ನಿವೃತ್ತ ಮುಖ್ಯೋಪಾಧ್ಯಾಯ ನಿಧನ

ಪುಂಡೂರು: ಯಕ್ಷಗಾನ ಕಲಾವಿದ ಹಾಗೂ ಪುಂಡೂರು ಎ.ಎಲ್.ಪಿ ಶಾಲೆಯ ನಿವೃತ್ತ ಮುಖ್ಯೋಪಾಧ್ಯಾಯ ಪರಯಂಕೋಡು ಸುಬ್ರಹ್ಮಣ್ಯ ಭಟ್ (87) ನಿಧನರಾದರು. ಕೋಟೂ ರಿನ ಮಗಳ ಮನೆಯಲ್ಲಿ ಕೊನೆಯುಸಿರೆಳೆ ದರು. ಇವರ ಪತ್ನಿ ಲಲಿತಾ ಎಸ್ ಭಟ್ ಈ ಹಿಂದೆ ನಿಧನ ಹೊಂದಿದ್ದಾರೆ. ಮೃತರು ಮಕ್ಕಳಾದ ರಾಜೇಶ್ವರಿ ಭಟ್, ಶೈಲಜಾ ಭಟ್, ಅಳಿಯ ಪ್ರಕಾಶ ಭಟ್ ಆರ್ಲಪದವು, ಸೊಸೆ ಕೀರ್ತಿ ಭಟ್, ಬೆಂಗಳೂರು ಹಾಗೂ ಅಪಾರ ಬಂಧು ಮಿತ್ರರನ್ನು ಅಗಲಿದ್ದಾರೆ. ಇವರ ಪುತ್ರ ಗಿರೀಶ್ ಭಟ್, ಅಳಿಯಯಕ್ಷಗಾನ ಕಲಾವಿದ ಹಾಗೂ …

ಕುಂಬ್ಡಾಜೆ ಪಂ.ನಲ್ಲಿ ರಸ್ತೆ ಅಭಿವೃದ್ಧಿಗೆ 6 ಕೋಟಿ ರೂ.

ಕಾಸರಗೋಡು: ಕುಂಬ್ಡಾಜೆ ಪಂಚಾಯತ್‌ನ ಎ.ಪಿ ಸರ್ಕಲ್-ಗೋಸಾಡ-ಬೆಳಿಂಜ ರಸ್ತೆ ಅಭಿವೃದ್ಧಿಗೆ ಆರು ಕೋಟಿ ರೂಪಾಯಿಗಳ ಆಡಳಿತಾನುಮತಿ ಲಭಿಸಿದೆಯೆಂದು ಶಾಸಕ ಎನ್.ಎ.ನೆಲ್ಲಿಕುನ್ನು ತಿಳಿಸಿದ್ದಾರೆ. 2025-26ರ ಬಜೆಟ್‌ನಲ್ಲಿ ಸೇರ್ಪಡೆಗೊಳಿಸುವಂತೆ  ಆಗ್ರಹಿಸಿ ಶಾಸಕ ಸಲ್ಲಿಸಿದ ಮನವಿಯ ಆಧಾರದಲ್ಲಿ ಈ ಮೊತ್ತ ಮಂಜೂರು ಮಾಡಲಾಗಿದೆ. 4.4 ಕಿಲೋ ಮೀಟರ್ ಉದ್ದದ ರಸ್ತೆ ಅಭಿವೃದ್ಧಿಗೆ ಶೀಘ್ರ ತಾಂತ್ರಿಕ ಅನುಮತಿ ಲಭ್ಯಗೊಳಿಸಿ ಟೆಂಡರ್ ಕ್ರಮಗಳನ್ನು ಕೈಗೊಳ್ಳಲಾಗುವುದು. ಇದರೊಂದಿಗೆ ಹಲವು ವರ್ಷಗಳಿಂದ ಶೋಚನೀ ಯಾವಸ್ಥೆಯಲ್ಲಿರುವ ಈ ರಸ್ತೆಯಲ್ಲಿ ಸಂಚಾರ ಸುಗಮಗೊಳ್ಳಲಿದೆ.

ಪಂಜುರ್ಲಿ ದೈವ ಪಾತ್ರಿ ನಿಧನ

ಉಪ್ಪಳ: ಬೇಕೂರು ನಿವಾಸಿ, ಪಂಜುರ್ಲಿ ದೈವದ ಪಾತ್ರಿ ಸುಂದರ (85) ಸ್ವ-ಗೃಹದಲ್ಲಿ ನಿಧನ ಹೊಂದಿದರು. ಅಡ್ಕ ಶ್ರೀ ಉಳ್ಳಾಲ್ತಿ ಬಲ್ಲಾರ ಅಣ್ಣಪ್ಪ ಪಂಜುರ್ಲಿ ಧೂಮಾವತಿ ದೈವಸ್ಥಾನ ಪರಂಕಿಲ ಇಲ್ಲಿ ಪಂಜುರ್ಲಿ ದೈವದ ಪಾತ್ರಿಯಾಗಿ ಸೇವೆ ಸಲ್ಲಿಸುತ್ತಿದ್ದರು. ಮೃತರು ಮಕ್ಕಳಾದ  ಸದಾನಂದ, ಸುನೀತಾ, ರೇಖಾ, ಸೊಸೆ ಮಮತಾ, ಅಳಿಯ ಶ್ರೀನಿವಾಸ, ಸಹೋದರ ರತ್ನಾಕರ, ಕೃಷ್ಣ, ಸಹೋದರಿ ಕಮಲ ಹಾಗೂ ಅಪಾರ ಬಂಧು-ಬಳಗವನ್ನು ಅಗಲಿದ್ದಾರೆ. ಪತ್ನಿ ಕಮಲ, ಪುತ್ರ ಶಿವಪ್ಪ, ಸೊಸೆ ಶೈಲಜ, ಅಳಿಯ ದಿನೇಶ್ ಈ ಹಿಂದೆ ನಿಧನಹೊಂದಿದ್ದಾರೆ.

ಮಂಜೇಶ್ವರ ಅಂಚೆ ಕಚೇರಿಗೆ ಬೀಡಿ ಕಾರ್ಮಿಕರ ಸಂಘಟನೆಯಿಂದ ಮಾರ್ಚ್

ಮಂಜೇಶ್ವರ: ಮಂಜೇಶ್ವರ ಏರಿಯಾ ಬೀಡಿ ಕಾರ್ಮಿಕರ ಯೂನಿಯನ್ (ಸಿ ಐ ಟಿ ಯು) ನೇತೃತ್ವದಲ್ಲಿ ಬೀಡಿ ಕಾರ್ಮಿಕರನ್ನು ಸಂರಕ್ಷಿಸಬೇಕು, ಬೀಡಿ ಕಾರ್ಮಿ ಕರನ್ನು ಇಎಸ್‌ಐ ಯೋಜನೆಯಲ್ಲಿ ಒಳಗೊಳ್ಳಿಸಬೇಕು, ಬೀಡಿ ಸಿಗಾರ್ ಕಾನೂನನ್ನು ಪುನಸ್ಥಾಪಿಸಬೇಕು, ಬೀಡಿ ಕಾರ್ಮಿಕರಿಗೆ ಕನಿಷ್ಠ ವೇತನೆ ನಿಗದಿಪಡಿಸಬೇಕು ಎಂಬೀ ಬೇಡಿಕೆಗಳನ್ನು ಮುಂದಿಟ್ಟುಕೊಂಡು ಕೇಂದ್ರ ಸರಕಾರ ಕಚೇರಿಯಾದ ಮಂಜೇಶ್ವರ ಪೋಸ್ಟ್ ಆಫೀಸ್ ಗೆ ಪ್ರತಿಭಟನೆ ಮಾರ್ಚ್ ನಡೆಸಲಾಯಿತು.ಪ್ರತಿಭಟನೆ ಸಭೆಯನ್ನು ರೈತ ಸಂಘ ರಾಜ್ಯ ಸಮಿತಿ ಸದಸ್ಯ, ಸಿಪಿಎಂ ಜಿಲ್ಲಾ ಕಾರ್ಯಕಾರಿ ಸಮಿತಿ ಸದಸ್ಯ ಕೆ. ಆರ್. …

ವಾಹನಗಳಿಗೆ ಅತೀವ ಸುರಕ್ಷಾ ನಂಬ್ರಪ್ಲೇಟ್ ಕಡ್ಡಾಯ ಕಾರುಗಳಿಗೆ 1000 ರೂ, ದ್ವಿಚಕ್ರ ವಾಹನಗಳಿಗೆ 500 ರೂ. ಶುಲ್ಕ ದರ

ಕಾಸರಗೋಡು: ರಾಜ್ಯದಲ್ಲಿ ಎಲ್ಲಾ  ವಾಹನಗಳಿಗೂ ಅತೀವ ಸುರಕ್ಷತಾ ನಂಬ್ರ ಪ್ಲೇಟ್ ಅಳವಡಿಕೆಯನ್ನು ರಾಜ್ಯ ಸರಕಾರ ಕಡ್ಡಾಯಗೊಳಿಸಿದೆ. ಮಾತ್ರವಲ್ಲ ಈ ಬಗ್ಗೆ ಅಧಿಕೃತ ಅಧಿಸೂಚನೆಯನ್ನೂ ಜ್ಯಾರಿಗೊಳಿಸಿದೆ. ಹೀಗೆ ಅಳವಡಿಸಲಾಗುವ ಅತೀವ ಸುರಕ್ಷಣಾ ನಂಬ್ರ ಪ್ಲೇಟ್‌ಗಳಿಗೆ ಶುಲ್ಕವನ್ನೂ ನಿಗದಿಪಡಿಸಲಾಗಿದೆ. ಇದರಂತೆ ನಿಗದಿಪಡಿಸಲಾದ ಶುಲ್ಕ ಇಂತಿದೆ. ದ್ವಿಚಕ್ರವಾಹನಗಳು- 500ರೂ, ತ್ರಿಚಕ್ರ ವಾಹನಗಳು-೬೦೦ರೂ, ಫೋರ್ ವೀಲರ್-1000ರೂ., ಮೀಡಿಯಂ/ ಹೆವಿ ವಾಹನಗಳು- 1000 ರೂ, ಟ್ರಾಕ್ಟರ್ ಮತ್ತು ಕೃಷಿ ಅಗತ್ಯದ ವಾಹನಗಳ ಶುಲ್ಕವನ್ನು 1000 ರೂ.ಆಗಿ ನಿಗದಿ ಪಡಿಸಲಾಗಿದೆ. ಹೀಗೆ ಅಂಗೀಕರಿಸಲಾದ ದರದಲ್ಲಿ ಇಂತಹ …

ಕೇರಳ ಹೈಕೋರ್ಟ್‌ಗಾಗಿ 1000 ಕೋಟಿ ರೂ. ವೆಚ್ಚದಲ್ಲಿ  ಜ್ಯುಡೀಶಿಯಲ್ ಸಿಟಿ ನಿರ್ಮಾಣ

ತಿರುವನಂತಪುರ: ಕೇರಳ ಹೈಕೋರ್ಟ್‌ಗಾಗಿ ಎರ್ನಾಕುಳಂ ಜಿಲ್ಲೆಯ ಕಳಮಶ್ಶೇರಿಯಲ್ಲಿ 1000 ಕೋಟಿ ರೂ. ವೆಚ್ಚದಲ್ಲಿ ಜ್ಯುಡೀಶಿಯಲ್ ಸಿಟಿ (ನ್ಯಾಯಾಂಗ ನಗರ) ಸಮುಚ್ಚಯ ನಿರ್ಮಿಸಲು ಯೋಜನೆ ಹಾಕಿಕೊಳ್ಳಲಾಗಿದೆ. ಅದಕ್ಕೆ ರಾಜ್ಯ ಸಚಿವ ಸಂಪುಟ ಸಭೆ ಅನುಮೋದನೆ ನೀಡಿದೆ. ಹೈಕೋರ್ಟ್ ಈಗ ನೆಲೆಗೊಂಡಿರುವ ಜಾಗದಲ್ಲಿ ಅದನ್ನು ನವೀಕರಿಸಲು ಈಗ ಅಗತ್ಯದಷ್ಟು ಸ್ಥಳ ಸೌಕರ್ಯವಿಲ್ಲ. ಅದರಿಂದಾಗಿ ಕಲ್ಯಾಶ್ಶೇರಿಯಲ್ಲಿ ಹೈಕೋರ್ಟ್‌ಗಾಗಿ ಜ್ಯುಡೀಶಿಯಲ್ ಸಿಟಿ ಎಂಬ ಯೋಜನೆಯಡಿ ಈ ಹೊಸ ನ್ಯಾಯಾಲಯ ಸಮುಚ್ಚಯವನ್ನು ನಿರ್ಮಿಸಲು ತೀರ್ಮಾನಿಸಲಾಗಿದೆ ಎಂದು ಕಾನೂನು ಸಚಿವ ಪಿ. ರಾಜೀವ್ ತಿಳಿಸಿದ್ದಾರೆ. ಪ್ರಸ್ತುತ …

ಕೆ.ಪಿ. ಕುಂಞ ಕಣ್ಣನ್ ಸಂಸ್ಮರಣೆ

ಪೈವಳಿಕೆ: ಕಾಂಗ್ರೆಸ್ ಪಕ್ಷದ ಹಿರಿಯ ರಾಜಕಾರಣಿ, ಜಿಲ್ಲಾ ಸಮಿತಿ ಮಾಜಿ ಅಧ್ಯಕ್ಷರಾಗಿದ್ದ ಕೆ. ಪಿ. ಕುಂಞಕಣ್ಣನ್ ರ ಒಂದನೇ ಸಂಸ್ಮರಣಾ ವಾರ್ಷಿಕ ಪೈವಳಿಕೆ ಮಂಡಲ ಕಾಂಗ್ರೆಸ್ ಸಮಿತಿಯ ನೇತೃತ್ವದಲ್ಲಿ ಆಚರಿಸಲಾಯಿತು. ಮಂಡಲ ಅಧ್ಯಕ್ಷ ವಸಂತ ಕುಮಾರ್ ಅಧ್ಯಕ್ಷತೆ ವಹಿಸಿದ್ದರು. ಬೋಕ್ ಕಾಂಗ್ರೆಸ್ ಉಪಾಧ್ಯಕ್ಷ ನಾರಾಯಣ ಏದಾರ್ ಉದ್ಘಾಟಿಸಿದರು. ಶಾಜಿ ಎನ್.ಸಿ. ಸಂಸ್ಮರಣಾ ಭಾಷಣ ಮಾಡಿದರು. ಶಿವರಾಮ ಶೆಟ್ಟಿ ಸ್ವಾಗತಿಸಿದರು. ಎಡ್ವರ್ಡ್ ವಂದಿಸಿದರು. ಮೃತರ ಭಾವಚಿತ್ರಕ್ಕೆ ಪುಷ್ಪಾರ್ಚನೆ ನಡೆಸಲಾಯಿತು.

ಚೆಂಗಳದಲ್ಲಿ ಕಾರಿಗೆ ಟಿಪ್ಪರ್ ಲಾರಿ ಢಿಕ್ಕಿ ಹೊಡೆದು ಸೀನಿಯರ್ ಸಿವಿಲ್ ಪೊಲೀಸ್ ಆಫೀಸರ್ ಸಾವು: ಇನ್ನೋರ್ವ ಪೊಲೀಸ್‌ಗೆ ಗಾಯ

ಕಾಸರಗೋಡು: ಟಿಪ್ಪರ್ ಲಾರಿ  ಕಾರಿಗೆ ಢಿಕ್ಕಿ ಹೊಡೆದು ಕಾರಿನಲ್ಲಿ ಪ್ರಯಾಣಿಸುತ್ತಿದ್ದ ಸೀನಿಯರ್ ಸಿವಿಲ್ ಪೊಲೀಸ್ ಆಫೀಸರ್ ದಾರುಣವಾಗಿ ಸಾವನ್ನಪ್ಪಿ, ಕಾರು ಚಲಾಯಿಸುತ್ತಿದ್ದ  ಇನ್ನೋರ್ವ ಪೊಲೀಸ್ ಗಾಯಗೊಂಡ ಘಟನೆ ಇಂದು ಮುಂಜಾನೆ ಸಂಭವಿಸಿದೆ. ಜಿಲ್ಲಾ ಪೊಲೀಸ್ ಕಚೇರಿಯಲ್ಲಿ ಡಿವೈಎಸ್ಪಿ ನೇತೃತ್ವದ ಮಾದಕದ್ರವ್ಯ ಪತ್ತೆ ಕಾರ್ಯಾಚರಣೆಯ ಘಟಕವಾದ ಡೆನ್ಸೆಫ್  ಸ್ಕ್ವಾಡ್‌ನ  ಸೀನಿಯರ್ ಸಿವಿಲ್ ಪೊಲೀಸ್ ಆಫೀಸರ್ ಚೆರ್ವತ್ತೂರು ಸಮೀಪದ ಕಾರ್ಯಾಂಗೋಡು ಮೈಯಿಚ್ಚ ನಿವಾಸಿ ಸಜೇಶ್ ಕೆ.ಕೆ (40) ಸಾವನ್ನಪ್ಪಿದ ದುರ್ದೈವಿ. ಕಾರು ಚಲಾಯಿಸುತ್ತಿದ್ದ ಅದೇ ಸ್ಕ್ವಾಡ್‌ನ ಸೀನಿಯರ್ ಸಿವಿಲ್ ಪೊಲೀಸ್ …

ಮಂಜೇಶ್ವರ ಸಹಿತ ಜಿಲ್ಲೆಯ ಮೂರು ಪೊಲೀಸ್ ಠಾಣೆಗಳಲ್ಲಿ ನಾಲ್ಕು ಪೋಕ್ಸೋ ಪ್ರಕರಣ ದಾಖಲು

ಕಾಸರಗೋಡು: ಜಿಲ್ಲೆಯ ಚಿಟ್ಟಾರಿಕ್ಕಲ್, ಮಂಜೇಶ್ವರ, ಬೇಡಗಂ ಪೊಲೀಸ್ ಠಾಣೆಗಳಲ್ಲಿ ನಾಲ್ಕು ಪೋಕ್ಸೋ ಕೇಸುಗಳನ್ನು ದಾಖಲಿಸಲಾಗಿದೆ. ಈ ಪೈಕಿ ಇಬ್ಬರನ್ನು ಬಂಧಿಸಲಾಗಿದೆ. ಚಿಟ್ಟಾರಿಕ್ಕಲ್ ಪೊಲೀಸ್ ಠಾಣೆ ವ್ಯಾಪ್ತಿಯ  ಪ್ರಾಯಪೂರ್ತಿಯಾಗದ ಇಬ್ಬರು ಬಾಲಕರಿಗೆ ಸಲಿಂಗರತಿ ಕಿರುಕುಳ ನೀಡಿದ ಆರೋಪದಂತೆ ಎರಡು ಕೇಸುಗಳನ್ನು ದಾಖಲಿಸಲಾಗಿದೆ. ಈ ಎರಡು ಪ್ರಕರಣಗಳಲ್ಲೂ ಆರೋಪಿಯಾದ ಕಣ್ಣನ್ (42) ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ. ಪ್ರಸ್ತುತ ೧೨ ವರ್ಷ ಪ್ರಾಯದ ಬಾಲಕನಿಗೆ 2021ರಲ್ಲಿ ಹಾಗೂ ಸ್ನೇಹಿತನಾದ ಇನ್ನೋರ್ವ ಬಾಲಕನಿಗೆ 2024ರ ಕ್ರಿಸ್ಮಸ್ ದಿನದಂದು ಕಿರುಕುಳ ನೀಡಿರುವುದಾಗಿ ಪ್ರಕರಣದಲ್ಲಿ ತಿಳಿಸಲಾಗಿದೆ. …

ಮುಖ್ಯಮಂತ್ರಿ ಪಾಲ್ಗೊಳ್ಳುವ ಕಾರ್ಯಕ್ರಮದಲ್ಲಿ  ಭಾರತಾಂಬೆ ಚಿತ್ರ ಪ್ರದರ್ಶಿಸುವುದಿಲ್ಲ-ರಾಜ್‌ಭವನ್

ತಿರುವನಂತಪುರ:  ರಾಜ್‌ಭವನ ದಲ್ಲಿ ಈ ಹಿಂದೆ ಹಲವು  ಸರಕಾರಿ ಮಟ್ಟದ ಕಾರ್ಯಕ್ರಮದಲ್ಲಿ ಕೈಯಲ್ಲಿ ಕೇಸರಿ ಬಣ್ಣದ ಧ್ವಜ ಹಿಡಿದ ಭಾರತಾಂಬೆಯ ಚಿತ್ರ ಇರಿಸಿ ಅದಕ್ಕೆ ಪುಷ್ಪಾರ್ಚನೆ ನಡೆಸಿರುವುದು ಭಾರೀ ವಿವಾದಗಳಿಗೆ ದಾರಿಮಾಡಿಕೊಟ್ಟಿರುವ ಹಿನ್ನೆಲೆಯಲ್ಲಿ ಸೆಪ್ಟಂಬರ್ ೨೮ರಂದು ರಾಜ್ ಭವನದಲ್ಲಿ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಭಾಗವಹಿ ಸುವ ಕಾರ್ಯಕ್ರಮದಲ್ಲಿ ಭಾರತಾಂ ಬೆಯ ಚಿತ್ರ ಪ್ರದರ್ಶಿಸದಿ ರಲು ರಾಜ್ ಭವನ್ ತೀರ್ಮಾನಿಸಿದೆ.   ರಾಜ್ ಭವನ ಮತ್ತು ರಾಜ್ಯಪಾಲರಿಗೆ ಸಂಬಂಧಿಸಿದ  ಸುದ್ದಿಗಳು, ನಿಯತಕಾಲಿಕ,ಲೇಖನ ಇತ್ಯಾದಿ ವಿಷಯಗಳನ್ನು ಒಳಗೊಂಡ ರಾಜಹಂಸಿ ಎಂಬ ಪುಸ್ತಕವನ್ನು …