ಗುಜರಿ ಸಾಮಗ್ರಿ ಖರೀದಿಗೆ ತಲುಪಿ ಡ್ರಿಲ್ಲಿಂಗ್ ಯಂತ್ರ ಕಳವು: ಇಬ್ಬರು ಕೈಯ್ಯಾರೆ ಸೆರೆ

ಕಾಸರಗೋಡು: ಗುಜರಿ ಸಾಮಗ್ರಿಗಳನ್ನು ಖರೀದಿಸಲು ತಲುಪಿದ ಇಬ್ಬರು ಮನೆಯ ಬಳಿ ಇರಿಸಿದ್ದ ಡ್ರಿಲ್ಲಿಂಗ್ ಯಂತ್ರವನ್ನು ಕಳವುಗೈದ ಘಟನೆ ನಡೆದಿದೆ.  ಈ ಬಗ್ಗೆ ಕೂಡಲೇ ಅರಿವಿಗೆ ಬಂದ ಮನೆಯವರು ಕಳ್ಳರನ್ನು ಕೈಯ್ಯಾರೆ ಸೆರೆಹಿಡಿದು ಪೊಲೀಸರಿಗೆ ಹಸ್ತಾಂತರಿಸಿದರು.

ಚಟ್ಟಂಚಾಲ್ ಬಳಿಯ ಬೆಂಡಿಚ್ಚಾಲ್  ಬಾಲನಡ್ಕ ನಿವಾಸಿಯೂ ಈಗ ಮಧೂರು ಬಳಿಯ ಪಟ್ಲ ಕುರುಪ್ಪನಡ್ಕದಲ್ಲಿ ವಾಸಿಸುವ ಮುಜೀಬ್ ರಹ್ಮಾನ್ (೨೬) ಹಾಗೂ  ಪ್ರಾಯ ಪೂರ್ತಿಯಾಗದ ಬಾಲಕನನ್ನು ಸೆರೆಹಿಡಿದು ಬೇಡಗಂ ಪೊಲೀ ಸರಿಗೆ ಹಸ್ತಾಂತರಿಸಲಾಗಿದೆ. ಅವರಿಬ್ಬರನ್ನು ಪೊಲೀಸರು ಬಂಧಿಸಿದ್ದಾರೆ. ಈ ಪೈಕಿ ಮುಜೀಬ್ ರಹ್ಮಾನ್‌ಗೆ ನ್ಯಾಯಾಲಯ ರಿಮಾಂಡ್ ವಿಧಿಸಿದೆ.

ನಿನ್ನೆ ಬೇತೂರುಪಾರ ನಿವಾಸಿಯಾದ ಇಲೆಕ್ಟ್ರೀಶ್ಯನ್ ರಾಜೇಶ್ವರ ಮನೆಯ ಕಾರು ಶೆಡ್‌ನಿಂದ ಡ್ರಿಲ್ಲಿಂಗ್ ಯಂತ್ರ ವನ್ನು ಕಳವುಗೈಯ್ಯಲಾಗಿದೆ. ಮುಜೀಬ್ ರಹ್ಮಾನ್ ಓರ್ವ ಬಾಲಕನನ್ನು ಸೇರಿಸಿಕೊಂಡು ಗೂಡ್ಸ್ ಆಟೋದೊಂದಿಗೆ ಗುಜರಿ ಸಾಮಗ್ರಿಗಳನ್ನು ಖರೀದಿಸಲು ತಲುಪಿದ್ದನು.  ಗುಜರಿ ಸಾಮಾಗ್ರಿಗಳನ್ನು ಖರೀದಿಸುವ ಮಧ್ಯೆ ಅಲ್ಲಿದ್ದ ಡ್ರಿಲ್ಲಿಂಗ್  ಯಂತ್ರವನ್ನು ಕಳವುಗೈಯ್ಯಲಾಗಿದೆ. ಅದು  ಗಮನಕ್ಕೆ ಬಂದ ಮನೆಯವರು ಮುಜೀಬ್ ರಹ್ಮಾನ್ ಹಾಗೂ ಜತೆಗಿದ್ದ ಬಾಲಕನನ್ನು ತಡೆದು ನಿಲ್ಲಿಸಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

ಪೊಲೀಸರು ತಲುಪಿ ಅವರಿಬ್ಬರನ್ನು ಕಸ್ಟಡಿಗೆ ತೆಗೆದುಕೊಂಡರು.

ಅವರನ್ನು ಠಾಣೆಗೆ ತಲುಪಿಸಿ ತನಿಖೆಗೊಳಪಡಿಸಿ ದಾಗ ಕೆಲವು ದಿನಗಳ ಹಿಂದೆ  ಪೆರ್ಲಡ್ಕ ಕರಿಪ್ಪಾಡಗಂ ಎಂಬಲ್ಲಿನ ಮನೆಯೊಂದರ ಬಾವಿಗೆ ಅಳವಡಿಸಿದ್ದ ಮೋಟಾರು ಪಂಪ್‌ನ್ನು ಕಳವುಗೈದಿರುವುದಾಗಿ ಮುಜೀಬ್ ರಹ್ಮಾನ್ ಹೇಳಿಕೆ ನೀಡಿದ್ದಾನೆ. ಈ ಬಗ್ಗೆ ಪೊಲೀಸರು ಸ್ವಯಂ ಕೇಸು ದಾಖಲಿಸಿಕೊಂಡಿದ್ದಾರೆ.

Leave a Reply

Your email address will not be published. Required fields are marked *

You cannot copy content of this page