ಕುಂಬಳೆ: ಭಾರತೀಯ ನೌಕಾಸೇನೆಗೆ ಆಯ್ಕೆಯಾದ ಕಂಚಿಕಟ್ಟೆ ನಿವಾಸಿ ದೇವದಾಸ್- ಶಾಲಿನಿ ದಂಪತಿ ಪುತ್ರಿ ದೀಕ್ಷಾ ದೇವದಾಸ್ರನ್ನು ಬಿಜೆಪಿ ಕುಂಬಳೆ ಪಂಚಾಯತ್ ಸಮಿತಿ ವತಿಯಿಂದ ಅಭಿನಂದಿಸಲಾಯಿತು. ಬಿಜೆಪಿ ರಾಜ್ಯ ಸಮಿತಿ ಸದಸ್ಯ ವಿ. ರವೀಂದ್ರನ್ ಶುಭ ಹಾರೈಸಿದರು. ಮಂಡಲ ಉಪಾಧ್ಯಕ್ಷರಾದ ಪ್ರೇಮಾವತಿ, ವಿಕ್ರಮ್ ಪೈ, ಪಂಚಾಯತ್ ಸಮಿತಿ ಅಧ್ಯಕ್ಷ ಸುಜಿತ್ ರೈ, ಕಾರ್ಯದರ್ಶಿ ವಿವೇಕ್ ಶೆಟ್ಟಿ, ರಮೇಶ್ ಭಟ್, ಕಾಂಚಾರ, ಪ್ರೇಮ ಶೆಟ್ಟಿ, ಶೋಭಾ, ಗೋಪಾಲ, ಸುಮ, ಶಶಿ ಕುಂಬಳೆ ಉಪಸ್ಥಿತರಿದ್ದರು.






