ಮೀಯಪದವು: ಕ್ಷೇಮ ಪಿಂಚಣಿಯನ್ನು ಬುಡಮೇಲುಗೊಳಿ ಸುವ ಯುಡಿಎಫ್ ಸರಕಾರದ ತೀರ್ಮಾನಕ್ಕೆದುರಾಗಿ ಸಿಪಿಎಂ ರಾಜ್ಯ ಸಮಿತಿಯ ಅಹ್ವಾನ ಪ್ರಕಾರ ಮೀಂಜ ಗ್ರಾಮ ಕಛೇರಿಯ ಮುಂದೆ ಪಿಂಚಣಿದಾರರ ಪ್ರತಿಭಟನಾ ಸಂಗಮ ನಡೆಯಿತು. ಸಿಪಿಎಂ ಮಂಜೇಶ್ವರ ಏರಿಯಾ ಕಾರ್ಯದರ್ಶಿ ಸಿಜಿ ಮ್ಯಾಥ್ಯು ಉದ್ಘಾಟಿಸಿದರು. ಲೋಕೇಶ ಚಿನಾಲ ಅಧ್ಯಕ್ಷತೆ ವಹಿಸಿದರು. ರಾಮಚಂದ್ರ ಟಿ. ಸ್ವಾಗತಿಸಿದರು. ಬಾಳಪ್ಪ ಬಂಗೇರ, ಜನಾರ್ದನ ಪೂಜಾರಿ, ಐರಿನ್ ಜೋಸ್ಫಿನ್ ನೇತೃತ್ವ ನೀಡಿದರು.






