ಪೆರ್ಲ: ವಿದ್ಯುತ್ ಕಚೇರಿ ಮುಂಭಾಗ ಲೀಗ್ ಪ್ರತಿಭಟನೆ

ಪೆರ್ಲ: ವಿದ್ಯುತ್ ದರ ಹೆಚ್ಚಳ ಹಿಂತೆಗೆಯಬೇಕೆಂದು ಆಗ್ರಹಿಸಿ ಎಣ್ಮಕಜೆ ಪಂಚಾಯತ್ ಮುಸ್ಲಿಂ ಲೀಗ್ ಸಮಿತಿ ಆಶ್ರಯದಲ್ಲಿ ಪೆರ್ಲ ಕೆ.ಎಸ್.ಇ.ಬಿ. ಕಚೇರಿ ಮುಂಭಾಗ ಧರಣಿ ನಡೆಸಲಾಯಿತು. ಸಮಿತಿ ಅಧ್ಯಕ್ಷ ಎ.ಕೆ. ಶರೀಫ್ ಅಧ್ಯಕ್ಷತೆ ವಹಿಸಿದರು. ಮುಸ್ಲಿಂ ಲೀಗ್ ಜಿಲ್ಲಾ  ಕಾರ್ಯದರ್ಶಿ ಎಂ. ಅಬ್ಬಾಸ್ ಉದ್ಘಾಟಿಸಿದರು. ಮಂಡಲ ಪ್ರವಾಸಿ ಲೀಗ್ ಅಧ್ಯಕ್ಷ ಝೆಡ್‌ಎ ಮೊಗ್ರಾಲ್ ಮಾತನಾಡಿದರು. ಅಶ್ರಫ್ ಅಮೆಕ್ಕಳ ಸ್ವಾಗತಿಸಿದರು. ಟಿ.ಎಂ. ಶುಹೈಬ್, ಸಿದ್ದಿಖ್ ಒಳಮೊಗರು, ಸಿದ್ದಿಖ್ ಖಂಡಿಗೆ, ಹಮೀದಲಿ ಟಿ.ಎಂ, ಶಾಮಿಲ್ ಪೆರ್ಲ, ಮುನೀರ್ ಫೈಸಿ, ಇಕ್ಬಾಲ್ ಪೆರ್ಲ ಸಹಿತ ಹಲವರು ಮಾತನಾಡಿದರು.

You cannot copy contents of this page