ಕುಂಬಳೆ: ಇಲ್ಲಿನ ಕೃಷ್ಣನಗರ ನಿವಾಸಿ, ನಿವೃತ್ತ ಬಿಎಸ್ಎನ್ಎಲ್ ಅಧಿಕಾರಿ ಲಿಂಗಪ್ಪ (68) ನಿಧನಹೊಂದಿದರು. ಅಸೌಖ್ಯ ಬಾಧಿಸಿ ಚಿಕಿತ್ಸೆಯಲ್ಲಿದ್ದರು. ರಾಮಚಂದ್ರ-ಭಾಗೀರಥಿ ದಂಪತಿ ಪುತ್ರನಾದ ಮೃತರು ಪತ್ನಿ ರಾಜೇಶ್ವರಿ, ಪುತ್ರಿ ಲಲಿತ (ಅಮೆರಿಕ), ಅಳಿಯ ಮನು (ಅಮೆರಿಕ), ಸಹೋದರ-ಸಹೋದರಿಯರಾದ ದಾಮೋದರ (ಆರಿಕ್ಕಾಡಿ), ರಾಧಾಕೃಷ್ಣ (ಬಿಎಸ್ಎನ್ಎಲ್), ಚಂದ್ರಹಾಸ, ಯೋಗೀಶ, ಭಾಸ್ಕರ, ಕಮಲಾಕ್ಷ, ಸುರೇಶ, ಶಾರದ, ಜಲಜಾಕ್ಷಿ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.






