ಏತಡ್ಕ ಶ್ರೀ ಸದಾಶಿವ ದೇವಸ್ಥಾನದಲ್ಲಿ ಬ್ರಹ್ಮಕಲಶೋತ್ಸವ ಆರಂಭ : ಬಹುವಿಧ ಕಾರ್ಯಕ್ರಮಗಳಿಂದ ಗಮನ ಸೆಳೆಯುತ್ತಿರುವ ಗ್ರಾಮೀಣ ದೇಗುಲ
ಬದಿಯಡ್ಕ: ಏತಡ್ಕ ಶ್ರೀಸದಾಶಿವ ದೇವಸ್ಥಾನದಲ್ಲಿ ಬ್ರಹ್ಮಕಲಶದ ವಿದಿs ವಿಧಾನಗಳು ವಿವಿಧ ಕಾರ್ಯಕ್ರಮ ಗಳೊಂದಿಗೆ ನಡೆಯುತ್ತಿದ್ದು, ನಿನ್ನೆ ಗಣ ಪತಿಹೋಮ, ಶಾಂತಿಹೋಮ ಗಳು, ದಹನಪ್ರಾಯಶ್ಚಿತ್ತ, ತ್ರಿಕಾಲಪೂಜೆ, ಅಂ ಕುರಪೂಜೆ, ಮಹಾಪೂಜೆ ನಡೆಯಿತು.
ಭಜನಾರ್ಪಣಮ್-ಸಾಮಗಾನ ಪ್ರಿಯ ವೇದಿಕೆಯಲ್ಲಿ ಶಾಸ್ತಾರ ಭಜನಾ ಸಂಘ ಗಿರಿಪುರ, ಚೀರುಂಬಾ ಭಗವತಿ ಭಜನಾ ಸಂಘ ಪೊಡಿಪ್ಪಳ್ಳ, ರಾಮ ಚಂದ್ರ ಭಟ್ ವೃಂದಾವನ ಪೆರ್ಲ, ಬನಾರಿ ಶ್ರೀಗೋಪಾಲಕೃಷ್ಣ ಭಜನಾ ಸಂಘ ದೇಲಂಪಾಡಿ, ಶ್ರೀರಾಮಾಂ ಜನೇಯ ಭಜನಾ ಸಂಘ ಕುದಿಂಗಿಲ, ಶ್ರೀಧರ್ಮಶಾಸ್ತಾ ಭಜನಾ ಸಂಘ ಎ.ಸಿ.ಸರ್ಕಲ್ ಕುರುಮುಜ್ಜಿಕಟ್ಟೆ ತಂಡಗಳಿAದ ಭಜನಾ ಸಂಕೀರ್ತನೆ ನಡೆಯಿತು.
ಕಲಾರ್ಪಣಮ್-ನಟರಾಜ ವೇದಿಕೆಯಲ್ಲಿ ನಾರಾಯಣೀಯಂ ಸ್ತೋತ್ರ ಪಠಣ ಹಾಗೂ ವ್ಯಾಖ್ಯಾನ, ಸಂಜೆ 5ರಿಂದ ಶಂ.ನಾ.ಅಡಿಗ ಕುಂಬಳೆ ಅವರ ಕೀರ್ತನಕುಟೀರದ ವಿದ್ಯಾರ್ಥಿ ಗಳಾದ ಅಭಿಜ್ಞಾ ಬೊಳುಂಬು ಮತ್ತು ತಂಡದವರಿAದ ಹರಿಕಥಾ ಸತ್ಸಂಗ, ಅಗಲ್ಪಾಡಿ ಜಯನಗರದ ಶ್ರೀಪಾಂಚ ಜನ್ಯ ಬಾಲಗೋಕುಲ ತಂಡದವರಿAದ ಕುಣಿತ ಭಜನೆ, ಬಾಲಕೃಷ್ಣ ಮಂಜೇಶ್ವರ ಇವರ ಶಿಷ್ಯವೃಂದದವರಿAದ ನಾಟ್ಯ ಸಂಕಲ್ಪ ನಡೆಯಿತು.
ಗ್ರಾಮೀಣ ಪ್ರದೇಶವಾಗಿ, ಕನಿಷ್ಠ ಸೌಕರ್ಯಗಳಷ್ಟೇ ಲಭ್ಯವಿರುವ ಏತಡ್ಕ ಪರಿಸರದ ಈ ದೇವಾಲಯದ ಪುನಃಪ್ರತಿಷ್ಠೆ ಜನರನ್ನು ಸೆಳೆಯುತ್ತಿದೆ. ಸ್ಥಳೀಯರಷ್ಟೇ ಅಲ್ಲದೆ ದೂರದೂರು ಗಳಿಂದಲೂ ಜನರು ಆಗಮಿಸುತ್ತಿದ್ದು, ಪ್ರಕೃತಿರಮಣೀಯವಾದ ಹಸಿರು ಅಡಿಕೆ-ತೆಂಗಿನ ತೋಟಗಳ ಮಧ್ಯೆ ಕಂಗೊಳಿಸುವ ಶ್ರೀಕ್ಷೇತ್ರ ಭಜಕರಿಗೆ ಆಧ್ಯಾತ್ಮಿಕಅನುಭೂತಿ ನೀಡುವಲ್ಲಿ ಯಶಸ್ವಿಯಾಗಿದೆ.
ಇಂದÀÄ ಬೆಳಿಗ್ಗೆ ಗಣಪತಿ ಹೋಮ, ತತ್ವಹೋಮ, ತತ್ವಕಲಶ ಪೂಜೆ, ತತ್ವಕಲಶಾಭಿಷೇಕ, ಅನುಜ್ಞಾ ಕಲಶಾಭಿಷೇಕ, ತ್ರಿಕಾಲ ಪೂಜೆ, ಅಂಕುರಪೂಜೆ, ಮಹಾಪೂಜೆ ನಡೆಯಿತು. ಸಂಜೆ 7 ರಿಂದ ಅನುಜ್ಞಾ ಬಲಿ, ಕ್ಷೇತ್ರಪಾಲನ ಅನುಜ್ಞಾ ಪ್ರಾರ್ಥನೆ, ಬಿಂಬಶುದ್ಧಿ, ಕಲಶಪೂಜೆ, ಅಂಕುರ ಪೂಜೆ, ಮಹಾಪೂಜೆ ನಡೆಯಲಿದೆ.
ವಿವಿಧ ತಂಡಗಳಿAದ ಭಜನೆ, ದಾಸ ಸಂಕೀರ್ತನೆ, ಸಂಜೆ 5 ರಿಂದ ಪೆರ್ಲದ ಪಡ್ರೆಚಂದು ಸ್ಮಾರಕ ಯಕ್ಷಗಾನ ಕೇಂದ್ರದವರಿAದ ಮೀನಾಕ್ಷಿ ಕಲ್ಯಾಣಯಕ್ಷಗಾನ ಬಯಲಾಟ, 6.30ರಿಂದ ವಿದುಷಿಃಡಾ. ಶಾರದಾ ಸ್ಪೂರ್ತಿ ವೈ ಅವರ ಶಿಷ್ಯವೃಂದದವ ರಿಂದ ಭರತನಾಟ್ಯ ಪ್ರದರ್ಶನ, 7.30ರಿಂದ ಬಾಯಾರು ಮಹಮ್ಮಾಯಿ ಯಕ್ಷಗಾನ ಕಲಾ ಸಂಘದವರಿAದ ಯಕ್ಷಗಾನ ತಾಳಮದ್ದಳೆ ಭೀಷ್ಮ ವಿಜಯ ಪ್ರದರ್ಶನಗೊಳ್ಳಲಿದೆ.