ಡಾ| ವಿ. ಮಂಜುನಾಥ ಕಾಮತ್ ನಿಧನ

ಕಾಸರಗೋಡು: ತಳಂಗರೆ ಮಾಲೀಕ್ ದೀನಾರ್ ಆಸ್ಪತ್ರೆಯ ಹಿರಿಯ ವೈದ್ಯರಾದ ಡಾ. ವಿ. ಮಂಜುನಾಥ ಕಾಮತ್ (೭೧) ನಿಧನ ಹೊಂದಿದರು. ಇವರು ೧೯೮೦ರಿಂದ ಮಾಲೀಕ್ ದೀನಾರ್ ಆಸ್ಪತ್ರೆಯಲ್ಲಿ ವೈದ್ಯರಾಗಿ ಸೇವೆ ಆರಂಭಿಸಿ ಕೊನೆಯ ತನಕ ಅಲ್ಲೇ ಸೇವೆ ಮುಂದುವರಿಸಿದರು.

ಕಾಸರಗೋಡು ವಿದ್ಯಾನಗರ ಕೃಷ್ಣನಗರ ಹೌಸಿಂಗ್ ಕಾಲನಿಯ ‘ಕಸ್ತೂರಿ’ಯಲ್ಲಿ ವಾಸಿಸುತ್ತ ಇವರು ಮಂಗಳೂರು ಅಶೋಕ್‌ನಗರ ಅಮರ್‌ಗಂಗಾ ಅಪಾರ್ಟ್‌ಮೆಂಟ್ ನಲ್ಲೂ ನಿವಾಸ ಹೊಂದಿದ್ದರು. ಇವರು ಮೂಲತಃ ಮುಲ್ಕಿ ನಿವಾಸಿಯಾಗಿದ್ದಾರೆ. ಅಲ್ಲೇ ಅವರು ಹೈಸ್ಕೂಲ್ ಮತ್ತು ಪಿಯುಸಿ ಶಿಕ್ಷಣ ಪೂರ್ಣಗೊಳಿಸಿದ್ದರು. ನಂತರ ಮೈಸೂರು ವೈದ್ಯಕೀಯ ಕಾಲೇಜಿನಲ್ಲಿ ಎಂಬಿಬಿಎಸ್ ಪದವಿ ಪಡೆದು ಬಳಿಕ ಮಂಗಳೂರು ಕಸ್ತೂರ್ ಬಾ ವೈದ್ಯಕೀಯ ಕಾಲೇಜಿನಲ್ಲಿ ಪೋಸ್ಟ್ ಗ್ರಾಜ್ಯುವೇಟ್ ಪದವಿ ಪಡೆದಿದ್ದರು.

ಮೃತರು ಪತ್ನಿ ಮಧುಮತಿ ಎಂ. ಕಾಮತ್, ಮಕ್ಕಳಾದ ಮಹೇಶ್ ಕಾಮತ್ ವಿ. (ಇಂಜಿನಿಯರ್), ಡಾ. ಮಯೂರ್ ಕಾಮತ್ ವಿ. (ಮಂಗಳೂರು), ಸೊಸೆಯಂದಿರಾದ ಅಶ್ವಿಜ, ಡಾ. ಸಿಂಧು ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.

RELATED NEWS

You cannot copy contents of this page