂಜಿತ್‌ರನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೆ ನಿನ್ನೆ …

ಗುಂಡಿಕ್ಕಿ ಜಿಂಕೆ ಹತ್ಯೆ: ಬೇಟೆಗಾರರ ತಂಡದ ಓರ್ವ ಸೆರೆ, ಇಬ್ಬರು ಪರಾರಿ

ಕಾಸರಗೋಡು: ಸರಕಾರಿ ರಕ್ಷಿತಾರಣ್ಯಕ್ಕೆ ಅಕ್ರಮವಾಗಿ ನುಗ್ಗಿ ಜಿಂಕೆಯನ್ನು ಕೊಂದು ಮಾಂಸ ಮಾಡಿದ ಬೇಟೆಗಾರರ ತಂಡದ ಓರ್ವನನ್ನು ಅರಣ್ಯಪಾಲಕರ ತಂಡ ಬಂಧಿಸಿದೆ. ಪಾಣತ್ತೂರು ಕರಿಕ್ಕೆ ತೋಟಂ ನಿವಾಸಿ ಎಚ್.ಎಂ. ಸಿದ್ದೀಕ್ (30) ಬಂಧಿತ ಆರೋಪಿ. ಇದೇ ವೇಳೆ ಈತನ ಜತೆಗಿದ್ದ ನೌಫಲ್ ಮತ್ತು ಸುಬೈರ್ ಎಂಬಿಬ್ಬರು ಪರಾರಿಯಾಗಿರುವುದಾಗಿ ಅರಣ್ಯಾಧಿಕಾರಿ ಗಳು ತಿಳಿಸಿದ್ದಾರೆ. ಪನತ್ತಡಿ ರಕ್ಷಿತಾರಣ್ಯಕ್ಕೆ ಒಳಪಟ್ಟ ಕುಪ್ಪ ಎಂಬಲ್ಲಿ ಬೇಟೆಗಾರರ ತಂಡ ಅಕ್ರಮವಾಗಿ ವನ್ಯ ಜೀವಿಗಳನ್ನು ಬೇಟೆಯಾಡುತ್ತಿರುವ ಬಗ್ಗೆ ಹೊಸದುರ್ಗ ರೇಂಜ್ ಅರಣ್ಯಾಧಿಕಾರಿ ಕೆ. ರಾಹುಲ್‌ರಿಗೆ ಗುಪ್ತ ಮಾಹಿತಿ …

ಮೀಯಪದವಿನಲ್ಲಿ ಎಸ್.ವಿ. ಭಟ್ ಸಂಸ್ಮರಣೆ, ಕವಿಗೋಷ್ಠಿ

ಮೀಯಪದವು : ಕನ್ನಡ ಸಾಹಿತ್ಯ ಪರಿಷತ್ತು ಕೇರಳ ಗಡಿನಾಡ ಘಟಕದ ಆಶ್ರಯದಲ್ಲಿ ನಿವೃತ್ತ ಶಿಕ್ಷಣಾಧಿಕಾರಿ, ಕನ್ನಡ ಸಾಹಿತ್ಯ ಪರಿಷತ್ತು ಕೇರಳ ಗಡಿನಾಡ ಘಟಕದ ನಿಕಟಪೂರ್ವ ಅಧ್ಯಕ್ಷ ಎಸ್.ವಿ.ಭಟ್ ಅವರ ಸಂಸ್ಮರಣಾ ಕಾರ್ಯಕ್ರಮ ಮತ್ತು ಕವಿಗೋಷ್ಠಿ ಮೀಯಪದವು ವಿದ್ಯಾವರ್ಧಕ ಉನ್ನತ ಪ್ರೌಢಶಾಲೆಯ ಸಭಾಂಗಣದಲ್ಲಿ ನಡೆಯಿತು. ವಿದ್ಯಾವರ್ಧಕ ಪ್ರೌಢಶಾಲೆಯ ನಿವೃತ್ತ ಮುಖ್ಯ ಶಿಕ್ಷಕ ರಾಜಾರಾಮ ರಾವ್. ಟಿ ಸಂಸ್ಮರಣಾ ಭಾಷಣ ಮಾಡಿದರು. ಎಸ್ .ವಿ ಭಟ್ ಕ.ಸಾ.ಪ ಅಧ್ಯಕ್ಷರಾಗಿ ಕನ್ನಡ ಭಾಷೆ ಹಾಗೂ ಸಂಸ್ಕೃತಿಯ ಬೆಳವಣಿಗೆಗೆ ಅಪಾರ ಶ್ರಮ ವಹಿಸಿದ್ದರು. …