ಮೀಂಜ ಕಳೆದುಕೊಂಡ ಎಡರಂಗ: ಪೈವಳಿಕೆ, ಮಂಗಲ್ಪಾಡಿಯಲ್ಲೂ ಯುಡಿಎಫ್ ಅಧಿಕಾರಕ್ಕೆ

ಉಪ್ಪಳ: ಜಿಲ್ಲೆಯ ಕೆಲವು ಪಂ ಚಾಯತ್‌ಗಳಲ್ಲಿ ಎಡರಂಗದ ಆಡಳಿತ ನಷ್ಟಗೊಂಡಿರುವಂತೆಯೇ ಮೀಂಜದಲ್ಲೂ ಎಡರಂಗ ಆಡಳಿತ ಕೈತಪ್ಪಿದೆ.  ಇಲ್ಲಿ ಕಳೆದಬಾರಿ ಸಿಪಿಐಗೆ 3 ಸೀಟು ಲಭಿಸಿದ್ದು, ಎಡರಂಗಕ್ಕೆ ಒಟ್ಟು 5 ಸ್ಥಾನ ಲಭಿಸಿತ್ತು.  ಆದರೆ ಈ ಬಾರಿ  ಸಿಪಿಎಂಗೆ ಒಂದು ಸ್ಥಾನ ಮಾತ್ರ ಲಭಿಸಿದೆ. ಕಳೆದಬಾರಿ ಆರು ಸ್ಥಾನಗಳಲ್ಲಿ ಗೆದ್ದಿದ್ದ ಬಿಜೆಪಿ 1 ಸೀಟು ಹೆಚ್ಚಿಸಿಕೊಂಡಿದೆ. ಈ ಬಾರಿ ಇಲ್ಲಿ ಯುಡಿಎಫ್ 9 ಸೀಟು ಗಳಿಸಿದ್ದು, ಆಡಳಿತ  ಅದರ ಪಾಲಾಗಿದೆ.  ಇದೇ ರೀತಿ ಮಂಗಲ್ಪಾಡಿ ಪಂಚಾಯತ್‌ನಲ್ಲೂ ಯುಡಿಎಫ್ ಅಧಿಕಾರ …

ಕುಂಬಳೆಯ ಹಿರಿಯ ವ್ಯಾಪಾರಿ ನಿಧನ

ಕುಂಬಳೆ: ಕುಂಬಳೆ ಪೈ ಕಂಪೌಂ ಡ್ ರಾಧಾ ನಿವಾಸ್‌ನ ಕೆ. ವಾಮನ ಶೆಣೈ (83) ನಿಧನ ಹೊಂದಿದರು. ಇವರು  ಹಲವು ವರ್ಷಗಳ ಕಾಲ ಕುಂಬಳೆಯಲ್ಲಿ ವ್ಯಾಪಾರಿಯಾಗಿ ದ್ದರು.  ಮೃತರು ಪತ್ನಿ ಸುಮನ ಶೆಣೈ, ಮಕ್ಕಳಾದ ರಾಧಿಕ, ಸಂಧ್ಯಾ, ಸುಕನ್ಯ, ಅಳಿಯಂದಿರಾದ ನಾರಾಯಣ ಪೈ, ಶೋಭನ್ ಭಕ್ತ, ಸಹೋದರಿ ಮೀರಾ ಬಾಳಿಗ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.

ಜಿಲ್ಲೆಯ ಗ್ರಾಮ ಪಂಚಾಯತ್‌ಗಳಲ್ಲಿ ವಿವಿಧ ಪಕ್ಷಗಳಿಗೆ ಲಭಿಸಿದ ಸೀಟುಗಳು

ಕಾಸರಗೋಡು: ಜಿಲ್ಲೆಯ ವಿವಿಧ ಗ್ರಾಮ ಪಂಚಾಯತ್‌ಗಳಲ್ಲಿ ವಿವಿಧ ಪಕ್ಷಗಳಿಗೆ ಲಭಿಸಿದ ಸೀಟುಗಳ ವಿವರ ಇಂತಿದೆ. ಅಜಾನೂರು ಪಂಚಾಯತ್‌ನಲ್ಲಿ ಯುಡಿಎಫ್‌ಗೆ 8, ಎಲ್‌ಡಿಎಫ್‌ಗೆ 12, ಎನ್‌ಡಿಎಗೆ 4 ಸೀಟುಗಳು ಲಭಿಸಿದೆ. ಬದಿಯಡ್ಕ ಪಂ.ನಲ್ಲಿ ಯುಡಿಎಫ್ 10, ಎಲ್‌ಡಿಎಫ್ 1, ಎನ್‌ಡಿಎ 10. ಬಳಾಲ್  ಪಂಚಾಯತ್: ಯುಡಿಎಫ್ 14, ಎಲ್‌ಡಿಎಫ್ 2, ಇತರರು 1. ಬೇಡಡ್ಕ ಪಂ: ಯುಡಿಎಫ್ 2, ಎಲ್‌ಡಿಎಫ್ 17. ಬೆಳ್ಳೂರು ಪಂ:   ಎಲ್‌ಡಿಎಫ್ 2, ಎನ್‌ಡಿಎ 6, ಇತರರು 6. ಚೆಮ್ನಾಡ್ ಪಂ: ಯುಡಿಎಫ್ 18, …

ಅಭ್ಯರ್ಥಿಯ ಮನೆಗೆ ಹಾನಿ: ಮುಸ್ಲಿಂ ಲೀಗ್ ಕಾರ್ಯಕರ್ತರ ವಿರುದ್ಧ ಕೇಸು

ಕುಂಬಳೆ: ಮಂಗಲ್ಪಾಡಿ ಪಂಚಾಯತ್ 2ನೇ ವಾರ್ಡ್‌ನಲ್ಲಿ ಎಡರಂಗ ಸ್ವತಂತ್ರ ಅಭ್ಯರ್ಥಿಯಾಗಿದ್ದ ಅಶ್ರಫ್ ಪಚ್ಲಂಪಾರೆ ಅವರ ಮನೆಗೆ  ಹಾನಿ ಎಸಗಿದ ಘಟನೆಗೆ ಸಂಬಂಧಿಸಿ ಮುಸ್ಲಿಂ ಲೀಗ್ ಕಾರ್ಯಕರ್ತರಾದ ಐದು ಮಂದಿ ವಿರುದ್ಧ ಮಂಜೇಶ್ವರ ಪೊಲೀಸರು ಕೇಸು ದಾಖಲಿಸಿಕೊಂಡಿದ್ದಾರೆ. ಅಶ್ರಫ್‌ರ ಪುತ್ರಿ ಫಾತಿಮತ್ ಸೈಲ (23) ನೀಡಿದ ದೂರಿನಂತೆ ಮಶ್ಕೂರ್, ಮಶೂಕ್, ಕೆ.ಎಸ್. ಮೂಸ, ಕೆ.ಎಸ್. ಸತ್ತಾರ್, ಮೋನಿ ಎಂಬಿವರ ವಿರುದ್ಧ ಕೇಸು ದಾಖಲಿಸಲಾಗಿದೆ. ಮೊನ್ನೆ ಸಂಜೆ ತಂಡವೊಂದು ಮನೆಗೆ ಅತಿಕ್ರಮಿಸಿ ನುಗ್ಗಿ ಅವಾಚ್ಯವಾಗಿ ನಿಂದಿಸಿ ಕೊಲೆ ಬೆದರಿಕೆಯೊಡ್ಡಿದ್ದು ಬಳಿಕ …

ಕುಂಬಳೆ ಪಂ.ನಲ್ಲಿ ಯುಡಿಎಫ್‌ಗೆ ಲಭಿಸಿದ ಗೆಲುವು 5 ವರ್ಷ ಕಾಲ ನಡೆದ ಅಭಿವೃದ್ಧಿ ಯೋಜನೆಗಳಿಗೆ ಜನರು ನೀಡಿದ ಅಂಗೀಕಾರ- ತಾಹಿರಾ ಯೂಸಫ್

ಕುಂಬಳೆ: ಕುಂಬಳೆ ಗ್ರಾಮ ಪಂಚಾಯತ್‌ನಲ್ಲಿ ಯುಡಿಎಫ್‌ಗೆ ಲಭಿಸಿದ ಅಭೂತಪೂರ್ವ ಗೆಲುವು ಕಳೆದ ಐದು ವರ್ಷಗಳ ಕಾಲ ಪ್ರಸ್ತುತ ಪಂಚಾಯತ್‌ನಲ್ಲಿ ನಡೆದ ಆಡಳಿತಕ್ಕೆ ಜನರು ನೀಡಿದ ಅಂಗೀ ಕಾರವಾಗಿದೆ ಎಂದು ಪಂಚಾಯತ್ ಅಧ್ಯಕ್ಷೆ ಯು.ಪಿ. ತಾಹಿರಾ ಯೂಸಫ್ ತಿಳಿಸಿದ್ದಾರೆ. ಕಳೆದ ಐದು ವರ್ಷ ಕಾಲದಲ್ಲಿ ಹಲವು ಯೋಜನೆಗಳನ್ನು ಪಂಚಾಯತ್‌ನ ಆಡಳಿತ ಮಂಡಳಿ ಜ್ಯಾರಿಗೊಳಿಸಿದೆ. ಇದೇ ವೇಳೆ ವಿರೋಧ ಪಕ್ಷಗಳು ಹೊರಿಸಿದ ಭ್ರಷ್ಟಾಚಾರ ಆರೋಪ ವನ್ನು ಜನರು ತಿರಸ್ಕರಿಸಿದ್ದಾರೆ ಎಂದು ಅವರು ‘ಕಾರವಲ್’ಗೆ ತಿಳಿಸಿದ್ದಾರೆ. ಪಂಚಾಯತ್ ವ್ಯಾಪ್ತಿಯ ಹೊಯ್ಗೆ ಕಡವಿನ …

ಪೇರಾಲ್ ಕಣ್ಣೂರಿನಲ್ಲಿ ವಾಚನಾಲಯಕ್ಕೆ ಪಟಾಕಿ ಎಸೆತ; ತಂಡದಿಂದ ವ್ಯಕ್ತಿಗೆ ಹಲ್ಲೆ

ಕುಂಬಳೆ: ಪೇರಾಲ್ ಕಣ್ಣೂರಿನಲ್ಲಿ ಇ.ಕೆ. ನಾಯನಾರ್ ವಾಚನಾಲಯದ ಮೇಲೆ ಪಟಾಕಿ ಎಸೆದು ಹಾನಿಗೈದ ಪ್ರಕರಣದಲ್ಲಿ ಕುಂಬಳೆ ಪೊಲೀಸರು ಕೇಸು ದಾಖಲಿಸಿ ತನಿಖೆ ತೀವ್ರಗೊಳಿಸಿದ್ದಾರೆ. ಶನಿವಾರ ಸಂಜೆ ಯುಡಿಎಫ್ ಕಾರ್ಯಕರ್ತರ ತಂಡ ಈ ಕೃತ್ಯವೆಸಗಿರುವುದಾಗಿ ಸಿಪಿಎಂ ಆರೋಪಿಸಿದೆ. ವಾಚನಾಲಯಕ್ಕೆ ಪಟಾಕಿ ಎಸೆದು ಬಳಿಕ ಫ್ಲೆಕ್ಸ್ ಬೋರ್ಡ್‌ಗಳನ್ನು ನಾಶಗೊಳಿಸಲಾಗಿದೆ. ಅಲ್ಲದೆ ವಾಚನಾಲಯದ ಮುಂದೆ ನಿಂತಿದ್ದ ಹಸೈನಾರ್ ಕೋರಿತ್ತಳ (52) ಎಂಬವರಿಗೂ ಹಲ್ಲೆಗೈದಿರುವುದಾಗಿ ದೂರಲಾಗಿದೆ. ಹಸೈನಾರ್ ಕುಂಬಳೆ ಜಿಲ್ಲಾ ಸಹಕಾರಿ ಆಸ್ಪತ್ರೆಯಲ್ಲಿ ದಾಖಲಾಗಿದ್ದಾರೆ. ಘಟನೆ ಬಗ್ಗೆ ಸಿಪಿಎಂ ನೀಡಿದ ದೂರಿನಂತೆ ಕುಂಬಳೆ …

ಜಿಲ್ಲಾ ಪಂ.ನ ಪುತ್ತಿಗೆ ಡಿವಿಶನ್‌ನಲ್ಲಿ ಸೋಮಶೇಖರರ ಗೆಲುವು:ಯುಡಿಎಫ್ ಪಾಳಯದಲ್ಲಿ ನವೋತ್ಸಾಹ

ಪೆರ್ಲ: ಜಿಲ್ಲಾ ಪಂಚಾಯತ್‌ನ  ಪುತ್ತಿಗೆ ಡಿವಿಶನ್‌ನಲ್ಲಿ ಯುಡಿಎಫ್‌ನಸೋಮಶೇಖರ ಜೆ.ಎಸ್. ಅವರು ಗೆಲುವು ಸಾಧಿಸಿರುವುದು ಕಾಂಗ್ರೆಸ್ ಹಾಗೂ ಮುಸ್ಲಿಂ ಲೀಗ್‌ನಲ್ಲಿ ಹೊಸ ಹುರುಪು ಮೂಡಿಸಿದೆ. ಕಳೆದ ಚುನಾವಣೆಯಲ್ಲಿ ೬೦೦೦ಕ್ಕೂ ಹೆಚ್ಚು ಮತಗಳ ಅಂತರದಲ್ಲಿ ೩ನೇ ಸ್ಥಾನದಲ್ಲಿದ್ದ ಯುಡಿಎಫ್ ಅಭ್ಯರ್ಥಿ ಇದೀಗ ಮೊದಲ ಸ್ಥಾನಕ್ಕೆ ತಲುಪಿರುವುದು ಜಿಲ್ಲಾ ರಾಜಕಾರಣದಲ್ಲಿ ಸಂಚಲನ ಮೂಡಿಸಿದೆ. ಈ ಗೆಲುವು ಯುಡಿಎಫ್ ಹಾಗೂ ಕಾಂಗ್ರೆಸ್ ಕಾರ್ಯಕರ್ತರಲ್ಲಿ ಹೊಸ ಹುಮ್ಮಸ್ಸು ಮೂಡಿಸಿದೆ. ಎಣ್ಮಕಜೆ ಪಂಚಾಯತ್ ಅಧ್ಯಕ್ಷರಾಗಿ 10 ವರ್ಷದ ಅನುಭವ, ಶಿಕ್ಷಣ,  ಸಹಕಾರಿ ಕ್ಷೇತ್ರದಲ್ಲಿ ಸೇವೆ ಹಾಗೂ …

ಕೇರಳದ ಎರಡು ತುದಿಗಳಲ್ಲೂ ಬಿಜೆಪಿಯ ಸಾಧನೆ-ವಿ.ಕೆ. ಸಜೀವನ್

ಮಧೂರು:  ರಾಜ್ಯದ ಉತ್ತರ ಭಾಗದಲ್ಲಿ ಬಿಜೆಪಿ ಆಡಳಿತ ಸತತವಾಗಿ  ೪೬ನೇ ವರ್ಷಕ್ಕೆ  ಕಾಲಿಡುತ್ತಿರುವಾಗ ರಾಜ್ಯದ  ತೆಂಕಣ ಜಿಲ್ಲೆ ರಾಜಧಾನಿ ಯಾದ ತಿರುವನಂತಪುರ ಕಾರ್ಪೋ ರೇಶನ್‌ನ್ನು ಸ್ವಾಧೀನಪಡಿಸಿದ ಬಿಜೆಪಿಯ ಶಕ್ತಿ ಹೆಚ್ಚುತ್ತಿದೆಯೆಂದು ಪಕ್ಷದ ರಾಜ್ಯ ಸೆಲ್ ಕೋ-ಆರ್ಡಿನೇಟರ್ ವಿ.ಕೆ. ಸಜೀವನ್ ನುಡಿದರು. ಸತತವಾಗಿ  ೪೬ನೇ ವರ್ಷಕ್ಕೆ ಆಡಳಿತ ನಡೆಸಲು ಅವಕಾಶ ಲಭಿಸಿದ ಮಧೂರು ಪಂಚಾಯತ್ ಬಿಜೆಪಿ ಸಮಿತಿಗಳ ಜಂಟಿ ಆಶ್ರಯದಲ್ಲಿ ಹರ್ಷಾಚರಣೆ ಹಾಗೂ ಸಾರ್ವಜನಿಕ ಸಭೆಯನ್ನು  ಮಧೂರಿನಲ್ಲಿ ಉದ್ಘಾಟಿಸಿ ಅವರು ಮಾತನಾಡಿದರು.  ಕೋಮು ಭೀತಿವಾದಿ ಸಂಘಟನೆಗಳ ಜೊತೆ ಸೇರಿಸಿಕೊಂಡು …

ಸ್ಥಳೀಯಾಡಳಿತ ಚುನಾವಣೆ: ಜಿಲ್ಲೆಯಲ್ಲಿ ಯುಡಿಎಫ್‌ಗೆ ಅತೀ ಹೆಚ್ಚು ಮತ

ಕಾಸರಗೋಡು: ಸ್ಥಳೀಯಾಡಳಿತ ಸಂಸ್ಥೆಗಳಿಗೆ ನಡೆದ ಚುನಾವಣೆಯಲ್ಲಿ ಜಿಲ್ಲೆಯಲ್ಲಿ ಯುಡಿಎಫ್ಗೆ ಅತೀ ಹೆಚ್ಚು ಮತಗಳು ಲಭಿಸಿವೆ. ಅಂದರೆ ಎಡರಂಗಕ್ಕಿ೦ತ 57,595 ಹೆಚ್ಚು ಮತಗಳು ಯುಡಿಎಫ್ಗೆ ಲಭಿಸಿದೆ.ಯುಡಿಎಫ್ಗೆ ಒಟ್ಟು 3,57,478 ಮತಗಳು (ಶೇ. 42.92) ಲಭಿಸಿದರೆ, ಎಡರಂಗಕ್ಕೆ 2,99,883 (ಶೇ.36) ಮತಗಳು ಲಭಿಸಿದೆ. ಇನ್ನು ಬಿಜೆಪಿ ನೇ ತೃತ್ವದ ಎನ್ಡಿಎಗೆ 1,66,868 (ಶೇ. 20.03) ಮತಗಳು ಲಭಿಸಿದೆ. ಇತರ ರಿಗೆ ಶೇ. 1.05 ಮತಗಳು ಲಭಿಸಿವೆ.ಜಿಲ್ಲೆಯಲ್ಲಿ ಒಟ್ಟು 11,12,190 ಮತದಾರರಿದ್ದು, ಅದರಲ್ಲಿ ಈ ಚುನಾವಣೆಯಲ್ಲಿ 8,32,923 (ಶೇ 74.89) ಮಂದಿ …

ಕಾಸರಗೋಡು ನಗರಸಭೆ ಆಡಳಿತ ಉಳಿಸಿಕೊಂಡ ಮುಸ್ಲಿಂ ಲೀಗ್

ಕಾಸರಗೋಡು: ಮುಸ್ಲಿಂ ಲೀಗ್‌ನ ಭದ್ರ ಕೋಟೆಯೆಂದು ಹೇಳಲಾಗುತ್ತಿರುವ ಕಾಸರಗೋಡು ನಗರಸಭೆಯ ಆಡಳಿತವನ್ನು ಮುಸ್ಲಿಂ ಲೀಗ್ ತನ್ನ ಕೈಯಲ್ಲೇ ಉಳಿಸಿಕೊಂಡಿದೆ. ಒಟ್ಟು 30 ಸೀಟುಗಳ ಪೈಕಿ 24 ವಾರ್ಡ್‌ಗಳಲ್ಲಿ ಯುಡಿಎಫ್ ಗೆಲುವು ಸಾಧಿಸಿದೆ. ಇದರಲ್ಲಿ 23 ವಾರ್ಡ್‌ಗಳು ಕೂಡಾ ಲೀಗ್‌ನದ್ದಾಗಿದೆ. ಎನ್‌ಡಿಎಗೆ 14 ಸೀಟು ಲಭಿಸಿದೆ. ಬಿಜೆಪಿಗೆ 2 ಸೀಟು ನಷ್ಟಗೊಂಡಿದೆ. ಇದೇ ವೇಳೆ ಎಲ್‌ಡಿಎಫ್ 1 ಸೀಟಿನಿಂದ 2 ಸೀಟು ಆಗಿ ಬಲ ಹೆಚ್ಚಿಸಿಕೊಂಡಿದೆ. ಎಲ್‌ಡಿಎಫ್‌ನ ಸ್ವತಂತ್ರ ಅಭ್ಯರ್ಥಿ ಗೆಲುವು ಸಾಧಿಸಿದ್ದಾರೆ. ನಗರಸಭೆ ರೂಪೀಕರಿಸಿದ ಬಳಿಕ ಎರಡು …