ತಲೆಗೆ ಏಟು ಬಿದ್ದಿರುವುದೇ ವಲಸೆ ಕಾರ್ಮಿಕನ ಸಾವಿಗೆ ಕಾರಣ: ನಾಲ್ವರ ತೀವ್ರ ವಿಚಾರಣೆ

ಕಾಸರಗೋಡು: ನಗರದ ಆನೆ ಬಾಗಿಲಿನಲ್ಲಿ ವಲಸೆ ಕಾರ್ಮಿಕರು ವಾಸಿಸುತ್ತಿರುವ ಕ್ವಾರ್ಟರ್ಸ್‌ನಲ್ಲಿ ನಿನ್ನೆ ಬೆಳಿಗ್ಗೆ ಸಾವನ್ನಪ್ಪಿದ ಸ್ಥಿತಿಯಲ್ಲಿ ಪತ್ತೆಯಾದ ವಲಸೆ ಕಾರ್ಮಿಕ ಪಶ್ಚಿಮ ಬಂಗಾಲ ಬರೋಘರಿಯಾ ಜಿಲ್ ಫೈಗುರಿ, ಭಿಮ್ಚಿಯಾಬಾದ್ ಫರಿಯಾ ನಿವಾಸಿ  ಸುಭಾಷ್ ರಾಯ್ ಎಂಬವರ ಪುತ್ರ ಸುಶಾಂತ್ ರಾಯ್ (28)ನ ಸಾವಿಗೆ ತಲೆಗೆ ಬಲವಾದ ಏಟು ಬಿದ್ದಿರುವುದೇ ಕಾರಣವೆಂದು ಮರಣೋತ್ತರ ಪರೀಕ್ಷೆಯ ಪ್ರಾಥಮಿಕ ವರದಿಯಲ್ಲಿ ತಿಳಿಸಲಾಗಿದೆಯೆಂದು ಪೊಲೀಸರು ತಿಳಿಸಿದ್ದಾರೆ.

ಸುಶಾಂತ್ ರಾಯ್‌ನ  ಮೃತ ದೇಹವನ್ನು ಪರಿಯಾರಂ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ಸಾಗಿಸಿ  ನಿನ್ನೆ ಮರಣೋತ್ತರ ಪರೀಕ್ಷೆಗೊಳಪಡಿ ಸಲಾಗಿತ್ತು. ತಲೆಗೆ ಏಟು ಬಿದ್ದು ಸಾವನ್ನ ಪ್ಪಿರುವುದಾಗಿ ಸ್ಪಷ್ಟಗೊಂಡ ಹಿನ್ನೆಲೆಯಲ್ಲಿ ಕಾಸರಗೋಡು ಪೊಲೀಸರು ಈ ಬಗ್ಗೆ  ಕೊಲೆ ಪ್ರಕರಣ ದಾಖಲಿಸಿ ತನಿಖೆ ಆರಂ ಭಿಸಿದ್ದಾರೆ. ಇದಕ್ಕೆ ಸಂಬಂಧಿಸಿ ಸುಶಾಂತ್ ರಾಯ್  ವಾಸವಾಗಿದ್ದ ಕ್ವಾರ್ಟರ್ಸ್‌ನಲ್ಲೇ  ವಾಸಿಸುತ್ತಿದ್ದ  ಕಾರ್ಮಿಕರ ಪೈಕಿ ನಾಲ್ವರ ನ್ನು ಪೊಲೀಸರು ವಶಕ್ಕೆ ತೆಗೆದುಕೊಂಡು ಸಮಗ್ರ ವಿಚಾರಣೆ ನಡೆಸುತ್ತಿದ್ದಾರೆ. ಘಟನೆ ನಡೆದ ದಿನದಂದು ಈ ನಾಲ್ವರು ಅಲ್ಲಿಂದ ಜಾಗ ಖಾಲಿ ಮಾಡಿದ್ದರು. ನಂತರ ಒಟ್ಟಪಾಲಂನಿಂದ ಪೊಲೀಸರು ಅವರನ್ನು ವಶಕ್ಕೆ ತೆಗೆದುಕೊಂಡಿದ್ದಾರೆ. ಇವರನ್ನು ಸಮಗ್ರ ತನಿಖೆಗೊಳಪಡಿಸಿದ ಬಳಿಕವಷ್ಟೇ ಘಟನೆಗೆ ಕಾರಣ ತಿಳಿದುಕೊಳ್ಳಲು ಸಾಧ್ಯವೆಂದು ಪೊಲೀಸರು ತಿಳಿಸಿದ್ದಾರೆ.

ಸುಶಾಂತ್ ಸಾವನ್ನಪ್ಪಿದ ಕ್ವಾರ್ಟರ್ಸ್‌ನಲ್ಲಿ ಅವರ ಹೊರತಾಗಿ ಒಟ್ಟು ೧೪ ಮಂದಿ ಕಾರ್ಮಿಕರು ವಾಸಿಸುತ್ತಿದ್ದರು. ಇದರಲ್ಲಿ ಇಬ್ಬರು ಕೇರಳೀಯರಾಗಿದ್ದಾರೆ. ಮಾತ್ರವಲ್ಲ ಈ ಪೈಕಿ ಇಬ್ಬರು ಘಟನೆ ನಡೆದ ದಿನದ ಮೊದಲು ತಮ್ಮ ಊರಿಗೆ ಹೋಗಿದ್ದರು. ಘಟನೆ ನಡೆದ ದಿನದಂದು ಆ ಕ್ವಾರ್ಟರ್ಸ್‌ನಲ್ಲಿ ಏಳು ಮಂದಿ ಕಾರ್ಮಿಕರು ಮಾತ್ರವೇ ವಾಸವಾಗಿದ್ದರು. ಆದ್ದರಿಂದ ಅವರನ್ನೆಲ್ಲಾ ವಿಚಾರಿಸುವ ಕ್ರಮದಲ್ಲೂ ಪೊಲೀಸರು ತೊಡಗಿದ್ದಾರೆ. ಮಾತ್ರವಲ್ಲ ಈ ಕೃತ್ಯದಲ್ಲಿ  ಬಾಹ್ಯ ವ್ಯಕ್ತಿಗಳ ಕೈವಾಡವಿದೆಯೇ ಎಂಬ ಬಗ್ಗೆಯೂ ಪೊಲೀಸರು ಇನ್ನೊಂದೆಡೆ ತನಿಖೆ ನಡೆಸುತ್ತಿದ್ದಾರೆ.

ಆನೆಬಾಗಿಲಿನ ಕ್ವಾರ್ಟರ್ಸ್‌ನಲ್ಲಿ ಸುಶಾಂತ್ ನಿನ್ನೆ ಬೆಳಿಗ್ಗೆ ಸಾವನ್ನಪ್ಪಿದ ಸ್ಥಿತಿ ಯಲ್ಲಿ ಪತ್ತೆಯಾಗಿದ್ದರು. ಅದರ  ಹಿಂ ದಿನ ದಿನ ರಾತ್ರಿ ಆ ಕ್ವಾರ್ಟರ್ಸ್‌ನಲ್ಲಿ ಮದ್ಯದಮಲಿನಿಂದ ಕಾರ್ಮಿಕರ  ಪರಸ್ಪರ ವಾಗ್ವಾದ  ದಲ್ಲೂ ತೊಡಗಿ ಬಳಿಕ   ಬಲಿ ತು ಅವರ ಮಧ್ಯೆ ಪರಸ್ಪರ ಹೊಡೆದಾಟವೂ ಉಂಟಾಗಿತ್ತೆಂದು ಹೇಳಲಾಗುತ್ತಿದೆ. ಆ ಪರಿಸರದ ಸಿಸಿ ಟಿವಿ ದೃಶ್ಯಗಳನ್ನು ಪೊಲೀಸರು ಪರಿಶೀಲಿಸತೊಡಗಿದ್ದಾರೆ.

Leave a Reply

Your email address will not be published. Required fields are marked *

You cannot copy content of this page