ಶಬರಿಮಲೆ ಚಿನ್ನ ಕಳವು: ಆರೋಪಿಗೆ ನಿರೀಕ್ಷಣಾ ಜಾಮೀನು ನಕಾರ: ‘ದೇವರನ್ನಾದರೂ ನಿಮಗೆ ಸುಮ್ಮನೆ ಬಿಡಬಾರದೇ’-ಸುಪ್ರೀಂಕೋರ್ಟ್

ನವದೆಹಲಿ: ಶಬರಿಮಲೆ ದೇಗುಲದ ಚಿನ್ನ ಕಳವು ಪ್ರಕರಣದ ಆರೋಪಿಗಳಲ್ಲೋರ್ವನಾದ ತಿರುವಿದಾಂಕೂರು ಮುಜರಾಯಿ ಮಂಡಳಿಯ ಮಾಜಿ ಸದಸ್ಯ ಕೆ.ಪಿ. ಶಂಕರದಾಸ್ ನಿರೀಕ್ಷಣಾ ಜಾಮೀನು ಕೋರಿ ಸಲ್ಲಿಸಿರುವ ಅರ್ಜಿಯನ್ನು  ನ್ಯಾಯಮೂರ್ತಿಗಳಾದ ದೀಪಾಂ ಕರ್ ದತ್ತ ಮತ್ತು ಎಸ್.ಸಿ. ಶರ್ಮಾರ ನ್ನೊಳಗೊಂಡ ಸುಪ್ರೀಂಕೋರ್ಟ್‌ನ ದ್ವಿಸದಸ್ಯ ಪೀಠ ವಜಾಗೈದು  ನಿರೀಕ್ಷಣಾ ಜಾಮೀನು ನಿರಾಕರಿಸಿ ತೀರ್ಪು ನೀಡಿದೆ. ಶಬರಿಮಲೆ ಚಿನ್ನ ಕಳವು ಪ್ರಕರಣಕ್ಕೆ ಸಂಬಂಧಿಸಿ ನನ್ನ ಬಗ್ಗೆ ಕೇರಳ ಹೈಕೋರ್ಟ್ ನಡೆಸಿರುವ ಪರಾಮರ್ಶೆಗಳನ್ನು ಅದರ ಕಡತಗಳಿಂದ ಹೊರತುಪಡಿಸಬೇಕೆಂಬ ಶಂಕರ್‌ದಾಸ್ ರ ಬೇಡಿಕೆಯನ್ನೂ ಸುಪ್ರೀಂಕೋರ್ಟ್ ನಿರಾಕರಿಸಿದೆ …

ಮಂಜೇಶ್ವರ ತಾಲೂಕು ಕಚೇರಿಗೆ ಇನ್ನೂ ಮರೀಚಿಕೆಯಾದ ಸ್ವಂತ ಕಟ್ಟಡ

ಮಂಜೇಶ್ವರ: ಜನರ ಬಹುಕಾಲದ ಬೇಡಿಕೆಗೆ ಸ್ಪಂದಿಸಿ ಮಂಜೇಶ್ವರ ತಾಲೂಕು ರೂಪಿಸಲಾ ಯಿತಾದರೂ ತಾಲೂಕು ಕಚೇರಿಗೆ ಸೂಕ್ತ ಕಟ್ಟಡ ಇಲ್ಲದ ಕಾರಣ ಜನರಿಗೆ ಸರಿಯಾದ ಪ್ರಯೋಜನ ಲಭಿಸುತ್ತಿಲ್ಲ ವೆಂದು ಸ್ಥಳೀಯರು ದೂರಿದ್ದಾರೆ. ಮಂಜೇಶ್ವರ ತಾಲೂಕು ರೂಪೀಕೃತಗೊಂಡು 11 ವರ್ಷ ಕಳೆದಿದ್ದು, ತಾಲೂಕು ಕಚೇರಿಗೆ ಸ್ವಂತ ಕಟ್ಟಡ ಇನ್ನೂ ಮರೀಚಿಕೆಯಾ ಗಿದೆ. ಉಪ್ಪಳ ಬಸ್ ನಿಲ್ದಾಣದ ಮುಂಭಾಗದಲ್ಲಿರುವ ಕಟ್ಟಡದ ಎರಡನೇ ಅಂತಸ್ತಿನಲ್ಲಿ ಈಗ ಕಚೇರಿ ಕಾರ್ಯಾ ಚರಿಸುತ್ತಿದೆ. ಆದರೆ ಇಲ್ಲಿ ಸೌಕರ್ಯ ಗಳ ಕೊರತೆ ಜನರಿಗೆ ಸಮಸ್ಯೆಯಾಗಿದೆ. ಅಲ್ಲದೆ ಕಚೇರಿಗೆ …

ಚರಂಡಿ ನಿರ್ಮಾಣಕ್ಕೆ ಮುಹೂರ್ತ ಮಾತ್ರ : ನೀರು ಪೋಲಾಗಿ ಸ್ಥಳೀಯರಿಗೆ ತೊಂದರೆ

ಉಪ್ಪಳ: ಮಂಗಲ್ಪಾಡಿ ಪಂ.ನ 7ನೇ ವಾರ್ಡ್ ಪ್ರತಾಪನಗರ ಒಳರಸ್ತೆಯಲ್ಲಿ ಪಂಚಾಯತ್ ವತಿಯಿಂದ ಮಂಜೂರಾದ ೫ ಲಕ್ಷ ರೂ. ವೆಚ್ಚದಲ್ಲಿ ಚರಂಡಿ ನಿರ್ಮಾಣಕ್ಕೆ ಮುಹೂರ್ತ ನಿಗದಿಯಾದದ್ದು ಮಾತ್ರವಲ್ಲದೆ ಕೆಲಸ ಆರಂಭಗೊಂಡಿ ಲ್ಲವೆಂದು ಸ್ಥಳೀಯರು ತಿಳಿಸಿದ್ದಾರೆ. ಸ್ಥಳೀಯಾಡಳಿತ ಸಂಸ್ಥೆ ಚುನಾವಣೆಯ ಮುಂಚಿತವೇ ಇಲ್ಲಿ ಚರಂಡಿ ನಿರ್ಮಿಸಲು ಗುತ್ತಿಗೆದಾರ ಹೊಂಡತೋಡಿ ಮುಹೂರ್ತ ಮಾಡಿದ್ದಾರೆ. ಆದರೆ ಇದರಿಂದಾಗಿ ಜನರಿಗೆ ಸಮಸ್ಯೆ ಮತ್ತಷ್ಟು ತೀವ್ರಗೊಂಡಿತು. ಹೊಂಡ ತೋಡುವ ವೇಳೆ ನೀರಿನ ಪೈಪ್‌ಗೆ  ಹಾನಿಯಾಗಿದ್ದು, ಇದರಿಂದ ನೀರು ಪೋಲಾಗುತ್ತಿದೆ. ಕಳೆದ ಎರಡು ತಿಂಗಳಿಂದ ಇಲ್ಲಿ ನೀರು …

ಯೂತ್ ಕಾಂಗ್ರೆಸ್‌ನಿಂದ ಕಲೆಕ್ಟ್ರೇಟ್ ಮಾರ್ಚ್: ಸಂಘರ್ಷ ಸೃಷ್ಟಿ

ಕಾಸರಗೋಡು: ಶಬರಿಮಲೆ ದೇಗುಲದ ಚಿನ್ನ ಕಳವು ಪ್ರಕರಣವನ್ನು ಬುಡಮೇಲುಗೊಳಿಸಲು ರಾಜ್ಯ ಸರಕಾರ ಯತ್ನಿಸುತ್ತಿದೆ, ಉದ್ಯೋಗ ಖಾತರಿ ಯೋಜನೆಯನ್ನು ಇಲ್ಲದಾಗಿಸಲು ಕೇಂದ್ರ ಸರಕಾರ  ಯತ್ನಿಸುತ್ತಿದೆ ಎಂದು ಆರೋಪಿಸಿ ಯೂತ್ ಕಾಂಗ್ರೆಸ್ ನೇತೃತ್ವದಲ್ಲಿ ಕಾಸರಗೋಡು ಕಲೆಕ್ಟ್ರೇಟ್‌ಗೆ ನಿನ್ನೆ ನಡೆಸಿದ ಮಾರ್ಚ್‌ನಲ್ಲಿ ಸಂಘರ್ಷ ಸ್ಥಿತಿ ಸೃಷ್ಟಿಯಾಯಿತು. ಈ ವೇಳೆ ಪೊಲೀಸರು ಜಲಪಿರಂಗಿ ಪ್ರಯೋಗಿಸಿದರು. ನಿನ್ನೆ ಮಧ್ಯಾಹ್ನ 12 ಗಂಟೆ ವೇಳೆ ಘಟನೆ ನಡೆದಿದೆ. ಡಿಸಿಸಿ ಕಚೇರಿ ಪರಿಸರದಿಂದ ಆರಂಭಿಸಿದ ಮಾರ್ಚ್‌ನ್ನು ಕಲೆಕ್ಟ್ರೇಟ್ ಮುಂದೆ ಡಿಸಿಸಿ ಉಪಾಧ್ಯಕ್ಷ ಬಿ.ಪಿ. ಪ್ರದೀಪ್ ಕುಮಾರ್ ಉದ್ಘಾಟಿಸಿದರು. …

ಕೆ.ಎಸ್.ಟಿ.ಎ ಕುಂಬಳೆ ಯೂನಿಟ್ ಸಮ್ಮೇಳನ: ನೂತನ ಪದಾಧಿಕಾರಿಗಳ ಆಯ್ಕೆ

ಕುಂಬಳೆ: ಕೆ.ಎಸ್. ಟಿ. ಎ. ಕುಂಬಳೆ ಯೂನಿಟ್ ಸಮ್ಮೇಳನ ಕುಂಬಳೆ ಪೈ ಕಾಂಪ್ಲೆಕ್ಸ್ ನಲ್ಲಿ ನಡೆಯಿತು. ವಿನೋದ್ ಯು ಅಧ್ಯಕ್ಷರು ವಹಿಸಿದರು. ಮೊಹನ್ ದಾಸ್ ಉದ್ಘಾಟಿಸಿದರು. ವಿಶೇಷ ಅತಿಥಿಯಾಗಿ ಸುರೇಶ್ ಭಟ್, ಬಾಲಕೃಷ್ಣ ಮತ್ತು ಸತೀಶ್ ಆಚಾರ್ಯ ಭಾಗವಹಿಸಿದ್ದರು.ಹಲವು ವರ್ಷಗಳಿಂದ ಕುಂಬಳೆಯಲ್ಲಿ ಟೈಲರ್ ವೃತ್ತಿಯಲ್ಲಿ ಇರುವ ಇಬ್ಬರಾದ ಲಕ್ಷ್ಮಿ ಭಟ್ ಸೂರಂಬೈಲ್ ಬಿಜೆಪಿ ಅಭ್ಯರ್ಥಿಯಾಗಿ ಹಾಗು ಬಾಲಕೃಷ್ಣ ರೈ ಪುತ್ತಿಗೆ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಥಳೀಯಾಡಳಿ ತ ಚುನಾವಣೆಯಲ್ಲಿ ಪುತ್ತಿಗೆ ಪಂಚಾಯತ್ ನಲ್ಲಿ ಜಯಗಳಿಸುರುತ್ತಾರೆ ಇವರನ್ನು ಅಭಿನಂದಿಸಲಾಯಿತು.ನೂತನ ಸಮಿತಿಗೆ …

ಪಂಜತ್ತೊಟ್ಟಿ ಶ್ರೀ ವಿಘ್ನೇಶ್ವರ ಭಜನಾ ಮಂದಿರದ ಪ್ರಥಮ ವಾರ್ಷಿಕೋತ್ಸವ, ಸನ್ಮಾನ

ಮಂಗಲ್ಪಾಡಿ: ಇಚ್ಲಂಗೋಡು ಬಳಿಯ ಪಂಜತೊಟ್ಟಿ ಶ್ರೀ ವಿಘ್ನೇಶ್ವರ ಭಜನಾ ಮಂದಿರದ ಪ್ರಥಮ ವಾರ್ಷಿಕೋತ್ಸವ ವಿವಿಧ ಕಾರ್ಯಕ್ರಮಗಳೊಂದಿಗೆ ನಡೆಯಿತು. ಇದರಂಗವಾಗಿ ನಡೆದ ಸಭಾ ಕಾರ್ಯಕ್ರಮದಲ್ಲಿ ಮಂದಿರದ ಅಧ್ಯಕ್ಷ ಸೀತಾರಾಮ ಪಂಜತೊಟ್ಟಿ ಅಧ್ಯಕ್ಷತೆ ವಹಿಸಿದರು. ಡಾ.ಅಭಿಲಾಷ್ ಮಯ್ಯ ಧಾರ್ಮಿಕ ಉಪನ್ಯಾಸ ನೀಡಿದರು. ಮುಖ್ಯ ಅತಿಥಿಗಳಾಗಿ ಹರಿನಾಥ ಭಂಡಾರಿ ಮುಳಿಂಜ, ಕಾಂಚಾರ ಅಮ್ಮಂಗೋಡು, ಭಾಸ್ಕರ್ ಅಯ್ಯ ಉಬರಳೆ ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ಚಿತ್ರ ರಚನೆಗಾರ ಮತ್ತು ಶಿಲ್ಪಿ ಕಿರಣ್ ಕುಮಾರ್ ಚೆರುಗೋಳಿ ಇವರನ್ನು ಸನ್ಮಾನಿಸಲಾಯಿತು. ಆಶಿಕ ಮತ್ತು ಬಳಗ ಪ್ರಾರ್ಥನೆ ಹಾಡಿದರು. …

ಶಾಲೆಯಲ್ಲಿ ಆಹಾರ ತಯಾರಿಸುತ್ತಿದ್ದಾಗ ಬೆಂಕಿ ತಗಲಿ ಗಾಯಗೊಂಡ ಅಡುಗೆ ಕಾರ್ಮಿಕೆ ಮೃತ್ಯು

ಉಪ್ಪಳ: ಶಾಲೆಯಲ್ಲಿ ಆಹಾರ ತಯಾರಿಸುತ್ತಿದ್ದಾಗ ಸ್ಟವ್‌ನಿಂದ ದೇಹಕ್ಕೆ ಬೆಂಕಿ ತಗಲಿ ಗಂಭೀರ ಸುಟ್ಟು ಗಾಯಗೊಂಡ ಅಡುಗೆ ಕಾರ್ಮಿಕೆ ಚಿಕಿತ್ಸೆ ಫಲಕಾರಿಯಾಗದೆ ಆಸ್ಪತ್ರೆಯಲ್ಲಿ ಮೃತಪಟ್ಟರು. ಬಂಗ್ರಮಂಜೇಶ್ವರ  ಸರಕಾರಿ ಶಾಲೆಯ ಅಡುಗೆ ಕಾರ್ಮಿಕೆಯಾದ ಉದ್ಯಾವರ ಮಾಡ ನಿವಾಸಿ ಜಯ (56) ಎಂಬವರು ಮೃತಪಟ್ಟ ದುರ್ದೈವಿಯಾಗಿದ್ದಾರೆ. ನಿನ್ನೆ ರಾತ್ರಿ ಮಂಗಳೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಮಧ್ಯೆ ನಿಧನ ಸಂಭವಿಸಿದೆ.  ಡಿಸೆಂಬರ್ 16ರಂದು ಬೆಳಿಗ್ಗೆ 11 ಗಂಟೆ ವೇಳೆ ದುರ್ಘಟನೆ ಸಂಭವಿಸಿತ್ತು. ಶಾಲೆಯ ಅಡುಗೆ ಕೋಣೆಯಲ್ಲಿ ಆಹಾರ ತಯಾರಿಸು ತ್ತಿದ್ದಾಗ ಗ್ಯಾಸ್ ಸ್ಟವ್‌ನಿಂದ ಸೀರೆಗೆ …

ಅಂಗಡಿಗೆ ಹಾನಿಗೈದು ವ್ಯಾಪಾರಿ, ಸಹೋದರನಿಗೆ ಹಲ್ಲೆ: 4 ಮಂದಿ ಬಂಧನ

ಕುಂಬಳೆ: ಕೇಳಿದ ಸಾಮಾನು ನೀಡಿಲ್ಲವೆಂಬ ದ್ವೇಷದಿಂದ ಅಂಗಡಿಗೆ ಹಾನಿಗೈದ ಪ್ರಕರಣದಲ್ಲಿ  ತಂದೆ, ಮಕ್ಕಳ ಸಹಿತ ನಾಲ್ಕು ಮಂದಿ ವಿರುದ್ಧ ಹತ್ಯೆ ಯತ್ನ ಕೇಸು ದಾಖಲಿಸಿ ಅವರನ್ನು  ಬಂಧಿಸಲಾಗಿದೆ. ಪೇರಾಲ್ ನಿವಾಸಿ ಸದಾಶಿವ (48), ಮಕ್ಕಳಾದ ಶ್ರವಣ್‌ರಾಜ್ (21) ಸುದರ್ಶನ್ (25), ಸಂಬಂಧಿಕ ಶರತ್ ಕುಮಾರ್ (26) ಎಂಬಿವರನ್ನು ಕುಂಬಳೆ ಎಸ್‌ಐ ಕೆ. ಶ್ರೀಜೇಶ್ ಹಾಗೂ ತಂಡ ಸೆರೆಹಿಡಿದಿದೆ.  ಕಳೆದ ಶನಿವಾರ ಸಂಜೆ 7.30ರ ವೇಳೆ ಮೊಗ್ರಾಲ್ ಪೇರಾಲ್‌ನ ಸಿ.ಎಂ. ಸ್ಟೋರ್ಸ್ ಎಂಬ ಅಂಗಡಿಯಲ್ಲಿ ಆರೋಪಿಗಳು  ಹಾನಿ ಗೊಳಿಸಿದ್ದಾರೆಂದು …

ಶಬರಿಮಲೆ ಚಿನ್ನಕಳವು ಪ್ರಕರಣ ತನಿಖೆ ಪೂರ್ತಿಗೊಳಿಸಲು 17ರಂದು ಅಂತಿಮ ಗಡು

ತಿರುವನಂತಪುರ: ಶಬರಿಮಲೆ ದೇಗುಲದ ಚಿನ್ನ ಕಳವು ಪ್ರಕರಣದ ತನಿಖೆಯನ್ನು ಈ ತಿಂಗಳ 17ರೊಳ ಗಾಗಿ ಪೂರ್ತಿಗೊಳಿಸುವಂತೆ ಈ ಪ್ರಕರಣದ ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ತಂಡ (ಎಸ್‌ಐಟಿ)ಗೆ ಕೇರಳ ಹೈಕೋರ್ಟ್ ನಿರ್ದೇಶ ನೀಡಿದೆ. ಇದರಂತೆ ಈ ಪ್ರಕರಣದ ಬಗ್ಗೆ ಈ ತನಕ ನಡೆಸಲಾದ ಎಲ್ಲಾ ತನಿಖಾ ವರದಿಯನ್ನು ಎಸ್‌ಐಟಿ ಇಂದು ಹೈಕೋರ್ಟ್‌ನ ದೇವಸ್ವಂ (ಮುಜರಾಯಿ)ಪೀಠಕ್ಕೆ ಸಲ್ಲಿಸಲಿದೆ.  ಶಬರಿಮಲೆ ಕ್ಷೇತ್ರ ಕಳವು ಪ್ರಕರಣದ ತನಿಖೆ ಹೈಕೋರ್ಟ್‌ನ ನೇರ ಮೇಲ್ನೋಟದಲ್ಲೇ ಈಗ ನಡೆಯುತ್ತಿದೆ. ಇದರಂತೆ ಎಸ್.ಪಿ. ಶಶಿಧರನ್ ನೇತೃತ್ವದ ಎಸ್‌ಐಟಿ …

ಅನಂತಪುರ ಕೈಗಾರಿಕಾ  ಸಂಸ್ಥೆಯ ಕಾರ್ಮಿಕ ಸಾವನ್ನಪ್ಪಿದ ಸ್ಥಿತಿಯಲ್ಲಿ ಪತ್ತೆ

ಕುಂಬಳೆ: ಇಲ್ಲಿಗೆ ಸಮೀಪದ ಅನಂತಪುರ ಇಂಡಸ್ಟ್ರಿಯಲ್ ಎಸ್ಟೇಟ್‌ನಲ್ಲಿ ಕಾರ್ಯವೆಸಗುತ್ತಿರುವ  ಕಾರ್ಖಾನೆ ಯೊಂದರ ಸುಪರ್‌ವೈಸರ್ ಅವರು ವಾಸಿಸುತ್ತಿದ್ದ ಕೊಠಡಿಯೊಳಗೆ  ಸಾವನ್ನಪ್ಪಿದ ಸ್ಥಿತಿಯಲ್ಲಿ ಪತ್ತೆಯಾದ ಘಟನೆ ನಡೆದಿದೆ. ಅನಂತಪುರ ಕೈಗಾರಿಕಾ ಎಸ್ಟೇಟ್‌ನಲ್ಲಿ  ಕಾರ್ಯವೆಸಗುತ್ತಿರುವ ಸ್ಟಾಂಡರ್ಡ್ ಗ್ರೀನ್ ಎನರ್ಜಿ ಎಂಬ ಕಾರ್ಖಾನೆಯ ಕಾರ್ಮಿಕ ಒಡಿಸ್ಸಾ ಮುಂಡ  ಖಾಮಾರಿ ನಿವಾಸಿ ಗ್ರಾಟಸ್ ಎಂಬವರ  ಪುತ್ರ  ಸ್ಯಾಮುವೆಲ್  ಟೋಪೋ (43)  ಈ ಕಾರ್ಖಾನೆಯ  ಕಾರ್ಮಿಕರು ವಾಸಿಸುತ್ತಿರುವ ಕೊಠಡಿಯಲ್ಲಿ ನಿನ್ನೆ  ಸಂಜೆ ಪ್ರಜ್ಞಾಹೀನ ಸ್ಥಿತಿಯಲ್ಲಿ ಪತ್ತೆಯಾಗಿದ್ದರು. ಅದನ್ನು ಕಂಡ ಪ್ರಸ್ತುತ ಕಾರ್ಖಾನೆಯ ಸುಪರ್ ವೈಸ್ ಶೇಣಿ …