ಗೋಸಾಡ ಕ್ಷೇತ್ರದಲ್ಲಿ ಮಾತೃ ಮಂಡಳಿ ಸಭೆ

ಕುಂಬ್ಡಾಜೆ : ಗೋಸಾಡ ಶ್ರೀ ಮಹಿಷ ಮರ್ದಿನೀ ಕ್ಷೇತ್ರದ ಮಾತೃ ಮಂಡಳಿ ಸಭೆ ಕ್ಷೇತ್ರದಲ್ಲಿ ಜರಗಿತು. ಫೆಬ್ರವರಿ 12ರಂದು ಜರಗುವ ಪುನಃ ಪ್ರತಿಷ್ಠ ದಿನ ಮಹೋತ್ಸವ ಸಹಸ್ರ ಕದಳಿ ಯಾಗ ಮತ್ತು ಅಥರ್ವಶೀರ್ಷ ಗಣಪತಿಯಾಗ ಜರಗಲಿರುವ ಕಾರಣ ಮಾತೃ ಮಂಡಳಿಯ ಎಲ್ಲಾ ಸದಸ್ಯರು ಈ ಕಾರ್ಯಕ್ರಮದಲ್ಲಿ ತೊಡಗಿಸಿಕೊಳ್ಳಬೇಕೆಂದು ಮಾತೃ ಮಂಡಳಿಯ ಗೌರವ ಅಧ್ಯಕ್ಷೆ ವಸಂತಿ ಟೀಚರ್ ಅಗಲ್ಪಾಡಿ ಕರೆ ನೀಡಿದರು. ಮಾತೃ ಮಂಡಳಿಯ ಅಧ್ಯಕ್ಷÉ ಲಲಿತ ಗೋಸಾಡ ಅಧ್ಯಕ್ಷತೆ ವಹಿಸಿದರು. ಪ್ರಧಾನ ಕಾರ್ಯದರ್ಶಿ ನಳಿನಿ ಪರಪ್ಪೆ ಸ್ವಾಗತಿಸಿ, ಕೋಶಾಧಿಕಾರಿ ಜಯಂತಿ ಗೋಸಾಡ ವಂದಿಸಿದರು

Leave a Reply

Your email address will not be published. Required fields are marked *

You cannot copy content of this page