ಕನ್ನಡ ಗ್ರಾಮದಲ್ಲಿ ಕನ್ನಡ ಪತ್ರಿಕೋದ್ಯಮ ದಿನಾಚರಣೆ ನಾಳೆ

ಕಾಸರಗೋಡು: ಕಾಸರಗೋಡು ಜಿಲ್ಲಾ ಫ್ರೀಲ್ಯಾನ್ಸ್ ಪತ್ರಕರ್ತರ ಸಂಘದ ನೇತೃತ್ವದಲ್ಲಿ ಕರಾವಳಿ ಸಾಂಸ್ಕೃತಿಕ ಪ್ರತಿಷ್ಠಾನ ಕನ್ನಡ ಗ್ರಾಮ, ಕನ್ನಡ ಸಂಸ್ಕೃತಿ ಇಲಾಖೆ ಬೆಂಗಳೂರು ಹಾಗೂ ವಿವಿಧ ಸಂಘ ಸಂಸ್ಥೆಗಳ ಸಹಯೋಗದಲ್ಲಿ ರಾಜ್ಯ ಮಟ್ಟದ ಕನ್ನಡ ಪತ್ರಿಕೋಧ್ಯಮ ದಿನಾಚರಣೆ, ಪತ್ರಿಕಾ ಮಾಧ್ಯಮ ಪ್ರಶಸ್ತಿ ಪ್ರದಾನ ಸಮಾರಂಭ ಜಿಲ್ಲೆಯಲ್ಲಿ ಕನ್ನಡ ಪತ್ರಿಕೋಧ್ಯಮ ನಡೆದು ಬಂದ ದಾರಿ- ಉಪನ್ಯಾಸ ನಾಳೆ ಸಂಜೆ ೪ ಗಂಟೆಗೆ ಕನ್ನಡ ಗ್ರಾಮದಲ್ಲಿ ನಡೆಯಲಿದೆ. ಈ ವೇಳೆ ರಾಧಾಕೃಷ್ಣ ಕೆ. ಉಳಿಯತ್ತಡ್ಕ, ಛಾಯಾಗ್ರಾಹಕ ಶ್ರೀಕಾಂತ್ ಕಾಸರ ಗೋಡರನ್ನು ಅಭಿನಂದಿಸಲಾಗುವುದು. …

ಕಾಸರಗೋಡಿನಲ್ಲಿ ನಾಳೆ ಕನ್ನಡ ಪತ್ರಿಕಾ ದಿನಾಚರಣೆ

ಕಾಸರಗೋಡು: ಕಾಸರಗೋಡು ಕೋಟೆಕಣಿ ರಾಮನಗರದ ಶ್ರೀ ರಾಮನಾಥ ಸಾಂಸ್ಕೃತಿಕ ಭವನ ಸಮಿತಿ ವತಿಯಿಂದ ನಾಳೆ ಕನ್ನಡ ಪತ್ರಿಕಾ ದಿನಾಚರಣೆ ನಡೆಯಲಿದೆ. ಕೋಟೆಕಣಿ ಶ್ರೀ ರಾಮನಾಥ ಸಾಂಸ್ಕೃತಿಕ ಭವನದಲ್ಲಿ ಸಂಜೆ 5 ಗಂಟೆಗೆ ನಡೆಯುವ ಈ ಕಾರ್ಯಕ್ರ ಮವನ್ನು ಗೀತಾ ಪ್ರಕಾಶನದ ಸಂಪಾದಕ ಕೆ.ವಿ.ರಮೇಶ್ ಉದ್ಘಾಟಿಸುವರು.  ಹಿರಿಯ ಕವಿ, ಪತ್ರಕರ್ತ ರಾಧಾಕೃಷ್ಣ ಕೆ. ಉಳಿಯ ತ್ತಡ್ಕ ಅಧ್ಯಕ್ಷತೆ ವಹಿಸುವರು. ಕೆಸಿಎನ್ ಚಾನೆಲ್‌ನ  ನಿರ್ದೇಶಕ ಪುರುಷೋತ್ತಮ ನಾಕ್ ಸಹಿತ ಹಲವರು ಉಪಸ್ಥಿತರಿರುವರು. ಈ ವೇಳೆ  ಕಾಸರಗೋಡು ಹೊಸ ಬಸ್ ನಿಲ್ದಾಣದ …

ಪೈವಳಿಕೆ ತ್ಯಾಜ್ಯ ಸಮಸ್ಯೆ ಡಿಫಿಯಿಂದ ಪಂಚಾಯತ್ ಮಾರ್ಚ್

ಪೈವಳಿಕೆ: ಅವೈಜ್ಞಾನಿಕ ತ್ಯಾಜ್ಯ ವಿಲೇವಾರಿ ರೀತಿ ಕೈಬಿಡಬೇಕೆಂದು ಆಗ್ರಹಿಸಿ ಡಿವೈಎಫ್‌ಐ ಪೈವಳಿಕೆ ಪಂಚಾಯತ್ ಕಚೇರಿಗೆ ಮಾರ್ಚ್ ನಡೆಸಿತು.  ವಿಲೇವಾರಿ ಕೇಂದ್ರದಲ್ಲಿ ರಾಶಿ ಬಿದ್ದಿರುವ ತ್ಯಾಜ್ಯ ತೆರವುಗೊಳಿಸಬೇಕು ಮೊದಲಾದ ಬೇಡಿಕೆ ಮುಂದಿಟ್ಟು ಡಿಫಿ ಮಂಜೇಶ್ವರ ಬ್ಲೋಕ್ ಸಮಿತಿ ಪಂಚಾಯತ್‌ಗೆ ಪ್ರತಿಭಟನೆ ನಡೆಸಿದೆ. ಕಾಸರಗೋಡು ಜಿಲ್ಲಾಧ್ಯಕ್ಷ ಎಂ.ವಿ. ರತೀಶ್ ಉದ್ಘಾಟಿಸಿದರು. ಉದಯ ಸಿ.ಎಚ್. ಅಧ್ಯಕ್ಷತೆ ವಹಿಸಿದರು. ಜಿಲ್ಲಾ ಜೊತೆ ಕಾರ್ಯದರ್ಶಿ ಸಾದಿಕ್ ಚೆರುಗೋಳಿ, ಅಬ್ದುಲ್ ರಜಾಕ್ ಚಿಪ್ಪಾರ್, ಸಾಬಿರ್ ಉಪ್ಪಳ, ಹಾರಿಸ್ ಪೈವಳಿಕೆ, ಮಹೇಶ್ ಕುಮಾರ್, ಅಬ್ದುಲ್ ಆಸೀಫ್, ಝಕರಿಯ …

ಕಾರಿನಲ್ಲಿ ಸಾಗಿಸುತ್ತಿದ್ದ ಎಂಡಿಎಂಎ ಸಹಿತ ಯುವಕ ಸೆರೆ

ಕಾಸರಗೋಡು: ಕಾರಿನಲ್ಲಿ ಸಾಗಿಸುತ್ತಿದ್ದ ಎಂಡಿಎಂಎ ಸಹಿತ ಯುವಕನನ್ನು  ಬಂಧಿಸಲಾಗಿದೆ.  ಕಣ್ಣೂರು ಚೇಲೋರ ಕಾಪಿಟ್‌ನ ಕೆ.ಪಿ. ಶಾನಿಶ್ (35) ಎಂಬಾತನನ್ನು ನೀಲೇಶ್ವರ ಎಸ್‌ಐ ಕೆ. ಅಜಿತ್ ನೇತೃತ್ವದ ಪೊಲೀಸರು ಬಂಧಿಸಿದ್ದಾರೆ. ಕಾರಿನಿಂದ 1.8 ಗ್ರಾಂ ಎಂಡಿಎಂಎ ವಶಪಡಿಸಿಕೊಂಡಿರುವುದಾಗಿ ಪೊಲೀಸರು ತಿಳಿಸಿದ್ದಾರೆ. ಇನ್‌ಸ್ಪೆಕ್ಟರ್ ಕೆ. ಮುರಳೀಧರನ್‌ರಿಗೆ ಲಭಿಸಿದ ಗುಪ್ತ ಮಾಹಿತಿಯ ಆಧಾರದಲ್ಲಿ ನಡೆಸಿದ ತಪಾಸಣೆ ವೇಳೆ ಯುವಕ ಸೆರೆಗೀಡಾಗಿದ್ದಾನ. ನಿನ್ನೆ ರಾತ್ರಿ 9/40ರ ವೇಳೆ ನೀಲೇಶ್ವರ ಮಾರ್ಕೆಟ್ ಜಂಕ್ಷನ್‌ನಲ್ಲಿ ಪೊಲೀಸರು ಕಾರ್ಯಾಚರಣೆ ನಿರತರಾಗಿದ್ದ ವೇಳೆ ಅಲ್ಲಿಗೆ ಕಾರೊಂದು ತಲುಪಿತ್ತು. ಪೊಲೀಸರನ್ನು …

ಜ್ವರ, ನ್ಯುಮೋನಿಯಾ ಬಾಧಿಸಿ ಯುವತಿ ಮೃತ್ಯು

ಬದಿಯಡ್ಕ: ಜ್ವರ ಹಾಗೂ ನ್ಯುಮೋನಿಯ ಬಾಧಿಸಿ  ಚಿಕಿತ್ಸೆಯಲ್ಲಿದ್ದ ಯುವತಿ ಮೃತಪಟ್ಟರು. ಕುಂಬ್ಡಾಜೆ ಮಲ್ಲಮೂಲೆ ನಿವಾಸಿಯೂ,  ಬದಿಯಡ್ಕ ಚೆನ್ನಾರಕಟ್ಟೆಯ ಕ್ವಾರ್ಟರ್ಸ್‌ನಲ್ಲಿ ವಾಸಿಸುವ  ರೋಹಿಣಿ (35) ಮೃತಪಟ್ಟ ದುರ್ದೈವಿ. ತೀವ್ರ ಜ್ವರ ಹಾಗೂ ಕೆಮ್ಮು ಅನುಭವಗೊಂಡ ಇವರು ಒಂದು ವಾರ ಹಿಂದೆ ಕಾಸರಗೋಡು ಜನರಲ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದರು. ನಿನ್ನೆ ಬೆಳಿಗ್ಗೆ 10 ಗಂಟೆ ವೇಳೆ ಜ್ವರ ಮತ್ತೆ ಉಲ್ಭಣಗೊಂಡು  ಉಸಿರಾಟ ಸಮಸ್ಯೆ ಉಂಟಾಗಿತ್ತು. ಕೂಡಲೇ ಬದಿಯ ಡ್ಕದ ಆಸ್ಪತ್ರೆಗೂ, ನಂತರ ಜನರಲ್ ಆಸ್ಪತ್ರೆಗೆ ತಲುಪಿಸಿದರೂ ಜೀವ ರಕ್ಷಿಸಲಾಗಲಿಲ್ಲ. ಘಟನೆ …

ಕೋಳಿ ಅಂಕ: 5 ಮಂದಿ ಸೆರೆ

ಉಪ್ಪಳ:  ಮೂಡಂಬೈಲು ಬೆಜ್ಜ ದೈವಸ್ಥಾನ ಬಳಿ ನಿನ್ನೆ ಸಂಜೆ ಕೋಳಿ ಅಂಕದಲ್ಲಿ ನಿರತರಾಗಿದ್ದ  5 ಮಂದಿ ಯನ್ನು ಮಂಜೇಶ್ವರ ಪೊಲೀಸರು ಬಂಧಿಸಿದ್ದಾರೆ. ಬಂಧಿತರಿಂದ 1 ಕೋಳಿ ಹಾಗೂ 3000 ರೂ. ವಶಪಡಿಸಲಾಗಿದೆ.  ಕುಂಬಳೆ ಶ್ರೀ ಗೋಪಾಲಕೃಷ್ಣ ಕ್ಷೇತ್ರ ರಸ್ತೆ ಬಳಿಯ ಪ್ರವೀಣ್ ಕುಮಾರ್ (40), ಉದ್ಯಾವರ ಮಾಡ ಕ್ಷೇತ್ರ ಬಳಿಯ ರವಿ (51),ಉಳ್ಳಾಲ ಚೆಂಬುಗುಡ್ಡೆ ಫಾತಿಮ ಮಂಜಿಲ್‌ನ ಅಬ್ದುಲ್ ರೌಫ್ (50), ತಲಪಾಡಿ ದೇವಿಪುರ ಕ್ಷೇತ್ರ ರಸ್ತೆಯ ಸತೀಶ್ ಶೆಟ್ಟಿ (48), ಕೋಟೆಕಾರ್ ಮಾಡೂರು ನಿವಾಸಿ ಅಶೋಕ …

ಕುಸಿದ ಮಳೆ: ಬರಿದಾದ ಅಣೆಕಟ್ಟುಗಳು: ರಾಜ್ಯದಲ್ಲಿ ಮುಕ್ಕಾಲುಗಂಟೆ ವಿದ್ಯುತ್ ನಿಯಂತ್ರಣ

ಕಾಸರಗೋಡು: ಮುಂಗಾರು ಮಳೆ ಕೈಕೊಟ್ಟಿರುವುದರಿಂದಾಗಿ ರಾಜ್ಯದ  ಜಲವಿದ್ಯುತ್ ಯೋಜನೆಗಳ ಅಣೆಕಟ್ಟು ಗಳಲ್ಲಿ ನೀರಿನ ಮಟ್ಟ ಗಣನೀ ಕುಸಿದಿರುವುದರಿಂದ ವಿದ್ಯುತ್ ಅದು ಉತ್ಪಾದನೆಯನ್ನೂ ಕುಸಿಯುವಂತೆ ಮಾಡಿದೆ. ಇದರಿಂದಾಗಿ ರಾಜ್ಯದಲ್ಲಿ ದೈನಂದಿನ 45 ನಿಮಿಷಗಳ ತನಕ ವಿದ್ಯುತ್ ನಿಯಂತ್ರಣ ಹೇರಲು ರಾಜ್ಯ ವಿದ್ಯುನ್ಮಂಡಳಿ ತೀರ್ಮಾನಿಸಿದೆ. ಈಗ ಸಾಧಾರಣವಾಗಿ 15ರಿಂದ 30 ನಿಮಿಷಗಳ ತನಕ ವಿದ್ಯುತ್ ನಿಯಂತ್ರಣ ಏರ್ಪಡಿಸಲಾಗುತ್ತಿದೆ. ಇದನ್ನು 45 ನಿಮಿಷಗಳಿಗೆ ಏರಿಸಲು ಮಂಡಳಿ ತೀರ್ಮಾನಿಸಿದೆ. ಅಂದರೆ ಒಂದೇ ಬಾರಿ  ನಿಯಂತ್ರಣ ಹೇರಲಾಗು ವುದಿಲ್ಲ. ಅದರ ಬದಲು ಹಗಲು ಮತ್ತು …

ಮೊಬೈಲ್ ಫೋನ್ ಕವರ್‌ನೊಳಗೆ ಎಂಡಿಎಂಎ ಬಚ್ಚಿಟ್ಟು ಸಾಗಾಟ: ಯುವಕ ಸೆರೆ

ಕುಂಬಳೆ: ಮುಂಜಾನೆ ಹೊತ್ತಿನಲ್ಲಿ ರಸ್ತೆಯಲ್ಲಿ ಸಂಶಯಾಸ್ಪದ ರೀತಿಯಲ್ಲಿ ಕಂಡುಬಂದ ಯುವಕನನ್ನು ಪೊಲೀಸರು ತಪಾಸಣೆ ನಡೆಸಿದಾಗ ಮೊಬೈಲ್ ಕವರ್‌ನೊಳಗೆ ಬಚ್ಚಿಟ್ಟಿದ್ದ ಮಾದಕವಸ್ತು ಪತ್ತೆಯಾಗಿದೆ. ಈ ಸಂಬಂಧ ನಾರಾಯಣಮಂಗಲ ಶ್ರೀ ಚೀರುಂಬಾ ಭಗವತಿ ಕ್ಷೇತ್ರ ಬಳಿಯ ಕೆ. ಬಿನೀಶ್ (29) ಎಂಬಾತನನ್ನು ಕುಂಬಳೆ ಪೊಲೀಸರು ಬಂಧಿಸಿದ್ದಾರೆ. ಈತನ ಕೈಯಿಂದ 0.92 ಗ್ರಾಂ ಎಂ.ಡಿ.ಎಂ.ಎ ವಶಪಡಿಸಲಾಗಿದೆ. ನಿನ್ನೆ ಮುಂಜಾನೆ ೧ ಗಂಟೆಗೆ ನಾರಾಯಣಮಂಗಲ ರಸ್ತೆ ಬದಿ ಬೈಕ್ ನಿಲ್ಲಿಸಿ ಈತ ಕುಳಿತಿದ್ದನು. ಗಸ್ತು ನಡೆಸುತ್ತ ಅಲ್ಲಿಗೆ ಬಂದ ಪೊಲೀಸರನ್ನು ಕಂಡು ಬಿನೀಶ್ …

ಹೆಂಚಿನ ಮನೆ ಕುಸಿತ: ಕುಟುಂಬ ಅಪಾಯದಿಂದ ಪಾರು

ಬದಿಯಡ್ಕ: ಹೆಂಚಿನ ಮನೆಯೊಂದು ಕುಸಿದು ಬಿದ್ದಿದ್ದು, ಅದೃಷ್ಟವಶಾತ್ ಕುಟುಂಬ ಅಪಾಯದಿಂದ ಪಾರಾಗಿದೆ. ಪಳ್ಳತ್ತಡ್ಕ ನಿವಾಸಿ ಆಟೋರಿಕ್ಷಾ ಚಾಲಕನಾಗಿರುವ ಐತ್ತಪ್ಪ ನಾಯ್ಕ ಎಂಬವರ ಮನೆ ನಿನ್ನೆ ರಾತ್ರಿ 8 ಗಂಟೆಗೆ ಕುಸಿದು ಬಿದ್ದಿದೆ. ಮಳೆ ಸುರಿಯುತ್ತಿದ್ದಂತೆ ಮನೆ ಕುಸಿದಿದ್ದು, ಶಬ್ದ ಕೇಳಿ ಐತ್ತಪ್ಪ ನಾಯ್ಕ ಹಾಗೂ ಪತ್ನಿ ಹೊರಗೆ ಓಡಿದ್ದಾರೆ. ಇದರಿಂದ ಅವರು ಅಪಾಯದಿಂದ ಪಾರಾಗಿದ್ದಾರೆ. ಹಲವು ವರ್ಷಗಳ ಹಿಂದೆ ನಿರ್ಮಿಸಿದ ಮನೆ ಇದಾಗಿದೆ. ಇದರಿಂದ ಇವರಿಗೆ ಹೊಸ ಮನೆ ಪಂಚಾಯತ್‌ನಿಂದ ಮಂಜೂರಾಗಿದ್ದು, ಅದರ ಹಣ ಪೂರ್ತಿ ಲಭಿಸದುದರಿಂದ …

ಇಂಜಿನ್ ಕೆಟ್ಟು ಸಮುದ್ರ ಮಧ್ಯದಲ್ಲಿ ಸಿಲುಕಿಕೊಂಡ ದೋಣಿ: ಕೋಸ್ಟಲ್ ಪೊಲೀಸರಿಂದ ಕಾರ್ಮಿಕರ ರಕ್ಷಣೆ

ಉಪ್ಪಳ: ಮೀನುಗಾರಿಕೆಗೆ ತೆರಳಿ ಹಿಂತಿರುಗುತ್ತಿರುವ ಮಧ್ಯೆ ಇಂಜಿನ್ ಹಾನಿಗೊಂಡು ದೋಣಿ ಸಮುದ್ರ ಮಧ್ಯೆ ಸಿಲುಕಿಕೊಂಡ ಘಟನೆ ನಡೆದಿದ್ದು, ನಾಲ್ಕು ಮೀನು ಕಾರ್ಮಿಕರನ್ನು ಫಿಶರೀಸ್ ಇಲಾಖೆ, ಕೋಸ್ಟಲ್ ಪೊಲೀಸರು ಸೇರಿ ಪಾರು ಮಾಡಿದ್ದಾರೆ. ನಿನ್ನೆ ಮುಂಜಾನೆ ಉಪ್ಪಳ ಮುಸೋಡಿಯಿಂದ ಮೀನುಗಾರಿಕೆಗೆಂದು ತೆರಳಿದ ಕಾರ್ಮಿಕರು ಸಮುದ್ರ ಮಧ್ಯದಲ್ಲಿ ಸಿಲುಕಿಕೊಂಡಿದ್ದರು. ಉಪ್ಪಳ ಶಾರದಾನಗರ ನಿವಾಸಿ ವಿಕ್ರಮ್ ಎಂ. ಉಚ್ಚಿಲ್ ಎಂಬವರ ಮಾಲಕತ್ವದ ಗುತ್ತಿಯಮ್ಮ ಭಗವತಿ ಎಂಬ ಹೆಸರಿನ ಇಂಜಿನ್ ಅಳವಡಿಸಿದ ದೋಣಿ ಮಂಜೇಶ್ವರದಿಂದ ಸುಮಾರು ೧೦ ನೋಟಿಕಲ್ ಮೈಲು ದೂರದಲ್ಲಿ ಹಾನಿಗೀಡಾಗಿತ್ತು. …