ಅನಧಿಕೃತ ಹೊಯ್ಗೆ ಸಾಗಾಟ ಎರಡು ಲಾರಿಗಳ ವಶ

ಉಪ್ಪಳ: ಅನಧಿಕೃತವಾಗಿ ಹೊಯ್ಗೆ ಸಾಗಿಸುತ್ತಿದ್ದ ಎರಡು ಲಾರಿಗಳನ್ನು ಮಂಜೇಶ್ವರ ಪೊಲೀಸರು ನಿನ್ನೆ ರಾತ್ರಿ ವಶಪಡಿಸಿಕೊಂಡಿದ್ದಾರೆ. ವರ್ಕಾಡಿ ಭಾಗದಿಂದ ಹೊಸಂಗಡಿ ಭಾಗಕ್ಕೆ ಹೊಯ್ಗೆ ಸಾಗಿಸುತ್ತಿದ್ದ ಒಂದು ಲಾರಿಯನ್ನು ಮೊರತ್ತಣೆ ಬಸ್ ನಿಲ್ದಾಣ ಬಳಿಯಿಂದ ಎಸ್.ಐ ಪ್ರಶಾಂತ್ ವಶಪಡಿಸಿಕೊಂಡು ಲಾರಿ ಚಾಲಕ ವರ್ಕಾಡಿ ತಲೆಕ್ಕಿ ನಿವಾಸಿ ಮೊಹಮ್ಮದ್ ಉಸಾಮ (೨೪) ಎಂಬಾತನನ್ನು ಸೆರೆಹಿಡಿದಿದ್ದಾರೆ. ಇನ್ನೊಂದು ಲಾರಿಯನ್ನು ಎಸ್‌ಐ ನಿಖಿಲ್ ಕಡಂಬಾರ್ ಶಾಲೆ ಬಳಿಯಿಂದ ವಶಪಡಿ ಸಿಕೊಂಡು ಚಾಲಕ ಕರ್ನಾಟಕ ನಿವಾಸಿ ಕದರಿ (೪೧) ಎಂ ಬಾತನನ್ನು ಬಂಧಿಸಲಾಗಿದೆ.

RELATED NEWS

You cannot copy contents of this page