ಕುಂಬಳೆ: ಶಿರಿಯ ಮುಟ್ಟಂ ನಿವಾಸಿ ಇಂಜಿನಿಯರ್ ಶರೀಫ್ ಯಾನೆ ಪಾಂಡ್ಯಾಲ ಶರೀಫ್ (58) ನಿಧನ ಹೊಂದಿದರು. ಕರ್ನಾಟಕ ಪೊಲೀಸ್ನ ನಿವೃತ್ತ ಡಿವೈಎಸ್ಪಿ ಮುಹಮ್ಮದ್ ಕುಂಞಿಯವರ ಪುತ್ರನಾಗಿದ್ದಾರೆ. ಅಸೌಖ್ಯ ಬಾಧಿಸಿದ ಹಿನ್ನೆಲೆಯಲ್ಲಿ ಮಂಗಳೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆಯಲ್ಲಿದ್ದ ಮಧ್ಯೆ ಇಂದು ಬೆಳಿಗ್ಗೆ ನಿಧನ ಸಂಭವಿಸಿದೆ. ಮೃತರು ಪತ್ನಿ ಕುಂಬಳೆಯ ಉದ್ಯಮಿ ಮೊಹಮ್ಮದ್ ಅರಬಿಯವರ ಮಗಳಾದ ಶಕೀಲ, ಮಕ್ಕಳಾದ ರುಮ, ರಿಯ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.







