ಬಾವಿಗೆ ಬಿದ್ದು ಮನೆ ಮಾಲಕ ಮೃತ್ಯು

ವರ್ಕಾಡಿ: ಬಾವಿಯ ಆವರಣ ಗೋಡೆಯಲ್ಲಿ ನಿಂತು ಪೈಪ್ ಅಳವಡಿ ಸುತ್ತಿದ್ದ ವೇಳೆ ಆಯ ತಪ್ಪಿ ಬಾವಿಗೆ ಬಿದ್ದು ಮನೆ ಮಾಲಕ ಮೃತಪಟ್ಟ ಘಟನೆ ಕೊಡ್ಲಮೊಗರುವಿನಲ್ಲಿ ನಡೆದಿದೆ. ಕೊಡ್ಲಮೊಗರು ಬಂಡಶಾಲೆ ನಿವಾಸಿ ಪ್ರಸ್ತುತ ಮಂಗಳೂರು ಕೊಟ್ಟಾರದಲ್ಲಿ ವಾಸಿಸುತ್ತಿರುವ ಆಟೋರಿಕ್ಷಾ ಚಾಲಕ ರಾಜೇಂದ್ರ ಶೆಟ್ಟಿ (54) ಮೃತಪಟ್ಟ ವರಾಗಿದ್ದಾರೆ. ಕೊಡ್ಲಮೊಗರಿನಲ್ಲಿರುವ ಮನೆಯನ್ನು ಬಾಡಿಗೆಗೆ ನೀಡಿದ್ದು, ಇಲ್ಲಿ ನವೀಕರಣ ಕಾಮಗಾರಿಗಳು ನಡೆಯು ತ್ತಿದೆ. ಈ ಹಿನ್ನೆಲೆಯಲ್ಲಿ ನಿನ್ನೆ ಬೆಳಿಗ್ಗೆ ಇವರು ಇಲ್ಲಿಗೆ ತಲುಪಿದ್ದು, ಸಂಜೆ ವೇಳೆ ಘಟನೆ ನಡೆದಿದೆ.

ಬಿಜೆಪಿ ಕಾರ್ಯಕರ್ತರಾಗಿದ್ದ ಇವರು ಈ ಮೊದಲು ಸುಂಕದಕಟ್ಟೆ ಯಲ್ಲಿ ಜೀಪು ಚಾಲಕರಾಗಿ ದುಡಿಯುತ್ತಿ ದ್ದರು. ಬಾವಿಗೆ ಬಿದ್ದ ಕೂಡಲೇ ಸ್ಥಳೀ ಯರು ಮೇಲೆತ್ತಿ ಆಸ್ಪತ್ರೆಗೆ ಕೊಂಡು ಹೋಗಿದ್ದರಾದರೂ ತಲೆಗೆ ಗಂಭೀರ ಗಾಯಗೊಂಡ ಹಿನ್ನೆಲೆಯಲ್ಲಿ ಸಾವು ಸಂಭವಿಸಿದೆ. ಮಂಜೇಶ್ವರ ಪೊಲೀಸರು ಪ್ರಕರಣ ದಾಖಲಿಸಿದ್ದು, ಮೃತದೇಹ ವನ್ನು ಮಂಗಲ್ಪಾಡಿ ತಾಲೂಕು ಆಸ್ಪತ್ರೆಯ ಶವಾಗಾರದಲ್ಲಿರಿಸಲಾಗಿದೆ. ಮೃತರು ಪತ್ನಿ ಆಶಾಲತಾ, ಪುತ್ರಿ ರಕ್ಷಾ, ಸಹೋದರರಾದ ವಿಶ್ವನಾಥ ಶೆಟ್ಟಿ, ರಘುರಾಮ ಶೆಟ್ಟಿ, ದೇವರಾಜ ಶೆಟ್ಟಿ, ಸಹೋದರಿಯರಾದ ಪ್ರೇಮಲತಾ, ಲೀಲಾವತಿ, ಶಶಿಕಲ, ಚಂದ್ರಿಕ, ರಾಜೇಶ್ವರಿ ಹಾಗೂ ಅಪಾರ ಬಂಧು-ಬಳಗವನ್ನು ಅಗಲಿದ್ದಾರೆ. ಮೃತರ ಮನೆಗೆ ಬಿಜೆಪಿ ಮಂಡಲ ಅಧ್ಯಕ್ಷ ಆದರ್ಶ್ ಬಿ.ಎಂ., ಪ್ರಧಾನ ಕಾರ್ಯದರ್ಶಿ ಯತಿರಾಜ್ ಶೆಟ್ಟಿ, ಯುವಮೋರ್ಚಾ ಮಂಡಲ ಅಧ್ಯಕ್ಷ ರಕ್ಷಣ್ ಅಡಕಳಕಟ್ಟೆ, ಸಂತೋಷ್ ದೈಗೋಳಿ, ಯೋಗೀಶ್ ದೈಗೋಳಿ, ನಾರಾಯಣ ಕೊಡ್ಲಮೊಗರು ಮೊದಲಾ ದವರು ಭೇಟಿ ನೀಡಿ ಸಂತಾಪ ಸೂಚಿಸಿದರು.

RELATED NEWS

You cannot copy contents of this page