ಕುಂಬಳೆಯಲ್ಲಿ ಕಾಂಗ್ರೆಸ್‌ನಿಂದ ಪ್ರತಿಭಟನೆ

ಕುಂಬಳೆ: ಆರೋಪಕ್ಕೆಡೆ ಯಾದ ಎಡಿಜಿಪಿ ಹಾಗೂ ತೃಶೂರ್ ಪೂರಂನ್ನು ಬುಡಮೇಲು ಗೊಳಿಸಲು ಯತ್ನಿಸಿದವರನ್ನು ಸಂರಕ್ಷಿಸುವ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ರಾಜೀನಾಮೆ ನೀಡಬೇಕೆಂದು ಆಗ್ರಹಿಸಿ ಕುಂಬಳೆಯಲ್ಲಿ ಬ್ಲೋಕ್ ಕಾಂಗ್ರೆಸ್ ಸಮಿತಿ ಪ್ರತಿಭಟನೆ ನಡೆಸಿದೆ. ಡಿಸಿಸಿ ಕಾರ್ಯದರ್ಶಿ ಸೋಮಶೇಖರ ಜೆ.ಎಸ್. ಉದ್ಘಾಟಿಸಿದರು. ಡಿಸಿಸಿ ಸದಸ್ಯ ಸುಂದರ ಆರಿಕ್ಕಾಡಿ ಅಧ್ಯಕ್ಷತೆ ವಹಿಸಿದರು. ಮಂಡಲ ಕಾಂಗ್ರೆಸ್ ಸಮಿತಿ ಅಧ್ಯಕ್ಷ ರವಿ ಪೂಜಾರಿ ಸ್ವಾಗತಿಸಿದರು. ಸುಲೈಮಾನ್ ಹಾಜಿ, ವಸಂತ ಮಾಸ್ಟರ್, ಬಿಂದು, ಲಕ್ಷ್ಮಣ ಪ್ರಭು, ಸತ್ಯನ್ ಉಪ್ಪಳ, ಮೋಹನ್ ರೈ ಸಹಿತ ಹಲವು ಮುಖಂಡರು ಭಾಗವಹಿಸಿದರು.

RELATED NEWS

You cannot copy contents of this page